Tag: book

  • ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ

    ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ

    ನವದೆಹಲಿ: ಇನ್ಪೋಸಿಸ್ ಫೌಂಡೇಶನ್ ಮುಖಸ್ಥೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಮಕ್ಕಳಿಗೆ ದೀಪಾವಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಪುಸ್ತಕ ದಿ ಸೇಜ್ ವಿತ್ ಟು ಹಾನ್ರ್ಸ್ ಇದನ್ನು ಅವರು ಮಕ್ಕಳಿಗಾಗಿ ಬರೆದಿದ್ದು, ಅದನ್ನೇ ದೀಪಾವಳಿ ಗಿಫ್ಟ್ ಆಗಿ ನೀಡಿದ್ದಾರೆ.

    ಪುಸ್ತಕದ ವಿಶೇಷತೆ:
    ಈ ಪುಸ್ತಕವು ಭಾರತೀಯ ಪುರಾಣಗಳ ಪುಟಗಳಲ್ಲಿ ಕಳೆದುಹೋಗಿರುವ ಹಲವಾರು ಯಾರಿಗೂ ತಿಳಿಯದ ಮತ್ತು ಆಕರ್ಷಕ ಕಥೆಗಳನ್ನು ಒಳಗೊಂಡಿದೆ. ರಾಜರು, ರಾಣಿಯರು, ದೇವರು ಮತ್ತು ದೇವತೆಗಳು, ಋಷಿಗಳು, ಅಸಾಮಾನ್ಯ ಬುದ್ಧಿವಂತಿಕೆಯ ಪುರುಷರು ಮತ್ತು ಮಹಿಳೆಯರ ಕಥೆಗಳು ಈ ಪುಸ್ತಕದಲ್ಲಿ ಇವೆ.

    Sudha Murty

    ದಿ ಮ್ಯಾನ್ ಫ್ರಮ್ ದಿ ಎಗ್, ಸಪೆರ್ಂಟ್ಸ್ ರಿವೇಂಜ್, ದಿ ಅಪ್‍ಸೈಡ್-ಡೌನ್ ಕಿಂಗ್ ಮತ್ತು ದಿ ಡಾಟರ್ ಫ್ರಮ್ ದಿ ವಿಶಿಂಗ್ ಟ್ರೀ ಗಳ ಅನುಸರಣೆಯಾಗಿದೆ. ಅಲ್ಲದೇ ಅವರ  Unusual Tales from mythology ಸರಣಿಯ ಐದನೇ ಮತ್ತು ಕೊನೆಯ ಪುಸ್ತಕವಾಗಿದೆ. ಅವರ ಪುಸ್ತಕಗಳು ಹಲವು ವಿಧಗಳಲ್ಲಿ ಭಿನ್ನವಾಗಿರುವಂತೆ ತೋರಬಹುದು. ಆದರೆ ಎಲ್ಲಾ ಆವೃತ್ತಿಗಳಲ್ಲಿ ಥ್ರೆಡ್ ಒಂದೇ ಆಗಿರುತ್ತದೆ. ಪುರಾಣಗಳಲ್ಲಿ ಉಲ್ಲೇಖಿಸಲಾದ ಕೆಲವು ಪೋಷಕ ಪಾತ್ರಗಳು ತಮ್ಮದೇ ಆದ ಜೀವನದ ದೃಷ್ಟಿಕೋನಗಳೊಂದಿಗೆ ಹೇಳಲು ತಮ್ಮದೇ ಆದ ಕಥೆಗಳನ್ನು ಹೊಂದಿವೆ ಎಂದು ಅವರು ಹೇಳುತ್ತಾರೆ. ಪಫಿನ್ ಪ್ರಕಟಿಸಿದ ಈ ಪುಸ್ತಕವು ಪ್ರಿಯಾಂಕರ್ ಗುಪ್ತಾ ಅವರ ಚಿತ್ರಣಗಳನ್ನು ಹೊಂದಿದೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ವಿಶ್ವದಲ್ಲಿ ಯಾವುದೇ ಹೆಸರಿನಿಂದ ಕರೆಯಬಹುದಾದ ಶಕ್ತಿಶಾಲಿ ಶಕ್ತಿಯಿದೆ. ಈ ಶಕ್ತಿಯು ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಸಾಕ್ಷಿಯಾಗಿದೆ ಹಾಗೂ ನಾವು ಅದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಿದ್ರೆ, ನಮಗೆ ಮಾರ್ಗದರ್ಶನ ನೀಡಲು ಯಾವಾಗಲೂ ಇರುತ್ತದೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ. ಇವರು ಕಾದಂಬರಿಗಳು, ತಾಂತ್ರಿಕ ಪುಸ್ತಕಗಳು, ಪ್ರವಾಸ ಕಥನಗಳು, ಸಣ್ಣ ಕಥೆಗಳ ಸಂಗ್ರಹಗಳು ಮತ್ತು ಕಾಲ್ಪನಿಕವಲ್ಲದ ತುಣುಕುಗಳು ಹಾಗೂ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿದ್ದಾರೆ.ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

  • ರಾಷ್ಟ್ರಪತಿಗಳಿಗೆ ಶ್ರೀ ರಾಮಾಯಣ ದರ್ಶನಂ, ಪರ್ವ ಕಾದಂಬರಿ ನೀಡಿದ ಸುನಿಲ್ ಕುಮಾರ್

    ರಾಷ್ಟ್ರಪತಿಗಳಿಗೆ ಶ್ರೀ ರಾಮಾಯಣ ದರ್ಶನಂ, ಪರ್ವ ಕಾದಂಬರಿ ನೀಡಿದ ಸುನಿಲ್ ಕುಮಾರ್

    ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

    ರಾಜಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುನಿಲ್ ಕುಮಾರ್ ಅವರು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಇಂಗ್ಲಿಷ್ ಅನುವಾದಿತ ಪುಸ್ತಕ ಹಾಗೂ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯನ್ನು ರಾಷ್ಟ್ರಪತಿಯವರಿಗೆ ಕೊಡುಗೆಯಾಗಿ ನೀಡಿದರು. ಇದನ್ನೂ ಓದಿ: ವಿಕ್ರಮಾದಿತ್ಯ ನೌಕೆಯಲ್ಲಿ ನಾವ್‌-ಇಕ್ಯಾಶ್‌ ಕಾರ್ಡ್‌ ಸೇವೆಗೆ ಚಾಲನೆ

    ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಈ ವೇಳೆ ಪರಸ್ಪರ ಕುಶಲೋಪರಿ ಮಾತನಾಡಿ, ಸಚಿವರು ವಿಶೇಷ ಉಡುಗೊರೆಗಳನ್ನು ರಾಷ್ಟ್ರಪತಿಗಳಿಗೆ ನೀಡಿದ್ದಾರೆ. ರಾಷ್ಟ್ರಪತಿ ಕೋವಿಂದ್ ಅವರು ಸಹ ಅಷ್ಟೇ ಸಂತೋಷದಿಂದ ಸ್ವೀಕರಿಸಿದ್ದಾರೆ.

  • ಸಂವಿಧಾನ ಓದು ಇಂದು ಮನೆಮಾತಾಗಿದೆ: ನಾಗಮೋಹನ್ ದಾಸ್

    ಸಂವಿಧಾನ ಓದು ಇಂದು ಮನೆಮಾತಾಗಿದೆ: ನಾಗಮೋಹನ್ ದಾಸ್

    ಬೆಂಗಳೂರು: ಮೂರು ವರ್ಷಗಳ ಹಿಂದೆ ಆರಂಭಗೊಂಡ ಸಂವಿಧಾನ ಓದು ಅಭಿಯಾನ ಆಂದೋಲನ ಸ್ವರೂಪ ಪಡೆದು ಇಂದು ರಾಜ್ಯದ ಮನೆಮಾತಾಗಿದೆ ಎಂದು ಸಂವಿಧಾನ ಓದು ಪುಸ್ತಕದ ಕರ್ತೃ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದರು.

    ಸಮುದಾಯ-ಸಹಯಾನ-ಚಿಂತನ ಸಹಯೋಗದಲ್ಲಿ ಆಯೋಜಿಸಲಾದ ಸಂವಿಧಾನ ಓದು ಹಿನ್ನೋಟ ಮತ್ತು ಮುನ್ನೋಟ ಮೂರು ವರ್ಷದ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರಂಭದಲ್ಲಿ ಕೇವಲ 2,000 ಪ್ರತಿಗಳ ಮಾರಾಟದೊಂದಿಗೆ ಆರಂಭಗೊಂಡ ಈ ಅಭಿಯಾನ ಇಂದು 50 ಬಾರಿ ಮುದ್ರಣದೊಂದಿಗೆ 2 ಲಕ್ಷ ಪ್ರತಿಗಳ ದಾಖಲೆ ಮಾರಾಟವಾಗಿದೆ. ಅಲ್ಲದೆ ಹಿಂದಿ ಇಂಗ್ಲಿಷ್ ಭಾಷೆಗೂ ತರ್ಜುಮೆಗೊಂಡಿದೆ, ಇದೀಗ ಮಲೆಯಾಳಿಗೂ ಅನುವಾದಗೊಂಡಿದೆ. ಇದಕ್ಕೆ ರಾಜ್ಯ ಜನಪರ ಮನಸ್ಸುಗಳು ನೀಡಿದ ಸಹಾಯ ಕಾರಣವಾಗಿದೆ. ಹೀಗಾಗಿ ಈ ಆಂದೋಲನದಲ್ಲಿ ನಾನೊಬ್ಬ ಸಹಯಾನಿ ಮಾತ್ರ ಎಂದು ಅವರು ಹೇಳಿದರು. ಇದನ್ನೂ ಓದಿ: ಅಮೆರಿಕದಲ್ಲಿ ಓದಬೇಕೇ? – ವಿಶ್ವವಿದ್ಯಾಲಯಗಳ ಜೊತೆ ಮಾತನಾಡಿ, ಅನುಮಾನ ಬಗೆಹರಿಸಿಕೊಳ್ಳಿ

    ಚಿಂತನದ ಪರವಾಗಿ ಡಾ.ಎಂ.ಜಿ.ಹೆಗಡೆ ಮಾತನಾಡಿ, ಈ ಸಂವಿಧಾನ ಓದು ಒಂದು ಆಂದೋಲನ ಸ್ವರೂಪ ತಾಳಲು ಕಾರಣವಾಗಿದ್ದು ಡಾ.ವಿಠ್ಠಲ ಭಂಡಾರಿ ಅವರ ಶ್ರಮ ಕಾರಣ. ಸ್ವತಃ ಒಬ್ಬ ಅಧ್ಯಾಪಕನಾಗಿ, ಸಾಂಸ್ಕೃತಿಕ ಚಳವಳಿಯ ಒಬ್ಬ ಕಾರ್ಯಕರ್ತರಾಗಿ ಅವರು ಮಾಡಿದ ಅಪರಿಮಿತ ಶ್ರಮದಿಂದಾಗಿ ಈ ಸಂವಿಧಾನ ಓದು ರಾಜ್ಯದ ಎಲ್ಲ ವಿಭಾಗಗಳ ಜನರನ್ನು ತಲುಪುವಲ್ಲಿ ಸಫಲವಾಗಿದೆ ಎಂದರು.

    ಅಭಿಯಾನದಲ್ಲಿ ಪಾಲ್ಗೊಂಡ ಹಾಸನದ ಡಾ.ಭಾರತಿ ದೇವಿ ಮಾತನಾಡಿ, ಈ ಓದು ಆರಂಭಗೊಂಡಾಗ ಅದ್ಭುತ ಮತ್ತು ರೋಮಾಂಚನಗೊಳಿಸಿತ್ತು ಇವತ್ತಿನ ಸಂಕಟದ ಸಮಯದಲ್ಲಿ ನನ್ನ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಲು ಒಂದು ಸಾಧನವಾಯಿತು ಎಂದರು.

    ದಾವಣಗೆರೆಯ ವಕೀಲ ಅನೀಶ್ ಪಾಷಾ ಮಾತನಾಡಿ, ಸಂವಿಧಾನ ಓದು ಪುಸ್ತಕ ಕಾನೂನಾತ್ಮಕ ದಾಟಿಯನ್ನು ಮೀರಿ ಸರಳ ಬರವಣಿಗೆಯನ್ನು ಅಳವಡಿಸಿಕೊಂಡಿದೆ. ಹೀಗಾಗಿ ಪ್ರತಿಯೊಬ್ಬರು ಓದಿ ಅರ್ಥ ಮಾಡಿಕೊಡಲು ಕಾರಣವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಡಾ.ವರಮಹಾಲಕ್ಮೀ ಸಂವಿಧಾನ ಓದನ್ನು ಹರಿಕಥೆ ಹಾಗೂ ಜನಪದ ಪ್ರಕಾರವಾಗಿ ಅಳವಡಿಸಿಕೊಂಡು ಪ್ರಸ್ತುತಪಡಿಸಿದರು. ನಾಡಿನಾದ್ಯಂತ ಈ ಆಂದೋಲನಲ್ಲಿ ಸಹಯಾನಿಗಳಾಗಿದ್ದ ನೂರಾರು ಕಾರ್ಯಕರ್ತರು ಆನ್‍ಲೈನ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಭಿಯಾನದಲ್ಲಿ ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ, ನರಸಿಂಹಮೂರ್ತಿ ಜಾಗೃತಿ ಗೀತೆಗಳನ್ನು ಹಾಡಿದರು. ಕೆ.ಎಸ್.ವಿಮಲ, ಸಮುದಾಯದ ಅಚ್ಯುತ್, ಸಹಯಾನದ ಯನುನಾ ಗಾಂವ್ಕರ್ ಮೊದಲಾದವರು ಉಪಸ್ಥಿತರಿದ್ದರು.

  • ಕೋತಿಯ ಮುಖವಾಡ ಧರಿಸಿದ  ರಷ್ಯನ್ ಪ್ರಜೆಯಿಂದ ಉಡುಪಿಯಲ್ಲಿ ಕೊರೊನಾ ಜಾಗೃತಿ

    ಕೋತಿಯ ಮುಖವಾಡ ಧರಿಸಿದ ರಷ್ಯನ್ ಪ್ರಜೆಯಿಂದ ಉಡುಪಿಯಲ್ಲಿ ಕೊರೊನಾ ಜಾಗೃತಿ

    ಉಡುಪಿ: ಕೊರೊನಾ ಜನತಾ ಕರ್ಫ್ಯೂ ಗೆ ಉಡುಪಿ ಸ್ತಬ್ಧವಾಗಿದೆ. ಈ ನಡುವೆ ರಷ್ಯನ್ ಪ್ರಜೆಯೊಬ್ಬರು ಭಗವದ್ಗೀತೆ ರಾಮಾಯಣ ಪುಸ್ತಕಗಳನ್ನು ರಥಬೀದಿಯಲ್ಲಿ ವಿಭಿನ್ನ ರೀತಿಯಲ್ಲಿ ಮಾರಾಟ ಮಾಡಿ ಕೊರೊನಾ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

    ಕೃಷ್ಣಮಠ, ಸುತ್ತಲು ಅಷ್ಟಮಠಗಳ ರಥಬೀದಿಯಲ್ಲಿ ಸೈಕಲ್‍ನಲ್ಲಿ ಓಡಾಡುತ್ತಾ ಕೋತಿಯ ಮುಖವಾಡವನ್ನು ಮಾಸ್ಕ್ ಮಾಡಿಕೊಂಡು ಧರಿಸಿ ಓಡಾಡಿದ್ದಾರೆ. ತಲೆಗೆ ಬೋಳು ಮಾಡಿಕೊಂಡಿರುವ ಇವರು ಲೆದರ್ ಮುಖವಾಡ ಹಾಕಿಕೊಂಡು ಸೈಕಲ್ ರೈಡ್ ಮಾಡಿದ್ದಾರೆ. ರಥಬೀದಿಯಲ್ಲಿರುವ ಜನರಿಗೆ, ವ್ಯಾಪಾರಿಗಳಿಗೆ ಪುಸ್ತಕ ಮಾರಾಟ ಮಾಡುವ ಜೊತೆ ಕೊರೊನಾ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ.

    ಇಸ್ಕಾನ್ ಸಂಸ್ಥೆಯ ಸದಸ್ಯರಾಗಿರುವ ಸತ್ಯ ಪ್ರಕಾಶ್ 20 ವರ್ಷಗಳಿಂದ ಉಡುಪಿಯಲ್ಲಿ ಧರ್ಮಜಾಗೃತಿಯ ಗ್ರಂಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂಗ್ಲಿಷ್ ಹಿಂದಿಯ ಜೊತೆ ಸ್ವಲ್ಪ ಕನ್ನಡದಲ್ಲೂ ಮಾತನಾಡುತ್ತಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸತ್ಯಪ್ರಕಾಶ್, ಮಹಾಮಾರಿ ಕೊರೊನ ಇಡೀ ವಿಶ್ವಕ್ಕೆ ಆವರಿಸಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತತೆ ಆಗಿದೆ. ರಥಬೀದಿಗೆ ಬರುವ ಜನರಿಗೆ ಧಾರ್ಮಿಕ ಪುಸ್ತಕಗಳನ್ನು ಕೊಡುವ ಜೊತೆಗೆ ಮಾಸ್ಕ್ ಧರಿಸಿ ಎಂಬ ಜನಜಾಗೃತಿ ಮೂಡಿಸುತ್ತಿದ್ದೇನೆ. ಹನುಮಂತ ದೇವರ ರೂಪವನ್ನು ಹೋಲುವ ಮಾಸ್ಕ್ ಧರಿಸಿದ್ದೇನೆ ಎಂದು ಹೇಳಿದ್ದಾರೆ.

  • ವಧುದಕ್ಷಿಣೆ ಬದಲಾಗಿ 46,000 ರೂ. ಮೌಲ್ಯದ ಪುಸ್ತಕಕ್ಕೆ ಬೇಡಿಕೆ ಇಟ್ಟ ವಧು!

    ವಧುದಕ್ಷಿಣೆ ಬದಲಾಗಿ 46,000 ರೂ. ಮೌಲ್ಯದ ಪುಸ್ತಕಕ್ಕೆ ಬೇಡಿಕೆ ಇಟ್ಟ ವಧು!

    ಇಸ್ಲಾಮಾಬಾದ್: ಪಾಕಿಸ್ತಾನದ ಮದುಮಗಳು ವಧುದಕ್ಷಿಣೆ ರೂಪದಲ್ಲಿ ನೀಡುವ ಹಣ ಹಾಗೂ ಆಭರಣಗಳ ಬದಲಾಗಿ ಪಿಕೆಆರ್ 1,00,000(46,600 ರೂ.) ಮೌಲ್ಯದ ಪುಸ್ತಕ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಪಾಕಿಸ್ತಾನದ ಮರ್ದಾನ್ ನಗರದ ನೈಲಾ ಶಮಾಲ್ ಎಂಬವರು ತಮ್ಮ ವಿವಾಹದಲ್ಲಿ ಈ ರೀತಿಯ ಬೇಡಿಕೆ ಇಡಲು ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೈಲಾ, ಹಣ ಹಾಗೂ ಆಭರಣದ ಬದಲಾಗಿ ಪುಸ್ತಕ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ವೀಡಿಯೋದಲ್ಲಿ ನೈಲಾ ಮದುಮಗಳ ವಸ್ತ್ರ ಧರಿಸಿರುವುದನ್ನು ಕಾಣಬಹುದಾಗಿದೆ. ನಾನು ಹಕ್ ಮೆಹರ್ ಪಿಕೆಆರ್ 1,00,000 ಮೌಲ್ಯದ ಪುಸ್ತಕಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದೇನೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ನಾವು ದುಬಾರಿ ಉಡುಗೊರೆಗಳನ್ನು ಖರೀದಿಸಲು ಆಗುತ್ತಿಲ್ಲ. ಮತ್ತೊಂದು ನಮ್ಮ ಸಮಾಜದಲ್ಲಿರುವ ತಪ್ಪಾದ ಪದ್ಧತಿಗಳನ್ನು ತೊಡೆದು ಹಾಕುವುದಾಗಿದೆ ಎಂದು ಹೇಳಿದ್ದಾರೆ.

    ನಾನು ಓರ್ವ ಬರಹಗಾತಿಯಾಗಿದ್ದು ಪುಸ್ತಕಗಳಿಗೆ ಬೆಲೆ ನೀಡಲಿಲ್ಲ ಎಂದರೆ ಇನ್ನೂ ಸಾಮಾನ್ಯ ಜನರು ಹೇಗೆ ಪುಸ್ತಕಗಳಿಗೆ ಬೆಲೆ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಈ ರೀತಿಯಾದಂತಹ ಬೇಡಿಕೆ ಇಡಲು ಮುಖ್ಯ ಕಾರಣ, ನಾನು ಹಕ್ ಮೆಹರ್ ನಲ್ಲಿ ಪುಸ್ತಕಗಳಿಗೆ ಬೆಲೆ ಕೊಟ್ಟು, ಇತರರಿಗೂ ಸಲಹೆ ನೀಡುವುದಾಗಿದೆ ಎಂದು ನುಡಿದರು.

    ಸದ್ಯ ಈ ವೀಡಿಯೋವನ್ನು ನೈಲಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವಧು ಮತ್ತು ವರ ಇಬ್ಬರೂ ಬರಹಗಾರರು ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

  • ಸರ್ಕಾರಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ- ಬಿಸಿಯೂಟದ ದವಸ ಧಾನ್ಯ ಭಸ್ಮ

    ಸರ್ಕಾರಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ- ಬಿಸಿಯೂಟದ ದವಸ ಧಾನ್ಯ ಭಸ್ಮ

    ರಾಯಚೂರು: ಸರ್ಕಾರಿ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪುಸ್ತಕ, ಬಿಸಿಯೂಟದ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿರುವ ಘಟನೆ ದೇವದುರ್ಗದ ಜಾಲಹಳ್ಳಿಯ ಶಾಲೆಯಲ್ಲಿ ನಡೆದಿದೆ.

    ಜಾಲಹಳ್ಳಿಯ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಬಿಸಿಯೂಟದ ದವಸ ಧಾನ್ಯ, ಬೈಸಿಕಲ್, ಪುಸ್ತಕಗಳು ಸೇರಿ ವಿವಿಧ ವಸ್ತುಗಳು ಬೆಂಕಿಗಾಹುತಿಯಾಗಿವೆ. 35 ಚೀಲ ಅಕ್ಕಿ, 10 ಬೈಸಿಕಲ್ ಹಾಗೂ ಕೋಣೆಯಲ್ಲಿದ್ದ ನೋಟ್ ಪುಸ್ತಕ ಸುಟ್ಟುಹೋಗಿವೆ.

    ಅಗ್ನಿಶಾಮಕದಳ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿನಂದಿಸಿದ್ದಾರೆ. ಬೆಳಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಶಾಲೆಯಿಂದ ಹೊಗೆ ಬರುತ್ತಿರುವುದನ್ನ ಗಮನಿಸಿ ಮುಖ್ಯೋಪಾಧ್ಯಾಯರು ಹಾಗೂ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಈ ಅವಘಡ ಕುರಿತಾಗಿ ಮುಖ್ಯೋಪಾಧ್ಯಾಯ ಶಾಕೀಲ್ ಸಾಬ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ

    ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ

    ಚಾಮರಾಜನಗರ: ಆಸ್ತಿಯಿದೆ ಆದ್ರೆ ಸಾಲ ತೀರುತ್ತಿಲ್ಲ, ಉದ್ಯೋಗವಿದೆ ಆದರೆ ಅಲ್ಪ ಸಂಬಳದಿಂದ ಜೀವನ ನಿರ್ವಹಣೆ ಕಷ್ಟವಾಗ್ತಿದೆ. ಈ ವೇಳೆ ಆ ಕುಟುಂಬದ ಪರ ನಿಂತಿದ್ದು ಒಬ್ಬ ಮಹಿಳೆ. ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿ ಮಾಡಿ ಆದಾಯ ಗಳಿಸ್ತಿದ್ದಾರೆ. ಆ ಮಹಿಳೆಯ ದಿಟ್ಟ ಹೆಜ್ಜೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಪುಸ್ತಕ ಓದಿ, ಯೂಟ್ಯೂಬ್ ನೋಡಿ ಕೃಷಿಯಲ್ಲಿ ಯಶಕಂಡ ಮಹಿಳೆಯ ಯಶೋಗಾಥೆ ಇಲ್ಲಿದೆ.

    ಹೌದು. ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ಆ ಕುಟುಂಬಕ್ಕೆ 5 ಎಕರೆ ಜಮೀನಿತ್ತು. ಆದರು ಕೂಡ ಸಾಲದ ಸುಳಿಯಲ್ಲಿ ಸಿಲುಕಿದ್ದ ಹಿನ್ನೆಲೆ ಕೃಷಿ ಮಾಡಲೂ ಹಿಂದೇಟು ಹಾಕಿದ್ದರು.ಪ್ರಭಾಮಣಿ ಎಂಬ ಮಹಿಳೆ ಖಾಸಗಿ ಸಂಸ್ಥೆಯಲ್ಲಿ 6 ಸಾವಿರ ರೂಪಾಯಿಗೆ ಕೆಲಸ ಮಾಡ್ತಿದ್ದರು.ಆದರೂ ಕೂಡ ಸಂಸಾರದ ನಿರ್ವಹಣೆ ಕಷ್ಟವಾಗಿತ್ತು. ಈ ವೇಳೆ ಪ್ರಭಾಮಣಿ ಸಹೋದರ ಅಕ್ಕನ ಬಳಿ ಬಂದು ನಿಮಗೆ 5 ಎಕರೆ ಜಮೀನಿದೆ ಯಾಕೆ ಆಧುನಿಕ ಕೃಷಿ ಮಾಡಬಾರದು ಅಂತ ಕೃಷಿ ಸಂಬಂಧಿತ ಪುಸ್ತಕ ನೀಡಿದ್ರು. ನಂತರ ಆ ಪುಸ್ತಕ ಪ್ರಭಾಮಣಿ ಕುಟುಂಬವನ್ನು ಸಾಲದ ಸುಳಿಯಿಂದ ಹೊರ ತಂದಿದೆ.

    ವಿವಿಧ ಕೃಷಿ ಸಂಬಂಧಿತ ಪುಸ್ತಕ ಓದಿ, ಯೂಟ್ಯೂಬ್ ನೋಡಿ ಬಹು ಬೆಳೆ ಪದ್ಧತಿ ಅನುಸರಿಸಿ ಕೃಷಿ ಮಾಡಲಾರಂಭಿಸಿದ ಪ್ರಭಾಮಣಿ ಮತ್ತೆ ಹಿಂದಿರುಗಿ ನೋಡಿಲ್ಲ. ಪುಸ್ತಕ ಓದಿದ್ರೆ ಎಲ್ಲಾ ಪುಸ್ತಕದ ಬದನೆಕಾಯಿ ಅಂತಾರೆ. ಆದರೆ ಈ ಪುಸ್ತಕ ಪ್ರಭಾಮಣಿ ಲೈಫ್ ಅನ್ನೇ ಬದಲಾಯಿಸಿದೆ. ಇದೀಗ ಪ್ರಭಾಮಣಿ ಕೃಷಿ ಮಾಡಿ ದಿನಕ್ಕೆ ಒಂದೂವರೆ ಸಾವಿರ ಸಂಪಾದಿಸ್ತಿದ್ದಾರೆ. ಕುಟುಂಬವನ್ನು ಸಾಲದ ಸುಳಿಯಿಂದ ಹೊರತಂದು ಲಕ್ಷಾಂತರ ರೂ. ಹಣ ಗಳಿಸ್ತಿದ್ದಾರೆ.

    ಪ್ರಭಾಮಣಿ ಕುಟುಂಬ ಜಮೀನಿನಲ್ಲಿ ಕ್ಯಾರೇಟ್, ಬೀನ್ಸ್, ಈರುಳ್ಳಿ, ಬದನೆ, ಆಗಸೆ, ಕೊತ್ತಂಬರಿ, ಪುದೀನಾ, ಪಾಲಾರ್, ಕಬ್ಬು, ಬಾಳೆ, ಅರಿಶಿನ ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದಾರೆ. ಅಲ್ಲದೇ ಹೈನುಗಾರಿಕೆ ಕೂಡ ಮಾಡ್ತಿದ್ದು, ಪ್ರತಿನಿತ್ಯ 1500 ರೂ. ಆದಾಯ ಗಳಿಸ್ತಿದ್ದಾರೆ. ಪ್ರಭಾಮಣಿಗೆ ಕುಟುಂಬದ ಎಂಟು ಮಂದಿಯೂ ಕೂಡ ಸಾಥ್ ಕೊಡ್ತಿದ್ದು, ಎಲ್ಲರೂ ಒಟ್ಟಿಗೆ ಜಮೀನಿನಲ್ಲಿ ದುಡಿಯುತ್ತಿದ್ದಾರೆ. ಆದ್ರಿಂದ ಹೊರಗಿನ ಕೂಲಿ ಆಳುಗಳಿಗೆ ಪರಿ ತಪಿಸುವ ಅವಶ್ಯಕತೆ ಬಂದಿಲ್ಲ ಎಮದು ಅವರು ಹೇಳುತ್ತಾರೆ.

    ಒಟ್ಟಿನಲ್ಲಿ ಪುಸ್ತಕ ಓದಿದ್ರೆ ಪುಸ್ತಕದ ಬದನೆಕಾಯಿ ಕೆಲಸಕ್ಕೆ ಬರೊಲ್ಲ ಅನ್ನೋರಿಗೆ ಪ್ರಭಾಮಣಿ ಮಾದರಿಯಾಗಿದ್ದಾರೆ. ಅಲ್ಲದೆ ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿ ಮಾಡೋ ಮೂಲಕ ಯಶಸ್ಸು ಗಳಿಸಿದ್ದಾರೆ.

  • ಹದಿಮೂರರ ಪೋರಿ ಬರೆದ ಕೃತಿ ಲೋಕಾರ್ಪಣೆಗೊಳಿಸಿದ ಸುರೇಶ್ ಕುಮಾರ್

    ಹದಿಮೂರರ ಪೋರಿ ಬರೆದ ಕೃತಿ ಲೋಕಾರ್ಪಣೆಗೊಳಿಸಿದ ಸುರೇಶ್ ಕುಮಾರ್

    ಬೆಂಗಳೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಹದಿಮೂರರ ಪುಟ್ಟ ಪೋರಿಯೊಬ್ಬಳು ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡಿದ್ದಾಳೆ.

    ನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಮನಾ ಬರೆದಿರುವ ‘ದಿ ಎಕೋಸ್ ಆಫ್ ಸೋಲ್ ಪುಲ್ ಪೋಯಮ್ಸ್’ ಎಂಬ ಕವನ ಸಂಕಲನವನ್ನು ಬರೆದಿದ್ದಾಳೆ. ಇಂದು ನಗರದ ನಯನ ಸಭಾಂಗಣದಲ್ಲಿ ಬಿಡುಗಡೆಗೊಂಡಿತ್ತು. ಈ ಕವನ ಸಂಕಲನವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಲೋಕಾರ್ಪಣೆಗೊಳಿಸಿದರು.

    ಸುಮಾರು 9 ತಿಂಗಳ ಕೋವಿಡ್ ಸಂದರ್ಭದಲ್ಲಿ ಈ ಕೃತಿ ರಚನೆಯಾಗಿದೆ. ಏಳನೇ ತರಗತಿ ಓದುತ್ತಿರುವ ಅಮನ ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾಳೆ. ಈ ಕೃತಿಯಲ್ಲಿರೋ ಹಲವು ಪದ್ಯಗಳು ಆಂಗ್ಲ, ಕನ್ನಡ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

    ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಬಹಳ ಮನ ಮುಟ್ಟುವ ರೀತಿಯಲ್ಲಿ, ಬಹಳ ಸಕಾರಾತ್ಮಕ ಚಿಂತನೆಗಳಿಂದ ಕೂಡಿರುವ ಈ ಕವನ ಸಂಗ್ರಹ ನಕಾರಾತ್ಮಕ ಅವಧಿ ಎಂದೇ ಪ್ರಸಿದ್ಧವಾಗಿರುವ ಈ ಸಮಯಕ್ಕೆ ತಕ್ಕ ಉತ್ತರ ಎಂದು ಬಣ್ಣಿಸಿದರು. ಇನ್ನು ಈ ಕವನ ಸಂಗ್ರಹವನ್ನು ಅಂತರಂಗದ ತರಂಗ ಎಂಬ ಶೀರ್ಷಿಕೆಯಡಿ ಅಮನಾ ಅವರ ತಾಯಿ ಡಾ.ಲತಾ ಕನ್ನಡಕ್ಕೆ ಅನುವಾದ ಮಾಡಿರೋದು ಮತ್ತೊಂದು ವಿಶೇಷ ಎಂದು ಸಂತಸ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಸಾಹಿತಿ ದೊಡ್ಡರಂಗೇಗೌಡ, ಪತ್ರಕರ್ತ ಜೋಗಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  • ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಾಕೋಬ್ ಲೋಬೋ ಜೀವನ, ಸಾಧನೆಯ ಪುಸ್ತಕ ಬಿಡುಗಡೆ

    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಾಕೋಬ್ ಲೋಬೋ ಜೀವನ, ಸಾಧನೆಯ ಪುಸ್ತಕ ಬಿಡುಗಡೆ

    ಮಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿ ಮತ್ತು ಬರಹಗಾರರಾಗಿ ಸೇವೆ ಸಲ್ಲಿಸಿರುವತಂಹ ಸಿ.ಹೆಚ್ ಜಾಕೋಬ್ ಲೋಬೋರವರ ಜೀವನ ಹಾಗೂ ಸಾಧನೆಯನ್ನು ಹೇಳುವಂತಹ “ಅನುಭೂತಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು.

    ಚಲನಚಿತ್ರ ರಂಗದಲ್ಲಿ ಲೇಖಕರಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವಂತಹ ಲೇಖಕ ಶ್ರೀನಿವಾಸ ಕೌಶಿಕ್ ಅವರು ರಚಿಸಿರುವ, ಬೆಂಗಳೂರಿನ ಅನಂತ ಪ್ರಕಾಶನದ ಉಮೇಶ್ ನಾಗಮಂಗಲ ಅವರು ಪ್ರಕಟಿಸಿರುವ “ಅನೂಭೂತಿ” ಪುಸ್ತಕವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತ್‍ನ ಜಿಲ್ಲಾಧ್ಯಕ್ಷ ಎಸ್ .ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

    ಸ್ವಾತಂತ್ರ್ಯ ಪೂರ್ವದಲ್ಲೇ ಜನಿಸಿರುವ ಜಾಕೋಬ್ ಲೋಬೋ ಅವರು ತಾನೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೂ ತನ್ನ ಕಾರ್ಯಕ್ಷೇತ್ರವನ್ನು ಮೀರಿ ಬಡವರ ಸೇವೆ ಮಾಡಿದಂತವರು. ಅಂದಿನ ಕಾಲದ ಹಿಂದುಳಿದ ಬಡಕುಟುಂಬಗಳಿಗೆ ಅವರು ಮಾಡಿರುವ ಸೇವೆ ನೆನಪಿನಾಳದಲ್ಲಿ ಉಳಿಯುವಂತದ್ದು, ಇಂತಹ ಮಹಾನ್ ಸಾಧಕನ ಜೀವನ ಹಾಗೂ ಸಾಧನೆಯನ್ನು ತಿಳಿಸುವಂತಹ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿದ ಪ್ರದೀಪ್ ಕುಮಾರ್ ಕಲ್ಕೂರ ಅವರು ಜಾಕೋಬ್ ಲೋಬೋ ಅವರು ನಡೆದು ಬಂದ ದಾರಿಯನ್ನು ನೆನಪಿಸಿದರು.

    ಈಗಾಗಲೇ ಕೋವಿಡ್ 19ರ ಈ ಸಂದರ್ಭದಲ್ಲಿ “ಅನುಭೂತಿ” ಪುಸ್ತಕವನ್ನು ಬೆಂಗಳೂರಿನಲ್ಲಿ ಜಾಕೋಬ್ ಲೋಬೋರಿಗೆ 90 ವರ್ಷ ತುಂಬಿದ ಸಂದರ್ಭದಲ್ಲಿ ಜೂನ್, 20ರಂದು ಅವರ ಸ್ವಗ್ರಹದಲ್ಲಿಯೇ ಹಿರಿಯರ ಹಾಗೂ ಸ್ನೇಹಿತರನ್ನು ಒಳಗೊಂಡ ಒಂದು ಪುಟ್ಟ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ ಜಾಕೋಬ್ ಲೋಬೋರ ಕಾರ್ಯ ಕ್ಷೇತ್ರವಾಗಿದ್ದರಿಂದ ಹಾಗೂ ಜಾಕೋಬ್ ಲೋಬೋ ಅವರು ಹಿಂದುಳಿದ ವರ್ಗಕ್ಕೆ ಅನನ್ಯ ಸೇವೆ ಸಲ್ಲಿಸಿರುವುದರಿಂದ ಅವರ ಸೇವಾ ಅವಧಿಯಲ್ಲಿ ಹೆಚ್ಚಿನ ಭಾಗ ಇಲ್ಲಿಯೇ ಕಳೆದಿದ್ದರಿಂದ ಇಲ್ಲಿಯೇ ಒಂದು ಪರಿಚಯಾತ್ಮಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿಲಾಯಿತು ಎಂದು ಈ ಸಂದರ್ಭದಲ್ಲಿ ಲೇಖಕ ಶ್ರೀನಿವಾಸ ಕೌಶಿಕ್ ಅವರು ತಿಳಿಸಿದರು.

    ಕಾರ್ಯಕ್ರಮದಲ್ಲಿ ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಆರ್ ಶ್ರೀನಿವಾಸ್, ಶ್ರೀಮತಿ ಹೆಲನ್ ಲೋಬೋ ಮುಂತಾದವರು ಉಪಸ್ಥಿತರಿದ್ದರು.

  • ಬುಕ್ ಹಿಡಿದು ಕುಳಿತ ಐರಾ – ನಟಿ ಅನು ಪ್ರಭಾಕರ್ ಮಗಳಿಗೆ ರಾಧಿಕಾ ಧನ್ಯವಾದ

    ಬುಕ್ ಹಿಡಿದು ಕುಳಿತ ಐರಾ – ನಟಿ ಅನು ಪ್ರಭಾಕರ್ ಮಗಳಿಗೆ ರಾಧಿಕಾ ಧನ್ಯವಾದ

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಮಕ್ಕಳ ಫೋಟೋವನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರಾಧಿಕಾ ತಮ್ಮ ಮಗಳು ಐರಾಳ ಫೋಟೋವನ್ನು ಹಂಚಿಕೊಂಡಿದ್ದಾರೆ.

    ನಟಿ ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಐರಾ ಬುಕ್ ಹಿಡಿದು ಕುಳಿತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗೆ, “ನಾನು ಪರೀಕ್ಷೆಗಳ ಸಮಯದಲ್ಲಿಯೂ ಈ ರೀತಿ ಏಕಾಗ್ರತೆಯಿಂದ ಓದಿರಲಿಲ್ಲ. ಫೋನ್ ಅಥವಾ ದೂರದರ್ಶನ ಬದಲಿಗೆ ಅವಳಿಗೆ ನಾನು ಪುಸ್ತಕಗಳನ್ನು ನೀಡಲು ಬಯಸುತ್ತೇನೆ. ಅವಳಿಗೆ ಮನರಂಜನೆಗಾಗಿ ಪುಸ್ತಕಗಳನ್ನು ನೀಡುತ್ತೇನೆ. ಆಗ ಐರಾ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾಳೆ. ಸಹಜವಾಗಿ ಈಗ ಅವಳು ಫೋಟೋಗಳನ್ನು ನೋಡುತ್ತಿದ್ದಾಳೆ” ಎಂದು ಬರೆದಿದ್ದಾರೆ.

    ಅಲ್ಲದೇ ಈ ಸುಂದರವಾದ ಪುಸ್ತಕಗಳಿಗಾಗಿ ಐರಾಳ ಗೆಳತಿ, ಡಾರ್ಲಿಂಗ್ ನಂದನ ಪ್ರಭಾಕರ್ ಮುಖರ್ಜಿ, ನಟಿ ಅನು ಪ್ರಭಾಕರ್ ಮತ್ತು ಪತಿ ರಘು ಮುಖರ್ಜಿಗೆ ಧನ್ಯವಾದ ತಿಳಿಸಿದ್ದಾರೆ. ಯಾಕೆಂದರೆ ಐರಾಳ ಹುಟ್ಟುಹಬ್ಬದ ದಿನ ಅನು ಪ್ರಭಾಕರ್ ಮತ್ತು ಪತಿ ರಘು ಮುಖರ್ಜಿ ಈ ಪುಸ್ತಕಗಳನ್ನು ಐರಾಗೆ ಉಡುಗೊರೆಯಾಗಿ ನೀಡಿದ್ದರು. ಹೀಗಾಗಿ ಅವರಿಗೆ ರಾಧಿಕಾ ಧನ್ಯವಾದ ತಿಳಿಸಿದ್ದಾರೆ.

    https://www.instagram.com/p/CC8u6T7nDDw/?igshid=1gf19nxcqv023

    ಕೆಲವು ದಿನಗಳ ಹಿಂದೆ ನಟ ರಘು ಮುಖರ್ಜಿ ಕೂಡ ತಮ್ಮ ಮಗಳು ಬುಕ್ ಹಿಡಿದು ಕುಳಿತಿದ್ದ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.

    https://www.instagram.com/p/CDLUWjDA2XR/?igshid=6ni5xezjj11x

    ಇತ್ತೀಚೆಗಷ್ಟೆ, “ನಾನು ಸಮುದ್ರವನ್ನು ಮಿಸ್ ಮಾಡುತ್ತಿದ್ದೇನೆ. ನನ್ನ ಮಕ್ಕಳನ್ನು ಪಾರ್ಕಿಗೆ ಕರೆದುಕೊಂಡು ಹೋಗುವುದನ್ನು ಮಿಸ್ ಮಾಡುತ್ತಿದ್ದೇನೆ. ಈ ದಿನಗಳಲ್ಲಿ ಸ್ನೇಹಿತರನ್ನು ಭೇಟಿಯಾಗುವುದನ್ನು ಮಿಸ್ ಮಾಡುತ್ತಿದ್ದೇನೆ. ಇನ್ನೂ ಹಲವಾರು ವಿಚಾರಗಳನ್ನು ಮಿಸ್ ಮಾಡುತ್ತಿದ್ದೇನೆ. ಆದರೆ ನಾವು ಸೇಫ್ ಆಗಿ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕೊರೊನಾ ನಿವಾರಣೆಯಾಗವವರೆಗೂ ನಾವು ಈ ಯಾವುದನ್ನು ಮಾಡಲು ಆಗುವುದಿಲ್ಲ. ನೀವು ಏನನ್ನೂ ಮಿಸ್ ಮಾಡುತ್ತಿದ್ದೀರಾ? ಎಂದು ಕೆಲವೊಂದು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿ ಬರೆದುಕೊಂಡಿದ್ದರು.