Tag: by elections2019

  • ಅಣ್ಣನ ವಿರುದ್ಧ ಡ್ಯಾನ್ಸ್ ವಿಡಿಯೋ ಬಿಟ್ಟ ಸತೀಶ್

    ಅಣ್ಣನ ವಿರುದ್ಧ ಡ್ಯಾನ್ಸ್ ವಿಡಿಯೋ ಬಿಟ್ಟ ಸತೀಶ್

    ಬೆಳಗಾವಿ: ಡಿಸೆಂಬರ್ 5ರಂದು ನಡೆಯಲಿರುವ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಅಣ್ಣ-ತಮ್ಮಂದಿರ ಕಾಳಗ ಜೋರಾಗಿದೆ. ಅಣ್ಣನ ವಿರುದ್ಧ `ವಿಡಿಯೋ’ ಬಿಟ್ಟು ತಮ್ಮ ಚಮಕ್ ಕೊಟ್ಟಿದ್ದಾರೆ. ಡ್ಯಾನ್ಸ್ ವೀಡಿಯೋ ಮೂಲಕ ರಮೇಶ್ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.

    ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಸ್ಪರ್ಧಿಸಿದ್ರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣದಲ್ಲಿದ್ದಾರೆ. ಹೀಗಾಗಿ ಅಣ್ಣ-ತಮ್ಮಂದಿರು ಮಾತಿನ ಏಟು-ಎದರೇಟು ನೀಡುತ್ತಿದ್ದರು. ಈ ಮಧ್ಯೆ ಸತೀಶ್, ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿ ವಿಭಿನ್ನವಾಗಿ ಅಣಕಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    `ಬಾಲಾ ಬಾಲಾ’ ಹಾಡಿಗೆ ಮೀಮ್ಸ್ ಡ್ಯಾನ್ಸ್ ವೈರಲ್ ಮಾಡಿದ್ದಾರೆ. ಹೀಗೆ ಹೊಸದಾಗಿ ಮಿಮ್ಸ್ ಮಾಡಿ ರಮೇಶ್ ಜಾರಕಿಹೊಳಿ ತಾಳಕ್ಕೆ ಯಾವ ರೀತಿ ಕುಣಿಯಬೇಕೆಂದು ಸತೀಶ್ ಹೇಳಿದ್ದಾರೆ. ಇತ್ತಿಚೇಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಾಡಿಗೆ ರಮೇಶ್ ಕಾರ್ಯವೈಖರಿಯನ್ನು ಹೋಲಿಕೆ ಮಾಡಲಾಗಿದೆ.

    “ಲಖನ್ ನನಗೆ ಮೋಸ ಮಾಡಿದ ಬೆನ್ನಿಗೆ ಚೂರಿ ಹಾಕಿದ ಎಂಬ ರಮೇಶ್ ಮಾತಿಗೆ ತಿರುಗೇಟು ನೀಡಲಾಗಿದೆ. ಲಖನ್ ಬಿಜೆಪಿಯಲ್ಲಿದ್ದು ಕಾಂಗ್ರೆಸ್ಸಿಗೆ ಬಂದಿದ್ದರೆ ಮೋಸ ಅನ್ನಬಹದು. ಲಖನ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ. ರಮೇಶ್ ಜಾರಕಿಹೊಳಿ ಹೇಳಿದಂತೆ ಕುಣಿಯಬೇಕು. ಅಂದಾಗ ಮಾತ್ರ ಆತ ಒಳ್ಳೆಯವ ಮತ್ತು ಪ್ರಶಂಸೆಗೆ ಒಳಗಾಗುತ್ತಾನೆ. ರಮೇಶ್ ಗೆ ವಿರೋಧ ಮಾಡಿದರೆ ಯಾವುದೋ ಒಂದು ಹಣೆ ಪಟ್ಟಿ ಕಟ್ಟುತ್ತಾನೆ. ರಮೇಶ್ ಜಾರಕಿಹೊಳಿ ಹೇಳಿದಂತೆ ಕುಣಿಯಬೇಕು. ಯಾವ ರೀತಿ ಕುಣಿಯಬೇಕು ಅಂದ್ರೆ ಈ ಚಿತ್ರದ ರೀತಿ”. ಹೀಗೆ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿ ಆ ನಂತರ ಮಿಮ್ಸ್ ಗೆ ಲಿಂಕ್ ಮಾಡಲಾಗಿದೆ. ಈ ಮಿಮ್ಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಸರ್ಕಾರ ಕೆಡವಿದವ್ರ ಸೋಲಿಗೆ ಹೆಚ್‍ಡಿಕೆ ಪಣ – ಐವರು ಅನರ್ಹರ ವಿರುದ್ಧ ಪಂಚತಂತ್ರ

    ಸರ್ಕಾರ ಕೆಡವಿದವ್ರ ಸೋಲಿಗೆ ಹೆಚ್‍ಡಿಕೆ ಪಣ – ಐವರು ಅನರ್ಹರ ವಿರುದ್ಧ ಪಂಚತಂತ್ರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅನರ್ಹರ ಪೈಕಿ 5 ಮಂದಿಯನ್ನು ಸೋಲಿಸಲೇ ಬೇಕು ಅನ್ನೋ ಹಟಕ್ಕೆ ಬಿದ್ದಿದ್ದಾರೆ.

    ತಮಗೆ ಕೈ ಕೊಟ್ಟು ಅನರ್ಹರಾದ ತಮ್ಮದೇ ಪಕ್ಷದವರಾಗಿದ್ದ ವಿಶ್ವನಾಥ್, ಗೋಪಾಲಯ್ಯ ಹಾಗೂ ನಾರಾಯಣಗೌಡರು ಕುಮಾರಸ್ವಾಮಿಯವರ ಮೊದಲ ಟಾರ್ಗೆಟ್ ಆಗಿದೆ. ಹೀಗಾಗಿ ಹುಣಸೂರು, ಕೆ.ಆರ್.ಪೇಟೆ ಹಾಗೂ ಮಹಾಲಕ್ಷ್ಮಿ ಲೇಔಟ್ ನಲ್ಲಿ ಈ ಮೂವರನ್ನು ಸೊಲಿಸಲೇಬೇಕು ಎಂದು ಪಣ ತೊಟ್ಟು ತಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಏನೇ ಆಗಲಿ ಈ ಮೂರು ಕ್ಷೆತ್ರಗಳಲ್ಲಿ ನಾವೇ ಗೆಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಗೆಲ್ಲಲಿ ಅವರು ಮಾತ್ರ ಗೆಲ್ಲಬಾರದು ಅಂತ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅಷ್ಟಕ್ಕೆ ಸೀಮಿತವಾಗದೆ ಮಾಜಿ ದೋಸ್ತಿ ಪಕ್ಷದಿಂದ ಬಂಡೆದ್ದು ಹೋದ ಇನ್ನಿಬ್ಬರು ಅನರ್ಹರ ಮೇಲೂ ಕುಮಾರಸ್ವಾಮಿ ಹಟಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಉಪಸಮರ: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

    ಇತ್ತ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಹಾಗೂ ಯಶವಂತಪುರದಲ್ಲಿ ಎಸ್.ಟಿ ಸೋಮಶೇಖರ್ ಗೆಲ್ಲಬಾರದು. ಅದಕ್ಕೆ ಈಗಾಗಲೇ ಹೊಸಕೋಟೆಯಲ್ಲಿ ಹೆಚ್‍ಡಿಕೆ, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೆಗೌಡರಿಗೆ ಬೆಂಬಲ ಕೊಟ್ಟಿದ್ದಾರೆ. ಬಚ್ಚೆಗೌಡರೊಂದಿಗಿನ ಮುನಿಸನ್ನು ಬದಿಗಿಟ್ಟು ಎಂಟಿಬಿ ನಾಗರಾಜ್ ರನ್ನ ಸೋಲಿಸಲೇಬೇಕು ಅನ್ನೋ ಹಟದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಯಶವಂತಪುರದಲ್ಲಿಯೂ ಎಸ್.ಟಿ ಸೋಮಶೇಖರ್ ಸೋಲಿಸಬೇಕು. ಅದಕ್ಕಾಗಿ ಕ್ಷೇತ್ರದ ಪ್ರಮುಖ ನಾಯಕರುಗಳ ಮನೆಗೆ ಸಹ ಭೇಟಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ತಮ್ಮ ಸರ್ಕಾರ ಕೆಡವಲು ಕಾರಣರಾದ ತಮ್ಮದೇ ಪಕ್ಷದ ಶಾಸಕರಾಗಿದ್ದವರ ಬಗೆಗಿನ ಸಿಟ್ಟು ಒಂದೆಡೆಯಾದರೆ, ಮತ್ತೊಂದೆಡೆ ಸರ್ಕಾರ ಕೆಡವಲು ಮಹತ್ವದ ಪಾತ್ರ ವಹಿಸಿದ್ದ ಇನ್ನಿಬ್ಬರು ಸೇರಿ ಒಟ್ಟು 5 ಮಂದಿ ಅನರ್ಹರು ಮಾಜಿ ಸಿಎಂ ಟಾರ್ಗೆಟ್ ಆಗಿರುವುದು ಕುತೂಹಲವಾಗಿದೆ.

  • ತಾರಕಕ್ಕೇರಿತು ಗೋಕಾಕ್ ಬೈ ಎಲೆಕ್ಷನ್ ಫೈಟ್ – ರಮೇಶ್ ಸೋಲಿಸೋಕೆ ಲಕ್ಷ್ಮಿ ಪಣ

    ತಾರಕಕ್ಕೇರಿತು ಗೋಕಾಕ್ ಬೈ ಎಲೆಕ್ಷನ್ ಫೈಟ್ – ರಮೇಶ್ ಸೋಲಿಸೋಕೆ ಲಕ್ಷ್ಮಿ ಪಣ

    – ಅಥಣಿಯಿಂದ ಗೋಕಾಕ್‍ಗೆ ಹೆಬ್ಬಾಳ್ಕರ್ ಶಿಫ್ಟ್

    ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಭಾರೀ ಧೂಳೆಬ್ಬಿಸಿ ಸಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮತ್ತೆ ಬಿಗ್ ವಾರ್ ಆರಂಭವಾಗಿದೆ.

    ಬಿಜೆಪಿ ಸೇರಿದ ಬಳಿಕ ಬಹಿರಂಗ ಭಾಷಣ ಮಾಡಿದ್ದ ರಮೇಶ್ ಮಾತುಗಳು ಲಕ್ಷ್ಮಿಯನ್ನು ಕೆರಳಿಸಿವೆ. ಹೀಗಾಗಿ ನೇರವಾಗಿ ಗೋಕಾಕ್ ಕ್ಷೇತ್ರಕ್ಕೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಅಥಣಿ ಕ್ಷೇತ್ರದಿಂದ ಗೋಕಾಕ್ ಕ್ಷೇತ್ರಕ್ಕೆ ತಮ್ಮ ಉಸ್ತುವಾರಿಯನ್ನು ಬದಲಿಸಿಕೊಂಡ ಲಕ್ಷ್ಮಿ, ಉಪಚುನಾವಣೆಯನ್ನು ಗಂಭೀರವಾಗಿ ಸ್ವಿಕರಿಸಿದ್ದಾರೆ.

    ಕುಂದಾನಗರಿಯ ಬೆಳಗಾವಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ (ಪಿಎಲ್‍ಡಿ) ಬ್ಯಾಂಕ್ ವಿಚಾರವಾಗಿ ಬಡಿದಾಡಿಕೊಂಡ ಗೋಕಾಕ್‍ನ ರಮೇಶ್ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣದ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಹಾವು-ಮುಂಗುಸಿಯಂತಾಗಿದ್ದಾರೆ. ಇದರ ಜೊತೆಗೆ ಇದೀಗ ಸಹೋದರರ ಸವಾಲ್ ಕೂಡ ಸೇರಿಕೊಂಡಿದೆ.

    ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಬೆಳೆಯುತ್ತಾ ದಾಯಾದಿಗಳು ಅನ್ನೋದಕ್ಕೆ ತಾಜಾ ನಿದರ್ಶನ ಗೋಕಾಕ್ ಆಗಿದೆ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಂಪ್ ಆಗಿರೋ ರಮೇಶ್ ಜಾರಕಿಹೊಳಿ ವಿರುದ್ಧ ಇದೀಗ ಸಹೋದರ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಈ ಮೂಲಕ, ರಮೇಶ್‍ಗೆ ಈ ಬಾರಿ ಶತಾಯಗತಾಯ ಸೋಲುಣಿಸಲೇಬೇಕು ಅನ್ನೋ ಕಾಂಗ್ರೆಸ್ಸಿನ ದ್ವೇಷ ಮತ್ತಷ್ಟು ತೀವ್ರವಾಗಿದೆ.

    ಸತೀಶ್ ಜಾರಕಿಹೊಳಿಯ ಸಹೋದರನೂ ಆಗಿರೋ ಲಖನ್‍ಗೆ ಶಕ್ತಿ ತುಂಬೋಕೆ, ರಮೇಶ್ ಮಟ್ಟ ಹಾಕೋಕೆ ಕಾಂಗ್ರೆಸ್ ಲಕ್ಷ್ಮಿ ಹೆಬ್ಬಾಳ್ಕರ್ ಮೂಲಕ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ. ಅಥಣಿಯ ಚುನಾವಣಾ ಸಹ ಉಸ್ತುವಾರಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಲಖನ್‍ಗೆ ಟಿಕೆಟ್ ಘೋಷಿಸಿರುವ ಕೊನೇ ಗಳಿಗೆಯಲ್ಲಿ ಗೋಕಾಕ್‍ಗೆ ಶಿಫ್ಟ್ ಮಾಡಲಾಗಿದೆ. ಇದರಿಂದಾಗಿ, ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಎನ್ನುವ ರಮೇಶ್ ಮತ್ತು ಲಕ್ಷ್ಮೀ ವಿರೋಧಿಗಳಾಗಿ ಗೋಕಾಕ್ ಮತದಾರರ ಬಳಿ ಹೋಗಲಿದ್ದಾರೆ.

    ಒಂದು ಕಾಲದಲ್ಲಿ ಒಡನಾಡಿಗಳಂತಿದ್ದ ರಮೇಶ್-ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ದ್ವೇಷದ ಕಿಚ್ಚೊತ್ತಿಸಿದ್ದು ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಎಲೆಕ್ಷನ್ ಈ ವೇಳೆ, ಪರಸ್ಪರ ಕೆಸರೆರಚಿಕೊಂಡ ಉಭಯ ನಾಯಕರು ವೈಯಕ್ತಿಕ ನಿಂದನೆ ಮಾಡ್ಕೊಂಡಿದ್ದರು.

    ಒಟ್ಟಿನಲ್ಲಿ ಈ ಬಾರಿಯ ಗೋಕಾಕ್ ಎಲೆಕ್ಷನ್ ಬಿಜೆಪಿ-ಕಾಂಗ್ರೆಸ್ ಅನ್ನೋ ಪಕ್ಷಗಳ ಹೋರಾಟಕ್ಕಿಂತ ರಮೇಶ್ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಹೋದರ ಲಖನ್, ಸತೀಶ್ ಜಾರಕಿಹೊಳಿ ಎಂಬಂತಾಗಿದೆ. ಒಟ್ಟಿನಲ್ಲಿ ಗೋಕಾಕ್ ರಣಕಣ ಭಾರೀ ಕುತೂಹಲ ಕೆರಳಿಸಿದೆ.

  • ವಿಶ್ವನಾಥ್ ಮತ್ತೊಮ್ಮೆ ಗೆದ್ರೆ ತಾಲೂಕನ್ನೇ ಮಾರಿಬಿಡ್ತಾರೆ- ಕಾಂಗ್ರೆಸ್ ಅಭ್ಯರ್ಥಿ ಕಿಡಿ

    ವಿಶ್ವನಾಥ್ ಮತ್ತೊಮ್ಮೆ ಗೆದ್ರೆ ತಾಲೂಕನ್ನೇ ಮಾರಿಬಿಡ್ತಾರೆ- ಕಾಂಗ್ರೆಸ್ ಅಭ್ಯರ್ಥಿ ಕಿಡಿ

    ಮೈಸೂರು: ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಮತ್ತೊಮ್ಮೆ ಗೆದ್ದರೆ ಇಡೀ ತಾಲೂಕನ್ನೇ ಮಾರಿಬಿಟ್ಟು ಹೋಗೋ ಪ್ಲಾನ್ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನಾಗಿ ಮಾಡಿದ್ದಕ್ಕೆ ಹುಣಸೂರಿಗೆ ಕಪ್ಪು ಮಸಿ ಬಳಿದಿದ್ದು ಸಾಕು. ಮಂತ್ರಿಯಾಗಿ ಜಿಲ್ಲೆ ಮಾರುವುದಕ್ಕೆ ರೆಡಿಯಾಗಿದ್ದಾರಾ? ಯೋಗೇಶ್ವರ್ ಹೆಸರಿನಲ್ಲಿ ಸಿಕ್ಕಿರುವ ಸೀರೆ ಹಿಂದೆ ವಿಶ್ವನಾಥ್ ಕೈವಾಡವಿದೆ ಎಂದು ಅವರು ಆರೋಪಿಸಿದರು.

    ಯೋಗೇಶ್ವರ್ ಫೋಟೋ ಬದಲು ವಿಶ್ವನಾಥ್ ಫೋಟೋ ಅಂಟಿಸುವ ಸಾಧ್ಯತೆ ಇತ್ತು. ಇಂತಹ ನೂರಾರು ಅಕ್ರಮಗಳಿಗೆ ಹುಣಸೂರಿನಲ್ಲಿ ಸಿದ್ಧತೆಯಾಗಿದೆ. ಉಪಚುನಾವಣೆಗಳಲ್ಲಿ ಇಂತಹ ಅಕ್ರಮ ಎಲ್ಲೆ ಮೀರುತ್ತಿದೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಿ ಎಂದು ಮಂಜುನಾಥ್ ಒತ್ತಾಯಿಸಿದರು.

    30 ಸಾವಿರ ಸೀರೆ ವಶ:
    ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿದ್ದ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್‍ಗೆ ಮತ ನೀಡಿ ಎನ್ನುವ ಕರಪತ್ರಗಳಿದ್ದವು.

    ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಪಚುನಾವಣೆಗೆ ಯಶವಂತಪುರ ಕ್ಷೇತ್ರಕ್ಕಿಲ್ಲ ‘ಕೈ’ ಅಭ್ಯರ್ಥಿ?

    ಉಪಚುನಾವಣೆಗೆ ಯಶವಂತಪುರ ಕ್ಷೇತ್ರಕ್ಕಿಲ್ಲ ‘ಕೈ’ ಅಭ್ಯರ್ಥಿ?

    ಬೆಂಗಳೂರು: ಉಪ ಚುನಾವಣಾ ಕದನಲ್ಲಿ ಪ್ರತಿಷ್ಠಿತ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಲ್ಲಿ ಸೂಕ್ತ ಅಭ್ಯರ್ಥಿಯೇ ಸಿಗುತ್ತಿಲ್ವಾ ಅನ್ನೋ ಪ್ರಶ್ನೆಯೊಂದು ಇದೀಗ ಎದ್ದಿದೆ.

    ಹೌದು. ಯಶವಂತಪುರ ಕ್ಷೇತ್ರದಿಂದ ಮಾಜಿ ಶಾಸಕ ಪ್ರಿಯ ಕೃಷ್ಣರನ್ನ ಅಖಾಡಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು. ಆದರೆ ಕಾಂಗ್ರೆಸ್ ನಾಯಕರ ಸೂಚನೆಗೆ ಪ್ರಿಯಾಕೃಷ್ಣ ಆಗಲ್ಲ ಎಂದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಿಯ ಕೃಷ್ಣರ ತಂದೆ ವಿಜಯ ನಗರ ಶಾಸಕ ಕೃಷ್ಣಪ್ಪರ ಬಳಿ ತಮ್ಮ ಪುತ್ರನನ್ನು ಯಶವಂತಪುರದಿಂದ ಅಖಾಡಕ್ಕೆ ಇಳಿಸುವಂತೆ ಕೈ ನಾಯಕರು ಸೂಚಿಸಿದ್ದಾರೆ. ಆದರೆ ಕೈ ನಾಯಕರ ಸಲಹೆಗೆ ಮಾಜಿ ಶಾಸಕ ಪ್ರಿಯಕೃಷ್ಣ ಒಪ್ಪಿಗೆ ಸೂಚಿಸಿಲ್ಲ.

    ತಂದೆ ಕೃಷ್ಣಪ್ಪ ಬಳಿ ಮಾತನಾಡಿದ ಪ್ರಿಯ ಕೃಷ್ಣ, ಯಶವಂತಪುರ ಕ್ಷೇತ್ರಕ್ಕು ನನಗೂ ಏನು ಸಂಬಂಧ. ಅಲ್ಲದೆ ಅದು ದೊಡ್ಡ ಕ್ಷೇತ್ರ ಅಲ್ಲಿಗೆ ನಾನು ಹೊಸಬ. ಕ್ಷೇತ್ರ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಕೂಡಿದೆ. ಎಲ್ಲಾ ಕಡೆ ಓಡಾಟ ಮಾಡೋದು ಕಷ್ಟ. ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ನಾನೆಲ್ಲಿಗೂ ಹೋಗಲ್ಲ ಎಂದಿದ್ದಾರೆ.

    ಶಾಸಕ ಕೃಷ್ಣಪ್ಪ ಈ ವಿಷಯವನ್ನ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಸೋಮಶೇಖರ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿ ಸೋಮಶೇಖರ್ ರನ್ನ ಸೋಲಿಸುವ ಕೈ ನಾಯಕರ ಪ್ರಯತ್ನಕ್ಕೆ ಸದ್ಯ ಹಿನ್ನಡೆ ಉಂಟಾಗಿದೆ.