Tag: Burial

  • ತನ್ನ ಸಮಾಧಿ ತಾನೇ ನಿರ್ಮಿಸಿಕೊಂಡಿದ್ದ ಸ್ವಾಭಿಮಾನಿ

    ತನ್ನ ಸಮಾಧಿ ತಾನೇ ನಿರ್ಮಿಸಿಕೊಂಡಿದ್ದ ಸ್ವಾಭಿಮಾನಿ

    ಚಾಮರಾಜನಗರ: ಸಾಮಾನ್ಯವಾಗಿ ಸ್ವಾಮೀಜಿಗಳು ತಾವು ನಿಧನವಾಗುವ ಮುನ್ನೆವೆ ಮಠದಲ್ಲಿ ಅವರ ಸಮಾಧಿಯನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ 20 ವರ್ಷದ ಹಿಂದೆಯೆ ತನ್ನ ಸಮಾಧಿ ನಿರ್ಮಾಣ ಮಾಡಿಕೊಂಡಿದ್ದು, ಇಂದು ಆ ಸಮಾಧಿಯಲ್ಲೆ ಅವರ ಅಂತ್ಯಕ್ರಿಯೆ ನೆರವೇರಿತು.

    ಚಾಮರಾಜನಗರ ತಾಲೂಕಿನ ನಂಜೇದೇವನಪುರ ನಿವಾಸಿ ಪುಟ್ಟನಂಜನಪ್ಪ (85) ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ನಿನ್ನೆ ರಾತ್ರಿ ಸಾವನಪ್ಪಿದ್ದಾರೆ. ಆದರೆ ಇವರು ಸಾಯುವ ಮುನ್ನೆವೆ ಸಮಾಧಿ ಮಾಡಿಕೊಂಡಿದ್ದು ವಿಶೇಷವಾಗಿದೆ. ಈ ರೀತಿಯ ಸಮಾಧಿಗಳನ್ನು ಸಾಮಾನ್ಯವಾಗಿ ಮಠಗಳಲ್ಲಿ ಸ್ವಾಮೀಜಿಗಳು ನಿರ್ಮಾಣ ಮಾಡಿಕೊಂಡಿರುತ್ತಾರೆ. ಅಂತಹ ಸಮಾಧಿಯಲ್ಲಿ ಅವರು ಕಾಲವಾದಾಗ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಆದರೆ ಪುಟ್ಟನಂಜಪ್ಪ ತಮ್ಮ ಜಮೀನಲ್ಲೆ 20 ವರ್ಷದ ಹಿಂದೆಯೆ ತಮ್ಮ ಸಮಾಧಿಯನ್ನ ಕಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಚುನಾವಣೆ ವರ್ಷ ಇದು, ಏನೇ ಮಾಡಿದರೂ ಪಕ್ಷಕ್ಕೆ ಲಾಭ: ಕೆ.ಎನ್ ರಾಜಣ್ಣ

    ಸಮಾಧಿ ಕಟ್ಟಿಸಿಕೊಂಡು ಅಲ್ಲಿಗೆ ಮರಳನ್ನು ತುಂಬಿಸಿದ್ರಂತೆ. ನಿನ್ನೆ ಸಾವನಪ್ಪಿದ್ದರಿಂದ ಇಂದು ಆ ಸಮಾಧಿಗೆ ತುಂಬಿದ್ದ ಮರಳನ್ನು ತೆಗೆದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದಷ್ಟೆ ಅಲ್ಲದೆ ಅಂತ್ಯಕ್ರಿಯೆಗೆ ಬೇಕಾಗುವಂತ ವಿಭೂತಿ ಕಳಸ, ಸೇರಿದಂತೆ ಇತರೆ ಪೂಜಾ ಸಾಮಾಗ್ರಿಗಳು ತೆಗೆದಿಟ್ಟಿದ್ದರಂತೆ. ಅಷ್ಟೆ ಅಲ್ಲದೆ ತಮ್ಮ 11 ನೇ ದಿನದ ತಿಥಿ ಕಾರ್ಯಕ್ಕು ಕೂಡ ಒಂದೂವರೆ ಲಕ್ಷ ಹಣವನ್ನು ಸಹ ತೆಗೆದಿಟ್ಟಿದ್ದರಂತೆ. ಇದನ್ನೂ ಓದಿ: ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ- ಬಿಜೆಪಿಗರಿಗೆ ಜಮೀರ್ ಟಾಂಗ್

    ಅಷ್ಟಕ್ಕೂ ಅವರು ಈ ರೀತಿ ಸಮಾಧಿ ನಿರ್ಮಾಣ ಮಾಡಿಕೊಳ್ಳಲು ಕಾರಣ ಇದೆಯಂತೆ. ಪುಟ್ಟನಂಜಪ್ಪರಿಗೆ ಮೂವರು ಮಕ್ಕಳಿದ್ದು, ಈಗಾಗಲೇ ಅವರಿಗೆ ಸಮಾನಾವಾಗಿ ತಮ್ಮ ಆಸ್ತಿಯನ್ನ ಹಂಚಿಕೆ‌ ಮಾಡಿದ್ದಾರಂತೆ. ಇದರಿಂದ ತಾವು ಸಾವನಪ್ಪಿದ ಸಂಧರ್ಭದಲ್ಲಿ ಮಕ್ಕಳಿಗೆ ಹಣ ವಿಚಾರವಾಗಿ ಯಾವುದೇ ತೊಂದರೆಯಾಗಬಾರದು ಅನ್ನೋ ಒಂದು ಕಾರಣವಾದ್ರೆ, ಅವರ ಪತ್ನಿಯ ಸಮಾಧಿ ಪಕ್ಕದಲ್ಲೆ ತಮ್ಮ ಸಮಾಧಿ ಇರಬೇಕು‌ ಎಂಬುದು ಅವರ ಆಸೆಯಾಗಿತ್ತಂತೆ. ಒಟ್ಟಾರೆ, ಪುಟ್ಟನಂಜಪ್ಪ ತಾವು ಸತ್ತಮೇಲು ತನ್ನ ಮಕ್ಕಳಿಗೆ ತೊಂದರೆಯಾಗಬಾರದು ಅನ್ನೋ ಕಾರಣದಿಂದ ತಮ್ಮ ದುಡಿಮೆಯನ್ನೆ ಕೂಡಿಟ್ಟು ಸ್ವಾಭಿಮಾನನ್ನ ತೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋಲಿನಿಂದ ಬಡಿದು, 15 ಬಾರಿ ಚುಚ್ಚಿ ಚಿಕ್ಕಮ್ಮಳಿಂದ ಮಲಮಗಳ ಹತ್ಯೆ

    ಕೋಲಿನಿಂದ ಬಡಿದು, 15 ಬಾರಿ ಚುಚ್ಚಿ ಚಿಕ್ಕಮ್ಮಳಿಂದ ಮಲಮಗಳ ಹತ್ಯೆ

    – ಕ್ರೂರವಾಗಿ ಕೊಂದು ಮನೆಯಲ್ಲೇ ಸಮಾಧಿ

    ಲಕ್ನೋ: ಕೋಲಿನಿಂದ ಬಡಿದು, 15 ಬಾರಿ ಚುಚ್ಚಿ ಮಲತಾಯಿಯೊಬ್ಬಳು ಮಲಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ದಿನ ಮಗುವಿಗೆ ಮಲತಾಯಿ ದೈಹಿಕ ಕಿರುಕುಳ ನೀಡುತ್ತಿದ್ದಳು. ಒಂದು ದಿನ ಮನೆಗೆಲಸವನ್ನು ಮಾಡದೇ ಮಲಗಿದ್ದ ಮಗುವನ್ನು ಮಲತಾಯಿ ಕಾಲಿನಿಂದ ಮುಖಕ್ಕೆ ಒದ್ದು, ಹಿಂಸೆ ನೀಡಿದ್ದಳು. ಆದರೆ ಕೆಲ ದಿನಗಳಿಂದ ಬಾಲಕಿ ಕಾಣೆಯಾಗಿದ್ದಳು. ಇದನ್ನು ಗಮನಿಸಿದ ಪಕ್ಕದ ಮನೆಯವರಾದ ಕಪೂರ್ ಚಂದ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

    ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಬಾಲಕಿ ತಂದೆ, ಆಕೆ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾಳೆ. ಮತ್ತೆ ಕೆಲ ದಿನಗಳ ನಂತರ ವಾಪಸ್ ಬರುತ್ತಾಳೆ ಎಂದು ಹೇಳಿದ್ದಾರೆ. ಆದರೆ ಮೃತ ಬಾಲಕಿಯ ಸಹೋದರಿ ಮಾತ್ರ ಇಲ್ಲ ಆಕೆಯನ್ನು ಅಮ್ಮ ಹೊಡೆದು ಕೊಂದು ಹಾಕಿದರು ಎಂದು ಹೇಳಿದ್ದಾಳೆ. ಆಗ ತಂದೆ ಇಲ್ಲ ಆಕೆ ಮನೆಯ ಮೇಲ್ಚಾವಣಿ ಮೇಲಿಂದ ಬಿದ್ದು ಸಾವನ್ನಪ್ಪಿದಳು ಎಂದು ಕಥೆ ಕಟ್ಟಲು ಆರಂಭಿಸಿದ್ದಾರೆ.

    ಇದರಿಂದ ಅನುಮಾನಗೊಂಡ ಪೊಲೀಸರು, ತಂದೆಯನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ಒಳಪಡಿಸಿದ್ದಾರೆ. ಈ ವೇಳೆ ನಾವೇ ಮಗುವನ್ನು ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾನೆ. ಆಕೆಯ ಮಲತಾಯಿ ಆಕೆಯನ್ನು ಹತ್ಯೆ ಮಾಡಿದ್ದಾರೆ. ನಂತರ ಈ ವಿಚಾರವನ್ನು ತಂದೆಗೆ ಹೇಳಿದ್ದಾರೆ. ಆಗ ಇಬ್ಬರು ಸೇರಿ ಮಗುವನ್ನು ಮನೆಯಲ್ಲೇ ಗುಂಡಿ ತೋಡಿ ಸಮಾಧಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪೊಲೀಸರು ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಬಾಲಕಿಯನ್ನು ದೊಣ್ಣೆಯಿಂದ ಹೊಡೆದು ಮತ್ತು 15 ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅತ್ಯಂತ ಕ್ರೂರವಾಗಿ ಕೊಂದು ಮನೆಯಲ್ಲೆ ಸಮಾಧಿ ಮಾಡಿದ್ದಾರೆ. ಕೊಲೆ ಮಾಡಿದ ಮಲತಾಯಿ ಪರಾರಿಯಾಗಿದ್ದಾಳೆ ಎಂದು ಬರೇಲಿ ಠಾಣೆಯ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಸಾವನ್ನಪ್ಪಿದ ಪ್ರೀತಿಯ ಶ್ವಾನಕ್ಕೆ ಸಮಾಧಿ ನಿರ್ಮಿಸಿದ ಕುಟುಂಬ

    ಸಾವನ್ನಪ್ಪಿದ ಪ್ರೀತಿಯ ಶ್ವಾನಕ್ಕೆ ಸಮಾಧಿ ನಿರ್ಮಿಸಿದ ಕುಟುಂಬ

    ಚಿಕ್ಕಬಳ್ಳಾಪುರ: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅದೆಷ್ಟೊ ಮಂದಿ ತಮ್ಮ ಮನೆ ಕಾವಲಿಗೆ ಇರಲಿ ಅಂತ ನಾಯಿಗಳನ್ನ ಸಾಕೋದು ಸಾಮಾನ್ಯ. ಒಂದು ವೇಳೆ ಆ ಸಾಕು ನಾಯಿ ಸತ್ತರೆ ಎಲ್ಲೋ ಬಿಸಾಡಿ ಇಲ್ಲ ಮಣ್ಣಲ್ಲಿ ಮಣ್ಣು ಮಾಡಿ ಸುಮ್ಮನಾಗುತ್ತಾರೆ. ಆದ್ರೆ ಇಲ್ಲೊಂದು ಕುಟುಂಬ ಮಾತ್ರ ಮೃತಪಟ್ಟ ತಮ್ಮ ಪ್ರೀತಿಯ ಶ್ವಾನಕ್ಕೆ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೇರವೇರಿಸಿದ್ದಲ್ಲದೆ, ಶ್ವಾನಕ್ಕೆ ಸಮಾಧಿ ಸಹ ನಿರ್ಮಾಣ ಮಾಡಿ ತಮ್ಮ ಪ್ರೀತಿಯನ್ನ ತೋರಿ ಮಾನವೀಯತೆ ಮೆರೆದಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಸಂತೆ ಮಾರುಕಟ್ಟೆ ಬಳಿಯ ಪ್ರಾವಿಷನ್ ಸ್ಟೋರ್‍ನ ಮಾಲೀಕ ಸುನಿಲ್ ಕುಟುಂಬಸ್ಥರು ತಮ್ಮ ಪ್ರೀತಿಯ ಶ್ವಾನ ಸೋನುವಿಗೆ ಸಮಾಧಿ ನಿರ್ಮಾಣ ಮಾಡಿದ್ದಾರೆ. 14 ವರ್ಷಗಳ ಕಾಲ ತಮ್ಮ ಮನೆ ಮಗಳಾಗಿದ್ದ ಪ್ರೀತಿಯ ಶ್ವಾನ ಸೋನು ಜೂನ್ 14 ರಂದು ವಯೋಸಹಜ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಹೀಗಾಗಿ ಅಂದು ಮನೆ ಮಂದಿಯೆಲ್ಲಾ ಸೇರಿ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ ವಿಧಾನಗಳ ಮೂಲಕ ಅಚ್ಚು ಮೆಚ್ಚಿನ ಶ್ವಾನ ಸೋನುವಿನ ಅಂತ್ಯಕ್ರಿಯೆ ನೇರವೇರಿಸಿದ್ದರು.

    ಮೂರು ದಿನದ ಕಾರ್ಯ ಸೇರಿದಂತೆ 11 ದಿನದ ಕಾರ್ಯ ಸಹ ಮಾಡಿ ಶ್ವಾನ ಸೋನುವಿನ ಮೇಲಿನ ತಮ್ಮ ಪ್ರೀತಿಯನ್ನ ತೋರಿದ್ದರು. ಆದರೆ ಇತ್ತೀಚೆಗೆ ಬಂದ ಪಿತೃ ಪಕ್ಷದ ಸಮಯದಲ್ಲಿ ಪ್ರೀತಿಯ ಶ್ವಾನ ಸೋನುವಿಗೆ ಕಲ್ಲುಗಳ ಮೂಲಕ ಅಚ್ಚು ಕಟ್ಟಾದ ಸಮಾಧಿ ಸಹ ನಿರ್ಮಾಣ ಪೂಜೆ ಪುನಸ್ಕಾರ ಮಾಡಿದ್ದಾರೆ. ಪ್ರೀತಿ ಶ್ವಾನ ಸೋನುವಿಗೆ ಸಮಾಧಿ ನಿರ್ಮಾಣ ಮಾಡಿ ತಮ್ಮ ಮತ್ತಷ್ಟು ಪ್ರೀತಿಯನ್ನ ತೋರಿ ಮಾನವೀಯತೆ ಮರೆದಿದ್ದಾರೆ.

    3 ತಿಂಗಳಿರುವಾಗಲೇ ಸುನಿಲ್ ಮನೆಗೆ ಅತಿಥಿಯಾಗಿ ಬಂದಿದ್ದ ಈ ಶ್ವಾನ, ಕುಟುಂಬದ ಸದಸ್ಯೆ ಆಗಿದ್ದಳು. ಇದಕ್ಕೆ ಸ್ಪಷ್ಟ ನಿದರ್ಶನ, ಸುನೀಲ್ ಅಕ್ಕ ಅವರು ಉದ್ಯೋಗ ಮಾಡುವ ಸಂಸ್ಥೆಗೆ ಕುಟುಂಬದ ಗ್ರೂಪ್ ಫೋಟೋ ನೀಡಬೇಕಾದ ಸಂಧರ್ಭದಲ್ಲಿ ತಮ್ಮ ತಂದೆ-ತಾಯಿ ತಮ್ಮನ ಜೊತೆ ಸೋನು ಕೂಡ ತನ್ನ ಕುಟುಂಬದ ಸದಸ್ಯೆ ಅಂತ ಗ್ರೂಪ್ ಫೋಟೋ ತೆಗೆಸಿಕೊಂಡು ಕೊಟ್ಟಿದ್ರಂತೆ, ಇಂತಹ ಮನೆ ಮಗಳು ಸೋನುವಿನ ಆಗಲಿಕೆ ಈಗಲೂ ಈ ಕುಟುಂಬಸ್ಥರನ್ನ ಕಾಡ್ತಿದೆ.

    ಒಟ್ಟಿನಲ್ಲಿ ಕೆಲವರು ಬದುಕಿದ್ದಾಗಲೇ ಹೆತ್ತರವನ್ನೇ ಬೀದಿ ಪಾಲು ಮಾಡಿ ಆಮಾನವೀಯವಾಗಿ ನಡೆದುಕೊಳ್ತಾರೆ. ಸತ್ತರೂ ಸಹ ಕೊನೆ ಬಾರಿ ನೋಡೋಕು ಹೋಗದವರು ಇದ್ದಾರೆ. ಅಂತಹದರಲ್ಲಿ ಶ್ವಾನಕ್ಕೆ ಸಮಾಧಿ ಕಟ್ಟಿ ಪೂಜೆ ಪುನಸ್ಕಾರ ನೇರೇವೇರಿಸ್ತಿರೋ ಈ ಕುಟುಂಬಸ್ಥರ ಕಾರ್ಯ ನಿಜಕ್ಕೂ ಮಾದರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರೂರು ಶ್ರೀಗಳ ಜೊತೆ ಆತ್ಮೀಯ ಸಂಪರ್ಕವಿತ್ತು- ಯು.ಟಿ.ಖಾದರ್

    ಶಿರೂರು ಶ್ರೀಗಳ ಜೊತೆ ಆತ್ಮೀಯ ಸಂಪರ್ಕವಿತ್ತು- ಯು.ಟಿ.ಖಾದರ್

    ಉಡುಪಿ: ಶಿರೂರು ಶ್ರೀಗಳ ಜೊತೆ ನನಗೆ ಆತ್ಮೀಯ ಸಂಪರ್ಕವಿತ್ತು. ಗುರುವಾರ ಬೆಂಗಳೂರಲ್ಲಿ ಇದ್ದ ಕಾರಣ ಅಂತ್ಯಕ್ರಿಯೆಗೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ಶ್ರೀಗಳ ಸಮಾಧಿಗೆ ತೆರಳಿ ಆರ್ಶೀವಾದ ಪಡೆದಿದ್ದೇನೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

    ಶ್ರೀಗಳ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಕುರಿತು ಯಾವುದೇ ವಿಚಾರಗಳು ನನ್ನ ಗಮನಕ್ಕೆ ಬಂದಿಲ್ಲ. ಇದರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಈ ಹಿಂದೆ ಶ್ರೀಗಳನ್ನು ಭೇಟಿ ಮಾಡಿದ್ದೆ, ಅವರೊಂದಿಗೆ ಆತ್ಮೀಯತೆಯಿಂದ ಇದ್ದೇವು. ಹಾಗಾಗಿ ಆ ಆತ್ಮೀಯತೆಗಾಗಿ ಬಂದ್ದಿದ್ದೇನೆ ಹೊರತು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಬಂದಿಲ್ಲ ಎಂದರು.

    ಶ್ರೀಗಳ ಸಾವಿನ ಬಗ್ಗೆ ಕುರಿತು ತನಿಖೆ ನಡೆಸುವುದು ಜಿಲ್ಲಾಡಳಿತ ಮತ್ತು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಸಂಬಂಧಿಸಿದ್ದು, ನಾನು ಇದರಲ್ಲಿ ಭಾಗಿಯಾಗುವುದಿಲ್ಲ. ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ ಬೇರೆಯವರ ಬಗ್ಗೆ ಮಾತನಾಡುವುದಿಲ್ಲ ಎಂದರು.

    ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ಅಭಯ ಚಂದ್ರ ಜೈನ್ ಆಗಮಿಸಿ ಶ್ರೀಗಳ ಸಮಾಧಿಗೆ ನಮನ ಸಲ್ಲಿಸಿದರು.

  • ಇದೊಂದು ಹೈಫೈ ಅಂತ್ಯಸಂಸ್ಕಾರ: ಬೆಲೆಬಾಳುವ ಚಿನ್ನದೊಂದಿಗೆ ವ್ಯಕ್ತಿಯ ಅಂತ್ಯಕ್ರಿಯೆ

    ಇದೊಂದು ಹೈಫೈ ಅಂತ್ಯಸಂಸ್ಕಾರ: ಬೆಲೆಬಾಳುವ ಚಿನ್ನದೊಂದಿಗೆ ವ್ಯಕ್ತಿಯ ಅಂತ್ಯಕ್ರಿಯೆ

    ಪೋರ್ಟ್ ಆಫ್ ಸ್ಪೇನ್: ವ್ಯಕ್ತಿಯೊಬ್ಬರು ಸತ್ತರೆ ಅವರಿಗೆ ಇಷ್ಟವಾದ ವಸ್ತುವನ್ನ ಅವರ ಜೊತೆಯಲ್ಲಿ ಸಮಾಧಿ ಮಾಡುತ್ತಾರೆ. ಆದರೆ ಕೆರೆಬಿಯನ್ ದ್ವೀಪದಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 65 ಲಕ್ಷ ಬೆಳೆ ಬಾಳುವ ಬಂಗಾರ ಜೊತೆ ಸಮಾಧಿಯಾಗುವ ಮೂಲಕ ಸುದ್ದಿಯಾಗಿದ್ದಾರೆ.

    ಬದುಕಿದ್ದಾಗ ಮೈ ತುಂಬಾ ಚಿನ್ನಾಭರಣ ಧರಿಸಿ ಓಡಾಡಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತೆ. ಅದು ಸಹಜ. ಸತ್ತ ಮೇಲೆ ಯಾರೂ ಏನೂ ಹೊತ್ಕೊಂಡ್ ಹೋಗಲ್ಲ ಸ್ವಾಮಿ ಅನ್ನೋರೂ ತುಂಬಾ ಮಂದಿ. ಆದರೆ ಕೆರಿಬಿಯನ್ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಕೊಲೆಯಾಗಿದ್ದ ವ್ಯಕ್ತಿಯೊಬ್ಬರನ್ನು ವಿಭಿನ್ನವಾಗಿ ಸಮಾಧಿ ಮಾಡಲಾಗಿದೆ.

    ಶೆರಾನ್ ಸುಖೆಡೋ (33) ಕೊಲೆಯಾದ ವ್ಯಕ್ತಿ. ಕಳೆದ ವಾರ ಪತ್ನಿ ಮತ್ತು ಪೋಷಕರ ಜೊತೆ ಮನೆಯ ಹೊರಗೆ ಶೂಟಿಂಗ್ ನಡೆಸುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು. ಇವರು ಜೀವನದುದ್ದಕ್ಕೂ ಮೈತುಂಬಾ ತೊಲೆಗಟ್ಟಲೆ ಚಿನ್ನ ಧರಿಸಿ ಓಡಾಡುತ್ತಿದ್ದರು. ಆದ್ದರಿಂದ ಚಿನ್ನದಿಂದಲೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

    ರಿಯಲ್ ಎಸ್ಟೇಟ್ ಮೂಲಕವೇ ಕೋಟಿ ಕೋಟಿ ಸಂಪಾದನೆ ಮಾಡಿದ್ದ ಶೋರನ್ ಸುಖ್ದೋ ಅವರು ದುಷ್ಕರ್ಮಿಗಳು ಗುಂಡಿಗೆ ಬಲಿಯಾಗಿದ್ದಾರೆ. ಬದುಕಿದ್ದಾಗ ಸುಖ್ದೋಗೆ ಚಿನ್ನಾಭರಣ ಧರಿಸೋ ವ್ಯಾಮೋಹವಿತ್ತು. ಯಾವಾಗಲೂ ಕತ್ತಿನಲ್ಲಿ ಚಿನ್ನದ ಹಾರಗಳು, ಕೈ ಬೆರಳುಗಳಲ್ಲಿ ದಪ್ಪದ ಉಂಗುರಗಳನ್ನ ಸುಖ್ದೋ ಧರಿಸುತ್ತಿದ್ದರು.

    ಇಷ್ಟೊಂದು ಚಿನ್ನದ ಕ್ರೇಜ್ ಹೊಂದಿದ್ದ ಸುಖ್ದೋ ಅಂತ್ಯಸಂಸ್ಕಾರವನ್ನು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಜೊತೆಗೆ ಮಾಡಲಾಗಿದೆ. ಸುಖ್ದೋ ಶವ ಇಟ್ಟ ಪೆಟ್ಟಿಗೆಗೆ 32 ಲಕ್ಷ ರೂಪಾಯಿ ಖರ್ಚು ಮಾಡಿ ಚಿನ್ನದ ಲೇಪನ ಮಾಡಿಸಲಾಗಿತ್ತು. ಅಷ್ಟೇ ಅಲ್ಲದೇ ಅವರ ಬೂಟ್ ಗಳನ್ನು ಸಹ ಅದರ ಜೊತೆಗೆ ಇಡಲಾಗಿತ್ತು. ಜೊತೆಗೆ ಅವರ ಬಳಿ ಇದ್ದ 65 ರೂಪಾಯಿ ಲಕ್ಷದ ಮೌಲ್ಯದ ಚಿನ್ನಾಭರಣವನ್ನು ಕೂಡ ಮೈಮೇಲೆ ಹಾಕಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ವರದಿಯಾಗಿದೆ.

  • ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗೋ ತಂದೆ-ಕಾರಣ ಕೇಳಿದ್ರೆ ನಿಮ್ಮ ಮನಕಲಕುತ್ತೆ

    ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗೋ ತಂದೆ-ಕಾರಣ ಕೇಳಿದ್ರೆ ನಿಮ್ಮ ಮನಕಲಕುತ್ತೆ

    ಬೀಜಿಂಗ್: ವ್ಯಕ್ತಿಯೊಬ್ಬರು ತಮ್ಮ ಎರಡು ವರ್ಷಗಳ ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗುತ್ತಾರೆ. ದಿನದಲ್ಲಿ ಸಮಯ ಸಿಕ್ಕರೂ ಕೂಡ ಅವರ ಸಮಾಧಿಯಲ್ಲಿಯೇ ಆಟ ಆಡ್ತಾರೆ.

    ಝಾಂಗ್ ಲೀಯೆಂಗ್ ಮತ್ತು ಡೇಂಗ್ ದಂಪತಿಯ ಮುದ್ದಾದ ಮಗಳು ದೊಡ್ಡ ಕಾಯಿಲೆಯಿಂದ ಬಳಲುತ್ತಿದ್ದು, ಆಕೆ ದೊಡ್ಡವಳಾದ ಮೇಲೆ ತನಗಿರುವ ರೋಗದಿಂದ ಭಯ ಪಡಬಾರದೆಂದು ಈ ರೀತಿ ಮಾಡಲಾಗ್ತಿದೆ ಎಂದು ಬಾಲಕಿ ತಂದೆ ಝಾಂಗ್ ಹೇಳ್ತಾರೆ.

    ಮಗಳು ದೊಡ್ಡವಳಾದ ಮೇಲೆ ಸಾವಿನ ಭಯದಿಂದ ದೂರವಿದ್ದು, ಮುಂದೊಂದು ದಿನ ತಾನು ಏಕಾಂಗಿಯಾಗಿ ಇಲ್ಲಿರಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಸಲು ತಂದೆ ಈ ರೀತಿ ಮಾಡ್ತಾಯಿದ್ದಾರೆ. ಹೀಗಾಗಿ ಝಾಂಗ್ ಮನೆಯ ಆವರಣದಲ್ಲಿ ಸಮಾಧಿ ತೋಡಿದ್ದು ಪ್ರತಿದಿನ ಅಲ್ಲಿಯೇ ಮಗಳ ಜೊತೆ ಮಲಗಲು ಆರಂಭಿಸಿದ್ದಾರೆ. ಇನ್ನೂ ಝಾಂಗ್ ಮಗಳಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕವಾಗಿ ದುರ್ಬಲರಾಗಿದ್ದು, ಚಿಕಿತ್ಸೆಯ ಹಣಕ್ಕಾಗಿ ಕಷ್ಟಪಡುತ್ತಿದ್ದಾರೆ. ಕಷ್ಟದ ನಡುವೆಯೂ ಮಗಳಿಗೆ ಮಾನಸಿಕವಾಗಿ ದೃಢ ಪಡಿಸುತ್ತಿದ್ದಾರೆ.

    ವೈದ್ಯರು ಝಾಂಗ್ ಅವ್ರಿಗೆ ಸಲಹೆ ನೀಡಿದ್ದು, ಮುಂದೆ ತಾಯಿ ಗರ್ಭ ಧರಿಸಿ ಹೆರಿಗೆ ಸಮಯದಲ್ಲಿ ದೊರಕುವ ಕೋರ್ಡ್ ಬ್ಲಡ್‍ನಿಂದಾಗಿ ಈಗಿರುವ ಮಗಳನ್ನು ಉಳಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಇವಾಗ ಡೇಂಗ್ ಗರ್ಭಿಣಿಯಾಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

     

  • ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿದ್ರು ದಂಪತಿ

    ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿದ್ರು ದಂಪತಿ

    ಚಿಕ್ಕಬಳ್ಳಾಪುರ: ಎಂತಹವರಿಗೂ ಸಾವು ಎಂದಾಕ್ಷಣ ಆವರಿಸೋದೆ ಭಯ. ಆದ್ರೆ ಈ ದಂಪತಿ ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿಕೊಂಡು ಸಾವಿಗಾಗಿ ಕಾಯುತ್ತಿದ್ದಾರೆ.

    ಹೌದು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಬಂಡಹಳ್ಳಿ ಗ್ರಾಮದಲ್ಲಿರುವ ವೆಂಕಟರೆಡ್ಡಿ ರಾಯಲು ಹಾಗೂ ಜಯಮ್ಮ ದಂಪತಿಯೇ ಇಂತಹ ವಿಚಿತ್ರ ಸಾಹಸಕ್ಕೆ ಮುಂದಾಗಿದ್ದಾರೆ. ಈ ದಂಪತಿ ತಾವು ಸಾಯೋಕು ಮುನ್ನವೇ ತಮ್ಮದೇ ಮನೆಯಲ್ಲೇ ಸಮಾಧಿಯನ್ನ ರೆಡಿ ಮಾಡಿಕೊಂಡಿದ್ದಾರೆ. ಮನೆಯ ಮಧ್ಯಭಾಗದಲ್ಲೇ ಕಲ್ಲು ಚಪ್ಪಡಿಗಳ ಮೂಲಕ ತಮ್ಮ ಸಮಾಧಿಗಳನ್ನ ತಾವೇ ನಿರ್ಮಾಣ ಮಾಡಿ ಕಟ್ಟಿಕೊಂಡಿದ್ದಾರೆ.

    ವೆಂಕಟರೆಡ್ಡಿ ರಾಯಲು ಅವರಿಗೆ 88 ವರ್ಷ ವಯಸ್ಸು. ಇವರ ಪತ್ನಿ ಜಯಮ್ಮಗೆ ಸರಿ ಸುಮಾರು 80 ವರ್ಷಗಳಾಗಿವೆ. ವೆಂಕಟರೆಡ್ಡಿ ರಾಯಲು ಅವರನ್ನ ಯಾಕೆ ಈ ತರ ಅಂತ ಕೇಳಿದರೆ ವೇದಗಳ ಮೂಲಕ ಆತ್ಮದ ರಹಸ್ಯ ತಿಳಿದು ಹೀಗೆ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ.

    ಇನ್ನೂ ಇವರ ಸಾವು 2020 ರಲ್ಲಿ ಸಂಭವಿಸುತ್ತಂತೆ. ಸಾಯೋಕೆ ಒಂದು ತಿಂಗಳ ಮುಂಚೆಯೇ ಸಾವು ಹೇಗೆ ಬರುತ್ತೆ ಅನ್ನೋದು ಕೂಡ ಇವರಿಗೆ ತಿಳಿಯುತ್ತಂತೆ. ಹೀಗಾಗಿ ಸಮಾಧಿಯನ್ನ ಎರಡು ಭಾಗಗಳಾಗಿ ಮಾಡಿಕೊಂಡಿದ್ದು ಸಾಯೋಕು ಒಂದು ತಿಂಗಳ ಮುಂಚೆಯೇ ಅನ್ನ-ಆಹಾರ ತ್ಯಜಿಸಿ ಮೊದಲನೇ ಭಾಗದ ಸಮಾಧಿಯಲ್ಲಿ ಜೀವಂತವಾಗಿ ಸಮಾಧಿಯಾಗುತ್ತೇವೆ ಎಂದು ಹೇಳುತ್ತಾರೆ.

    ಪತ್ನಿ ಸತ್ತ ಅದೇ ತಿಂಗಳಲ್ಲಿ ನಾನು ಕೂಡ ಸಾಯುತ್ತೇನೆ. ಹಾಗೆ ಪ್ರತಿದಿನ ಇದೇ ಸಮಾಧಿಯಲ್ಲಿ ಕುಳಿತು ಧ್ಯಾನ ಪೂಜೆ ಕೂಡ ಮಾಡುತ್ತಿದ್ದೇವೆ ಎಂದು ವೆಂಕಟರೆಡ್ಡಿ ರಾಯಲು ತಿಳಿಸಿದ್ದಾರೆ.

    ಈ ದಂಪತಿ ಮನೆಯಲ್ಲಿಯೇ ಶಿವಲಿಂಗ ಪ್ರತಿಷ್ಟಾಪಿಸಿದ್ದು, ಮನೆಯನ್ನ ಶಿವನ ದೇವಾಲಯನ್ನಾಗಿ ಮಾಡಿಕೊಂಡಿದ್ದಾರೆ. ಬದುಕಿನ ಬಂಡಿಗೆ ಅಂತ ಹಸುವಿನ ಸಾಕಾಣಿಕೆ ಸೇರಿದಂತೆ ಕೃಷಿಕಾಯಕವನ್ನು ಮಾಡುತ್ತಾರೆ.

    ಈ ದಂಪತಿಗೆ 3 ಜನ ಹೆಣ್ಣು ಮಕ್ಕಳು 2 ಗಂಡು ಮಕ್ಕಳು ಇದ್ದು ಎಲ್ಲರು ಮದುವೆಯಾಗಿ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದಾರೆ. ಒಟ್ಟಿನಲ್ಲಿ ಇಂತಹ ತಂತ್ರಜ್ಞಾನ ಯುಗದಲ್ಲೂ ಸಾಯೋಕು ಮುನ್ನವೇ ಸಮಾಧಿ ಮಾಡಿಕೊಂಡಿರೋ ಇವರಿಗೆ ಮೌಢ್ಯ ಅನ್ನಬೇಕೋ ಅಥವಾ ಹುಚ್ಚಾಟ ಅನ್ನಬೇಕೋ ಇವರು ನಂಬಿರೋ ಆ ದೇವರೇ ಬಲ್ಲ.

  • ಮಳೆಗಾಗಿ ಹೂತಿಟ್ಟ ಶವ ತೆಗೆದು ಸುಡ್ತಾರೆ ಈ ಗ್ರಾಮದ ಜನ!

    ಮಳೆಗಾಗಿ ಹೂತಿಟ್ಟ ಶವ ತೆಗೆದು ಸುಡ್ತಾರೆ ಈ ಗ್ರಾಮದ ಜನ!

    ಚಿಕ್ಕಮಗಳೂರು: ವರುಣ ದೇವ ಮುನಿಸಿಕೊಂಡ್ರೆ ಕಪ್ಪೆ, ಕತ್ತೆಗಳ ಮದುವೆ ಮಾಡೋದು ಎಲ್ಲಾ ಕಡೆ ನಡೆಯುತ್ತದೆ. ಆದರೆ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಜನ ಹೂತಿಟ್ಟ ಶವವನ್ನು ಹೊರಗೆ ತೆಗೆದು ಸುಡುವ ವಿಶಿಷ್ಟ ಆಚರಣೆ ನಡೆಸುತ್ತಾರೆ.

    ಈ ಗ್ರಾಮದ ಜನ ಮಳೆಗಾಗಿ ನಾಲ್ಕು ಹಳ್ಳಿಯ ವ್ಯಾಪ್ತಿಯಲ್ಲಿ ಕಳೆದ ಒಂದೆರೆಡು ತಿಂಗಳಲ್ಲಿ ಹೂತು ಹಾಕಿದ್ದ ಮೃತದೇಹಗಳ ತಲೆಯನ್ನ ತೆಗೆದು ಹಲ್ಲು ಹಾಗೂ ಕೂದಲಿನ ಭಾಗವನ್ನ ಕಿತ್ತು ಮೃತದೇಹದ ತಲೆಯೊಂದಿಗೆ ಕಿತ್ತ ಭಾಗವನ್ನೆಲ್ಲಾ ಬೆಂಕಿ ಹಾಕಿ ಸುಡ್ತಾರೆ. ಹೀಗೆ ಮಾಡಿದ್ರೆ ಒಂದೆರಡು ತಿಂಗಳಲ್ಲಿ ಮಳೆ ಬಂದು ಬರಗಾಲ ನಿವಾರಣೆಯಾಗುತ್ತೆ ಅನ್ನೋದು ಈ ಗ್ರಾಮದವರ ನಂಬಿಕೆಯಾಗಿದೆ. ಈ ಆಚರಣೆಯಲ್ಲಿ ಸುತ್ತಮುತ್ತಲಿನ ನಾಲ್ಕು ಹಳ್ಳಿಯ ಜನ ಭಾಗವಹಿಸ್ತಾರೆ. ಎಲ್ಲರೂ ಒಂದುಗೂಡಿ ಆಚರಣೆ ಮಾಡುವುದರಿಂದ ಯಾರೊಬ್ಬರೂ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಲ್ಲ.

    ಡಂಗೂರ ಸಾರ್ತಾರೆ : ಈ ಆಚರಣೆಗೆ ಸುತ್ತಮುತ್ತಲಿನ ನಾಲ್ಕು ಹಳ್ಳಿಯ ಜನ ಬರುವಂತೆ ಹಿಂದಿನ ದಿನ ಡಂಗೂರವನ್ನೂ ಸಾರ್ತಾರೆ. ಎಲ್ಲರೂ ಒಂದೆಡೆ ಸೇರಿ ತೀರ್ಮಾನಿಸಿದ ನಂತರವಷ್ಟೆ ಆಚರಣೆಗೆ ಸಿದ್ಧತೆ ನಡೆಯೋದು. ಕಳೆದೆರಡು ತಿಂಗಳಲ್ಲಿ ಗ್ರಾಮದಲ್ಲಿ ಯಾರ್ಯಾರು ಮೃತಪಟ್ಟಿದ್ದಾರೆ, ಅವರನ್ನ ಎಲ್ಲೆಲ್ಲಿ ಹೂತಿದ್ದಾರೆ ಎಂಬ ಮಾಹಿತಿ ಕಲೆ ಹಾಕ್ತಾರೆ. ಬಳಿಕ ಎಲ್ಲರೂ ಸಮಾಧಿ ಬಳಿ ಹೋಗಿ ಶವದ ತಲೆಯನ್ನ ತೆಗೆದು ಬೆಂಕಿಗೆ ಹಾಕುತ್ತಾರೆ. ಮೃತ ದೇಹದ ತಲೆ ಬೆಂಕಿಯಲ್ಲಿ ಬೇಯುವಾಗ ಕುಣಿದು ಕುಪ್ಪಳಿಸುತ್ತಾರೆ.

    ಈ ಆಚರಣೆ ಇವರಿಗೆ ಹಬ್ಬ: ಗ್ರಾಮದವರು ಈ ಆಚರಣೆಯನ್ನ ಹಬ್ಬವಾಗಿ ಆಚರಿಸ್ತಾರೆ. ಈ ಆಚರಣೆಗೆ ಇವರು ಇಟ್ಟ ಹೆಸರು ಗಿಡ ಸವರೋ ಹಬ್ಬ. ಈ ಹಬ್ಬ ಮಾಡಿದ್ರೆ ನಾಡಿನ ಬರಗಾಲ ಹೋಗಿ ಸಮೃದ್ಧ ಮಳೆಯಾಗಿ ನಾಡು ಸುಭಿಕ್ಷವಾಗಿರುತ್ತೆ ಅನ್ನೋದು ಇವ್ರ ನಂಬಿಕೆ. ಈ ಹಿಂದೆ ಬರಗಾಲ ಬಂದಾಗ ಈ ಆಚರಣೆಯ ಬಳಿಕ ಮಳೆ ಬಂದಿತ್ತು. ಈ ಬಾರಿಯೂ ಮಳೆ ಬರುತ್ತೆ ಎಂದು ಸ್ಥಳೀಯರು ಹೇಳುತ್ತಾರೆ.

    ತೊನ್ನು ಹಾಗೂ ಇತರೆ ಕಾಯಿಲೆಯಿಂದ ಬಳಲಿ ಮೃತಪಟ್ಟವರ ಹಲ್ಲು, ಕೂದಲು ಬೆಳೆಯುತ್ತೆ. ಇದರಿಂದ ಮಳೆಯಾಗಲ್ಲ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ. ಹಾಗಾಗಿ ಊರಿನಲ್ಲಿ ಸತ್ತವರ ಸಮಾಧಿಗೆ ಹೋಗಿ ಶವ ತಂದು ಬೆಂಕಿಗೆ ಹಾಕಿ ಸುಡುತ್ತಾರೆ.