Tag: Casino

  • ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಅವರಿಗೆ ಶ್ರೀಲಂಕಾದ ಕ್ಯಾಸಿನೋ ಜೊತೆ ನಂಟು ಇದೆ ಎಂಬ ಆರೋಪ ಕೇಳಿ ಬಂದ ಬಳಿಕ ಈಗ ರಾಜ್ಯದ ಮಾಜಿ ವಿಧಾನಪರಿಷತ್‌ ಸದಸ್ಯರೊಬ್ಬರಿಗೂ ಸಂಪರ್ಕವಿದೆ ಎಂಬ ಮಾತು ಕೇಳಿ ಬಂದಿದೆ.

    ಹೌದು. ಕರ್ನಾಟಕದ ರಾಜಕಾರಣಿಗಳಿಗೆ ಶ್ರೀಲಂಕಾದ ಕ್ಯಾಸಿನೋ ನಂಟು ಇದೆ. ಈಗಾಗಲೇ ಪ್ರಶಾಂತ್‌ ಸಂಬರಗಿ ಜಮೀರ್‌ ಅಹಮದ್‌ ಹೆಸರನ್ನು ತೇಲಿಬಿಟ್ಟಿದ್ದಾರೆ. ಆದರೆ ಹಲವು ರಾಜಕಾರಣಿಗಳಿಗೆ ಲಂಕಾ ಕ್ಯಾಸಿನೋ ನಂಟು ಇದ್ದು ಅದರಲ್ಲೂ ಉದ್ಯಮಿಯಾಗಿರುವ ಮಾಜಿ ಪರಿಷತ್‌ ಸದಸ್ಯರ ಹೆಸರು ಈಗ ಮುನ್ನೆಲೆಗೆ ಬಂದಿದೆ.

    ಈ ನಾಯಕ ಹಲವು ಬಾರಿ ಲಂಕಾಗೆ ಹೋಗಿದ್ದಾರೆ.ಈಗ ಡ್ರಗ್ಸ್‌ ಪ್ರಕರಣದಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದೆ. ಒಂದು ವೇಳೆ ತನಿಖೆಗೆ ಇಳಿದರೆ ಈ ನಾಯಕನಿಗೂ ಕಷ್ಟವಾಗುವ ಸಾಧ್ಯತೆಯಿದೆ.

    ವಿಶೇಷ ಏನೆಂದರೆ ಈ ವ್ಯಕ್ತಿ ಮಾತ್ರ ಹೋಗುತ್ತಿರಲಿಲ್ಲ. ಈ ವ್ಯಕ್ತಿಯ ಜೊತೆ ಹಲವು ರಾಜಕೀಯ ವ್ಯಕ್ತಿಗಳು ಹೋಗುತ್ತಿದ್ದರು. ಒಂದು ವೇಳೆ ಡ್ರಗ್ಸ್‌ ಪ್ರಕರಣದ ಆರೋಪಿಗಳಿಗೂ ಈ ರಾಜಕೀಯ ವ್ಯಕ್ತಿಗೂ ನಂಟು ಇದೆ ಎಂಬ ಸುಳಿವು ಸಿಕ್ಕರೆ ಈ ವ್ಯಕ್ತಿಯ ಸುತ್ತ ತನಿಖೆ ತಿರುಗಲಿದೆ. ಒಂದು ವೇಳೆ ಈ ವ್ಯಕ್ತಿಯನ್ನು ವಿಚಾರಣೆಗೆ ಒಳ ಪಡಿಸಿದರೆ ರಾಜ್ಯದ ಹಲವು ರಾಜಕೀಯ ನಾಯಕರಿಗೂ ಬಿಸಿ ತಟ್ಟಲಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಕರ್ನಾಟಕದ ವ್ಯಕ್ತಿಗಳಿಗೆ ಗೋವಾ ಬಿಟ್ಟರೆ ಶ್ರೀಲಂಕಾ ಕ್ಯಾಸಿನೋದ ಮೇಲೆ ಮೋಹ ಜಾಸ್ತಿ. ಶ್ರೀಲಂಕಾದಲ್ಲಿ ಪ್ರೈವೆಸಿ ಜಾಸ್ತಿ. ಅಷ್ಟೇ ಅಲ್ಲದೇ ಯಾರಿಗೂ ಅಷ್ಟು ಸುಲಭವಾಗಿ ಗುರುತು ಹಿಡಿಯಲು ಆಗುವುದಿಲ್ಲ. ಹೀಗಾಗಿ ಬಹಳಷ್ಟು ಜನ ಶ್ರೀಲಂಕಾದ ಕ್ಯಾಸಿನೋಗೆ ಹೋಗುತ್ತಾರೆ.

    ಒಟ್ಟಿನಲ್ಲಿ ಸಿಸಿಬಿಯ ಡ್ರಗ್ಸ್‌ ತನಿಖೆಯ ಜೊತೆ ಕ್ಯಾಸಿನೋ ನಂಟು, ಅಕ್ರಮ ಹಣಕಾಸು ವ್ಯವಹಾರದ ವಾಸನೆ ಜೋರಾಗುತ್ತಿದೆ. ಹೀಗಾಗಿ ತನಿಖೆ ಮುಂದೆ ಹೇಗೆ ಸಾಗಲಿದೆ ಎಂಬ ಕುತೂಹಲ ಮೂಡಿದೆ.

  • ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ್ದರೆ, ಸಂಜನಾ ಆಪ್ತ ರಾಹುಲ್ ಮತ್ತು ಶರ್ಮಿಳಾ ಮಾಂಡ್ರೆಯ ಗೆಳೆಯ ಕಾರ್ತಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಪ್ರಕಟವಾಗುತ್ತಿದೆ.

    ಬೆಂಗಳೂರಿನಲ್ಲಿ ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರು ಡ್ರಗ್ ಡೀಲರ್ ಗಳನ್ನು ಎನ್‍ಸಿಬಿ ಪೊಲೀಸರ ಬಂಧಿಸಿದ್ದರು. ಇವರ ಕೊಟ್ಟ ಮಾಹಿತಿ ಮೇರೆಗೆ ಈಗ ನಟಿ ಸಂಜನಾಗೆ ಅಪ್ತನಾಗಿದ್ದ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಓರ್ವ ಡ್ರಗ್ ಡೀಲರ್ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

    ರಾಹುಲ್ ಬೆಂಗಳೂರಿನ ಬನಶಂಕರಿ ನಗರದ ನಿವಾಸಿಯಾಗಿದ್ದಾನೆ. ಈತ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದು, ಈ ಕ್ಯಾಸಿನೋಗೆ ಗ್ರಾಹಕರನ್ನು ಪ್ಯಾಕೇಜ್‍ನಲ್ಲಿ ಕಳಿಸಿಕೊಡುತ್ತಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಜೊತೆಗೆ ಈತ ಪಾರ್ಟಿಗಳನ್ನು ಆಯೋಜನೆ ಮಾಡೋದರಲ್ಲಿ ಪಂಟರ್ ಆಗಿದ್ದ, ಹೀಗೆ ಒಂದು ಪಾರ್ಟಿಯಲ್ಲೇ ಸಂಜನಾಗೆ ಪರಿಚಯವಾಗಿದ್ದ. ಅಂದಿನಿಂದ ಯಾವುದೇ ಪಾರ್ಟಿಯಿದ್ದರೂ ಸಂಜನಾಗೆ ಆಹ್ವಾನ ಕೊಡುತ್ತಿದ್ದ ಎಂದು ತಿಳಿದು ಬಂದಿದೆ.

    ಶ್ರೀಲಂಕಾದಲ್ಲಿ ನಡೆದಿದ್ದ ಕ್ಯಾಸಿನೋ ಪಾರ್ಟಿಗೆ ಸಂಜನಾ ಸೇರಿದಂತೆ ಬೇರೆ ಬೇರೆ ಚಿತ್ರರಂಗದ ನಟಿಯರನ್ನು ರಾಹುಲ್ ಕರೆಸಿದ್ದ. ಸದ್ಯ ರಾಹುಲ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಸಂಜನಾಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸಮನ್ಸ್ ನೀಡುವ ಸಾಧ್ಯತೆಯಿದೆ.

    ಈತನ ಬಗ್ಗೆ ಇಂದು ಬೆಳಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ್ದ ಸಂಜನಾ, ಆತ ನನ್ನನ್ನು ಅಕ್ಕ ಎಂದು ಕರೆಯುತ್ತಾನೆ. ತುಂಬ ಒಳ್ಳೆಯವನು ಮತ್ತು ಜ್ಯಾಲಿ ಮನುಷ್ಯ. ರಾಹುಲ್ ಆ ತರದ ಹುಡುಗ ಅಲ್ಲ. ನನಗೆ ಸಹೋದರಿಲ್ಲ, ಪ್ರತಿ ವರ್ಷ ನಾನು ಆತನಿಗೆ ರಾಖಿ ಕಟ್ಟುತ್ತೇನೆ. ಆತನನ್ನು ಪೊಲೀಸರು ಏಕೆ ಕರೆದುಕೊಂಡು ಹೋಗಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

    ಅಸಲಿಗೆ ಸ್ಟಾರ್ ನಟ ನಟಿಯರಲ್ಲದೆ ರಾಜಕಾರಣಿಗಳ ಮಕ್ಕಳೂ ಕೂಡ ರಾಹುಲ್‌ಗೆ ಆಪ್ತರು. ರಾಹುಲ್ ಗೆ ಶ್ರೀಲಂಕದಾ ಕ್ಯಾಸಿನೋ ಗಳ ಹಿಡಿತವಿದೆ. ಹೀಗಾಗಿಯೇ ರಾಜಕಾರಣಿಗಳ ಮಕ್ಕಳನ್ನು ಕ್ಯಾಸಿನೋಗೆ ಕಳುಹಿಸುತ್ತಿದ್ದ. ಕ್ಯಾಸಿನೋಗೆ ಕಳುಹಿಸಿಕೊಡುವ ಮೂಲಕ ರಾಜಕಾರಣಿಗಳ ಮಕ್ಕಳ ಸ್ನೇಹವನ್ನು ಸಂಪಾದಿಸುತ್ತಿದ್ದ. ಕ್ಯಾಸಿನೋಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಎಲ್ಲವನ್ನು ರಾಹುಲ್ ಒದಗಿಸಿಕೊಡುತ್ತಿದ್ದ.

  • ಕ್ಯಾಸಿನೋ ಅಡ್ಡೆ ಮೇಲೆ ಸಿಸಿಬಿ ದಾಳಿ- 13 ಕೋಟಿ ಸೀಜ್

    ಕ್ಯಾಸಿನೋ ಅಡ್ಡೆ ಮೇಲೆ ಸಿಸಿಬಿ ದಾಳಿ- 13 ಕೋಟಿ ಸೀಜ್

    – ಪೂರ್ವ ವಿಭಾಗ ಪೊಲೀಸರಿಂದ ಬೃಹತ್ ಕಾರ್ಯಾಚರಣೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ ಮಾಫಿಯಾ ಬಳಿಕ ಮತ್ತೊಂದು ಬೃಹತ್ ಪ್ರಕರಣ ಬಳಿಕೆ ಬಂದಿದೆ. ಅಕ್ರಮ ಕ್ಯಾಸಿನೋ ಅಡ್ಡೆಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬರೋಬ್ಬರಿ 13 ಕೋಟಿ ರೂ.ಗಳನ್ನು ಸೀಜ್ ಮಾಡಲಾಗಿದೆ.

    ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರ ತಂಡ ಇಂದಿರಾನಗರದ ಕ್ಯಾಸಿನೋ ಮೇಲೆ ದಾಳಿ ನಡೆಸಿದ್ದು, ಡಿಸಿಪಿ ಸ್ಕ್ವಾಡ್‍ನಿಂದ ಬೃಹತ್ ಕಾರ್ಯಾಚರಣೆ ನಡೆದಿದೆ. ಕ್ಯಾಸಿನೋ ಅಡ್ಡೆಯಲ್ಲಿನ ಬರೋಬ್ಬರಿ 13 ಕೋಟಿ ರೂ.ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಒಟ್ಟು 60 ಟೇಬಲ್ ಫೋರ್ಕರ್ ನಲ್ಲಿ ಕ್ಯಾಸಿನೊ ನಡೆಯುತ್ತಿತ್ತು. ಒಟ್ಟು 90 ಗ್ರಾಹಕರು ಬಂದಿದ್ದರು. ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಮೊತ್ತವನ್ನು ಸೀಜ್ ಮಾಡಿದ್ದಾರೆ.

    ಈ ಕ್ಯಾಸಿನೋ ರೌಡಿ ಶೀಟರ್ ಮೆಂಟಲ್ ಸೀನ, ಚಲ್ಲಗಟ್ಟ ಚಂದ್ರ ಮತ್ತು ಮುರಳಿ ಒಡೆತನದ್ದಾಗಿದ್ದು, ಪೊಲೀಸರು ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ಸರ್ಚಿಂಗ್ ಆಪರೇಶನ್ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

  • ಡ್ಯಾಶ್, ಡ್ಯಾಶ್, ಡ್ಯಾಶ್ – ಸಿದ್ದು ವಿರುದ್ಧ ಸಿಟಿ ರವಿ ವ್ಯಂಗ್ಯ

    ಡ್ಯಾಶ್, ಡ್ಯಾಶ್, ಡ್ಯಾಶ್ – ಸಿದ್ದು ವಿರುದ್ಧ ಸಿಟಿ ರವಿ ವ್ಯಂಗ್ಯ

    ಚಿಕ್ಕಮಗಳೂರು: ರಾಜ್ಯದ ಕೆಲವೆಡೆ ಗೋ ಬ್ಯಾಕ್ ಟ್ರಂಪ್ ಚಳುವಳಿ ನಡೆಯುತ್ತಿರುವ ಹಿನ್ನೆಲೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಗೋ ಬ್ಯಾಕ್ ಅನ್ನುವವರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಚಿಕ್ಕಮಗಳೂರು ಉತ್ಸವದ ಅಂಗವಾಗಿ ನಡೆಸಿದ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ಹುಟ್ಟುವಾಗಲೇ ದ್ವೇಷ ಹೊತ್ತುಕೊಂಡು ಬಂದವರು ಈ ರೀತಿ ವಿರೋಧ ಮಾಡುತ್ತಾರೆ. ಅವರಿಗೆ ಏಕೆ ತಲೆಕೆಡಿಸಿಕೊಳ್ಳಬೇಕು. ಆನೆ ಹೋಗುತ್ತಿರುತ್ತದೆ ಡ್ಯಾಶ್, ಡ್ಯಾಶ್, ಡ್ಯಾಶ್ ಎಂದು ವ್ಯಂಗ್ಯವಾಡಿದ್ದಾರೆ.

    ಇದೇ ವೇಳೆ ರವಿ ಕ್ಯಾಸಿನೋ ಆಡಿರಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಸಿದ್ದರಾಮಯ್ಯಗೆ 70 ವರ್ಷ ಕ್ರಾಸ್ ಆಗಿದೆ. ಅವರು ದೊಡ್ಡವರು. ಯಾರ್ಯಾರು ಮೂರು ಮೂರು ದಿನ ಹೊರಗೆ ಬರುತ್ತಿರಲಿಲ್ಲ ಎಂದು ಅವರು ಅವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.

    ಯಾರ್ಯಾರ ಫ್ರೆಂಡ್ಸ್ ಸರ್ಕಲ್ ಹೇಗಿದೆ. ತಟ್ಟೋಕೆ ಕೂತ್ರೆ ಮೂರು ದಿನ ಹೊರಗೆ ಬರದೇ ಇದ್ದೋರು ಯಾರು ಎಂದು ಸಿದ್ದರಾಮಯ್ಯ ಅವಲೋಕನ ಮಾಡಿಕೊಳ್ಳಲಿ. ಅವಲೋಕನ ಮಾಡಿಕೊಂಡಾಗ ಆರೋಪ ಮಾಡುವವರು ಎಷ್ಟು ಸಾಚಾ ಎಂದು ಗೊತ್ತಾಗುತ್ತೆ ಎಂದು ಸಿದ್ದು ವಿರುದ್ಧ ಸಚಿವ ಸಿ.ಟಿ.ರವಿ ಕಿಡಿಕಾರಿದರು.