Tag: business

  • 24 ಗಂಟೆನೂ ಬಾರ್ ಓಪನ್- ರಾಜಾರೋಷವಾಗಿ ನಡೀತಿದೆ ಅಕ್ರಮ ಎಣ್ಣೆ ದಂಧೆ

    24 ಗಂಟೆನೂ ಬಾರ್ ಓಪನ್- ರಾಜಾರೋಷವಾಗಿ ನಡೀತಿದೆ ಅಕ್ರಮ ಎಣ್ಣೆ ದಂಧೆ

    ಗದಗ: ಇಲ್ಲಿ ಎಣ್ಣೆ ಅಂಗಡಿಗಳದ್ದೇ ಕಾರುಬಾರು. ನಗರದಲ್ಲಿ ಸುಮಾರು 50ಕ್ಕೂ ಅಧಿಕ ಬಾರ್ & ರೆಸ್ಟೊರೆಂಟ್‍ಗಳಿದ್ದು, ಎಲ್ಲವೂ ಅಕ್ರಮ ಎನ್ನಲಾಗಿದೆ. ಈ ಅಕ್ರಮವನ್ನು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿ ಬಟಾ ಬಯಲು ಮಾಡಿದೆ.

    ಗದಗ-ಬೆಟಗೇರಿ ಅವಳಿ ನಗರದಲ್ಲಿ ಈ ಅಕ್ರಮ ಮದ್ಯ ದಂಧೆ ನಡಿಯುತ್ತಿದೆ. ಆದ್ರೆ ಈ ಬಗ್ಗೆ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ತಿಲ್ಲ. ಹೌದು, ಅಲ್ಲಿ ಎಣ್ಣೆ ಪ್ರಿಯರಿಗೆ ನಿತ್ಯವೂ ಎಣ್ಣೆ ಸ್ನಾನ. ಸರ್ಕಾರ ಬಾರ್‍ಗಳನ್ನು ಬಂದ್ ಮಾಡಿದರೂ ಇಲ್ಲಿ ಮಾತ್ರ ಬಂದ್ ಆಗೋದಿಲ್ಲ. ಇದನ್ನೇ ನೆಪವಿಟ್ಟುಕೊಂಡ ಇಲ್ಲಿನ ಬಾರ್‍ಗಳೂ ಕುಡುಕರನ್ನು ದರೋಡೆ ಮಾಡುತ್ತಿವೆ. ಇದೆಲ್ಲಾ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ಗಪ್-ಚುಪ್ ಆಗಿದ್ದಾರೆ.

    ಅವಳಿ ನಗರದಲ್ಲಿರುವ ಬಾರ್ ಒಂದರ ಸಪ್ಲೈಯರ್ ಜೊತೆ ಮಾತನಾಡಿದಾಗ ಆತ ಅಕ್ರಮಗಳ ಬಗ್ಗೆ ಬಿಚ್ಚಿಟ್ಟಿದ್ದಾನೆ. ಎಲ್ಲಾ ಕಡೆ ಬಾರ್ ಬಂದ್ ಅಂತೆ, ನಿಮ್ಮ ಕಡೆ ಬಿಯರ್ ಸಿಗುತ್ತಾ? ಎಂದು ಕೇಳಿದಕ್ಕೆ ಸಿಗುತ್ತೆ ಸಾರ್ ಬನ್ನಿ ಎಂದು ಹೇಳಿದನು. ಬಳಿಕ ಒಂದು ಎರಡು ಬಿಯರ್ ಕೊಡೋದಿಲ್ಲ. ನಾಲ್ಕೈದರಿಂದ 10 ತಗೊಬೇಕು ಆಗ ಕೊಡ್ತೀವಿ. ಇಲ್ಲಾ ಅಂದ್ರೆ ಕೊಡಲ್ಲ. ಒಂದು ಬಾಟಲ್ ಎಲ್ಲ ಕೊಡೋಕೆ ಅಗಲ್ಲ. ತುಂಬಾನೆ ರಿಸ್ಕ್ ಇದೆ. ಸಿಕ್ಕಿ ಬಿದ್ರೆ ಒಂದು ಲಕ್ಷ ಫೈನ್ ಹಾಕ್ತಾರೆ. ಲೈಸನ್ಸ್ ಕ್ಯಾನ್ಸಲ್ ಮಾಡ್ತಾರೆ. ಆಮೇಲೆ ಯಾರಾದರೂ ಪಿನ್ ಮಾಡಿದರೆ ಸಾಕು ಅಷ್ಟೇ ಗತಿ. ಪೊಲೀಸರು ಬೇರೆ ಇಲ್ಲೆ ಮೇಲೆ ಇದ್ದಾರೆ. ಹಾಗೋ ಹೀಗೋ ಕಷ್ಟಪಟ್ಟು ಕೊಡ್ತೀವಿ. ಆದ್ರೆ ನಿಮ್ಮ ಸ್ನೇಹಿತರಿಗೆ ಯಾರಿಗಾದರೂ ಬೇಕಾ ಕೇಳಿ ಅವರಿಗೂ ತಗೊಂಡು ಹೋಗಿ. ಐದು ಬಿಯರ್ ತಗೊಂಡರೆ ಕೊಡ್ತೀವಿ ಎಂದು ಸಪ್ಲೈಯರ್ ಹೇಳಿದ್ದಾನೆ.

    ಬಳಿಕ ಬಿಯರ್ ಬೆಲೆ ಹಾಗೂ ಅಧಿಕಾರಿಗಳಿಗೆ ಮಾಮೂಲಿ ಕೊಡ್ತೀರ ಎಂದು ಪ್ರಶ್ನಿಸಿದಕ್ಕೆ, ಪ್ರತಿದಿನ 120 ರಿಂದ 130 ರೂಪಾಯಿ ಇರುತ್ತೆ. ಇವತ್ತು ಬಂದ್ ಮಾಡಿದರಲ್ವಾ ಅದಕ್ಕೆ 200 ರಿಂದ 250 ರೂಪಾಯಿಗೆ ಕೊಡ್ತೀವಿ. ಅಬಕಾರಿನವರಿಗೂ ಮಾಮೂಲಿ ಕೊಡುತ್ತೇವೆ. ಸಿವಿಲ್‍ನವರಿಗೂ ಮಾಮೂಲಿ ಕೊಡಬೇಕು. ಆದ್ರ ಸಿವಿಲ್‍ನವರಿಗೆ ಬಹಳ ಹಕ್ಕಿಲ್ಲ, ಆದ್ರೂ ಅವರು ನಮಗೂ ಏನಾದ್ರೂ ಸಿಗುತ್ತೊ ಏನು ಅಂತ ಅಧಿಕಾರ ಚಲಾಯಿಸುತ್ತಾರೆ ಅಂತ ಸಪ್ಲೈಯರ್ ವಿಷಯ ತಿಳಿಸಿದ್ದಾನೆ.

    ಇಷ್ಟೆಲ್ಲಾ ಅಕ್ರಮಗಳು ನಡಿಯುತ್ತಿರೋದು ಗೊತ್ತಿದ್ದರೂ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಇನ್ನಾದರು ಹಿರಿಯ ಅಧಿಕಾರಿಗಳೇ ಕ್ರಮ ತೆಗೆದುಕೊಂಡು ಈ ಅಕ್ರಮಕ್ಕೆ ತಡೆ ಹಾಕಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಕುಟುಂಬಕ್ಕೆ 1 ದಿನದ ದುಡಿಮೆ ನೀಡಿದ್ರು ಗೋಬಿ ಮಂಚೂರಿ ವ್ಯಾಪಾರಿ!

    ಹುತಾತ್ಮ ಯೋಧನ ಕುಟುಂಬಕ್ಕೆ 1 ದಿನದ ದುಡಿಮೆ ನೀಡಿದ್ರು ಗೋಬಿ ಮಂಚೂರಿ ವ್ಯಾಪಾರಿ!

    ಮಂಡ್ಯ: ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ವೀರ ಯೋಧ ಗುರು ಕುಟುಂಬಕ್ಕೆ ಗೋಬಿ ಮಂಚೂರಿ ವ್ಯಾಪಾರಿಯೊಬ್ಬರು ತಮ್ಮ ಒಂದು ದಿನದ ದುಡಿಮೆಯನ್ನು ನೀಡಿ ಗೌರವ ಸಲ್ಲಿಸಿದ್ದಾರೆ.

    ಮಂಡ್ಯದ ಹೊಳಲು ವೃತ್ತದಲ್ಲಿರುವ ವ್ಯಾಪಾರಿ ಉಪ್ಪಿಗೋವಿಂದ ಅವರು ಒಂದು ದಿನದ ದುಡಿಮೆಯನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಗುಡಿಗೆರೆ ಯೋದ ಗುರು.ಎಚ್. ಮಡಿವಾಳ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಂಗಳವಾರ ವ್ಯಾಪಾರ ಆರಂಭಿಸಿದ್ದರು. ಆಹಾರ ಸೇವಿಸಿದ ಯಾರ ಬಳಿಯೂ ಹಣ ಪಡೆಯದೇ ಯೋಧರ ನೆರವಿಗೆ ನಿಮ್ಮ ಕೈಲಾದ ಹಣವನ್ನು ಹುಂಡಿಗೆ ಹಾಕಿ ಎಂದು ಮನವಿ ಮಾಡಿದ್ದರು.

    ಆಹಾರ ಸೇವಿಸಿದವರು ನೀಡಿದ ಹಣ ಸುಮಾರು 10 ಸಾವಿರ ರೂ. ಸಂಗ್ರಹವಾಗಿತ್ತು. ಸಂಗ್ರಹವಾದ ಹಣವನ್ನು ಬುಧವಾರ ಉಪ್ಪಿಗೋವಿಂದ ಅವರು ವೀರ ಯೋಧ ಗುರು ಕುಟುಂಬಕ್ಕೆ ನೀಡಿದ್ದಾರೆ.

    ಇಂದು ಯೋಧರು ತಮ್ಮ ಮಕ್ಕಳು, ಕುಟುಂಬದವರಿಂದ ದೂರ ಇದ್ದು ದೇಶ ಕಾಯುತ್ತಿದ್ದಾರೆ. ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ ಒಂದು ದಿನ ಸಂಪಾದನೆ ಮಾಡಿದ ಹಣವನ್ನು ವೀರ ಯೋಧ ಗುರು ಮೃತರ ಕುಟುಂಬಕ್ಕೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

    ಸರ್ಕಾರ ಎಷ್ಟೇ ಹಣ ಕೊಟ್ಟರು, ಸಾರ್ವಜನಿಕರು ತಮ್ಮ ಕೈಲಾದ ಸಹಾಯ ಮಾಡುವುದರಿಂದ ಮುಂದೆ ಅವರ ಮಕ್ಕಳನ್ನು ಯೋಧರಾಗಿ ಮಾಡಲು ಬಯಸುತ್ತಾರೆ. ಇದನ್ನು ನನ್ನ ಆತ್ಮ ತೃಪ್ತಿಗಾಗಿ ಮಾಡುತ್ತಿದ್ದೇನೆ ಎಂದು ಉಪ್ಪಿಗೋವಿಂದ ಹೇಳಿದರು.

    https://www.youtube.com/watch?v=vw7lk_ueU98

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಗಡಿ ವಿಚಾರಕ್ಕೆ ಗಲಾಟೆ- ಬಡಪಾಯಿ ಮೇಲೆ ಹಲ್ಲೆ ನಡೆಸಿದ ಮಹಿಳಾ ಗ್ಯಾಂಗ್

    ಅಂಗಡಿ ವಿಚಾರಕ್ಕೆ ಗಲಾಟೆ- ಬಡಪಾಯಿ ಮೇಲೆ ಹಲ್ಲೆ ನಡೆಸಿದ ಮಹಿಳಾ ಗ್ಯಾಂಗ್

    ಬೆಂಗಳೂರು: ನಗರದ ಕೆ.ಆರ್.ಮಾರ್ಕೆಟ್ ನಲ್ಲಿ ಅಂಗಡಿ ಇಡುವ ವಿಚಾರಕ್ಕೆ ಮಹಿಳಾ ವ್ಯಾಪಾರಿಗಳ ನಡುವೆ ಘರ್ಷಣೆ ನಡೆದಿದ್ದು, ರಸ್ತೆಬದಿ ಅಂಗಡಿ ಇಡದಂತೆ ಮಹಿಳಾ ಗ್ಯಾಂಗೊಂದು ಬಡಪಾಯಿ ಮೇಲೆ ಹಲ್ಲೆ ನಡೆಸಿದೆ.

    ಘಟನೆಯಲ್ಲಿ ಸೆಲ್ವಿ ಎಂಬವರು ಗಾಯಗೊಂಡಿದ್ದು, ಕಸ್ತೂರಿ ಎಂಬ ಮಹಿಳೆ ತನ್ನ ಗ್ಯಾಂಗ್ ನೊಂದಿಗೆ ಬಂದು ಹಲ್ಲೆ ನಡೆಸಿ ಮನಬಂದಂತೆ ಥಳಿಸಿದ್ದಾರೆ. ಅಂದಹಾಗೆ ಕಳೆದ ಮೂವತ್ತು ವರ್ಷಗಳಿಂದ ಕೆ.ಆರ್.ಮಾರ್ಕೆಟ್ ನ ರಸ್ತೆಬದಿಯಲ್ಲಿ ಸೆಲ್ವಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಈ ಜಾಗ ತನಗೆ ಬೇಕು ಎಂದು ಕಸ್ತೂರಿ ಧಮ್ಕಿ ಹಾಕಿದ್ದಾಳಂತೆ.

    ಮಹಿಳೆಯ ಬೆದರಿಕೆಗೆ ಸೆಲ್ವಿ ಹೆದರದ ಕಾರಣ ನವೆಂಬರ್ 22ರಂದು ಕಸ್ತೂರಿ ಸೇರಿ ಸುಮಾರು ಏಳು ಮಂದಿ ಸೆಲ್ವಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಸೆಲ್ವಿಯವರ ಎಡಗೈ ಮೂಳೆಗೆ ಪೆಟ್ಟಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆದರೆ ಇದುವರೆಗೂ ಪೊಲೀಸರು ಕಸ್ತೂರಿಯನ್ನ ವಿಚಾರಣೆಗೆ ಒಳಪಡಿಸಿಲ್ಲ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಶ್ರೀಮಂತ ಬಿಲ್ಡರ್‌ಗಳಲ್ಲಿ ಬೆಂಗ್ಳೂರಿನ ಮೂವರು ಉದ್ಯಮಿಗಳು! ಯಾರ ಆಸ್ತಿ ಎಷ್ಟಿದೆ?

    ದೇಶದ ಶ್ರೀಮಂತ ಬಿಲ್ಡರ್‌ಗಳಲ್ಲಿ ಬೆಂಗ್ಳೂರಿನ ಮೂವರು ಉದ್ಯಮಿಗಳು! ಯಾರ ಆಸ್ತಿ ಎಷ್ಟಿದೆ?

    ಬೆಂಗಳೂರು: ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆಜೆ ಜಾರ್ಜ್ ನಂಟಿರುವ ಪ್ರತಿಷ್ಠಿತ ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ 2ನೇ ಸ್ಥಾನ ಪಡೆದಿದ್ದಾರೆ.

    ಹುರೂನ್ ರಿಪೋರ್ಟ್ ಹಾಗೂ ಗ್ರೋಹೆ ಇಂಡಿಯಾ ಸಂಸ್ಥೆಗಳು ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಹೆಚ್ಚು ರಿಯಲ್ ಎಸ್ಟೇಟ್ ಉದ್ಯಮಿಗಳು ವಾಸಿಸುವ ಪಟ್ಟಿಯಲ್ಲೂ ಬೆಂಗಳೂರು 2ನೇ ಸ್ಥಾನ ಪಡೆದಿದೆ.

    ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ ಅವರು 23,160 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಮಹಾರಾಷ್ಟ್ರದ ಲೋಧಾ ಗ್ರೂಪ್ ಮಾಲೀಕರಾದ ಮಲಬಾರ್ ಹಿಲ್ಸ್ ಕ್ಷೇತ್ರದ ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ 27,150 ಕೋಟಿ ರೂ. ಆಸ್ತಿಯನ್ನ ಹೊಂದಿದ್ದಾರೆ. ಕಳೆದ ವರ್ಷದ 18,610 ಕೋಟಿ ರೂ. ಆಸ್ತಿಯನ್ನು ಹೊಂದಿದ್ದರು.

    ಉಳಿದಂತೆ ಪಟ್ಟಿಯಲ್ಲಿ ಆರ್ ಎಂಜಿ ರಿಯಲ್ ಎಸ್ಟೇಟ್ ಸಂಸ್ಥೆಯ ಮನೋಜ್ ಮೆಂಡಾ ಹಾಗೂ ರಾಜ್ ಮೆಂಡಾ ಕ್ರಮವಾಗಿ 5,900 ನೇ ಸ್ಥಾನ ಪಡೆದಿದ್ದಾರೆ. ಮನೋಜ್ ಮೆಂಡಾ ಹಾಗೂ ರಾಜ್ ಮೆಂಡಾ ಇಬ್ಬರು 5.900 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ.

    ಟಾಪ್ 10 ಪಟ್ಟಿಯಲ್ಲಿ ಯಾರಿದ್ದಾರೆ?
    ಡಿಎಲ್‍ಎಫ್ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕರಾದ ಜಿತೇಂದ್ರ ವಿರ್ವಾನಿ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದು, 23,160 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. 4 ಮತ್ತು ಐದನೇ ಸ್ಥಾನದಲ್ಲಿ ಕೇ ರಹೇಜಾ ಸಂಸ್ಥೆಯ ಚಂದ್ರು ರಹೇಜಾ ಹಾಗೂ ಒಬೇರಾಯ್ ರಿಯಾಲಿಟಿ ಸಂಸ್ಥೆಯ ವಿಕಾಸ್ ಓಬೇರಾಯ್ ಸ್ಥಾನ ಪಡೆದಿದ್ದು, ಕ್ರಮವಾಗಿ 14,420 ಕೋಟಿ ರೂ. ಹಾಗೂ 10,980 ಕೋಟಿ ರೂ ಆಸ್ತಿಯನ್ನ ಹೊಂದಿದ್ದಾರೆ.

    ಹಿರಾನಂದನಿ ಸಂಸ್ಥೆಯ ಮಾಲೀಕರಾದ ನಿರಂಜನ್ ಹಿರಾನಂದನಿ, ಸುರೇಂದ್ರ ಹಿರಾನಂದಿನಿ ತಲಾ 7,880 ಕೋಟಿ ಆಸ್ತಿಯೊಂದಿಗೆ 6 ಮತ್ತು 7 ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ 8ನೇ ಸ್ಥಾನದಲ್ಲಿ ಪಿರಾಮಾಲ್ ಸಂಸ್ಥೆಯ ಮಾಲೀಕರಾದ ಅಜಯ್ ಪಿರಾಮಾಲ್ ಮತ್ತು ಕುಟುಂಬ 6,380 ಕೋಟಿ ರೂ. ಆಸ್ತಿಯನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫಸ್ಟ್ ಟೈಂ, ನಮ್ಮ ಜೊತೆ ವ್ಯಾಪಾರ ಒಪ್ಪಂದ ನಡೆಸುವಂತೆ ಭಾರತದಿಂದ ಕರೆ ಬಂದಿತ್ತು: ಟ್ರಂಪ್

    ಫಸ್ಟ್ ಟೈಂ, ನಮ್ಮ ಜೊತೆ ವ್ಯಾಪಾರ ಒಪ್ಪಂದ ನಡೆಸುವಂತೆ ಭಾರತದಿಂದ ಕರೆ ಬಂದಿತ್ತು: ಟ್ರಂಪ್

    ವಾಷಿಂಗ್ಟನ್: ನಾವು ಕಠಿಣ ನಿರ್ಧಾರ ತೆಗೆದುಕೊಂಡಿದ್ದರೂ ನಮ್ಮ ಜೊತೆ ವ್ಯವಹಾರ ಒಪ್ಪಂದ ನಡೆಸುವಂತೆ ಭಾರತದಿಂದ ಮೊದಲ ಬಾರಿಗೆ ನಮಗೆ ದೂರವಾಣಿ ಕರೆ ಬಂದಿತ್ತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

    ಸೌತ್ ಡೊಕೊಟದ ನಡೆದ ಜಾಯಿಂಟ್ ಫಂಡ್‍ರೈಸಿಂಗ್ ಕಮಿಟಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಅಮೆರಿಕ ಸಾಗುತ್ತಿರುವ ಆರ್ಥಿಕ ಪಥದಲ್ಲೇ ಭಾರತ ಕೂಡ ಮುಂದುವರಿಸಲು ಬಯಸಿದೆ. ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಭಾರತ ಕಾಯುತ್ತಿದ್ದು, ಈ ಸಂಬಂಧಕ್ಕಾಗಿ ದೂರವಾಣಿ ಕರೆ ಮಾಡಿತ್ತು. ಆದರೆ ಭಾರತದಿಂದ ಯಾರು ಕರೆ ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸದೇ, ಹೇಳುವ ಸಮಯ ಬಂದಾಗ ಎಲ್ಲಾ ಹೇಳುತ್ತೇನೆ ಎಂದು ತಿಳಿಸಿದರು.

    ನನ್ನನ್ನೂ ಎಲ್ಲರೂ ಗೌರವಿಸುತ್ತಾರೆ, ಹೀಗಾಗಿ ನಾನೂ ಎಲ್ಲರನ್ನೂ ಗೌರವಿಸುತ್ತೇನೆ. ಅದು ಜಪಾನ್ ಪ್ರಧಾನಿ ಅಬೆ ಆಗಲಿ ಅಥವಾ ಭಾರತದ ಪ್ರಧಾನಿ ನರೇಂದ್ರ ಮೋದಿಯೇ ಆಗಲಿ ಎಲ್ಲರನ್ನೂ ನಾನು ಗೌರವಿಸುತ್ತೇನೆ. ಭಾರತವಲ್ಲದೇ ಜಪಾನ್ ಕೂಡ ನಮ್ಮೊಂದಿಗೆ ವ್ಯವಹರಿಸಲು ಚರ್ಚಿಸುತ್ತಿರುವಾಗಿ ಹೇಳಿದರು.

    ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಗಣಿಸಿದ್ದು, ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ ಮತ್ತು ಚೀನಾಕ್ಕೆ ನೀಡುತ್ತಿದ್ದ ಸಬ್ಸಿಡಿಗಳನ್ನು ನಿಲ್ಲಿಸಲು ಮುಂದಾಗಿದೆ.

    ಭಾರತದ ವಸ್ತುಗಳ ಮೇಲೆ ಅಮೆರಿಕ ಅಮದು ಸುಂಕವನ್ನು ಹೆಚ್ಚಿಸಿದ್ದಕ್ಕೆ ಭಾರತವೂ ಅಮೆರಿಕದ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಂಪ್ ಭಾರತದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದರು. ಇದರ ಬೆನ್ನಲ್ಲೇ ಅಮೆರಿಕವು ಇರಾನ್ ವಿರುದ್ಧ ಮುಂಬರುವ ನವೆಂಬರ್‍ನಿಂದ ಅನ್ವಯವಾಗುವಂತೆ ನಿರ್ಬಂಧಗಳನ್ನು ಹೇರಿದೆ. ಚೀನಾ, ಅಮೆರಿಕ ನಡುವಿನ ವ್ಯಾಪಾರ ಸಮರದಿಂದ ಡಾಲರ್ ಬೆಲೆ ವೃದ್ಧಿಸುತ್ತಿದ್ದರೆ, ರೂಪಾಯಿ ಮೌಲ್ಯ ಕುಸಿಯುತ್ತಿದೆ. ಇದರ ಬೆನ್ನಲ್ಲೇ ಇರಾನ್ ವಿರುದ್ಧದ ನಿರ್ಬಂಧ ಕೂಡ ತೈಲ ದರ ಏರಿಕೆಗೆ ಪ್ರಭಾವ ಬೀರಿದೆ. ಎರಡು ದೇಶಗಳ ನಡುವೆ ವ್ಯಾಪಾರ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನೀಡಿದ್ದು ಈಗ ಮತ್ತಷ್ಟು ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಂದಿಗಿರಿಧಾಮದಲ್ಲಿದ್ದ ಅಕ್ರಮ ನಂದಿಫುಡ್ ಕೋರ್ಟ್ ಎತ್ತಂಗಡಿ

    ನಂದಿಗಿರಿಧಾಮದಲ್ಲಿದ್ದ ಅಕ್ರಮ ನಂದಿಫುಡ್ ಕೋರ್ಟ್ ಎತ್ತಂಗಡಿ

    ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ನಂದಿಫುಡ್ ಕೋರ್ಟ್ ಅಂಗಡಿಯನ್ನು ಅಧಿಕಾರಿಗಳು ತೆರುವುಗೊಳಿಸಿದ್ದಾರೆ.

    ವಿಶ್ವ ಪ್ರಸಿದ್ಧ ಪ್ರವಾಸಿ ತಾಣವೊಂದರಲ್ಲಿ ಸರ್ಕಾರಿ ಹೊಟೇಲ್ ಕಟ್ಟಡ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನೊಬ್ಬ ಗುತ್ತಿಗೆ ಅವಧಿ ಮುಗಿದು 15 ತಿಂಗಳು ಕಳೆದರೂ ಸ್ಥಳ ಖಾಲಿ ಮಾಡದೇ ದಬ್ಬಾಳಿಕೆ ನಡೆಸುತ್ತಾ ವ್ಯಾಪಾರ ನಡೆಸುತ್ತಿದ್ದ. ಕೊನೆಗೆ ಹೈಕೋರ್ಟ್ ಆದೇಶದ ಮೆರೆಗೆ ಅಧಿಕಾರಿಗಳು ನಂದಿಫುಡ್ ಕೋರ್ಟ್ ನಲ್ಲಿದ್ದ ಸರಕು ಸಾಮಾನುಗಳನ್ನು ಹೊರಕ್ಕೆ ಎಸೆದು ಖಾಲಿ ಮಾಡಿಸಿದ್ದಾರೆ.

    ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ನಂದಿಬೆಟ್ಟ ಸುಂದರ, ತಂಪಾದ ವಾತಾವರಣಕ್ಕೆ ಹೆಸರು ಪಡೆದಿದೆ. ಅದ್ದರಿಂದ ಇಲ್ಲಿನ ಗಿರಿಧಾಮಕ್ಕೆ ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶದ ಮಂದಿ ಭೇಟಿ ನೀಡುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ನಂದಿಫುಡ್ ಕೋರ್ಟ್ ಎಂಬ ಹೋಟೆಲ್ ಆರಂಭಿಸಿ ಗುತ್ತಿಗೆ ನೀಡಿತ್ತು. ಆದರೆ 2017 ರಲ್ಲಿಯೇ ಗುತ್ತಿಗೆ ಅವಧಿ ಮುಗಿದರು ಹೋಟೆಲ್ ಮಾಲೀಕ ಸ್ಥಳ ಬಿಟ್ಟುಕೊಡದೆ ಅಧಿಕಾರಿಗಳ ವಿರುದ್ಧವೇ ದೌರ್ಜನ್ಯ ನಡೆಸುತ್ತಿದ್ದ.

    ಸರ್ಕಾರಿ ನಿಯಮಗಳ ಅನ್ವಯ ಇಲಾಖೆ ನೂತನ ಗುತ್ತಿಗೆದಾರಿಗೆ ಅಂಗಡಿ ನೀಡಿತ್ತು. ಆದರೆ ಸ್ಥಳ ಖಾಲಿ ಮಾಡದ ಕಾರಣ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೊರ್ಟ್ ಅಧಿಕಾರಿಗಳಿಗೆ ನೋಟಿಸ್ ನೀಡಿ ತೆರವಿಗೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆಯಂತೆ ಹೋಟಲ್ ನಲ್ಲಿದ್ದ ಸರಕು ಸಾಮಾನುಗಳನ್ನು ಖಾಲಿ ಮಾಡಿದ್ದಾರೆ.

    ದೇಶ-ವಿಧೇಶಗಳಿಂದ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರಿಂದ, ಮನಸ್ಸೊ ಇಚ್ಚೆ ಹಣ ವಸೂಲಿ ಮಾಡುತ್ತಾ ಹೋಟೆಲ್ ಉದ್ಯಮದಲ್ಲಿ ಕೈತುಂಬ ಕಾಸು ಮಾಡುತ್ತಿದ್ದ ಅಕ್ರಮ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಜೈಪುರ: ರಾಜಸ್ಥಾನದಲ್ಲಿ ಈಗ ಗೋಮೂತ್ರದ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಆದಾಯದ ಮೂಲವಾಗಿ ಪರಿವರ್ತನೆಯಾಗಿದೆ.

    ರಾಜಸ್ಥಾನದ ರೈತರು ಗಿರ್ ಮತ್ತು ತಾಪಾರ್ಕರ್ ಎಂಬ ಪ್ರಮುಖವಾದ ತಳಿಯ ಗೋಮೂತ್ರವನ್ನು ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಗೆ 15 ರೂ. ನಿಂದ 30 ರೂ. ನಂತೆ ಮಾರಾಟ ಮಾಡುತ್ತಿದ್ದರೆ, ಹಾಲನ್ನು 22 ರೂ. ನಿಂದ 25 ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ.

    2 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಜೈಪುರದ ಕೈಲೇಶ್ ಗುಜ್ಜರ್ ಪ್ರತಿಕ್ರಿಯಿಸಿ, ಗೋಮೂತ್ರ ಮಾರಾಟದಿಂದಾಗಿ ನನ್ನ ಆದಾಯ 30% ಹೆಚ್ಚಾಗಿದೆ. ಮಾರಾಟದಿಂದಾಗಿ ಈಗ ನನಗೆ ಅದೃಷ್ಟ ಬಂದಿದ್ದು, ಗೋಮೂತ್ರ ಸಂಗ್ರಹಿಸಲು ರಾತ್ರಿಯಿಡಿ ಹಸುವಿನ ಕೊಟ್ಟಿಗೆಯಲ್ಲೇ ಎಚ್ಚರವಾಗಿರಬೇಕಾಗುತ್ತದೆ. ದನ ನಮ್ಮ ತಾಯಿ, ಹಾಗಾಗಿ ರಾತ್ರಿಯಿಡಿ ಗೋಮೂತ್ರಕ್ಕಾಗಿ ಕೊಟ್ಟಿಗೆಯಲ್ಲಿ ಕಾಯುವುದು ನನಗೆ ಬೇಸರವಾಗುವುದಿಲ್ಲ ಎಂದು ಹೇಳಿದ್ದಾರೆ.

    ಓಂ ಪ್ರಕಾಶ್ ಮೀನಾ ಪ್ರತಿಕ್ರಿಯಿಸಿ, ಗಿರ್ ತಳಿಯ ಹಸುವಿನ ಮೂತ್ರವನ್ನು ನಾನು ಮಾರಾಟ ಮಾಡುತ್ತಿದ್ದೇನೆ. ಲೀಟರ್ ಒಂದಕ್ಕೆ 30 ರಿಂದ 50 ರೂಪಾಯಿ ಸಿಗುತ್ತಿದೆ ಎಂದು ಹೇಳಿದರು. ಇದನ್ನು ಓದಿ: ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಬೇಡಿಕೆ ಯಾಕೆ?
    ಗೋಮೂತ್ರವನ್ನು ಹೆಚ್ಚಾಗಿ ರೈತರು ತಮ್ಮ ಕೃಷಿಯನ್ನು ಹಾಳು ಮಾಡುವ ಕೀಟಗಳನ್ನು ತಡೆಗಟ್ಟಲು ಬೆಳೆಗಳ ಮೇಲೆ ಸಿಂಪಡಿಸುತ್ತಾರೆ. ಅಷ್ಟೇ ಅಲ್ಲದೇ ಯಜ್ಞ, ಪಂಚಗವ್ಯಗಳಲ್ಲಿ ಮತ್ತು ಧಾರ್ಮಿಕ ಆಚರಣೆ ಕಾರ್ಯಕ್ರಮಗಳಲ್ಲಿ ಬಳಸುವುದರಿಂದ ಬೇಡಿಕೆ ಹೆಚ್ಚಾಗಿದೆ.

    ಉದಯಪುರದ ಸರ್ಕಾರಿ ಮಹಾರಾಣಾ ಪ್ರತಾಪ್ ಕೃಷಿ ವಿಶ್ವವಿದ್ಯಾಲಯ, ಜೈವಿಕ ಕೃಷಿ ಯೋಜನೆಗಾಗಿ ಪ್ರತಿ ತಿಂಗಳಿಗೂ 300 ರಿಂದ 500 ಲೀಟರ್ ನಷ್ಟು ಗೋಮೂತ್ರವನ್ನು ಬಳಸುತ್ತದೆ. ಪ್ರತಿ ತಿಂಗಳು 15,000-20,000 ರೂಪಾಯಿಯ ಮೌಲ್ಯದಷ್ಟು ಗೋಮೂತ್ರವನ್ನು ಖರೀದಿಸುತ್ತದೆ ಎಂದು ಉಪಕುಲಪತಿ ಉಮಾ ಶಂಕರ್ ಹೇಳಿದ್ದಾರೆ.

  • ಒಂದೇ ಕುಟುಂಬದ 6 ಜನರ ಸಾಮೂಹಿಕ ಆತ್ಮಹತ್ಯೆ

    ಒಂದೇ ಕುಟುಂಬದ 6 ಜನರ ಸಾಮೂಹಿಕ ಆತ್ಮಹತ್ಯೆ

    ರಾಂಚಿ: ಒಂದೇ ಕುಟುಂಬದ 5 ಜನರು ನೇಣು ಹಾಕಿಕೊಂಡು ಮತ್ತೊಬ್ಬರು ಮನೆ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ನಡೆದಿದೆ.

    ಮಾರವಾಡಿ ಕುಟುಂಬದ ಮಾಹಾವೀರ್ ಮಹೇಶ್ವರಿ (70), ಪತ್ನಿ ಕಿರಣ್ ಮಹೇಶ್ವರಿ (60), ಪುತ್ರ ನರೇಶ್ ಅಗರರ್ವಾಲ್ (40), ಪ್ರೀತಿ ಅಗರ್ವಾಲ್ (38), ಇವರ ಮಕ್ಕಳಾದ ಅಮನ್ (8) ಹಾಗೂ ಅಂಜಲಿ (6) ಮೃತರು.

    ಮನೆಯ ಮೇಲ್ಛಾವಣಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಮನೆಯನ್ನು ಪರಿಶೀಲನೆ ಮಾಡುವ ಐವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

    ಮೃತರ ಮನೆಯಲ್ಲಿ ಆತ್ಮಹತ್ಯೆ ಪತ್ರ ಲಭಿಸಿದೆ. ಮೃತರ ಕುಟುಂಬವು ಒಣ ಹಣ್ಣಿನ (ಡ್ರೈ ಫ್ರುಟ್ಸ್) ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಸಾಲ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಕೌಟುಂಬಿಕ ಕಲಹವೂ ಇತ್ತು ಎಂದು ವರದಿಯಾಗಿದೆ.

  • ಸ್ಯಾಂಡಲ್‍ವುಡ್ ಬಾಸ್ ಹೆಸರಲ್ಲಿ 10 ಕೋಟಿ ರೂ. ವಂಚನೆ!

    ಸ್ಯಾಂಡಲ್‍ವುಡ್ ಬಾಸ್ ಹೆಸರಲ್ಲಿ 10 ಕೋಟಿ ರೂ. ವಂಚನೆ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಾಯಕ ಕಾರ್ಯದರ್ಶಿ 10 ಕೋಟಿ ರೂ. ಸಾಲ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ಬಿ ಸಂಕನಗೌಡರ್ ನಾಪತ್ತೆಯಾದ ಸಹಾಯಕ ಕಾರ್ಯದರ್ಶಿ. ನಟ ದರ್ಶನ್ ಹೆಸರು ಹೇಳಿಕೊಂಡು ಮಲ್ಲಿಕಾರ್ಜುನ್ ವಿವಿಧ ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದರು ಎನ್ನುವ ಆರೋಪ ಇವರ ಮೇಲಿದೆ.

    ದರ್ಶನ್ ಸಹೋದರ ದಿನಕರ್ ಅವರನ್ನು ಮಲ್ಲಿಕಾರ್ಜುನ್ ಪರಿಚಯ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತರ ದರ್ಶನ್ ಅವರಿಗೆ ಹತ್ತಿರವಾಗಿದ್ದರು. ಅಷ್ಟೇ ಅಲ್ಲದೆ ಅವರ ಹಣಕಾಸಿನ ವ್ಯವಹಾರನ್ನು ನೋಡಿಕೊಳ್ಳುತ್ತಿದ್ದರು. ಅನೇಕ ವರ್ಷಗಳಿಂದ ದರ್ಶನ್ ಅವರನ್ನು ಸಂಪರ್ಕಿಸಲು ಮಲ್ಲಿಕಾರ್ಜುನ್ ಅವರಿಂದ ಮೊದಲು ಒಪ್ಪಿಗೆ ಪಡೆಯಬೇಕಾಗಿತ್ತು. ಹೀಗಾಗಿ ದರ್ಶನ್ ಅವರ ಹೆಸರಿನ ಬಲದಿಂದಲೇ ಮಲ್ಲಿಕಾರ್ಜುನ್ ಬರೋಬ್ಬರಿ 10 ಕೋಟಿ ರೂ. ಸಾಲ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

    ಈ ವಿಚಾರದ ಬಗ್ಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಏನು ವಂಚನೆ ನಡೆದಿದೆ ಗೊತ್ತಿಲ್ಲ. ದರ್ಶನ್‍ಗೆ ಆರ್ಥಿಕ ಸಮಸ್ಯೆ ಇದೆ ಎಂದರೆ ಹಣ ನೀಡುವ ಮೊದಲು ದರ್ಶನ್ ಅವರನ್ನೇ ಸಂಪರ್ಕಿಸಬೇಕು. ಯಾರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. 10 ದಿನಗಳ ಹಿಂದೆ ನನ್ನ ಜೊತೆ ಮಾತನಾಡಿದ್ದಾಗ ನಾನು ಕಷ್ಟದಲ್ಲಿದ್ದೇನೆ ಎಂದು ಹೇಳಿದ್ದರು. ಈಗ ನಾನು ಅವರಿಗೆ ಫೋನ್ ಮಾಡಿದ್ದರೂ ಸ್ವಿಚ್ ಆಫ್ ಆಗಿದೆ. ಈ ವಿಚಾರದಲ್ಲಿ ದರ್ಶನ್ ಹೆಸರು ಯಾಕೆ ಬಂತು ಎನ್ನುವುದೇ ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.

     

  • ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?

    ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?

    ನವದೆಹಲಿ: ರಾಸುಗಳ ವ್ಯಾಪಾರಕ್ಕೆ ಡಿಜಿಟಲ್ ಸ್ಪರ್ಷ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ “ಇ-ಪಶುಹಾತ್” ವೆಬ್‍ಸೈಟ್‍ವೊಂದನ್ನು ಅಭಿವೃದ್ಧಿ ಪಡಿಸಿದೆ. ಮಧ್ಯವರ್ತಿಗಳ ಹಾವಳಿ ತಡೆದು, ರೈತರ ಹಿತ ಕಾಯಲು ನಿಟ್ಟಿನಲ್ಲಿ ಇ-ಪಶುಹಾತ್ ವೆಬ್‍ಸೈಟ್ ಕೆಲಸ ಮಾಡಲಿದೆ.

    ಫ್ಲಿಪ್‍ಕಾರ್ಟ್, ಅಮೆಜಾನ್, ಓಎಲ್‍ಎಕ್ಸ್ ನಂತಯೇ ಇ-ಪಶುಹಾತ್ ವೆಬ್ ಸೈಟ್ ಕಾರ್ಯನಿರ್ವಹಿಸಲಿದೆ. ಇಲ್ಲಿ ರಾಸುಗಳನ್ನು ಮಾರುವವರು ಹಾಗೂ ಖರೀದಿಸುವವರು ನೇರವಾಗಿ ಸಂಪರ್ಕ ಸಾಧಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರೊಂದಿಗೆ ಪಶುಸಂಗೋಪನೆಗೆ ನೆರವಾಗುವ ಮಾಹಿತಿ, ವೈದ್ಯಕೀಯ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳು ಇಲ್ಲಿ ದೊರೆಯಲಿದೆ.

    ಏನೇನು ಅಭ್ಯವಿದೆ?
    ಜಾನುವಾರು, ಹೋರಿ, ಎಮ್ಮೆ, ಒಂಟೆ, ಕುರಿ, ಆಡು, ಹಂದಿ, ಕುದುರೆ, ಕೋಳಿ, ಕೋನ, ಇತರೆ ಪ್ರಾಣಿಗಳು ಪಟ್ಟಿಯಿದ್ದು, ರಾಜ್ಯವಾರು ಪ್ರತಿಯೊಂದು ಪ್ರಾಣಿಯ ಸಂಖ್ಯೆಯನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಜಾನುವಾರುಗಳ ಪ್ರಾಮಾಣಿಕರಣ ಪರಿಶೀಲನೆ ಸೇವೆ, ಪೌಷ್ಟಿಕತೆ ಸಲಹಾ ಸೇವೆ, ಸ್ವಚ್ಚ ಹಾಲು ಉತ್ಪಾದನೆ, ಆರೋಗ್ಯ ಕಾರ್ಡ್, ವೆಟರ್ ನರಿ ಸೇವೆ, ಕೃತಕ ಗರ್ಭಧಾರಣೆ, ಸಾರಿಗೆ ಸೌಲಭ್ಯಕ್ಕೆ ಸಂಪರ್ಕ ಕಲ್ಪಿಸುವುದು ರೋಗ ಪತ್ತೆ ಮತ್ತು ಪರೀಕ್ಷೆ, ಎಸ್‍ಎಂಎಸ್, ವಾಯ್ಸ್ ಕಾಲ್ ಹಾಗೂ ಇಮೇಲ್ ರಿಮೈಂಡರ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ಸಲಹೆ, ದೂರು ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಮೇಲ್ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.

    ವೆಬ್‍ಸೈಟ್ ನಲ್ಲಿ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮ, ವಿಚಾರ ಸಂಕಿರಣಗಳ ಬಗ್ಗೆಯೂ ನೋಂದಣಿ ಮಾಡಿಸಿಕೊಂಡಿರುವ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಮಧ್ಯವರ್ತಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಇ-ಪಶುಹಾತ್ ಸಹಾಯಕವಾಗಲಿದ್ದು, ರಾಸುಗಳ ಮಾಲೀಕರಿಗೆ ಹಾಗೂ ಖರೀದಿ ಮಾಡುವವರಿಗೆ ಸೂಕ್ತ ಬೆಲೆ ದೊರೆಯಲಿದೆ. ಅಲ್ಲದೇ ರಾಜ್ಯದ ವಿವಿಧ ತಳಿಗಳ ಬಗ್ಗೆ ಮಾಹಿತಿ, ನೀಡುವ ಜೊತೆಗೆ ಅವುಗಳ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಒಂದು ಹೆಜ್ಜೆ ಮುಂದುವರೆದು ಹಸುಗಳಿಗೆ ಆನ್‍ಲೈನ್ ಟ್ರೇಡಿಂಗ್ ಒದಗಿಸುವ ಮಹತ್ವದ ಯೋಜನೆಯನ್ನು ಈ ವೆಬ್‍ಸೈಟ್ ಕಲ್ಪಿಸಲಿದೆ.

    ಸದ್ಯ ಇ-ಪಶುಹಾತ್ ವೆಬ್‍ಸೈಟ್ ನಲ್ಲಿ ದೇಶದ 56 ವೀರ್ಯ ಸ್ಟೇಷನ್‍ಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಹೀಗಾಗಿ ರೈತರು ಯಾವುದೇ ಅಧಿಕಾರಿಗಳ ಸಹಾಯ ಪಡೆಯದೇ ನೇರವಾಗಿ ರಾಜ್ಯದಲ್ಲಿರುವ ಖಾಸಗಿ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯಗಳ ವಿಳಾಸ, ದೂರವಾಣಿ ಸಂಖ್ಯೆ, ಮಾಹಿತಿ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಪ್ರಮುಖವಾಗಿ ರಾಸುಗಳ ಮಾರಾಟ, ಹೆಪ್ಪುಗಟ್ಟಿದ ದನಗಳ ವೀರ್ಯ (ಎಫ್‍ಎಸ್) ವ್ಯಹಾರಕ್ಕೆ ಅವಕಾಶವಿದೆ. ಇದಕ್ಕಾಗಿ ಅಧಿಕೃತ ಪೂರೈಕೆದಾರರ ಪಟ್ಟಿ ಕೂಡ ಲಭ್ಯವಿದೆ. ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: https://epashuhaat.gov.in/

    ಇ-ಪಶುಹಾತ್ ವೆಬ್‍ಸೈಟ್‍ನಲ್ಲಿ ರೈತರು ಅಥವಾ ಪಶುಗಳ ಮಾಲೀಕರು ನೋಂದಣಿ ಮಾಡಿಕೊಂಡಲ್ಲಿ, ನೇರವಾಗಿ ಮಾರುವವರು ಹಾಗೂ ಖರೀದಿಗಾರರು ಸಂಪರ್ಕ ಸಾಧಿಸಬಹುದು. ದೇಶದಲ್ಲಿ ವಿವಿಧ ತಳಿಗಳನ್ನು ಅಭಿವೃದ್ಧಿಗೆ ಸಂಶೋಧನೆ ನಡೆಯುತತ್ತಿದ್ದು, ಈ ಕುರಿತು ಮಾಹಿತಿ ಕೂಡಾ ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಲಭ್ಯವಾಗಲಿದೆ.

    ಕೇಂದ್ರ, ರಾಜ್ಯ ಸಹಕಾರಿ ಮತ್ತು ಖಾಸಗಿ ಸಂಸ್ಥೆಗಳ ಮಧ್ಯೆ ಕೊಂಡಿಯ ರೂಪದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದರಿಂದ ರೈತರು, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಫಾರ್ಮ್ ಸೇರಿದಂತೆ ಪಶುಸಂಗೋಪನೆ ಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ.