Tag: cancer

  • ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಗಾಂಧಿನಗರ: ಗೋವಿನ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂದು ಗುಜರಾತಿನ ಸಂಶೋಧಕರು ಹೇಳಿದ್ದಾರೆ.

    ಜುನಾಘಡ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಒಂದು ವರ್ಷದಿಂದ ಪ್ರಯೋಗ ನಡೆಸಿ ಈಗ ಯಶಸ್ವಿಯಾಗಿದ್ದಾರೆ. ಸಂಶೋಧನೆಯ ಮೊದಲ ಪ್ರಯತ್ನದಲ್ಲಿಯೇ ಗೋವಿನ ಮೂತ್ರವನ್ನು ಬಳಸಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು ಎಂಬ ಪ್ರಯತ್ನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

    ಗೋ ಮೂತ್ರದಿಂದ ಬಾಯಿ, ಗರ್ಭಕೋಶ, ಶ್ವಾಸಕೋಶ, ಮೂತ್ರಪಿಂಡ, ಚರ್ಮ, ಸ್ತನ ಕ್ಯಾನ್ಸರ್ ಗಳನ್ನು ಕೂಡ ಗುಣಪಡಿಸಬಹುದೆಂದು ತಿಳಿಸಿದ್ದಾರೆ.

    ಸಹಾಯಕ ಪ್ರಾಧ್ಯಾಪಕರಾದ ಶಾರದಾ ಭಟ್, ರುಕಮ್ ಸಿನ್ಹ ತೋಮರ್, ಹಾಗೂ ಸಂಶೋಧನಾ ವಿದ್ಯಾರ್ಥಿ ಕವಿತಾ ಜೋಶಿ ಯವರನ್ನು ಒಳಗೊಡ ಈ ಸಂಶೋಧನಾ ತಂಡ, ಒಂದು ವರ್ಷದ ಪ್ರಯೋಗದ ಫಲವಾಗಿ ಕ್ಯಾನ್ಸರ್ ನ್ನು ಗೋ ಮೂತ್ರದಿಂದ ಗುಣಪಡಿಸಬಹುದು ಎಂದು ಸಾಬೀತುಪಡಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾರದಾ ಭಟ್ ಬಾಟಲಿಯಲ್ಲಿ ಸಂಗ್ರಹಿಸಲಾದ ಕ್ಯಾನ್ಸರ್ ಕೋಶಗಳ ಮೇಲೆ ನಾವು ನೇರ ಪ್ರಯೋಗ ಮಾಡಿದ್ದೇವೆ. ನಿರ್ಧಿಷ್ಟ ಸಂಖ್ಯೆಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಬೇಕಾದ ಗೋ ಮೂತ್ರದ ಪ್ರಮಾಣವನ್ನು ಎಷ್ಟಿರಬೇಕೆಂಬುದನ್ನು ಅಪಾಯಕಾರಿಯಾದ ಸಂಶೋಧನೆಯ ಮೂಲಕ ಕಂಡುಕೊಂಡಿದ್ದೇವೆ ಎಂದು ಹೇಳಿದರು. ಇದನ್ನು ಓದಿ: ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?

    ಮುಂದಿನ ಹಂತದಲ್ಲಿ ಇದನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದು ಯಶಸ್ಸು ಕಂಡನಂತರ ವಿವಿಧ ರೀತಿಯ ಕ್ಯಾನ್ಸರ್ ವಿಧಗಳಿಗೆ ಮಾತ್ರೆಗಳನ್ನು ತಯಾರಿಸಲಾಗುವುದು ಎಂದರು.

    ಈ ಕುರಿತು ಮಾತನಾಡಿದ ತೋಮರ್, ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಕೆಮೊಥೆರಪಿಯಿಂದ ಶರೀರದಲ್ಲಿನ ಕ್ಯಾನ್ಸರ್ ಜೀವಕೋಶಗಳೊಂದಿಗೆ ಇನ್ನುಳಿದ ಜೀವಕೋಶಗಳನ್ನೂ ಸಹ ಅದು ಕೊಲ್ಲುತ್ತದೆ. ಆದರೆ ಗೋ ಮೂತ್ರ ಕೇವಲ ಕ್ಯಾನ್ಸರ್ ಪೀಡಿತ ಕೋಶಗಳನ್ನು ಮಾತ್ರ ಕೊಲ್ಲುತ್ತದೆ ಎಂದು ಹೇಳಿದರು.

  • ಕ್ಯಾನ್ಸರ್ ಪೀಡಿತ ಬಾಲಕನಿಗೆ ಧೈರ್ಯ ತುಂಬಿದ ಯುವರಾಜ್ ಸಿಂಗ್

    ಕ್ಯಾನ್ಸರ್ ಪೀಡಿತ ಬಾಲಕನಿಗೆ ಧೈರ್ಯ ತುಂಬಿದ ಯುವರಾಜ್ ಸಿಂಗ್

    ಇಂದೋರ್‌: ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದಿರುವ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಈ ನಡುವೆ ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ.

    ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ತಂಡದ ಪರ ಆಡುತ್ತಿರುವ ಯುವಿ, ಕ್ಯಾನ್ಸರ್ ಪೀಡಿದ ಬಾಲಕನನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಈ ಕುರಿತ ಫೋಟೋಗಳನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.

    11 ವರ್ಷದ ಬಾಲಕ ರಾಕಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಯುವರಾಜ್ ಆತನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಯುವಿ ಬಾಲಕನೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಬಾಲಕ ಬಹುಬೇಗ ಚೇತರಿಕೊಳ್ಳಲಿ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ. ಭೇಟಿ ವೇಳೆ ಯುವಿ ಬಾಲಕನಿಗೆ ತಂಡದ ಜರ್ಸಿ ಹಾಗೂ ಕ್ಯಾಪ್ ಗಿಫ್ಟ್ ಮೇಲೆ ಸಹಿ ಮಾಡಿ ನೀಡಿದ್ದಾರೆ. ಯುವಿ ಅವರ ಈ ಫೋಟೋ ನೋಡಿರುವ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಬಹು ಸಮಯ ಕ್ಯಾನ್ಸರ್ ನಿಂದ ಬಳಿದ್ದ ಯುವಿ ಅನಾರೋಗ್ಯದ ನಡುವೆ ಭಾರತದ ಪರ ಆಡಿ ವಿಶ್ವಕಪ್ ಗೆಲುವು ಪಡೆಯಲು ಕಾರಣರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ 2007 ರ ಟಿ-20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ 2011 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದಿದ್ದರು. ಬಳಿಕ ಯುವಿ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಮತ್ತೆ 2012 ರಲ್ಲಿ ಟೀಂ ಇಂಡಿಯಾ ದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರು. ಆದರೆ ಫಿಟ್‍ನೆಸ್ ಸಮಸ್ಯೆ ಎದುರಿಸುತ್ತಿರುವ ಯುವಿ ಈ ಬಾರಿಯ ಐಪಿಎಲ್ ನಲ್ಲೂ ನೀರಸ ಪ್ರದರ್ಶನ ಮುಂದುವರೆಸಿದ್ದಾರೆ. ಟೂರ್ನಿಯಲ್ಲಿ 7 ಪಂದ್ಯಗಳನ್ನು ಆಡಿರುವ ಯುವಿ 64 ರನ್ ಮಾತ್ರ ಗಳಿಸಿದ್ದಾರೆ. ಈಗ ಪಂಜಾಬ್ ತಂಡದ ಅಂತಿಮ 11 ಆಟಗಾರರ ಪಟ್ಟಿಯಲ್ಲಿ ಸ್ಥಾನಗಳಿಸುವ ವಿಶ್ವಾಸವನ್ನು ಹೊಂದಿದ್ದಾರೆ.

  • ನಿರ್ದೇಶಕ, ನಟ ಸತ್ಯ ನಿಧನಕ್ಕೆ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ನಿರ್ದೇಶಕ, ನಟ ಸತ್ಯ ನಿಧನಕ್ಕೆ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಬೆಂಗಳೂರು: ನಿರ್ದೇಶಕ, ನಟ ಪಿ.ಎನ್ ಸತ್ಯ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದಾರೆ.

    ಕಳೆದ ಒಂದು ವರ್ಷದಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸತ್ಯ ಚಿಕಿತ್ಸೆ ಫಲಿಸದೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಸುಮಾರು 7.30ಕ್ಕೆ ವಿಧಿವಶರಾಗಿದ್ದಾರೆ. ಇದನ್ನೂ ಓದಿ: ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ

    ಸದ್ಯ ಬಸವೇಶ್ವರನಗರದ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ದರ್ಶನ್‍ಗೆ ನಾಯಕ ನಟ ಇಮೇಜ್ ತಂದು ಕೊಟ್ಟಿದ್ದೇ ಈ ಸತ್ಯ.

    ಈ ಬಗ್ಗೆ ದರ್ಶನ್ ಕಂಬನಿ ಮಿಡಿದಿದ್ದು, “ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ `ಮೆಜೆಸ್ಟಿಕ್’ ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

    ಮೆಜೆಸ್ಟಿಕ್, ಡಾನ್, ದಾಸ, ಶಾಸ್ತ್ರೀ, ಗೂಳಿ ಸೇರಿದಂತೆ 16 ಚಿತ್ರಗಳನ್ನ ನಿರ್ದೇಶಿಸಿದ್ದ ಸತ್ಯ ಅವರ ಕೊನೆಯ ಚಿತ್ರ ಮರಿ ಟೈಗರ್ ಆಗಿತ್ತು.

  • ಸಾಯೋ 18 ಗಂಟೆ ಮೊದಲು ಆಕ್ಸಿಜನ್ ಮಾಸ್ಕ್ ಧರಿಸಿ ಬೆಡ್ ಮೇಲೆಯೇ ಮದ್ವೆಯಾದ ಯುವತಿ

    ಸಾಯೋ 18 ಗಂಟೆ ಮೊದಲು ಆಕ್ಸಿಜನ್ ಮಾಸ್ಕ್ ಧರಿಸಿ ಬೆಡ್ ಮೇಲೆಯೇ ಮದ್ವೆಯಾದ ಯುವತಿ

    ವಾಷಿಂಗ್ಟನ್: ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು ಆಸ್ಪತ್ರೆಯ ಬೆಡ್ ಮೇಲೆಯೇ ಮದುವೆಯಾಗಿ, ನಂತರ 18 ಗಂಟೆಯ ಬಳಿಕ ಸಾವನ್ನಪ್ಪಿರುವ ಮನಕಲಕುವ ಘಟನೆ ಡಿಸೆಂಬರ್ 21 ರಂದು ಅಮೆರಿಕದ ಹಾರ್ಟ್ ಫೋರ್ಡ್ ನಗರದ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಹೀದರ್ ಮೋಶರ್ ಸಾವನ್ನಪ್ಪಿದ ನವ ವಧು. ಹೀದರ್ ಸ್ತನ ಕ್ಯಾನ್ಸರ್ ನಾಲ್ಕನೇ ಹಂತದ ಸ್ಥಿತಿಯನ್ನು ತಲುಪಿದ್ದ ಹಿನ್ನೆಲೆಯಲ್ಲಿ ವೈದ್ಯರು ಬದುಕುವುದು ಕಷ್ಟ ಎಂದು ತಿಳಿಸಿದ್ದರು. ಈ ಕಾರಣಕ್ಕೆ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ವಧುವಿನಂತೆ ಶ್ವೇತ ವರ್ಣದ ಗೌನ್ ಧರಿಸಿ ಆಸ್ಪತ್ರೆಯ ಬೆಡ್ ಮೇಲೆಯೇ ಹೀದರ್ ತಮ್ಮ ಬಹು ದಿನಗಳ ಗೆಳಯ ಡೇವಿಡ್ ಮೋಶರ್ ನೊಂದಿಗೆ ಉಂಗುರ ಬದಲಿಸಿಕೊಳ್ಳುವ ಮೂಲಕ ಮದುವೆಯಾಗಿದ್ದರು. ಮದುವೆ ಬಳಿಕ 18 ಗಂಟೆಯಲ್ಲಿಯೇ 31 ವರ್ಷದ ಮನಶಾಸ್ತ್ರಜ್ಞೆ ಹೀದರ್ ಸಾವನ್ನಪ್ಪಿದ್ದಾರೆ.

    ಪ್ರೀತಿ ಶುರುವಾಗಿದ್ದು ಹೀಗೆ: ಹೀದರ್ ನನಗೆ 2015ರಲ್ಲಿ ಸ್ವಿಂಗ್ ಡ್ಯಾನ್ಸಿಂಗ್ ಕ್ಲಾಸ್‍ನಲ್ಲಿ ಪರಿಚಯವಾಗಿದ್ದಳು. ಅಂದಿನಿಂದ ನಮ್ಮಿಬ್ಬರ ಒಡನಾಟ ಆರಂಭವಾಗಿತ್ತು. ಡಿಸೆಂಬರ್ 23, 2016ರಂದು ನಾನು ಆಕೆಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಲು ಹೋದಾಗ ಹೀದರ್‍ಗೆ ಕ್ಯಾನ್ಸರ್ ಇರೋದು ಗೊತ್ತಾಯಿತು. ಆದರೂ ನಾನು ವಿಚಲಿತನಾಗದೇ ಪ್ರಪೋಸ್ ಮಾಡಿ ಆಕೆಯನ್ನು ಕುದುರೆ ಗಾಡಿಯೊಂದರಲ್ಲಿ ಕರೆದುಕೊಂಡು ತಿರುಗಾಡಿದೆ. ಇನ್ನು ಮುಂದೆ ಹೀದರ್ ಜೀವನದ ರಸ್ತೆಯಲ್ಲಿ ಒಂಟಿಯಾಗಬಾರದು ಅಂತಾ ನಿರ್ಧರಿಸಿದೆ ಎಂದು ಡೇವಿಡ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಶಸ್ತ್ರ ಚಿಕಿತ್ಸೆ ಮತ್ತು ಕೀಮೊಥೆರಪಿ ಬಳಿಕವೂ ಹೀದರ್ ಸ್ತನ ಕ್ಯಾನ್ಸರ್ ನಾಲ್ಕನೇಯ ಹಂತವನ್ನು ತಲುಪಿದರು. ಕ್ಯಾನ್ಸರ್ ನಾಲ್ಕನೇ ಹಂತಯ ತಲುಪಿದ ಬಳಿಕ ಹೀದರ್ ರನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಹೀದರ್ ಮತ್ತು ಡೇವಿಡ್ ಕುಟುಂಬಸ್ಥರು ಇಬ್ಬರ ಮದುವೆಯನ್ನು 2017ರ ಡಿಸೆಂಬರ್ 30 ರಂದು ನಿಗದಿಗೊಳಿಸಿದ್ದರು. ಆದರೆ ವೈದ್ಯರು ಹೀದರ್ ಬದುಕುಳಿಯುವ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಮದುವೆ ಬೇಗ ನಿಗದಿ ಮಾಡುವಂತೆ ಸೂಚಿಸಿದರು.

    ವೈದ್ಯರ ಸಲಹೆಯ ಮೇರೆಗೆ ಡಿಸೆಂಬರ್ 22ರಂದು ಮದುವೆ ನಿಗದಿ ಮಾಡಲಾಯಿತು. ಹೀದರ್ ಆಸ್ಪತ್ರೆಯ ಬೆಡ್ ಮೇಲೆ ವೈಟ್ ಗೌನ್ ಧರಿಸಿ ವಧುವಾಗಿ ರೆಡಿಯಾದರು. ಇತ್ತ ಡೇವಿಡ್ ಕಪ್ಪು ಬಣ್ಣದ ಸೂಟ್ ಧರಿಸಿ ಆಸ್ಪತ್ರೆಗೆ ಬಂದು ಆಪ್ತ ಬಂಧುಗಳ ಸಮ್ಮುಖದಲ್ಲಿಯೇ ಹೀದರ್ ಬೆರಳಿಗೆ ಉಂಗುರು ತೊಡಿಸಿದರು.

    ದಿನಗಳ ಪುನಾರವರ್ತನೆ: ಡೇವಿಡ್ ಬಹು ದಿನಗಳ ಗೆಳತಿ ಹೀದರ್ ಗೆ ಉಂಗುರು ತೊಡಿಸುವ ವೇಳೆ ನೆರೆದಿದ್ದ ಕುಟುಂಬಸ್ಥರೆಲ್ಲಾ ಭಾವುಕರಾಗಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಮದುವೆ ಆದ ಬಳಿಕ ಹೀದರ್ 18 ಗಂಟೆ ಬಳಿಕ ಅಂದರೆ ಡಿಸೆಂಬರ್ 23 ರಂದು ಸಾವನ್ನಪ್ಪಿದ್ದಾರೆ. ಹೀದರ್ ಅಂತ್ಯ ಸಂಸ್ಕಾರವನ್ನು ಈ ಮೊದಲು ಮದುವೆಗೆ ನಿಶ್ಚಯ ಮಾಡಿದ್ದ ದಿನಾಂಕವಾದ ಡಿಸೆಂಬರ್ 30ರಂದು ಮಾಡಲಾಗಿದೆ.

    https://www.instagram.com/p/BdhBl1hhQ__/?hl=en&taken-by=christina.lee.photography

    https://www.instagram.com/p/Bdei9G4Bzpl/?hl=en&taken-by=christina.lee.photography

    https://www.instagram.com/p/BdbcRApBTbl/?hl=en&taken-by=christina.lee.photography

    https://www.instagram.com/p/BdRM3GNhHUR/?hl=en&taken-by=christina.lee.photography

    https://www.instagram.com/p/BdPAxhzhZxf/?hl=en&taken-by=christina.lee.photography

    https://www.instagram.com/p/BdNwtg9BULG/?hl=en&taken-by=christina.lee.photography

    https://www.instagram.com/p/BdL6NSAhslg/?hl=en&taken-by=christina.lee.photography

  • ಸಾಕಿ ಸಲಹಿದ್ದ ಅಕ್ಕನಿಗೆ ಕ್ಯಾನ್ಸರ್ – ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!

    ಸಾಕಿ ಸಲಹಿದ್ದ ಅಕ್ಕನಿಗೆ ಕ್ಯಾನ್ಸರ್ – ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!

    ಬೆಂಗಳೂರು: ಬ್ಯಾಂಕ್ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಸಮೀಪದ ಪ್ರಶಾಂತ್ ನಗರದಲ್ಲಿ ನಡೆದಿದೆ.

    ಹರ್ಷಿತ್ ಶೆಟ್ಟಿ (32)ಆತ್ಮಹತ್ಯೆಗೆ ಶರಣಾದ ದುರ್ದೈವಿ. ತನ್ನನ್ನು ಸಾಕಿ ಸಲಹಿದ್ದ ಸೋದರಿಗೆ ಕ್ಯಾನ್ಸರ್ ಬಂದಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.

    ಮೃತ ಹರ್ಷಿತ್ ತಾಯಿ 2002ರಲ್ಲಿ, ತಂದೆ 2005ರಲ್ಲಿ ಕ್ಯಾನ್ಸರ್‍ನಿಂದ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ಹರ್ಷಿತ್, ಬಳಿಕ ಅಕ್ಕ ಆಶಾ ಶೆಟ್ಟಿ ಅವರ ಆಶ್ರಯದಲ್ಲೇ ಬೆಳೆದಿದ್ದರು. ಆದರೆ ಇದೀಗ ಅಕ್ಕನಿಗೂ ಕ್ಯಾನ್ಸರ್ ಬಂದಿದ್ದರಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ಹರ್ಷಿತ್ ಮನನೊಂದು ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಕುಂದಾಪುರದ ಹರ್ಷಿತ್, ನಗರದ ದೇವರಬೀಸನಹಳ್ಳಿಯಲ್ಲಿರುವ `ವೆಲ್ಸ್ ಫಾರ್ಗೊ’ ಬ್ಯಾಂಕ್‍ನಲ್ಲಿ ತಾಂತ್ರಿಕ ತಂಡದ ಲೀಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತ ಹರ್ಷಿತ್ ಪತ್ನಿ ರಮ್ಯಾ ಶೆಟ್ಟಿ ಹಾಗೂ ಎರಡು ವರ್ಷದ ಮಗುವಿನ ಜೊತೆ ವಿಜಯನಗರ ಸಮೀಪದ ಪ್ರಶಾಂತ್ ನಗರದಲ್ಲಿ ವಾಸವಾಗಿದ್ದರು.

    ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಟುಂಬದ ಕಣ್ಮಣಿಗೆ ಕೊಂಬು ಕ್ಯಾನ್ಸರ್-ಕಸಾಯಿಖಾನೆಗೆ ಮಾರದೇ ಚಿಕ್ಕೋಡಿ ರೈತನಿಂದ ಆರೈಕೆ

    ಕುಟುಂಬದ ಕಣ್ಮಣಿಗೆ ಕೊಂಬು ಕ್ಯಾನ್ಸರ್-ಕಸಾಯಿಖಾನೆಗೆ ಮಾರದೇ ಚಿಕ್ಕೋಡಿ ರೈತನಿಂದ ಆರೈಕೆ

    ಬೆಳಗಾವಿ: ಇಂದಿನ ಕಾಲದಲ್ಲಿ ರೈತರು ತಾವು ಸಾಕಿದ, ತಮ್ಮ ಗದ್ದೆಗಳಲ್ಲಿ ಉಳುಮೆ ಮಾಡಿದ ಹಸು, ಎತ್ತು, ಹೋರಿಗಳು ಅನಾರೋಗ್ಯಕ್ಕೆ ಒಳಗಾದಾಗ ಕಸಾಯಿಖಾನೆಗೆ ಒಪ್ಪಿಸಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ರೈತ ತಮ್ಮ ಎತ್ತಿಗೆ ಕ್ಯಾನ್ಸರ್ ಕಾಯಿಲೆ ಬಂದ್ರೂ ಸಹ ಅದನ್ನ ತನ್ನ ಮಗುವಿನಂತೆ ಜೋಪಾನ ಮಾಡುತ್ತಿದ್ದಾರೆ.

    ಹೌದು. ಎಲ್ಲ ದನಕರುಗಳ ಹಾಗೆ ಕೊಟ್ಟಿಗೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರೋ ಈ ಎತ್ತುವಿನ ಹೆಸರು ರಾಜ. ಕಳೆದ 18 ವರ್ಷಗಳ ಹಿಂದೆ ಯಾವುದೋ ಒಂದು ಬೇರೆ ಸ್ಥಳದಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮಕ್ಕೆ ಖರೀದಿಸಿದ ಬಳಿಕ ಮಾಲೀಕ ದುಂಡಪ್ಪನ 3 ಎಕರೆ ಗದ್ದೆಯನ್ನು ಉತ್ತಿ ಬಿತ್ತಲು ಸಹಕಾರಿಯಾಗಿದೆ.

    ಕೇವಲ ಕೃಷಿ ಕಾರ್ಯವನ್ನೆ ಮೆಚ್ಚಿಕೊಂಡಿದ್ದ ಮಾಲೀಕನ ಬಡತನದ ಮತ್ತು ಕಷ್ಟದ ಕಾಲದಲ್ಲಿ ಕೂಡ ದುಡಿದು ಸಹಕಾರಿಯಾಗಿದೆ. ಆದ್ರೆ ಕಳೆದ 6 ತಿಂಗಳಿನಿಂದ ಈ ಎತ್ತು ಕೊಂಬು ಕ್ಯಾನ್ಸರ್‍ನಿಂದ ಬಳಲುತ್ತಿದೆ. ಆದ್ರೆ ಮಾಲೀಕ ಬೇರೆ ರೈತರ ಹಾಗೆ ಕಟುಕರಿಗೆ ಕೊಟ್ಚು ಕೈ ತೊಳೆದುಕೊಂಡಿಲ್ಲ. ಹೊರತಾಗಿ ತಮ್ಮ ಮಗನ ಹಾಗೆ ಆರೈಕೆ ಮಾಡುತ್ತಿದ್ದಾರೆ.

    ಸದ್ಯ ರೈತ ಎತ್ತುವಿಗೆ ಆಪರೇಷನ್ ಕೂಡ ಮಾಡಿಸಿದ್ದಾರೆ. ಬಾಯಿ ನೋವಾಗಿ ಮೇವು ತಿನ್ನಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಸ್ವತಃ ಬಾಯಿಗೆ ಮೇವಿಟ್ಟು ಸಲಹುತ್ತಿದ್ದಾರೆ. ನಿತ್ಯ 2 ಬಾರಿ ಸ್ನಾನ ಮಾಡಿಸಿ ಗಾಯಕ್ಕೆ ಔಷಧಿ ಹಚ್ಚುತ್ತಿದ್ದಾರೆ. ಕ್ಯಾನ್ಸರ್ ಬಂದ ಬಳಿಕ ಬೇರೆ ಎರಡು ಎತ್ತುಗಳನ್ನು ಸಹ ತಂದಿದ್ದರು. ಆದ್ರೆ ಈ ಎತ್ತುವಿನ ಆರೈಕೆಗೆ ತೊಂದರೆ ಆಗಬಾರದು ಅಂತ ಆ ಎತ್ತುಗಳನ್ನು ಸಹ ಮಾರಿದ್ರೂ. ಒಟ್ಟಿನಲ್ಲಿ ಮಾಲೀಕನ ಈ ಮಹಾನ್ ಕಾರ್ಯವನ್ನು ಸಮಾಜದ ಪ್ರತಿಯೊಬ್ಬರು ಶ್ಲಾಘಿಸುತ್ತಿದ್ದಾರೆ.

  • ಮಳೆಗೆ ಕಾರಿನ ಮೇಲೆ ಬಿದ್ದ ಮರ- ಕ್ಯಾನ್ಸರ್ ಗೆದ್ದಿದ್ದ ಮಹಿಳೆ ಸಾವು

    ಮಳೆಗೆ ಕಾರಿನ ಮೇಲೆ ಬಿದ್ದ ಮರ- ಕ್ಯಾನ್ಸರ್ ಗೆದ್ದಿದ್ದ ಮಹಿಳೆ ಸಾವು

    ಬೆಂಗಳೂರು: ಶುಕ್ರವಾರ ಸುರಿದ ಧಾರಾಕಾರ ಮಳೆ ಹಿನ್ನಲೆಯಲ್ಲಿ ಕಾರಿನ ಮೇಲೆ ಮರ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ನಗರದ ಮಿನರ್ವ ಸರ್ಕಲ್ ನಲ್ಲಿ ನಡೆದಿದೆ.

    ಹೋಂ ಗಾರ್ಡ್ ಆಗಿದ್ದ ಭಾರತಿ ಕಾರು ಕೆಟ್ಟೋಗಿದೆ ಎಂದು ಹೋಗಿದ್ದರು. ಭಾರತಿಯವರಿಗೆ ಕ್ಯಾನ್ಸರ್ ಇತ್ತು ಹಾಗೂ ಅವರು ಕ್ಯಾನ್ಸರ್ ಗೆದ್ದು ಬಂದಿದ್ದರು. ರಾಚೇನಹಳ್ಳಿಯ ಕೆರೆ ಬಳಿ ಹೋಂ ಗಾರ್ಡ್ ಡ್ಯೂಟಿ ಮಾಡುತ್ತಿದ್ದರು. ಮೂಲತಃ ತುಮಕೂರಿನವರಾಗಿರುವ ಇವರು ಹತ್ತು ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದರು.

    ನನ್ನ ಸೊಸೆ ಕಾರು ರಿಪೇರಿಗೆ ಬಿಟ್ಟಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದು ಹೋಗಿದೆ. ಮೊದಲನೇ ಮಗ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದಾನೆ. ಎರಡನೇ ಮಗ ಸುಂಕದಕಟ್ಟೆಯಲ್ಲಿ ಓದುತ್ತಿದ್ದಾನೆ. ನಮ್ಮವರ ಸಾವಿಗೆ ಬಿಬಿಎಂಪಿಯವರೇ ಕಾರಣ. ಐದು ಲಕ್ಷ ರೂ. ಕೊಟ್ಟು ಕೈ ತೊಳೆದುಕೊಂಡರೆ ಹೇಗೆ? ಬಿಬಿಎಂಪಿ ಮೊದಲೇ ಮರಗಳ ಬಗ್ಗೆ ಗಮನ ಕೊಡಬೇಕಿತ್ತು. ಕುಟುಂಬದ ಉದ್ಧಾರಕ್ಕಾಗಿ ಹೋಂ ಗಾರ್ಡ್ ಕೆಲಸ ಮಾಡುತ್ತಿದ್ದರು. ಸರ್ಕಾರ ದೊಡ್ಡ ಮಗನಿಗೆ ಸರ್ಕಾರಿ ಕೆಲಸ ಕೊಡಬೇಕು ಮತ್ತು ಚಿಕ್ಕ ಮಗನಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಮೃತರ ಸಂಬಂಧಿ ರಾಧಾ ಹೇಳಿದ್ರು.

  • 1 ಚಿಕ್ಕ ಮೊಡವೆಯಿಂದ ಹೇಗಿದ್ದವಳು ಹೇಗಾದ್ಲು ನೋಡಿ!

    1 ಚಿಕ್ಕ ಮೊಡವೆಯಿಂದ ಹೇಗಿದ್ದವಳು ಹೇಗಾದ್ಲು ನೋಡಿ!

    ವಾಷಿಂಗ್ಟನ್: ಅಮೇರಿಕದ ಮಹಿಳೆಯೊಬ್ಬರ ಮೂಗಿನ ಮೇಲೆ ಆಗಿದ್ದ ಒಂದು ಚಿಕ್ಕ ಮೊಡವೆ ಇಂದು ಅವರ ಸೌಂದರ್ಯವನ್ನು ಕಿತ್ತುಕೊಂಡಿದೆ.

    ಅಮೇರಿಕದ ಟೆನ್ನಿಸಿ ನೌಕಸ್ವೀಲ್ ನಿವಾಸಿ 28 ವರ್ಷದ ಮಾರಿಶಾ ಡಾಂಟ್‍ಸನ್ ಮೂರು ವರ್ಷಗಳ ಹಿಂದೆ ಆಗಿರುವ ಒಂದು ಚಿಕ್ಕ ಮೊಡವೆಯಿಂದ ತಮ್ಮ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ. ಮಾರಿಶಾರಿಗೆ ಮೊದಲಿಗೆ ಮೂಗಿನ ತುದಿಯಲ್ಲಿ ಒಂದು ಚಿಕ್ಕ ಮೊಡವೆ ಕಾಣಿಸಿಕೊಂಡಿತ್ತು. ಮೊದಲಿಗೆ ಮಾರಿಶಾ ಸಹ ಅದನ್ನು ನಿರ್ಲಕ್ಷಿಸಿದ್ದರು. ಮುಂದೆ ಅದೇ ಮೊಡವೆ ತುಂಬಾ ದೊಡ್ಡದಾಗಲು ಆರಂಭಿಸಿತು.

    ಭಯಗೊಂಡ ಮಾರಿಶಾ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿದ್ದರು. ಈ ವೇಳೆ ಡಾಕ್ಟರ್ ಸಹ ಚಿಕ್ಕ ಮೊಡವೆ ಎಂದು ತಿಳಿದಿದ್ದರು. ಸ್ಕ್ಯಾನ್ ಮಾಡಿಸಿದಾಗ, ಬರೀ ಮೊಡವೆ ಅಲ್ಲ ಅದು ಭಯಾನಕ ಕ್ಯಾನ್ಸರ್ ಎನ್ನುವುದು ಗೊತ್ತಾಯಿತು.

    ಕ್ಯಾನ್ಸರ್ ಎಂದು ತಿಳಿದ ಬಳಿಕ ಮಾರಿಶಾಗೆ ಬದುಕುಳಿಯುವ ಅವಕಾಶದ ಬಗ್ಗೆ ವೈದ್ಯರು ಶೇ.20ರಷ್ಟು ಮಾತ್ರ ಭರವಸೆಯನ್ನು ನೀಡಿದ್ದರು. ಇಲ್ಲದಿದ್ದರೆ ಮಾರಿಶಾ ಸಾವನ್ನಪ್ಪಬಹುದು ಎಂದು ಹೇಳಿದ್ದರು. ಆದ್ರೆ ಗಟ್ಟಿಗಿತ್ತಿ ಮಾರಿಶಾ ಮಾತ್ರ ಎಲ್ಲಾ ಚಿಕಿತ್ಸೆಗೂ ಸಹಕರಿಸಿ ವೈದ್ಯರ ಸಲಹೆಯನ್ನು ಪಾಲಿಸಿದ ಪರಿಣಾಮ ಈಗ ಗುಣಮುಖರಾಗಿದ್ದಾರೆ.

    ಹಾಳಾಯಿತು ಸೌಂದರ್ಯ: ಕ್ಯಾನ್ಸರ್ ರೋಗದಿಂದ ಚಿಕಿತ್ಸೆ ಪಡೆಯಲು ಆರಂಭಿಸಿದ ಮಾರಿಶಾರ ಮೂಗು ಹೋಗಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ತನ್ನ ರೂಪದ ಮೂಲಕ ಆಕರ್ಷಣೆಯಾಗಿದ್ದ ಮಾರಿಶಾ ಮುಖ ವಿರೂಪಗೊಂಡಿದೆ. ಮೂಗಿನ ನೇರದಿಂದ ತಲೆಯವರೆಗೂ ಸರ್ಜರಿ ಮಾಡಲಾಗಿದ್ದು, ತಮ್ಮ 8 ಹಲ್ಲುಗಳನ್ನು ಮಾರಿಶಾ ಕಳೆದುಕೊಂಡಿದ್ದಾರೆ.

    ಇದನ್ನೂ ಓದಿ: ಕ್ಲಿಯರ್ ಸ್ಕಿನ್‍ಗಾಗಿ ಇಲ್ಲಿವೆ 5 ಬೆಸ್ಟ್ ಟಿಪ್ಸ್

    ಭಯಾನಕ ರೋಗಕ್ಕೆ ತುತ್ತಾದರೂ ಎದೆಗುಂದದ ಮಾರಿಶಾ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ಪಡೆದು, ರೋಗವನ್ನು ಗೆದ್ದಿದ್ದಾರೆ. ಈ ವೇಳೆ ಮಾರಿಶಾ ತನ್ನ ಮೂಗಿನ ಮೇಲಾದ ಪ್ರತಿಯೊಂದು ಬದಲಾವಣೆಯ ಫೋಟೋಗಳನ್ನು ಕ್ಲಿಕಿಸಿಕೊಂಡಿದ್ದಾರೆ. ಸದ್ಯ ಮಾರಿಶಾರ ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಇದನ್ನೂ ಓದಿ: ಸನ್ ಟ್ಯಾನ್ ನಿವಾರಣೆಗೆ ಇಲ್ಲಿವೆ 6 ಸುಲಭ ಟಿಪ್ಸ್

    ಏನಿದು ಕ್ಯಾನ್ಸರ್?:
    squamous cell carcinoma ಎಂದು ಕರೆಯಲ್ಪಡುವ ಈ ಕ್ಯಾನ್ಸರ್ ಅತಿಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡುವರಲ್ಲಿ ಕಂಡುಬರುತ್ತದೆ. ಇದೊಂದು ಚರ್ಮಕ್ಕೆ ಸಂಬಂಧಪಟ್ಟ ಕ್ಯಾನ್ಸರ್ ಆಗಿದೆ. ಇದು ಹೆಚ್ಚಾಗಿ ಮುಖ, ಕುತ್ತಿಗೆ, ಕೈ, ತಲೆಯ ಮೇಲ್ಭಾಗ ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಂದು ವೇಳೆ ಈ ರೋಗ ಬಂದರೆ ಬದುಕುಳಿಯುವ ಚಾನ್ಸ್ ತುಂಬಾ ಕಡಿಮೆಯಿದ್ದು, ಗುಣಮುಖರಾಗ ಬೇಕಾದರೆ ದೀರ್ಘಕಾಲದವರಗೆ ನಿರಂತರವಾಗಿ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ ಎಂದು ಬ್ರಿಟಿಷ್ ಸ್ಕಿನ್ ಫೌಂಡೇಶನ್ ವೈದ್ಯರು ತಿಳಿಸಿದ್ದಾರೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ಕೂಲ್ ಆಗಿರಲು ಸರಳವಾದ ಈ ಟಿಪ್ಸ್ ಫಾಲೋ ಮಾಡಿ 

     

  • 5 ವರ್ಷದ ಪೋರಿಗೆ ಬಾಯ್‍ಫ್ರೆಂಡ್ ಜೊತೆ ಮದ್ವೆ- ಸಾವಿನಂಚಿನ ಬಾಲೆಯ ಆಸೆ ಈಡೇರಿಸಿದ ಪೋಷಕರು

    5 ವರ್ಷದ ಪೋರಿಗೆ ಬಾಯ್‍ಫ್ರೆಂಡ್ ಜೊತೆ ಮದ್ವೆ- ಸಾವಿನಂಚಿನ ಬಾಲೆಯ ಆಸೆ ಈಡೇರಿಸಿದ ಪೋಷಕರು

    ಎಡಿನ್ಬರ್ಗ್(ಸ್ಕಾಟ್ಲೆಂಡ್): 5 ವರ್ಷದ ಬಾಲಕಿಯೊಬ್ಬಳು ತನ್ನ ಬೆಸ್ಟ್ ಫ್ರೆಂಡ್ ಜೊತೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿರೋ ಘಟನೆ ಸ್ಕಾಟ್ಲೆಂಡ್‍ನಲ್ಲಿ ನಡೆದಿದೆ.

    ಕ್ಯಾನ್ಸರ್‍ನಿಂದಾಗಿ ಸಾವಿನಂಚಿನಲ್ಲಿದ್ದ ಐದು ವರ್ಷದ ಈಲೀದ್ ಪ್ಯಾಟರ್ಸನ್ ಎಂಬಾಕೆ ಮದುವೆಯಾದ ಬಾಲಕಿ. ಎರಡು ವರ್ಷ ವಯಸ್ಸಿನಲ್ಲಿರುವಾಗಲಿಂದಲೇ ಬಾಲಕಿ ಕ್ಯಾನ್ಸರ್ ನಿಂದ ಬಳುತ್ತಿದ್ದಳು. ಈಕೆ ತನ್ನ ಗೆಳೆಯ ಹ್ಯಾರಿಸನ್ ಗ್ರಯರ್ ಎಂಬಾತನ್ನು ಮದುವೆಯಾಗುವ ಕನಸು ಹೊಂದಿದ್ದಳು.

    ಚಿಕ್ಕವರಾಗಿದ್ದರೂ ಇಬ್ಬರೂ ಒಬ್ಬರನೊಬ್ಬರು ಮೆಚ್ಚಿಕೊಂಡಿದ್ದರು. ಹ್ಯಾರಿಸನ್ ಕೂಡ ನಾನು ಆಕೆಯನ್ನು ಪ್ರೀತಿಸಿಸುತ್ತಿದ್ದೇನೆ. ಹಾಗೂ ಆಕೆಯನ್ನು ಮದುವೆಯಾಗುವುದಾಗಿ ಹೇಳಿಕೊಳ್ಳುತ್ತಿದ್ದನು ಅಂತಾ ಈಲೀದ್ ತಂದೆ, ತಾಯಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಅಲ್ಲದೇ ಈಲೀದ್ ಕೂಡ ಆಸ್ಪತ್ರೆಯಲ್ಲಿ ದಾದಿಯರ ಜೊತೆ ನನಗೆ ಬಾಯ್ ಫ್ರೆಂಡ್ ಇದ್ದಾನೆ. ನಾವಿಬ್ಬರೂ ಮುಂದೊಂದು ದಿನ ಮದುವೆಯಾಗುತ್ತೇವೆ ಅಂತೆಲ್ಲ ಹೇಳುತ್ತಿದ್ದಳು.

    ಐದು ವರ್ಷದ ಪುಟ್ಟ ಬಾಲಕಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಪತ್ತೆ ಮಾಡುವಷ್ಟರಲ್ಲಿ ಅದು ಇಡೀ ದೇಹಕ್ಕೆ ಹರಡಿತ್ತು. ಹೀಗಾಗಿ ಬಾಲಕಿಯ ಪೋಷಕರು ಕೊನೆಯ ಆಸೆ ಏನೆಂಬುವುದನ್ನು ಕೇಳಿದ್ದಾರೆ. ಈ ಬಾಲಕಿ ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗಬೇಕು. ಇದೇ ನನ್ನ ಕೊನೆಯ ಆಸೆಗಳಲ್ಲಿ ಮೊದಲೆನೆಯದು ಎಂದಿದ್ದಾಳೆ. ಅಂತೆಯೇ ಇಬ್ಬರ ಪೋಷಕರೂ ಒಪ್ಪಿ ಅದ್ಧೂರಿಯಾಗಿಯೇ ಈಲೀದ್ ಬಾಯ್ ಫ್ರೆಂಡ್ 6 ವರ್ಷದ ಹ್ಯಾರಿಸನ್ ಜೊತೆ ಮದುವೆ ಮಾಡಿದ್ದಾರೆ. ಸೈಂಟ್ ಕ್ರಿಸ್ಟೋಫರ್‍ನ ನೆಕ್ಲೇಸ್ ಗಳನ್ನು ವಿನಿಮಯ ಮಾಡಿಕೊಂಡು ಇಬ್ಬರೂ ಮದುವೆಯಾಗಿದ್ದಾರೆ. ಮದುವೆಗೆ ಆಗಮಿಸಿದ ಎಲ್ಲರೂ ಪ್ರೀತಿಪೂರ್ವಕವಾಗಿಯೇ ಇಬ್ಬರಿಗೂ ಶುಭಾಶಯ ತಿಳಿಸಿದ್ದಾರೆ.

    ಈ ಬಗ್ಗೆ ಈಲೀದ್ ತಂದೆ ಗೈಲ್ ಪತ್ರಿಕೆಯೊಂದಕ್ಕೆ ಮಾತನಾಡಿ, ಮಗಳ ಮದುವೆ ನೋಡಿ ನಿಜಕ್ಕೂ ಒಂದು ಬಾರಿ ಕಣ್ಣೀರು ಬಂತು. ಆದ್ರೆ ಕೂಡಲೇ ನಾನು ಅಳಬಾರದು ಅಂದುಕೊಂಡು ಸುಮ್ಮನಾದೆ. ನನ್ನ ಜೀವನದಲ್ಲಿ ಇದೊಂದು ಅದ್ಭುತ ದಿನವಾಗಿದೆ ಅಂತಾ ತಿಳಿಸಿದ್ದಾರೆ.

  • ನನ್ನ ಕಾಲು ಕಟ್ ಮಾಡಿದ್ರೂ ಪರ್ವಾಗಿಲ್ಲ, ದಯವಿಟ್ಟು ಓದಿಸಿ ಅಂತಿರೋ ಗದಗದ ಕರಿಬಸಪ್ಪನಿಗೆ ಬೇಕಿದೆ ನೆರವು

    ನನ್ನ ಕಾಲು ಕಟ್ ಮಾಡಿದ್ರೂ ಪರ್ವಾಗಿಲ್ಲ, ದಯವಿಟ್ಟು ಓದಿಸಿ ಅಂತಿರೋ ಗದಗದ ಕರಿಬಸಪ್ಪನಿಗೆ ಬೇಕಿದೆ ನೆರವು

    ಗದಗ: ಎದ್ದು ನಿಲ್ಲಲಾಗದಂತಹ ಸ್ಥಿತಿಯಲ್ಲಿರುವ ಈತನ ಹೆಸರು ಕರಿಬಸಪ್ಪ. ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ನಿವಾಸಿಯಾಗಿರೋ ಈತ ವರ್ಷದ ಹಿಂದೆ ಕಬ್ಬಡ್ಡಿ ಆಡುವ ವೇಳೆ ಬಿದ್ದು ಮೊಣಕಾಲಿಗೆ ಏಟಾಗಿತ್ತು. ಚಿಕಿತ್ಸೆ ಕೊಡಿಸಿದ್ರೂ ಗುಣವಾಗಲಿಲ್ಲ. ಆಪರೇಷನ್ ಕೂಡಾ ಮಾಡಿಸಿದ್ರು. ಆದ್ರೆ ಯಾವುದೇ ಬದಲಾವಣೆಯಾಗಿಲ್ಲ. ವೈದ್ಯರು ಮೂಳೆ ಕ್ಯಾನ್ಸರ್ ಆಗಿದೆ ಅಂತಾ ಹೇಳಿದ್ದಾರೆ.

    ಸಾಕಷ್ಟು ನೋವಿನಿಂದ ಬಳಲುತ್ತಿರುವ ಕರಿಬಸಪ್ಪ 10 ನೇ ತರಗತಿಗೆ ಶಾಲೆಗೆ ಹೋಗಲಾಗಲಿಲ್ಲ. ಆದ್ರೆ ಛಲ ಬಿಡದೆ ನೋವಿನಲ್ಲೂ ಮನೆಯಲ್ಲಿಯೇ ಓದಿ ಶೇಕಡಾ 90 ರಷ್ಟು ಫಲಿತಾಂಶ ಗಳಿಸಿದ್ದಾನೆ. ಮುಂದೆ ಓದಿ ವೈದ್ಯನಾಗಬೇಕೆಂಬ ಛಲವಿರೋ ಕರಿಬಸಪ್ಪನಿಗೆ ಇದೀಗ ಬಡತನ ಅಡ್ಡಿಯಾಗಿದೆ.

    ಐದು ಜನರಿರೋ ಈ ಕುಟುಂಬಕ್ಕೆ ಇರೋದು ಕೇವಲ ಎರಡು ಎಕರೆ ಜಮೀನು ಮಾತ್ರ. ಬರಗಾಲದಿಂದಾಗಿ ಕೃಷಿಯಿಂದ ಯಾವುದೇ ಗಳಿಕೆಯಿಲ್ಲ. ಕರಿಬಸಪ್ಪನ ಕ್ಯಾನ್ಸರ್ ಚಿಕಿತ್ಸೆಗೆ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಆದ್ರೂ ಗುಣಮುಖವಾಗಿಲ್ಲ. ಬೊನ್ ಕ್ಯಾನ್ಸರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶೀಘ್ರದಲ್ಲೇ ಬಲಗಾಲನ್ನ ತೊಡೆಯ ಭಾಗಕ್ಕೆ ಕಟ್ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ. ಆದ್ರೆ ಕರಿಬಸಪ್ಪ ಮಾತ್ರ ನನ್ನ ಕಾಲು ಹೊದ್ರೂ ಪರವಾಗಿಲ್ಲ ನನ್ನ ದಯವಿಟ್ಟು ಓದಿಸಿ ಅಂತಿದ್ದಾನೆ.

    ಆಟ ಪಾಠದಲ್ಲಿ ಹೆಚ್ಚಿನ ಆಸಕ್ತಿ ತೊರೋದ್ರಿಂದ ಶಿಕ್ಷಕರಿಗೆ ಈತ ನೆಚ್ಚಿನ ವಿದ್ಯಾರ್ಥಿ. ಓದಿನಲ್ಲೂ ಮುಂದಿರೋ ಕರಿಬಸಪ್ಪ ಮುಂದೊಂದು ದಿನ ಮಿನುಗುವ ನಕ್ಷತ್ರದಂತಾಗಲಿ ಅಂತಾ ಜನರು ಬಾಯಿತುಂಬ ಹಾರೈಸುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಚೆನ್ನಾಗಿ ಓದಿ ವೈದ್ಯನಾಗಿ ಬಡವರ ಸೇವೆ ಮಾಡುವ ಬಹುದೊಡ್ಡ ಹೆಬ್ಬಯಕೆ ಇವನದ್ದು. ಉಳ್ಳವರ ಸಹಾಯದಿಂದ ಈ ಪ್ರತಿಭಾವಂತನ ಕನಸು ನನಸಾಗಲಿ ಎಂಬುದು ನಮ್ಮ ಆಶಯ.

    https://www.youtube.com/watch?v=rBQ4Z2CmHoU