Tag: Butterfly

  • ಎದೆ ಮೇಲಿನ ‘ಚಿಟ್ಟೆ’ಗೆ ವಿಶೇಷ ಅರ್ಥ ಕಲ್ಪಿಸಿದ ನಟಿ ಅನನ್ಯ

    ಎದೆ ಮೇಲಿನ ‘ಚಿಟ್ಟೆ’ಗೆ ವಿಶೇಷ ಅರ್ಥ ಕಲ್ಪಿಸಿದ ನಟಿ ಅನನ್ಯ

    ಬಾಲಿವುಡ್ (Bollywood) ಖ್ಯಾತ ನಟಿ ಅನನ್ಯ ಪಾಂಡ್ಯ (Ananya Pandey) ಕಾಸ್ಟ್ಯೂಮ್ (Costume) ವಿಷಯದಲ್ಲಿ ಪಕ್ಕಾ ಕಟ್ಟುನಿಟ್ಟು. ಅವರು ತಮಗಿಷ್ಟದ ಬಟ್ಟೆ ಹೊರತಾಗಿ ಬೇರೆ ಕಾಸ್ಟ್ಯೂಮ್ ಧರಿಸುವುದಿಲ್ಲ. ಈ ಕುರಿತಂತೆ ಹಲವಾರು ಬಾರಿ ಹೇಳಿದ್ದೂ ಇದೆ. ಇತರರಿಗೆ ಮುಜಗರ ಅನಿಸುವಂತಹ ಕಾಸ್ಟ್ಯೂಮ್ ಹಾಕಿಕೊಳ್ಳುವುದಿಲ್ಲ ಎಂದು ಘೋಷಿಸಿ ಆಗಿದೆ. ಆದರೆ, ಎಲ್ಲರೂ ಅಚ್ಚರಿ ಪಡುವಂತಹ ಕಾಸ್ಟ್ಯೂಮ್ ಅನ್ನು ಅನನ್ಯ ಧರಿಸಿದ್ದಾರೆ.

    ಎದೆಯ ಭಾಗವನ್ನು ಚಿಟ್ಟೆಯಿಂದ ಮುಚ್ಚಿಕೊಂಡಿರುವಂತಹ ಕಾಸ್ಟ್ಯೂಮ್ ಅದಾಗಿದ್ದು, ಎದೆ ಮೇಲಿನ ಚಿಟ್ಟೆ (Butterfly) ಕಂಡು ಹಲವರು ಹಲವು ರೀತಿಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಲಕ್ಷಾಂತರ ಜನರು ಲೈಕ್ ಮಾಡಿದ್ದರೆ, ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಈ ಚಿಟ್ಟೆ ಯಾಕೆ ಎಂದು ಕೇಳಲಾದ ಪ್ರಶ್ನೆಗೆ ಅನನ್ಯ ಸೊಗಸಾಗಿ ಉತ್ತರಿಸಿದ್ದಾರೆ.

    ಅನನ್ಯ ಪಾಂಡೆ ಈ ಬಟ್ಟೆಯನ್ನು ಹಾಕಿದ್ದು ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ಶೋ ನಲ್ಲಿ. ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ರಾಹುಲ್ ಮಿಶ್ರಾ. ಪರಿಸರ ಮತ್ತು ಕೀಟಗಳ ಮೇಲಿನ ಪ್ರೀತಿಯಿಂದಾಗಿ ಇಂಥದ್ದೊಂದು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರಂತೆ ರಾಹುಲ್. ಅಳಿವಿನಂಚಿಗೆ ತಳ್ಳಿರುವ ಕೀಟಗಳನ್ನು ಉಳಿಸೋ ಜಾಗೃತಿ ಕೂಡ ಇದಾಗಿದೆಯಂತೆ.

     

    ಪ್ರಾಣಿ, ಪಕ್ಷಿಗಳು ಹಾಗೂ ಕೀಟಗಳ ಬಗ್ಗೆ ಅನನ್ಯ ಯಾವಾಗಲೂ ಕಾಳಜಿ ತೋರಿಸುತ್ತಲೇ ಇರುತ್ತಾರೆ. ಈ ಬಾರಿ ಕಾಸ್ಟ್ಯೂಮ್ ಹಾಕುವ ಮೂಲಕ ಫ್ಯಾಷನ್ ವೇದಿಕೆಯ ಮೇಲೆ ಕಾಳಜಿ ಪ್ರದರ್ಶಿಸಿದ್ದಾರೆ.

  • ಮಳೆಗಾಲದಲ್ಲಿ ಮೋಡಿ ಮಾಡುವ ಅಟ್ಲಾಸ್ ಮೋತ್

    ಮಳೆಗಾಲದಲ್ಲಿ ಮೋಡಿ ಮಾಡುವ ಅಟ್ಲಾಸ್ ಮೋತ್

    – ಉಡುಪಿಯ ಚಿಟ್ಟೆ ಆಸಕ್ತ ನಜೀರ್‌ರಿಂದ ಆನ್‍ಲೈನ್ ಕಾರ್ಯಾಗಾರ

    ಉಡುಪಿ: ದೈತ್ಯಾಕಾರದ ಪತಂಗ ಅಟ್ಲಾಸ್ ಮೋತ್ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಪತ್ತೆಯಾಗುತ್ತಿದೆ. ಬೃಹತ್ ಆಕಾರದಲ್ಲಿರುವ ಈ ಪತಂಗವು ಎಲ್ಲರಲ್ಲೂ ಆಶ್ಚರ್ಯ ಮತ್ತು ಕುತೂಹೂಲ ಮೂಡಿಸುತ್ತದೆ.

    ಬಹುತೇಕ ಮಂದಿ ಇದನ್ನು ಚಿಟ್ಟೆ ಅಥವಾ ಪಾತರಗಿತ್ತಿ ಎಂದೇ ಭಾವಿಸಿಕೊಂಡಿದ್ದಾರೆ. ಇದು ಪತಂಗವೇ ಹೊರತು ಚಿಟ್ಟೆ ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮೊತ್ ಎಂಬುದಾಗಿ ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ತುಂಬಾ ವ್ಯಾತ್ಯಾಸ ಇದೆ. ಪತಂಗವೂ ಹಲವು ವರ್ಷಗಳ ಹಿಂದೆ ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಪತಂಗ ಎಂಬುದಾಗಿ ಗುರುತಿಸಿಕೊಂಡಿತ್ತು. ಅಧ್ಯಯನದಲ್ಲಿ ಇದಕ್ಕಿಂತ ದೊಡ್ಡ ಗಾತ್ರದ ಪತಂಗ ಇರುವುದನ್ನು ಗುರುತಿಸಲಾಗಿದೆ.

    ಈ ಪತಂಗವನ್ನು ಬೃಹತ್ ಆಕಾರದ ಪಂತಗ ಎಂಬುದಾಗಿ ಬರೆಯಬಹುದೇ ಹೊರತು ಪ್ರಪಂಚದ ಅತ್ಯಂತ ದೊಡ್ಡ ಪತಂಗ ಎಂಬುದು ಬರೆಯುವುದು ಸರಿಯಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಈ ಪತಂಗದ ವೈಜ್ಞಾನಿಕ ಹೆಸರು ಅಟ್ಟಾಕಾಸ್ ಅಟ್ಲಾಸ್. ಇದರ ರೆಕ್ಕೆಯ ವಿಸ್ತೀರ್ಣ 24 ಸೆ.ಮೀ. ಆಗಿದೆ. ಈ ಪತಂಗ ಸ್ಥಳೀಯವಾಗಿ ಕಂಡುಬರುವ ಪೇರಳೆ, ಸಂಪಿಗೆ ಸೇರಿದಂತೆ ಕೆಲವೊಂದು ಸೀಮಿತ ಮರಗಳ ಎಲೆಗಳಲ್ಲಿ ಮೊಟ್ಟೆ ಇಡುತ್ತದೆ.

    ಮೊಟ್ಟೆಯಿಂದ ಹೊರ ಬರುವ ಹುಳ ಆ ಮರದ ಎಲೆಗಳನ್ನು ತಿಂದು ಕೋಶವನ್ನು ರಚಿಸುತ್ತದೆ. ಅದರಿಂದ ಹೊರಗೆ ಬರುವ ಗಂಡು ಪತಂಗವು, ಹೆಣ್ಣು ಪತಂಗದೊಂದಿಗೆ ಸೇರಿ ಸಾಯುತ್ತದೆ. ಮುಂದೆ ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ ಎಂದು ಉಡುಪಿಯ ಚಿಟ್ಟೆ ಆಸಕ್ತ, ತಜ್ಞ, ಛಾಯಾಗ್ರಾಹಕ ನಜೀರ್ ಪೊಲ್ಯ ಮಾಹಿತಿ ನೀಡಿದ್ದಾರೆ. ಉಡುಪಿಯಲ್ಲಿ ಅವರು ಚಿಟ್ಟೆಗಳ ಬಗ್ಗೆ ವಿಶೇಷ ಆನ್‍ಲೈನ್ ಕಾರ್ಯಾಗಾರ ನಡೆಸಿ ಮಾಹಿತಿ ನೀಡಿದರು.

    ವಿಶೇಷ ಅಂದರೆ ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಆದುದರಿಂದ ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗ ಆದ ನಂತರ ಯಾವುದನ್ನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲ ಎನರ್ಜಿಯನ್ನು ಹುಳ ಆಗಿರುವಾಗಲೇ ಎಲೆಗಳನ್ನು ತಿಂದು ಇಟ್ಟುಕೊಳ್ಳುತ್ತದೆ. ಇದು ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕಿರುತ್ತದೆ.

    ತನ್ನ ಎನರ್ಜಿಯನ್ನು ಹಾಗೆಯೇ ಉಳಿಸಿಕೊಳ್ಳಲು ಅದು ತುಂಬಾ ಕಡಿಮೆ ಹಾರಾಟ ಮಾಡುತ್ತದೆ. ಹೆಚ್ಚು ಸಮಯ ಎಲೆಯ ಮೇಲೆ ವಿಶ್ರಾಂತಿಯಲ್ಲಿರುತ್ತದೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಹಕ್ಕಿ, ಓತಿ, ಇರುವೆಗಳಿಗೆ ಆಹಾರವಾಗುತ್ತದೆ ಎಂದು ಉಡುಪಿಯ ಚಿಟ್ಟೆ ತಜ್ಞ ನಜೀರ್ ತಿಳಿಸಿದ್ದಾರೆ.

  • ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ

    ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ

    ಕಾರವಾರ: ರಾಜ್ಯದಲ್ಲಿ ಪ್ರಥಮ ಬಾರಿಗೆ ಪತಂಗಗಳ ಗಣತಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ಡಿ. 14 ಹಾಗೂ 15 ರಂದು ಬೆಂಗಳೂರು ಬಟರ್ ಫ್ಲೈ ಕ್ಲಬ್ (ಬಿಬಿಸಿ)ಸಹಕಾರದೊಂದಿಗೆ ಆಯೋಜಿಸಲು ಸಿದ್ಧತೆ ನಡೆದಿದೆ.

    ರಾಜ್ಯದಲ್ಲಿ ಅಂದಾಜು 130 ಪ್ರಭೇದದ ಪತಂಗಗಳಿವೆ. ಆದರೆ, ಕೇರಳ, ತಮಿಳುನಾಡಿನಲ್ಲಿ ಹೊರತುಪಡಿಸಿದರೆ ಇದುವರೆಗೂ ಅವುಗಳ ಸಮೀಕ್ಷೆ ಎಲ್ಲೂ ನಡೆದಿಲ್ಲ.

    ಗಣತಿ ಹೇಗೆ ಮಾಡಲಾಗುತ್ತದೆ?
    ಪ್ರಾಣಿಗಳನ್ನಾದರೆ ಹೆಜ್ಜೆ ಗುರುತು ಹಾಗೂ ಕ್ಯಾಮೆರಾ ಮೂಲಕ ಟ್ರ್ಯಾಪ್ ಮಾಡಿ ಮಾಡಲಾಗುತ್ತದೆ. ಆದರೆ ಚಿಟ್ಟೆಗಳ ಗಣತಿ ಮಾಡಬೇಕಾದರೆ ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಅವುಗಳ ಚಲನ-ವಲನ ಸಮಯ ಹೀಗೆ ಪ್ರತಿಯೊಂದನ್ನೂ ಲೆಕ್ಕ ಹಾಕಿ ಅವುಗಳ ಬಣ್ಣ ಆಕಾರ, ದೇಹದ ಶೈಲಿ ಹೀಗೆ ಪ್ರತಿಯೊಂದರ ಮೇಲೂ ನಿಗಾ ಇಟ್ಟು ಮಾಡಬೇಕಾಗುತ್ತದೆ. ಇದಕ್ಕಾಗಿ ಬೆಂಗಳೂರಿನ ಬಟರ್ ಪ್ಲೈ ಕ್ಲಬ್ ನುರಿತ ತಜ್ಞರು, ಛಾಯಾಗ್ರಾಹಕರನ್ನು ಒಳಗೊಂಡ ತಂಡವನ್ನು ಅರಣ್ಯ ಇಲಾಖೆ ಜೊತೆಗೂಡಿ ಕಾಡಿನಲ್ಲಿ ಸುತ್ತಾಡಲಿದೆ. ಕರ್ನಾಟಕದ ನಿತ್ಯ ಹರಿದ್ವರ್ಣ ಕಾಡುಗಳನ್ನು ಒಳಗೊಂಡಿರುವ ದಾಂಡೇಲಿ ಹುಲಿ ರಕ್ಷಿತಾ ಕಾಡನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಗಣತಿ ಹೇಗೆ ನಡೆಯಬೇಕು, ಯಾವ್ಯಾವ ಕಾರ್ಯಕ್ರಮಗಳು ಇರಬೇಕು ಎಂಬುದು ನಿರ್ಧರಿಸಿ ಕಾರ್ಯಾಚರಣೆಗೆ ಇಳಿಯಲಿದೆ.

    ದಾಂಡೇಲಿ ಪ್ರದೇಶವೇ ಆಯ್ಕೆ ಏಕೆ? ವಿಶೇಷತೆಯೇನು?
    ದಾಂಡೇಲಿ, ಜೊಯಿಡಾ, ಹಳಿಯಾಳ ತಾಲೂಕುಗಳನ್ನೊಳಗೊಂಡ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ. ಇದು 1,300 ಚದರ ಕಿ.ಮೀಯಷ್ಟು ವ್ಯಾಪ್ತಿಯನ್ನು ವಿಸ್ತಾರವಾಗಿ ಹೊಂದಿದೆ. ಇಲ್ಲಿನ ವಾತಾವರಣ ಪರಿಸರ ಸಾಕಷ್ಟು ಪ್ರಭೇದಗಳ ಪತಂಗಗಳಿಗೆ ಆವಾಸ ಸ್ಥಾನ ಕೂಡ ಆಗಿದೆ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ಈ ಪ್ರದೇಶ ಜನರನ್ನು ಸೆಳೆಯುವ ಆಲೋಚನೆಯೂ ಅರಣ್ಯ ಇಲಾಖೆಯ ಉದ್ದೇಶವಾಗಿದೆ.

    ಇಲ್ಲಿರುವ ಪತಂಗಗಳ ಅಂದ, ಚಂದ ನೋಡುವ, ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುವ, ತಜ್ಞರನ್ನು ಕರೆಸಿ ಜೀವನ ಕ್ರಮಗಳ ಬಗ್ಗೆ ಅಧ್ಯಯನ ನಡೆಸುವ ಆಸಕ್ತರಿಗೆ ಇದೊಂದು ಬಟರ್ ಫ್ಲೈ ಉತ್ಸವವಾಗಿ ರೂಪಿಸುವುದು ಅರಣ್ಯ ಇಲಾಖೆಯ ಉದ್ದೇಶ ಕೂಡ ಆಗಿದೆ.

    ದಾಂಡೇಲಿ ಹಾರ್ನ್ ಬಿಲ್ ಸಂರಕ್ಷಿತ ಅರಣ್ಯ ಎಂಬ ಖ್ಯಾತಿ ಕೂಡ ಇದ್ದು, ಪ್ರತಿ ವರ್ಷ ದಾಂಡೇಲಿಯಲ್ಲಿ ಹಾರ್ನ್ ಬಿಲ್ ಉತ್ಸವ ಆಯೋಜಿಸಲಾಗುತ್ತಿದೆ. ಕೈಗಾ ಹಾಗೂ ದಾಂಡೇಲಿಗಳಲ್ಲಿ ಹಲವು ವರ್ಷಗಳಿಂದ ಬರ್ಡ್ ಮ್ಯಾರಾಥಾನ್ ಆಯೋಜಿಸುವ ಮೂಲಕ ಪಕ್ಷಿಗಳ ಪ್ರಭೇದದ ದಾಖಲೀಕರಣ ನಡೆಸಲಾಗುತ್ತಿದೆ.

    ಅದೇ ಮಾದರಿಯಲ್ಲಿ ಬಟರ್ ಫ್ಲೈ ಉತ್ಸವ ಆಯೋಜಿಸಿದ್ದಲ್ಲಿ ದಾಂಡೇಲಿ ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ದೊರಕುವ ಜೊತೆಗೆ ಚಿಟ್ಟೆಗಳ ಬಗ್ಗೆ ಅಧಿಕೃತ ಅಧ್ಯಯನಕ್ಕೂ ಚಾಲನೆ ದೊರೆಯಲಿದೆ ಎಂಬುದು ಅಧಿಕಾರಿಗಳ ಯೋಜನೆಯಾಗಿದೆ.

    ಪತಂಗ ಪಾರ್ಕ್:
    ಜೊಯಿಡಾ, ಕಾರವಾರದಲ್ಲಿ ಅರಣ್ಯ ಇಲಾಖೆ ಚಿಟ್ಟೆ ಪಾರ್ಕ್ ನಿರ್ಮಿಸಿದೆ. ಕೈಗಾದಲ್ಲಿ ಎನ್ ಪಿಸಿಐಎಲ್ ಚಿಟ್ಟೆ ಪಾರ್ಕ್ ಅಭಿವೃದ್ಧಿ ಮಾಡಿದೆ. ಆದರೆ, ಅವುಗಳ ಗಣತಿ, ದಾಖಲೀಕರಣ, ಅಧ್ಯಯನ ಇಲಾಖೆಯಿಂದ ನಡೆದಿಲ್ಲ. ಈ ಗಣತಿ ಚಿಟ್ಟೆ ಪಾರ್ಕ್ ಗಳ ಅಭಿವೃದ್ಧಿಗೂ ಮುಂದೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ.

    ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲ!
    ದಾಂಡೇಲಿಯಲ್ಲಿ ಚಿಟ್ಟೆಗಳ ಗಣತಿ ಕಾರ್ಯ ನಡೆಸಲು ಯೋಜಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಹಣ ಕೂಡ ಮೀಸಲಿಡಲಾಗಿದ್ದು ಕಮಿಟಿ ಸಹ ಮಾಡಿದೆ. ಆದರೆ ಅದರ ಅಧಿಕೃತ ರೂಪುರೇಷೆ ಇದುವರೆಗೂ ಸಿದ್ಧವಾಗಿಲ್ಲ. ಗಣತಿ ಬಗ್ಗೆ ಯಾವುದೇ ಮಾಹಿತಿ ಅರಣ್ಯ ಅಧಿಕಾರಿಗಳಿಗೆ ಕೂಡ ಇಲ್ಲ. ಎಲ್ಲವನ್ನೂ ಬೆಂಗಳೂರಿನ ಬಟರ್ ಪ್ಲೈ ಕ್ಲಬ್ ನವರನ್ನು ಆಶ್ರಯಿಸಿದೆ.

    ಇಲಾಖೆ ಪ್ರಬಾರ ಡಿಎಫ್ ಒ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ಅಧಿಕಾರಿ ವಸಂತ ರೆಡ್ಡಿ ರವರಿಗೆ ವಹಿಸಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪತಂಗಗಳ ಅಧ್ಯಯನಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಆದರೆ ಕೇವಲ ಸರ್ಕಾರದಿಂದ ಬರುವ ಅನುದಾನವನ್ನು ಖರ್ಚು ಮಾಡುವುದಕ್ಕಷ್ಟೇ ಸೀಮಿತವಾಗಿರದಿರಲಿ ಎಂಬುದೇ ನಮ್ಮ ಆಶಯ. ಪ್ರಶಾಂತ್ ಎಸ್.ಎನ್ ಅವರ ಕ್ಯಾಮೆರಾದಲ್ಲಿ ಚಿಟ್ಟೆಗಳು ಸೆರೆಯಾಗಿವೆ.

  • ಪಾರುಲ್ ಯಾದವ್ ಈಗ ಪಾರ್ವತಿ!

    ಪಾರುಲ್ ಯಾದವ್ ಈಗ ಪಾರ್ವತಿ!

    ಬೆಂಗಳೂರು: ಪ್ಯಾರ್ ಗೆ ಆಗ್ಬಿಟೈತೆ ಅಂತ ಹಾಡುತ್ತಲೇ ಕನ್ನಡ ಚಿತ್ರ ಪ್ರೇಕ್ಷಕರ ಮನಸಿಗೆ ಲಗ್ಗೆಯಿಟ್ಟಿದ್ದವರು ಪಾರೂಲ್ ಯಾದವ್. ಪರಭಾಷಾ ನಟಿಯಾದರೂ ಕನ್ನಡಿಗರಿಗೆ ಹತ್ತಿರವಾಗಿದ್ದ ಅವರು ಆ ನಂತರವೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗೊಂದಷ್ಟು ಕಾಲದಿಂದ ಕಣ್ಮರೆಯಾದಂತಿದ್ದ ಪಾರುಲ್ ಈಗ ಪಾರ್ವತಿಯ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋ ಖುಷಿಯಲ್ಲಿದ್ದಾರೆ.

    ರಮೇಶ್ ಅರವಿಂದ್ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿಯೇ ನಿರ್ದೇಶನ ಮಾಡುತ್ತಿರೋ ಚಿತ್ರ ಬಟರ್ ಫ್ಲೈ. ಈ ಮೂರೂ ಭಾಷೆಗಳಲ್ಲಿ ಆಯಾ ಭಾಷೆಯ ನಟಿಯರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಂಗನಾ ಪಾತ್ರವನ್ನು ಪಾರುಲ್ ಯಾದವ್ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಖುದ್ದು ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ವಿಚಾರ ಹಂಚಿಕೊಂಡಿದ್ದಾರೆ. ತಾನು ಪಾರ್ವತಿಯಾಗಿ ಕನ್ನಡದ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿರೋದರ ಬಗ್ಗೆ ಖುಷಿಯಿಂದಲೇ ಹೇಳಿಕೊಂಡಿರೋ ಪಾರುಲ್, ಪಾರ್ವತಿಯಾಗಿ ತಮ್ಮ ಲುಕ್ಕು ಹೇಗಿದೆ ಎಂಬುದಕ್ಕೆ ಒಂದು ಭಾವಚಿತ್ರವನ್ನೂ ಜಾಹೀರು ಮಾಡಿದ್ದಾರೆ.

    ತಮಿಳಿನಲ್ಲಿ ಈ ಪಾತ್ರವನ್ನು ಕಾಜಲ್ ನಿರ್ವಹಿಸಿದ್ದಾರೆ. ತೆಲುಗಿನಲ್ಲಿ ಈ ಪಾತ್ರ ಮಿಲ್ಕಿ ಬ್ಯೂಟಿ ತಮನ್ನಾ ಪಾಲಾಗಿದೆ. ಕನ್ನಡದಲ್ಲಿ ಪಾರುಲ್ ಪಾರ್ವತಿಯಾಗಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ಕೇವಲ ನಾಯಕಿ ಮಾತ್ರವಲ್ಲದೇ ಪಾರುಲ್ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕವೇ ಕನ್ನಡದಲ್ಲಿ ತನ್ನ ಮತ್ತೊಂದು ಇನ್ನಿಂಗ್ಸ್ ಭರ್ಜರಿಯಾಗಿ ಶುರುವಾಗೋ ನಿರೀಕ್ಷೆ ಪಾರುಲ್ ಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಸ್ಟರ್ ಹಿರಣ್ಣಯ್ಯ ಬರೆದ ರಂಗ ಗೀತೆ ಈಗ ಚಿತ್ರಗೀತೆ!

    ಮಾಸ್ಟರ್ ಹಿರಣ್ಣಯ್ಯ ಬರೆದ ರಂಗ ಗೀತೆ ಈಗ ಚಿತ್ರಗೀತೆ!

    ಬೆಂಗಳೂರು: ಹಿಂದಿಯಲ್ಲಿ ಕಂಗನಾ ರಣಾವತ್ ನಟಿಸಿ ಸೂಪರ್ ಹಿಟ್ ಆಗಿದ್ದ ಕ್ವೀನ್ ಚಿತ್ರ ಕನ್ನಡದಲ್ಲಿ ‘ಬಟರ್ ಫ್ಲೈ’ ಆಗಿ ಅವತಾರವೆತ್ತುತ್ತಿದೆ. ಯಾವ ಕಥೆಯನ್ನಾದರೂ ಇಲ್ಲಿನ ನೇಟಿವಿಟಿಗೆ ತಕ್ಕುದಾಗಿ ಒಗ್ಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರೋ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಈ ಚಿತ್ರ ರೆಡಿಯಾಗುತ್ತಿದೆ.

    ಚಿತ್ರೀಕರಣವನ್ನು ಅಂದುಕೊಂಡಂತೆಯೇ ಸುಸೂತ್ರವಾಗಿ ನಡೆಸುತ್ತಿದ್ದರೂ ರಮೇಶ್ ಅವರವಿಂದ್ ಅವರನ್ನು ಭಾರೀ ಚಿಂತೆಗೀಡು ಮಾಡಿದ್ದದ್ದು ವಿಶೇಷವಾದ ಒಂದು ಹಾಡು. ಮೂಲ ಚಿತ್ರ ಕ್ವೀನ್‍ನಲ್ಲಿ ಹಿಂದಿಯ ಹಳೆಯ ಹಾಡೊಂದನ್ನು ವಿಶೇಷವಾಗಿ ಬಳಸಿಕೊಳ್ಳಲಾಗಿತ್ತು. ಆ ಹಾಡು ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿಯೂ ಕೂಡಾ ಈ ಹಾಡನ್ನು ಅದೇ ರೀತಿ ರೂಪಿಸೋ ಕನಸು ಹೊಂದಿದ್ದ ರಮೇಶ್ ಅವರನ್ನು ಬಹು ದಿನದಿಂದಲೂ ಯಾವ ಗೀತೆಯನ್ನು ಆಯ್ಕೆ ಮಾಡಿಕೊಳ್ಳೋದೆಂಬ ಗೊಂದಲ ಕಾಡುತ್ತಿತ್ತಂತೆ. ಕಡೆಗೂ ಅವರು ಇದಕ್ಕಾಗಿ ಪ್ರಸಿದ್ಧ ರಂಗಗೀತೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಅದು ದೇವದಾಸಿ ನಾಟಕಕ್ಕಾಗಿ ಮಾಸ್ಟರ್ ಹಿರಣ್ಣಯ್ಯನವರು ಬರೆದಿದ್ದ ಪ್ರಸಿದ್ಧ ರಂಗಗೀತೆ. ಸುಖವೀವ ಸುರಪಾನವಿದೇ ಸ್ವರ್ಗಸಮಾನನಂ ಎಂಬ ರಂಗಗೀತೆಯನ್ನು ರಮೇಶ್ ಅರವಿಂದ್ ಈ ಚಿತ್ರಕ್ಕೆ ಹೊಸಾ ಥರದಲ್ಲಿ ಬಳಸಿಕೊಂಡಿದ್ದಾರೆ. ಇದಕ್ಕೆ ಕೇವಲ ಅರ್ಧ ದಿನದಲ್ಲಿಯೇ ಕೊರಿಯೋಗ್ರಫಿ ಮಾಡಿರೋ ಗಣೇಶ್ ಆಚಾರ್ಯ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಈ ವಿಶೇಷವಾದ ಹಾಡಿಗೆ ಕುಣಿದಿರುವ ಪಾರುಲ್ ಕೂಡಾ ಇದನ್ನೊಂದು ಗ್ರೇಟ್ ಎಕ್ಸ್ ಪೀರಿಯನ್ಸ್ ಅಂತ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

    ಸದಾ ಹೊಸತೇನನ್ನೋ ಸೃಷ್ಟಿಸಲು ಹಂಬಲಿಸುವ ರಮೇಶ್ ಅರವಿಂದ್ ಅವರು ತಮ್ಮ ಚಿತ್ರಕ್ಕೆ ರಂಗಗೀತೆಯೊಂದನ್ನು ಆರಿಸಿಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ.

  • ಚೆಲುವೆ ಹರ್ಷಿಕಾ ಮೈ ಮೇಲೆ ಚಿಟ್ಟೆಯ ಚಿತ್ತಾರ

    ಚೆಲುವೆ ಹರ್ಷಿಕಾ ಮೈ ಮೇಲೆ ಚಿಟ್ಟೆಯ ಚಿತ್ತಾರ

    ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ತಮ್ಮ ಮೈ ಮೇಲೆ ಸುಂದರವಾದ ಚಿಟ್ಟೆಯ ಚಿತ್ತಾರವನ್ನು ಬಿಡಿಸಿಕೊಂಡಿದ್ದಾರೆ. ಚಿಟ್ಟೆ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕಾಗಿ ಪಾತರಗಿತ್ತಿಯ ಚಿತ್ರದ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

    ಹೊಸದಾಗಿ ಮದುವೆಯಾದ ನವಜೋಡಿ ತಮ್ಮ ಹನಿಮೂನ್ ಬಳಿಕ ಹೊಸ ಜೀವನ ಕಟ್ಟಿಕೊಳ್ಳುವ ಸುಂದರ ಕಥೆಯನ್ನು ಸಿನಿಮಾ ಹೊಂದಿದೆ. `ರಂಗಪ್ಪ ಹೋಗಿ ಬಿಟ್ನಾ’ ಸಿನಿಮಾ ನಿರ್ದೇಶನ ಮಾಡಿದ್ದ ಎಂ.ಎಲ್.ಪ್ರಸನ್ನ ಚಿಟ್ಟೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಚಿತ್ರಕ್ಕಾಗಿ ಹರ್ಷಿಕಾ ಮೈ ಮೇಲೆ ವಸ್ತ್ರ ವಿನ್ಯಾಸಕಿ ಚಂದನಾ ಆರಾಧ್ಯ ಅವರು ಚಿತ್ರ ಬಿಡಿಸಿದ್ದಾರೆ. ಹರ್ಷಿಕಾ ಮೈ ಮೇಲೆ ಚಿಟ್ಟೆ ಚಿತ್ರ ಬಿಡಿಸುವಾಗ ಚಂದನಾ ನರ್ವಸ್ ಆಗಿದ್ದರೂ ಸತತ 4 ಗಂಟೆಗಳ ಪರಿಶ್ರಮದಲ್ಲಿ ಸುಂದರ ಚಿಟ್ಟೆಯನ್ನು ಸೃಷ್ಟಿಸಿದ್ದಾರೆ. ಸುಮಾರು 12 ಗಂಟೆಗಳ ಕಾಲ ಹರ್ಷಿಕಾ ಅವರ ಮೈ ಮೇಲೆ ಚಿಟ್ಟೆಯ ಚಿತ್ರವಿತ್ತು.

    ಮೈ ಮೇಲೆ ಚಿಟ್ಟೆ ಹಾಕಿಸಿಕೊಂಡಾಗ ನನ್ನ ಹೈಸ್ಕೂಲ್ ದಿನಗಳು ನೆನಪಿಗೆ ಬಂದವು. ಚಿಟ್ಟೆಯಲ್ಲಿ ನಾನು ನಟಿಸುತ್ತಿರುವುದು ಸಾಕಷ್ಟು ಖುಷಿಯನ್ನು ಕೊಟ್ಟಿದೆ. ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕೆಂದು ಹಲವು ದಿನಗಳ ಕಾಯುತ್ತಿದ್ದೇವೆ. ಆ ವೇಳೆ ನನಗೆ ದೊರೆತಿದ್ದು `ಚಿಟ್ಟೆ’ ಸಿನಿಮಾ ಎಂದು ಹರ್ಷಿಕಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

    ಚಿತ್ರದಲ್ಲಿ ನಾಯಕ ನಟನಾಗಿ ಯಶಸ್ ಸೂರ್ಯ ನಟಿಸಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣವಿದ್ದು, ಪ್ರಸನ್ನ ಮತ್ತು ಬಿ.ಶ್ರೀನಿವಾಸ ಚಿಟ್ಟೆಗೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳ ಚಿತ್ರೀಕರಣ ಮುಗಿದಿದೆ. ನಿದೇಶಕ ಪ್ರಸನ್ನ ಅವರ ಸಿನಿಮಾಗೆ ಸಂಗೀತ ನೀಡಿದ್ದಾರೆ.

    https://twitter.com/actressharshika/status/925281087449735170