Tag: cabbage

  • ಬೆಲೆ ಇಲ್ಲದೆ ಕಂಗಾಲು- ಕೋಸ್ ಬೆಳೆ ನಾಶ ಮಾಡಿದ ರೈತ

    ಬೆಲೆ ಇಲ್ಲದೆ ಕಂಗಾಲು- ಕೋಸ್ ಬೆಳೆ ನಾಶ ಮಾಡಿದ ರೈತ

    ಚಿಕ್ಕಮಗಳೂರು: ಕಳೆದ ಒಂದು ವರ್ಷದಿಂದ ಮೂರು ಬಾರಿ ಎಲೆ ಕೋಸ್ ಬೆಳೆದಿದ್ದು, ಒಂದು ಬಾರಿಯೂ ಲಾಭವಿಲ್ಲ, ಹಾಕಿದ ಬಂಡವಳವೂ ಬಂದಿಲ್ಲ. ಬರೀ ನಷ್ಟವಾಗಿದೆ ಎಂದು ಮನನೊಂದ ರೈತ ಎರಡು ಎಕರೆಯಲ್ಲಿ ಬೆಳೆದ ಕೋಸಿಗೆ ಟ್ರ್ಯಾಕ್ಟರ್ ಹರಿಸಿ ಗೊಬ್ಬರವಾಗಿಸಿದ್ದಾನೆ.

    ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ರೈತ ಬಸವರಾಜ್ ಎರಡು ಎಕರೆ ಹೊಲದಲ್ಲಿ ಕೋಸ್ ಬೆಳೆದಿದ್ದರು. ಕೋಸಿನ ಫಸಲು ಉತ್ತಮವಾಗಿದೆ, ಆದರೆ ಬೆಲೆ ಇಲ್ಲ. ಮಾರ್ಕೆಟ್‍ಗೆ ತಂದರೆ 10 ಕೆಜಿಯ ಚೀಲಕ್ಕೆ 30-40 ರೂಪಾಯಿಗೆ ಕೇಳುತ್ತಾರೆ. ಕೋಸ್ ಕೊಯ್ದ ಕೂಲಿ ಕೊಡೋದಕ್ಕೂ ಆಗಲ್ಲ, ಮತ್ತೆ ಸಾಲ ಮಾಡಬೇಕು. ಹೀಗಾಗಿ ರೈತ ಬಸವರಾಜ್ ಎರಡು ಎಕರೆ ಹೊಲಕ್ಕೂ ಟ್ರ್ಯಾಕ್ಟರ್ ಹೊಡೆದು ಕೋಸ್ ಬೆಳೆ ನಾಶಪಡಿಸಿದ್ದಾರೆ.

    ಬಸವರಾಜ್ ಇದೇ ಮೊದಲ ಬಾರಿ ಕೋಸ್ ಬೆಳೆದಿಲ್ಲ. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಕೋಸ್ ಬೆಳೆದಿದ್ದಾರೆ. ಪ್ರತಿ ಸಲವೂ ಇದೇ ರೀತಿಯಾಗುತ್ತಿದ್ದು, ಲಾಭವಿರಲಿ, ಹಾಕಿದ ಬಂಡವಾಳ ಕೂಡ ಬಂದಿಲ್ಲ. ಪ್ರತಿ ಸಲ ಎಕರೆಗೆ 2-30 ಸಾವಿರದಂತೆ ಖರ್ಚು ಮಾಡಿ ಬೆಳೆದ ರೈತ ನಷ್ಟದಿಂದ ಕೈ ಸುಟ್ಟುಕೊಂಡಿದ್ದಾರೆ. ಕೆಲ ಬಾರಿ ಮಧ್ಯವರ್ತಿಗಳೇ ಹೊಲಗದ್ದೆಗಳಿಗೆ ಬಂದು ಹಣ ನೀಡಿ ಖರೀದಿಸಿ ಹೋಗುತ್ತಿದ್ದರು. ಈಗ ಮಧ್ಯವರ್ತಿಗಳೂ ಬರುತ್ತಿಲ್ಲ. ರೈತರೇ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮನ ಬಂದಂತೆ ದರ ನಿಗದಿಪಡಿಸುತ್ತಾರೆ. ಒಂದು ಚೀಲಕ್ಕೆ 30-40 ರೂಪಾಯಿ ನೀಡಿದರೆ ಹೇಗೆ ಎಂಬುದು ರೈತರ ಆತಂಕವಾಗಿದೆ.

    ಮೂರು-ನಾಲ್ಕು ತಿಂಗಳಿಂದ ನೀರು ಹಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ, ಹಾಕಿದ ಬಂಡವಾಳವೂ ಬಂದಿಲ್ಲ. ಹಣ ಬರದಿದ್ದರೂ ಪರವಾಗಿಲ್ಲ ಭೂಮಿಗೆ ಗೊಬ್ಬರವಾದರೂ ಆಗಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಹೊಲದ ತುಂಬ ಉತ್ತಮ ಸೈಜಿನ ಕೋಸು ನಳನಳಿಸುತ್ತಿದೆ. ಆದರೆ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ.

    ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ, ಹಣವಿಲ್ಲದೆ ಸಾಲ ಮಾಡಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ, ಮತ್ತೆ ಸಾಲದ ಭಯ ಕಾಡಿದೆ. ಈ ಮಧ್ಯೆ ಗಗನ ಮುಟ್ಟಿರೊ ಬೀಜ ಹಾಗೂ ಗೊಬ್ಬರದ ದರ ರೈತರನ್ನ ಮತ್ತಷ್ಟು ಕಂಗಾಲಾಗಿಸಿದೆ.

  • ದಿಢೀರ್ ಬೆಲೆ ಕುಸಿತ- ಮಠಗಳಿಗೆ ರೈತರಿಂದ 300 ಮೂಟೆ ಉಚಿತ ಎಲೆಕೋಸು ರವಾನೆ

    ದಿಢೀರ್ ಬೆಲೆ ಕುಸಿತ- ಮಠಗಳಿಗೆ ರೈತರಿಂದ 300 ಮೂಟೆ ಉಚಿತ ಎಲೆಕೋಸು ರವಾನೆ

    – 30, 40 ಸಾವಿರ ಖರ್ಚು ಮಾಡಿ ಬೆಳೆದಿದ್ದ ರೈತರು
    – 40 ಮಂದಿ ರೈತರಿಂದ ಕೂಲಿಯಿಲ್ಲದೆ ಉಚಿತ ಕಟಾವು

    ನೆಲಮಂಗಲ: ದೇಶದ ಬೆನ್ನಲುಬು ರೈತ ಎನ್ನುತ್ತಾರೆ. ಆದರೆ ರೈತರು ಬೆಳೆದ 300 ಚೀಲ ಕೋಸಿಗೆ ಬೆಂಬಲ ಬೆಲೆಯಿಲ್ಲದೆ ಎಲೆಕೋಸನ್ನು ಮಠ ಮಂದಿರಗಳಿಗೆ ಉಚಿತವಾಗಿ ನೀಡಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರಿನ ರೈತ ಬಾಬು ಮತ್ತು ವಾಸು ಬೆಳೆದ ಎಲೆಕೋಸನ್ನು ಉಚಿತವಾಗಿ ಮಠ-ಮಂದಿರಗಳಿಗೆ ನೀಡುವ ಮೂಲಕ ಸಾರ್ಥಕ ಕಾರ್ಯಕ್ಕೆ ಮುಂದಾಗಿದ್ದಾರೆ. 30 ರಿಂದ 40 ಸಾವಿರ ಖರ್ಚು ಮಾಡಿ ಬೆಳೆದ ಎಲೆಕೋಸಿಗೆ ಬೆಲೆಯಿಲ್ಲಾದಂತಾಗಿದೆ. ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಚೀಲಕ್ಕೆ 70 ರಿಂದ 80 ರೂಪಾಯಿ. ಈ ಹಿನ್ನೆಲೆಯಲ್ಲಿ ರೈತರ ತಂಡ ಮನಸ್ಸು ಮಾಡಿ, ತುಮಕೂರಿನ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಯಡಿಯೂರು, ಧರ್ಮಸ್ಥಳಕ್ಕೆ ರವಾನೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಕೆರೆಕತ್ತಿಗನೂರು ರೈತರ ತಂಡ 300 ಚೀಲ ಎಲೆಕೋಸನ್ನು ಉಚಿತವಾಗಿ ನೀಡಿದ್ದಾರೆ. ಅಲ್ಲದೇ ಎಲೆಕೋಸನ್ನು ಕಟಾವು ಮಾಡಲು ಗ್ರಾಮದ 40 ಮಂದಿ ರೈತರು ಕೂಲಿಯಿಲ್ಲದೇ ಉಚಿತವಾಗಿ ಕೆಲಸ ನಿರ್ವಹಿಸಿದ್ದಾರೆ. ಸ್ಥಳೀಯ ಲಾರಿ ಮಾಲೀಕರೊಬ್ಬರು ಈ ಎಲೆಕೋಸನ್ನು ಸಾಗಿಸುವ ಹೊಣೆ ಹೊತ್ತು ಎಲ್ಲ ಮಠಗಳಿಗೆ ರವಾನೆ ಮಾಡುತ್ತಿದ್ದಾರೆ.

    ಅರ್ಧ ಎಕರೆಯಲ್ಲಿ ಮಗುವಿನಂತೆ ಹಾರೈಕೆ ಮಾಡಿರುವ ಎಲೆಕೋಸಿನ ಬೆಳೆ ಅನ್ನದಾತ ವಾಸು ಮತ್ತು ಕುಟುಂಬಕ್ಕೆ ಕೈ ಸುಡುವಂತೆ ಮಾಡಿದೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತನ ಬದುಕು ದುಸ್ತಾರವಾಗುತ್ತದೆ. ಬೆಳೆದ ತರಕಾರಿಗಳಿಗೂ ಬೆಂಬಲ ಘೋಷಿಸಿ ಎಂದು ಎಲೆಕೋಸು ಬೆಳೆದ ಬಾಬು ಒತ್ತಾಯಿಸಿದ್ದಾರೆ. ಕೃಷಿ ಇಲಾಖೆ ಆಯಾ ಕಾಲಕ್ಕೆ ತಕ್ಕ ಬೆಳೆ ಬೆಳೆಯಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

  • ಎಲೆಕೋಸಿನ ಜೊತೆ ಹಾವು ಬೇಯಿಸಿ ತಿಂದ್ರು- ಅಮ್ಮ ಮಗಳು ಆಸ್ಪತ್ರೆಗೆ ದಾಖಲು

    ಎಲೆಕೋಸಿನ ಜೊತೆ ಹಾವು ಬೇಯಿಸಿ ತಿಂದ್ರು- ಅಮ್ಮ ಮಗಳು ಆಸ್ಪತ್ರೆಗೆ ದಾಖಲು

    ಇಂದೋರ್: ಆಕಸ್ಮಿಕವಾಗಿ ಗುರುವಾರ ರಾತ್ರಿ ಎಲೆಕೋಸಿನ ಜೊತೆ ಪುಟಾಣಿ ಹಾವೊಂದನ್ನ ಬೇಯಿಸಿ ತಿಂದು 35 ವರ್ಷದ ಮಹಿಳೆ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾಗಿರೋ ಘಟನೆ ಇಂದೋರ್‍ನಲ್ಲಿ ನಡೆದಿದೆ.

    ಅಫ್ಜಾನ್ ಇಮಾಮ್ ಹಾಗೂ ಅವರ 15 ವರ್ಷದ ಮಗಳು ಆಮ್ನಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಇಲ್ಲಿನ ಎಮ್‍ವೈ ಆಸ್ಪತ್ರೆ ವೈದ್ಯರು ಇಬ್ಬರ ದೇಹದಲ್ಲಿ ವಿಷದ ಅಂಶ ಇದೆಯೇ ಎಂದು ಪತ್ತೆ ಮಾಡಲು ಹಲವು ಪರೀಕ್ಷೆಗಳನ್ನ ನಡೆಸಿದ್ದಾರೆ.

    ಮಹಿಳೆ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾದಾಗ ವಾಂತಿ ಮಾಡಿಕೊಳ್ಳುತ್ತಿದ್ರು ಎಂದು ಆಸ್ಪತೆಯ ಔಷಧೀಯ ವಿಭಾಗದ ಡಾ ಧಮೇಂದ್ರ ಜಾನ್ವಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ

    ರಾತ್ರಿ ಊಟಕ್ಕೆ ಎಲೆ ಕೋಸು ಬಳಸಿ ಅಡುಗೆ ಮಾಡಿ ತಾಯಿ ಮಗಳು ತಿಂದಿದ್ದಾರೆ. ಎಲೆಕೋಸಿನಲ್ಲಿ ಪುಟ್ಟ ಹಾವು ಸೇರಿಕೊಂಡಿದ್ದನ್ನು ಗಮನಿಸದೇ, ಕತ್ತರಿಸಿ ಬೇಯಿಸಿದ್ದಾರೆ. ಆದ್ರೆ ಊಟ ಮಾಡಿದ ನಂತರ ಉಳಿದ ತರಕಾರಿಯಲ್ಲಿ ಪುಟಾಣಿ ಹಾವಿನ ಚಿಕ್ಕ ಚಿಕ್ಕ ಪೀಸ್‍ಗಳು ಸಿಕ್ಕಿವೆ ಎಂದು ಅವರು ಹೇಳಿದ್ದಾರೆ.

    ಹಾವನ್ನ ಬೇಯಿಸಿ ಸೇವಿಸಿರೋದ್ರಿಂದ ದೇಹದ ಮೇಲೆ ದುಷ್ಪರಿಣಾಮ ಬೀರಿದ್ಯಾ ಎಂದು ತಿಳಿಯಲು ಅಫ್ಜಾನ್ ಹಾಗೂ ಅಮ್ನಾರನ್ನ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಒಂದು ವೇಳೆ ಹಾವಿನ ವಿಷ ರಕ್ತದಲ್ಲಿ ಬರೆತು ದೇಹಕ್ಕೆ ಪಸರಿಸಿದ್ರೆ ತುಂಬಾ ಅಪಾಯಕಾರಿ. ಹೀಗಾಗಿ ಮುಂದಿನ ಎರಡು ಮೂರು ದಿನಗಳವರೆಗೆ ಇಬ್ಬರ ಸ್ಥಿತಿಯ ಬಗ್ಗೆ ಗಮನ ವಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

    https://www.youtube.com/watch?v=23e5Ur5e-qs

    https://www.youtube.com/watch?v=k0FYf5MPdOU