Tag: Casting Couch

  • ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷತೆ ಬೇಕು: ಅನನ್ಯಾ ಪಾಂಡೆ

    ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷತೆ ಬೇಕು: ಅನನ್ಯಾ ಪಾಂಡೆ

    ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಮಾಲಿವುಡ್ ಇಂಡಸ್ಟ್ರಿಯಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಇದೇ ತರಹ ಸಮಿತಿ ಮಹಿಳೆಯರ ಸುರಕ್ಷತೆಗಾಗಿ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಇರಬೇಕು ಎಂದು ಅನೇಕರು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಕಾಸ್ಟಿಂಗ್ ಕೌಚ್ ಬಗ್ಗೆ ಬಾಲಿವುಡ್ ನಟ ಅನನ್ಯಾ ಪಾಂಡೆ (Ananya Panday) ಮಾತನಾಡಿದ್ದಾರೆ. ನಟಿಯರಿಗೆ ಸೆಫ್ಟಿ ಬೇಕು ಎಂದಿದ್ದಾರೆ. ಇದನ್ನು ಓದಿ:ಹಾಲಿವುಡ್ ಅಂಗಳದಲ್ಲಿ ಕಾಂತಾರ ಬೆಡಗಿ ಸಖತ್ ಜಾಲಿ

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಕಾಸ್ಟಿಂಗ್ ಕೌಚ್ ಕುರಿತು ಸಮಾರಂಭವೊಂದರಲ್ಲಿ ಮಾತನಾಡಿ, ಸಿನಿಮಾರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿಯೇ ಹೇಮಾ ಸಮಿತಿಯಂತಹ ಸಂಸ್ಥೆಗಳು ಬರಬೇಕು ಎಂದಿದ್ದಾರೆ. ಪ್ರತಿ ಉದ್ಯಮದಲ್ಲೂ ಹೇಮಾ ಸಮಿತಿಯಂತಹ ಸಮಿತಿ ಇರುವುದು ಬಹಳ ಮುಖ್ಯ ಎಂದರು. ಅಲ್ಲಿ ಮಹಿಳೆಯರು ಸೇರುತ್ತಾರೆ. ಸುರಕ್ಷತೆಗಾಗಿ ಏನೆಲ್ಲಾ ಅವಶ್ಯಕತೆ ಇದೆ ಎನ್ನುವ ಚರ್ಚೆಗಳು ನಡೆಯುತ್ತವೆ ಎಂದು ನಟಿ ಮಾತನಾಡಿದರು.

    ಈ ಸಮಿತಿಯು ಬಂದ ನಂತರ ಅನೇಕ ಬದಲಾವಣೆಗಳಿವೆ ಎಂದು ನಾನು ಅಂದುಕೊಂಡಿದ್ದೇನೆ. ನೀವೇ ನೋಡುತ್ತಿರುವಂತೆ ಧೈರ್ಯವಾಗಿ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಷಯವು ಚಿತ್ರರಂಗಕ್ಕೆ ಮಾತ್ರ ಮೀಸಲಾದ ವಿಷಯವಲ್ಲ. ಇಂದು ಅನೇಕ ಸಹಾಯವಾಣಿ ಸಂಖ್ಯೆ, ಯೋಜನೆಗಳು ಮಹಿಳೆಯರಿಗಾಗಿ ಶುರುವಾಗಿದೆ. ಕೆಲವು ವಿಭಾಗಗಳು ಮಹಿಳೆಯರ ಸುರಕ್ಷತೆಗಾಗಿ ಮಾಡಿದ್ದಾರೆ. ನಮ್ಮ ಕಾಲ್‌ಶೀಟ್‌ನಲ್ಲಿಯೂ ಸಹಾಯವಾಣಿ ಸಂಖ್ಯೆಗಳಿವೆ. ನೀವು ಅವರಿಗೆ ಕರೆ ಮಾಡಿ ದೂರು ನೀಡಬಹುದು. ನೀವು ಅನಾಮಧೇಯವಾಗಿ ದೂರು ನೀಡಬಹುದು ಎಂದಿದ್ದಾರೆ ಅನನ್ಯಾ ಪಾಂಡೆ.

    ಸದ್ಯ ಅವರು ‘ಕಾಲ್ ಮಿ ಬೇ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಅಕ್ಷಯ್ ಕುಮಾರ್ ಜೊತೆಗಿನ ಹೊಸ ಚಿತ್ರಕ್ಕೆ ನಟಿ ಕಾಣಿಸಿಕೊಳ್ಳಲಿದ್ದಾರೆ.

  • ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

    ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

    ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿ ಮಾತ್ರ ಕಾಸ್ಟಿಂಗ್ ಕೌಚ್ ಇಲ್ಲ.. ಕೇರಳ ರಾಜಕಾರಣದಲ್ಲೂ ಇದು ಹಾಸುಹೊಕ್ಕಾಗಿದ್ಯಂತೆ. ಕೇರಳ ಕಾಂಗ್ರೆಸ್ ಘಟಕದಲ್ಲಿ ಕ್ಯಾಸ್ಟಿಂಗ್ ಕೌಚ್ (Casting Couch) ರೀತಿಯ ಪರಿಸ್ಥಿತಿಗಳಿವೆ ಎಂದು ಕಾಂಗ್ರೆಸ್ ನಾಯಕಿ ಸಿಮಿ ರೋಸ್‌ಬೆಲ್ ಜಾನ್ (Simi Rosebell John) ಬಾಂಬ್‌ ಸಿಡಿಸಿದ್ದಾರೆ. ಈ ಬೆನ್ನಲ್ಲೇ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC)ಯು ರೋಸ್‌ಬೆಲ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

    ಪಕ್ಷದಲ್ಲಿ ತುಂಬಾ ಹೆಣ್ಮಕ್ಕಳು, ಪುರುಷ ನಾಯಕರಿಂದ ಆಕ್ಷೇಪಾರ್ಹವಾದ ರೀತಿ ಕಿರುಕುಳ ಎದುರಿಸ್ತಿದ್ದಾರೆ. ಉನ್ನತ ಹುದ್ದೆಗಳ ಆಸೆ ತೋರಿಸಿ ಪಕ್ಷದ ಕೆಲವು ಹಿರಿಯ ನಾಯಕರು, ಮಹಿಳಾ ನಾಯಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆ ಭಯಾನಕ ಅನುಭವಗಳನ್ನು ಕೆಲವರು ತಮ್ಮ ಬಳಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಗತ್ಯ ಸಾಕ್ಷ್ಯಗಳು ನನ್ನ ಬಳಿಯಿವೆ. ಸಮಯ ಬಂದಾಗ ಅವುಗಳನ್ನು ಬಯಲು ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ಕೆಲ ಮಹಿಳಾಮಣಿಗಳು ಅರ್ಹತೆ ಇಲ್ಲದಿದ್ದರೂ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಹೈಕಮಾಂಡ್‌ಗೆ ಆಪ್ತವಾಗಿರುವ ಮಂದಿಗೆ ಅವಕಾಶ ಸಿಕ್ತಿವೆ ಎಂದು ಆರೋಪಿಸಿದ್ದಾರೆ. ಸಿಮಿ ರೋಸ್‌ಬೆಲ್ ಮಾತು ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿವೆ. ಕಾಂಗ್ರೆಸ್‌ನಲ್ಲೂ ಆಂತರಿಕ ಸಂಘರ್ಷಕ್ಕೆ ಕಾರಣವಾಗಿವೆ. ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ – 9 ಸಾವು, ಜನಜೀವನ ಅಸ್ತವ್ಯಸ್ತ

    ಸಿಮಿ ರೋಸ್‌ಬೆಲ್ ವಿರುದ್ಧ ಕೆಪಿಸಿಸಿಯ ರಾಜಕೀಯ ವ್ಯವಹಾರಗಳ ಸಮಿತಿಯ ಮಹಿಳಾ ಮುಖಂಡರು, ಪಿಸಿಸಿಯ ಮಹಿಳಾ ಪದಾಧಿಕಾರಿಗಳು ಮತ್ತು ಮಹಿಳಾ ಕಾಂಗ್ರೆಸ್ ಮುಖ್ಯಸ್ಥರು ಹೈಕಮಾಂಡ್‌ಗೆ ದೂರು ನೀಡಿದೆ. ಆದ್ರೆ, ಈ ಆರೋಪಗಳೆಲ್ಲಾ ಸುಳ್ಳು ಎಂದು ಕೇರಳ ಕಾಂಗ್ರೆಸ್ ಘಟಕ ತಿಳಿಸಿದೆ. ಅಲ್ಲದೇ, ತನಿಖೆಗೂ ಮುಂದಾಗಿದೆ. ಇದನ್ನೂ ಓದಿ: ಮಹಾ ಮಳೆಗೆ ಅವಾಂತರ – ಸೋಮವಾರ ಬೀದರ್‌ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

  • ವಿಜಯ್ ದೇವರಕೊಂಡ ಚಿತ್ರದ ನಿರ್ದೇಶಕನ ಮೇಲೆ ಕಾಸ್ಟಿಂಗ್ ಕೌಚ್ ಆರೋಪ

    ವಿಜಯ್ ದೇವರಕೊಂಡ ಚಿತ್ರದ ನಿರ್ದೇಶಕನ ಮೇಲೆ ಕಾಸ್ಟಿಂಗ್ ಕೌಚ್ ಆರೋಪ

    ಕ್ಷಿಣ ಸಿನಿಮಾ ರಂಗದ ಖ್ಯಾತ ನಟ ವಿಜಯ್ ದೇವರಕೊಂಡ (Vijay Devarakonda) ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕನ (Director) ಮೇಲೆ ಗುರುತರ ಆರೋಪ ಮಾಡಿದ್ದಾರೆ ನಟಿ ಶಾಲೂ ಶಾಮು (Shalu Shamu). ತನಗಾದ ಕಹಿ ಘಟನೆಯನ್ನು ಆಕೆ ಖಾಸಗಿ ಚಾನೆಲ್ ಜೊತೆ ಹಂಚಿಕೊಂಡಿದ್ದಾರೆ. ಅದನ್ನು ನೆನಪಿಸಿಕೊಂಡರೆ ಈಗಲೂ ಮೈ ನಡುಗುತ್ತದೆ ಎಂದು ಅವರು ಹೇಳಿದ್ದಾರೆ.

    ಕಾಸ್ಟಿಂಗ್ ಕೌಚ್ (Casting Couch) ಕುರಿತಾಗಿ ಒಬ್ಬೊಬ್ಬರೇ ನಟಿಯರು ಬಾಯ್ಬಿಡುತ್ತಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಅವರು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ಮೂಲಕ ಸಿನಿಮಾ ರಂಗದ ಮತ್ತೊಂದು ಕರಾಳ ಮುಖವನ್ನು ಅವರು ಅನಾವರಣಗೊಳಿಸುತ್ತಿದ್ದಾರೆ. ಇದೀಗ ಶಾಲೂ ಶಾಮು ಕೂಡ ತನಗಾದ ಅನುಭವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಸಾಯಿ ಪಲ್ಲವಿ- ಸ್ಟಾರ್‌ ನಟನ ಪುತ್ರನಿಗೆ ‘ಫಿದಾ’ ಬ್ಯೂಟಿ ನಾಯಕಿ

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಶಾಲೂ, ‘ವಿಜಯ್ ದೇವರಕೊಂಡ ಅವರ ಸಿನಿಮಾವನ್ನು ಮಾಡಿದ್ದ ನಿರ್ದೇಶಕರು ನನಗೆ ಆಹ್ವಾನ ನೀಡಿದ್ದರು. ಅಲ್ಲಿಗೆ ಹೋದ ಅದು ಅವರದ್ದೇ ಮನೆ ಅಂತ ಗೊತ್ತಾಯಿತು. ಮನೆಯಲ್ಲಿ ಯಾರೂ ಇರಲಿಲ್ಲ. ಎಲ್ಲಿಗೆ ಹೋಗಿದ್ದಾರೆ ಎಂದೆ. ವಿದೇಶಕ್ಕೆ ಹೋಗಿದ್ದಾರೆ ಎಂದು ಹೇಳಿದರು. ನಂತರ ಜ್ಯೂಸ್ ಕೊಟ್ಟರು. ಪಾತ್ರದ ಬಗ್ಗೆ ಮಾತನಾಡುವುದಕ್ಕಿಂತ ಬೇರೆಯದ್ದೇ ಮಾತನಾಡುವುದಕ್ಕೆ ಶುರು ಮಾಡಿದರು. ನನಗೆ ಗಾಬರಿ ಆಯಿತು. ನೇರವಾಗಿ ಆಮೇಲೆ ಬೆಡ್ ರೂಮ್‍ ಗೆ ಕರೆದ. ಅವನ ಉದ್ದೇಶ ಗೊತ್ತಾಗಿ ಅಲ್ಲಿಂದ ಎದ್ದು ಬಂದೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ತಾವಿದ್ದ ಸ್ಥಳಕ್ಕೆ ನಿರ್ದೇಶಕ ಕರೆದಾಗ, ಅವನು ತನ್ನ ಮನೆಗೆ ಕರೆಯುತ್ತಾನೆ ಎಂದು ಗೊತ್ತಿರಲಿಲ್ಲ. ಸೀರೆ ಧರಿಸಿಕೊಂಡು ಬರುವಂತೆ ಹೇಳಿದ್ದ. ಒಳ್ಳೆಯ ಪಾತ್ರವಿರಬಹುದು ಎಂದು ನಾನು ಅಲ್ಲಿಗೆ ಹೋಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಆ ನಿರ್ದೇಶಕ ಯಾರು ಎನ್ನುವುದನ್ನು ಶಾಲೂ ಹೇಳಿಕೊಂಡಿಲ್ಲ. ಅವನ ಹೆಸರು ಬೇಡ ಎಂದು ಮಾತು ಮುಂದುವರೆಸುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಬ್ಬಳನ್ನೇ ರೆಸಾರ್ಟ್ ಗೆ ಕರೆದರೆ ಉದ್ದೇಶ ಏನಿರತ್ತೆ? : ಕನ್ನಡದ ನಟಿ ಹೇಳಿಕೊಂಡ ಕಹಿ ಸತ್ಯ

    ಒಬ್ಬಳನ್ನೇ ರೆಸಾರ್ಟ್ ಗೆ ಕರೆದರೆ ಉದ್ದೇಶ ಏನಿರತ್ತೆ? : ಕನ್ನಡದ ನಟಿ ಹೇಳಿಕೊಂಡ ಕಹಿ ಸತ್ಯ

    ವಿಷ್ಣುವರ್ಧನ್ ನಟನೆಯ ಅಪ್ಪಾಜಿ (Appaji) ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಮನಿ (Amani) ಇದೇ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಂಗದ ಕಾಸ್ಟಿಂಗ್ ಕೌಚ್ (Casting Couch) ಕರಾಳಮುಖವನ್ನು ಸಮಾಜದ ಮುಂದೆ ಬಿಚ್ಚಿಟ್ಟಿದ್ದಾರೆ. ಅಡ್ಡದಾರಿಯಲ್ಲಿ ಸಿನಿಮಾ ರಂಗಕ್ಕೆ ಹೋಗುವುದಕ್ಕೆ ನನಗೆ ಇಷ್ಟವಿರಲಿಲ್ಲ. ಹಾಗಾಗಿ ತಡವಾಗಿ ನಾನು ಎಂಟ್ರಿ ಕೊಟ್ಟೆ ಎಂದು ಅವರು ಹೇಳಿಕೊಂಡಿದ್ದಾರೆ.

    ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಅನೇಕ ಆಡಿಷನ್ ಗಳಿಗೆ ಅವರು ಹೋಗಿ ಬಂದಿದ್ದಾರಂತೆ. ಕೆಲವರು ಸೆಲಕ್ಟ್ ಆಗಿದ್ದೀಯಾ ಅಂತ ಹೇಳಿ ಕಳುಹಿಸಿ ಆನಂತರ ರಿಜೆಕ್ಟ್ ಆಗಿದ್ದೀಯಾ ಎಂದು ಹೇಳುತ್ತಿದ್ದರಂತೆ. ಇನ್ನೂ ಕೆಲವರು ನೀವು ಮನೆಗೆ ಹೋಗಿ ನಾವು ಫೋನ್ ಮಾಡುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರಂತೆ. ಒಬ್ಬರು ಕರೆ ಮಾಡಿ, ‘ಮೇಡಂ, ನಿರ್ದೇಶಕರು ಐಡಿಯಲ್ ಬೀಚ್ ರೆಸಾರ್ಟ್ ಗೆ ಬರೋಕೆ ಹೇಳಿದ್ದಾರೆ. ನೀವೊಬ್ಬರೇ ಬನ್ನಿ. ನಿಮ್ಮ ತಾಯಿ ಕರೆದುಕೊಂಡು ಬರಬೇಡಿ’ ಎಂದರಂತೆ. ಮೊದಲ ಮೊದಲು ಆಮನಿಗೆ ಅರ್ಥವೇ ಆಗಲಿಲ್ಲವಂತೆ.

    ನಂತರದ ದಿನಗಳಲ್ಲಿ ಅಮ್ಮನನ್ನು ಕರೆದುಕೊಂಡು ಬರಬೇಡಿ ಅಂತ ಹೇಳುತ್ತಿದ್ದ ಕಾರಣವನ್ನು ಅರಿತರಂತೆ. ಹಾಗಾಗಿ ಅವರು ಯಾವತ್ತೂ ಅಮ್ಮನನ್ನು ಬಿಟ್ಟು ಹೋಗುತ್ತಿರಲಿಲ್ಲವಂತೆ. ಹಾಗಾಗಿಯೇ ಎರಡು ವರ್ಷಗಳಾದರೂ ಅವರಿಗೆ ಯಾವುದೇ ಪಾತ್ರವನ್ನೂ ಕೊಡಲಿಲ್ಲವಂತೆ. ರೆಸಾರ್ಟ್ ಗೆ ಹೋಗುವಂತಹ ಸಂಸ್ಕೃತಿ ನನ್ನದಲ್ಲ. ಹಾಗಾಗಿ ನಾನು ಒಪ್ಪಲಿಲ್ಲ. ತಡವಾಗಿಯೇ ನನಗೆ ಅವಕಾಶ ಸಿಕ್ಕಿದ್ದು ಎಂದು ಅವರು ಹೇಳಿಕೊಂಡಿದ್ದಾರೆ.

    ನಟಿ ಆಮನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಕನ್ನಡವೂ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ, ಕನ್ನಡಕ್ಕಿಂತ ಇತರ ಭಾಷೆಗಳಲ್ಲೇ ಅವರು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸದ್ಯ ಆಮನಿ ಎನ್ನುತ್ತಿದ್ದಂತೆಯೇ ನೆನಪಾಗುವ ಹಾಡೆಂದರೆ ಅಪ್ಪಾಜಿ ಸಿನಿಮಾದ ‘ಏನೆ ಕನ್ನಡತಿ ನೀ ಯಾಕೆ ಹಿಂಗಾಡುತೀ’ ಗೀತೆ. ಅಪ್ಪಾಜಿ ಸಿನಿಮಾದಲ್ಲಿ ಅವರು ವಿಷ್ಣುವರ್ಧನ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • MeToo-ನನ್ನನ್ನೂ ಕಮಿಟ್ಮೆಂಟ್ ಕೇಳಿದರು : ಕರಾಳ ನೆನಪು ಹಂಚಿಕೊಂಡ ನಯನತಾರಾ

    MeToo-ನನ್ನನ್ನೂ ಕಮಿಟ್ಮೆಂಟ್ ಕೇಳಿದರು : ಕರಾಳ ನೆನಪು ಹಂಚಿಕೊಂಡ ನಯನತಾರಾ

    ಮೀಟೂ (MeToo) ಅಭಿಯಾನದ ನಂತರ ಅನೇಕ ತಾರೆಯರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಧೈರ್ಯದಿಂದ ಸಮಯ ಸಿಕ್ಕಾಗೆಲ್ಲ ಹೇಳುತ್ತಾ ಬಂದಿದ್ದಾರೆ. ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಚಿತ್ರ ಕಲಾವಿದರು ಕೂಡ ಕಾಸ್ಟಿಂಗ್ ಕೌಚ್ (Casting Couch)  ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಈ ಮೂಲಕ ಚಿತ್ರರಂಗದ ಮತ್ತೊಂದು ಮುಖವನ್ನೂ ಬಿಚ್ಚಿಡುತ್ತಿದ್ದಾರೆ.

    ಮೀಟೂ ಅಭಿಯಾನದ ಗಾಳಿ ಬಾಲಿವುಡ್ ನಲ್ಲಿ ಜೋರಾಗಿದ್ದರೂ, ಇತರ ಸಿನಿಮಾ ರಂಗದಲ್ಲೂ ಅದು ತನ್ನ ಪ್ರಭಾವ ಬೀರಿತ್ತು. ಹಾಗಾಗಿ ಕನ್ನಡವೂ ಸೇರಿದಂತೆ ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರರಂಗದ ಅನೇಕ ನಟಿಯರು ತಮಗಾದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಇದೀಗ ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayantara) ಕೂಡ ಈ ಕುರಿತು ಮಾತನಾಡಿದ್ದಾರೆ. ಸಿನಿಮಾ ರಂಗಕ್ಕೆ ಬಂದ ಆರಂಭದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರಮುಖಿ – 2 ಡ್ಯಾನ್ಸ್ ಪ್ರಾಕ್ಟಿಸ್ ಶುರು ಮಾಡಿದ ಕಂಗನಾ ರಣಾವತ್

    ನಯನತಾರಾ ಸಿನಿಮಾ ರಂಗಕ್ಕೆ ಬಂದಾಗ ಅವರಿಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆಯಂತೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಸಿನಿಮಾ ರಂಗಕ್ಕೆ ಬಂದಾಗ ನನ್ನನ್ನೂ ಕೂಡ ಕಮಿಟ್ಮೆಂಟ್ ಗೆ ಕೇಳಿದರು. ಆದರೆ, ನಾನು ಅದಕ್ಕೆ ಒಪ್ಪಲು ಸಿದ್ಧಳಿರಲಿಲ್ಲ. ನನಗೆ ನನ್ನ ಟ್ಯಾಲೆಂಟ್ ಮೇಲೆ ನಂಬಿಕೆಯಿತ್ತು. ನಾವು ಹೇಗೆ ಇರುತ್ತೆವೆಯೋ, ನಮ್ಮನ್ನು ಇಂಡಸ್ಟ್ರಿ ಹಾಗೆ ನಡೆಸಿಕೊಳ್ಳುತ್ತದೆ’ ಎಂದು ಹೇಳುವ ಮೂಲಕ ಕಾಸ್ಟಿಂಗ್ ಕೌಚ್ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ

    ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ

    ಸಾಮಾನ್ಯವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ನಾಯಕಿಯರು ಮಾತನಾಡಿದ್ದನ್ನು ಕೇಳಿದ್ದೇವೆ, ಓದಿದ್ದೇವೆ. ಬಾಲಿವುಡ್ ಸ್ಟಾರ್ ನಟನೊಬ್ಬ ತಮ್ಮಗೂ ಅಂಥದ್ದೊಂದು ಕೆಟ್ಟ ಅನುಭವ ಆಗಿತ್ತು ಎಂದು ಹೇಳುವ ಮೂಲಕ ಲೈಂಗಿಕ ಶೋಷಣೆ ಎಲ್ಲರ ಮೇಲೂ ಆಗುತ್ತಿದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಪತಿ, ನಟ ರಣ್ವೀರ್ ಸಿಂಗ್ ತಮಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಹೇಳಿಕೊಳ್ಳುವ ಮೂಲಕ ಬಾಲಿವುಡ್ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

    ಸದ್ಯ ರಣ್ವೀರ್ ಸಿಂಗ್ ಮೊರಾಕೊದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರೋತ್ಸವದಲ್ಲಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಮಾತನಾಡಿದ ರಣ್ವೀರ್, ತಾವು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಸಂದರ್ಭದಲ್ಲಿ ದುಷ್ಟರು, ದುರುಳರು ತಮಗೂ ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ಅವರು ಯಾರು ಎನ್ನುವುದನ್ನು ಅವರು ಹೇಳಲಿಲ್ಲ. ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

    ‘ಅವರು ಚಿತ್ರವೊಂದರ ನಿರ್ಮಾಪಕರು. ನನಗೆ ತುಂಬಾ ಕೆಟ್ಟದ್ದಾಗಿಯೇ ನಡೆಸಿಕೊಂಡರು. ಕೆಟ್ಟ ಸ್ಥಳಕ್ಕೆ ಕರೆದುಕೊಂಡು ಹೋಗಿ, ಏನೆಲ್ಲ ಪ್ರಶ್ನೆಗಳನ್ನು ಕೇಳಿದರು. ಅವರು ಪ್ರಶ್ನೆಗಳಿಗೆ ನನ್ನ ಉತ್ತರ ಒಂದೇ ಆಗಿತ್ತು. ನಾನು ಹಾರ್ಡ್ ವರ್ಕ್ ಮೂಲಕ ಗೆಲ್ಲುತ್ತೇನೆ ಎಂದು ಹೇಳಿದ್ದೆ. ಆದರೆ, ಅವರು ನನ್ನ ಡಾರ್ಲಿಂಗ್, ಬಿ ಸೆಕ್ಸಿ ಎಂದೆಲ್ಲ ಕರೆದರು. ಅವರು ಯಾಕೆ ಹಾಗೆ ಕರೆಯುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗಲು ತುಂಬಾ ಸಮಯ ಬೇಕಾಗಲಿಲ್ಲ’ ಎಂದು ರಣ್ವೀರ್ ಹೇಳಿದರು.

    ಸಿನಿಮಾ ರಂಗಕ್ಕೆ ಎಂಟ್ರಿ ಆದ ನಂತರ ಮೂರುವರೆ ವರ್ಷಗಳ ಕಾಲ ನನಗೆ ಈ ರೀತಿಯ ಅನುಭವಗಳು ಆಗಿವೆ. ಅವುಗಳನ್ನು ನಾನು ಸಮರ್ಥವಾಗಿಯೇ ಎದುರಿಸಿದ್ದೇನೆ. ಹಾಗಂತ ಎಲ್ಲರೂ ಹಾಗೆಯೇ ಮಾಡಲಿಲ್ಲ. ತುಂಬಾ ಗೌರವದಿಂದ ನಡೆಸಿಕೊಂಡವರೂ ಇದ್ದಾರೆ. ನಿರ್ದೇಶಕರಿಗಿಂತ ನಿರ್ಮಾಪಕರಿಂದ ನಾನು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದೇನೆ. ಮೂರು ವರ್ಷಗಳ ಯಮಯಾತನೆಯ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ಉರಿಯುತ್ತದೆ ಎಂದಿದ್ದಾರೆ ರಣ್ವೀರ್ ಸಿಂಗ್.

    Live Tv
    [brid partner=56869869 player=32851 video=960834 autoplay=true]

  • MeeToo : ಆ ಅಸಹ್ಯ ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ರತನ್ ರಾಜಪೂತ್

    MeeToo : ಆ ಅಸಹ್ಯ ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ರತನ್ ರಾಜಪೂತ್

    ಹಿಂದಿ ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಆಗಿರುವ ರತನ್ ರಾಜಪೂತ್ (Ratan Rajput) ತಮಗಾದ ಕಾಸ್ಟಿಂಗ್ ಕಾಚ್ (Casting Couch) ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಒಂದು ವೇಳೆ ನಾನು ಅವನು ಹೇಳಿದಂತೆ ಕೇಳಿದ್ದರೆ, ಸ್ಟಾರ್ ನಟಿಯಾಗಿರುತ್ತಿದ್ದೆ. ಆದರೆ, ಅದು ನನಗಿಷ್ಟವಾಗದ ದಾರಿ. ಹಾಗಾಗಿ ಅವನ ಮುಖಕ್ಕೆ ಉಗಿದು ಬಂದೆ ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.

    ಆ ನಿರ್ದೇಶಕನಿಗೆ ಅರವತ್ತರ ವಯಸ್ಸು. ನನ್ನನ್ನು ನಾಯಕಿಯನ್ನಾಗಿ ಮಾಡುತ್ತೇನೆ ಅಂದ. ನನಗೆ ಗಾಡ್ ಫಾದರ್ ಆಗುತ್ತೇನೆ ಅಂತಾನೂ ಹೇಳಿದ. ನನ್ನ ಚರ್ಮ, ಮುಖ ಸರಿ ಇಲ್ಲ. ತಲೆಗೂದಲು ಚೆನ್ನಾಗಿಲ್ಲ ಹೀಗೆ ಅನೇಕ ಸಂಗತಿಗಳನ್ನು ಪಟ್ಟಿಮಾಡಿ, ಇದೆಲ್ಲವನ್ನೂ ಸರಿ ಮಾಡಿ ನಿನ್ನನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿಕೊಳ್ಳಬೇಕು ಅಂದರೆ ಒಂದಷ್ಟು ಲಕ್ಷ ರೂಪಾಯಿ ಖರ್ಚಾಗುತ್ತದೆ. ನಿನಗಾಗಿ ನಾನು ಆ ಖರ್ಚು ಮಾಡಬೇಕು ಅಂದರೆ, ನೀನು ನನ್ನವಳಾಗಬೇಕು ಎಂದಿದ್ದರಂತೆ ನಿರ್ದೇಶಕರು. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ಆ ವ್ಯಕ್ತಿಯು ನನ್ನೊಂದಿಗೆ ಫ್ರೆಂಡ್ ರೀತಿ ಇರಬೇಕು, ನಾನು ಕೇಳಿದ್ದನ್ನು ಕೊಡಬೇಕು ಅಂದಾಗ ನನಗೆ ಅರಿವಾಯಿತು. ನೀವು ನನ್ನ ತಂದೆ ಸಮಾನರು, ಗುರು ಕೂಡ. ದೊಡ್ಡವರಾಗಿ ಹೀಗೆ ಮಾತನಾಡಬಾರದು. ನಿಮ್ಮನ್ನು ನಾನು ಗೌರವದಿಂದ ಕಾಣುತ್ತಿದ್ದೇನೆ ಅಂದೆ. ನನ್ನ ಮಗಳು ನಟಿಯಾಗಿದ್ದರೂ, ನಾನು ಅವಳ ಜೊತೆ ಮಲಗುತ್ತಿದ್ದೆ ಎಂದು ಅಸಹ್ಯವಾಗಿ ಹೇಳಿದ. ಅಂತಹ ಅಸಹ್ಯ ವ್ಯಕ್ತಿಯಿಂದ ದೂರ ಬಂದು ಬಿಟ್ಟೆ. ಹೀಗೆ ಬಾಲಿವುಡ್ ನಲ್ಲಿ ಅನೇಕರಿಗೆ ಇಂತಹ ಅನುಭವ ಆಗಿರುತ್ತದೆ ಎಂದಿದ್ದಾರೆ ರತನ್.

    ರತನ್ ಬಿಹಾರ(Bihar) ಮೂಲದವರು. ಹಿಂದಿ ಕಿರುತೆರೆಯಲ್ಲಿ ಫೇಮಸ್ ಹೆಸರು. ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 9 ಹಿಂದಿಯಲ್ಲಿ ಭಾಗಿಯಾಗಿದ್ದರು. ಅಲ್ಲದೇ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ವೊಂದನ್ನು ಅವರು ನಡೆಸುತ್ತಿದ್ದು, ಮುಂಬೈಗೆ ಬಂದಾಗಿನ ಕೆಲ ಸಂಗತಿಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಶೇಮ್, ಶೇಮ್: ಟಾಪ್ ನಟರ ಮಂಚದ ಪುರಾಣ ಬಿಚ್ಚಿಟ್ಟ ನಟಿ ಮಲ್ಲಿಕಾ ಶರಾವತ್

    ಬಾಲಿವುಡ್ ಶೇಮ್, ಶೇಮ್: ಟಾಪ್ ನಟರ ಮಂಚದ ಪುರಾಣ ಬಿಚ್ಚಿಟ್ಟ ನಟಿ ಮಲ್ಲಿಕಾ ಶರಾವತ್

    ರ್ಡರ್ ಸಿನಿಮಾದ ಮೂಲಕ ಇಡೀ ಬಾಲಿವುಡ್ ಅನ್ನೇ ತನ್ನತ್ತ ಸೆಳೆದಿದ್ದ ಮಾದಕ ನಟಿ ಮಲ್ಲಿಕಾ ಶರಾವತ್, ಕೆಲ ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರೀಯರಾಗಿಲ್ಲ. ಅವರು ಬಹುತೇಕ ಸಿನಿಮಾ ರಂಗದಿಂದಲೇ ದೂರವಾಗಿದ್ದಾರೆ. ತಾವು ಇಂಥದ್ದೊಂದು ನಿರ್ಧಾರ ತಗೆದುಕೊಳ್ಳುವುದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಆದರೆ, ಆ ಕಾರಣ ಮಾತ್ರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಬಾಲಿವುಡ್ ಟಾಪ್ ನಟರ ಬಗ್ಗೆ ಬಹಿರಂಗವಾಗಿಯೇ ಮಾತನಾಡಿರುವ ಅವರು, ಆ ನಟರ ಹೆಸರು ಹೇಳದೇ ಇದ್ದರೂ ಮಧ್ಯರಾತ್ರಿ ನಾಯಕಿಯರಿಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಾರೆ ಎಂದು ಹೇಳುವ ಮೂಲಕ ಬಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ‘ನೀವು ಸಿನಿಮಾವೊಂದರಲ್ಲಿ ನಟಿಸುತ್ತಿದ್ದೀರಿ ಅಂದುಕೊಳ್ಳಿ. ಆ ಸಿನಿಮಾದ ನಾಯಕ ಮಿಡ್ ನೈಟ್ ಕಾಲ್ ಮಾಡಿ, ತಮ್ಮ ಮನೆಗೆ ಬರಲು ಹೇಳುತ್ತಾನೆ. ಹೋಗದೇ ಇದ್ದರೆ, ಆ ಸಿನಿಮಾದಲ್ಲಿ ಆ ನಾಯಕಿ ಇರುವುದಿಲ್ಲ’ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಇದನ್ನೂ ಓದಿ:ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಕೊನೆಗೂ ಮೌನ ಮುರಿದ ನಾಗಚೈತನ್ಯ

    ಬಾಲಿವುಡ್ ನ ಮತ್ತೊಂದು ಕರಾಳಮುಖವನ್ನು ಅನಾವರಣ ಮಾಡಿರುವ ಮಲ್ಲಿಕಾ ಶರಾವತ್, ನಾಯಕಿಯರ ಪಾಡು ಹೀಗಿದೆ. ಹಾಗಾಗಿ ನಾನು ಯಾರದೋ ಲೈಂಗಿಕ ಆಸೆಗೆ ದಾಳವಾಗುವುದು ಬೇಡ ಎಂದು ಸಿನಿಮಾ ರಂಗದಿಂದ ದೂರವಾದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಮಲ್ಲಿಕಾ ಅವರು ಆಡಿದ ಮಾತುಗಳು ಬಾಲಿವುಡ್ ಅನೇಕ ನಟರ ಕಣ್ಣುಕೆಂಪಾಗಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ನಟನ  ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ

    ಸ್ಟಾರ್ ನಟನ ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ

    ತೆಲುಗು ಸಿನಿಮಾ ರಂಗದ ಖ್ಯಾತ ನಟ ಮೋಹನ್ ಬಾಬು ಅವರ ಪುತ್ರಿ ಲಕ್ಷ್ಮಿ ಮಂಚು ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಕಾಸ್ಟಿಂಗ್ ಕೌಚ್ ಅನ್ನುವುದು ಸಾಮಾನ್ಯ ನಟಿಗೆ ಅಥವಾ ಹೊಸದಾಗಿ ಬರುವ ಕಲಾವಿದೆಯರಿಗೆ ಮಾತ್ರವಲ್ಲ, ಖ್ಯಾತ ನಟರ ಮಗಳಾದ ನನಗೂ ಆಗಿದೆ ಎಂದು ಹೇಳುವ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇದನ್ನೂ ಓದಿ : ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತರು ಮಳೆ ಹನಿ ನಿಲ್ಲದು

    ನಟರ ಮಕ್ಕಳು ಸಿನಿಮಾ ರಂಗದಲ್ಲಿ ಸೇಫ್ ಅನ್ನುವ ಮಾತು ನನ್ನ ವಿಷಯದಲ್ಲಿ ಸುಳ್ಳಾಗಿದೆ. ನನ್ನ ತಂದೆ ಹೆಸರಾಂತ ನಟ. ಆದರೂ, ನನಗೆ ಇಂತಹ ಕಹಿ ಅನುಭವವಾಗಿದೆ. ಯಾರು, ಎಲ್ಲಿ, ಹೇಗೆ ಇರುತ್ತಾರೆ ಎನ್ನುವುದನ್ನು ಊಹಿಸಲೂ ಆಗುವುದಿಲ್ಲ. ನಮಗೆ ಸುಲಭವಾಗಿ ಅವಕಾಶ ಸಿಗುತ್ತದೆ ಎನ್ನುವ  ನಂಬಿಕೆ ಹೇಗೆಲ್ಲ ಸುಳ್ಳು ಮಾಡುತ್ತದೆ ಎಂದು ಆಗಿರುವ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಲಕ್ಷ್ಮೀ ಮಂಚು ಆಡಿದ ಈ ಮಾತು ಅವರು ಯಾವೆಲ್ಲ ಸಿನಿಮಾಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದರತ್ತ ಹೊರಳಿದ್ದು, ಯಾರು ಇವರಿಗೆ ಆ ರೀತಿ ತೊಂದರೆ ಕೊಟ್ಟಿರಬಹುದು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಸಿನಿಮಾ ಮತ್ತು  ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಲಕ್ಷ್ಮೀ, ಯಾವ ಕ್ಷೇತ್ರದಲ್ಲಿ ತಮಗೆ ಇಂತಹ ಕಹಿ ಘಟನೆ ನಡೆದಿದೆ ಎಂದು ಹೇಳಿಕೊಂಡಿಲ್ಲ. ಹಾಗಾಗಿ ಯಾವ ಕ್ಷೇತ್ರದಲ್ಲಿ ಅವರಿಗೆ ತೊಂದರೆ ಆಗಿದೆ ಎನ್ನುವುದು ನಿಗೂಢ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು

    ಈವರೆಗೂ ಇಂಗ್ಲಿಷ್, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ, ಹಲವು ಟಿವಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್ ಸಿನಿಮಾದ ಮೂಲಕವೇ ಇವರು ಸಿನಿಮಾ ರಂಗಕ್ಕೆ ಬಂದಿರುವುದು ವಿಶೇಷ.

  • ಏಕಾಂತ ಬಯಸಿ ಒಬ್ಬಳೇ ಬಾ ಎಂದ ಹೀರೋ : ಕಹಿ ಘಟನೆ ನೆನಪಿಸಿಕೊಂಡ ಇಶಾ ಕೊಪ್ಪಿಕರ್

    ಏಕಾಂತ ಬಯಸಿ ಒಬ್ಬಳೇ ಬಾ ಎಂದ ಹೀರೋ : ಕಹಿ ಘಟನೆ ನೆನಪಿಸಿಕೊಂಡ ಇಶಾ ಕೊಪ್ಪಿಕರ್

    ಮೊನ್ನೆ ಮೊನ್ನೆಯಷ್ಟೇ ದಕ್ಷಿಣದ ಹೆಸರಾಂತ ನಟಿ ಅನುಷ್ಕಾ ಶೆಟ್ಟಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ, ಸಂಚಲನ ಮೂಡಿಸಿದ್ದರು. ಟಾಲಿವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದು ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು. ಟಾಪ್ ನಟಿ ಅನುಷ್ಕಾ ಆಡಿದ ಆ ಮಾತು ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

    ಇದೀಗ ಇಶಾ ಕೊಪ್ಪಿಕರ್ ಕೂಡ ಅಂಥದ್ದೇ ಮಾತುಗಳನ್ನು ಆಡಿದ್ದಾರೆ. ಕಾಸ್ಟಿಂಗ್ ಕೌಚ್ ಭಾರತೀಯ ಸಿನಿಮಾ ರಂಗದಲ್ಲಿ ಇಂದಷ್ಟೇ ಅಲ್ಲ ಎಂದೆಂದಿಗೂ ಇದೆ ಎಂದು ಹೇಳಿ ಸದ್ದು ಮಾಡಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಇಶಾ ಕೊಪ್ಪಿಕರ್ ಅಂದಾಕ್ಷಣ ಕನ್ನಡ ಸಿನಿ ಪ್ರೇಕ್ಷಕರಿಗೆ ಥಟ್ಟನೆ ನೆನಪಾಗುವ ಸಿನಿಮಾ ವಿಷ್ಣುವರ್ಧನ್ ನಟನೆಯ ಸೂರ್ಯವಂಶ. ಆನಂತರ ಅವರು ರವಿಚಂದ್ರನ್ ನಟನೆಯ “ಓ ನನ್ನ ನಲ್ಲೆ” ಸಿನಿಮಾದಲ್ಲೂ ನಟಿಸಿದ್ದರು. 90ರ ದಶಕದಲ್ಲಿ ಭಾರೀ ಬೇಡಿಕೆಯ ನಟಿಯರಲ್ಲಿ ಇವರೂ ಒಬ್ಬರು. ಮದುವೆಯಾದ ನಂತರ ಇಶಾ ಸಿನಿಮಾ ರಂಗದಿಂದ ದೂರ ಉಳಿದರು. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

     

    ಇಶಾ ಕೊಪ್ಪಿಕರ್ ಸಿನಿಮಾ ರಂಗಕ್ಕೆ ಬಂದಿದ್ದು ಮಾಡೆಲಿಂಗ್ ಕ್ಷೇತ್ರದಿಂದ. ‘ಎಕ್ ಥ ದಿಲ್ ಥ ಧಡ್ಕನ್’ ಹೆಸರಿನ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿ ಇಶಾ ಕೊಪ್ಪಿಕರ್ ಆನಂತರ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದರು. ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ, ದಕ್ಷಿಣದ ಹಲವು ಭಾಷೆಗಳ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಸಿನಿಮಾ ರಂಗಕ್ಕೆ ಬರುವಾಗ ಅವರಿಗಾದ ಕಹಿ ನೋವನ್ನು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    “ನಾನು ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದವಳು. ವಿದ್ಯಾಭ್ಯಾಸದ ಖರ್ಚಿಗೆ ಹಣ ಬೇಕಿತ್ತು. ಹಾಗಾಗಿ ಮಾಡೆಲಿಂಗ್ ಮಾಡಿದೆ. ಆನಂತರ ಸಿನಿಮಾ ರಂಗಕ್ಕೆ ಕರೆ ಬಂತು. ಈ ಸಮಯದಲ್ಲಿ ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿದರು. ನಾನೂ ಒಪ್ಪಿಕೊಂಡೆ. ನೀವು ನನ್ನ ಸಿನಿಮಾದ ನಾಯಕನನ್ನು ಕಾಣಬೇಕಂತೆ ಅಂದರು. ಆ ನಾಯಕ ನನಗೆ ಕರೆಮಾಡಿ, ಜತೆಗೆ ಯಾರನ್ನೂ ಕರೆದುಕೊಂಡು ಬರಬೇಡ. ಒಬ್ಬಳೇ ಬಾ. ಇಬ್ಬರೇ ಏಕಾಂತದಲ್ಲಿ ಇರಬೇಕು ಎಂದು ಕೇಳಿದರು. ಅವರು ಯಾಕೆ ನನ್ನನ್ನು ಕರೆಯುತ್ತಿದ್ದಾರೆ ಅಂತ ಗೊತ್ತಾಯಿತು. ನಿರ್ಮಾಪಕರಿಗೆ ಆ ವಿಷಯ ತಿಳಿಸಿ, ನನ್ನ ಪ್ರತಿಭೆಯ ಮೇಲೆ ನಂಬಿಕೆ ಇದ್ದರೆ ಪಾತ್ರ ಕೊಡಿ. ಇಲ್ಲದಿದ್ದರೆ ನನಗೆ ಅದರ ಅಗತ್ಯವಿಲ್ಲ ಎಂದೆ. ನಂತರ ನನಗೆ ಆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿಲ್ಲ” ಎಂದು ಇಶಾ ತಮಗಾದ ಕಹಿ ನೋವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

    ಕನ್ನಡದಲ್ಲೂ ಕೆಲ ಕಲಾವಿದೆಯರು ತಮಗಾದ ಕೆಟ್ಟ ಅನುಭವಗಳನ್ನು ಧೈರ್ಯದಿಂದಲೇ ಹೇಳಿಕೊಂಡಿದ್ದಾರೆ. ಅದರಲ್ಲೂ ಮೀಟೂ ಸಂದರ್ಭದಲ್ಲಿ ಅತೀ ಹೆಚ್ಚು ಸುದ್ದಿಯಾಗಿದ್ದು ಸ್ಯಾಂಡಲ್ ವುಡ್‍ ಎನ್ನುವುದು ಬೇಸರದ ಸಂಗತಿ.