Tag: Brahmachari

  • ನೋವನ್ನು ನಗೆಯಿಂದ ಶೃಂಗರಿಸಿಕೊಂಡ ಭರ್ಜರಿ ಬ್ರಹ್ಮಚಾರಿ!

    ನೋವನ್ನು ನಗೆಯಿಂದ ಶೃಂಗರಿಸಿಕೊಂಡ ಭರ್ಜರಿ ಬ್ರಹ್ಮಚಾರಿ!

    ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ತೆರೆ ಕಂಡಿದೆ. ಸಂಪೂರ್ಣವಾಗಿ ನಗುವಿನೊಂದಿಗೆ ಫಾಮಿಲಿ ಪ್ಯಾಕೇಜಿನಂತೆ ಮೂಡಿ ಬಂದಿರುವ ಬ್ರಹ್ಮಚಾರಿಯನ್ನು ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಈ ಹಿಂದೆಯೇ ಟೀಸರ್ ಮತ್ತು ಟ್ರೇಲರ್ ಗಳ ಮೂಲಕ ಬ್ರಹ್ಮಚಾರಿ ಕಥೆಯ ಬಗ್ಗೆ ಒಂದು ಅಂದಾಜು ಪ್ರೇಕ್ಷಕರಲ್ಲಿ ಮೂಡಿಕೊಂಡಿತ್ತು. ಆದರೆ ಇಲ್ಲಿ ಅದ್ಯಾವುದಕ್ಕೂ ನಿಲುಕದಂತಹ ಸೊಗಸಾದ ಕಥೆಯಿದೆ. ನಿರ್ಮಾಪಕ ಉದಯ್ ಕೆ ಮೆಹ್ತಾರ ಅದ್ಧೂರಿ ನಿರ್ಮಾಣ, ಚಂದ್ರಮೋಹನ್ ಅವರ ಮಾಂತ್ರಿಕ ನಿರ್ದೇಶನ ಮತ್ತು ನೀನಾಸಂ ಸತೀಶ್, ಅದಿತಿ ಪ್ರಭುದೇವ ಅವರ ಚೆಂದದ ನಟನೆಯೊಂದಿಗೆ ಬ್ರಹ್ಮಚಾರಿ ಕಳೆಗಟ್ಟಿಕೊಂಡಿದ್ದಾನೆ.

    ಬ್ರಹ್ಮಚಾರಿಗಿರೋದು ಯಾವ ಸಮಸ್ಯೆ ಅನ್ನೋದು ಪ್ರೇಕ್ಷಕರಿಗೆಲ್ಲ ಈ ಹಿಂದೆಯೇ ಗೊತ್ತಾಗಿ ಹೋಗಿತ್ತು. ಆದರೆ ಯಾರೂ ಊಹಿಸಿರದ ರೀತಿಯಲ್ಲಿ ಚಂದ್ರಮೋಹನ್ ಈ ಸಿನಿಮಾವನ್ನು ರೂಪಿಸಿದ್ದಾರೆ. ಯಾರೊಂದಿಗೂ ಹೇಳಿಕೊಳ್ಳಲು ಮುಜುಗರ ಪಡುವಂತಹ ಲೈಂಗಿಕ ಸಮಸ್ಯೆಗಳ ಬಗ್ಗೆ ಎಂಬತ್ತರ ದಶಕದಲ್ಲಿಯೇ ಒಂದಷ್ಟು ಸಿನಿಮಾಗಳು ಬಂದಿದ್ದವು. ಕಾಶೀನಾಥ್ ಅಂಥಾದ್ದೊಂದು ಪರಿಣಾಮಕಾರಿ ಪ್ರಯೋಗಗಳನ್ನು ಮಾಡಿದ ಮೊದಲಿಗರಾಗಿಯೂ ಗುರುತಿಸಿಕೊಂಡಿದ್ದಾರೆ. ಬ್ರಹ್ಮಚಾರಿ ಅದೇ ಜಾಡಿನಲ್ಲಿದ್ದರೂ ಅಪರೂಪದ ಚಿತ್ರವಾಗಿ ದಾಖಲಾಗುವಂತಿದೆ.

    ಈ ಚಿತ್ರದಲ್ಲಿ ನೀನಾಸಂ ಸತೀಶ್ ರಾಮು ಎಂಬ ಪಾತ್ರಕ್ಕೆ ಜೀವ ತುಂಬಿದ್ದರೆ, ಅದಿತಿ ಪ್ರಭುದೇವ ಸುನೀತಾ ಕೃಷ್ಣಮೂರ್ತಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ರಾಮು ಶ್ರೀರಾಮಚಂದ್ರನ ಭಕ್ತ. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಶ್ರೀರಾಮ ಚಂದ್ರನ ಆದರ್ಶಗಳನ್ನು ಪಾಲಿಸುತ್ತಾ ಮುಂದುವರಿಯುವ ಪ್ರತಿಜ್ಞೆಯನ್ನೂ ಕೈಗೊಂಡಿರುವಾತ. ಆದರೆ ಕಾಲ ಸರಿದು ಬೆಳೆದು ನಿಂತ ರಾಮುಗೆ ಸುನಿತಾ ಕೃಷ್ಣಮೂರ್ತಿ ಎಂಬ ಹುಡುಗಿಯ ಪರಿಚಯವಾಗುತ್ತದೆ. ಆಕೆ ಯುವ ಬರಹಗಾರ್ತಿಯಾಗಿದ್ದುಕೊಂಡು ಒಂದಷ್ಟು ಖ್ಯಾತಿ ಹೊಂದಿರೋ ಹುಡುಗಿ. ಸೂಕ್ಷ್ಮ ಮನಸ್ಥಿತಿಯವಳೂ ಹೌದು. ಇಂತಹ ಸುನೀತಾಳೆಂದಿಗಿನ ರಾಮುವಿನ ಪರಿಚಯ ಮದುವೆಯ ಹೊಸ್ತಿಲು ದಾಟಿಕೊಳ್ಳುತ್ತದೆ. ಹಾಗೆ ಇವರಿಬ್ಬರು ಮದುವೆಯಾಗಿ ಪ್ರಸ್ಥದ ಕೋಣೆ ತಲುಪಿಕೊಳ್ಳುತ್ತಲೇ ಬ್ರಹ್ಮಚಾರಿಯ ಸಮಸ್ಯೆಯೊಂದಿಗೆ ಅಸಲೀ ಕಥೆಯೂ ಆರಂಭವಾಗುತ್ತದೆ.

    ಇಲ್ಲಿ ರಾಮುವನ್ನು ಬಾಧಿಸುತ್ತಿರೋ ಲೈಂಗಿಕ ಸಮಸ್ಯೆಯ ಸುತ್ತ ಕಥೆ ಬಿಚ್ಚಿಕೊಂಡರೂ ಎಲ್ಲಿಯೂ ವಲ್ಗಾರಿಟಿಯ ಸೋಂಕಿಲ್ಲ. ಚುರುಕಿನ ನಿರೂಪಣೆ, ಅದಕ್ಕೆ ತಕ್ಕುದಾದಂತಹ ಸಂಭಾಷಣೆಗಳೊಂದಿಗೆ ಇಲ್ಲಿನ ದೃಶ್ಯಗಳು ಭರಪೂರ ನಗುವಿನೊಂದಿಗೆ ಮುಂದುವರಿಯುತ್ತದೆ. ಇದರಲ್ಲಿಯೇ ಊಹಿಸಲಾಗದ ಟ್ವಿಸ್ಟುಗಳನ್ನಿಡುವ ಮೂಲಕ ನಿರ್ದೇಶಕರು ಈ ನಗುವಿನ ಯಾನವನ್ನು ಮತ್ತಷ್ಟು ರೋಚಕವಾಗಿಸಿದ್ದಾರೆ. ಇಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ತಮ್ಮ-ತಮ್ಮ ಪಾತ್ರಗಳನ್ನು ನಿರ್ವಹಿಸಿರುವ ರೀತಿ. ಅವರಿಬ್ಬರೂ ನಟಿಸಿರುವ ಸೊಗಸೇ ಈ ಚಿತ್ರದ ಪ್ರಧಾನ ಶಕ್ತಿ. ನೀನಾಸಂ ಸತೀಶ್‍ರಂತಹ ಲೀಡ್ ನಟರು ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳೋದೇ ಅಪರೂಪ. ಅಂತಹದ್ದನ್ನು ಒಪ್ಪಿಕೊಂಡು, ಆ ಪಾತ್ರವನ್ನೇ ಒಳಗಿಳಿಸಿಕೊಂಡಂತೆ ನಟಿಸಿರೋ ರೀತಿ ಯಾರನ್ನಾದರೂ ಸೆಳೆಯುವಂತಿದೆ.

    ಬ್ರಹ್ಮಚಾರಿಯ ಮೂಲಕ ನಿರ್ದೇಶಕ ಚಂದ್ರಮೋಹನ್ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ತಾವು ಕಾಮಿಡಿ ಜಾಣರಿಗೇ ಹೊಸ ದಿಕ್ಕು ತೋರಿಸಬಲ್ಲ ಕಸುವು ಹೊಂದಿರುವ ನಿರ್ದೇಶಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಛಾಯಾಗ್ರಹಣ, ಧರ್ಮವಿಶ್ ಸಂಗೀತ, ಹಿನ್ನೆಲೆ ಸಂಗೀತ ಎಲ್ಲವೂ ಇದರ ಅಂದ ಹೆಚ್ಚಿಸಿವೆ. ಶಿವರಾಜ್ ಕೆ ಆರ್ ಪೇಟೆ, ಅಚ್ಯುತ್ ಕುಮಾರ್, ದತ್ತಣ್ಣನ ಪಾತ್ರಗಳೂ ತಲೆದೂಗುವಂತೆ ಮೂಡಿ ಬಂದಿವೆ. ಇದು ಔಟ್ ಆಂಡ್ ಔಟ್ ನಗು ತುಂಬಿಕೊಂಡಿರೋ ಚಿತ್ರ. ಮನಸಾರೆ ನಕ್ಕು ಹಗುರಾಗೋ ಅವಕಾಶವನ್ನು ಖಂಡಿತಾ ಕಳೆದುಕೊಳ್ಳಬೇಡಿ.

    ರೇಟಿಂಗ್: 4/5

  • ಬ್ರಹ್ಮಚಾರಿಯ ಬರ್ತ್ ಡೇಗೆ ಫಸ್ಟ್ ನೈಟ್ ಟೀಸರ್ ಗಿಫ್ಟ್!

    ಬ್ರಹ್ಮಚಾರಿಯ ಬರ್ತ್ ಡೇಗೆ ಫಸ್ಟ್ ನೈಟ್ ಟೀಸರ್ ಗಿಫ್ಟ್!

    ದಯ್ ಕೆ ಮೆಹ್ತಾ ನಿರ್ಮಾಣದ ಬ್ರಹ್ಮಚಾರಿ ಚಿತ್ರದ ಟೀಸರ್ ಲಾಂಚ್ ಆಗಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ನೀನಾಸಂ ಸತೀಶ್ ಹುಟ್ಟುಹಬ್ಬದ ಕೊಡುಗೆಯಾಗಿ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಮೂಲಕ ಭರ್ಜರಿ ನಗುವಿಗೆ ಮೋಸವಿಲ್ಲದ, ಮನೋರಂಜನಾತ್ಮಕ ಚಿತ್ರವೊಂದರ ಮೂಲಕ ಸತೀಶ್ ಮತ್ತೆ ಪ್ರೇಕ್ಷಕರನ್ನು ಎದುರುಗೊಳ್ಳೋದು ಪಕ್ಕಾ ಆಗಿದೆ.

    ಈ ಟೀಸರ್ ಬಿಡುಗಡೆಯಾಗಿ ದಿನ ಕಳೆಯೋದರೊಳಗಾಗಿ ಜನಪ್ರಿಯತೆ ಪಡೆದುಕೊಂಡಿರೋ ರೀತಿಯೇ ಇಡೀ ಚಿತ್ರದ ಕಂಟೆಂಟ್ ಸ್ಪೆಷಲ್ ಆಗಿದೆ ಎಂಬುದರ ಸೂಚನೆ. ಯಾವುದೇ ವಲ್ಗಾರಿಟಿ ಇಲ್ಲದಂತೆ ಕಲಾತ್ಮಕವಾಗಿಯೇ ಬ್ರಹ್ಮಚಾರಿಯ ಫಸ್ಟ್ ನೈಟ್ ರಹಸ್ಯದ ಸೂಚನೆಯೊಂದಿಗೆ ಕಚಗುಳಿಯಿಟ್ಟಿರೋ ಈ ಟೀಸರ್ ದಿನದೊಪ್ಪತ್ತಿನಲ್ಲಿಯೇ ಯಶಸ್ವಿಯಾಗಿ ಬಿಟ್ಟಿದೆ. ಈ ಹಿಂದೆ ಚಂಬಲ್ ಮೂಲಕ ಮಾಸ್ ಲುಕ್ಕಿನಲ್ಲಿ ಮಿಂಚಿದ್ದ ಸತೀಶ್ ಈ ಬಾರಿ ಬೇರೊಂದು ಸಾದಾ ಸೀದಾ ಲುಕ್ಕಿನಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ.

    ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಚಂದ್ರಮೋಹನ್. ಈ ಹಿಂದೆ ಬಾಂಬೆ ಮಿಠಾಯಿ, ಡಬ್ಬಲ್ ಇಂಜಿನ್‍ನಂಥಾ ಹಾಸ್ಯಪ್ರಧಾನ ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಬಾರಿ ಅದೇ ಜಾಡಿನಲ್ಲಿ ವಿಶಿಷ್ಟವಾದೊಂದು ಕಥೆಯೊಂದಿಗೆ ಬಂದಿದ್ದಾರೆ. ಬ್ರಹ್ಮಚಾರಿಯನ್ನು ಉದಯ್ ಮೆಹ್ತಾ ಅವರು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶಶನ ಈ ಚಿತ್ರಕ್ಕಿದೆ.

    ಅಯೋಗ್ಯ ಚಿತ್ರದ ಅಗಾಧ ಪ್ರಮಾಣದ ಯಶಸ್ಸಿನಿಂದ ಈಗ ನೀನಾಸಂ ಸತೀಶ್ ಅವರ ವೃತ್ತಿ ಜೀವನಕ್ಕೊಂದು ಹೊಸ ಓಘ ಬಂದಂತಾಗಿದೆ. ಅದು ಚಂಬಲ್ ಮೂಲಕ ಮುಂದುವರೆದು ಇದೀಗ ಬ್ರಹ್ಮಚಾರಿಯ ರೂಪದಲ್ಲಿಯೂ ಮತ್ತಷ್ಟು ಲಕ ಲಕಿಸೋ ಸೂಚನೆಗಳೇ ದಟ್ಟವಾಗಿವೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಸತೀಶ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬ್ರಹ್ಮಚಾರಿಗೆ ಜೂನಿಯರ್ ರಾಕಿ ಭಾಯ್ ಸಾಥ್!

    ಬ್ರಹ್ಮಚಾರಿಗೆ ಜೂನಿಯರ್ ರಾಕಿ ಭಾಯ್ ಸಾಥ್!

    ಬೆಂಗಳೂರು: ಒಂದು ಕಾಲದಲ್ಲಿ ಕೆಜಿಎಫ್ ಅಂದರೆ ಬಹುತೇಕರ ಕಣ್ಣುಗಳಲ್ಲಿ ಚಿನ್ನವೇ ಫಳಫಳಿಸುತ್ತಿತ್ತು. ಆದರೀಗ ಈ ಹೆಸರು ಕೇಳಿದಾಕ್ಷಣ ಕನ್ನಡದ ಕೀರ್ತಿ ಪತಾಕೆಯನ್ನು ದೇಶಾದ್ಯಂತ ಎತ್ತಿ ಹಿಡಿದ ಯಶ್ ಅಭಿನಯದ ಚಿನ್ನದಂಥಾ ಚಿತ್ರ ನೆನಪಾಗುವಂತಾಗಿದೆ. ಅಷ್ಟರ ಮಟ್ಟಿಗೆ ಪುಷ್ಕಳ ಗೆಲುವು ತನ್ನದಾಗಿಸಿಕೊಂಡ ಈ ಸಿನಿಮಾದ ಭಾಗವಾಗಿದ್ದ ಪ್ರತಿಯೊಬ್ಬರೂ ಈಗ ಒಂದಿಲ್ಲೊಂದು ರೀತಿಯಲ್ಲಿ ಬ್ಯುಸಿಯಾಗಿದ್ದಾರೆ. ಭರಪೂರ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

    ಕೆಜಿಎಫ್ ಚಿತ್ರದಲ್ಲಿ ಜ್ಯೂನಿಯರ್ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್ ಎಂಬ ಹುಡುಗ ಪ್ರೇಕ್ಷಕರೆಲ್ಲರ ಮನ ಗೆದ್ದಿದ್ದ. ಪುಟ್ಟ ವಯಸ್ಸಿನಲ್ಲಿಯೇ ನಟನೆಯ ಎಲ್ಲ ಪಟ್ಟುಗಳನ್ನು ಅರಗಿಸಿಕೊಂಡವನಂತೆ ನಟಿಸಿದ್ದ ಈ ಹುಡುಗನ ಲಕ್ಕು ಸದರಿ ಪಾತ್ರದಿಂದಲೇ ಖುಲಾಯಿಸಿ ಬಿಟ್ಟಿದೆ. ಇದಾದ ನಂತರ ಬಹಳಷ್ಟು ಅವಕಾಶಗಳೂ ಕೂಡಾ ಅನ್ಮೋಲ್ ನನ್ನು ಅರಸಿ ಬಂದಿವೆ. ಸದ್ಯಕ್ಕೆ ಅನ್ಮೋಲ್ ಬ್ರಹ್ಮಚಾರಿಯ ಗೆಟಪ್ಪಿನಲ್ಲಿರೋ ನೀನಾಸಂ ಸತೀಶ್ ಅವರ ಜೊತೆ ನಟಿಸೋ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾನೆ.

    ನೀನಾಸಂ ಸತೀಶ್ ನಾಯಕನಾಗಿರೋ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣವೀಗ ಭರದಿಂದ ಸಾಗುತ್ತಿದೆ. ಈ ಸೆಟ್‍ನಲ್ಲಿ ಅನ್ಮೋಲ್ ಜೊತೆಗಿರೋ ಫೋಟೋವೊಂದನ್ನು ಸತೀಶ್ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅನ್ಮೋಲ್ ಪಾತ್ರ ಹೇಗಿದೆ? ಇಲ್ಲಿಯೂ ಸತೀಶ್ ಅವರ ಜ್ಯೂನಿಯರ್ ಶೇಡಿನ ಪಾತ್ರವನ್ನೇನಾದರೂ ಆತ ಮಾಡಿದ್ದಾನಾ ಎಂಬುದೂ ಸೇರಿದಂತೆ ಯಾವ ವಿಚಾರವನ್ನೂ ಸತೀಶ್ ಅವರಾಗಲಿ, ಚಿತ್ರತಂಡವಾಗಲಿ ಬಿಟ್ಟು ಕೊಟ್ಟಿಲ್ಲ.

    ಬ್ರಹ್ಮಚಾರಿ ರೊಮ್ಯಾಂಟಿಕ್ ಕಾಮಿಡಿ ಜಾನರಿನ ಚಿತ್ರ. ಅಯೋಗ್ಯ ಚಿತ್ರದ ನಂತರ ಭರ್ಜರಿ ಯಶಸ್ಸಿನ ಅಲೆಯಲ್ಲಿರೋ ಸತೀಶ್ ಪಾಲಿಗೆ ಈ ಚಿತ್ರವೂ ಅಂಥಾದ್ದೇ ಗೆಲುವು ತಂದು ಕೊಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈ ಚಿತ್ರದ ತಾರಾಗಣವೂ ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಕೆಜಿಎಫ್ ಖ್ಯಾತಿಯ ಅನ್ಮೋಲ್ ನಟಿಸುತ್ತಿರೋ ವಿಚಾರ ಮಾತ್ರವೇ ಬಯಲಾಗಿದೆ.

  • ‘ಅಯೋಗ್ಯ’ದ ಸತೀಶ್ ಈಗ ‘ಬ್ರಹ್ಮಚಾರಿ’

    ‘ಅಯೋಗ್ಯ’ದ ಸತೀಶ್ ಈಗ ‘ಬ್ರಹ್ಮಚಾರಿ’

    ಬೆಂಗಳೂರು: ಅಯೋಗ್ಯ ಚಿತ್ರದ ಸಕ್ಸಸ್ ನಂತರ ನೀನಾಸಂ ಸತೀಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ರಿಲೀಸ್ ಆಗಿದ್ದ ಚಂಬಲ್ ಸಹ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಹಾಗೆಯೇ ನಟನೆಯೊಂದಿಗೆ ತಾವೇ ನಿರ್ದೇಶನಕ್ಕೂ ಮುಂದಾಗಿದ್ದರು. ಈಗ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೌದು. ಸತೀಶ್ ಈಗ ಬ್ರಹ್ಮಚಾರಿ ಹೆಸರಿನ ಚಿತ್ರವನ್ನು ಒಪ್ಪಿಕೊಂಡಿದ್ದು, ಅವರಿಲ್ಲಿ ಬ್ರಹ್ಮಚಾರಿಯಾಗಿ ನಟಿಸುತ್ತಿದ್ದಾರೆ. ಉದಯ್ ಮೆಹ್ತಾ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಇನ್ನು ಬ್ರಹ್ಮಚಾರಿ ಅಂತ ಟೈಟಲ್ ಇಟ್ಟಿರುವ ಚಿತ್ರತಂಡ 100 ಪರ್ಸೆಂಟ್ ವರ್ಜಿನ್ ಎನ್ನುವ ಸಬ್ ಟೈಟಲ್ ಇಟ್ಟಿದೆ. ಈಗಾಗಲೇ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ‘ಬ್ರಹ್ಮಚಾರಿ’ ಹೆಸರಿನ ಮೂರನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅಂದ ಹಾಗೆ ಈ ಹಿಂದೆ ಕೇಳಿ ಬಂದಿರುವಂತೆ ಈ ಚಿತ್ರವು ಲವ್ ಇನ್ ಮಂಡ್ಯ ಚಿತ್ರದ ಮುಂದುವರಿದ ಭಾಗ ಎನ್ನಲಾಗುತ್ತಿದ್ದು, ಆದರೆ ಅದನ್ನು ಚಿತ್ರ ತಂಡ ಅಲ್ಲಗಳೆದಿದೆ. ಇದೊಂದು ಪಕ್ಕಾ ಕಾಮಿಡಿ ಎಂಟರ್‍ಟೇನ್ ಮೆಂಟ್ ಚಿತ್ರ ಎಂದಿದ್ದಾರೆ. ಯುಗಾದಿ ಹಬ್ಬಕ್ಕೆ ಬ್ರಹ್ಮಚಾರಿ ಸೆಟ್ಟೇರಲಿದೆ.