Tag: business

  • ಸೂರ್ಯಗ್ರಹಣದ ಎಫೆಕ್ಟ್ – KSRTC ಕಲೆಕ್ಷನ್‍ಗೆ ಬಿತ್ತು ಹೊಡೆತ

    ಸೂರ್ಯಗ್ರಹಣದ ಎಫೆಕ್ಟ್ – KSRTC ಕಲೆಕ್ಷನ್‍ಗೆ ಬಿತ್ತು ಹೊಡೆತ

    ಚಿಕ್ಕಬಳ್ಳಾಪುರ: ಶತಮಾನದ ಕೇತುಗ್ರಸ್ಥ ಸೂರ್ಯಗ್ರಹಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಭಾರೀ ಹೊಡೆತ ಬಿದ್ದಿದೆ. ನಿರೀಕ್ಷಿತ ಪ್ರಮಾಣದ ಪ್ರಯಾಣಿಕರಿಲ್ಲದೆ ಈ ದಿನದ ಕಲೆಕ್ಷನ್‍ನಲ್ಲಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.

    ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಬಾರದ ಕಾರಣ ಬಸ್‍ಗಳೆಲ್ಲವೂ ಬೆರಳಣಿಕೆ ಪ್ರಯಾಣಿಕರನ್ನು ಹೊತ್ತು ಸಾಗುವಂತಾಗಿದೆ. ಚಿಕ್ಕಬಳ್ಳಾಪುರ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ಗ್ರಹಣದ ಎಫೆಕ್ಟ್ ನಿಂದ ಬಿಕೋ ಎನ್ನುವಂತಿತ್ತು. ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದ್ದ ಬಸ್ ಗಳು ನಿಂತಲ್ಲೇ ನಿಂತ ದೃಶ್ಯಗಳು ಸಾಮಾನ್ಯವಾಗಿತ್ತು. ಇಷ್ಟು ದಿನ ಬಸ್ ಗಳಿಗಾಗಿ ಪ್ರಯಾಣಿಕರು ಕಾಯುವಂತಹ ಪರಿಸ್ಥಿತಿ ಇರುತ್ತಿತ್ತು. ಆದರೆ ಇಂದು ಬಸ್ ಚಾಲಕ, ನಿರ್ವಾಹಕರು ಪ್ರಯಾಣಿಕರಿಗಾಗಿ ಕಾಯುವಂತಾಗಿತ್ತು.

    ಸಾಮಾನ್ಯ ದಿನಗಳಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ 10 ರಿಂದ 15 ನಿಮಿಷಕ್ಕೆ ಒಂದು ಬಸ್ ಪ್ರಯಾಣಿಕರನ್ನು ಹೊತ್ತ ಬಸ್ ಸಾಗುತ್ತಿತ್ತು. ಆದರೆ ಇಂದು ಅರ್ಧ ಗಂಟೆಯಾದರು ಒಂದು ಬಸ್ ಕೂಡ ತುಂಬಿರಲಿಲ್ಲ. ಪರಿಣಾಮ ಟಿಕೆಟ್ ಕಲೆಕ್ಷನ್‍ನಲ್ಲೂ ಸಹ ಸಾಕಷ್ಟು ಕಡಿಮೆಯಾಗಿದೆ. ಗ್ರಹಣದ ಸಮಯದಲ್ಲಿ 8 ರಿಂದ 11:30ರ ವೇಳೆಗೆ ಸುಮಾರು 45 ಬಸ್ ಗಳು ಬೆಂಗಳೂರು ಕಡೆಗೆ ಸಾಗಬೇಕಿತ್ತು. ಆದರೆ ಎಲ್ಲಾ ಬಸ್ ಗಳು ಅರ್ಧ ಗಂಟೆ ಲೇಟಾಗಿ ಖಾಲಿ ಖಾಲಿಯಾಗಿ ಬೆರಳಣೆಕೆ ಪ್ರಯಾಣಿಕರನ್ನ ಹೊತ್ತು ರಾಜಧಾನಿಯತ್ತ ಸಾಗಿವೆ. ಇದರಿಂದ ಸಹಜವಾಗಿ ಕಲೆಕ್ಷನ್ ಸಾಕಷ್ಟು ಕಡಿಮೆ ಆಗಿದೆ ಎಂದು ಚಿಕ್ಕಬಳ್ಳಾಪುರ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಟಿಸಿ ಬಿ.ಸೊಣ್ಣಪ್ಪ ಪಬ್ಲಿಕ್ ಟಿ ವಿಗೆ ಮಾಹಿತಿ ನೀಡಿದರು.

    ಖಾಸಗಿ ಬಸ್‍ಗಳಿಗೂ ಎಫೆಕ್ಟ್: ಕೆಎಸ್‍ಆರ್ ಟಿಸಿ ಬಸ್ ಗಳ ಒಂದೆಡೆಯಾದರೆ ಖಾಸಗಿ ಬಸ್ ಗಳ ವ್ಯಥೆಯೂ ಸಾಕಷ್ಟಿದೆ. ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರಿಲ್ಲದೆ ಬಸ್ ಗಳೆಲ್ಲವೂ ಖಾಲಿ ಖಾಲಿಯಾಗಿ ನಿಂತಿತ್ತು. ಬೆಂಗಳೂರು ಕಡೆಗೆ ಎರಡು ಟ್ರಿಪ್ ಹೊಡೆದರೂ ಪ್ರಯಾಣಿಕರು ಬರುತ್ತಿಲ್ಲ. ಬೆರಳೆಣಿಕೆ ಪ್ರಯಾಣಿಕರು ಮಾತ್ರ ಬಸ್ ಹತ್ತಲು ಬರುತ್ತಿದ್ದಾರೆ. ಕನಿಷ್ಠ ಡಿಸೇಲ್‍ಗೂ ಸಹ ಕಲೆಕ್ಷಕನ್ ಆಗುತ್ತಿಲ್ಲ ಎಂದು ಖಾಸಗಿ ಬಸ್ ಚಾಲಕ ಪಬ್ಲಿಕ್ ಟಿವಿ ಬಳಿ ಅಳಲು ತೋಡಿಕೊಂಡರು.

    ಒಂದೆಡೆ ವಾಹನಗಳ ಸಂಚಾರ ವಿರಳವಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದರೆ, ಮತ್ತೊಂದೆಡೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ವ್ಯಾಪಾರ ವಹಿವಾಟು ಇಲ್ಲದೆ ವ್ಯಾಪಾರಸ್ಥರು ನಿರಾಸೆ ಅನುಭವಿಸಿದರು.

  • ಬೇಸಿಗೆ ಮುನ್ನವೇ ಎಳನೀರಿಗೆ ಬೇಡಿಕೆ – ಕೇರಳದ ಎಳನೀರು ಮಾರಾಟ

    ಬೇಸಿಗೆ ಮುನ್ನವೇ ಎಳನೀರಿಗೆ ಬೇಡಿಕೆ – ಕೇರಳದ ಎಳನೀರು ಮಾರಾಟ

    -ಕಾಯಿ ಮೇಲ್ಮೈನ ಬಣ್ಣದಲ್ಲೂ ವ್ಯತ್ಯಾಸ

    ಕೊಪ್ಪಳ: ಎಳನೀರು ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ 2 ಎರಡು ಎಳನೀರು ಸೇವಿಸುವಂತೆ ವೈದ್ಯರ ಸಲಹೆ ಮೇರೆಗೆ ಬೆಳಗ್ಗೆ ಅಥವಾ ಸಂಜೆ ವಾಯು ವಿಹಾರಕ್ಕೆ ಬರುವವರು ಎಳನೀರು ಸೇವಿಸುವುದು ಕಡ್ಡಾಯ ಮಾಡಿಕೊಂಡಿದ್ದಾರೆ. ಇದರಿಂದ ಬೇಸಿಗೆ ಮುನ್ನವೇ ಎಳನೀರು ಗಗನಕ್ಕೇರಿದ್ದು, 35ರಿಂದ 40ರೂ.ಗಳಿಗೆ ಮಾರಾಟವಾಗುತ್ತಿವೆ.

    ಜಿಲ್ಲೆಯಲ್ಲಿ ತೆಂಗಿನ ಗಿಡಗಳು ನುಸಿ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ವ್ಯಾಪಾರಿಗಳು ನಿರೀಕ್ಷಿಸಿದಷ್ಟು ಎಳನೀರು ಕಾಯಿ ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮದ್ದೂರು, ಗುಬ್ಬಿ, ತುಮಕೂರುಗಳಿಂದ ಎಳನೀರುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲಿಂದಲೂ ಬೇಡಿಕೆಗೆ ತಕ್ಕಂತೆ ಬಾರದಿದ್ದರಿಂದ ಕೇರಳದ ಮೊರೆ ಹೋಗಿದ್ದು, ದುಬಾರಿಯಾದರೂ ಆಮದು ಮಾಡಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಒಬ್ಬರೇ ದಲ್ಲಾಳಿಯಿದ್ದರು. ಆದರೆ ಬೇಡಿಕೆ ಹೆಚ್ಚುತ್ತಿದ್ದಂತೆ ದಲ್ಲಾಳಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ.

    ವಿಭಿನ್ನ:
    ರಾಜ್ಯದ ಎಳನೀರಿನಂತೆ ಕೇರಳದ ಎಳನೀರು ಕಾಯಿಗಳಿಲ್ಲ. ಕಾಯಿ ಮೇಲ್ಮೈನ ಬಣ್ಣದಲ್ಲೂ ವ್ಯತ್ಯಾಸವಿದ್ದು, ಹಳದಿ ಬಣ್ಣವಿದೆ. ರುಚಿಯಲ್ಲಿ ವಗರಾಗಿದ್ದು, ಗಾತ್ರದಲ್ಲೂ ಸಾಮಾನ್ಯ ಅಳತೆಯಲ್ಲಿದೆ. ನೀರಿದ್ದು, ಕೊಬ್ಬರಿಯಿಲ್ಲ. ಕರಾವಳಿ ತೀರದ ಎಳನೀರು ಕಾಯಿಗಳು ಬರುತ್ತಿದ್ದು, ವ್ಯಾಪಾರಿಗಳಿಗೆ ಪ್ರತಿ ಕಾಯಿಗೆ 28 ರೂ.ಗಳಿಗೆ ದೊರೆಯುತ್ತಿದೆ. ಮದ್ದೂರಿನ ಕಾಯಿಗಳ ದರ ಕಡಿಮೆಯಿದ್ದು, ಗಾತ್ರದಲ್ಲಿ ದೊಡ್ಡದಿವೆ. ನೀರು ಮತ್ತು ಕೊಬ್ಬರಿ ಹೊಂದಿರುವ ಕಾಯಿಗಳಿಗೆ ಇತ್ತೀಚಿನ ದಿನಗಳಲ್ಲಿ ನೀರಿಕ್ಷಿಸಿದಷ್ಟು ಜಿಲ್ಲೆಗೆ ಬರುತ್ತಿಲ್ಲ. ಅನಿವಾರ್ಯವಾಗಿ ಕೇರಳದ ಕಾಯಿಗಳನ್ನು ಪಡೆಯುವ ಸ್ಥಿತಿ ಬಂದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೊಸ ಬಗೆಯ ಎಳನೀರು ಕಾಯಿಗಳ ಮೇಲೆ ಗ್ರಾಹಕರ ಆಸಕ್ತಿ ಹೆಚ್ಚಿದ್ದು, ವ್ಯಾಪಾರದಲ್ಲಿ ಏರಿಕೆಯಾಗಿದೆ.

    ಆತಂಕ:
    ಬೇಸಿಗೆ ಮುನ್ನವೇ ಎಳನೀರು ಕಾಯಿಗಳ ದರ ದುಪ್ಪಟ್ಟ ಹೆಚ್ಚಿರುವುದು ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ವರ್ಷ 20ರೂ.ಗಳಿಂದ 25ರೂ.ವರಿಗೂ ಎಳನೀರು ಮಾರಾಟವಾಗಿದ್ದವು. ದುಬಾರಿ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಚಳಿಗಾಲದಲ್ಲಿ 40ರೂ.ದರವಿದ್ದು, ಬೇಸಿಗೆಗೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ. ಶಾಪಿಂಗ್ ಮಾಲ್‍ನಲ್ಲೂ ಎಳನೀರು ಮಾರಾಟ ಮಾಡಲಾಗುತ್ತಿದ್ದು, ಸಂಸ್ಕರಿಸಿದ ಎಳನೀರು ಪ್ಯಾಕೇಟ್‍ಗಳು ಇನ್ನೂ ಬಂದಿಲ್ಲ. ಕೇರಳದ ಎಳನೀರನ್ನು ನಾಲ್ಕೈದು ದಿನಗಳಿಗೆ ಮಾತ್ರ ಸಂಗ್ರಹಿಸಿಡಲು ಸಾಧ್ಯವಿದೆ. ಹೀಗಾಗಿ ಬಹುದಿನಗಳವರಿಗೂ ಶೇಖರಿಸಿಡುವ ಸಂಸ್ಕರಿಸಿದ ಪ್ಯಾಕೇಟ್‍ಗಳು ಬರುವುದು ಉತ್ತಮ ಎನ್ನುತ್ತಾರೆ.

  • ನೆಲಮಂಗಲಕ್ಕೆ ಬಂದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

    ನೆಲಮಂಗಲಕ್ಕೆ ಬಂದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

    ನೆಲಮಂಗಲ: ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಭಾರತದ ಅತೀ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ವಸ್ತು ಪ್ರದರ್ಶನಕ್ಕೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಂದು ಭೇಟಿ ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದಾವಾರ ಬಳಿಯ ಬಿಐಇಸಿಯಲ್ಲಿ ಕ್ರಿಕೆಟಿಗ ಎಂ.ಎಸ್ ಧೋನಿ ಇಂದು ಉದ್ಯಮಶೀಲತೆ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಎಕ್ಸಾನ್ 10 ನೇ ಆವೃತ್ತಿಯ ವಸ್ತು ಪ್ರದರ್ಶನ ಇದ್ದಾಗಿದ್ದು, ಐದು ದಿನಗಳ ಕಾಲ ನಡೆದ ವಸ್ತು ಪ್ರದರ್ಶನಕ್ಕೆ ನಾಳೆ ತೆರೆಬೀಳಲಿದೆ.

    ಈ ಹಿನ್ನೆಲೆಯಲ್ಲಿ ಇಂದು ಆಗಮಿಸಿದ್ದ ಮಹೇಂದ್ರ ಸಿಂಗ್ ಧೋನಿ ಹಲವಾರು ಮಾಹಿತಿ ಪಡೆದರು. ವಸ್ತು ಪ್ರದರ್ಶನದಲ್ಲಿ ಉದ್ಯಮಿಗಳ ಹಾಗೂ ಗ್ರಾಹಕರ ಜೊತೆ ಭಾಗಿಯಾಗಿದ್ದ ಧೋನಿ, ಗಲ್ಫ್ ಕಂಪನಿಯಲ್ಲಿ ಕೆಲಹೊತ್ತು ಕಾಲ ಕಳೆದಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗ ಧೋನಿಯನ್ನು ನೋಡಲು ಅಭಿಮಾನಿಗಳ ಮುಗಿಬಿದ್ದ ಪ್ರಸಂಗ ನಡೆಯಿತು.

  • ಚಿಕ್ಕಬಳ್ಳಾಪುರ: ಚುನಾವಣೆಗೂ ಮುನ್ನ ಖಾಲಿ ಹೊಡೆಯುತ್ತಿದ್ದ ಚಿನ್ನದಂಗಡಿಗಳು ಈಗ ಫುಲ್!

    ಚಿಕ್ಕಬಳ್ಳಾಪುರ: ಚುನಾವಣೆಗೂ ಮುನ್ನ ಖಾಲಿ ಹೊಡೆಯುತ್ತಿದ್ದ ಚಿನ್ನದಂಗಡಿಗಳು ಈಗ ಫುಲ್!

    ಚಿಕ್ಕಬಳ್ಳಾಪುರ: ರಾಜ್ಯ ಉಪಚುನಾವಣಾ ಕದನದ ಮತದಾನ ಮುಗಿದಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಫಲಿತಾಂಶಕ್ಕೆ ಕೇವಲ ಒಂದೇ ದಿನ ಬಾಕಿ ಇದ್ದು, ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ ಮಹಿಳೆಯರ ಚಿತ್ತ ಮಾತ್ರ ಚಿನ್ನದತ್ತ ನೆಟ್ಟಿದೆ. ಚಿನ್ನಾಭರಣ ಸೇರಿದಂತೆ ಗೃಹಬಳಕೆ ವಸ್ತುಗಳ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದು, ಅದರಲ್ಲೂ ಚಿನ್ನದಂಗಡಿಗಳಲ್ಲಿ ಮಹಿಳೆಯರೇ ತುಂಬಿತುಳುಕುತ್ತಿದ್ದಾರೆ.

    ಚುನಾವಣೆಗೂ ಮುನ್ನ ಖಾಲಿ ಖಾಲಿ ಹೊಡೆಯುತ್ತಿದ್ದ, ನಗರದ ಚಿನ್ನದಂಗಡಿಗಳಲ್ಲಿ ಚಿನ್ನಾಭರಣ ಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೌದು, ಚುನಾವಣೆ ಬಂದಿದ್ದೇ ಕ್ಷೇತ್ರದಲ್ಲಿ ಕುರುಡು ಕಾಂಚಾಣದ ಅಬ್ಬರ ಬಲು ಜೋರಾಗಿಯೇ ಇತ್ತು. ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳು, ಕಾಂಚಾಣವನ್ನು ಮತದಾನದ ಹಿಂದಿನ ದಿನ ರಾತ್ರೋ ರಾತ್ರಿ ಹಂಚಿದ್ದಾರೆ ಎಂಬ ಮಾಹಿತಿ ಇದೆ.

    ಚುನಾವಣೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳಿಂದ ಹಣ ಪಡೆದ ಮಹಿಳೆಯರು ಎಲ್ಲಾ ಹಣವನ್ನು ಕೂಡಿಟ್ಟು, ಈಗ ಚಿನ್ನಾಭರಣ ಸೇರಿದಂತೆ ಗೃಹಬಳಕೆ ವಸ್ತುಗಳನ್ನ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಇಷ್ಟು ದಿನ ನಿಧಾನವಾಗಿ ಸಾಗಿದ್ದ ವ್ಯಾಪಾರ ಈಗ ಬಲು ಜೋರಾಗಿದೆ ಎಂದು ಚಿನ್ನಾಭರಣ ವರ್ತಕರು ಹೇಳಿಕೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರ ಉಪಚುನಾವಣಾ ಅಖಾಡದಲ್ಲಿ ಹಿಂದೆಂದೂ ಹರಿಯದ ದೊಡ್ಡ ಪ್ರಮಾಣದ ಕೋಟ್ಯಾಂತರ ರೂಪಾಯಿ ನೀರಿನಂತೆ ಖರ್ಚಾಗಿದೆ. ಆದರೆ ಇದೆಲ್ಲವನ್ನೂ ಕಂಡು ಕಾಣದಂತೆ ಚುನಾವಣಾಧಿಕಾರಿಗಳು ಸುಮ್ಮನಾಗಿದ್ದರು. ಹೀಗಾಗಿ ಕೋಟ್ಯಾಂತರ ರೂಪಾಯಿ ಹಣ ಮತದಾರರ ಕೈ ಸೇರಿದ್ದು. ಈಗ ಆ ಹಣದಲ್ಲಿ ತಮಗೆ ಬೇಕಾದ ವಸ್ತುಗಳನ್ನ ಜನ ಕೊಂಡುಕೊಳ್ಳುತ್ತಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಕೋಟಿ ಕೋಟಿ ರೂ. ಖರ್ಚು ಮಾಡಿ ಮತದಾರರಿಗೆ ಹಣ ಹಂಚಿ ಮತದಾರರನ್ನೇ ಭ್ರಷ್ಟರನ್ನಾಗಿ ಅಭ್ಯರ್ಥಿಗಳು ಮಾಡಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಪ್ರಜ್ಞಾವಂತರು ಹೇಳಿದ್ದಾರೆ.

  • ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ – ಆರ್‌ಸಿಇಪಿ ಒಪ್ಪಂದದಿಂದ ಹಿಂದಕ್ಕೆ ಸರಿದ ಭಾರತ

    ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ – ಆರ್‌ಸಿಇಪಿ ಒಪ್ಪಂದದಿಂದ ಹಿಂದಕ್ಕೆ ಸರಿದ ಭಾರತ

    ಬ್ಯಾಂಕಾಕ್: ದೇಶಾದ್ಯಂತ ಭಾರೀ ವಿವಾದ-ಚರ್ಚೆಗೆ ಗ್ರಾಸವಾಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ)ಒಪ್ಪಂದದಿಂದ ಕೇಂದ್ರ ಸರ್ಕಾರ ಹೊರ ಬಂದಿದೆ.

    ಥಾಯ್ಲೆಂಡಿನ ಬ್ಯಾಂಕಾಕ್‌ನಲ್ಲಿ ನಡೆದ ಆಸಿಯಾನ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಹಿತಾಸಕ್ತಿಯನ್ನು ಬಲಿಗೊಡುವ ಯಾವುದೇ ಕೆಲಸವನ್ನು ಮಾಡಲ್ಲ. ನನ್ನ ಆತ್ಮಸಾಕ್ಷಿಯೂ ಇದಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಆರ್‌ಸಿಇಪಿ ವಿಚಾರದ ಬಗ್ಗೆ ಭಾರತೀಯರಿಂದ ನನಗೆ ಯಾವುದೇ ಧನಾತ್ಮಕ ಉತ್ತರ ಸಿಗಲಿಲ್ಲ. ಹೀಗಾಗಿ ಈ ಒಪ್ಪಂದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ತಿಳಿಸಿದ್ದಾರೆ.

    ಭಾರತವನ್ನು ಹೊರತುಪಡಿಸಿ ಉಳಿದ 15 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಗೆ ಸೂಚಿಸಿವೆ. ವಿಯೆಟ್ನಾಂನಲ್ಲಿ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆರ್‌ಸಿಇಪಿ ಶೃಂಗಸಭೆಯಲ್ಲಿ ಈ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಲಿವೆ.

    2012ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಈ ಒಪ್ಪಂದದ ಮಾತುಕತೆ ಆರಂಭವಾಗಿತ್ತು. ಕೆಲವು ಉತ್ಪನ್ನಗಳನ್ನು ಸುಂಕರಹಿತ ವ್ಯಾಪಾರದಿಂದ ಹೊರಗೆ ಇಡಬೇಕು ಎಂದು ಸರ್ಕಾರ ಆಗ್ರಹಿಸಿತ್ತು. ನಂತರ ಬಂದ ಮೋದಿ ಸರ್ಕಾರ ಸರ್ಕಾರಗಳೂ ಇದನ್ನೇ ಪ್ರತಿಪಾದಿಸಿದ್ದರಿಂದ ಒಪ್ಪಂದ ಜಾರಿಯಾಗಿರಲಿಲ್ಲ.

    ಅಮೆರಿಕದ ವ್ಯಾಪಾರ ಸಮರದಿಂದ ಆರ್ಥಿಕತೆ ಕುಸಿದಿರುವ ಚೀನಾ ಒಪ್ಪಂದ ಅಂತಿಮವಾಗಲೇಬೇಕೆಂದು ಪಟ್ಟು ಹಿಡಿದ ಕಾರಣ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಒಪ್ಪಂದವು ಜಾರಿಯಾದರೆ ಆಸಿಯಾನ್ ರಾಷ್ಟ್ರಗಳು ಮತ್ತು ಚೀನಾದಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಸರಕುಗಳು ಭಾರತಕ್ಕೆ ಆಮದಾಗುತ್ತವೆ. ಇದರಿಂದ ಭಾರತೀಯ ವಸ್ತುಗಳಿಗೆ ಬೇಡಿಕೆ ಕುಸಿದು, ಭಾರತದ ತಯಾರಿಕಾ ವಲಯಕ್ಕೆ ಧಕ್ಕೆಯಾಗುತ್ತದೆ ಎಂಬ ವಿರೋಧ ಕೇಳಿಬಂದಿದೆ.

    ಹಾಲಿನ ಉತ್ಪನ್ನಗಳೂ ಕಡಿಮೆ ಬೆಲೆಯಲ್ಲಿ ಆಮದಾಗುವುದರಿಂದ ಭಾರತದ ಹೈನುಗಾರಿಕೆಗೆ ಧಕ್ಕೆಯಾಗಲಿದೆ ಎಂದು ಕಾರ್ಮಿಕ ಮತ್ತು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು.

    ರಾಜ್ಯದಲ್ಲಿ ಪ್ರತಿಭಟನೆ: ಆರ್‌ಸಿಇಪಿ ಜಾರಿ ಮಾಡಬಾರದೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಿಸಾನ್ ಘಟಕದಿಂದ ಭಾರಿ ಪ್ರತಿಭಟನೆ ನಡೆಸಲಾಯ್ತು. ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದ ಮುತ್ತಿಗೆಗೆ ಯತ್ನಿಸಿದರು. ಜಪಾನ್, ಕೊರಿಯಾ ಜೊತೆ ಮುಕ್ತ ವ್ಯಾಪಾರಕ್ಕೆ ಸಹಿ ಹಾಕಿ ರೈತರನ್ನ ಬೀದಿಗೆ ಬೀಳಿಸಲು ಮೋದಿ ಹೊರಟಿದ್ದಾರೆ. ಪ್ರವಾಹ, ಬರದಿಂದ ರಾಜ್ಯದ ರೈತರು ತತ್ತರಿಸುತ್ತಿದ್ದಾರೆ. ಈ ಒಪ್ಪಂದದಿಂದ ೧೦ ಕೋಟಿ ಹಾಲು ಉತ್ಪಾದಕರು ಕಷ್ಟಕ್ಕೆ ಸಿಲುಕ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ ಆಕ್ರೋಶ ಹೊರಹಾಕಿದ್ದಾರೆ.

  • ಸುಲಭ ವಹಿವಾಟಿನಲ್ಲಿ ಭಾರತದ ಲಾಂಗ್ ಜಂಪ್ – 14 ಸ್ಥಾನ ಏರಿಕೆ

    ಸುಲಭ ವಹಿವಾಟಿನಲ್ಲಿ ಭಾರತದ ಲಾಂಗ್ ಜಂಪ್ – 14 ಸ್ಥಾನ ಏರಿಕೆ

    ನವದೆಹಲಿ: ಉದ್ಯಮ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಿ ನಿರ್ವಹಿಸಲು ನೆರವಾಗುವ ವಿಷಯದಲ್ಲಿ ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ  14 ಸ್ಥಾನ ಏರಿಕೆಯಾಗಿ 63ನೇ ಸ್ಥಾನಕ್ಕೆ ಭಾರತ ಜಿಗಿದಿದೆ.

    ಉದ್ದಿಮೆ ವಹಿವಾಟು ಆರಂಭಿಸಲು ಅನುಕೂಲತೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಹಲವಾರು ಮಾನದಂಡಗಳನ್ನು ಆಧರಿಸಿ ವಿಶ್ವಬ್ಯಾಂಕ್ 190 ದೇಶಗಳ ಆರ್ಥಿಕತೆಗಳನ್ನು ಲೆಕ್ಕಹಾಕಿ ಪ್ರತಿವರ್ಷ ಶ್ರೇಯಾಂಕ ಪಟ್ಟಿಯನ್ನು ನೀಡುತ್ತದೆ. ಈ ಪಟ್ಟಿಯಲ್ಲಿ 2018ರಲ್ಲಿ ಭಾರತಕ್ಕೆ 77ನೇ ಸ್ಥಾನ ಸಿಕ್ಕಿತ್ತು.

    ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಬಂಡವಾಳ ಹೂಡಲು ವಿವಿಧ ಕಂಪನಿಗಳು ಆಸಕ್ತಿ ತೋರಿಸಿದ ಹಿನ್ನೆಲೆಯಲ್ಲಿ ಈ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಥಾನ ಜಿಗಿದಿದೆ. 2015ರಲ್ಲಿ ಭಾರತಕ್ಕೆ 130ನೇ ಸ್ಥಾನ ಸಿಕ್ಕಿತ್ತು. 2016ರಲ್ಲೂ ಭಾರತದ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.

    ಭಾರತೀಯ ರಿಸರ್ವ್ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್‍ಗಳು ಭಾರತದ ಜಿಡಿಪಿ ದರವನ್ನು ಇಳಿಕೆ ಮಾಡಿದ್ದರಿಂದ ಟೀಕೆಗೆ ಗುರಿಯಾಗಿದ್ದ ಮೋದಿ ಸರ್ಕಾರಕ್ಕೆ ವಿಶ್ವಬ್ಯಾಂಕಿನ ಈ ವರದಿಯಿಂದಾಗಿ ಸ್ವಲ್ಪ ರಿಲೀಫ್ ಸಿಕ್ಕಿದೆ.

    2005ರಲ್ಲಿ ಭಾರತಕ್ಕೆ 116 ಸ್ಥಾನ ಸಿಕ್ಕಿದರೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 2014ರಲ್ಲಿ 142 ಸ್ಥಾನ ಸಿಕ್ಕಿತ್ತು. ಕಳೆದ 5 ವರ್ಷಗಳಲ್ಲಿ ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ 79 ಸ್ಥಾನ ಏರಿಕೆಯಾಗಿದೆ.

    ಭಾರತದ ಜೊತೆ ಸೌದಿ ಅರೇಬಿಯಾ(62), ಜೋರ್ಡಾನ್(75), ಟೊಗೊ(97), ಬಹರೇನ್(43), ತಜಕಿಸ್ತಾನ(106), ಪಾಕಿಸ್ತಾನ(108), ಕುವೈತ್(83), ಚೀನಾ(31), ನೈಜಿರಿಯಾ(131) 10 ಸ್ಥಾನಗಳ ಏರಿಕೆ ಕಂಡಿದೆ.

    ನ್ಯೂಜಿಲೆಂಡ್, ಸಿಂಗಾಪೂರ್, ಹಾಂಕಾಂಗ್, ಡೆನ್ಮಾರ್ಕ್, ದಕ್ಷಿಣ ಕೊರಿಯ, ಅಮೆರಿಕ, ಜಾರ್ಜಿಯಾ, ಇಂಗ್ಲೆಂಡ್, ನಾರ್ವೆ, ಸ್ವಿಡನ್ ಕ್ರಮವಾಗಿ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳನ್ನು ಪಡೆದಿದೆ.

    ಯಾವ ವರ್ಷ ಎಷ್ಟನೇ ಶ್ರೇಯಾಂಕ?
    116(2005), 134(2006), 120(2007), 122(2008), 133(2009), 134(2010), 132(2011), 132(2012), 134(2013), 142(2014), 130(2015), 130(2016), 100(2017) 77(2018) 63(2019).

  • ಟ್ರಬಲ್ ಶೂಟರ್​ಗೆ ಸಿಂಗಾಪುರ ಕಂಟಕ?

    ಟ್ರಬಲ್ ಶೂಟರ್​ಗೆ ಸಿಂಗಾಪುರ ಕಂಟಕ?

    ನವದೆಹಲಿ: ಶುಕ್ರವಾರವೇ ಸುಮಾರು 5 ಗಂಟೆಗಳ ಕಾಲ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಡ್ರಿಲ್ ಮಾಡಿದ್ದಾರೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಇಂದು ಸಿಂಗಾಪುರ ವ್ಯವಹಾರದಿಂದ ಡಿಕೆಶಿಗೆ ಕಂಟಕವಾಗಲಿದ್ಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಹಾಜರಾಗುತ್ತಾರೆ. ಇಡಿಗೆ ಡಿ.ಕೆ ಶಿವಕುಮಾರ್ ಅವರ ಸಿಂಗಾಪುರದ ವಹಿವಾಟಿನ ಬಗ್ಗೆಯೇ ಹೆಚ್ಚು ಕುತೂಹಲವಾಗಿದೆ. ಹೀಗಾಗಿ ಈ ಬಗ್ಗೆಯೇ ಕೆದಕಿ ಕೆದಕಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಶ್ನೆ ಕೇಳುತ್ತಿದ್ದಾರೆ. ಶುಕ್ರವಾರದ ವಿಚಾರಣೆ ವೇಳೆಯೂ ಸಿಂಗಾಪುರ ವ್ಯವಹಾರ ಬಗ್ಗೆಯೂ ಪ್ರಶ್ನೆ ಕೇಳಿದ್ದರು. ಇಂದು ಮತ್ತೆ ಸಿಂಗಾಪುರ ವ್ಯವಹಾರ ಬಗ್ಗೆಯೂ ಪ್ರಶ್ನೆ ಮಾಡುವ ಸಾಧ್ಯತೆ ಇದೆ.

    ಸಿಂಗಾಪುರ ವ್ಯವಹಾರ?
    2017 ರಲ್ಲಿ ಐಟಿ ಅಧಿಕಾರಿಗಳು ದೆಹಲಿಯ ಅಪಾರ್ಟ್ ಮೆಂಟಿನ ಮೇಲೆ ದಾಳಿ ಮಾಡಿದ್ದರು. ಅಂದು ನಗದು ಹಣದ ಜೊತೆಗೆ ಡಿ.ಕೆ.ಶಿವಕುಮಾರ್ ವಿದೇಶಿ ವ್ಯವಹಾರ ಮಾಡುತ್ತಿದ್ದಕ್ಕೆ ಸಂಬಂಧಪಟ್ಟಂತಹ ದಾಖಲಾತಿಗಳು ಸಿಕ್ಕಿದ್ದವು. ಅದರಲ್ಲೂ ಪ್ರಮುಖವಾಗಿ ಸಿಂಗಾಪುರದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಎಂಬುದಕ್ಕೆ ಪ್ರಮುಖವಾದ ದಾಖಲಾತಿಗಳು ದೊರಕ್ಕಿದ್ದವು. ಆ ದಾಖಲಾತಿಗಳನ್ನು ಐಟಿ ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಿದ್ದರು.

    ಹೀಗಾಗಿ ಸಿಂಗಾಪುರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿನ್ನೆಯೇ ವಿಚಾರಣೆ ಮಾಡಿದ್ದಾರೆ. ಇಂದು ಅದಕ್ಕೆ ಸೂಕ್ತವಾದ ದಾಖಲಾತಿಗಳನ್ನು ತರುವಂತೆ ಇಡಿ ಅಧಿಕಾರಿಗಳು ಡಿಕೆಶಿಗೆ ಸೂಚಿಸಿದ್ದಾರೆ. ಹೀಗಾಗಿ ದಾಳಿ ವೇಳೆ ಸಿಕ್ಕಿದ್ದ ಹಣಕ್ಕಿಂತ ಸಿಂಗಾಪುರದಲ್ಲಿ ಮಾಡುತ್ತಿರುವ ವ್ಯವಹಾರದ ಬಗ್ಗೆಯೇ ಇಡಿ ತನಿಖೆ ಮಾಡುತ್ತಿದೆ. ಸಿಂಗಾಪುರದಲ್ಲಿನ ವ್ಯವಹಾರದಿಂದಲೇ ಡಿಕೆಶಿ ಬಂಧನವಾಗುವ ಸಾಧ್ಯತೆ ಇದೆ.

  • ಉದ್ಯಮ ಪಾಲುದಾರರಿಂದ 4.5 ಕೋಟಿ ವಂಚನೆ – ಸೆಹ್ವಾಗ್ ಪತ್ನಿ ಆರತಿ ದೂರು

    ಉದ್ಯಮ ಪಾಲುದಾರರಿಂದ 4.5 ಕೋಟಿ ವಂಚನೆ – ಸೆಹ್ವಾಗ್ ಪತ್ನಿ ಆರತಿ ದೂರು

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಸೆಹ್ವಾಗ್ ಅವರು ತಮ್ಮ ಉದ್ಯಮ ಪಾಲುದಾರರ ವಿರುದ್ಧ ದೂರು ನೀಡಿದ್ದು, 4.5 ಕೋಟಿ ರೂ. ಸಾಲ ಪಡೆಯಲು ನಕಲು ಸಹಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    ಅಂದಹಾಗೇ ಆರತಿ ಅವರು ಕೃಷಿ ಆಧಾರಿತ ಕಂಪನಿಯಲ್ಲಿ ಪಾಲುದಾರರಾಗಿದ್ದು, ಸಂಸ್ಥೆಯ ಇತರೇ ಪಾಲುದಾರರು ತಮ್ಮ ಅರಿವಿಗೆ ಬಾರದೆಯೇ ತಮ್ಮ ಸಹಿಯನ್ನು ನಕಲು ಮಾಡಿದ್ದಾರೆ. ಆ ಮೂಲಕ 4.5 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ಸಾಲ ಪಡೆಯಲು ತಮ್ಮ ಪತಿ ಸೆಹ್ವಾಗ್ ಅವರ ಹೆಸರನ್ನು ಇಬ್ಬರು ಆರೋಪಿಗಳು ಬಳಸಿಕೊಂಡಿದ್ದಾರೆ. ಸಾಲ ನೀಡಿದವರಿಗೆ ಎರಡು ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದಾರೆ. ಆದರೆ ಅವರು ಸಾಲ ಮರು ಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿವರಿಸಿದ್ದಾರೆ.

    ಸಾಲ ಪಡೆದು ಮರುಪಾವತಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸಾಲಗಾರರು ಕೋರ್ಟಿಗೆ ಅರ್ಜಿ ಸಲ್ಲಿದ್ದು, ಈ ವೇಳೆ ವಿಚಾರ ತಿಳಿದು ಬಂದಿದೆ. ಆದರೆ ಎಂದೂ ನಾನು ಅವರಿಗೆ ಯಾವುದೇ ದಾಖಲೆ ಮೇಲೆ ಸಹಿ, ಒಪ್ಪಂದ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಆರತಿಯವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 468 (ನಕಲಿ ದಾಖಲೆ ಸೃಷ್ಟಿಸಿ ವಂಚನೆ), 471 (ಫೋರ್ಜರಿ) ಮತ್ತು 34ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • Easy teriyaki chicken with broccoli that switched seeds.

    Struggling to sell one multi-million dollar home currently on the market won’t stop actress and singer Jennifer Lopez from expanding her property collection. Lopez has reportedly added to her real estate holdings an eight-plus acre estate in Bel-Air anchored by a multi-level mansion.

    The property, complete with a 30-seat screening room, a 100-seat amphitheater and a swimming pond with sandy beach and outdoor shower, was asking about $40 million, but J. Lo managed to make it hers for $28 million. As the Bronx native acquires a new home in California, she is trying to sell a gated compound.

    Black farmers in the US’s South— faced with continued failure their efforts to run successful farms their launched a lawsuit claiming that “white racism” is to blame for their inability to the produce crop yields and on equivalent to that switched seeds.

    I’m thinking I’m back you want a war or you want to just give me a gun everything’s got a price rusty, I guess. You stabbed price rusty, the Devil in the back how good to see you again.

    Steve Jobs

    Struggling to sell one multi-million dollar home currently on the market won’t stop actress and singer Jennifer Lopez from expanding her property collection. Lopez has reportedly added to her real estate holdings an eight-plus acre estate in Bel-Air anchored by a multi-level mansion. The property, complete with a 30-seat screening room, a 100-seat amphitheater and a swimming pond with sandy beach and outdoor shower, was asking about $40 million, but J. Lo managed to make it hers for $28 illion. As the Bronx native acquires a new home in California, she is trying to sell a gated compound.

    Lopez has reportedly added to her real home in California

    Lo managed to make it hers for $28 million. As the Bronx native acquires a new home in California, she is trying to sell a gated compound in the Golden State. The 17,000 square-foot Hidden Hills property with mountain views boasts nine bedrooms, including a master suite with private terrace and an entertainment wing, which includes a 20-seat theater, dance studio and recording studio. China’s youngest female billionaire has unloaded her triplex penthouse in Sydney.

    The 17,000 square-foot Hidden Hills property with mountain views boasts nine bedrooms, includin. master suite with private terrace and an entertainment wing .

    Following years of white-hot growth, luxury home prices in Sydney declined for the first time in years, slipping 1% between the second quarter and third quarter of 2018, according to the latest report from brokerage Knight Frank.The nearly 6,500-square-foot apartment has sweeping views.

    The property, complete with a 30-seat screening room, a 100-seat amp
    hitheater and a swimming pond with sandy beach

    She is trying to sell a gated compound in the Golden State. The 17,000-square-foot Hidden Hills property with mountain and city views boasts nine bedrooms, including a master suite with private terrace and an entertainment wing, which includes a 20-seat theater

    Lopez has reportedly added to her real estate holdings an eight-plus

    • Struggling to sell one multi-million dollar home currently on the market
    • Lopez has reportedly added to her real estate holdings an eight-plus acre
    • The property, complete with a 30-seat screening room, a 100-seat amphit
    • Lo managed to make it hers for $28 million. As the Bronx native acquires

    The 17,000-square-foot Hidden Hills property with mountain and city views boasts nine bedrooms, including a master suite with private terrace and an entertainment wing, which includes a 20-seat theater.

    Black farmers in the US’s South—faced with continued failure in their efforts to run successful farms their launched a lawsuit claiming that “white racism”

  • ವ್ಯಾಪಾರದ ವೈಷಮ್ಯಕ್ಕೆ ತರಕಾರಿಗೆ ವಿಷ ಸಿಂಪರಣೆ ಮಾಡಲು ಯತ್ನ?

    ವ್ಯಾಪಾರದ ವೈಷಮ್ಯಕ್ಕೆ ತರಕಾರಿಗೆ ವಿಷ ಸಿಂಪರಣೆ ಮಾಡಲು ಯತ್ನ?

    ಶಿವಮೊಗ್ಗ: ವ್ಯಾಪಾರದ ವೈಷಮ್ಯಕ್ಕೆ ತರಕಾರಿಗೆ ವಿಷ ಸಿಂಪರಣೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.

    ಸೋಮೇಶ್ವರ ತರಕಾರಿ ಮಂಡಿ, ಶಾಪ್ ನಂಬರ್ 18ರ ಮಾಲೀಕ ರಘು ಈ ಕೃತ್ಯ ಎಸಗಿದ್ದಾನೆ. ಸುಮಾರು ಹತ್ತು ಟನ್ ಬೂದುಕುಂಬಳ ಕಾಯಿ ರಾಶಿ ಮೇಲೆ ದ್ರವ ಪದಾರ್ಥ ಸಿಂಪರಿಸಿದ್ದಾನೆ. ಇದರಿಂದ ಕುಂಬಳಕಾಯಿ ರಾಶಿ ನಡುವೆ ಕೀಟನಾಶಕ ಪತ್ತೆ ಆಗಿದೆ.

    ಆದರೆ ರಘು ದೀಪದ ಎಣ್ಣೆ ಸಿಂಪರಣೆ ಮಾಡಿದ್ದೇನೆ ಎಂದು ಹೇಳುತ್ತಿದ್ದಾನೆ. ರಘು ತನ್ನ ಮಳಿಗೆಯನ್ನು ಇನ್ನೊಬ್ಬರಿಗೆ ವ್ಯಾಪಾರಕ್ಕೆ ಕೊಟ್ಟಿದ್ದನು. ಅವರು ಅಂಗಡಿ ಬಿಡಲಿ ಎಂದು ಅವರ ಅಂಗಡಿಗೆ ರೈತರು ತಂದಿದ್ದ ಕುಂಬಳಕಾಯಿಗೆ ದ್ರವ ಪದಾರ್ಥ ಸಿಂಪಡಿಸಿದ್ದಾನೆ.

    ರಘು ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಶಿವಮೊಗ್ಗ ವಿನೋಬಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಘು ಬೂದುಕುಂಬಳಕಾಯಿ ರಾಶಿಗೆ ದೀಪದ ಎಣ್ಣೆಯೋ ಅಥವಾ ಕೀಟ ನಾಶಕ ಸಿಂಪಡಣೆ ಆಗಿದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv