Tag: cancer

  • WORLD CANCER DAY : ಕ್ಯಾನ್ಸರ್ ವಿರುದ್ಧ ಒಟ್ಟಾಗಿ ಹೋರಾಡೋಣ – ಸ್ಫೂರ್ತಿದಾಯಕ ಮರಳು ಕಲಾಕೃತಿ

    WORLD CANCER DAY : ಕ್ಯಾನ್ಸರ್ ವಿರುದ್ಧ ಒಟ್ಟಾಗಿ ಹೋರಾಡೋಣ – ಸ್ಫೂರ್ತಿದಾಯಕ ಮರಳು ಕಲಾಕೃತಿ

    ನವದೆಹಲಿ: ವಿಶ್ವ ಕ್ಯಾನ್ಸರ್ ದಿನದಂದು, ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್‍ನಲ್ಲಿ, ಕ್ಯಾನ್ಸರ್ ರೋಗಕ್ಕೆ ಹೆದರದೆ ಕೆಚ್ಚೆದೆಯಿಂದ ಬದುಕುಳಿದವರು ಮತ್ತು ರೋಗದ ವಿರುದ್ಧ ಹೋರಾಡುತ್ತಿರುವ ರೋಗಪಿಡೀತರಿಗೆ ಸಮರ್ಪಿತವಾದ ಉಸಿರು ತೆಗೆದುಕೊಳ್ಳುತ್ತಿರುವ ಆಕಾರದ ಕಲಾಕೃತಿಯನ್ನು ನಿರ್ಮಿಸಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಫೋಟೋಗೆ ಅವರು ಟ್ಯಾಗ್ಸ್‍ಗಳನ್ನು ಹಾಕಿದ್ದು, #ವಿಶ್ವ ಕ್ಯಾನ್ಸರ್ ದಿನ #ಕ್ಯಾನ್ಸರ್ ನೋವು ಮತ್ತು ಸಂಕಟದಿಂದ ಜಗತ್ತನ್ನು ಮುಕ್ತಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾನು ಪುರಿ ಬೀಚ್‍ನಲ್ಲಿ ನನ್ನವೊಂದು ಸ್ಯಾಂಡ್ ಆರ್ಟ್ ಅನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    ಸುದರ್ಶನ್ ಪಟ್ನಾಯಕ್ ಅವರು ಸುಮಾರು 16 ವರ್ಷಗಳಿಂದ ಮರಳು ಕಲೆಯನ್ನು ಮಾಡುತ್ತಿದ್ದಾರೆ. ಅವರ ಅನೇಕ ಮರಳಿನ ಶಿಲ್ಪಗಳು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿವೆ.

    ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಬಗೆಯ ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಪ್ರತಿ ವರ್ಷ ಫೆಬ್ರವರಿ 4 ರಂದು ಅಂತರರಾಷ್ಟ್ರೀಯ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು (ಯೂಐಸಿಸಿ) ಯೂನಿಯನ್ ಫಾರ್ ಇಂಟನ್ರ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಸಂಸ್ಥೆಯು ಇದರ ನೇತೃತ್ವವನ್ನು ವಹಿಸಿದೆ. ಇದನ್ನೂ ಓದಿ: ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್

    ಈ ವರ್ಷದ – ಕ್ಲೋಸ್ ದಿ ಕೇರ್ ಗ್ಯಾಪ್ – ಇದು ರೋಗಿಗಳು ತಮ್ಮ ಆದಾಯ, ಲಿಂಗ, ಭೌಗೋಳಿಕ ಸ್ಥಳ, ವಯಸ್ಸು, ಲೈಂಗಿಕ ದೃಷ್ಟಿಕೋನ ಮತ್ತು ಜೀವನಶೈಲಿಗೆ ಸಂಬಂಧಿಸಿದಂತೆ ಅವರ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ವ್ಯವಹರಿಸುತ್ತದೆ. ಕೆಲವೊಮ್ಮೆ, ಈ ಅಂಶಗಳು ರೋಗಿಗಳಿಗೆ ಸರಿಯಾದ ಆರೋಗ್ಯದ ಪ್ರವೇಶವನ್ನು ಪಡೆಯಲು ಅಡಚಣೆಯಾಗಬಹುದು.

    ‘ಕ್ಲೋಸ್ ದಿ ಕೇರ್ ಗ್ಯಾಪ್’ (ಆರೈಕೆ ಅವಧಿಯನ್ನು ನಿರ್ವಹಿಸುವುದು) ಈ ವರ್ಷದ ಕ್ಯಾನ್ಸರ್ ದಿನದ ಘೋಷ ವಾಕ್ಯ. ಕ್ಯಾನ್ಸರ್ ಪೀಡಿತ ಎಷ್ಟೋ ಮಂದಿ ತಮ್ಮ ಆದಾಯ, ಲಿಂಗ, ಭೌಗೋಳಿಕ ವಲಯ, ವಯಸ್ಸು, ಲೈಂಗಿಕ ದೃಷ್ಟಿಕೋನ, ಜೀವನಶೈಲಿ ಕಾರಣಕ್ಕಾಗಿ ಕ್ಯಾನ್ಸರ್ ಚಿಕಿತ್ಸೆಗೆ ಅಡೆತಡೆಗಳನ್ನು ಎದುರಿಸುತ್ತಿರುತ್ತಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆಗೆ ಎದುರಾಗುವ ಅಡೆತಡೆಯನ್ನು ಸರಿದೂಗಿಸುವ ಕ್ರಮಕೈಗೊಳ್ಳಲು ಯೂಐಸಿಸಿ ನಿರ್ಧರಿಸಿದೆ.

  • ರಕ್ತ ಪರೀಕ್ಷೆಯಿಂದ ಕ್ಯಾನ್ಸರ್ ಕಂಡುಹಿಡಿಯುವ ಹೊಸ ತಂತ್ರಜ್ಞಾನ ಅಭಿವೃದ್ಧಿ

    ರಕ್ತ ಪರೀಕ್ಷೆಯಿಂದ ಕ್ಯಾನ್ಸರ್ ಕಂಡುಹಿಡಿಯುವ ಹೊಸ ತಂತ್ರಜ್ಞಾನ ಅಭಿವೃದ್ಧಿ

    ಲಂಡನ್: ಕ್ಯಾನ್ಸರ್ ಲಕ್ಷಣ ಇಲ್ಲದಿದ್ದರೂ ರಕ್ತದ ಪರೀಕ್ಷೆಯ ಮೂಲಕ ಅದನ್ನು ಕಂಡುಹಿಡಿಯುವಂತಹ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

    ಜನರಲ್ಲಿ ಕ್ಯಾನ್ಸರ್‌ನ ಪ್ರಾರಂಭಿಕ ಹಂತದಲ್ಲಿ ಅದರ ಲಕ್ಷಣವನ್ನು ಕಂಡುಹಿಡಿಯುವುದು ವೈದ್ಯರಿಗೆ ಒಂದು ಸವಾಲಿನ ವಿಷಯ. ಹಲವು ಬಾರಿ ರೋಗಿಗಳು ಕ್ಯಾನ್ಸರ್‌ನ ಪ್ರಾರಂಭದ ಹಂತದಲ್ಲಿ ವೈದ್ಯರಿಗೂ ತಿಳಿಯದೇ ಸಾಮಾನ್ಯ ಸಮಸ್ಯೆ ಎಂದುಕೊಂಡು ಕೊನೇ ಹಂತದಲ್ಲಿ ಜೀವವನ್ನೇ ಕಳೆದುಕೊಂಡಿರುವಂತಹ ಘಟನೆಗಳನ್ನು ನಾವು ಸಾಕಷ್ಟು ಬಾರಿ ನೋಡಿರುತ್ತೇವೆ.

    ಕ್ಯಾನ್ಸರ್ ಕಂಡು ಹಿಡಿಯುವುದು ವೈದ್ಯರಿಗೂ ದೊಡ್ಡ ಸವಾಲು. ಹೀಗಿರುವಾಗ ವಿಜ್ಞಾನಿಗಳು ಹೊಸ ತಂತ್ರಜ್ಞಾನ ಕಂಡುಹಿಡಿದಿದ್ದಾರೆ. ಇದರ ಸಹಾಯದಿಂದ ರೋಗಿಗಳ ರಕ್ತದ ಮಾದರಿಯನ್ನು ಬಳಸಿಕೊಂಡು ಅವರಿಗೆ ಕ್ಯಾನ್ಸರ್ ಇದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಕಂಡು ಹಿಡಿಯಬಹುದು ಎಂದಿದ್ದಾರೆ. ಇದನ್ನೂ ಓದಿ: 12,000 ಕೆಜಿ ತೂಕದ ಬಸ್ಸನ್ನು ಕೂದಲಿನಿಂದ ಎಳೆದ ಭಾರತೀಯ ಮಹಿಳೆ- Video Viral

    ಸಂಶೋಧಕರು ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ರೋಸ್ಕೋಪಿ ತಂತ್ರಜ್ಞಾನವನ್ನು ಬಳಸಿಕೊಂಡು, ರಕ್ತದ ಅಣುವನ್ನು ಸರಿಯಾಗಿ ಪರಿಶೀಲನೆ ನಡೆಸುವ ಮೂಲಕ ಕ್ಯಾನ್ಸರ್ ರೋಗ ಪತ್ತೆ ಹಚ್ಚಬಹುದು ಎಂದು ತಿಳಿಸಿದ್ದಾರೆ.

    ಈ ತಂತ್ರಜ್ಞಾನದ ಮೂಲಕ ಕ್ಯಾನ್ಸರ್‌ನ ಲಕ್ಷಣಗಳನ್ನು ಗುರುತಿಸಬಹುದು. ಸಂಶೋಧಕರು ಆಯಾಸ ಹಾಗೂ ತೂಕ ನಷ್ಟಗಳಂತಹ ಲಕ್ಷಣಗಳು ಹೊಂದಿದ್ದ 20 ರೋಗಿಗಳ ರಕ್ತದ ಕಣಗಳಲ್ಲಿ 19 ರೋಗಿಗಳಿಗೆ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ

    ಈ ತಂತ್ರಜ್ಞಾನದ ಮೂಲಕ 2000 ದಿಂದ 3000 ಬ್ರಿಟಿಷ್ ರೋಗಿಗಳಲ್ಲಿ ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿದ್ದಾರೆ. ಈ ತಂತ್ರಜ್ಞಾನ ಜಾಗತಿಕವಾಗಿ ಬಳಕೆಯಾದಲ್ಲಿ ಕ್ಯಾನ್ಸರ್‌ಅನ್ನು ವೇಗವಾಗಿ ಪತ್ತೆ ಹಚ್ಚಿ, ರೋಗಿಯ ಜೀವ ಉಳಿಸಲು ಸಹಾಯವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.

  • ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ಮುಂಬೈ: ನಟಿ ಹಂಸ ನಂದಿನಿ ಕೂದಲು ಇಲ್ಲದ ತಲೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಮೂಲಕ ತಾವು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಘೋಷಣೆ ಮಾಡುವ ಮೂಲಕವಾಗಿ ಅಭಿಮಾನಿಗಳಿ ಶಾಕಿಂಗ್ ಸುದ್ದಿಕೊಟ್ಟಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಜೀವನದಲ್ಲಿ ನಡೆಯುವ ಈ ಘಟನೆ ನನಗೆ ಅನ್ಯಾಯವೆಂದು ತೋರುತ್ತದೆಯಾದರೂ, ನಾನು ಬಲಿಪಶು ಆಗೋಕೆ ನಿರಾಕರಿಸುತ್ತೇನೆ. ನನಗೆ ನಾಲ್ಕು ತಿಂಗಳ ಹಿಂದೆ ಸ್ತನ ಕ್ಯಾನ್ಸರ್ ಪತ್ತೆ ಆಯಿತು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಾನು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಪಡಬೇಕಾಗುತ್ತದೆ. ಎಲ್ಲಾ ಅಪಾಯಗಳನ್ನು ತೊಡೆದುಹಾಕುವುದು ಅಸಾಧ್ಯ. ಈ ಕ್ಯಾನ್ಸರ್ ಎಂಬ ಅಪಾಯವು ನಾನು ಬದುಕಿರುವವರೆಗೂ ಇರುತ್ತದೆ. ನಾನು ಈಗಾಗಲೇ 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಈ ಥೆರಪಿಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

    ಈಗ ಒಂದು ಸ್ತನಕ್ಕೆ ಮಾತ್ರ ಕ್ಯಾನ್ಸರ್ ಇದ್ದು, ಮತ್ತೊಂದು ಸ್ತನಕ್ಕೂ ಈ ಕ್ಯಾನ್ಸರ್ ಹಬ್ಬುವ ಸಾಧ್ಯತೆ ಶೇ. 70 ಇದೆಯಂತೆ ಎಂದು ಬರೆದುಕೊಂಡು ತಮ್ಮ ಆರೋಗ್ಯ ಸ್ಥಿತಿಯ ಕುರಿತಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಹಿಂದುತ್ವದಲ್ಲಿ ನಂಬಿಕೆ ಇದ್ದವರು ಭಾರತೀಯರ DNA ಒಂದೇ ಎಂದು ಭಾವಿಸುತ್ತಾರೆ: ರಾಹುಲ್

    2004ರಲ್ಲಿ ಹಂಸ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2006ರಲ್ಲಿ ತೆರೆಗೆ ಬಂದ ಕನ್ನಡದ ಮೋಹಿನಿ ಸಿನಿಮಾ ಮೂಲಕ ಅವರು ಸ್ಯಾಂಡಲ್‍ವುಡ್‍ಗೂ ಕಾಲಿಟ್ಟರು. ಪ್ರಭಾಸ್ ನಟನೆಯ ಮಿರ್ಚಿ ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರೆ, ಸುದೀಪ್ ಅಭಿನಯದ ಈಗ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಅಭಿಮಾನಿಗಳನ್ನ ರಂಜಿಸಿದ್ದರು.

     

    View this post on Instagram

     

    A post shared by Hamsa Nandini (@ihamsanandini)

    ನಂತರ ಅವರು ಅನಾರೋಗ್ಯದ ಕಾರಣದಿಂದಾಗಿ ಸಿನಿಮಾ, ಸೋಶಿಯಲ್ ಮೀಡಿಯಾಗಳಿಂದ ದೂರವಾಗಿದ್ದ ನಟಿ ಹಂಸ ನಂದಿನಿ ಇದೀಗ ಕ್ಯಾನ್ಸರ್‌ಗೆ ತುತ್ತಾಗಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸುವ ಮೂಲಕ ಸೋಶಿಯಲ್ ಮೀಡಿಯಾಗೆ ವಾಪಸ್ಸಾಗಿದ್ದಾರೆ.

  • ಕ್ಯಾನ್ಸರ್ ರೋಗಿ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೊರಟಿದ್ದ ಪಾಪಿ ಮಗ

    ಕ್ಯಾನ್ಸರ್ ರೋಗಿ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೊರಟಿದ್ದ ಪಾಪಿ ಮಗ

    – ಪೊಲೀಸರಿಂದ ಬುದ್ಧಿವಾದ

    ಚಿಕ್ಕೋಡಿ/ಬೆಳಗಾವಿ: ಕ್ಯಾನ್ಸರ್ ಇರುವ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೊರಟಿದ್ದ ಪಾಪಿ ಮಗನಿಗೆ ಪೊಲೀಸರು ಬುದ್ಧಿವಾದ ಹೇಳಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

    ಅಥಣಿ ಪಟ್ಟಣದ ಶ್ರೀಧರ್ ರಮೇಶ್ ಸೋಳಸಿ ತನ್ನ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೊರಡಲು ಯತ್ನಿಸಿದ್ದ. ಮಹಾರಾಷ್ಟ್ರದ ಪುಣೆಯಲ್ಲಿ ವ್ಯಾಸಾಂಗಕ್ಕೆಂದು ವಾಸವಾಗಿರುವ ಮಗ ಶ್ರೀಧರ್, ದಿಂಬು ಹಾಸಿಗೆ, ಬಟ್ಟೆಯ ಜೊತೆ ತನ್ನ ಹೆತ್ತ ತಾಯಿಯನ್ನು ನಡು ರಸ್ತೆಯಲ್ಲೇ ಬಿಟ್ಟು ಹೋಗುತ್ತಿದ್ದ. ಈ ದೃಶ್ಯವನ್ನು ಕಂಡರೆ ಎಂತಹವರಿಗೂ ಮರುಕ ಹುಟ್ಟುತ್ತದೆ.

    ಘಟನೆ ಕಂಡ ಸ್ಥಳೀಯರು ಅನುಮಾನಗೊಂಡು ವಿಚಾರಿಸಿದ್ದು, ಈ ವೇಳೆ ಸತ್ಯ ಹೊರ ಬಿದ್ದಿದೆ. ಆರಂಭದಲ್ಲಿ ತಾಯಿಯನ್ನು ಬಿಟ್ಟು ಮಾತ್ರೆ ತರಲು ಹೋಗಿದ್ದೆ ಎಂದು ಮಗ ಶ್ರೀಧರ್ ಸಬೂಬು ನೀಡಿದ್ದಾನೆ. ನಂತರ ಪುತ್ರನಿಗೆ ಗೂಸಾ ನೀಡಿ, ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ಸಮ್ಮುಖದಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸಾಯುವ ಮುನ್ನ ಮಾಲೀಕನೊಂದಿಗೆ ಶ್ವಾನ ಟ್ರಿಪ್ – ಫೋಟೋ ವೈರಲ್

    ಸಾಯುವ ಮುನ್ನ ಮಾಲೀಕನೊಂದಿಗೆ ಶ್ವಾನ ಟ್ರಿಪ್ – ಫೋಟೋ ವೈರಲ್

    ಲ್ಯುಕೇಮಿಯಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಶ್ವಾನವನ್ನು ಅದರ ಮಾಲೀಕ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಶ್ವಾನಪ್ರಿಯರು ಈ ಕಥೆ ಕೇಳಿ ಭಾವುಕರಾಗಬಹುದು. ಅಲ್ಲದೇ ಕಣ್ಣೀರು ಸಹ ತರಿಸಬಹುದು, ಆದರೆ ಈ ಕಥೆಯನ್ನು ನೀವು ಕೇಳಲೇಬೇಕು. 10 ವರ್ಷದ ಲ್ಯಾಬ್ರಡೂಡ್ಲ್ ಎಂಬ ಮಾಂಟಿ ಹೆಸರಿನ ಶ್ವಾನವೊಂದು ಲ್ಯುಕೇಮಿಯಾ ಕಾಯಿಲೆ ವಿರುದ್ಧ ತಿಂಗಳು ಗಟ್ಟಲೇ ಹೋರಾಡಿ ನಿಧನ ಹೊಂದಿದೆ. ಆದರೆ ಈ ಮುನ್ನ ಶ್ವಾನದ ಮಾಲೀಕ ಕಾರ್ಲೋಸ್ ಫ್ರೆಸ್ಕೊ ತನ್ನ ಶ್ವಾನದೊಂದಿಗೆ ಕೊನೆಯಾದಾಗಿ ಟ್ರಿಪ್‍ಗೆ ಹೋಗಿ ಅದರ ಜೊತೆ ಕಾಲ ಕಳೆದ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅನಾರೋಗ್ಯದಿಂದಾಗಿ ಮಾಂಟಿಗೆ ನಡೆಯಲು ಸಾಧ್ಯವಾಗದ ಕಾರಣ, ಕಾರ್ಲೋಸ್ ಮಾಂಟಿಯನ್ನು ವೇಲ್ಸ್‍ನ ಬ್ರೆಕಾನ್‍ನಲ್ಲಿರುವ ತಮ್ಮ ನೆಚ್ಚಿನ ಪವರ್ತಕ್ಕೆ ವೀಲ್ ಚೇರ್ ಮುಖಾಂತರ, ಮಾಂಟಿಯನ್ನು ಕರೆದುಕೊಂಡು ಹೋಗಿದ್ದರು. ಈ ಮುನ್ನ ಕಾರ್ಲೋಸ್ ಹಾಗೂ ಮಾಂಟಿ ಜೊತೆಗೆ ಹಲವಾರು ಬಾರಿ ಟ್ರಿಪ್‍ಗೆ ಒಟ್ಟಿಗೆ ಹೋಗಿದ್ದೆವು. ಆದರೆ ಈ ಬಾರಿ ಮಾಂಟಿಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರಿಂದ ನಾನು ಅವನೊಂದಿಗೆ ಹೋಗುತ್ತಿರುವ ಕೊನೆ ಟ್ರಿಪ್ ಎಂದು ನನಗೆ ಮೊದಲೇ ಗೊತ್ತಿರುವುದಾಗಿ ತಿಳಿಸಿದ್ದರು. 18 ತಿಂಗಳ ಹಿಂದೆ ಮಾಂಟಿಗೋ ಕೀಮೋಥೆರಪಿ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದನು. ಆದರೆ ಕೊನೆಗೆ ಚಿಕಿತ್ಸೆ ಫಲಾಕಾರಿಯಾಗಲಿಲ್ಲ.

    ಅಲ್ಲದೇ ನಾನು ಅವನು ಪ್ರವಾಸಕ್ಕೆ ಹೋದಾಗ ಅಲ್ಲಿ ಕೆಲವು ಸ್ಥಳೀಯರು ಮಾಂಟಿ ಕುಳಿತಿದ್ದ ವೀಲ್ ಚೇರ್‍ನನ್ನು ತಳ್ಳುತ್ತಾ ಅವನೊಂದಿಗೆ ಸುಂದರವಾದ ಕಾಲ ಕಳೆದರು. ಈ ವೇಳೆ ಮಾಂಟಿ ದುರ್ಬಲನಾಗಿದ್ದರೂ ಅನೇಕ ಮಂದಿಗೆ ಹತ್ತಿರವಾದ, ಎಲ್ಲರ ಗಮನ ಸೆಳೆಯುವುದರ ಜೊತೆಗೆ ಅನೇಕ ಮಂದಿ ಅವನಿಗೆ ಶುಭ ಹಾರೈಸಿದರು. ಪರ್ವದ ಮೇಲಿದ್ದ ಮಂದಿ ಇವನ ಕಥೆಯನ್ನು ಕೇಳಿ ದುಃಖಿತರಾಗಿದ್ದರು. ಇದನ್ನೂ ಓದಿ:ಮೇಕೆದಾಟು ಯೋಜನೆ – ಮೂರು ಮಹತ್ವದ ನಿರ್ಣಯಗಳಿಗೆ ತಮಿಳುನಾಡು ಅಂಗೀಕಾರ

  • 17 ವರ್ಷ ವಯೋಲಿನ್ ನುಡಿಸಿ ಪತ್ನಿಯನ್ನ ಕ್ಯಾನ್ಸರ್‌ನಿಂದ ಮುಕ್ತಗೊಳಿಸಿದ 77ರ ವೃದ್ಧ!

    17 ವರ್ಷ ವಯೋಲಿನ್ ನುಡಿಸಿ ಪತ್ನಿಯನ್ನ ಕ್ಯಾನ್ಸರ್‌ನಿಂದ ಮುಕ್ತಗೊಳಿಸಿದ 77ರ ವೃದ್ಧ!

    ಕೋಲ್ಕತ್ತಾ: ವೃದ್ಧರೊಬ್ಬರು ತನ್ನ ಪತ್ನಿಯ ಮೇಲಿನ ಪ್ರೀತಿ ಹಾಗೂ ಸಂಗೀತದ ಮೇಲೆ ಇರುವ ಅಭಿಮಾನವನ್ನು ಜನರ ಮುಂದೆ ಪ್ರದರ್ಶಿಸಿರುವ ಮನಕಲಕುವ ಕಥೆಯೊಂದು ಇಲ್ಲಿದೆ.

    ಕೋಲ್ಕತ್ತಾದ ಬಲರಾಮ್ ಡೇ ಸ್ಟ್ರೀಟ್‍ನ ನಿವಾಸಿ ಸ್ವಪನ್ ಸೇಟ್ ಅವರ ಕಥೆ ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 2002ರಲ್ಲಿ ಸೆಟ್ ಪತ್ನಿಯ ಗರ್ಭಕೋಶದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಬಡಕುಟುಂಬವಾಗಿದ್ದರಿಂದ ಸೇಟ್ ಗೆ ಪತ್ನಿಯ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪತ್ನಿಯ ಚಿಕಿತ್ಸೆಗೆ ಹಣ ಸಂಗ್ರಹಿಸುವ ಸಲುವಾಗಿ ಅವರು ಪಿಟೀಲು ನುಡಿಸಲು ದೇಶಾದ್ಯಂತ ಪ್ರಯಾಣಿಸಿದರು.

    ಸೇಟ್ ಕೇವಲ ಪಿಟೀಲು ವಾದಕ ಮಾತ್ರವಲ್ಲದೆ ಪೈಂಟರ್ ಹಾಗೂ ಶಿಲ್ಪಿ ಕೂಡ. ಹೀಗಾಗಿ ತಮ್ಮ ಕಲೆಯನ್ನೇ ಬಳಸಿಕೊಂಡು ಪತ್ನಿಯನ್ನು ಬದುಕಿಸುವ ನಿರ್ಧಾರಕ್ಕೆ ಬಂದರು. ತಮ್ಮ ಕಲೆಯ ಮೂಲಕ ಪತ್ನಿಯ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ನಿರ್ಧರಿಸಿದರು. 17 ವರ್ಷಗಳ ಕಾಲ ಅದನ್ನು ಮುಂದುವರಿಸಿದರು. ಅಂತೆಯೇ ಪತ್ನಿ 2019 ರಲ್ಲಿ ಚೇತರಿಸಿಕೊಂಡರು. ಅದಾಗ್ಯೂ ಸೇಟ್ ಅವರು ನಗರಗಳಲ್ಲಿ ಸಂಚರಿಸಿ ಜನರನ್ನು ರಂಜಿಸಲು ಪಿಟೀಲು ನುಡಿಸುತ್ತಿದ್ದರು. ಸಾಮಾನ್ಯವಾಗಿ ಸೆಟ್ ಅವರು ಪಿಟೀಲು ನುಡಿಸುವಾಗ ಬಿಳಿ ಕುರ್ತಾ ಮತ್ತು ಧೋತಿ ಧರಿಸುತ್ತಾರೆ.

    ಅಂತೆಯೇ ಇದೇ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಶಾಪಿಂಗ್ ಮಾಲ್ ಹೊರಗಡೆ ಸೆಟ್ ಅವರು ವಯೋಲಿನ್ ನುಡಿಸುತ್ತಿರುವ ವೀಡಿಯೋವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಅದು ಸಾಕಷ್ಟು ವೈರಲ್ ಆಗಿದೆ.

    ಸ್ವಪನ್ ಸೇಟ್. ಪೈಂಟರ್, ಶಿಲ್ಪಿ ಹಾಗೂ ವಯೋಲಿನ್ ನುಡಿಸುತ್ತಿರುವ ಇವರು ಕೋಲ್ಕತ್ತಾದ ಬಲರಾಮ್ ಡೇ ಸ್ಟ್ರೀಟ್ ನಲ್ಲಿ ಸ್ಟುಡಿಯೋವನ್ನು ಕೂಡ ಹೊಂದಿದ್ದಾರೆ. 2002ರಲ್ಲಿ ಸೆಟ್ ಪತ್ನಿಗೆ ಗರ್ಭಾಶಯದ ಕ್ಯಾನ್ಸರ್ ಇರುವುದು ಗೊತ್ತಾಯಿತು. ಹೀಗಾಗಿ ಅವರಿಗೆ ದುಬಾರಿ ಬೆಲೆ ಚಿಕಿತ್ಸೆಯ ಅವಶ್ಯಕತೆ ಇತ್ತು. ಪತ್ನಿಯ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಸೆಟ್ ತಮ್ಮ ಕಲೆಯನ್ನೇ ಬಳಸಿಕೊಂಡರು. ಪಿಟೀಲು ನುಡಿಸಲು ಮತ್ತು ಪೈಂಟಿಂಗ್ ಮಾಡಲು ವಿವಿಧ ಸ್ಥಳಗಳಿಗೆ ಪ್ರಯಾಣಿಸಿದರು ಎಂದು ಕ್ಯಾಪ್ಷನ್ ನೀಡಲಾಗಿತ್ತು.

    17 ವರ್ಷಗಳ ಸತತ ಪ್ರಯತ್ನದಿಂದ 2019ರ ವೇಲೆ ಸೇಟ್ ಪತ್ನಿ ಕ್ಯಾನ್ಸರ್ ನಿಂದ ಚೇತರಿಸಿಕೊಂಡರು. ಆದರೂ ಸೇಟ್ ಮಾತ್ರ ತಮ್ಮ ಕಾಯಕ ಮುಂದುವರಿಸಿದ್ದಾರೆ. ವಿವಿಧ ಕಡೆ ತೆರಳಿ ಈಗಲೂ ವಯೋಲಿನ್ ಹಾಗೂ ಪೈಂಟಿಂಗ್ ಮಾಡುತ್ತಿದ್ದಾರೆ.

     

  • ಮಾಜಿ ಮಹಾಪೌರ ಸುಧೀರ್ ಸರಾಫ್ ನಿಧನ – ಗಣ್ಯರ ಕಂಬನಿ

    ಮಾಜಿ ಮಹಾಪೌರ ಸುಧೀರ್ ಸರಾಫ್ ನಿಧನ – ಗಣ್ಯರ ಕಂಬನಿ

    ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ, ಭಾರತೀಯ ಜನತಾ ಪಕ್ಷದ ಮುಖಂಡರಾಗಿದ್ದ ಸುಧೀರ್ ಸರಾಫ್ ಅವರ ನಿಧನಕ್ಕೆ ಗಣ್ಯರು ಕಂಬಿ ಮೀಡಿದಿದ್ದಾರೆ.

    ಹಲವು ದಿನಗಳಿಂದ ಕಾನ್ಸರ್‍ನಿಂದ ಬಳಲುತ್ತಿದ್ದ ಸುಧೀರ್ ಸರಾಫ್ ಅವರು ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಸುಧೀರ್ ಸರಾಫ್ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಸುಧೀರ್ ಸರಾಫ್ ಕಳೆದ ರಾತ್ರಿ ನಿಧನರಾಗಿದ್ದು, ಮೃತರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಇಂದು (ಗುರುವಾರ) ಬೆಳಗ್ಗೆ 9.30 ಗಂಟೆಗೆ ಅವರ ಸ್ವಗೃಹದಿಂದ ಹೊರಟು ಕೇಶ್ವಾಪುರ ಮುಕ್ತಿ ಧಾಮದಲ್ಲಿ ನೇರವೇರಲಿದೆ.

  • ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ- 2ರ ಬಾಲಕನಿಂದ ಮಾನವೀಯತೆ ಕಾರ್ಯ

    ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ- 2ರ ಬಾಲಕನಿಂದ ಮಾನವೀಯತೆ ಕಾರ್ಯ

    ಅಬುಧಾಬಿ: 2 ವರ್ಷದ ಬಾಲಕ ತನ್ನ ಕೇಶರಾಶಿಯನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.

    ತಕ್ಷ್ ಜೈನ್(2) ಕೂದಲು ದಾನ ಮಾಡಿದ ಬಾಲಕ. ಫ್ರೆಂಡ್ಸ್ ಆಫ್ ಕ್ಯಾನ್ಸ್‍ರ್ ಪೇಷೆಂಟ್ ಹೆಸರಿನ ಚ್ಯಾರಿಟಿ ಕೂದಲು ದಾನ ಮಾಡಿ ಎನ್ನುವ ಆಂದೋಲನವನ್ನು ಆರಂಭಿಸಿತ್ತು. ಈ ಆಂದೋಲನಕ್ಕೆ ಪುಟ್ಟ ಬಾಲಕ ತನ್ನ ಕೇಶವನ್ನು ದಾನ ಕೊಡುವ ಮೂಲಕವಾಗಿ ಬೆಂಬಲ ಸೂಚಿಸಿದ್ದಾನೆ.

    ಭಾರತ ಮೂಲದ ತಕ್ಷ್ ಯುಎಇ ನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕೂದಲನ್ನು ದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗುವ ಮೂಲಕ ಮಾದರಿಯಾಗಿದ್ದಾನೆ. ಕ್ಯಾನ್ಸರ್ ರೋಗಿಗಳಿಗೆ ಕೂದಲು ನೀಡಿದ ಸಣ್ಣ ವಯಸ್ಸಿನ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

    2019ರಲ್ಲಿ ತಕ್ಷ್ ಸಹೋದರಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಳು. ಇದರಿಂದ ಸ್ಫೂರ್ತಿ ಪಡೆದ ತಕ್ಷ್ ನಾನು ಕೂದಲು ನೀಡುತ್ತೇನೆ ಎಂದು ಹೇಳುತ್ತಿದ್ದನು. ಸದ್ಯ ಬಾಲಕ ಕೂದಲು ದಾನ ಮಾಡಿದ್ದು, ಇದರಿಂದ ನಮಗೆ ಖುಷಿ ತಂದಿದೆ ಎಂದು ತಕ್ಷ್ ಪೋಷಕರು ಹೇಳಿದ್ದಾರೆ.

  • ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಕಾರುಣ್ಯ ರಾಮ್

    ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಕಾರುಣ್ಯ ರಾಮ್

    ಬೆಂಗಳೂರು: ಕಾರುಣ್ಯ ರಾಮ್ ತಮ್ಮ ಕೇಶರಾಶಿಯನ್ನು 14 ಇಂಚು ಕಟ್ ಮಾಡಿ ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದಾರೆ.

    2021ರ ಹೊಸ ವರ್ಷದಲ್ಲಿ ಏನನ್ನಾದರೂ ಮಾಡಬೇಕು ಎಂದುಕೊಂಡಿದ್ದ ಕಾರುಣ್ಯರಾಮ್, ಅದರಂತೆ ಅವರ ಕೂದಲನ್ನು 14 ಇಂಚು ಕಟ್ ಮಾಡಿ ಕ್ಯಾನ್ಸರ್ ರೋಗಿಗಳಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮೈಸೂರಿನಲ್ಲಿ ನಡೆಯುತ್ತಿರುವ ತಮ್ಮ ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿದ ಕಾರುಣ್ಯ ರಾಮ್ ಕೂದಲಿಗೆ ಕತ್ತರಿ ಹಾಕಿದ್ದಾರೆ. ಬೆಂಗಳೂರಿನ ಹೇರ್ ಡೊನೇಷನ್ ಸಂಸ್ಥೆಯ ಮೂಲಕವಾಗಿ ಕ್ಯಾನ್ಸರ್ ರೋಗಿಗಳಿಗೆ ತಲೆಕೂದಲನ್ನು ದಾನ ಮಾಡಿದ್ದಾರೆ.

    ಕೂದಲು ದಾನ ಮಾಡಿರುವ ಪೋಸ್ಟ್‍ನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಕಾರುಣ್ಯ ರಾಮ್, ನನ್ನ ಕೇಶರಾಶಿಯಲ್ಲಿ 14 ಇಂಚುಗಳಷ್ಟು ಉದ್ದದ ತಲೆಕೂದಲನ್ನು ಕ್ಯಾನ್ಸ್‍ರ್ ರೋಗಿಗಳಿಗೆ ನೀಡಿದ್ದೇನೆ. 2021 ರ ಆರಂಭದಲ್ಲಿ ಅವಶ್ಯತಕೆ ಇರುವವರಿಗೆ ಏನಾದರೂ ಸಹಾಯ ಮಾಡಬೇಕು ಎಂದುಕೊಂಡಿದ್ದೆನು ಅದರಂತೆ ಈ ಕಾರ್ಯವನ್ನು ಮಾಡಿದ್ದೇನೆ. ಇಷ್ಟು ಉದ್ದದ ಕೂದಲು ಬೆಳೆಯಬೇಕಾದರೆ ಸುಮಾರು ಮೂರು ವರ್ಷಗಳು ಬೇಕಾಗುತ್ತದೆ.

     

    View this post on Instagram

     

    A post shared by Karunya (@ikarunya)

     

    ಪ್ರತಿಯೊಬ್ಬ ಭಾರತೀಯ ಮಹಿಳೆಗೂ ಕೂದಲು ಸ್ತ್ರೀಯತ್ವದ ಬಹುಮುಖ್ಯ ಭಾಗವಾಗಿದೆ. ಹೆಣ್ಣಿನ ಸೌಂದರ್ಯವನ್ನು ಎದ್ದು ಕಾಣುವಂತೆ ಕೇಶರಾಶಿ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾನು ಕೂದಲಿನ ಪ್ರತಿಯೊಂದು ಎಳೆಯನ್ನು ಪ್ರೀತಿಸುತ್ತೇನೆ. ಕ್ಯಾನ್ಸ್‍ರ್ ರೋಗಿಗಳಿಗಾಗಿ ಕೂದಲು ನೀಡುತ್ತಿದ್ದೇನೆ. ಇದು ಅಗತ್ಯವಿರುವವರನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಅವರ ಆರೋಗ್ಯದ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ . ಇದರಿಂದ ಸಾಕಷ್ಟು ಮಹಿಳೆಯರು ಮುಂದೆ ಬಂದು ತಾವೂ ನನ್ನೊಂದಿಗೆ ಕೈ ಜೋಡಿಸಲಿದ್ದಾರೆ ಎನ್ನುವ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Karunya (@ikarunya)

    ಈ ಹಿಂದೆ ನಟ ಧ್ರುವಾ ಸರ್ಜಾ ತಮ್ಮ ಸಿನಿಮಾಗಿ ಉದ್ದ ಕೂದಲನ್ನು ಬಿಟ್ಟಿದ್ದರು. ಸಿನಿಮಾದ ಚಿತ್ರೀಕರಣ ಮುಗಿದ ನಂತರ ಅವರ ಉದ್ದದ ಕೂದಲನ್ನು ಕಿಮೋಥೆರಪಿಗೊಳಗಾದ ಕ್ಯಾನ್ಸರ್ ರೋಗಿಗಳಿಗೆ ನೀಡಿದ್ದರು. ಇದೀಗ ನಟಿ ಕಾರುಣ್ಯ ರಾಮ್ ಕೂಡ ಕ್ಯಾನ್ಸರ್ ರೋಗಿಗಳಿಗೆ ಕೇಶರಾಶಿಯನ್ನು ದಾನ ಮಾಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗಾಗಿ ಬೈಕ್ ರೈಡರ್ಸ್ ತಂಡದಿಂದ ಟ್ಯಾಬ್

    ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗಾಗಿ ಬೈಕ್ ರೈಡರ್ಸ್ ತಂಡದಿಂದ ಟ್ಯಾಬ್

    ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ನವೆಂಬರ್ ತಿಂಗಳಲ್ಲಿ ಶೇವ್ ಮಾಡದೇ ಶೇವಿಂಗ್‍ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸುತ್ತಿದ್ದ ಬೆಂಗಳೂರಿನ ಒಂದು ರೈಡರ್ಸ್ ತಂಡ ಈ ಬಾರಿ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಟ್ಯಾಬ್ ಒದಗಿಸುವ ಕಾರ್ಯ ಕೈಗೊಂಡಿದೆ.

    ಬ್ರೋಸ್ ಅನ್ ವೀಲ್ಸ್ ಎನ್ನುವ ರೈಡರ್ಸ್ ತಂಡ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಟ್ಯಾಬ್ (ಬಡ್ಲಿ -ರೀಫರ್ಬಿಷ್ಡ ಎಲೆಕ್ಟ್ರಾನಿಕ ಸಂಸ್ಥೆ ಸಹಯೋಗದಿಂದ) 12 12 ಸ್ಮಾರ್ಟ್ ಫೋನ್ ಹಾಗೂ 1 ವರ್ಷದ ಇಂಟರ್ನೆಟ್‍ನ್ನು ಒದಗಿಸಲಿದೆ. ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಈ ಯುವ ತಂಡ ಮಾಡುತ್ತಿದೆ.

    ಈ ತಿಂಗಳು ಯಾರೂ ಶೇವ್ ಮಾಡಬೇಡಿ. ನೀವು ಶೇವ್‍ಗೆ ಬಳಸುವ ಹಣ ಹಲವರಿಗೆ ಸಹಯವಾಗುತ್ತದೆ. ಹಣ ಸಂಗ್ರಹಮಾಡಿ ಸಮಾಜಕ್ಕೆ ಈ ಕೊರೋನಾ ಟೈಂನಲ್ಲಿ ಪಾಸಿಟಿವ್ ಸಂದೇಶವನ್ನು ಈ ಯುವ ತಂಡ ನೀಡುತ್ತಿದೆ. ಇಲ್ಲಿಯವರೆಗೂ ಸುಮಾರು 4.50 ಲಕ್ಷಕ್ಕೂ ಹೆಚ್ಚು ಹಣವನ್ನು ಈ ಬ್ರೋಸ್ ಅನ್ ವೀಲ್ಸ್ ತಂಡ ಸಂಗ್ರಹಿಸಿದೆ. ಈ ಹಣವನ್ನ ಕ್ಯಾನ್ಸರ್ ಪೀಡಿತರಿಗಾಗಿ ಕೆಲಸ ಮಾಡುವ ಸಮೀಕ್ಷಾ ಫೌಂಡೇಶನಿಗೆ ತಲುಪಿಸಿದ್ದಾರೆ.

    ಬ್ರೋಸ್ ಅನ್ ವೀಲ್ಸ್ 10 ವರ್ಷದಿಂದ ಪರಿಚಯ ಇರುವ ಹುಡುಗರು ಈ ರೀತಿಯಾಗಿ ಸಮಾಜಕ್ಕೆ ಒಳಿತು ಮಾಡೋನಿಟ್ಟಿನಲ್ಲಿ ಈ ತಂಡವನ್ನ ಸಿದ್ದ ಮಾಡಿಕೊಂಡಿದ್ದಾರೆ. ಮೋಟರ್ ಸೈಕಲ್ ಓಡಿಸೋ ಪ್ಯಾಷನ್ ನಿಂದ ಒಂದಾದ ತಂಡ ಇಂದು ಸಾಮಾಜಿಕ ಕಳಕಳಿಯನ್ನ ತೋರುತ್ತಿದೆ. ನೀವು ನೀಡುವ ಎಲ್ಲಾ ದುಡ್ಡು ಪಾರದರ್ಶಕವಾಗಿರುತ್ತೆ. ಒಂದೊಂದು ರೂಪಾಯಿ ಯಾರಿಗೆ ಸೇರುತ್ತಿದೆ ಎನ್ನುವುದನ್ನು ನೀವು ನೋಡಬಹುದು ಎಂದು ಪಾರದರ್ಶಕವಾಗಿ ಸಮಾಜ ಮುಖಿಯಾಗಿ ಈ ತಂಡ ಕೆಲಸ ಮಾಡುತ್ತಿದೆ.