Tag: Car Owner

  • ನಾಯಿ ಮೂತ್ರ, ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

    ನಾಯಿ ಮೂತ್ರ, ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

    ಬೆಂಗಳೂರು: ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿದಕ್ಕೆ ಕಾರಿನ ಮಾಲೀಕ ವಯೋ ವೃದ್ಧರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಬಾಣಸವಾಡಿಯಲ್ಲಿ ಈ ಘಟನೆ ನಡೆದಿದ್ದು, ಕಾರು ಮಾಲೀಕ ಚಾರ್ಲ್ಸ್, ನಾಯಿಯನ್ನು ಸಾಕಿದ್ದ ಗೇರಿ ರೋಜಾರಿಯೋ ಎಂಬ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾನೆ. ಭಾನುವಾರ ರಾತ್ರಿ 11 ಗಂಟೆಗೆ ಗೇರಿ ರೋಜಾರಿಯೋ ನಾಯಿಯನ್ನು ಹೊರಗಡೆ ಬಿಟ್ಟಿದ್ದಾರೆ. ಈ ವೇಳೆ ನಾಯಿ ಎದುರುಗಡೆ ರಸ್ತೆಯ ಚಾರ್ಲ್ಸ್ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಇದನ್ನೂ ಓದಿ: ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿ ಹೊಡೆದು ಕೊಂದ

    ನಾಯಿ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಚಾರವಾಗಿ ಎರಡು ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇಷ್ಟಕ್ಕೆ ರೊಚ್ಚಿಗೆದ್ದ ಕಾರು ಮಾಲೀಕ ಚಾರ್ಲ್ಸ್ ಎರಡನೇ ಮಹಡಿಯಿಂದ ಕಲ್ಲು ತಗೆದು ವಯೋವೃದ್ಧ ಗೇರಿ ರೋಜಾರಿಯೋಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗೇರಿ ರೋಜಾರಿಯೋ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕಲ್ಲು ಬಿದ್ದ ರಭಸಕ್ಕೆ ಗೇರಿ ರೋಜಾರಿಯ ಎರಡು ಹಲ್ಲುಗಳು ಮುರಿದಿದ್ದು, ಕಣ್ಣುಗಳು ಮಂಜಾಗಿ ಕಾಣುತ್ತಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಮಳೆ ಎಚ್ಚರಿಕೆ – ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

    POLICE JEEP

    ಈ ಕುರಿತಂತೆ ಗೇರಿ ರೋಜಾರಿಯೋ ಅವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಚಾರ್ಲ್ಸ್ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ.

  • ಹೆಚ್ಚಿನ ಹಣ ಕಟ್ ಮಾಡ್ತಾರೆ, ಕೇಳಿದ್ರೆ ಉತ್ತರ ಕೊಡಲ್ಲ- ಶೋರೂಂನಲ್ಲಿ ಡಿಶುಂ ಡಿಶುಂ

    ಹೆಚ್ಚಿನ ಹಣ ಕಟ್ ಮಾಡ್ತಾರೆ, ಕೇಳಿದ್ರೆ ಉತ್ತರ ಕೊಡಲ್ಲ- ಶೋರೂಂನಲ್ಲಿ ಡಿಶುಂ ಡಿಶುಂ

    ಬೆಂಗಳೂರು: ಯಾಕಪ್ಪ ಹೆಚ್ಚಿನ ಹಣ ತೆಗೆದುಕೊಂಡಿದ್ದೀಯಾ ಎಂದು ಪ್ರಶ್ನೆ ಮಾಡಿದ ಕಾರಿನ ಮಾಲೀಕರಿಗೆ ನಿಂದಿಸಿದ ಕಾರ್ ಶೋರೊಂ ಮ್ಯಾನೇಜರ್ ಒಬ್ಬರಿಗೆ ಥಳಿಸಿರುವ ಘಟನೆ ಎಚ್‍ಎಎಲ್‍ನ ಕುಂದಲಹಳ್ಳಿಯ ನಂದಿ ಟೊಯೋಟದಲ್ಲಿ ನಡೆದಿದೆ.

    ರೀಟೈಲ್ ಫೈನಾನ್ಸ್ ಇಂಚಾರ್ಜ್ ನಂದಿ ಟೊಯೋಟ ಶೋರೂಂ ನಲ್ಲಿ ಶಿವಕುಮಾರ್ ಕಾರು ಖರೀದಿ ಮಾಡಿದ್ದರು. ಕಾರು ಖರೀದಿ ಮಾಡಿ ಒಂದು ವರ್ಷದ ಬಳಿಕ ತನ್ನ ಸ್ನೇಹಿತ ಪುನಿತ್‍ನ ಜೊತೆಯಲ್ಲಿ ನಂದಿ ಟೊಯೋಟ ಶೋರೂಂಗೆ ಹೋಗಿದ್ದಾರೆ. ಸವಿರ್ಸ್‍ಗೆ ಕಾರನ್ನು ಕೊಟ್ಟು ಒಂದು ದಿನದ ಬಳಿಕ ಕಾರನ್ನು ವಾಪಸ್ ಪಡೆಯಲು ಬಂದಿದ್ದಾರೆ. ಆಗ ಶೋರೂಂ ಅವರು ಬಿಲ್ ಅನ್ನು ಕೊಟ್ಟಿದ್ದಾರೆ. ಆದರೆ ಮೊದಲು ಹೇಳಿದ ಬಿಲ್‍ನ ಮೊತ್ತವೇ ಬೇರೆ, ಬಳಿಕ ಹೆಚ್ಚಾಗಿ ಪ್ರೊಸೆಸಿಂಗ್ ಫೀ ಎಂದು ಬರೆದು ಜಾಸ್ತಿ ಹಣ ಕೇಳಿದ್ದಾರೆ.

    ಪ್ರೊಷೆಸಿಂಗ್ ಫೀ ಬಗ್ಗೆ ಶೋ ರೂಂನ ಮ್ಯಾನೇಜರ್ ನ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಈ ಸಮಯದಲ್ಲಿ ಮ್ಯಾನೇಜರ್ ಗುರುನಾಥ್, ಶಿವಕುಮಾರ್ ಮತ್ತು ಪುನೀತ್‍ಗೆ ಕೊಲೆ ಬೆದರಿಕೆ ಹಾಕಿದ್ದು, ಅಲ್ಲದೇ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಪುನಿತ್ ಮತ್ತು ಶಿವಕುಮಾರ್ ಮ್ಯಾನೇಜರ್ ಗುರುನಾಥ್‍ಗೆ ಚೆನ್ನಾಗಿ ಥಳಿಸಿದ್ದು, ಗಲಾಟೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಕಳ್ಳ ಕದ್ದ ಪೊಲೀಸ್ ಜೀಪ್ ವಿರುದ್ಧವೇ ದೂರು ದಾಖಲು

    ಕಳ್ಳ ಕದ್ದ ಪೊಲೀಸ್ ಜೀಪ್ ವಿರುದ್ಧವೇ ದೂರು ದಾಖಲು

    ಚಿಕ್ಕಮಗಳೂರು: ನನ್ನ ಕಾರಿಗೆ ಅಪಘಾತ ಮಾಡಿದ್ದು ಪೊಲೀಸ್ ಜೀಪ್, ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಜೀಪ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಸೋಮವಾರ ನಗರದ ಗ್ರಾಮಾಂತರ ಠಾಣೆಯ ರಕ್ಷಾ ಪೊಲೀಸ್ ಜೀಪ್ ಡ್ರೈವರ್ ಜೀಪನ್ನ ನಿಲ್ಲಿಸಿ ಮೆಡಿಕಲ್ ಗೆ ಹೋಗಿ ಬರುವಷ್ಟರಲ್ಲಿ ಕಳ್ಳನೋರ್ವ ಜೀಪನ್ನು ಕದ್ದು ಪರಾರಿಯಾಗಿದ್ದ. ನಗರದಿಂದ ಐದು ಕಿ.ಮೀ. ದೂರ ಜೀಪನ್ನು ತೆಗೆದುಕೊಂಡು ಹೋಗಿ ಆಲ್ಟೋ ಕಾರಿಗೆ ಅಪಘಾತ ಮಾಡಿದ್ದ. ಹಿಂದೆ ಪೊಲೀಸರು ಫಾಲೋ ಮಾಡುತ್ತಿರುವುದನ್ನು ಗಮನಿಸಿ ಜೀಪನ್ನು ಅಲ್ಲೆ ಬಿಟ್ಟು ಕಾಡಿನೊಳಗೆ ಕಣ್ಮರೆಯಾಗಿದ್ದ.

    ಈಗ ಆಲ್ಟೋ ಕಾರಿನ ಮಾಲೀಕ ಸಖರಾಯಪಟ್ಟಣದ ಗುರುಮೂರ್ತಿ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಜೀಪ್ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ಕಾರಿಗೆ ಪೊಲೀಸ್ ಜೀಪ್ ಗುದ್ದಿದೆ. ಡ್ರೈವರ್ ಯಾರೆಂದು ಗೊತ್ತಿಲ್ಲ. ಹಾಗಾಗಿ ಪೊಲೀಸ್ ಜೀಪ್ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಅತ್ತ ಪೊಲೀಸ್ ಜೀಪ್ ಕದ್ದ ಯಾರೆಂದು ಪೊಲೀಸರಿಗೂ ಗೊತ್ತಿಲ್ಲ. ಇತ್ತ ಜೀಪ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ಬಂದಿದೆ. ಪೊಲೀಸರಿಗೆ ಈಗ ಏನು ಮಾಡುವುದು ಎಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ.