Tag: cancer

  • ವಿಷವಾಗಿದೆ ಜೀವಜಲ – ಗ್ರಾಮದಲ್ಲಿ ನೀರು ಕುಡಿದ್ರೆ ಬರುತ್ತೆ ಕ್ಯಾನ್ಸರ್!

    ವಿಷವಾಗಿದೆ ಜೀವಜಲ – ಗ್ರಾಮದಲ್ಲಿ ನೀರು ಕುಡಿದ್ರೆ ಬರುತ್ತೆ ಕ್ಯಾನ್ಸರ್!

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ, ಏವೂರ ದೊಡ್ಡ ತಾಂಡದ ಜನರಿಗೆ ಕುಡಿಯುವ ನೀರು ವಿಷವಾಗಿ ಪರಿಣಮಿಸಿದೆ. ಈ ಗ್ರಾಮದ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ವತಃ ಜಿಲ್ಲಾಡಳಿತವೇ ಒಪ್ಪಿಕೊಂಡಿದೆ.

    ಏವೂರ ಗ್ರಾಮದ ಕುಡಿಯುವ ನೀರಿನಲ್ಲಿ ಕ್ಯಾನ್ಸರ್ ಕಾರಕ ಆರ್ಸೆನಿಕ್ ಪತ್ತೆಯಾಗಿದ್ದು, ಈ ಊರಿನ ಜನ ನಿತ್ಯ ಕುಡಿಯುವ ನೀರಿನ ಬದಲು ವಿಷ ಕುಡಿಯುತ್ತಿದ್ದಾರೆ. ಏವೂರ ತಾಂಡದ ನೀರು ಕುಡಿಯಲು ಯೋಗ್ಯವಲ್ಲ ಅಂತ ಸ್ವತಃ ಜಿಲ್ಲಾಡಳಿತ ಒಪ್ಪಿಕೊಂಡಿದೆ. ಆದರೆ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಜನರ ಜೀವನದ ಜೊತೆ ಆಟವಾಡುತ್ತಿದೆ.

    ಗ್ರಾಮದ ನೀರಿನಲ್ಲಿ ಕೇವಲ ಆರ್ಸೆನಿಕ್ ಮಾತ್ರವಲ್ಲದೆ, ಅತಿ ಹೆಚ್ಚು ಫ್ಲೋರೈಡ್, ಮತ್ತು ವಿವಿಧ ವಿಷಕಾರಿ ಅಂಶಗಳ ಮಿಶ್ರಣವಾಗಿದ್ದು, ನಿತ್ಯ ನೀರನ್ನು ಕುಡಿಯುವ ಊರಿನ ಜನರಲ್ಲಿ ಕ್ಯಾನ್ಸರ್ ಮಾತ್ರವಲ್ಲದೆ ಬುದ್ಧಿಮಾಂದ್ಯತೆ, ವಿಕಲಾಂಗ, ಮೂಳೆ ರೋಗ, ಚರ್ಮ ರೋಗಗಳು ತಾಂಡವಾಡುತ್ತಿದೆ. ಅಷ್ಟೇ ಅಲ್ಲದೆ ನೀರನ್ನು ಶುದ್ಧೀಕರಣ ಮಾಡಿದರೂ ಕೂಡ ವಿಷಕಾರಿ ಅಂಶ ಕಡಿಮೆ ಆಗುವುದಿಲ್ಲವಂತೆ. ಹೀಗಾಗಿ ಬೇರೆ ದಾರಿ ಇಲ್ಲದೆ ಏವೂರ ತಾಂಡದ ಜನ ಇದೇ ನೀರನ್ನು ಕುಡಿಯುತ್ತಿದ್ದಾರೆ.

    ಇದರಿಂದ ಅಕ್ಕ-ಪಕ್ಕದ ಊರಿನವರು ಈ ತಾಂಡವನ್ನು ರೋಗಸ್ತ ತಾಂಡ ಎಂದು ಕರೆಯುವಂತಾಗಿದೆ. ಇಷ್ಟೇ ಅಲ್ಲದೇ ಈ ಊರಿನ ಹೆಣ್ಣು ಮಕ್ಕಳನ್ನು ಮದುವೆ ಆಗಲು ಸಹ ಯಾರು ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಊರಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

    ಈ ಬಗ್ಗೆ 2018ರಲ್ಲಿ ನ್ಯಾಷನಲ್ ಸೇವಾ ಡಾಕ್ಟರ್ ಅಸೋಸಿಯೇಷನ್ ಮತ್ತು ತಾಂಡ ಅಭಿವೃದ್ಧಿ ನಿಗಮ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ, ಏವೂರು ತಾಂಡದ ಜನ ನಿತ್ಯ ಕಣ್ಣಿನೀರಿನಲ್ಲಿ ಕೈತೊಳೆಯುವಂತಾಗಿದೆ.

  • 9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

    9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

    ನವದೆಹಲಿ: ಬಡ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಹಾಯವಾಗಲೆಂದು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ(ಎನ್‍ಪಿಪಿಎ) 9 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು 87%ದಷ್ಟು ಇಳಿಕೆ ಮಾಡಿದೆ.

    ಈ ಒಂಬತ್ತು ಔಷಧಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಕಿಮೊಥೆರಪಿ ಚುಚ್ಚುಮದ್ದುಗಳು ಒಳಗೊಂಡಿದೆ. ಪರಿಷ್ಕೃತ ಆದೇಶದ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಬಳಸಲಾಗುವ ಪೆಮ್ಸೆಸೆಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ 500 ಮಿ.ಗ್ರಾಂ ಇಂಜೆಕ್ಷನ್ ಬೆಲೆ 22,000 ರೂ.ಗಳಿಂದ 2,800 ರೂ.ಗೆ ಇಳಿದಿದೆ. ಹಾಗೆಯೇ 100 ಮಿ.ಗ್ರಾಂ ಡೋಸ್ ಇದೇ ಇಂಜೆಕ್ಷನ್ ಬೆಲೆ 7,700 ರೂ.ಗಳಿಂದ 800 ರೂಪಾಯಿಗೆ ಇಳಿದಿದೆ.

    ಅದೇ ರೀತಿ, ಎಪಿಕ್ಲೋರ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎಪಿರುಬಿಸಿನ್ 10 ಮಿ.ಗ್ರಾಂ ಡೋಸ್ ಇಂಜೆಕ್ಷನ್‍ಗೆ 561 ರೂ.ಗಳಿಂದ 276.8 ರೂಪಾಯಿಗೆ ಇಳಿದಿದೆ. ಅದೇ ಇಂಜೆಕ್ಷನ್‍ನ 50 ಮಿ.ಗ್ರಾಂ ಡೋಸ್ ಬೆಲೆ 2,662 ರೂ.ಗಳಿಂದ 960 ರೂ. ಆಗಿದೆ.

    ಎರ್ಲೋಟಾಜ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎರ್ಲೋಟಿನಿಬ್ 100 ಮಿ.ಗ್ರಾಂ 10 ಮಾತ್ರೆಗಳುಳ್ಳ ಪ್ಯಾಕ್‍ಗೆ 6,600 ರೂ.ಗಳಿಂದ 1,840 ರೂ.ಗೆ ಬಂದಿದೆ. ಹಾಗೆಯೇ 150 ಮಿ.ಗ್ರಾಂನ 10 ಮಾತ್ರೆಗಳುಳ್ಳ ಒಂದು ಪ್ಯಾಕ್ ಬೆಲೆ 8,800 ರೂ.ಗಳಿಂದ 2,400 ರೂ.ಗೆ ಇಳಿಕೆಯಾಗಿದೆ.

    ಲಾನೋಲಿಮಸ್ ಹೆಸರಿನಲ್ಲಿ ಮಾರಾಟವಾಗುವ ಎವೆರೋಲಿಮಸ್‍ನ ಬೆಲೆ 0.25 ಮಿ.ಗ್ರಾಂ ಮತ್ತು 0.5 ಮಿ.ಗ್ರಾಂನ ಡೋಸ್‍ಗೆ 1,452 ರೂ., 726 ಹಾಗೂ 739 ರೂ.ಗಳಿಂದ 406 ರೂ.ಗೆ ಇಳಿಕೆಯಾಗಿದೆ.

    ಈ ಬಗ್ಗೆ ಆರೋಗ್ಯ ಉದ್ಯಮದ ವಕ್ತಾರರು ಪ್ರತಿಕ್ರಿಯಿಸಿ, ಔಷಧಿಗಳ ಬೆಲೆ ಕಡಿಮೆ ಮಾಡುವ ಹಿನ್ನೆಲೆ ಔಷಧಿಯ ಗುಣಮಟ್ಟ ಹಾಗೂ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

    ಎನ್‍ಪಿಪಿಎ ದೇಶದಲ್ಲಿ ಔಷಧಿ ಬೆಲೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಯೂನಿಯನ್ ಸಚಿವಾಲಯವಾದ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆಯ ಅಡಿಯಲ್ಲಿ ಬರುವ ಸ್ವತಂತ್ರ ಸಂಸ್ಥೆಯಾಗಿದೆ. ಮಾರ್ಚ್ ನಂತರ ಎರಡನೇ ಭಾರಿ ಎನ್‍ಪಿಪಿಎ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿತಗೊಳಿಸಿದೆ.

  • ಸರ್ಕಾರದಿಂದ ಗುಡ್ ನ್ಯೂಸ್- ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುವ ಮೊತ್ತ ಹೆಚ್ಚಳ

    ಸರ್ಕಾರದಿಂದ ಗುಡ್ ನ್ಯೂಸ್- ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುವ ಮೊತ್ತ ಹೆಚ್ಚಳ

    ಬೆಂಗಳೂರು: ಅನಾರೋಗ್ಯಪೀಡಿತ ಸರ್ಕಾರಿ ನೌಕರರಿಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನ ಕೊಟ್ಟಿದೆ. ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುವ ಮೊತ್ತವನ್ನು ಹೆಚ್ಚಿಸಿದೆ.

    ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ (ಸಿಜಿಎಚ್?ಎಸ್) ಕ್ಯಾನ್ಸರ್ ಚಿಕಿತ್ಸೆಗೆ ನಿಗದಿಪಡಿಸಿದ ಮರುಪಾವತಿ ದರಪಟ್ಟಿಯನ್ನೇ ಇದೀಗ ರಾಜ್ಯ ಸರ್ಕಾರವೂ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬಸ್ಥರ ಕ್ಯಾನ್ಸರ್ ಚಿಕಿತ್ಸೆ ವೆಚ್ಚವನ್ನು ಪರಿಷ್ಕರಿಸಿದೆ. 3 ಹಂತದ ಚಿಕಿತ್ಸೆಗೂ ಹೊಸ ಪರಿಷ್ಕರಣೆ ಅನ್ವಯ ಆಗಲಿದೆ.

    ಮೊದಲ ಹಂತದ 6 ಚಿಕಿತ್ಸಾ ವಿಧಾನಕ್ಕೆ 2700 ರೂ.ಯಿಂದ 18 ಸಾವಿರದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. 2ನೇ ಹಂತದ 7 ಚಿಕಿತ್ಸಾ ವಿಧಾನಕ್ಕೆ 500 ರೂ.ಯಿಂದ 20 ಸಾವಿರದವರೆಗೆ ಚಿಕಿತ್ಸಾ ವೆಚ್ಚ ಹಾಗೂ 3ನೇ ಹಂತದ 6 ಸರ್ಜರಿ ವಿಧಾನಕ್ಕೆ 5 ಸಾವಿರದಿಂದ 45 ಸಾವಿರದವರೆಗೆ ಚಿಕಿತ್ಸಾ ವೆಚ್ಚವನ್ನು ನೀಡಲಾಗುತ್ತದೆ.

    ಇಂಪ್ಲಾಂಟ್, ಸ್ಟೆಂಟ್ ಹಾಗೂ ಗ್ರಾಫ್ಟ್ ಗಳ ವೆಚ್ಚವನ್ನು ಸಿಜಿಎಚ್ಎಸ್ ಅನುಸಾರ ಪ್ಯಾಕೇಜ್ ದರದ ಜತೆಗೆ ಹೆಚ್ಚುವರಿಯಾಗಿ ಸೇರಿಸಿ ನೀಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖಾರ ಪ್ರಿಯರಿಗೆ ಶಾಕ್- ಗುಂಟೂರು ಮೆಣಸಿನಕಾಯಿ ಬಳಸಿದ್ರೆ ಬರುತ್ತೆ ಕ್ಯಾನ್ಸರ್!

    ಖಾರ ಪ್ರಿಯರಿಗೆ ಶಾಕ್- ಗುಂಟೂರು ಮೆಣಸಿನಕಾಯಿ ಬಳಸಿದ್ರೆ ಬರುತ್ತೆ ಕ್ಯಾನ್ಸರ್!

    ವಿಜಯವಾಡ: ನಾಲಿಗೆ ಚಪ್ಪರಿಸಿ ಗುಂಟೂರು ಮೆಣಸಿನಕಾಯಿ ಉಪ್ಪಿನಕಾಯಿ ತಿನ್ನುವ ಮಂದಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

    ಆಂಧ್ರಪ್ರದೇಶದ ಗುಂಟೂರು ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಮೆಣಸಿನಕಾಯಿ ಮಾದರಿಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ವಿಷಕಾರಿ ಎಫ್ಲಾಟಾಕ್ಸಿನ್‍ಗಳು ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗಿವೆ ಎನ್ನುವ ಆತಂಕಕಾರಿ ವರದಿ ಪ್ರಕಟವಾಗಿದೆ.

    ಕ್ಯಾನ್ಸರ್ ತರುವಂತಹ ಸಾಮಥ್ರ್ಯ ಹೊಂದಿರುವ ಫಂಗಸ್ ಅಥವಾ ಶಿಲೀಂಧ್ರ ದಲ್ಲಿರುವ ವಿಷಕಾರಿ ವಸ್ತುವೇ ಎಫ್ಲಾಟಾಕ್ಸಿನ್ ಆಗಿದ್ದು, ಈ ವಸ್ತು ಗುಂಟೂರು ಮೆಣಸಿನಕಾಯಿಯಲ್ಲಿದೆ ಎಂದು ಏಷ್ಯನ್ ಜರ್ನಲ್ ಆಫ್ ಫಾರ್ಮಾಸಿಟಿಕ್ಸ್ ಜರ್ನಲ್ ಹೇಳಿದೆ.

    ಗುಂಟೂರು ಮೆಣಸಿನಕಾಯಿ ಸಾಕಷ್ಟು ರುಚಿ ಹಾಗೂ ತೀಕ್ಷ್ಣತೆಯಿದ್ದು, ಖಾರವಾಗಿರುತ್ತದೆ. ಹಾಗಾಗಿ ಈ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪ್ರಸಿದ್ಧಿ ಪಡೆದಿದೆ.

    ಗುಂಟೂರು ಜಿಲ್ಲೆಯೊಂದರಲ್ಲಿ ವಾರ್ಷಿಕವಾಗಿ ಸುಮಾರು 2.80 ಲಕ್ಷ ಟನ್ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ಅಲ್ಲದೇ ಈ ಮೆಣಸಿಕಾಯಿಯನ್ನು ಇಂಗ್ಲೆಂಡ್, ಅಮೆರಿಕ ಇನ್ನಿತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಮೆಣಸಿನಕಾಯಿಯನ್ನು ಮಣ್ಣಿನಲ್ಲಿ ಹರಡುವುದು, ಅವೈಜ್ಞಾನಿಕ ನಿರ್ವಹಣೆ ಹಾಗೂ ತೇವಾಂಶ ಒಟ್ಟುವಿಕೆಯಿಂದ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.

    ಸಂಶೋಧಕರು ಎಫ್ಲಾಟಾಕ್ಸಿನ್ ಪತ್ತೆ ಹಚ್ಚಿ ವೈಜ್ಞಾನಿಕ ನಿರ್ವಹಣೆಯ ವಿಧಾನಗಳನ್ನು ಹೇಳಿದ್ದಾರೆ. ಈ ಮೆಣಸಿನಕಾಯಿಯನ್ನು ದಕ್ಷಿಣ ಭಾರತದ ಜನರು ಅಡುಗೆಗೆ ಬಳಸುತ್ತಾರೆ. ಹೆಚ್ಚಾಗಿ ತೆಲುಗು ಭಾಷೆಯವರು ಈ ಮೆಣಸಿನಕಾಯಿಯನ್ನು ಬಳಸುತ್ತಾರೆ. ಗುಂಟೂರು ಮೆಣಸಿನಕಾಯಿಯನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

    ಮಚಿಲಿಪಟ್ಟಣದ ಕೃಷ್ಣಾ ವಿಶ್ವಾವಿದ್ಯಾನಿಲಯದ ಸಂಶೋಧಕರು, ವಿಜಯವಾಡದ ಕೆಬಿಎನ್‍ಬಿಜಿ ಕಾಲೇಜು ಹಾಗೂ ಪಿ.ಬಿ ಸಿದ್ಧಾರ್ಥ್ ಕಾಲೇಜು ಜೊತೆ ಸೇರಿ ಗುಂಟೂರು ನಗರದೆಲ್ಲೆಡೆ ಮೆಣಸಿನಕಾಯಿಯನ್ನು ಸ್ಯಾಂಪಲ್ ಪಡೆದು ಅಧ್ಯಯನ ನಡೆಸಿದ್ದಾರೆ. ಮೆಣಸಿನಕಾಯಿ ಮಣ್ಣಿನಲ್ಲಿ ಹೆಚ್ಚು ಇದ್ದರೆ ಅದು ಫಂಗಸ್ ಅಥವಾ ಶಿಲೀಂಧ್ರ ವಿಷಕಾರಿ ಅಂಶಗಳನ್ನು ಸೇರಿಸಿಕೊಳ್ಳಬಹುದು ಎಂದು ವರದಿಯಾಗಿದೆ. 7 ಸ್ಯಾಂಪಲ್‍ಗಳಲ್ಲಿ 5ರಲ್ಲಿ ಜಿ1, ಜಿ2 ಹಾಗೂ ಬಿ2 ಎಫ್ಲಾಟಾಕ್ಸಿನ್ ಪತ್ತೆಯಾಗಿದ್ದು, ಎಫ್ಲಾಟಾಕ್ಸಿನ್ ಮೆಣಸಿನಕಾಯಿಯಲ್ಲಿ ಸ್ವಲ್ಪವಿದ್ದರೂ ಇದು ಕ್ಯಾನ್ಸರ್ ತರುತ್ತದೆ. ಈ ಮೆಣಸಿನಕಾಯಿ ಹಿರಿಯರಿಗಿಂತ ಚಿಕ್ಕ ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

    ಎರಡು ವರ್ಷಗಳ ಹಿಂದೆ ಈ ಬಗ್ಗೆ ಕೇರಳ ಕೃಷಿ ಕಾಲೇಜಿನಲ್ಲಿ 51 ಗುಂಟೂರು ಮೆಣಸಿನಕಾಯಿ ಸ್ಯಾಂಪಲ್ ಅನ್ನು ಅಧ್ಯಯನ ನಡೆಸಲಾಗಿತ್ತು. ಈ ವೇಳೆ 21 ಮಾದರಿಗಳಲ್ಲಿ ಬೈಫೆಂಟ್ರಿನ್, ಈಥಿಯೋನ್, ಕ್ಲೋರಿಪಿರಿಫೊಸ್, ಸೈಪರ್ಮೆಥರಿನ್ ಹಾಗೂ ಮ್ಯಾಲಥಿಯಾನ್ ಎನ್ನುವ ವಿಷಕಾರಿ ಅಂಶಗಳು ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದು ಕೇವಲ ಇಂಟರ್‌ವಲ್‌ – ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಸೋನಾಲಿ ಬೇಂದ್ರೆ

    ಇದು ಕೇವಲ ಇಂಟರ್‌ವಲ್‌ – ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಸೋನಾಲಿ ಬೇಂದ್ರೆ

    ಮುಂಬೈ: ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಭಾರತಕ್ಕೆ ಮರಳಿದ್ದಾರೆ.

    ಸೋನಾಲಿ 4 ತಿಂಗಳು ಕ್ಯಾನ್ಸರ್ ನಿಂದ ಹೋರಾಡಿ ಈಗ ಭಾನುವಾರ ರಾತ್ರಿ ಭಾರತಕ್ಕೆ ಬಂದು ಮುಂಬೈನಲ್ಲಿ ಇಳಿದರು. ಸೋನಾಲಿ ಜೊತೆ ಅವರ ಪತಿ ಗೋಲ್ದಿ ಬೆಹಲ್ ಕೂಡ ಇದ್ದರು.

    ಈ ವೇಳೆ ಸೋನಾಲಿ ಮಾಧ್ಯಮದವರನ್ನು ನೋಡಿದ ತಕ್ಷಣ ಕೈ ಮುಗಿದು ನಮಸ್ಕಾರ ಮಾಡಿದರು. ಭಾರತಕ್ಕೆ ಬರುತ್ತಿರುವ ವಿಷಯವನ್ನು ಸೋನಾಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತನ್ನ ಅಭಿಮಾನಿಗಳಿಗೆ ತಿಳಿಸಿದ್ದರು.

    ಪೋಸ್ಟ್ ನಲ್ಲಿ ಏನಿದೆ?
    ದೂರ ಹೋದಷ್ಟು ಹೃದಯಗಳು ಹತ್ತಿರವಾಗುತ್ತದೆ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಾಗಲೂ ಆಗುತ್ತದೆ. ಈ ದೂರ ನನಗೆ ಸಾಕಷ್ಟು ಕಲಿಸಿದೆ. ನನ್ನ ಊರು ಹಾಗೂ ಮನೆಯಿಂದ ದೂರ ನ್ಯೂಯಾರ್ಕ್ ನಲ್ಲಿರುವಾಗ ನನ್ನ ಜೀವನದಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ಈಗ ನಾನು ನನ್ನ ಹೃದಯವಿರುವ ಜಾಗಕ್ಕೆ ಮರಳಿದ್ದೇನೆ. ಈ ಫೀಲಿಂಗ್ ನಾನು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಹೇಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಸ್ನೇಹಿತರನ್ನು ಖುಷಿಯಾಗಿ ನೋಡಲು ಕಾತುರದಿಂದ ಇದ್ದೇನೆ. ನನ್ನ ಕ್ಯಾನ್ಸರ್ ಪಯಣ ಇನ್ನೂ ಮುಗಿದಿಲ್ಲ. ಇದು ಕೇವಲ ಇಂಟರ್‌ವಲ್‌ ಎಂದು ಹೇಳಿಕೊಂಡಿದ್ದಾರೆ.

    ಸದ್ಯ ಸೋನಾಲಿ ಕೆಲವು ದಿನಗಳಿಗಾಗಿ ಮುಂಬೈಗೆ ಆಗಮಿಸಿದ್ದಾರೆ. ಮತ್ತೆ ಚಿಕಿತ್ಸೆ ಪಡೆಯಲು ಅವರು ನ್ಯೂಯಾರ್ಕ್ ಗೆ ಹೋಗುವ ಸಾಧ್ಯತೆಗಳಿವೆ. ಸೋನಾಲಿ ನಟಿ ಪ್ರಿಯಾಂಕಾ ಚೋಪ್ರಾಳ ಗೆಳತಿಯಾಗಿದ್ದು, ಡಿ.12ರಂದು ನಡೆಯುವ ಆರತಕ್ಷತೆ ಕಾರ್ಯಕ್ರಮಕ್ಕೆ ಸೋನಾಲಿ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ನಾಲ್ಕು ತಿಂಗಳ ಹಿಂದೆ ತನಗೆ ಕ್ಯಾನ್ಸರ್ ಇರುವ ವಿಷಯ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ಸೋನಾಲಿ ತಿಳಿಸಿದರು. ಬಳಿಕ ಚಿಕಿತ್ಸೆ ಪಡೆಯಲು ನ್ಯೂಯಾರ್ಕ್ ಗೆ ತೆರಳಿದರು. ಅಲ್ಲದೇ ತಮ್ಮ ಆರೋಗ್ಯದ ಬಗ್ಗೆ ಪ್ರತಿಯೊಂದು ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.

     

    View this post on Instagram

     

    They say “Distance makes the heart grow fonder”. It sure does. But let’s never underestimate what distance teaches you. Being away from home in the city of New York, I realized I was walking amongst so many stories. Each trying to write their own chapter in different ways. Each struggling to do it but never giving up. Each taking it #OneDayAtATime. And now I’m on my way back to where my heart is. It’s a feeling I can’t describe in words but I’m going to try – it’s the joy to see my family and friends again, the excitement to do what I love and mainly the gratitude for the journey I’ve had up until this moment. The fight is not yet over…but I’m happy and looking forward to this happy interval 🙂 It’s time to learn that there is a new normal out there and I can’t wait to embrace it and #SwitchOnTheSunshine. #NowPlaying #AdventureOfALifeTime???? And as my adventure with life continues these words by Chris Martin hit home, “Everything you want is a dream away. Under this pressure, under this weight We are diamonds taking shape…”

    A post shared by Sonali Bendre (@iamsonalibendre) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಿನಕ್ಕೆ 40 ಸಿಗರೇಟ್ ಸೇದ್ತಿದ್ದೆ- ಚಟ ಬಿಟ್ಟ ಕಥೆ ತಿಳಿಸಿದ  ಮಾಜಿ ಸಿಎಂ- ವಿಡಿಯೋ ನೋಡಿ

    ದಿನಕ್ಕೆ 40 ಸಿಗರೇಟ್ ಸೇದ್ತಿದ್ದೆ- ಚಟ ಬಿಟ್ಟ ಕಥೆ ತಿಳಿಸಿದ ಮಾಜಿ ಸಿಎಂ- ವಿಡಿಯೋ ನೋಡಿ

    ಮೈಸೂರು: ವಕೀಲನಾಗಿದ್ದಾಗ ನಾನು ದಿನಕ್ಕೆ ನಾಲ್ಕು ಪ್ಯಾಕ್ ಅಂದ್ರೆ, 40 ವೀಲ್ಸ್ ಸಿಗರೇಟ್ ಸೇದುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದ ಸೆನೆಟ್ ಹಾಲ್ ನಲ್ಲಿ ಇವತ್ತು ನಡೆದ ಸ್ತನ ಮತ್ತು ಗರ್ಭ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸ್ನೇಹಿತರು ವಿದೇಶಕ್ಕೆ ಹೋದಾಗ ಪೆನ್ನು ವಾಚ್ ಗಿಫ್ಟ್ ನೀಡುತ್ತಿದ್ದರು. ಆದರೆ ಒಮ್ಮೆ ಸ್ನೇಹಿತರು ಒಂದು ಬಾಕ್ಸ್ ವೆರೈಟಿ ಸಿಗರೇಟ್‍ಗಳನ್ನು ಉಡುಗೊರೆಯಾಗಿ ತಂದು ಕೊಟ್ಟಿದ್ದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

    ಯಾವ ಸಿಗರೇಟ್ ಹೇಗಿದೆ ಅಂತಾ ನೋಡೋಕೆ ಎಲ್ಲವನ್ನೂ ಸೇದಿಬಿಟ್ಟೆ. ಸಿಗರೇಟ್ ಖಾಲಿಯಾದ ಮೇಲೆ ಅಬ್ಬಾ ನಾನು ಇಷ್ಟು ಸಿಗರೇಟ್ ಸೇದಿ ಬಿಟ್ಟೆನಾ? ನನ್ನ ಆರೋಗ್ಯದ ಗತಿ ಏನಾಗುತ್ತೆ? ಅಂತಾ ಯೋಚಿಸಿಲು ಪ್ರಾರಂಭಿಸಿದೆ. ಆಗ ಸ್ವಲ್ಪ ಜ್ಞಾನೋದಯವಾಯಿತು. ರಾತ್ರಿಯ ಯೋಚಿಸಿ, ಇನ್ನು ಮುಂದೆ ಸಿಗರೇಟ್ ಸೇದುವುದನ್ನು ಬಿಡುತ್ತೇನೆ ಅಂತಾ 1987 ಆಗಸ್ಟ್ 17ರಂದು ಶಪಥ ಮಾಡಿದೆ ಎಂದರು.

    ಅವತ್ತಿನಿಂದ ಸಿಗರೇಟ್ ವಾಸನೆ ಕಂಡರೂ ಆಗುವುದಿಲ್ಲ. ನಾನು ಹೆಚ್ಚಾಗಿ ವೀಲ್ಸ್ ಸಿಗರೇಟ್ ಸೇದುತ್ತಿದ್ದೆ ಎಂದ ಅವರು, ಸಿಗರೇಟ್ ಸೇದಿದರೆ ಕ್ಯಾನ್ಸರ್ ಬರುತ್ತೆ ಅಂತಾ ಹೇಳುತ್ತಾರೆ, ಜೊತೆಗೆ ತಿಳುವಳಿಕೆ ಇರುತ್ತದೆ. ಪ್ಯಾಕ್‍ಗಳ ಮೇಲೆ ಸ್ಮೋಕಿಂಗ್ ಇಸ್ ಇಂಜೂರಿಯಸ್ ಟು ಹೆಲ್ತ್ ಅಂತಾ ಬರೆದಿರುತ್ತದೆ. ಆದರೂ ಅದನ್ನು ನೋಡಿಕೊಂಡೇ ಸೇದುತ್ತಾರೆ. ಕೆಟ್ಟ ಚಟಗಳನ್ನು ಆದಷ್ಟು ಬೇಗ ಬಿಟ್ಟರೆ ಒಳ್ಳೆಯದಾಗುತ್ತದೆ ಎಂದು ಯುವ ಸಮೂಹಕ್ಕೆ ಸಿದ್ದರಾಮಯ್ಯ ಸಲಹೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಮ್ಮ್ಯೂನೋಥೆರಪಿಯಿಂದ ಲಾಭ ಏನು? ಕ್ಯಾನ್ಸರ್ ರೋಗಿಗಳಿಗೆ ಹೇಗೆ ನೆರವಾಗುತ್ತೆ?

    ಇಮ್ಮ್ಯೂನೋಥೆರಪಿಯಿಂದ ಲಾಭ ಏನು? ಕ್ಯಾನ್ಸರ್ ರೋಗಿಗಳಿಗೆ ಹೇಗೆ ನೆರವಾಗುತ್ತೆ?

    ಕ್ಯಾನ್ಸರ್ ರೋಗ ಪರೀಕ್ಷೆ ಎಂದರೇನೇ ರೋಗಿಯ ಎದೆ ಬಡಿತ ಏರುಪೇರಾಗುತ್ತದೆ. ಶಸ್ತ್ರ ಚಿಕಿತ್ಸೆ, ಕಿಮೋಥೆರಪಿ ಅಥವಾ ರೇಡಿಯೇಷನ್ ಯಾವುದೇ ಇರಲಿ, ಮುಂದೇನು ಕಾದಿದೆಯೋ ಎಂಬ ಭಯವೇ ರೋಗಿ ಮತ್ತು ಅವರ ಪರಿವಾರದವರು ಇನ್ನಷ್ಟು ಹೈರಾಣಾಗುವಂತೆ ಮಾಡುತ್ತದೆ. ಹಾಗಾಗಿ ರೋಗಿಯ ಚಿಕಿತ್ಸೆಗಾಗಿ ರೂಪಿಸಲ್ಪಟ್ಟ ಯೋಜನೆಯನ್ನು ಅನುಭವಿ ತಜ್ಞರೆ ನಿಖರವಾಗಿ ನಿರ್ಧರಿಸಲ್ಪಟ್ಟ ಹಂತಗಳನ್ನು ಅನುಸರಿಸುವ ಮೂಲಕ ಕಾರ್ಯರೂಪಕ್ಕೆ ತರಬೇಕಾಗುತ್ತದೆ.

    ಈಗ ಲಭ್ಯವಿರುವ ಎಲ್ಲಾ ಚಿಕಿತ್ಸಾ ವಿಧಾನಗಳಲ್ಲಿ ಕಿಮೋಥೆರಪಿಯ ಕುರಿತು ಇರುವ ಕಟ್ಟುಕತೆ, ಅನಿಸಿಕೆ ಸಂಶಯ ಏನೆಂದರೆ, ಪ್ರಸ್ತುತ ಇರುವ ಕಿಮೋಥೆರಪಿಯು ರೋಗಿಯಲ್ಲಿ ಕ್ಯಾನ್ಸರ್‍ನ ಹರಡುವಿಕೆಯನ್ನು ತಡೆಗಟ್ಟಲು ಇಂದು ಅತ್ಯಂತ ಸುರಕ್ಷಿತ ಮತ್ತು ಅತಿ ಹೆಚ್ಚು ಪರಿಣಾಮಕಾರಿ ವಿಧಾನ; ಇದನ್ನು ಅನುಷ್ಠಾನಗೊಳಿಸುವ ವಿಶೇಷ ವೈದ್ಯಕೀಯ ಪರಿಣತಿ ಮತ್ತು ಕ್ಷೇತ್ರದಲ್ಲಿ ಅನುಭವ ಅತ್ಯಗತ್ಯ.

    ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಭಯಾನಕ ಜಟಿಲತೆ ಎಂದರೆ ರೋಗನಿರೋಧಕ ಶಕ್ತಿಯ ಕುಗ್ಗುವಿಕೆ. ಮಾನವನ ರೋಗನಿರೋಧಕ ಶಕ್ತಿಯನ್ನು ಕ್ಯಾನ್ಸರ್ ನಿಯಂತ್ರಣಕ್ಕೆ ಬಳಸಿಕೊಳ್ಳಲು ಕ್ಯಾನ್ಸರ್ ವಿಜ್ಞಾನಿಗಳು ಹಲವು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಈ ದಿಶೆಯಲ್ಲಿ ಅನೇಕ ಮೈಲಿಗಲ್ಲುಗಳನ್ನು ಕಂಡು ಹಿಡಿದಿದ್ದಾರೆ. ಆದರೆ ಪ್ರಸ್ತುತ ದಶಕದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ರೋಗನಿರೋಧಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ವಿಜ್ಞಾನಿಗಳು ಮಹತ್ತರ ಯಶಸ್ಸನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಸೈಟ್ ಕೇರ್ ನ ಹಿರಿಯ ಕನ್ಸಲ್ಟೆಂಟ್ ವೈದ್ಯರಾಗಿರುವ ಡಾ. ಪ್ರಸಾದ್ ನಾರಯಣನ್‍ರವರ ಮಾತಿನಲ್ಲಿ, “ಪ್ರಮುಖ ಕ್ಯಾನ್ಸರ್ ಚಿಕಿತ್ಸೆಯಾಗಿ ಇಮ್ಮ್ಯೂನೋಥೆರಪಿಯ ಬೆಳವಣಿಗೆ ಬಹಳಷ್ಟು ಕ್ಯಾನ್ಸರ್ ರೋಗಿಗಳ ಜೀವನದಲ್ಲಿ ಬಹಳ ಒಳ್ಳೆಯ ಪರಿಣಾಮ ಉಂಟುಮಾಡಿದೆ. ಕ್ಯಾನ್ಸರ್ ಚಿಕಿತ್ಸೆ ಬಹಳ ಕಠಿಣ ಎನ್ನುವ ಕಾಲವೊಂದಿತ್ತು. ಆದರೆ ಈಗ ಮೆಲನೋಮಾದಂತೆ ಇಮ್ಮ್ಯೂನೋಥೆರಪಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ವಿಧಾನವು ಭಾರತದಲ್ಲಿ ಶ್ವಾಸಕೋಶ, ತಲೆ, ಕುತ್ತಿಗೆ, ಉದರ/ಹೊಟ್ಟೆ, ಸರ್ವಿಕ್ಸ್ (ಗರ್ಭಕಂಠ) ಮತ್ತು ಜೆನಿಟೋ ಯೂರಿನರಿ ಕ್ಯಾನ್ಸರುಗಳಂತಹ ಅನೇಕ ಸಾಮಾನ್ಯ ಕ್ಯಾನ್ಸರುಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅನೇಕ ಇಮ್ಮ್ಯೂನೋ ಮಾಡ್ಯುಲೇಟರಿ ಔಷಧಗಳು ಕ್ಯಾನ್ಸರನ್ನು ಎದುರಿಸುವ ವಿಧಾನದಲ್ಲಿ ಬಹಳಷ್ಟು ಪ್ರಭಾವ ಬೀರಿವೆ. ಉದಾಹರಣೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಕಳೆದ ದಶಕದಲ್ಲಿ ಸಂಪೂರ್ಣ ಬದಲಾವಣೆಯನ್ನು ಕಂಡಿದೆ.

    ಶ್ವಾಸಕೋಶದ ಕ್ಯಾನ್ಸರಿಗೆ ಕಾರಣವಾಗುವ ಜೆನೆಟಿಕ್ ಫ್ರೇಮ್ ವರ್ಕ್‍ಗಳಲ್ಲಿ ನಿರ್ದಿಷ್ಟ ಸಮಸ್ಯೆಗಳ ಕುರಿತು ಹೆಚ್ಚಿದ ತಿಳುವಳಿಕೆಯ ಪರಿಣಾಮವಾಗಿ ಬಹಳಷ್ಟು ಕ್ಯಾನ್ಸರ್ ರೋಗಿಗಳು ಯೋಜಿತ ಚಿಕಿತ್ಸೆ ಮತ್ತು ಇಮ್ಮ್ಯೂನೋಥೆರಪಿಯ ಲಾಭ ಪಡೆದು ಉತ್ತಮ ಪರಿಣಾಮ ಕಂಡಿದ್ದಾರೆ. ಸರಿಯಾದ ಇಮ್ಮ್ಯೂನೋಥೆರಪಿಯನ್ನು ನಿರ್ಣಯಿಸಲು ರೋಗಿಗಳನ್ನು ತರಬೇತಿ ಹೊಂದಿರುವ ಆಂಕಾಲಜಿಸ್ಟರು ನೋಡಬೇಕು. ಬಹುಮುಖ ವಿಶೇಷಜ್ಞರ ತಂಡದಿಂದ ಚಿಕಿತ್ಸಾಪೂರ್ವ ಪರೀಕ್ಷೆ ನಡೆಸಿದ ನಂತರ ಒಂದು ಪೂರ್ಣರೂಪದ ಚಿಕಿತ್ಸಾ ಯೋಜನೆಯನ್ನು ರೋಗಿಗೆ ನೀಡಲಾಗುತ್ತದೆ. ರೋಗಿಗೆ ನಿಯಮಿತ ಮೇಲ್ವಿಚಾರಣೆ ವತ್ತು ಯೋಜಿತ ಅನುಕರಣೆಯ ಮೂಲಕ ಹೊರರೋಗಿಯಂತೆ ಚಿಕಿತ್ಸೆ ನೀಡಲಾಗುತ್ತದೆ. ಇಮ್ಮ್ಯೂನೋ ಚಿಕಿತ್ಸೆಯನ್ನು ಪಡೆಯುವ ಕ್ಯಾನ್ಸರ್ ರೋಗಿಗಳಿಗೆ ಒಂದು ಸಮಗ್ರ ಆರೈಕೆಯ ವ್ಯವಸ್ಥೆ ರೋಗಿಗಷ್ಟೇ ಸಹಾಯಕವಾಗುದಲ್ಲದೆ ಅವರ ಕುಟುಂಬಕ್ಕೂ ಸಾಂತ್ವನಕಾರಿಯಾಗಿರುತ್ತದೆ”.

    ಆದರೆ ಇಮ್ಮ್ಯೂನೋಥೆರಪಿಯಲ್ಲಿ ಅಪಾಯವೇ ಇಲ್ಲವೇ? ‘ಅಪಾಯವೇ ಇಲ್ಲದ ಕ್ಯಾನ್ಸರ್ ಚಿಕಿತ್ಸೆ ಬಹಳ ಕಡಿಮೆ.’ ಎನ್ನುತ್ತಾರೆ ಡಾ ಪ್ರಸಾದ್ ನಾರಾಯಣನ್‍ರವರು. ಆದರೆ ಇಮ್ಮ್ಯೂನೊಥೆರಪಿಯನ್ನು ಆರಂಭಿಸುವ ಮುನ್ನ ಅದರಲ್ಲಿನ ಅಪಾಯ ಮತ್ತು ಲಾಭದ ಕುರಿತು ತೂಗಿನೊಡಬೇಕಾದ್ದೂ ಅನಿವಾರ್ಯ ಎಂದು ಹೇಳುತ್ತಾರೆ. ಇಮ್ಮ್ಯೂನೋಥೆರಪಿ ಒದಗಿಸುವ ಕ್ಯಾನ್ಸರ್ ಕೇಂದ್ರಗಳ ಸಾಮಥ್ರ್ಯ ಗಮನಿಸಬೇಕಾದ್ದೂ ಬಹಳ ಮುಖ್ಯ ಎನ್ನುತ್ತಾರೆ.

    ಇಮ್ಮ್ಯೂನೋಥೆರಪಿಯಲ್ಲಿ ಅಡ್ಡಪರಿಣಾಮಗಳು ಇಲ್ಲದಿಲ್ಲ. ನಾವು ರೋಗಿಯ ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸುತ್ತೇವೆ. ಆಗ ಅದು ಅಗತ್ಯಕ್ಕಿಂತ ಹೆಚ್ಚು ಉದ್ದೀಪನಗೊಳ್ಳುವ ಸಾಧ್ಯತೆ ಇದೆ. ಆದರೆ ಎಲ್ಲಾ ಸಮಯದಲ್ಲೂ ಚಿಕಿತ್ಸೆಯು ನಮಗೆ ಬೇಕಾದ ಹಾಗೆಯೇ ನಡೆಯುತ್ತದೆ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಈ ರೀತಿಯ ಜಟಿಲ ಚಿಕಿತ್ಸೆಗಳಿಗಾಗಿ ಈ ಚಿಕಿತ್ಸೆಗಳಲ್ಲಿ ಉತ್ತಮ ಸಾಮಥ್ರ್ಯ ಹೊಂದಿದ ವಿಶೇಷ ಆಸ್ಪತ್ರೆಗಳನ್ನು ಅವಲಂಬಿಸುವುದು ಅಗತ್ಯ. ಎನ್ನುತ್ತಾರೆ ಸೈಟ್ ಕೇರ್ ನ ವಿಶೇಷಜ್ಞರಾದ ಡಾ. ಪ್ರಸಾದ್.

    “ಪ್ರಸ್ತುತ ಪರಿಸ್ಥಿತಿಯಲ್ಲಿ ಇಮ್ಮ್ಯೂನೋಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಬತ್ತಳಿಕೆಗೆ ಇಂದು ಮುಖ್ಯ ಸೇರ್ಪಡೆ. ರೋಗಿಗಳ ರೋಗನಿರೋಧಕ ಶಕ್ತಿಯನ್ನು ಹೀರುವ ಮೂಲಕ ಈ ಚಿಕಿತ್ಸೆ ಕೆಲಸ ಮಾಡುತ್ತದೆ. ಇದು ರೋಗನಿರೋಧಕವನ್ನು ಮಾರ್ಪಡಿಸುವ ಮೂಲಕ ವಿಪರೀತ ವಿಭಜನೆಗೊಳ್ಳುವ ಕ್ಯಾನ್ಸರ್ ಕಣಗಳನ್ನು ಸಂಭಾಳಿಸಲು ದೇಹವನ್ನೇ ಸಶಕ್ತಗೊಳಿಸುತ್ತದೆ. ಕ್ಯಾನ್ಸರ್ ಎದುರಿಸಲು ದೇಹವು ತನ್ನದೇ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವಂತೆ ಮಾಡುವುದು ಇಲ್ಲಿನ ಉದ್ದೇಶ.”
    ಡಾ.ಪ್ರಸಾದ್ ನಾರಾಯಣನ್, ಸೀನಿಯರ್ ಕನ್ಸಲ್ಟೆಂಟ್, ಮೆಡಿಕಲ್ ಆಂಕಾಲಜಿ

    ಕ್ಯಾನ್ಸರ್ ಕುರಿತ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: www.cytecare.com 

  • ಕ್ಯಾನ್ಸರ್ ರೋಗಿಗಳ ಒಂದು ಹೊಸ ಆಶಾಕಿರಣ ಸೈಟ್ ಕೇರ್ ಆಸ್ಪತ್ರೆ!

    ಕ್ಯಾನ್ಸರ್ ರೋಗಿಗಳ ಒಂದು ಹೊಸ ಆಶಾಕಿರಣ ಸೈಟ್ ಕೇರ್ ಆಸ್ಪತ್ರೆ!

    ರೋಗಿಗಳಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಹೊಸತರಲ್ಲಿ ಆದರೆ ಆಗಲಿ ಎಂಬ ಪ್ರಯತ್ನದ ವಿಧಾನದ/ (ಏನಾಗುತ್ತದೋ ನೋಡೋಣ ಎಂಬ ಅನಿರ್ದಿಷ್ಟ ವಿಧಾನದ) ಚಿಕಿತ್ಸೆ ಕೆಲಸ ಮಾಡುವುದಿಲ್ಲ. ರೋಗದ ಸ್ವರೂಪ ಜಟಿಲವಾಗಿರುವುದರಿಂದ ಸರಿಯಾದ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಮಯ ಮತ್ತು ವಿಶೇಷ ಕೌಶಲ್ಯ ಇರಬೇಕಾಗುತ್ತದೆ.

    ಕ್ಯಾನ್ಸರ್ ಎಂದರೆ ಪ್ರತಿಯೊಂದು ಒಂದಕ್ಕಿಂತ ಒಂದು ವಿಭಿನ್ನವಾಗಿರುವ 200 ಕ್ಕಿಂತ ಹೆಚ್ಚು ರೋಗಲಕ್ಷಣಗಳಿದ್ದು, ಭಾರತದಲ್ಲಿ ಸರಿಯಾದ ಸಮಯಕ್ಕೆ ರೋಗ ಪತ್ತೆಯಾಗಿ ಮತ್ತು ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಅಕಾಲ ಮರಣಕ್ಕೆ ಗುರಿಯಾದ ರೋಗಿಗಳ ಅಸಂಖ್ಯಾ ನಿದರ್ಶನಗಳಿವೆ.

    ದೇಹದ ಜೀವಕೋಶಗಳು ರೂಪಾಂತರಗೊಂಡು ಶರವೇಗದಲ್ಲಿ ಅವುಗಳ ಸಂಖ್ಯೆ ಹೆಚ್ಚಾದಾಗ ಕ್ಯಾನ್ಸರ್ ಉಂಟಾಗುತ್ತದೆ. ನಮ್ಮ ದೇಹದಲ್ಲಿ ಜೀವಕೋಶಗಳು ಸಹಜವಾಗಿ ಸಾವನ್ನಪ್ಪುವ ಪ್ರಕ್ರಿಯೆ ಕುಂಠಿತಗೊಂಡಾಗ ಪರಿಸ್ಥಿತಿ ವಿಷಮಿಸುತ್ತದೆ. ಮಾರಣಾಂತಿಕ ಕೋಶಗಳನ್ನು ಕೂಡಲೇ ಕಂಡುಹಿಡಿಯದಿದ್ದರೆ ಅವು ಇತರ ಆರೋಗ್ಯಕರ ಅಂಗಾಂಶಗಳಿಗೂ ಹರಡಿ ಹಾನಿ ಉಂಟುಮಾಡುತ್ತದೆ.

    ವೈದ್ಯರು ಮತ್ತು ರೋಗಿಗಳಿಗೂ ಇದು ಸಮಯದ ವಿರುದ್ಧದ ಓಟ. ಅನಗತ್ಯ ಶುಲ್ಕಗಳನ್ನು ಹೇರದೆ ಸೂಕ್ತ ಚಿಕಿತ್ಸೆ ಒದಗಿಸುವ ಸರಿಯಾದ ಚಿಕಿತ್ಸಾ ಕೇಂದ್ರವೊಂದನ್ನು ಆದಷ್ಟು ಬೇಗ ಸಂಪರ್ಕಿಸುವುದು ರೋಗಿಯ ಮೊದಲ ಸವಾಲು.

    200 ಸ್ಥಿತಿಗಳಲ್ಲಿ ಯಾವುದೆಂದು ನಿಖರವಾಗಿ ಗುರುತಿಸಿ, ಪರಿಸ್ಥಿತಿಯನ್ನು ವಿಷಮಗೊಳಿಸಬಲ್ಲ ಅದರ ಅಸಂಖ್ಯಾತ ಪರಿಣಾಮಗಳನ್ನು ಪತ್ತೆ ಹಚ್ಚುವುದು ರೋಗ ನಿರ್ಣಯ ಪ್ರಕ್ರಿಯೆಯಲ್ಲಿ ಅತ್ಯಂತ ಸವಾಲಿನ ಹಂತ. ಕ್ಯಾನ್ಸರ್ ಬೇರೆ ಬೇರೆ ರೋಗಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ಒಂದೇ ತೆರನಾದ ಮಾದರಿ ಕಂಡುಬರದೇ ಇದ್ದಾಗ ಚಿಕಿತ್ಸೆಯು ಕೂಡ ಬಹುಮುಖಿಯಾಗಿದ್ದು ಸಮೃದ್ಧವಾಗಿರಬೇಕಾಗುತ್ತದೆ.

    ಸರಿಯಾದ ಸಮೃದ್ಧವಾದ ಕ್ಯಾನ್ಸರ್ ಚಿಕಿತ್ಸೆಗೆ ಸರಿಯಾದ ಸಮಯಕ್ಕೆ ಪರಿಣಾಮಕಾರಿ ಚಿಕಿತ್ಸೆ ಒದಗಿಸುವುದು ನಿರ್ಣಾಯಕ. ವೈದ್ಯ ವಿಜ್ಞಾನದ ಬೆಳವಣಿಗೆ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರಣ ಈ ರೋಗದಿಂದ ನಿಧನವಾಗುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ.

    ಒಂದು ಸಂಶೋಧನೆಯ ಪ್ರಕಾರ ಸುಮಾರು 40% ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯ ನಂತರ ಐದು ವರ್ಷಗಳೊಳಗೆ ರೋಗದಿಂದ ಸಂಪೂರ್ಣ ಮುಕ್ತಿ ಹೊಂದಿದ್ದಾರೆ. ರೋಗಿಯು ರೋಗದಿಂದ ಸಂಪೂರ್ಣ ಗುಣಮುಖರಾಗುವ ಸಾಧ್ಯತೆಗೆ ಇದೊಂದು ಅಳತೆಗೋಲು. ಶೀಘ್ರ ರೋಗ ಮತ್ತೆ ಮತ್ತು ನಿರ್ಣಯ ಕ್ಯಾನ್ಸರ್ ಎದುರಿಸಲು ಶಕ್ತಿಯುತ ಮಂತ್ರ. ಜಗತ್ತಿನ ಕ್ಯಾನ್ಸರ್ ರೋಗಿಗಳ ಐದನೇ ಒಂದು ಭಾಗ ಈಗ ಭಾರತದಲ್ಲಿದ್ದು ತ್ವರಿತಗತಿಯ ಗುರಿ ಕೇಂದ್ರಿತ ಚಿಕಿತ್ಸೆಯ ಅಗತ್ಯವಿದೆ.

    ಗುರಿ ಕೇಂದ್ರಿತ ಪರಿಣಾಮಕಾರಿ ಚಿಕಿತ್ಸೆಗೆ ಸೂಪರ್-ಸ್ಪೆಷಾಲಿಟಿ ಆಂಕಾಲಜಿ ಕೇಂದ್ರ ಕಡ್ಡಾಯವಾಗಿ ಇರಬೇಕು. ಕ್ಯಾನ್ಸರ್ ಗುಣಮಾಡುವ ಆಸ್ಪತ್ರೆಯಲ್ಲಿ ರೋಗನಿರ್ಣಯದ ಸರಿಯಾದ ವ್ಯಾಖ್ಯಾನ ಅತ್ಯಗತ್ಯ. ರೋಗಿಯ ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯ ಕ್ರಮವನ್ನು ನಿರ್ಧರಿಸಲು ಇದು ಸಹಾಯಕ.

    ಬೆಂಗಳೂರಿನ ಸೈಟ್‍ಕೇರ್ ಕೇಂದ್ರ ಈ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಅತ್ಯಾಧುನಿಕ ರೋಗನಿರ್ಣಯ ಸೌಲಭ್ಯ ಮತ್ತು ಆರ್ಗನ್ ಸ್ಪೆಸಿಫಿಕ್ ಪರಿಣಿತ ಆಂಕಾಲಿಜಿಸ್ಟ್ ಗಳ ತಂಡದೊಂದಿಗೆ ಸೈಟ್‍ಕೇರ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೊಸ ನೆಲೆಯನ್ನು ಸೃಷ್ಟಿಮಾಡಿದೆ.

    ಆರ್ಗನ್-ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಆಯಾ ಅಂಗಗಳ ಚಿಕಿತ್ಸೆಯಲ್ಲಿ ಅನೇಕ ವರ್ಷಗಳ ಅನುಭವ ಮತ್ತು ವಿಶೇಷಜ್ಞತೆ ಹೊಂದಿದ್ದಾರೆ. ಇದರಿಂದ ಅವರು ವರ್ಷಗಳ ಸವಾಲುಗಳನ್ನು ಎದುರಿಸುವಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದಾರೆ. ಉದಾಹರಣೆ, ಕೆಲವು ರೋಗಗಳು ಕ್ಯಾನ್ಸರಿನಂತೆ ಭಾಸವಾಗಬಹುದು. ಇಲ್ಲವೇ, ಕಳಪೆ ಇಮೇಜಿಂಗ್ ಅಥವಾ ಕ್ಲಿನಿಷಿಯನ್ ಗಳ ಸೀಮಿತ ಅರಿವಿನ ಕಾರಣ ಕೆಲವು ಸಾಮಾನ್ಯ ಕಾಯಿಲೆಗಳು ಕ್ಯಾನ್ಸರ್ ಎಂದು ತಪ್ಪಾಗಿ ಬಿಂಬಿತವಾಗಬಹುದು ಇಲ್ಲವೇ ರೋಗನಿರ್ಣಯದಲ್ಲಿ ನಿಖರತೆ ಕಡಿಮೆಯಾಗಬಹುದು. ಇಂತಹ ಸಂದರ್ಭಗಳಲ್ಲಿ ಆರ್ಗನ್-ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಪಾತ್ರ ಮಹತ್ವದ್ದು. ಅವರು ಮಾನವಸಹಜ ತಪ್ಪುಗಳನ್ನು ಸಾಧ್ಯವಾದಷ್ಟೂ ನಿವಾರಿಸಿ, ರೋಗವನ್ನು ಸರಿಯಾಗಿ ಗುರುತಿಸಿ, ಅತ್ಯಂತ ಸೂಕ್ತ ಚಿಕಿತ್ಸಾ ಕ್ರಮವನ್ನು ರೂಪಿಸುತ್ತಾರೆ. ನಿರ್ದಿಷ್ಟ ಅಂಗಗಳ ರೋಗನಿರ್ಣಯದಲ್ಲಿ ಹಲವು ವರ್ಷಗಳ ತರಬೇತಿಯ ಕಾರಣ, ಆರ್ಗನ್ ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಜಟಿಲ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸಿ ತಪ್ಪುಗಳಿಂದಾಗುವ ಅಡ್ಡ ಪರಿಣಾಮ ಅಥವಾ ಮರುಶಸ್ತ್ರಚಿಕಿತ್ಸೆಯ ಸಾಧ್ಯತೆಗಳನ್ನು ಕಡಿಮೆ ಮಡುತ್ತಾರೆ. ಸೈಟ್‍ಕೇರ್ ರೋಗಿಗಳ ಪ್ರಶಂಸೆಗೆ ಪಾತ್ರವಾಗಿದ್ದು ಅವರಿಗೆ ಹೊಸ ಆಶಾಕಿರಣವಾಗಿ ಬೆಳೆಯುತ್ತಿದೆ.

    ಇಷ್ಟೇ ಅಲ್ಲದೇ, ಸೇಟ್‍ಕೇರ್ ನಲ್ಲಿ ವಿಶೇಷಜ್ಞರು, ಸ್ತನ ಮತ್ತು ಬಾಯಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮೈಕ್ರೋ ವಾಸ್ಕ್ಯುಲಾರ್ ರಿಕನ್ಸ್ಟ್ರಕ್ಷನ್ ನಲ್ಲಿ ಆಧುನಿಕ ರಿಕನ್ಸ್ಟ್ರಕ್ಷನ್ ಟೆಕ್ನಾಲಜಿ ಅನುಸರಿಸುತ್ತಾರೆ. ಇದು ತೊಂದರೆಗೊಳಗಾದ ಅಂಗ ಹೆಚ್ಚು ವಿರೂಪಗೊಳ್ಳದಂತೆ ನೋಡಿಕೊಳ್ಳುತ್ತದೆ.

    ಸೈಟ್‍ಕೇರ್ ನಲ್ಲಿ ಇತರ ಕೇಂದ್ರಗಳಿಗಿಂತ ಬೇರೆಯಾದದ್ದೇನಿದೆ?
    ಸೈಟ್‍ಕೇರ್ ನ ಸಹಸಂಸ್ಥಾಪಕ ಮತ್ತು ಛೇರ್ಮನ್ ಫರ್ಜಾನ್ ಇಂಜಿನಿಯರ್, “ಇತರ ರೋಗಗಳಂತಲ್ಲದೆ, ಕ್ಯಾನ್ಸರ್ ನಿರ್ವಹಣೆಯಲ್ಲಿ ರೋಗದ ವಿವಿಧ ಹಂತದ ಚಿಕಿತ್ಸೆಯಲ್ಲಿ ಒಬ್ಬರಿಗಿಂತ ಹೆಚ್ಚು ವಿಶೇಷಜ್ಞರು ಇರುತ್ತಾರೆ. ನಮ್ಮದು ಬಹುಮುಖಿ ಚಿಕಿತ್ಸಾ ವಿಧಾನ. ಇಲ್ಲಿ ತಜ್ಞರು ಸಮಗ್ರ ತಂಡವಾಗಿ ರೋಗಿಯ ಪಯಣವನ್ನು ಅರ್ಥಮಾಡಿಕೊಂಡು ಮುಂದುವರಿಯುತ್ತಾರೆ. ನಮ್ಮ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕಾರ್ಯಕ್ರಮ, ಸ್ಕ್ರೀನಿಂಗ್ ಮತ್ತು ರೋಗನಿರ್ಣಯದಿಂದ ಹಿಡಿದು ಚಿಕಿತ್ಸೆ ಮತ್ತು ಪುನರ್ವಸತಿಯವರೆಗೆ ಎಲ್ಲಾ ಹಂತದಲ್ಲೂ ರೋಗಿಯ ಜೊತೆಗಿರುತ್ತದೆ. ರೋಗಿಯು ಪೆಥಾಲಜಿ, ಮೆಡಿಕಲ್-ಆಂಕಾಲಜಿ, ಪೆಯ್ನ್ ಅಂಡ್ ಪ್ಯಾಲಿಯೇಟಿವ್ ಚಿಕಿತ್ಸೆ, ರಿಕನ್ಸ್ಟ್ರಕ್ಷನ್, ಕೋಮಾರ್ಬಿಡಿಟಿ ಮ್ಯಾನೇಜ್‍ಮೆಂಟ್, ಡಯಟ್ ಅಂಡ್ ನ್ಯೂಟ್ರಿಷನ್, ರಿಹ್ಯಾಬಿಲಿಟೇಷನ್ ಅಂಡ್ ಹೋಂ ಕೇರ್ ಗಳ ಅನುಕೂಲತೆ ಪಡೆದುಕೊಳ್ಳಬಹುದು. ಇಲ್ಲಿನ ಚಿಕಿತ್ಸಾ ವಿಧಾನವು ಇದೇ ಆಗಿರುತ್ತದೆ.” ಎಂದು ಹೇಳುತ್ತಾರೆ.

    ಅಂತಿಮವಾಗಿ ಕ್ಯಾನ್ಸರ್ ರೋಗಿಗೆ ಅತ್ಯುತ್ತಮ ಅನುಭವವಾಗುವಂತೆ ಮಾಡುವುದು ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯ ಅಥವಾ ಆಸ್ಪತ್ರೆಯ ಪ್ರಮುಖ ಧ್ಯೇಯವಾಗಿರುತ್ತದೆ. ಶಸ್ತ್ರಚಿಕಿತ್ಸೆಯಲ್ಲಿನ ಬೆಳವಣಿಗೆಗಳೊಂದಿಗೆ ಈ ರೋಗವು ಮಾರಣಾಂತಿಕ ಎಂಬ ಹಣೆಪಟ್ಟಿಯನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ. ಆಧುನಿಕ ರಿಕನ್ಸ್ಟ್ರಕ್ಷನ್ ಟೆಕ್ನಿಕ್ ಗಳ ಪರಿಚಯ ಕ್ಯಾನ್ಸರ್ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ ಅಲ್ಲದೇ ರೋಗಿಗಳು ಬಹುಬೇಗ ಗುಣಮುಖರಾಗಲು ಸಹಾಯ ಮಾಡಿದೆ.

    “ನಾವು ಬಹುಮುಖಿ ಚಿಕಿತ್ಸಾ ವಿಧಾನದ ಕಡೆ ಗಮನ ಕೊಡುತ್ತೇವೆ. ಇಲ್ಲಿ ತಜ್ಞರು ಸಮಗ್ರ ತಂಡವಾಗಿ ರೋಗಿಯ ಪಯಣವನ್ನು ಅರ್ಥಮಾಡಿಕೊಂಡು ಮುಂದುವರಿಯುತ್ತಾರೆ.” ಫರ್ಜಾನ್ ಇಂಜಿನಿಯರ್, ಸೈಟ್‍ಕೇರ್ ನ ಸಹಸಂಸ್ಥಾಪಕ ಮತ್ತು ಛೇರ್ಮನ್.

    ಸೈಟ್ ಕೇರ್ ಆಸ್ಪತ್ರೆಯ ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: www.cytecare.com

  • ಕ್ಯಾನ್ಸರ್ ನಿಂದಾಗಿ ನೀಳ ಕೂದಲಿಗೆ ಕತ್ತರಿ ಹಾಕಿದ ಸೋನಾಲಿ

    ಕ್ಯಾನ್ಸರ್ ನಿಂದಾಗಿ ನೀಳ ಕೂದಲಿಗೆ ಕತ್ತರಿ ಹಾಕಿದ ಸೋನಾಲಿ

    ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ಬ್ಯೂಟಿ ಕ್ವೀನ್ ಸೋನಾಲಿ ಬೇಂದ್ರೆ ತಮ್ಮ ನೀಳ ಕೂದಲಿಗೆ ಕತ್ತರಿ ಹಾಕಿದ್ದಾರೆ.

    ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ವೈದ್ಯರ ಸಲಹೆ ಮೇರೆಗೆ ಬಾಬ್ ಕಟ್ ಮಾಡಿಸಿಕೊಂಡಿದ್ದಾರೆ.

    ತನ್ನ ಕೂದಲು ಕತ್ತರಿಸಿಕೊಂಡ ಬಳಿಕ ಸೋನಾಲಿ ಇನ್ ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಪಡೆದು ಮತ್ತೆ ನಾನು ಸ್ವದೇಶಕ್ಕೆ ಹಿಂದಿರುಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಕ್ಯಾನ್ಸರ್ ಬಂದಿದ್ದು ಹೇಗೆ?: ನಟಿಯರು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಅತ್ಯಂತ ಕಾಳಜಿಯನ್ನು ಹೊಂದಿರುತ್ತಾರೆ. ಕ್ಯಾನ್ಸರ್ ದೊಡ್ಡದಾಗಿ ಕಾಣಿಸಿಕೊಳ್ಳಲು ಸೋನಾಲಿಯವರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಹಲವು ವರ್ಷಗಳಿಂದ ಸೋನಾಲಿಯವರಿಗೆ ದೇಹದಲ್ಲಿ ಒಂದು ರೀತಿಯ ನೋವು ಕಾಣಿಸುತ್ತಿತ್ತು. ಕೆಲಸದ ಒತ್ತಡದಿಂದ ನೋವುಗಳು ಸಾಮಾನ್ಯ ಗಮನ ಹರಿಸಿರಲಿಲ್ಲ. ಒಂದು ವೇಳೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರೆ, ಕ್ಯಾನ್ಸರ್ ಕೊನೆಯ ಹಂತಕ್ಕೆ ಬರುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಈ ಮೊದಲು ಸೋನಾಲಿ ತಮ್ಮದೊಂದು ಫೋಟೋವನ್ನು ಹಾಕಿ, “ನಾವು ಜೀವನದಲ್ಲಿ ಹೆಚ್ಚು ವಿಶ್ವಾಸವನ್ನಿಟ್ಟಾಗ ಆಗ ಜೀವನ ದೊಡ್ಡದೊಂದು ಆಘಾತ ನೀಡುತ್ತದೆ. ನನಗೆ ಹೈ ಗ್ರೇಡ್ ಕ್ಯಾನ್ಸರ್ ಇದೆ ಎಂಬುದು ನನಗೆ ಇತ್ತೀಚಿಗೆ ತಿಳಿಯಿತು. ಈ ವಿಷಯ ತಿಳಿದು ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನ ಜೊತೆಯಲ್ಲೇ ಇದ್ದಾರೆ. ನಾನು ಇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    https://www.instagram.com/p/BlErxmFl7vL/?hl=en&taken-by=bollywood

    https://www.instagram.com/p/BlCuNJflovR/?hl=en&taken-by=iamsonalibendre

  • ತನ್ನ ಭಯಾನಕ ಕಾಯಿಲೆ ಬಗ್ಗೆ ಹೇಳಿಕೊಂಡ ಸೋನಾಲಿ ಬೇಂದ್ರೆ

    ತನ್ನ ಭಯಾನಕ ಕಾಯಿಲೆ ಬಗ್ಗೆ ಹೇಳಿಕೊಂಡ ಸೋನಾಲಿ ಬೇಂದ್ರೆ

    ಮುಂಬೈ: ಬಹುಭಾಷಾ ನಟಿ ಸೋನಾಲಿ ಬೇಂದ್ರೆ ಭಯಾನಕ ಕಾಯಿಲೆ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದಾರೆ.

    ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ನ್ಯೂಯಾರ್ಕ್ ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ತಮಗೆ ಕ್ಯಾನ್ಸರ್ ಇರೋದನ್ನು ರಿವೀಲ್ ಮಾಡಿರುವ ಸೋನಾಲಿ ತಮ್ಮ ಮನದಾಳದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಸೋನಾಲಿ ತಮ್ಮದೊಂದು ಫೋಟೋವನ್ನು ಹಾಕಿ ಅದಕ್ಕೆ, “ನಾವು ಜೀವನದಲ್ಲಿ ಹೆಚ್ಚು ವಿಶ್ವಾಸವನ್ನಿಟ್ಟಾಗ ಆಗ ಜೀವನ ದೊಡ್ಡದೊಂದು ಆಘಾತ ನೀಡುತ್ತದೆ. ನನಗೆ ಹೈ ಗ್ರೇಡ್ ಕ್ಯಾನ್ಸರ್ ಇದೆ ಎಂಬುದು ನನಗೆ ಇತ್ತೀಚಿಗೆ ತಿಳಿಯಿತು. ಈ ವಿಷಯ ತಿಳಿದು ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನ ಜೊತೆಯಲ್ಲೇ ಇದ್ದಾರೆ. ನಾನು ಇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಕ್ಯಾನ್ಸರ್ ಇರುವ ವಿಷಯ ತಿಳಿದು ನನಗೆ ಬೇರೆ ದಾರಿ ತಿಳಿಯದೇ ನಾನು ನನ್ನ ವೈದ್ಯರು ಹೇಳಿದಂತೆ ನ್ಯೂಯಾರ್ಕ್ ಹೋಗುವುದಾಗಿ ನಿರ್ಧರಿಸಿದ್ದೇನೆ. ನ್ಯೂಯಾರ್ಕ್ ನಲ್ಲಿ ನಾನು ಚಿಕಿತ್ಸೆ ಪಡೆದ ನಂತರ ಈ ಎಲ್ಲ ಕಷ್ಟಗಳಿಂದ ಹೊರ ಬರುವುದಕ್ಕೆ ಪ್ರಯತ್ನಿಸುತ್ತೇನೆ. ಕೆಲವು ದಿನಗಳಿಂದ ಜನರು ನನ್ನನ್ನು ಸಾಕಷ್ಟು ಇಷ್ಟ ಪಟ್ಟಿದ್ದಾರೆ. ಎಲ್ಲರ ಪ್ರೀತಿಯನ್ನು ಪಡೆದುಕೊಂಡು ನಾನು ಸಂತೋಷವಾಗಿದ್ದೇನೆ. ನನ್ನ ಜೊತೆ ನನ್ನ ಕುಟುಂಬದವರು ನನ್ನ ಧೈರ್ಯವಾಗಿ ನಿಂತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ತಿಂಗಳು ಸೋನಾಲಿ ಹಿಂದುಜಾ ಸರ್ಜಿಕಲ್ ಹೆಲ್ತ್ ಕೇರ್ ಗೆ ದಾಖಲಾಗಿದ್ದರು. ಸೋನಾಲಿ ಪ್ರತಿ ಹಂತದಲ್ಲೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರೋದಾಗಿ ತಮ್ಮ ನೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಬೇಗ ಗುಣಮುಖರಾಗಿ ಸ್ವದೇಶಕ್ಕೆ ವಾಪಾಸ್ಸಾಗಿ ಎಂದು ಭಾರತದಲ್ಲಿ ಅಭಿಮಾನಿಗಳು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

    ಸೋನಾಲಿ ಕನ್ನಡದಲ್ಲಿ ಶಿವರಾಜ್‍ಕುಮಾರ್ ಮತ್ತು ಉಪೇಂದ್ರ ಜೊತೆ `ಪ್ರೀತ್ಸೆ’ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಅಲ್ಲದೇ ಹಿಂದಿಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಹಮ್ ಸಾಥ್ ಸಾಥ್ ಹೈ, ಸರ್ಫರೋಶ್, ಕಲ್ ಹೋ ನಾ ಹೋ ಹೀಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮದುವೆಯಾದ್ಮೇಲೆ ಚಿತ್ರರಂಗದಿಂದ ದೂರವಿದ್ದ ಸೋನಾಲಿ ಹಲವಾರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

    Sometimes, when you least expect it, life throws you a curveball. I have recently been diagnosed with a high grade cancer that has metastised, which we frankly did not see coming. A niggling pain led to some tests, which led to this unexpected diagnosis. My family and close friends have rallied around me, providing the best support system that anyone can ask for. I am very blessed and thankful for each of them. There is no better way to tackle this, than to take swift and immediate action. And so, as advised by my doctors, I am currently undergoing a course of treatment in New York. We remain optimistic and I am determined to fight every step of the way. What has helped has been the immense outpouring of love and support I’ve received over the past few days, for which I am very grateful. I’m taking this battle head on, knowing I have the strength of my family and friends behind me.

    A post shared by Sonali Bendre (@iamsonalibendre) on