Tag: brothel

  • ಚರಂಡಿ ಪೈಪ್ ಹಿಡಿದು 1ನೇ ಮಹಡಿಯಿಂದ ಕೆಳಗಿಳಿದು ವೇಶ್ಯಾಗೃಹದಿಂದ ಪಾರಾದ ಯುವತಿ

    ಚರಂಡಿ ಪೈಪ್ ಹಿಡಿದು 1ನೇ ಮಹಡಿಯಿಂದ ಕೆಳಗಿಳಿದು ವೇಶ್ಯಾಗೃಹದಿಂದ ಪಾರಾದ ಯುವತಿ

    ಮುಂಬೈ: ವೇಶ್ಯಾವಾಟಿಕೆಗೆ ಮಾರಲ್ಪಟ್ಟಿದ್ದ ಯುವತಿಯೊಬ್ಬರು ತನ್ನ ಧೈರ್ಯದಿಂದಾಗಿ ವೇಶ್ಯಾಗೃಹದಿಂದ ಪಾರಾಗಿ ಬಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಇಲ್ಲಿನ ಗ್ರ್ಯಾಂಟ್ ರೋಡ್ ನ ವೇಶ್ಯಾಗೃಹದಿಂದ ಪಾರಾಗಲು ಯುವತಿ ಚರಂಡಿ ಪೈಪ್ ಹಿಡಿದು ಮೊದಲನೇ ಮಹಡಿಯಿಂದ ಇಳಿದಿದ್ದಾರೆ. 21 ವರ್ಷದ ಯುವತಿ ಬಾಂಗ್ಲಾದೇಶ ಮೂಲದವರಾಗಿದ್ದು, ಇಲ್ಲಿನ ಭಾಷೆ ಕೂಡ ಬರುತ್ತಿರಲಿಲ್ಲ. ಒಳ್ಳೇ ಸಂಬಳದ ಕೆಲಸ ಕೊಡಿಸುವ ಭರವಸೆ ನೀಡಿ ಭಾರತಕ್ಕೆ ಕರೆಸಿಕೊಂಡಿದ್ದ ವ್ಯಕ್ತಿ ಅವರನ್ನ ವೇಶ್ಯಾವಾಟಿಗೆಗೆ ಮಾರಾಟ ಮಾಡಿದ್ದ.

    ಯುವತಿ ಬಾಂಗ್ಲಾದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದರು. ಮುಂಬೈನಲ್ಲಿ ಒಳ್ಳೇ ಕೆಲಸ ಕೊಡಿಸುವ ಏಜೆಂಟ್ ಬಗ್ಗೆ ಆಕೆಯ ಸಂಬಂಧಿಯೊಬ್ಬರು ಹೇಳಿದ್ದರು. ಚೆನ್ನಾಗಿ ಸಂಬಳ ನೀಡೋ ಕೆಲಸ ಸಿಗುತ್ತದೆಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಯುವತಿ ಹಡಗಿನ ಮೂಲಕ ಕೋಲ್ಕತ್ತಾಗೆ ಬಂದು ಅಲ್ಲಿಂದ ರೈಲಿನಲ್ಲಿ ಜನವರಿ 23ರಂದು ಮುಂಬೈಗೆ ಬಂದಿಳಿದಿದ್ದರು.

    ಏಜೆಂಟ್ ಯುವತಿಯನ್ನ ಭೇಟಿಯಾಗಿ ಆಕೆಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಹುಡುಕಿರುವುದಾಗಿ ಹೇಳಿದ್ದ. ಆದ್ರೆ ಆಕೆಯನ್ನ ನೇರವಾಗಿ ಗ್ರ್ಯಾಂಟ್ ರೋಡಿನ ವೇಶ್ಯಾಗೃಹಕ್ಕೆ ಕೊಂಡೊಯ್ದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಯುವತಿಗೆ ತಾನು ಎಲ್ಲಿದ್ದೇನೆಂಬುದು ಬೇಗನೇ ಗೊತ್ತಾಗಿತ್ತು. ಆಕೆಯನ್ನ ವೇಶ್ಯಾವಾಟಿಗೆಗೆ ದೂಡಲು ನಡೆಸಿದ ಎಲ್ಲಾ ಯತ್ನಗಳನ್ನ ಆಕೆ ಪ್ರತಿರೋಧಿಸಿದ್ದರು. ಹೀಗಾಗಿ ವೇಶ್ಯಾಗೃಹದಲ್ಲಿ ಆಕೆಯನ್ನ ಕತ್ತಲೆಕೋಣೆಯಲ್ಲಿ ಕೂಡಿಹಾಕಿ ಐದು ದಿನಗಳವರೆಗೆ ಕಿರುಕುಳ ನೀಡಲಾಗಿತ್ತು. ಇದರಿಂದ ಯುವತಿ ಹೇಳಿದಂತೆ ಕೇಳುತ್ತಾಳೆ ಎಂದುಕೊಂಡಿದ್ದರು. ಆದ್ರೆ ಯುವತಿ ಮಾತ್ರ ಎದೆಗುಂದಿರಲಿಲ್ಲ. ಐದನೇ ದಿನ ರಾತ್ರಿವರೆಗೆ ಕಾದು ಕುಳಿತ ಆಕೆ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮನೆಯಿಂದ ಪರಾರಿಯಾಗಲು ನಿರ್ಧರಿಸಿದ್ದರು. ಹೇಗೋ ಮಾಡಿ ರೂಮಿನ ಕಿಟಕಿ ತೆರೆದಾಗ ತಾನು ಮೊದಲನೇ ಮಹಡಿಯಲ್ಲಿರುವುದು ಗೊತ್ತಾಗಿತ್ತು. ಹೀಗಾಗಿ ಚರಂಡಿ ಪೈಪ್ ಹಿಡಿದುಕೊಂಡು ಕೆಳಗಿಳಿದು ರಸ್ತೆಗೆ ಬಂದಿದ್ದಾರೆ.

    ನಂತರ ಸಹಾಯ ಕೇಳಲೆಂದು ಅಲ್ಲಿ ಯಾರಾದರೂ ಇದ್ದಾರಾ ಎಂದು ಯುವತಿ ಹುಡುಕಿದ್ದರು. ಅದರಲ್ಲೂ ಆಕೆಗೆ ಬಂಗಾಳಿ ಬಿಟ್ಟರೆ ಬೇರೆ ಯಾವುದೇ ಬಾಷೆ ಮಾತನಾಡಲು ಬರುತ್ತಿರಲಿಲ್ಲ. ಆಕೆಯ ಅದೃಷ್ಟಕ್ಕೆ ಕ್ಯಾಬ್ ಚಾಲಕರೊಬ್ಬರು ಸಿಕ್ಕಿದ್ದು, ಅವರಿಗೆ ಬಂಗಾಳಿ ಗೊತ್ತಿತ್ತು. ಯುವತಿ ತನ್ನ ಸ್ಥಿತಿಯ ಬಗ್ಗೆ ವಿವರಿಸಿದಾಗ ಕ್ಯಾಬ್ ಚಾಲಕ ಕೂಡಲೇ ಅವರನ್ನು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

    ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೇಶ್ಯಾಗೃಹದ ಮೇಲೆ ದಾಳಿ ಮಾಡಿದರಾದ್ರೂ ಅಲ್ಲಿ ಎಲ್ಲರೂ ಪರಾರಿಯಾಗಿದ್ದರು. ಯುವತಿಯನ್ನ ಪೊಲೀಸರು ಪುರ್ನರ್ವತಿ ಕೇಂದ್ರಕ್ಕೆ ಕಳಿಸಿದ್ದಾರೆ. ಆರೋಪಿ ಗ್ಯಾಂಗ್ ಗಾಗಿ ಬಲೆ ಬೀಸಿದ್ದಾರೆ.

  • ಮಹಿಳೆಯ ಮನೆಯಲ್ಲಿ ಗಂಡನ ಅಸ್ಥಿಪಂಜರ, ಮಾಟ ಮಂತ್ರದ ಸಿಡಿ, ಕೆಜಿಗಟ್ಟಲೆ ಕಾಂಡೋಮ್ ನೋಡಿ ಶಾಕ್ ಆದ ಪೊಲೀಸರು

    ಮಹಿಳೆಯ ಮನೆಯಲ್ಲಿ ಗಂಡನ ಅಸ್ಥಿಪಂಜರ, ಮಾಟ ಮಂತ್ರದ ಸಿಡಿ, ಕೆಜಿಗಟ್ಟಲೆ ಕಾಂಡೋಮ್ ನೋಡಿ ಶಾಕ್ ಆದ ಪೊಲೀಸರು

    ಮುಂಬೈ: ವೇಶ್ಯಾಗೃಹದ ಮೇಲೆ ದಾಳಿ ಮಾಡಿ ಮಾಲಕಿಯನ್ನ ಬಂಧಿಸಿದ ನಂತರ ಮನೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದನ್ನು ನೋಡಿ ಮಹಾರಾಷ್ಟ್ರ ಪೊಲೀಸರು ಶಾಕ್ ಆಗಿದ್ದಾರೆ.

    ಸವಿತಾ ಭಾರತಿ(43) ಬಂಧಿತ ಮಹಿಳೆ. ಈ ಅಸ್ಥಿಪಂಜರ ನನ್ನ ಗಂಡನದ್ದು, 13 ವರ್ಷಗಳ ಹಿಂದೆ ಆತನನ್ನು ಕೊಲೆ ಮಾಡಿದ್ದೇನೆಂದು ಬಂಧಿತ ಮಹಿಳೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.

    ಸವಿತಾ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಸೋಮವಾರದಂದು ಮೊದಲ ಬಾರಿಗೆ ಆಕೆಯ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ನಾಲ್ಕು ಮಹಿಳೆಯರನ್ನ ರಕ್ಷಣೆ ಮಾಡಿ ಸವಿತಾ ಹಾಗೂ ಒಬ್ಬ ಗ್ರಾಹಕನನ್ನು ಬಂಧಿಸಿದ್ದರು. ಸವಿತಾ ಸೆಕ್ಸ್ ದಂಧೆಯಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೆ ತನ್ನ ಗಂಡ ಸೇರಿದಂತೆ ಹಲವು ಜನರನ್ನು ಕೊಂದಿದ್ದಾಳೆಂದು ಮಂಗಳವಾರ ರಾತ್ರಿ ನಮಗೆ ಮಾಹಿತಿ ಸಿಕ್ಕಿತ್ತು ಎಂದು ಬೊಯ್‍ಸರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ಕಬಾಡಿ ಹೇಳಿದ್ದಾರೆ.

    ಸವಿತಾ ತನ್ನ ಗಂಡನನ್ನು ಕೊಲೆ ಮಾಡಿ ಟ್ಯಾಂಕ್‍ನಲ್ಲಿ ಹೂತಿರುವುದಾಗಿ ಹೇಳಿದ ನಂತರ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು, ಬುಧವಾರದಂದು ಅಸ್ಥಿಪಂಜರವನ್ನ ಹೊರತೆಗೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಬಾತ್‍ರೂಮಿನ ಕೆಳಗಡೆ ಹೂತಿಟ್ಟಿದ್ದ ಶವವನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಸವಿತಾ ತನ್ನ ಗಂಡ ಸಹದೇವ್‍ನನ್ನು 2004ರಲ್ಲಿ ಕೊಲೆ ಮಾಡಿ, ಮೃತದೇಹವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಹಾಕಿದ್ದಳು. ಸಹದೇವ್ ನನ್ನ ನಡತೆ ಬಗ್ಗೆ ಅನುಮಾನ ಪಟ್ಟು, ಕಡಿದು ಬಂದು ಬೈಯ್ಯುತ್ತಿದ್ದ. 2004ರಲ್ಲಿ ಇದೇ ರೀತಿ ಜಗಳ ನಡೆದಾಗ, ಆತ ಮಲಗಿದ್ದ ವೇಳೆ ಚೂಪಾದ ವಸ್ತುವಿನಿಂದ ತಲೆಗೆ ಹೊಡೆದೆ. ಇದರಿಂದ ಸ್ಥಳದಲ್ಲೇ ಮೃತಪಟ್ಟ ಎಂದು ಸವಿತಾ ಹೇಳಿದ್ದಾಳೆ.

    ಗಾಂಧಿಪಾದಾದಲ್ಲಿ ಅಂಗಡಿಯನ್ನೊಳಗೊಂಡಿದ್ದ ಮನೆಯಲ್ಲೇ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸವಿತಾ ಹಾಗೂ ಆಕೆಯ ಪ್ರಿಯಕರ ಕಮಲೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಸವಿತಾ ಗ್ರಾಹಕರನ್ನ ಸೆಳೆಯಲು ಮನೆಯಲ್ಲಿ ಮಾಟ ಮಂತ್ರ ಮಾಡುತ್ತಿದ್ದಳು ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಮನೆಯಲ್ಲಿ ಇನ್ನೂ ಎರಡು ಶವಗಳು ಇವೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಗುರುವಾರದಂದು ಮನೆಯನ್ನು ಅಗೆದಿದ್ದಾರೆ. ಆದ್ರೆ ಯಾವುದೇ ಶವ ಪತ್ತೆಯಾಗಿಲ್ಲ.

    ಆರೋಪಿಯ ಮನೆಯಲ್ಲಿ 300 ಮಾಟಮಂತ್ರದ ವಿಡಿಯೋ ಸಿಡಿ ಹಾಗು 500 ದೇವರ ಫೋಟೋ ಹಾಗು ಮೂರ್ತಿಗಳನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಜೊತೆಗೆ ಗಂಡನ ಮೃತದೇಹವನ್ನ ಹೂತಿಟ್ಟಿದ್ದ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಹಲವು ಕೆಜಿಗಳಷ್ಟು ಉಪಯೋಗಿಸಲ್ಪಟ್ಟ ಕಾಂಡೋಮ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

    ಅಸ್ಥಿಪಂಜರವನ್ನು ಫೋರೆನ್ಸಿಕ್ ಪರೀಕ್ಷೆಗಾಗಿ ಕಳಿಸಲಾಗಿದೆ. ಸಹದೇವ್ ಹಾಗೂ ಸವಿತಾ ಮಗನಾದ 25 ವರ್ಷದ ಸಂದೇಶ್‍ನನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.