Tag: brain operation

  • ರೋಗಿ ಕೊಳಲು ಊದುವಾಗಲೇ ಮೆದುಳು ಆಪರೇಷನ್ – 1.20 ಲಕ್ಷ ರೂ. ನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

    ರೋಗಿ ಕೊಳಲು ಊದುವಾಗಲೇ ಮೆದುಳು ಆಪರೇಷನ್ – 1.20 ಲಕ್ಷ ರೂ. ನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

    ಬೆಳಗಾವಿ: ರೋಗಿಯ ಕೈಗೆ ಕೊಳಲು (Flute) ಕೊಟ್ಟು ಊದಲು ಹೇಳಿ ವೈದ್ಯರು ಮೆದುಳು ಶಸ್ತ್ರಚಿಕಿತ್ಸೆ (Brain Operation) ಮಾಡಿ ಯಶಸ್ವಿಯಾದ ಘಟನೆ ಬೆಳಗಾವಿಯ (Belagavi) ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ಕನ್ಹೇರಿ ಮಠದ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಗೆ ತಜ್ಞ ಪ್ರಕಾಶ ಭರಮಗೌಡರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು. ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಇಸ್ರೇಲ್‌ನಿಂದ (Israel) ಬಂದಿದ್ದ ರೈತನಿಗೆ ಮೆದುಳಿನಲ್ಲಿ ಗಡ್ಡೆ ಬೆಳೆದಿತ್ತು. ಅದನ್ನು ಟ್ಯೂಮರ್ ಆಪರೇಷನ್ ಮಾಡಿ ಹೊರ ತೆಗೆಯಬೇಕಿತ್ತು. ಈ ಸಂದರ್ಭದಲ್ಲಿ ವೈದ್ಯರು ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿದ್ದಾರೆ. ಸುಮಾರು 5 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ಇದನ್ನೂ ಓದಿ: ಜಾತಿ ನಿಂದನೆ ಕೇಸ್‌- ಮುನಿರತ್ನಗೆ ಜಾಮೀನು ಮಂಜೂರು

    ಅವೇಕ್ ಕ್ರೇನಿಯೊಟಮಿ (Awake Craniotomy) ಶಸ್ತ್ರಚಿಕಿತ್ಸೆಗೆ ಹೆಸರಾಗಿರುವ ಸಿದ್ದಗಿರಿ ಆಸ್ಪತ್ರೆ ಹೆಸರುವಾಸಿಯಾಗಿದೆ. ವೈದ್ಯರು ಈ ಹಿಂದೆ ರೋಗಿಗೆ ಐಸ್‌ಕ್ರೀಮ್ ಕೊಟ್ಟು ಆಪರೇಷನ್ ಮಾಡಿದ್ದರು. ವೈದ್ಯರ ತಂಡ ಈವರೆಗೂ ಒಟ್ಟು 103 ಮೆದುಳು ಶಸ್ತ್ರಚಿಕಿತ್ಸೆ ಮಾಡಿದೆ. ವೈದ್ಯರ ಸಾಧನೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದ್ದಾರೆ.

    ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಾವು ಮಾಡಿದ ಆಪರೇಷನ್ ಕುರಿತು ಡಾ ಶಿವಶಂಕರ್ ಮರಜಕ್ಕೆ ಮಾತನಾಡಿ, ಗಡ್ಡೆ ಬೆಳೆದ ಜಾಗದ ಪಕ್ಕದಲ್ಲಿ ಮಾತ್ರ ಅರಿವಳಿಕೆ ನೀಡಿ ಆಪರೇಷನ್ ಮಾಡಲಾಗಿದೆ. ಕೇವಲ 1.20 ಲಕ್ಷ ರೂ. ನಲ್ಲಿ ಶಸ್ತ್ರಚಿಕಿತ್ಸೆ ಸೇರಿ ಆಸ್ಪತ್ರೆ ಸಂಪೂರ್ಣ ವೆಚ್ಚ ಆಗಿದೆ ಎಂದರು. ಇದನ್ನೂ ಓದಿ: ಶೃಂಗೇರಿ ಬಳಿಕ ಹೊರನಾಡಲ್ಲೂ ಡ್ರೆಸ್‌ಕೋಡ್ ಜಾರಿ – ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ

  • ಕೇವಲ ಎರಡೂವರೆ ನಿಮಿಷದಲ್ಲಿ ಬ್ರೈನ್ ಆಪರೇಷನ್- ನಾರಾಯಣ ಹೆಲ್ತ್ ಸಿಟಿ ವೈದ್ಯರಿಂದ ಮಹತ್ತರ ಸಾಧನೆ

    ಕೇವಲ ಎರಡೂವರೆ ನಿಮಿಷದಲ್ಲಿ ಬ್ರೈನ್ ಆಪರೇಷನ್- ನಾರಾಯಣ ಹೆಲ್ತ್ ಸಿಟಿ ವೈದ್ಯರಿಂದ ಮಹತ್ತರ ಸಾಧನೆ

    ಆನೇಕಲ್: ವೈದ್ಯಕೀಯ ಲೋಕವೇ ಹಾಗೆ ಒಂದಲ್ಲ ಒಂದು ಸವಾಲಿನ ಮೂಲಕ ರೋಗಿಗಳನ್ನು ಬದುಕಿಸುತ್ತಾರೆ. ಇಂತಹದೇ ಒಂದು ಸವಾಲಿನ ಆಪರೇಷನ್ ಅನ್ನು ಕೇವಲ ಮೂರು ನಿಮಿಷದಲ್ಲಿ ಮಾಡುವ ಮೂಲಕ ವೈದ್ಯರ ತಂಡವೊಂದು ವೈದ್ಯಕೀಯ ಲೋಕಕ್ಕೆ ಸವಾಲೆಸೆದಿದೆ.

    ಹೌದು. ದೆಹಲಿಯಲ್ಲಿ ಆಯೋಜನೆ ಮಾಡಿದ್ದ ನೈಸ್ ಹೆಸರಿನ ಕಾನ್ಫರೆನ್ಸ್‍ನಲ್ಲಿ ಹಲವಾರು ದೇಶದ ವೈದ್ಯರ ತಂಡ ಇಂತಹ ಸಾಧನೆ ಮಾಡಿದ್ದಾರೆ. ಆಪರೇಷನ್ ಮಾಡೋ ಮೂಲಕ ಮುಂದಿನ ಯುವ ಪೀಳಿಗೆಯ ವೈದ್ಯರಿಗೆ ವಿಭಿನ್ನ ರೀತಿಯ ಆಪರೇಷನ್ ಮಾಡುವುದು ಹೇಗೆ ಎನ್ನುವ ಮಾಹಿತಿಯನ್ನು ತಿಳಿಸುವ ಕೆಲಸ ಮಾಡಿತ್ತು. ಅದರಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ (Narayana Health City Hospital) ಯ ಡಾ ವಿಕ್ರಂ ಹುಡೇದ್ ಹಾಗೂ ಅವರ ತಂಡ 47 ವರ್ಷದ ವ್ಯಕ್ತಿಯೊಬ್ಬರಿಗೆ ಬ್ರೈನ್ ಆಪರೇಷನ್ (Brain Operation) ಮಾಡಲು ಮುಂದಾಗಿತ್ತು. ತಲೆಯ ಒಳಗಿನ ಕೂದಲಿನ ಗಾತ್ರದ ನರಮಂಡಲದಲ್ಲಿ ಆಪರೇಷನ್ ಮಾಡುವ ಸವಾಲನ್ನು ಈ ತಂಡ ಎದುರಿಸಿದ್ದು, ಒಂದು ಗಂಟೆ ಸಮಯ ತೆಗೆದುಕೊಂಡು ಈ ಆಪರೇಷನ್ ಮಾಡಲು ಮುಂದಾಗಿತ್ತು. ಆದರೆ ಕೇವಲ ಎರಡೂವರೆ ನಿಮಿಷದಲ್ಲಿ ಆಪರೇಷನ್ ಮಾಡಿ ಮುಗಿಸುವ ಮೂಲಕ ವೈದ್ಯರ ತಂಡ ಎಲ್ಲರ ಹುಬ್ಬೇರಿಸಿದೆ.

    ವೈದ್ಯರ ತಂಡ ಮಾಡಿರುವ ಸಾಧನೆ ಅಂತಿಂಥದ್ದಲ್ಲ ದೇಶದಲ್ಲೇ ಇದು ಮೊದಲನೇ ಸಾಧನೆ ಎನ್ನಲಾಗಿದೆ. ಬ್ರೈನ್ ಅನ್ಯೂರಿಸಂ (Brain Aneurysm) ಎಂದು ಕರೆಯಲ್ಪಡುವ ಕಾಯಿಲೆಗೆ ಡಾಕ್ಟರ್ ವಿಕ್ರಂ ಹುಡೆದ್ ( Dr. Vikram Huded) ಡಿವೈಸ್ ಒಂದರ ಮೂಲಕ ಕಾಲಿನಿಂದ ತಲೆಗೆ ಸಂಪರ್ಕ ಕಲ್ಪಿಸಿ ಬ್ರೈನ್ ಒಳಗೆ ಉಂಟಾಗಿದ್ದ ಗುಳ್ಳೆಯನ್ನ ಆಪರೇಷನ್ ಮಾಡಿದ್ದಾರೆ. ವ್ಯಕ್ತಿಗೆ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ. ಹೀಲ್ ಟೆಕ್ನಾಲಜಿ ಮೂಲಕ ಆಪರೇಷನ್ ಮಾಡಿದ್ದು, ಎರಡೂವರೆ ನಿಮಿಷದಲ್ಲಿ ಇಂತಹ ಆಪರೇಷನ್ ಮಾಡಿ ಮುಗಿಸಿರುವ ಯಾವುದೇ ಉದಾಹರಣೆಗಳು ಇಲ್ಲ. ಅಮೆರಿಕ ದೇಶದ ಅಧ್ಯಯನದ ಪ್ರಕಾರ 50% ಜನರಲ್ಲಿ ಈ ಕಾಯಿಲೆ ಕಂಡುಬಂದರೂ, ಸಹ ಭಾರತದಲ್ಲಿ ಈ ಬಗ್ಗೆ ಜನರಲ್ಲಿ ಅಷ್ಟೊಂದು ಅರಿವು ಇಲ್ಲದೆ ಜಿಮ್ ಸೇರಿದಂತೆ ಹಲವಡೆ ತಲೆನೋವು ಕಂಡು ದಿಢೀರ್ ಎಂದು ಹೃದಯಾಘಾತವಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

    ಇಂತಹ ಒಂದು ಕಾಯಿಲೆಗೆ ಡಾಕ್ಟರ್ ವಿಕ್ರಂ ಹುಡೆದ್ ಮತ್ತವರ ತಂಡದಲ್ಲಿದ್ದ ಡಾ. ದಿಲೀಪ್, ಡಾ. ತನೈ ಹಾಗೂ ಡಾ.ಅನುಷಾ ಕೇವಲ ಎರಡೂವರೆ ನಿಮಿಷದಲ್ಲಿ ಬ್ರೈನ್ ಆಪರೇಷನ್ ಮಾಡಿದ್ದಾರೆ. ಲೈವ್ ಕಾನ್ಫರೆನ್ಸ್‍ನಲ್ಲಿ 35ಕ್ಕೂ ಹೆಚ್ಚು ದೇಶಗಳಲ್ಲಿ ನಮ್ಮ ವೈದ್ಯರ ತಂಡ ಮೊದಲ ಸ್ಥಾನ ಪಡೆದಿದ್ದು, ನಾವು ವೈದ್ಯರು ನಮಗೆ ಆಪರೇಷನ್ ಸಕ್ಸಸ್ ಮಾಡುವುದಷ್ಟೇ ಮುಖ್ಯವಾಗಿತ್ತು. ನಾವು ಮಾಡಿರುವ ಸಾಧನೆ ಮೊದಲ ಸ್ಥಾನ ಪಡೆದಿದ್ದು, ಮೊದಲ ಸ್ಥಾನ ನಮಗೆ ಬಂದಿದೆ ಎನ್ನುವುದು ನಮಗೆ ಹೆಮ್ಮೆ ತಂದಿದೆ ಎಂದು ಡಾ.ವಿಕ್ರಮ್ ಹುಡೇದ್ ಹೇಳಿದ್ದಾರೆ.

    ಒಟ್ಟಿನಲ್ಲಿ ವೈದ್ಯಕೀಯ ಲೋಕದಲ್ಲಿ ಈ ಎರಡೂವರೆ ನಿಮಿಷದ ಆಪರೇಷನ್ ನಲ್ಲಿ ಬ್ರೈನ್ ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುವ ಮೂಲಕ ದೇಶದಲ್ಲೇ ಗಮನ ಸೆಳೆದ ಈ ವೈದ್ಯರ ತಂಡಕ್ಕೆ ನಮ್ಮದೊಂದು ಸಲಾಂ. ಇದನ್ನೂ ಓದಿ: 5 ಗ್ಯಾರಂಟಿ ಜಾರಿಗೆ 59 ಸಾವಿರ ಕೋಟಿ ವೆಚ್ಚವಾಗುತ್ತೆ: ಸಿದ್ದರಾಮಯ್ಯ