Tag: Breams Hospital

  • ದಾರಿ ಮಧ್ಯೆ ಕೆಟ್ಟು ನಿಂತ ಆಕ್ಸಿಜನ್ ಟ್ಯಾಂಕರ್ – ಬೀದರ್ ಜಿಲ್ಲಾಡಳಿತಕ್ಕೆ ಫುಲ್ ಟೆನ್ಷನ್

    ದಾರಿ ಮಧ್ಯೆ ಕೆಟ್ಟು ನಿಂತ ಆಕ್ಸಿಜನ್ ಟ್ಯಾಂಕರ್ – ಬೀದರ್ ಜಿಲ್ಲಾಡಳಿತಕ್ಕೆ ಫುಲ್ ಟೆನ್ಷನ್

    ಬೀದರ್: ಆಕ್ಸಿಜನ್ ಬರುವುದು 3 ಗಂಟೆ ತಡವಾದ ಕಾರಣ ಆಕ್ಸಿಜನ್ ಕೊರತೆ ಎದುರಾಗುವ ಪರಿಸ್ಥಿತಿ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗಿತ್ತು.

    ಪ್ರತಿದಿನ ಸರಿಯಾದ ಸಮಯಕ್ಕೆ ಬಳ್ಳಾರಿಯಿಂದ ಬೀದರ್‍ಗೆ ಬರುತ್ತಿದ್ದ ಪ್ರಾಣ ವಾಯು ಇಂದು ಮೂರು ಗಂಟೆ ತಡವಾಗಿ ಬಂದಿದೆ. ಪ್ರಾಣ ವಾಯು ಬರುವುದು ತಡವಾದ ಕಾರಣ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಆತಂಕದಿಂದ ಬ್ರೀಮ್ಸ್ ಆಸ್ಪತ್ರೆಗೆ ದೌಡಾಯಿಸಿದ್ದರು.

    ಸಮಯ ಕಳೆದಂತೆ ಬ್ರೀಮ್ಸ್ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಟ್ಯಾಂಕ್ ಖಾಲಿಯಾಗುತ್ತಿದ್ದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹರಸಾಹಸ ಪಟ್ಟು ಖಾಸಗಿ ಆಸ್ಪತ್ರೆ ಹಾಗೂ ಗ್ಯಾಸ್ ಏಜೆನ್ಸಿಗಳಿಂದ 250 ಜಂಬೂ ಸಂಗ್ರಹ ಮಾಡಿ ಕೋವಿಡ್ ಸೋಂಕಿತರಿಗೆ ಸರಬರಾಜು ಮಾಡಿದರು.

    ಜಂಬೂ ಸಿಲಿಂಡರ್ 3 ಗಂಟೆ ಬರುವುದು ತಡವಾದ್ದರಿಂದ 350 ಸೋಂಕಿತನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಮಾಧಾನ ಪಡಿಸಲು ಹರಸಾಹಸ ಪಟ್ಟರು. 3 ಗಂಟೆ ಬಳಿಕ ಆಕ್ಸಿಜನ್ ಹೊತ್ತ ಗಾಡಿ ಬೀದರ್‍ಗೆ ಬಂದು ಬ್ರೀಮ್ಸ್ ಆಕ್ಸಿಜನ್ ಟ್ಯಾಂಕ್‍ಗೆ ಡಂಪ್ ಮಾಡಿದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು. ಆಕ್ಸಿಜನ್ ಟ್ಯಾಂಕ್ ಗಾಡಿ ಕೆಟ್ಟು ಹೋಗಿದ್ದರಿಂದ ಈ ಸಮಸ್ಯೆಯಾಗಿದ್ದು, ಈಗಾಗಲೇ 14 ಕೆಎಲ್ ಆಕ್ಸಿಜನ್ ಟ್ಯಾಂಕ್ ಹೊತ್ತ ಗಾಡಿ ಬ್ರೀಮ್ಸ್‍ಗೆ ಬಂದಿದೆ.

    ಖಾಸಗಿ ಆಸ್ಪತ್ರೆ, ಗ್ಯಾಸ್ ಏಜೆನ್ಸಿಗಳಿಂದ ಸುಮಾರು 250 ಜಂಬೂ ಸಿಲಿಂಡರ್ ಸಂಗ್ರಹ ಮಾಡಿ ಎಲ್ಲಾ ಸೋಂಕಿತರಿಗೆ ಆಕ್ಸಿಜನ್ ನೀಡಿದ್ದೇವೆ. ಆಕ್ಸಿಜನ್ ಸಮಸ್ಯೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಹೀಗಾಗಿ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಿ ರೆಡ್ಡಿ ತಿಳಿದ್ದಾರೆ.

  • ಬ್ರೀಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಬಿಎಸ್‍ವೈ ತರಾಟೆ

    ಬ್ರೀಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಬಿಎಸ್‍ವೈ ತರಾಟೆ

    ಬೀದರ್: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬ್ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಿರ್ದೇಶಕ ಡಾ. ಚನ್ನಣ್ಣ ಅವರಿಗೆ ಆಸ್ಪತ್ರೆಯ ಅವ್ಯವಸ್ಥೆ ನೋಡಿ, ನಡೆಸಲು ಸಾಧ್ಯವಿಲ್ಲಿದ್ದರೆ ಆಸ್ಪತ್ರೆಗೆ ಬೀಗ ಹಾಕಿ. ನನ್ನ ಜೀವನದಲ್ಲಿ ಇಂಥಾ ಆಸ್ಪತ್ರೆ ನೋಡಿಲ್ಲ ಎಂದು ಬಿಎಸ್‍ವೈ ತರಾಟೆಗೆ ತೆಗೆದುಕೊಂಡರು.

    ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರೋ, ಸತ್ತಿದ್ದಾರೋ ಗೊತ್ತಿಲ್ಲಾ. ನಾವು ಈ ಆಸ್ಪತ್ರೆಗೆ ಬಂದ್ರೆ ಬೇರೆ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಇಲ್ಲಿದೆ. ನನ್ನ ಜೀವನದಲ್ಲಿ ಈ ರೀತಿಯ ದುಸ್ಥಿತಿ ಆಸ್ಪತ್ರೆ ನೋಡಿಲ್ಲ ಎಂದು ಹೇಳಿ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಈ ಆಸ್ಪತ್ರೆಯನ್ನು ಯಾವ ಪದದಿಂದ ವರ್ಣನೆ ಮಾಡಬೇಕೋ ಗೊತ್ತಿಲ್ಲ. ಇಲ್ಲಿದ್ದರೆ ನನ್ನ ಆರೋಗ್ಯ ಎಲ್ಲಿ ಕೆಡುತ್ತದೋ ಎಂದು ನಾನು ಬೇಗ ವೀಕ್ಷಣೆ ಮಾಡಿ ಹೊರ ಬಂದೆ ಎಂದು ಬಿಎಸ್‍ವೈ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews