Tag: breast cancer

  • ಕ್ಯಾನ್ಸರ್‌ನಿಂದ  ಬಳಲುತ್ತಿದ್ದ ನಟ ಸಿದ್ದಿಕಿ ಸಹೋದರಿ ಸಾವು

    ಕ್ಯಾನ್ಸರ್‌ನಿಂದ  ಬಳಲುತ್ತಿದ್ದ ನಟ ಸಿದ್ದಿಕಿ ಸಹೋದರಿ ಸಾವು

    ಮುಂಬೈ: 8 ವರ್ಷದದಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಇಂದು ಮೃತಪಟ್ಟಿದ್ದಾರೆ.

    ನಟನ ಸಹೋದರಿ ತಮ್ಶಿ ಸಿದ್ದಿಕಿ (26) ಅವರು ಇಂದು ಸಾವನ್ನಪ್ಪಿದ್ದಾರೆ. 18 ವರ್ಷ ವಯಸ್ಸಿನಲ್ಲಿಯೇ ತಮ್ಶಿ ಸಿದ್ದಿಕಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ತಮ್ಶಿ ಸುಮಾರು 8 ವರ್ಷಗಳ ಕಾಲ ಕಾಯಿಲೆ ವಿರುದ್ಧ ಹೋರಾಡಿ ಇಂದು ಸಾವನ್ನಪ್ಪಿದ್ದಾರೆ.

    ಸಹೋದರಿಯ ಸಾವಿನ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ಅಮೆರಿಕದಲ್ಲಿ ನೋ ಲ್ಯಾಂಡ್ಸ್ ಮ್ಯಾನ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇಂದು ತಮ್ಮ ಸ್ವಗ್ರಾಮ ಉತ್ತರ ಪ್ರದೇಶದ ಬುಧಾನ ಗ್ರಾಮದಲ್ಲಿ ಅಂತ್ಯಕ್ರಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಈ ಹಿಂದೆ ನಟ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಸಹೋದರಿಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ತಾನು ಮತ್ತು ಸಹೋದರಿ ತಮ್ಶಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದ ಸಿದ್ದಿಕಿ, ನನ್ನ ಸಹೋದರಿ ಆಕೆಯ 18 ವಯಸ್ಸಿನಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಜೊತೆಗೆ ಕಾಯಿಲೆಯ ವಿರುದ್ಧ ತಮ್ಮ ಮನೋಬಲ ಮತ್ತು ಅತ್ಮವಿಶ್ವಾಸದಿಂದ ಹೋರಾಡುತ್ತಾ ಬಂದಿದ್ದಾರೆ. ಅವಳಿಗೆ ಇಂದಿಗೆ 25 ವರ್ಷ ತುಂಬಿತು ಎಂದು ಬರೆದುಕೊಂಡಿದ್ದರು.

  • ಗೋಮೂತ್ರದಿಂದ ನನ್ನ ಸ್ತನಕ್ಯಾನ್ಸರ್ ವಾಸಿಯಾಯ್ತು- ಸಾಧ್ವಿ ಪ್ರಜ್ಞಾಸಿಂಗ್

    ಗೋಮೂತ್ರದಿಂದ ನನ್ನ ಸ್ತನಕ್ಯಾನ್ಸರ್ ವಾಸಿಯಾಯ್ತು- ಸಾಧ್ವಿ ಪ್ರಜ್ಞಾಸಿಂಗ್

    ಭೋಪಾಲ್: ಗೋಮೂತ್ರದಿಂದಾಗಿ ನನ್ನ ಸ್ತನ ಕ್ಯಾನ್ಸರ್ ವಾಸಿಯಾಯಿತು ಎಂದು ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸ್ಪರ್ಧಿ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ.

    ರಾಷ್ಟೀಯ ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಾ ದೇಶದಲ್ಲಿ ಗೋವನ್ನು ರಾಜಕೀಯವಾಗಿ ಬಳಸಿಕೊಳ್ಳುವುದರ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ರು. ಹಲವು ಕಡೆಗಳಲ್ಲಿ ಗೋವುಗಳನ್ನು ಉಪಚರಿಸುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಗೋದಾನ ಮಾಡೋದು ಅಂದ್ರೆ ಅದು ಅಮೃತದಂತೆ ಉತ್ತಮವಾಗಿದೆ ಎಂದು ಹೇಳಿದರು.

    ಗೋವು ಹಾಗೂ ಅದರ ಉತ್ಪನ್ನಗಳಿಂದ ಮನುಷ್ಯರ ಆರೋಗ್ಯಕ್ಕೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಗಳಾಗುತ್ತದೆ. ಅದರಲ್ಲೂ ಗೋವಿನ ಮೂತ್ರ ಕುಡಿದ ಪರಿಣಾಮ ನನ್ನ ಸ್ತನ ಕ್ಯಾನ್ಸರ್ ವಾಸಿಯಾಗಿದೆ. ಇದು ನನ್ನ ಆರೋಗ್ಯಕ್ಕಾದ ಬಹುದೊಡ್ಡ ಲಾಭ ಎಂದು ತಿಳಿಸಿದರು.

    ಹೌದು. ನಾನೊಬ್ಬಳು ಕ್ಯಾನ್ಸರ್ ರೋಗಿಯಾಗಿದ್ದೇನೆ. ಹೀಗಾಗಿ ನಾನು ಗೋಮೂತ್ರದೊಂದಿಗೆ ಪಂಚಗವ್ಯ ಸೇರಿದಂತೆ ಆಯುರ್ವೇದದ ಕೆಲ ಮಿಶ್ರಣಗಳನ್ನು ನಿರಂತರವಾಗಿ ಸೇವಿಸುತ್ತಾ ಬಂದೆ. ಹೀಗಾಗಿ ಇಂದು ನಾನು ಸ್ತನ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖಳಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಅಲ್ಲದೆ ಗೋವಿನ ಹಿಂಭಾಗದಿಂದ ಅದರ ಕುತ್ತಿಗೆಯವರೆಗೆ ಮೈಸವರುತ್ತಾ ಬಂದರೆ ಏನೋ ಒಂಥರಾ ಖುಷಿಯಾಗುತ್ತದೆ. ಹಾಗೆಯೇ ಗೋವಿಗೂ ಕೂಡ ಮಜಾವಾಗುತ್ತದೆ. ಹೀಗಾಗಿ ಅವು ಕೂಡ ಮೈಯೊಡ್ಡಿ ನಿಲ್ಲುತ್ತಿತ್ತು. ಹೀಗೆ ಮಾಡಿದ್ದರಿಂದ ಬಿಪಿ ಕೂಡ ಸಹಜ ಸ್ಥಿತಿಗೆ ಬಂದಿದೆ ಎಂದು ಅವರು ವಿವರಿಸಿದ್ದಾರೆ.