Tag: Budget 2020

  • ಬೆಂಗ್ಳೂರಿಗೆ ಸಬ್ ಅರ್ಬನ್ ಯೋಜನೆ ನೀಡಿದಕ್ಕೆ ಸೀತಾರಾಮನ್‍ಗೆ ಧನ್ಯವಾದ: ಜ್ಯೋಶಿ

    ಬೆಂಗ್ಳೂರಿಗೆ ಸಬ್ ಅರ್ಬನ್ ಯೋಜನೆ ನೀಡಿದಕ್ಕೆ ಸೀತಾರಾಮನ್‍ಗೆ ಧನ್ಯವಾದ: ಜ್ಯೋಶಿ

    – ಕೇಂದ್ರ ಬಜೆಟ್ ಮಂಡನೆ: ಬಿಜೆಪಿ ಸಂಸದರು ಹೇಳಿದ್ದೇನು?

    ನವದೆಹಲಿ: ಎರಡನೇ ಬಾರಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಸಿದ ಬಜೆಟ್ ಸುಧಾರಣೆಗೆ ಹೆಚ್ಚು ಒತ್ತು ನೀಡಿದೆ. ಎಲ್ಲಾ ವರ್ಗಕ್ಕೂ ಉತ್ತೇಜನ ನೀಡುವಂಥ ಬಜೆಟ್ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಕೃಷಿಗೆ ಪೂರಕವಾದ ಕಿಸಾನ್ ರೈಲ್ ಪರಿಚಯಿಸಲಾಗುತ್ತಿದೆ. ಐಟಿ ಕ್ಷೇತ್ರದ ಬದಲಾವಣೆ ಮಧ್ಯಮ ವರ್ಗದ ಪ್ರಗತಿಗೆ ಪೂರಕವಾಗಿದ್ದು, ಮುನ್ನೊಟ ಹೊಂದಿರುವಂಥ ಬಜೆಟ್ ಇದಾಗಿದೆ ಎಂದರು. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ

    ಮೂಲಸೌಕರ್ಯ ಕ್ಷೇತ್ರಕ್ಕೆ 100 ಲಕ್ಷ ಕೋಟಿ ರೂ. ಹೂಡಲಾಗುತ್ತದೆ. ಉದ್ಯೋಗ ಸೃಷ್ಟಿ ಬಗ್ಗೆ ವಾಕ್ಯ ಬರೆದಿಲ್ಲ. ಅಷ್ಟೇ ಪೂರಕವಾದ ಯೋಜನೆಗಳನ್ನು ರೂಪಿಸಲಾಗಿದೆ. ಎಲ್‍ಐಸಿ ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣ ಮಾಡಲ್ಲ. ಬೆಂಗಳೂರಿಗೆ ವಿಶೇಷವಾಗಿ ಸಬ್ ಅರ್ಬನ್ ರೈಲು ಯೋಜನೆ ನೀಡಿದಕ್ಕೆ ನಿರ್ಮಲ ಸೀತರಾಮನ್ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಉದ್ಯೋಗ ಸೃಷ್ಟಿಸುವ ಪ್ರಮುಖ ನಾಲ್ಕು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಹೆಚ್ಚಿನ ಒತ್ತು: ಮೋದಿ

    ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಈ ಬಜೆಟ್ ಭಾರತಕ್ಕೆ ಹೊಸ ದಿಕ್ಕನ್ನು ಕೊಟ್ಟಂತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.

    2020ರ ಬಜೆಟ್ ಮೂಲಸೌಕರ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಆದ್ಯತೆ ನೀಡಿದೆ. ರಾಜ್ಯವಾರು ಆದ್ಯತೆ ವಲಯಗಳನ್ನು ಗುರುತಿಸಿ ಅಭಿವೃದ್ಧಿಗೆ ಮುಂದಾಗಿದೆ. ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡಿದೆ. ಸಮಾನತೆ ಹಾದಿಯಲ್ಲಿ ಎಸ್‍ಸಿ, ಎಸ್‍ಟಿ ಮತ್ತು ಮಹಿಳೆಯರಿಗೆ ಹೆಚ್ಚು ಅನುದಾನ ನೀಡಿದೆ ಎಂದರು.

    ಜಮ್ಮು ಕಾಶ್ಮೀರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ನಾನು ರೈಲು ಸಚಿವ ಆಗಿದ್ದಾಗ ವಿಶೇಷ ಕಾಳಜಿ ತೋರಿಸಿದ್ದ ಕರ್ನಾಟಕದಲ್ಲಿ ಸಬ್ ಅರ್ಬನ್ ರೈಲ್ವೆ ಯೋಜನೆ ಅನುದಾನ ನೀಡಿದೆ ಚೆನೈ ಬೆಂಗಳೂರು ಕಾರಿಡಾರ್ ಕಾಮಗಾರಿಗೆ ವೇಗ ಸಿಕ್ಕಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ ಮೀನುಗಾರರಿಗೆ ಆದ್ಯತೆ ನೀಡಿದ್ದು, ದೇಶದ ಸಮಗ್ರ ಅಭಿವೃದ್ಧಿ ಪೂಕರ ಬಜೆಟ್ ಇದು ಶ್ಲಾಘಿಸಿದರು ಎಂದು ಹೇಳಿದರು.

    ಹಿಂದೆದೂ ಕಾಣದ ಬಜೆಟ್ ಅನ್ನು ಈ ಬಾರಿ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಸಂಸದ ಜಿ.ಎಸ್ ಬಸವರಾಜ್ ಹೇಳಿದ್ದಾರೆ. ರೈತರಿಗೆ ಅತ್ಯುತ್ತಮ ಬಜೆಟ್ ನೀಡಿದ್ದು ಮೋದಿಯವರ ಬದ್ಧತೆ ಬಜೆಟ್ ಮೂಲಕ ಕಾಣುತ್ತಿದೆ ಉತ್ತಮ ಬಜೆಟ್ ಗಾಗಿ ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸರ್ವ ವ್ಯಾಪಿ, ಸರ್ವ ಶ್ರೇಷ್ಠ ಬಜೆಟ್ ಇದು ಸಬ್ ಅರ್ಬನ್ ರೈಲು ಯೋಜನೆಗೆ ವಿಶೇಷ ಕೊಡುಗೆ ಸಿಕ್ಕಿದೆ. ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ ಕ್ಷೇತ್ರಕ್ಕೆ ಕೊಟ್ಟಿರುವ ಆದ್ಯತೆಯಲ್ಲಿ ಬೆಂಗಳೂರಿಗೆ ಹೆಚ್ಚು ಫಲಿತಾಂಶ ಸಿಗಲಿದೆ. ಹೊಸ ಶಿಕ್ಷಣ ವ್ಯವಸ್ಥೆ ಜಾರಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿ ವಿನಾಯತಿ ಉತ್ತಮವಾಗಿದೆ ಎಂದು ಮುಚ್ಚುಗೆ ವ್ಯಕ್ತಪಡಿಸಿದರು.

  • ಖಾತೆಯಲ್ಲಿ ಹಣ ಎಷ್ಟೇ ಇರಲಿ, ಬ್ಯಾಂಕ್ ಮುಚ್ಚಿದ್ರೆ 5 ಲಕ್ಷ ರೂ. ಅಷ್ಟೇ ಸಿಗುತ್ತೆ

    ಖಾತೆಯಲ್ಲಿ ಹಣ ಎಷ್ಟೇ ಇರಲಿ, ಬ್ಯಾಂಕ್ ಮುಚ್ಚಿದ್ರೆ 5 ಲಕ್ಷ ರೂ. ಅಷ್ಟೇ ಸಿಗುತ್ತೆ

    ೇನವದೆಹಲಿ: ನಿಮ್ಮ ಖಾತೆಯಲ್ಲಿ ಎಷ್ಟೇ ಹಣವಿದ್ದರೂ, ಒಂದು ವೇಳೆ ಬ್ಯಾಂಕ್ ಮುಚ್ಚಿದ್ರೆ ನಿಮಗೆ 5 ಲಕ್ಷ ರೂ. ಮಾತ್ರ ಸಿಗಲಿದೆ. 2020-21ನೇ ಸಾಲಿನ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಬ್ಯಾಂಕ್ ಗ್ಯಾರಂಟಿಯ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    ಯಾವುದೋ ಒಂದು ಬ್ಯಾಂಕ್ ಕಾರಣಾಂತರಗಳಿಂದ ಅಥವಾ ಹಗರಣದಲ್ಲಿ ಸಿಲುಕಿ ಬಂದ್ ಆಗುವ ಸಾಧ್ಯತೆಗಳಿರುತ್ತವೆ. ಆ ಬ್ಯಾಂಕಿನಲ್ಲಿ ಎಷ್ಟೇ ಹಣ ಠೇವಣಿ ಮಾಡಿದ್ದರೂ, ಗ್ರಾಹಕನಿಗೆ ಕೇವಲ 5 ಲಕ್ಷ ರೂ. ಸಿಗಲಿದೆ. ಇಲ್ಲಿಯವರೆಗೆ ಈ ಗ್ಯಾರೆಂಟಿ 1 ಲಕ್ಷಕ್ಕೆ ಮಾತ್ರ ಸೀಮಿತವಾಗಿತ್ತು. ಈ ರೀತಿಯ ಬ್ಯಾಂಕ್ ಗ್ರಾಹಕರು ಭೀಮಾ ಸುರಕ್ಷಾ ಯೋಜನೆಗೆ ಒಳಪಡಲಿದ್ದು, 5 ಲಕ್ಷ ರೂ.ಯನ್ನು ಪಡೆಯಬಹುದಾಗಿದೆ. ಇದನ್ನೂ ಓದಿ: ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನ- ಸೀತಾರಾಮನ್ ಹೊತ್ತಿಗೆಯಲ್ಲಿ ರೈತರಿಗೆ ಸಿಕ್ಕಿದ್ದೆಷ್ಟು?

    ನಿರ್ಮಲಾ ಸೀತಾರಾಮನ್ ಸರ್ಕಾರಿ ಬ್ಯಾಂಕುಗಳಿಗಾಗಿ 3 ಲಕ್ಷ 50 ಸಾವಿರ ಕೋಟಿ ರೂ.ಯನ್ನು ಹಣ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಐಡಿಬಿಐ ಬ್ಯಾಂಕ್‍ನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲಾಗುವುದು. ಐಡಿಬಿಐನಲ್ಲಿರೊ ಸರ್ಕಾರದ ಪಾಲುದಾರಿಕೆಯನ್ನ ಮಾರಾಟ ಮಾಡಲಾಗುವುದು ಎಂದು ಹೇಳುತ್ತಿದ್ದಂತೆ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಧ್ವನಿ ಎತ್ತಿ ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಬೇಕೆಂದು ಒತ್ತಾಯಿಸಿದರು. ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿಯೇ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಕೇಂದ್ರ ಬಜೆಟ್ 2020- ಯಾವುದು ಏರಿಕೆ, ಯಾವುದು ಇಳಿಕೆ?

  • ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನ- ಸೀತಾರಾಮನ್ ಹೊತ್ತಿಗೆಯಲ್ಲಿ ರೈತರಿಗೆ ಸಿಕ್ಕಿದ್ದೆಷ್ಟು?

    ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನ- ಸೀತಾರಾಮನ್ ಹೊತ್ತಿಗೆಯಲ್ಲಿ ರೈತರಿಗೆ ಸಿಕ್ಕಿದ್ದೆಷ್ಟು?

    ನವದೆಹಲಿ: ಕೃಷಿಕರ ಆದಾಯವನ್ನು 2022ರ ವೇಳೆಗೆ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರ ’16 ಅಂಶಗಳ ಯೋಜನೆ’ಯನ್ನು ಕೇಂದ್ರ ಬಜೆಟ್ 2020ರಲ್ಲಿ ಘೋಷಣೆ ಮಾಡಿದೆ. ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ವಲಯದ ಅಭಿವೃದ್ಧಿಗೆ 2.83 ಲಕ್ಷ ಕೋಟಿ ರೂ. ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದರು.

    * ಕೃಷಿ ವಲಯ ಮತ್ತು ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗೆ ಒಟ್ಟು 2.83 ಕೋಟಿ ರೂ. ಮೀಸಲು
    * 20 ಲಕ್ಷ ರೈತರಿಗೆ ಸೋಲಾರ್ ಪಂಪ್ ಅಳವಡಿಸಲು ಸರ್ಕಾರದ ನೆರವು
    * 15 ಲಕ್ಷ ರೈತರಿಗೆ ಸರ್ಕಾರದಿಂದ ಗ್ರಿಡ್ ಕನೆಕ್ಟಡ್ ಪಂಪ್ ವಿತರಿಸಲಾಗುವುದು.
    * ಅನ್ನದಾತರಿಗಾಗಿ ಕಿಸಾನ್ ರೈಲು ಯೋಜನೆ. ಈ ವಿಶೇಷ ಯೋಜನೆಯ ಮೂಲಕ ರೈತರು ಅತಿಬೇಗ ಕೆಡುವ ಉತ್ಪನ್ನಗಳನ್ನು ಶಿಥೀಲಿಕರಣದ ಸ್ಟೋರೆಜ್ ಮೂಲಕ ಮಾರುಕಟ್ಟೆಗೆ ತಲುಪಿಸುವ ಸರಳ ವ್ಯವಸ್ಥೆ.
    * ವಿಮಾನಯಾನ ಸಚಿವಾಲಯದಿಂದ ಕೃಷಿ ಉಡಾನ್ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸುವುದು.
    * ಅಗ್ರಿಕಲ್ಚರ್ ಕ್ರೆಡಿಟ್ ಕಾರ್ಡ್ ಗಾಗಿ 2021ರಲ್ಲಿ 15 ಲಕ್ಷ ರೂ. ಮೀಸಲು.
    * ಹಾಲು ಉತ್ಪದನೆಯನ್ನು ದ್ವಿಗುಣಗೊಳಿಸುವುದು. 53 ಮೆಟ್ರಿಕ್ ಟನ್ ನಿಂದ 108 ಮೆಟ್ರಿಕ್ ಟನ್‍ಗೆ ಹೆಚ್ಚಿಸುವ ಗುರಿ.
    * ಕೃಷಿಕರಿಗೆ ಸಾಲ ಸೌಲಭ್ಯ ಕಲ್ಪಿಸಲು 15 ಲಕ್ಷ ಕೋಟಿ ರೂ.
    * ಬರಡು ಭೂಮಿ ಹೊಂದಿರುವ ರೈತರಿಗೆ ಸೌರ ವಿದ್ಯುತ್ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಸಹಾಯ.

    * ಮಹಿಳಾ ಕೃಷಿಕರ ಉತ್ತೇಜನಕ್ಕೆ ಧಾನ್ಯಲಕ್ಷ್ಮೀ ಯೋಜನೆ.
    * ಇ-ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ ಸ್ಥಾಪನೆ.
    * 2022-23ರ ವೇಳೆಗೆ 200 ಲಕ್ಷ ಟನ್‍ಗಳ ಮೀನು ಉತ್ಪಾದನೆ ಗುರಿ.
    * ಸಾಗರ್ ಮಿತ್ರ ಯೋಜನೆ ಮತ್ತು ಮೀನು ಉತ್ಪಾದಕ ಸಂಘಗಳ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ.
    * 500 ಮೀನುಗಾರರ ಸಂಘಗಳ ಸ್ಥಾಪನೆ.
    * ದೀನ್ ದಯಾಳ್ ಅಂತ್ಯೋದಯ ಯೋಜನೆ ಮೂಲಕ 58 ಲಕ್ಷ ಸ್ವಸಹಾಯ ಸಂಘಗಳ ಆರಂಭಿಸಿ ಬಲವರ್ಧನೆ.
    * ನಬಾರ್ಡ್ ಯೋಜನೆ ವಿಸ್ತರಣೆ. ರೈತರಿಗೆ ವಾರ್ಷಿಕ ಕೃಷಿ ಸಾಲ ನೀಡಲು 15 ಲಕ್ಷ ಕೋಟಿ ರೂ.
    * 2016ರ ಮಾದರಿಯ ಕೃಷಿ ಭೂಮಿ ಗುತ್ತಿಗೆ, 2017ರ ಕೃಷಿ ಉತ್ಪನ್ನ, ಜಾನುವಾರ ಮತ್ತು ಮಾರಾಟ ಕಾಯಿದೆ ಹಾಗೂ 2018ರ ಜಾನುವಾರುಗಳನ್ನು ಒಳಗೊಂಡ ಕೃಷಿ ಮತ್ತು ಕೃಷಿ ಉತ್ಪನ್ನ ಕಾಯಿದೆಗಳಿಗೆ ಉತ್ತೇಜನ.

  • ರೈತರಿಗಾಗಿ ಕಿಸಾನ್ ರೈಲು ಚಾಲನೆ- ರೈಲ್ವೇ ಬಜೆಟ್ ಹೈಲೈಟ್ಸ್

    ರೈತರಿಗಾಗಿ ಕಿಸಾನ್ ರೈಲು ಚಾಲನೆ- ರೈಲ್ವೇ ಬಜೆಟ್ ಹೈಲೈಟ್ಸ್

    -ಬೆಂಗ್ಳೂರು-ಚೆನ್ನೈ ನಡುವೆ ಹೈಸ್ಪೀಡ್ ಟ್ರೈನ್

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್‍ನಲ್ಲಿ ರೈತರಿಗಾಗಿ ‘ಕಿಸಾನ್ ರೈಲು’ಗಳಿಗೆ ಅನುಮೋದನೆ ನೀಡುವ ಬಗ್ಗೆ ಹೇಳಿದ್ದಾರೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮೂಲಕ ಕಿಸಾನ್ ರೈಲು ಚಾಲನೆಗೊಳ್ಳಲಿದೆ. ಈ ಮೂಲಕ ಕೋಲ್ಡ್ ಸಪ್ಲೈ ಚೈನ್ ವ್ಯವಹಾರಗಳಿಗೆ ಅನಕೂಲವಾಗಲಿದೆ. ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವೆ ಶೀಘ್ರವೇ ಹೈಸ್ಪೀಡ್ ರೈಲು ಘೋಷಣೆ ಮಾಡಲಾಗುವುದು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಶೇ.20 ರಷ್ಟು ಹಣ ಕೇಂದ್ರ ಸರ್ಕಾರ ನೀಡಲಿದೆ. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ

    ಅತಿ ವೇಗವಾಗಿ ಕೆಡುವ ಆಹಾರ ಪದಾರ್ಥಗಳನ್ನು ಕಿಸಾನ್ ರೈಲಿನ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಆಯ್ದ ರೈಲುಗಳಲ್ಲಿ ಶೀತಲಘಟಕದ ವ್ಯವಸ್ಥೆ ಕಲ್ಪಿಸಿ, ಅಲ್ಲಿ ರೈತರ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ರವಾನಿಸುವುದು. ಇದೇ ರೀತಿ ಗೂಡ್ಸ್ ರೈಲುಗಳಿಗೆ ಸಹ ಕಾರ್ಗೋ ವ್ಯಾನ್ ಜೋಡಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಮೇಡಂಗೆ ಫೋನ್ ಕೊಟ್ಟರೆ ಎಲ್ಲ ಆಗುತ್ತಾ: ಬಜೆಟ್ ಬಗ್ಗೆ ರೇವಣ್ಣ ವ್ಯಂಗ್ಯ

    ಮುಂಬೈ-ಅಹಮದಾಬಾದ್ ನಡುವೆ ಹೈ ಸ್ಪೀಡ್ ರೈಲಿಗೆ ಚಾಲನೆ ನೀಡುವುದು. ಇದರ ಜೊತೆಯಲ್ಲಿಯೇ 550 ರೈಲ್ವೇ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ ಕಲ್ಪಿಸುವುದು. ಈಗಾಗಲೇ ಬಿಜೆಪಿ ಸರ್ರ್ಕಾರ 27 ಸಾವಿರ ಕಿ.ಮೀ. ಮಾರ್ಗವನ್ನು ವಿದ್ಯುದೀಕರಣಗೊಳಿಸಿದೆ. ಪವರ್ ಎನರ್ಜಿಗಾಗಿ ಬಜೆಟ್ ನಲ್ಲಿ 22 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಅದೇ ರೀತಿ ದೇಶದ ನ್ಯಾಷನಲ್ ಗ್ರಿಡ್ ಪ್ರಾರಂಭಿಸುವುದು. ಇದನ್ನೂ ಓದಿ: ಕೇಂದ್ರ ಬಜೆಟ್ 2020- ಯಾವುದು ಏರಿಕೆ, ಯಾವುದು ಇಳಿಕೆ?

    ರೈಲ್ವೇ ಬಜೆಟ್ ಹೈಲೈಟ್ಸ್
    * ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ. ಶೇ.20 ರಷ್ಟು ಹಣ ಕೇಂದ್ರ ಸರ್ಕಾರ ನೀಡಲಿದೆ.
    * ಚೆನ್ನೈ ಬೆಂಗಳೂರು ಎಕ್ಸ್ ಪ್ರೆಸ್ ವೇ ಶೀಘ್ರವೇ ಶೀಘ್ರವೇ ಘೋಷಣೆ.
    * ಮುಂಬೈ-ಅಹಮದಬಾದ್ ನಡುವೆ ಹೈಸ್ಪೀಡ್ ರೈಲು ಆರಂಭ ಮಾಡುವುದು
    * ರೈಲ್ವೇ ಇಲಾಖೆಯ ಖಾಲಿ ಜಮೀನಿನಲ್ಲಿ ಸೌರ ಶಕ್ತಿ ಉತ್ಪಾದನೆ ಕೇಂದ್ರ ಸ್ಥಾಪನೆ
    * ತೇಜಸ್ ಮಾದರಿಯ ರೈಲುಗಳನ್ನು ಪ್ರವಾಸಿ ಸ್ಥಳಗಳಿಗೆ ಸಂಪರ್ಕಿಸುವುದು.
    * ಮೂಲಸೌಕರ್ಯ ನಿಧಿಗೆ 100 ಲಕ್ಷ ಕೋಟಿ ಮೀಸಲು
    * 550 ರೈಲ್ವೇ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ
    * 27 ಸಾವಿರ ಕಿಮೀ ಮಾರ್ಗ ವಿದ್ಯುದೀಕರಣ ಆಗಿದೆ
    * ಪವರ್ ಎನರ್ಜಿಗಾಗಿ ಬಜೆಟ್ ನಲ್ಲಿ 22 ಸಾವಿರ ಕೋಟಿ ರೂ. ಮೀಸಲು
    * ನ್ಯಾಶನಲ್ ಗ್ಯಾಸ್ ಗ್ರಿಡ್ ಆರಂಭ
    * ದೆಹಲಿ ಮುಂಬೈ ಎಕ್ಸ್ ಪ್ರೆಸ್ ವೇ 2023ಕ್ಕೆ ಮುಕ್ತಾಯ.

  • ಆದಾಯ ತೆರಿಗೆಯಲ್ಲಿ ಭಾರೀ ಕಡಿತ

    ಆದಾಯ ತೆರಿಗೆಯಲ್ಲಿ ಭಾರೀ ಕಡಿತ

    ನವದೆಹಲಿ: ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ ಭಾರೀ ಕಡಿತ ನೀಡಿದ್ದಾರೆ. 5 ಲಕ್ಷದವರಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಬದಲಾಗ ತೆರಿಗೆ ಅನ್ವಯ 15ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವ ತೆರಿಗೆ ಪಾವತಿದಾರನಿಗೆ 78 ಸಾವಿರ ರೂ. ಉಳಿತಾಯವಾಗಲಿದೆ.

    ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?

    *2.5 ಲಕ್ಷದಿಂದ 5 ಲಕ್ಷದವರೆಗೆ ಶೇ.5 ತೆರಿಗೆ
    * 5 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗೆ ತೆರಿಗೆ ಶೇ.20ರ ಬದಲಾಗಿ ಶೇ.10 ಅನ್ವಯವಾಗುವುದು
    * 7.5 ಲಕ್ಷ ನಿಂದ 10 ಲಕ್ಷವರೆಗೆ ಶೇ.20ರ ಬದಲಾಗಿ ಶೇ.15 ಅನ್ವಯ
    * 10 ಲಕ್ಷದಿಂದ 12.5 ಲಕ್ಷಕ್ಕೆ ತೆರಿಗೆ ಶೇ.30ರ ಬದಲಾಗಿ ಶೇ.20 ಅನ್ವಯ
    * 12.5 ಲಕ್ಷದಿಂದ 15 ಲಕ್ಷದವರೆಗೆ ಶೇ.30ರ ಬದಲಾಗಿ ಶೇ. 25 ಅನ್ವಯ

    * 15 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ.30 ಅನ್ವಯ
    * ಹೊಸ ತೆರಿಗೆಯಿಂದಾಗಿ 15 ಲಕ್ಷ ಅಧಿಕ ಆದಾಯ ಹೊಂದಿದ ತೆರಿಗೆದಾರನಿಗೆ 78 ಸಾವಿರ ರೂ. ಲಾಭವಾಗಲಿದೆ
    * ಹೊಸ ವ್ಯವಸ್ಥೆಯಲ್ಲಿ ವಿವಿಧ 70 ಕಡಿತಗಳನ್ನು ತೆಗೆದು ಹಾಕಲಾಗಿದೆ. ಒಂದು ವೇಳೆ ತೆರಿಗೆದಾರ ಬಯಸಿದ್ರೆ ಹಳೆಯ ವ್ಯವಸ್ಥೆಯ ಲಾಭ ಪಡೆಯಬಹುದು.
    * ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ) ಹೊಂದಿರುವ ವಿವಾದಗಳನ್ನು ಶಮನಗೊಳಿಸುವದಕ್ಕಾಗಿ ‘ವಿವಾದ ಸೇ ವಿಶ್ವಾಸ್ ಯೋಜನೆ’ಯಲ್ಲಿ ಬಡ್ಡಿ ಮತ್ತು ದಂಡದಿಂದ ವಿನಾಯ್ತಿ
    * ಕಂಪನಿಯ ಡಿವಿಡೆಂಟ್ ಮೇಲಿನ ಲಾಭಾಂಶ ತೆರಿಗೆ ಕಂಪನಿಗಳ ಬದಲಾಗಿ ಶೇರುದಾರನಿಗೆ ಅನ್ವಯವಾಗಲಿದೆ. ಲಾಭಾಂಶ ತೆರಿಗೆಯನ್ನು ಶೇರುದಾರ ಪಾವತಿಸೋದು.

    * ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಕಡಿಮೆ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುವುದು.