Tag: blood moon

  • ಬಾನಂಗಳದಲ್ಲಿ ಶತಮಾನದ ಚಂದ್ರಗ್ರಹಣ- ಭಾರತ ಸೇರಿ ವಿಶ್ವದ ಹಲವೆಡೆ ಗೋಚರ

    ಬಾನಂಗಳದಲ್ಲಿ ಶತಮಾನದ ಚಂದ್ರಗ್ರಹಣ- ಭಾರತ ಸೇರಿ ವಿಶ್ವದ ಹಲವೆಡೆ ಗೋಚರ

    -ರಾಜ್ಯದ ಹಲವೆಡೆ ಮೋಡದ ಅಡ್ಡಿ

    ಬೆಂಗಳೂರು: ಅಪರೂಪದ ಅರ್ಧ ರಕ್ತ ಚಂದ್ರಗ್ರಹಣಕ್ಕೆ ಇಡೀ ಭೂಮಿ-ಆಕಾಶ ಸಾಕ್ಷಿಯಾಯ್ತು. 149 ವರ್ಷಗಳಲ್ಲೇ ಮೊದಲ ಬಾರಿಗೆ ವಿಶೇಷ ಚಂದ್ರಗ್ರಹಣ ನಡೆದಿದೆ.

    ನಭೋ ಮಂಡಲದ ಈ ಅಪರೂಪದ ಕೌತುಕವನ್ನು ಭಾರತ ಸೇರಿದಂತೆ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾದ ಜನ ವೀಕ್ಷಿಸಿದರು. ಆದರೆ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡದಿಂದಾಗಿ ಗ್ರಹಣ ಕಾಣಿಸಲೇ ಇಲ್ಲ. ಇನ್ನುಳಿದಂತೆ ಕಲಬುರಗಿ, ಮೈಸೂರು, ದಾವಣಗೆರೆ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರಿಸಿತು. ಎರಡು ದಿನಗಳ ಮಟ್ಟಿಗೆ ನಭೋ ಮಂಡಲದಲ್ಲಿ ಗ್ರಹಣದ ಪರಿಣಾಮ ಇರಲಿದೆ.

    ಭಾರತದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಗ್ರಹಣ ಗೋಚರಿಸಿತು. ಬರ್ಲಿನ್, ಚಿಕಾಗೋ, ಲಂಡನ್, ಮಲೇಷಿಯಾ ಸೇರಿದಂತೆ ಹಲವೆಡೆ ಅಪರೂಪದ ಗ್ರಹಣವನ್ನು ಜನ ಕಣ್ತುಂಬಿಕೊಂಡರು. ಗ್ರಹಣ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಯಿತು. ರಾಯಚೂರು ಮತ್ತು ದಾವಣಗೆರೆಯ ರಾಘವೇಂದ್ರ ಸ್ವಾಮಿ ದೇಗುಲದಲ್ಲಿ ಹೋಮ-ಹವನ ನೆರವೇರಿಸಲಾಯ್ತು. ಇತ್ತ ಗ್ರಹಣ ಮುಗಿಯುತ್ತಿದ್ದಂತೆ ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿಗೆ ಶುದ್ಧೋದಕ ಅಭಿಷೇಕ ಮಾಡಲಾಯಿತು. ಎಲ್ಲ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿದೆ.

  • ರಕ್ತ ಚಂದ್ರಗ್ರಹಣ

    ರಕ್ತ ಚಂದ್ರಗ್ರಹಣ

    https://www.youtube.com/watch?v=tqwGF6hB1EU

  • ಸೋಮವಾರ ರಕ್ತ ಚಂದ್ರಗ್ರಹಣ: ವಿಶೇಷತೆ ಏನು? ಅವಧಿ ಎಷ್ಟು? ಭಾರತಕ್ಕೆ ಎಫೆಕ್ಟ್ ಆಗುತ್ತಾ?

    ಸೋಮವಾರ ರಕ್ತ ಚಂದ್ರಗ್ರಹಣ: ವಿಶೇಷತೆ ಏನು? ಅವಧಿ ಎಷ್ಟು? ಭಾರತಕ್ಕೆ ಎಫೆಕ್ಟ್ ಆಗುತ್ತಾ?

    ಬೆಂಗಳೂರು: ಮೊನ್ನೆಯಷ್ಟೇ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು. ಈಗ ಚಂದ್ರಗ್ರಹಣ ಬಂದಿದೆ. ಅದು ಅಂತಿಂಥ ಚಂದ್ರಗ್ರಹಣವಲ್ಲ. ಸೂಪರ್ ಬ್ಲಡ್ ವೂಲ್ಫ್ ಮೂನ್. ಅಂದ್ರೆ ರಕ್ತಚಂದ್ರಗ್ರಹಣ. ಹೆಸರಲ್ಲೇ ಭಯಾನಕತೆ ಹೊಂದಿರುವ ರಕ್ತಚಂದ್ರಗ್ರಹಣದ ಸೋಮವಾರ ನಡೆಯಲಿದೆ.

    ಪ್ರಶ್ನೆಗಳ ಸಾಗರದಂತಿರುವ ಬ್ರಹ್ಮಾಂಡದಲ್ಲಿ ನಡೆಯೋ ಪ್ರತಿಯೊಂದು ಪ್ರಕ್ರಿಯೆಯೂ ಮನುಷ್ಯನಿಗೆ ಕುತೂಹಲ ಹುಟ್ಟಿಸುತ್ತದೆ. ಕಣ್ಣರಳಿಸಿ ನೋಡುವಂತೆ ಮಾಡುತ್ತದೆ. ಇದರ ಜೊತೆಗೆ ಸಣ್ಣ ಆತಂಕವನ್ನೂ ಭಯವನ್ನೂ ಹುಟ್ಟಿಸುತ್ತದೆ. ಕೆಲವೊಂದು ಪ್ರಕ್ರಿಯೆಗಳ ನೈಜ ಕಾರಣವನ್ನ ಮನುಷ್ಯ ಕಾಲಾಂತರದಲ್ಲಿ ಅರ್ಥಮಾಡಿಕೊಳ್ಳುತ್ತಾ ಬಂದಿದ್ದಾನೆ. ಆದರೆ ಇನ್ನು ಕೆಲವು ಆಕಾಶದಲ್ಲಿ ನಡೆಯುವ ವಿದ್ಯಮಾನಗಳ ಇವತ್ತಿಗೂ ಭಯ ಹುಟ್ಟಿಸುತ್ತದೆ.

    ಅಮಾವಾಸ್ಯೆ ಸೂರ್ಯ ಗ್ರಹಣ ಕಳೆದು ಹುಣ್ಣಿಮೆಗೆ ಈಗ ಚಂದ್ರ ಗ್ರಹಣ ಬಂದಿದೆ. ಇದು ಸಾಮಾನ್ಯವಾದ ಚಂದ್ರಗ್ರಹಣವಾದ್ರೆ ಯಾರೂ ಭಯಪಡುತ್ತಿರಲಿಲ್ಲ. ಆದ್ರೆ ಇದನ್ನ ವಿಜ್ಞಾನಿಗಳು ರಕ್ತಚಂದ್ರಗ್ರಹಣ ಅಂತಾನೆ ಕರೆದಿದ್ದಾರೆ. ಚಂದ್ರ ಗ್ರಹಣದ ಸಮಯದಲ್ಲಿ ಕಂಡು ಕೆಂಪು ಬಣ್ಣದಲ್ಲಿ ಗೋಚರವಾಗಲಿದ್ದಾನೆ. 2018ರಲ್ಲಿಯೂ ಇದೇ ಸಂದರ್ಭದಲ್ಲಿ ಭೂಮಿ ರಕ್ತ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಿತ್ತು.

    ಗ್ರಹಣ ಅವಧಿ:
    ರಕ್ತ ಚಂದ್ರಗ್ರಹಣವು ಭಾರತೀಯ ದಿನಮಾನದ ಪ್ರಕಾರ ಜನವರಿ 21ನೇ ತಾರೀಕು ಸೋಮವಾರ ನಡೆಯಲಿದೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 8 ಗಂಟೆ 6 ನಿಮಿಷಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆ 18 ನಿಮಿಷಕ್ಕೆ ರಕ್ತ ಚಂದ್ರಗ್ರಹಣವು ಸಮಾಪ್ತಿಯಾಗಲಿದೆ. ಬೆಳಗ್ಗೆ 10 ಗಂಟೆ 11 ನಿಮಿಷದಿಂದ 11 ಗಂಟೆ 13 ನಿಮಿಷದವರೆಗೆ ಅಂದ್ರೆ 62 ನಿಮಿಷಗಳ ಕಾಲ ಚಂದ್ರ ಸಂಪೂರ್ಣ ಗ್ರಹಣಕ್ಕೆ ಒಳಗಾಗಿ ರಕ್ತಾವತಾರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಭಾರತದಲ್ಲಿ ಈ ಸಂದರ್ಭದಲ್ಲಿ ಹಗಲು ಇರೋದ್ರಿಂದ ಎಲ್ಲೂ ಕೂಡ ಸೂಪರ್ ಬ್ಲಡ್ ಮೂನ್ ಗೋಚರವಾಗುವುದಿಲ್ಲ.

    ಈ ಬಾರಿಯ ರಕ್ತಚಂದ್ರಗ್ರಹಣ ಭಾರತದಲ್ಲಿ ಗೋಚರವಾಗದೇ ಇದ್ದರೂ ಭಾರತಕ್ಕೆ ಎಫೆಕ್ಟ್ ಇಲ್ವಾ ಅಂತ ಕೇಳಿದ್ರೆ ಚಂದ್ರ ಇಡೀ ಭೂಮಿಗೆ ಒಬ್ಬನೆ ಎನ್ನುವ ಉತ್ತರವನ್ನ ಜ್ಯೋತಿಷಿಗಳು ನೀಡುತ್ತಾರೆ. ಗ್ರಹಣ ನಡೆಯೋದು ಚಂದ್ರನಿಗೆ. ಅದು ಭೂಮಿಯ ಯಾವ ಭಾಗದಲ್ಲಿ ಗೋಚರವಾದರೂ ಇಡೀ ಭೂಮಿಗೆ ಸಂಚಕಾರ ತರಬಹುದು ಎನ್ನಲಾಗುತ್ತದೆ.

    ಎಲ್ಲಿ ಗ್ರಹಣ ಗೋಚರ?
    ಭಾರತದ ಕಾಲಮಾನದ ಪ್ರಕಾರ ಸೋಮವಾರ ಗ್ರಹಣ ನಡೆಯುತ್ತದೆ. ಗ್ರಹಣ ಗೋಚರವಾಗುವ ಪ್ರದೇಶಗಳಲ್ಲಿ ಆಗಿನ್ನೂ ಭಾನುವಾರ ರಾತ್ರಿಯಾಗಿರುತ್ತದೆ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಗ್ರೀನ್‍ಲ್ಯಾಂಡ್, ಐಸ್‍ಲ್ಯಾಂಡ್, ಐರ್ಲೆಂಡ್, ಗ್ರೇಟ್ ಬ್ರಿಟನ್, ನಾರ್ವೆ, ಸ್ವೀಡನ್, ಪೋರ್ಚುಗಲ್ ಹಾಗೂ ಫ್ರಾನ್ಸ್ ಮತ್ತು ಸ್ಪೇನ್‍ನ ಕರಾವಳಿ ಭಾಗಗಳಲ್ಲಿ ರಕ್ತಚಂದ್ರಗ್ರಹಣ ಗೋಚರವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶತಮಾನದ ಸೋಜಿಗಕ್ಕೆ ಸಾಕ್ಷಿಯಾಯ್ತು ಜಗ- ಮಳೆ, ಮೋಡದ ಮಧ್ಯೆ ಕೆಂಬಣ್ಣದಲ್ಲಿ ಶಶಿ ಸ್ನಾನ

    ಶತಮಾನದ ಸೋಜಿಗಕ್ಕೆ ಸಾಕ್ಷಿಯಾಯ್ತು ಜಗ- ಮಳೆ, ಮೋಡದ ಮಧ್ಯೆ ಕೆಂಬಣ್ಣದಲ್ಲಿ ಶಶಿ ಸ್ನಾನ

    ಬೆಂಗಳೂರು: ಶತಮಾನದ ಸೋಜಿಗ, ಖಗೋಳದ ಕೌತುಕ ರಕ್ತ ಚಂದಿರ ಗ್ರಹಣ ಘಟಿಸಿದೆ. ಬೆಳ್ಳಗ್ಗಿದ್ದ ಚಂದಿರ ನಭಕ್ಕೇರುತ್ತಲೇ ತನ್ನ ಬಣ್ಣ ಬದಲಾಯಿಸಿದ್ದಾನೆ.

    ಹಳದಿ ಗುಲಾಬಿ, ನೀಲಿ, ಕೆಂಪು, ಕಡು ಕೆಂಪು, ಕಡು ಕಪ್ಪು ಹೀಗೆ ವರ್ಣರಂಜಿತನಾಗಿ ಬಾನಂಗಳದಲ್ಲಿ ದಿನ ಕಳೆದ ಶಶಿ ಬಣ್ಣದೋಕುಳಿಯೆನ್ನೇ ಎರಚಿದ. ಅಲ್ಲಲ್ಲಿ ಮೋಡ, ಮಳೆಯ ಅಡೆತಡೆಯಲ್ಲಿ ಅದ್ಭುತವನ್ನು ಕಣ್ತುಂಬಿಕೊಳ್ಳಲು ಆಗದೇ ಕೆಲವರು ನಿರಾಸೆರಾಗಿದ್ದೂ ಉಂಟು. ದಾವಣಗೆರೆ, ಕೊಪ್ಪಳದಲ್ಲಿ ಕೆಂಪೇರಿದ ಚಂದಿರ ದೂರದ ಗ್ರೀಕ್‍ನ ಅಥೆನ್ಸ್, ಇಸ್ರೇಲ್, ಅಬುದಾಭಿ, ಸ್ವಿಟ್ಜರ್ಲೆಂಡ್, ದಕ್ಷಿಣ ಆಫ್ರಿಕಾ ಹೀಗೆ ಭೂ ಮಂಡಲದ ಬಹುತೇಕ ಎಲ್ಲೆಡೆಯೂ ರಂಗುರಂಗಾಗಿ ಆವರಿಸಿಕೊಂಡ.

                 ಬೆಂಗಳೂರು

    ಸೂರ್ಯ-ಚಂದ್ರರ ನಡುವೆ ಭೂಮಿ ಬಂದು ಗ್ರಹಣ ಸಂಭವಿಸಿದರೆ, ಕೆಂಪು ಗ್ರಹವೆಂದೇ ಕರೆಸಿಕೊಳ್ಳುವ ಮಂಗಳ 15 ವರ್ಷಗಳ ಬಳಿಕ ಮೊದಲ ಬಾರಿಗೆ ಭೂಮಿಯ ಸಮೀಪದಲ್ಲೇ ಹಾದುಹೋಗಿ ಗ್ರಹಣವನ್ನು ಮತ್ತಷ್ಟು ಕಳೆಗಟ್ಟಿಸಿತು. ರಾತ್ರಿ 10 ಗಂಟೆಗೆ 44 ನಿಮಿಷಕ್ಕೆ ಶುರುವಾದ ಗ್ರಹಣದಿಂದ ಶಶಿಗೆ ಮೋಕ್ಷ ಸಿಕ್ಕಿದ್ದು ಬೆಳಗ್ಗೆ 4 ಗಂಟೆ 58 ನಿಮಿಷಕ್ಕೆ. ಸಂಪೂರ್ಣ ಗ್ರಹಣಕ್ಕೆ ಸಾಕ್ಷಿಯಾಗಿದ್ದು ರಾತ್ರಿ 1 ಗಂಟೆಯಿಂದ ಮಧ್ಯರಾತ್ರಿ 2 ಗಂಟೆ 43 ನಿಮಿಷದವರೆಗೆ. ಇದು ಖಗೋಳ ಜಗತ್ತಲ್ಲೇ ಅತ್ಯಂತ ದೀರ್ಘಾವಧಿ ಸಂಪೂರ್ಣ ಗ್ರಹಣ. ಇನ್ನೊಂದು ಪೂರ್ಣ ಚಂದ್ರಗ್ರಹಣಕ್ಕೆ ನಾವು ಇನ್ಹತ್ತು ವರ್ಷ ಕಾಯಬೇಕಾಗಿದೆ.

    ದಾವಣಗೆರೆ

  • ಖಗೋಳದಲ್ಲಿ ಚಂದ್ರನ ಮೂರು ಅವತಾರ- ನಾಸಾ ವಿಡಿಯೋ ನೋಡಿ

    ಖಗೋಳದಲ್ಲಿ ಚಂದ್ರನ ಮೂರು ಅವತಾರ- ನಾಸಾ ವಿಡಿಯೋ ನೋಡಿ

    ಬೆಂಗಳೂರು: ಖಗೋಳದಲ್ಲಿ 152 ವರ್ಷಗಳ ಬಳಿಕ ಇವತ್ತು ಕಾಣಿಸಿಕೊಂಡ ಖಗ್ರಾಸ ಚಂದ್ರ ಗ್ರಹಣವನ್ನು ವಿಶ್ವದ ಜನ ಅಚ್ಚರಿ, ಆತಂಕದೊಂದಿಗೆ ಬೆರಗುಗಣ್ಣಿನಿಂದ ವೀಕ್ಷಿಸಿದ್ದಾರೆ.

    ಚಂದ್ರನ ಮೂರು ಅವತಾರಗಳಾದ ನೀಲಿ, ದೈತ್ಯ ಹಾಗೂ ತಾಮ್ರವರ್ಣದ ಗ್ರಹಣ ಎಲ್ಲರಿಗೂ ಗೋಚರಿಸಿತು. ಉತ್ತರ ಅಮೆರಿಕ, ಹವಾಯ್, ಆಸ್ಟ್ರೇಲಿಯಾ, ಪಾಶ್ಚಿಮಾತ್ಯ ರಾಷ್ಟ್ರಗಳು, ರಷ್ಯಾದಲ್ಲಿ ಈ ಮೂರು ಗ್ರಹಣಗಳು ಕಾಣಿಸಿತು.

    ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಡಿದ ನೇರ ಪ್ರಸಾರವನ್ನು ವಿಶ್ವಾದ್ಯಂತ ಜನ ಟೀವಿ, ಆನ್‍ಲೈನ್‍ಗಳಲ್ಲಿ ನೋಡಿದ್ರು. ಭಾರತದಲ್ಲಿ ಮೊದಲಿಗೆ ಕೋಲ್ಕತ್ತಾದಲ್ಲಿ ಗ್ರಹಣ ಗೋಚರಿಸಿತು. ನಂತರ ಬೆಂಗಳೂರು, ದೆಹಲಿ, ಅಹಮದಾಬಾದ್, ಗುವಾಹಟಿ, ಭುವನೇಶ್ವರ್, ಹೈದರಾಬಾದ್, ಚೆನ್ನೈಗಳಲ್ಲಿ ಕಾಣಿಸಿತು.  ಇದನ್ನೂ ಓದಿ:ಚಂದ್ರಗ್ರಹಣದ ವೇಳೆ ಏನು ಮಾಡಬಾರದು? ಅನಿಷ್ಟ ಫಲ ಏನು? – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳ್ತಾರೆ ಓದಿ

    ಯಾವ ಸಮಯದಲ್ಲಿ ಏನಾಯ್ತು?
    ಭಾಗಶ: ಚಂದ್ರಗ್ರಹಣ ಶುರು – 5.08.27
    ಪೂರ್ಣ ಚಂದ್ರಗ್ರಹಣ ಆರಂಭ – 6.21.47
    ಗರಿಷ್ಠ ಗ್ರಹಣ – 6.59.49
    ಪೂರ್ಣ ಚಂದ್ರಗ್ರಹಣ ಕೊನೆ – 07.37.51
    ಭಾಗಶಃ ಚಂದ್ರಗ್ರಹಣ ಅಂತ್ಯ -08.41.11
    ಚಂದ್ರಗ್ರಹಣ ಕೊನೆ – 09.38.27

    ಬೆಳಗಾವಿಯಲ್ಲಿ ಕಂಡು ಬಂದ ಚಂದ್ರಗ್ರಹಣ

    ಬೆಂಗಳೂರಿನಲ್ಲಿ ಚಂದ್ರಗ್ರಹಣ:
    ಸಂಜೆ 6.20ರ ಸುಮಾರಿಗೆ ಬೆಂಗಳೂರಿನಲ್ಲಿ ಚಂದ್ರಗ್ರಹಣ ಗೋಚರವಾಯಿತು. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಕಿಲೋಮೀಟರ್ ದೂರ ಕಿಕ್ಕಿರಿದು ಸೇರಿದ್ದ ಜನ ಕೌತುಕದಿಂದ ಗ್ರಹಣ ವೀಕ್ಷಿಸಿದರು. ಜನರ ಅನುಕೂಲಕ್ಕಾಗಿ 7 ಟೆಲಿಸ್ಕೋಪ್ ಜೊತೆಗೆ ಬೈನಾಕುಲರ್ ಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಚಂದ್ರನ ಮೂರು ರೂಪಗಳನ್ನು ಕಂಡ ಜನ ಪುಳಕಿತರಾದರು.

    ದೇವಾಲಯಗಳ ಬಾಗಿಲು ಬಂದ್:
    ರಕ್ತಚಂದ್ರ ಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳ ಬಾಗಿಲು ಬಂದ್ ಆಗಿತ್ತು. ಬೆಂಗಳೂರಿನ ಗವಿ ಗಂಗಾಧರೇಶ್ವರ, ಉಡುಪಿಯ ಶ್ರೀಕೃಷ್ಣ, ಬಳ್ಳಾರಿ ಜಿಲ್ಲೆಯ ವಿಶ್ವವಿಖ್ಯಾತಿ ಹಂಪಿ ವಿರುಪಾಕ್ಷೇಶ್ವರ, ಉಜ್ಜನಿ ಮಠ, ಹಾಸನದ ಬೇಲೂರಿನ ಶ್ರೀ ಚನ್ನಕೆಶವ ದೇಗುಲ, ತಲಕಾವೇರಿಯ ಭಾಗಮಂಡಲದ ಭಾಗಮಂಡಲೇಶ್ವರ, ಸವದತ್ತಿ ಎಲ್ಲಮ್ಮ ಗುಡ್ಡ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ತುಮಕೂರಿನ ವೆಂಕಟೇಶ್ವರ ದೇವಸ್ಥಾನ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ದೇಗುಲಗಳು ಬಂದ್ ಆಗಿದ್ವು. ಗ್ರಹಣ ಮುಗಿದ ನಂತರ ದೇವಾಲಯಗಳ ಶುಚಿಕಾರ್ಯ ನಡೆಯಲಿದೆ.

     

    ಭೂಕಂಪ ಆಯ್ತು:
    ಗ್ರಹಣದಿಂದಾಗಿ ಗಂಡಾಂತರ ಏನೂ ಆಗಲ್ಲ ಎಂದು ವಿಜ್ಞಾನ ಲೋಕವಾದಿಸಿದರೂ ಕಾಕತಾಳೀಯ ಎಂಬಂತೆ ತಜಕಿಸ್ತಾನದಲ್ಲಿ ಭೂಕಂಪವಾಗಿದೆ. ಮಧ್ಯಾಹ್ನ 6.1ರಷ್ಟು ತೀವ್ರತೆ ದಾಖಲಾಗಿದೆ. ಇದರ ಪರಿಣಾಮ 12.40ರ ಸುಮಾರಿಗೆ ಕಾಶ್ಮೀರ ಕಣಿವೆ, ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಮಿ ನಡುಗಿದೆ. ಜನ ಆತಂಕಗೊಂಡು ಸುರಕ್ಷತೆಗಾಗಿ ಹೊರಗಡೆ ಬಂದಿದ್ದಾರೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಅಫ್ಘಾನಿಸ್ತಾನ-ತಜಕಿಸ್ತಾನದ ಗಡಿಭಾಗದಲ್ಲಿ ಹಿಂದೂಕುಶ್ ಪರ್ವತಗಳ ಅಡಿಯಲ್ಲಿ 190 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.  ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ