Tag: Bodybuilder

  • ಹಾಸನ | ಶ್ವಾಸಕೋಶ ಸೋಂಕಿನಿಂದ 30 ವರ್ಷದ ಬಾಡಿಬಿಲ್ಡರ್ ಸಾವು

    ಹಾಸನ | ಶ್ವಾಸಕೋಶ ಸೋಂಕಿನಿಂದ 30 ವರ್ಷದ ಬಾಡಿಬಿಲ್ಡರ್ ಸಾವು

    – 110 ಕೆಜಿ ತೂಕವಿದ್ದ ಜಿಮ್ ಸೋಮ‌

    ಹಾಸನ: ಶ್ವಾಸಕೋಶದ ಸೋಂಕಿನಿಂದ ದೇಹದಾರ್ಢ್ಯ ಪಟು (Bodybuilder) ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸೋಮಶೇಖರ್ (30) ಮೃತಪಟ್ಟ ದುರ್ದೈವಿ. ಜಿಮ್ ಸೋಮ‌ (Gym Soma) ಎಂದೇ ಖ್ಯಾತಿಯಾಗಿದ್ದ ಯುವಕ ಸೋಮಶೇಖರ್ ಆರೂವರೆ ಅಡಿ ಎತ್ತರ, 110‌ ಕೆಜಿ ತೂಕವಿದ್ದರು. ಇದನ್ನೂ ಓದಿ: ಚಿತ್ರದುರ್ಗ | ಬಸ್‍ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಆಟೋ – ಐವರಿಗೆ ಗಂಭೀರ ಗಾಯ

    ಬಾಡಿಬಿಲ್ಡಿಂಗ್‌ನಲ್ಲಿ ಹಲವಾರು ಟೈಟಲ್ ಜಯಿಸಿದ್ದ ಸೋಮ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರು. ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು,‌ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

    ಜಿಮ್ ಸೋಮ ನಿಧನಕ್ಕೆ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಕೆಎಸ್‍ಆರ್‌ಟಿಸಿ ಬಸ್‍ಗೆ ಕಲ್ಲು ತೂರಾಟ

  • 19ನೇ ವಯಸ್ಸಿಗೆ ಬ್ರೆಜಿಲಿಯನ್ ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು

    19ನೇ ವಯಸ್ಸಿಗೆ ಬ್ರೆಜಿಲಿಯನ್ ಬಾಡಿಬಿಲ್ಡರ್ ಹೃದಯಾಘಾತದಿಂದ ಸಾವು

    ಬ್ರೆಸಿಲಿಯಾ: ಬ್ರೆಜಿಲ್ (Brazil) ಮೂಲದ 19 ವರ್ಷದ ಮ್ಯಾಥ್ಯೂಸ್ ಪಾವ್ಲಾಕ್ ಭಾನುವಾರ (ಸೆ.01)ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಮೂಲತಃ ದಕ್ಷಿಣ ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದವರಾದ ಮ್ಯಾಥ್ಯೂಸ್ ಪಾವ್ಲಾಕ್ (Matheus Pavlak) ದೇಹದಾರ್ಢ್ಯದಲ್ಲಿ (Bodybuilder) ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಇದನ್ನೂ ಓದಿ: ಸರ್ವಿಸ್ ರಸ್ತೆಯಲ್ಲಿ ಗುಂಡಿ ಗಂಡಾಂತರ: ಹೆದ್ದಾರಿಯಲ್ಲಿ ಕುಸಿದ ಬೃಹತ್ ಸ್ಲಾಬ್‌ಗಳು

    ತಮ್ಮ ಹುಟ್ಟೂರಲ್ಲಿ ನಡೆದ ಸ್ಪರ್ಧೆಗಳಲ್ಲಿ 4ನೇ ಮತ್ತು 6ನೇ ಸ್ಥಾನ ಪಡೆದುಕೊಂಡಿದ್ದ ಮ್ಯಾಥ್ಯೂಸ್, 2023ರಲ್ಲಿ 23 ವರ್ಷದೊಳಗಿನ ವಿಭಾಗದ ಸ್ಪರ್ಧೆಯಲ್ಲಿ “ಮಿ. ಬ್ಲೂಮೆನೌ” ಆಗಿದ್ದರು.

    ದೇಹದಾರ್ಢ್ಯದಲ್ಲಿ ತೊಡಗಲು ಕೇವಲ 5 ವರ್ಷಗಳಲ್ಲಿ ತಮ್ಮ ದೇಹವನ್ನು ಮಾರ್ಪಡಿಸಿಕೊಂಡಿದ್ದರು. ದೇಹವನ್ನು ಮಾರ್ಪಡಿಸಿಕೊಳ್ಳಲು ಔಷಧಿಗಳ ಬಳಕೆಯು ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಉಹಾಪೋಹಗಳು ವ್ಯಕ್ತವಾಗಿವೆ.

     

    View this post on Instagram

     

    A post shared by Lucas Chegatti (@chegatti_treinador)

    ಪಾವ್ಲಾಕ್‌ನ ಮಾಜಿ ತರಬೇತುದಾರ ಲ್ಯೂಕಾಸ್ ಚೆಗಟ್ಟಿ (Lucas Chegatti), ಸಾವಿನ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ನಾನು ಮ್ಯಾಥ್ಯೂಸ್‌ನ ಮೊದಲ ತರಬೇತುದಾರನಾಗಿದ್ದೆ. ಅತ್ಯಮೂಲ್ಯ ಗೆಳೆಯನನ್ನು ನಾನು ಇಂದು ಕಳೆದುಕೊಂಡಿದ್ದೇನೆ. ಹೃದಯದ ಭಾರವನ್ನು ಪದಗಳ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂದು ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಪಶ್ಚಿಮ ಬಂಗಾಳದ ʼಅಪರಾಜಿತ ಬಿಲ್‌ʼ ಪೋಕ್ಸೊಗಿಂತ ಭಿನ್ನ ಹೇಗೆ?

  • ಫೇಮಸ್‌ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ 30ನೇ ವಯಸ್ಸಿಗೆ ನಿಧನ

    ಫೇಮಸ್‌ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ 30ನೇ ವಯಸ್ಸಿಗೆ ನಿಧನ

    ಬ್ಯಾಂಕಾಕ್‌: ಫಿಟ್ನೆಸ್‌ (Fitness), ಬಾಡಿ ಬಿಲ್ಡಿಂಗ್‌ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ (Jo Lindner) 30ನೇ ವಯಸ್ಸಿಗೆ ನಿಧನರಾಗಿದ್ದಾರೆ.

     

    View this post on Instagram

     

    A post shared by NICHA (@immapeaches)

    ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಲಿಂಡ್ನರ್‌ ನಿಧನ ಹೊಂದಿದ್ದು, ಅವರ ಗೆಳತಿ ನಿಚಾ ಸಾವಿನ ಸುದ್ದಿಯನ್ನ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್‌ ಕುರಿತ ವಿಡಿಯೋ ಹಂಚಿಕೊಂಡಿದ್ದರು ಎಂಬುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್‌ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್‌

    ಥಾಯ್‌ಲ್ಯಾಂಡ್‌ನಲ್ಲಿ ವೇಟ್ ಲಿಫ್ಟಿಂಗ್ ಹಾಗೂ ಬಾಡಿ ಬಿಲ್ಡಿಂಗ್ (Bodybuilding) ಮೂಲಕ ಲೆಜೆಂಡ್‌ ಎಂದೇ ಗುರುತಿಸಿಕೊಂಡಿದ್ದ ಜೋ ಲಿಂಡ್ನರ್ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಫಿಟ್ನೆಸ್‌ ಟಿಪ್ಸ್‌ ನೀಡುತ್ತಿದ್ದರು. ಜೊತೆಗೆ ಲಿಂಡ್ನರ್‌ ತಮ್ಮದೇ ಯುಟ್ಯೂಬ್‌ ಚಾನೆಲ್‌ ಆರಂಭಿಸಿ ತಾನು ಅಭ್ಯಾಸ ಮಾಡುವ ವೇಳೆ ಫಿಟ್ನೆಸ್‌ ಸಲಹೆಗಳನ್ನ ಅದರಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನೂ ಓದಿ: ಮೋದಿಯವರ `ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರಿದೆ: ಪುಟಿನ್

    ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದ ಲಿಂಡ್ನರ್‌ ಯುಟ್ಯೂಬ್‌ನಲ್ಲಿ 940,000 ಚಂದಾದಾರರು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 8.5 ದಶಲಕ್ಷ ಫಾಲೋವರ್ಸ್‌ಗಳನ್ನ ಹೊಂದಿದ್ದರು. ಪ್ರತಿದಿನ ಯುಟ್ಯೂಬ್‌ನಲ್ಲಿ ಫಿಟ್ನೆಸ್‌ ತರಬೇತಿ ಜೊತೆಗೆ ಆಹಾರ ಸೇವನೆಯ ಕ್ರಮದ ಬಗ್ಗೆಯೂ ಸಲಹೆ ನೀಡುತ್ತಿದ್ದರು. ಇದರಿಂದ ಥಾಯ್‌ಲ್ಯಾಂಡ್‌ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

    ಲಿಂಡ್ನರ್‌ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಬಾಡಿಬಿಲ್ಡಿಂಗ್‌ ಲೋಕದ ಲೆಜೆಂಡ್‌ ಅನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವ ದೇಹದಾರ್ಢ್ಯ ಪಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಯುವ ದೇಹದಾರ್ಢ್ಯ ಪಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವ ದೇಹದಾರ್ಢ್ಯ ಪಟು (Body Builder) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಕೆ ಆರ್ ಪುರಂ (K R Puram) ಬಳಿಯ ಹೀರಂಡಹಳ್ಳಿಯಲ್ಲಿ ಶ್ರೀನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕೈಗೆ ಗಾಜು ಚುಚ್ಚಿ ನರ ಕಟ್- ಸರ್ಜರಿ ಬಳಿಕ ಯುವಕ ಸಾವು, ಆರೋಪ

    ಮೂಲತಃ ಕೋಲಾರದ ಶ್ರೀನಿವಾಸಪುರದ ಶ್ರೀನಾಥ್, ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದರು. ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದರು. ಆದರೆ ತಾವು ವಾಸವಿದ್ದ ಕೊಠಡಿಯಲ್ಲಿ ಮಂಗಳವಾರ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ದೊರೆತಿದ್ದಾರೆ.

    ಇದೀಗ ಶ್ರೀನಾಥ್ ಪೋಷಕರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆ (Avalahalli Police Station) ಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಕೃತ್ಯಕ್ಕೆ ಹಿಜಬ್‌ ಲಿಂಕ್‌ – ಸಹೋದರಿಗೆ ಕಾಟ ಕೊಟ್ಟಿದ್ದಕ್ಕೆ ಭಜರಂಗ ದಳ ಕಾರ್ಯಕರ್ತನ ಹತ್ಯೆಗೆ ಯತ್ನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಪಡೆದ ಲೋಕೇಶ್ ಪಟೇಲ್‍ಗೆ ಸನ್ಮಾನ

    ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಪಡೆದ ಲೋಕೇಶ್ ಪಟೇಲ್‍ಗೆ ಸನ್ಮಾನ

    ಶಿವಮೊಗ್ಗ: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭದ್ರಾವತಿಯ ಸರ್ ಎಂ.ವಿ. ಕಲೆ ಮತ್ತು ವಾಣಿಜ್ಯ ಕಾಲೇಜ್‍ನ ವಿದ್ಯಾರ್ಥಿ ಲೋಕೇಶ್ ಪಟೇಲ್‌ರನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ ಸನ್ಮಾನಿಸಿದರು.

    ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಪುರುಷರ 65 ಕೆ.ಜಿ. ವಿಭಾಗದಲ್ಲಿ ಜಿಲ್ಲೆಯ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೊಸಹಳ್ಳಿಯ ಮಂಜುನಾಥ್ ಮತ್ತು ಸರ್ವಮಂಗಳ ದಂಪತಿ ಪುತ್ರ ಲೋಕೇಶ್ ಪಟೇಲ್ ಕಂಚಿನ ಪದಕ ಪಡೆದಿದ್ದರು. ಕಳೆದ ವರ್ಷ ಪಾಂಡಿಚೇರಿಯಲ್ಲಿ ನಡೆದ ಮಿ.ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಅಲ್ಲದೇ 2021ನೇ ಸಾಲಿನ ಶ್ರೀಕುವೆಂಪು ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿದ್ದರು. ಇದನ್ನೂ ಓದಿ: ರೇಪ್ ಮಾಡಿ ನನ್ನ ಸ್ನೇಹಿತನ ಪತ್ನಿಯನ್ನೇ ತುಂಡು ತುಂಡು ಕತ್ತರಿಸಿ ರಸ್ತೆಗೆ ಎಸೆದಿದ್ರು

    ಸನ್ಮಾನ ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಕುಲಸಚಿವೆ ಜಿ. ಅನುರಾಧ, ಡಾ. ಎನ್.ಡಿ ವಿರೂಪಾಕ್ಷ, ಡಾ. ಬಿ.ಇ ಕುಮಾರಸ್ವಾಮಿ, ತರಬೇತುದಾರ ಶಫಿ ಮತ್ತಿತರು ಉಪಸ್ಥಿತರಿದ್ದರು.

  • ಬಾಡಿಬಿಲ್ಡರ್ ಸ್ಪರ್ಧೆಯಲ್ಲಿ ಗಿನ್ನೆಸ್ ರೆಕಾರ್ಡ್ ಪಡೆದ ಕುಬ್ಜ ವ್ಯಕ್ತಿ

    ಬಾಡಿಬಿಲ್ಡರ್ ಸ್ಪರ್ಧೆಯಲ್ಲಿ ಗಿನ್ನೆಸ್ ರೆಕಾರ್ಡ್ ಪಡೆದ ಕುಬ್ಜ ವ್ಯಕ್ತಿ

    ಮುಂಬೈ: ಭಾರತದ ಕುಬ್ಜ ವ್ಯಕ್ತಿಯೊಬ್ಬರು ವಿಶ್ವದ ಅತೀ ಕಡಿಮೆ ಎತ್ತರದ ಬಾಡಿ ಬಿಲ್ಡರ್ ಸ್ಪರ್ಧಾತ್ಮಕ ಪಂದ್ಯದಲ್ಲಿ ಗೆದ್ದು, ಗಿನ್ನೆಸ್ ರೆಕಾರ್ಡ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

    3 ಅಡಿ 4 ಇಂಚು ಎತ್ತರವಿರುವ ಪ್ರತೀಕ್ ವಿಠ್ಠಲ್ ಮೋಹಿತೆ ಪ್ರಶಸ್ತಿಯನ್ನು ಪಡೆದವರಾಗಿದ್ದಾತರ. ಸ್ನೇಹಿತನ ಸಲಹೆ ಮೇರೆಗೆ ಪ್ರತೀಕ್ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲೇಹ್‍ನಿಂದ ಮನಾಲಿಗೆ ಸೈಕ್ಲಿಂಗ್ ಮಾಡಿ ಭಾರತೀಯ ಸೇನಾಧಿಕಾರಿ ಗಿನ್ನೆಸ್ ದಾಖಲೆ

    Pratik Vitthal Mohite

    ಈ ಕುರಿತಂತೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಎಂಬ ಯೂಟ್ಯೂಬ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಪ್ರತೀಕ್ ತನ್ನ ದಿನಚರಿ ಮತ್ತು ಗೆಲುವು ಸಾಧಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಗಿನ್ನೆಸ್ ಪಟ್ಟ ಪಡೆಯಬೇಕೆಂಬುವುದು ನನ್ನ ಕನಸಾಗಿತ್ತು ಮತ್ತು ಅದರಿಂದ ಗೌರವ ಸಿಗುತ್ತದೆ. ಸದ್ಯ ಈಗ ನನಗೆ ಬಹಳ ಸಂತೋಷವಾಗುತ್ತಿದೆ ಮತ್ತು ಇದು ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

    ಪ್ರತೀಕ್ ಕೆಲವು ಆರೋಗ್ಯಕರವಾದ ತಿಂಡಿ ಹಾಗೂ ಡಯೆಟ್ ಫುಡ್‍ಗಳನ್ನು ಸೇವಿಸುತ್ತಿದ್ದು, ಪ್ರತಿ ದಿನ ಮಧ್ಯಾಹ್ನ ಎರಡು ಗಂಟೆಗಳ ಕಾಲ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಬಗ್ಗೆ ಹೇಲಿಕೊಂಡಿದ್ದಾರೆ ಮತ್ತು ಪ್ರತಿ ನಿತ್ಯ 30 ನಿಮಿಷಗಳ ಕಾಲ ಓಡುವುದಾಗಿ ತಿಳಿಸಿದ್ದಾರೆ. ಅದನ್ನು ಹೊರತುಪಡಿಸಿ ಪ್ರತೀಕ್ ತನ್ನ ಸ್ನೇಹಿತರೊಂದಿಗೆ ಹೆಚ್ಚಾಗಿ ಕ್ರಿಕೆಟ್ ಆಡುಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೇನ್‍ನಲ್ಲಿರುವ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಪ್ರತೀಕ್ ಅವರು ತಮ್ಮದೇ ಆದ ಜಿಮ್‍ನನ್ನು ತೆರೆಯುವ ಆಸೆಯನ್ನು ವ್ಯಕ್ತಪಡಿಸಿದ್ದು, ಈ ವಿಶ್ವದಾಖಲೆ ತಮ್ಮ ಗುರಿ ತಲುಪಲು ಒಂದು ಮೈಲಿಗಲ್ಲಾಗಿದೆ ಎನ್ನಬಹುದು.

  • ಕೊರೊನಾ ವಿರುದ್ಧ ಹೋರಾಡಲು ವೀರ್ಯ ಕುಡಿಯುತ್ತಿದ್ದಾಳೆ ಮಹಿಳೆ

    ಕೊರೊನಾ ವಿರುದ್ಧ ಹೋರಾಡಲು ವೀರ್ಯ ಕುಡಿಯುತ್ತಿದ್ದಾಳೆ ಮಹಿಳೆ

    – ವೀರ್ಯ ಪಡೆಯುವ ಬಗ್ಗೆ ಮಾಹಿತಿ ಕೊಟ್ಟ 2 ಮಕ್ಕಳ ತಾಯಿ
    – ‘ಜೇನುತುಪ್ಪ, ನಿಂಬೆ ರಸಕ್ಕಿಂತ ಸ್ಪರ್ಮ್ ಸ್ಮೂಥಿ ಭಿನ್ನವಲ್ಲ’

    ಲಂಟನ್: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಎರಡು ಮಕ್ಕಳ ತಾಯಿಯೊಬ್ಬರು ವೀರ್ಯ ಸ್ಮೂಥಿ (ಸ್ಪರ್ಮ್ ಸ್ಮೂಥಿ) ಸೇವಿಸುತ್ತಿದ್ದಾರೆ.

    ಬಿಟ್ರನ್‍ನ 32 ವರ್ಷದ ಟ್ರೇಸಿ ಕಿಸ್ ತನ್ನ ಗೆಳೆಯನಿಂದ ವೀರ್ಯ ಪಡೆದು ಅದನ್ನು ಸ್ಮೂಥಿಯಲ್ಲಿ ಮಿಶ್ರಣ ಮಾಡಿಕೊಂಡು ಕಳೆದ ಮೂರು ವರ್ಷಗಳಿಂದ ಸೇವಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರಿಗೆ ಈವರೆಗೂ ಶೀತ ಅಥವಾ ಜ್ವರ ಕಾಣಿಸಿಕೊಂಡಿಲ್ಲ. ಟ್ರೇಸಿ ಕಿಸ್ ವಾರಕ್ಕೆ ಮೂರು ಬಾರಿ ಸ್ಪರ್ಮ್ ಸ್ಮೂಥಿ ಕುಡಿಯುತ್ತಾರೆ.

    ಈ ಕುರಿತು ಮಾತನಾಡಿರುವ ಟ್ರೇಸಿ ಕಿಸ್ “ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾನು ಸಸ್ಯಾಹಾರಿ ವಿಧಾನವನ್ನು ಕಂಡುಕೊಂಡಿದ್ದೇನೆ. ಔಷಧಿಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಸೂಕ್ತವಲ್ಲ. ತಾಯಿಯು ತನ್ನ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡುವುದರಿಂದ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತಾಳೆ. ಅಂತೆ ನಾನು 2017ರಲ್ಲಿ ಸ್ಪರ್ಮ್ ಸ್ಮೂಥಿ ಕುಡಿಯಲು ಆರಂಭಿಸಿದೆ. ಅಂದಿನಿಂದ ನನಗೆ ಶೀತ ಅಥವಾ ಜ್ವರ ಕಾಣಿಸಿಕೊಂಡಿಲ್ಲ. ಮುಖದ ಚರ್ಮವನ್ನು ಮೃದುವಾಗಿಸಲು ವೀರ್ಯವನ್ನು ಹಚ್ಚಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

    “ಹೆಚ್ಚಿನ ಪೋಷಕಾಂಶ ಮತ್ತು ಪ್ರಯೋಜನಗಳನ್ನು ಪಡೆಯಲು ವೀರ್ಯವನ್ನು ನೇರವಾಗಿ ಸೇವಿಸುವುದು ಉತ್ತಮ. ಆದರೆ ನಾನು ಅದನ್ನು ಫ್ರೀಜರ್ ನಲ್ಲಿ ಐಸ್ ಕ್ಯೂಬ್ ಟ್ರೇನಲ್ಲಿ ಸಂಗ್ರಹಿಸುತ್ತೇನೆ. ನನಗೆ ವೀರ್ಯ ನೀಡುತ್ತಿರುವ ವ್ಯಕ್ತಿಯ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಅವರಿಂದ ದೂರದ ಸಂಬಂಧದಲ್ಲಿದ್ದೇನೆ. ಕೆಲವೊಮ್ಮೆ ತಾಜಾ ಹಣ್ಣುಗಳು ಮತ್ತು ಬಾಳೆಹಣ್ಣುಗಳ ಸ್ಮೂತಿ ಜೊತೆಗೆ ವೀರ್ಯ ಮಿಶ್ರಣ ಮಾಡಿಕೊಂಡು ಕುಡಿಯುತ್ತೇನೆ. ಇದು ವಿವಿಧ ರೀತಿಯ ರುಚಿಕೊಡುತ್ತದೆ” ಎಂದು ತಿಳಿಸಿದ್ದಾರೆ.

    “ಆರೋಗ್ಯ ದೃಷ್ಟಿಯಿಂದ ಕಟ್ಟುನಿಟ್ಟಾಗಿ ಸ್ಪರ್ಮ್ ಸ್ಮೂತಿಯನ್ನು ಸೇವಿಸುತ್ತಿರುವೆ. ರೋಗ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಬಹಳಷ್ಟು ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಆದರೆ ಅದು ಸರಿಯಲ್ಲ. ಅನಾರೋಗ್ಯಕ್ಕೆ ಒಳಗಾಗುವ ಮೊದಲೇ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬೇಕು” ಎಂದು ಟ್ರೇಸಿ ಕಿಸ್ ಹೇಳಿದ್ದಾರೆ.

    “ನೀವು ಗಂಟಲು ನೋವು ಕಾಣಿಸಿಕೊಂಡಾಗ ಕುಡಿಯುವ ಜೇನುತುಪ್ಪ ಮತ್ತು ನಿಂಬೆ ರಸಕ್ಕಿಂತ ಸ್ಪರ್ಮ್ ಸ್ಮೂಥಿ ಭಿನ್ನವಾಗಿರುವುದಿಲ್ಲ. ಇದು ಮತ್ತೊಂದು ನೈಸರ್ಗಿಕ ಔಷಧಿಯಾಗಿದೆ. ಆದರೆ ಸಂಪೂರ್ಣವಾಗಿ ಉಚಿತವಾಗಿದ್ದು, ಗೆಳೆಯರನ್ನೇ ಹೊಂದಿರಬೇಕಾಗಿಲ್ಲ. ನೀವು ಆರೋಗ್ಯವಂತ ಸ್ನೇಹಿತನನ್ನು ಕೇಳಿ ವೀರ್ಯ ಪಡೆಯಬಹುದಾಗಿದೆ” ಎಂದು ಸಲಹೆ ನೀಡಿದ್ದಾರೆ.

    ಕೊರೊನಾ ವೈರಸ್‍ಗೆ ಇಲ್ಲಿಯವರೆಗೆ ಯಾರೂ ಔಷಧಿ ಕಂಡು ಹಿಡಿದಿಲ್ಲ. ವಿವಿಧ ಪ್ರಯೋಗಾಲಯದಲ್ಲಿ ಔಷಧಿ ಕಂಡು ಹಿಡಿಯುವ ಕಾರ್ಯ ನಡೆಯುತ್ತಿದೆ. ವೀರ್ಯ ಸೇವಿಸುವುದರಿಂದ ಕೋವಿಡ್ 19 ಬರುವುದಿಲ್ಲ ಎನ್ನುವುದು ಆಕೆಯ ಅಭಿಪ್ರಾಯವಾಗಿದೆ.