Tag: Blind Woman

  • ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯಿಂದ ಪೊಲೀಸರಿಗೆ ದೂರು – ಬೆಡ್‌ ಮೇಲೆಯೇ ಪತಿ ಶವ ಪತ್ತೆ!

    ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯಿಂದ ಪೊಲೀಸರಿಗೆ ದೂರು – ಬೆಡ್‌ ಮೇಲೆಯೇ ಪತಿ ಶವ ಪತ್ತೆ!

    ವಾಷಿಂಗ್ಟನ್: ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಬೆಡ್ ಮೇಲೆಯೇ ಪತಿ ಶವವಾಗಿ ಪತ್ತೆಯಾಗಿರುವ ಪ್ರಸಂಗ ಅಮೆರಿಕದಲ್ಲಿ ನಡೆದಿದೆ.

    76 ವರ್ಷದ ವ್ಯಕ್ತಿಯೋರ್ವ ಗುಂಡಿನ ದಾಳಿಗೆ ಒಳಗಾಗಿ ಬೆಡ್ ಮೇಲೆ ಸಾವನ್ನಪ್ಪಿದ್ದಾನೆ. ಆದರೆ ಈ ವಿಚಾರ ಅಂಧ ಪತ್ನಿಗೆ ಗೊತ್ತಾಗಿಲ್ಲ. ತನ್ನ ಪತಿ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ನೋಡಿದಾಗಲೇ ತನ್ನ ಪತಿ ಕೊಲೆಯಾಗಿದ್ದಾನೆ ಎಂದು ಅಂಧ ಪತ್ನಿಗೆ ತಿಳಿದುಬಂದಿದೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ದೂರು ಆಧರಿಸಿ ಪೊಲೀಸರು ಕಳೆದ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಅಮೆರಿಕಾದ ಲೂಸಿಯಾನದ ಲೀವಿ ರಸ್ತೆಯಲ್ಲಿರುವ ದಂಪತಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು ಅಲ್ಲೇ ಇರುವುದನ್ನು ಗಮನಿಸಿದ ಪೊಲೀಸರು ನಂತರ ಮನೆಯನ್ನು ಪರಿಶೀಲಿಸಿದಾಗ ಕಿಟಕಿ ಗಾಜು ಒಡೆದು ಹೋಗಿರುವುದು ಕಂಡುಬಂದಿದೆ. ಆರೋಪಿಗಳು ಅನೇಕ ಬಾರಿ ಗುಂಡು ಹಾರಿಸಿರುವುದರಿಂದ ವ್ಯಕ್ತಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ನೀಡದಿದ್ದಕ್ಕೆ ಅಖಿಲೇಶ್‌ ಯಾದವ್‌ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್

    ಈ ಪ್ರಕರಣ ಸಂಬಂಧ ಇದೀಗ ತನಿಖೆ ಆರಂಭಿಸಲಾಗಿದೆ ಎಂದು ನಾಚಿಟೋಚೆಸ್ ಪ್ಯಾರೀಷ್ ಶೆರಿಫ್ ಕಚೇರಿ ತಿಳಿಸಿದೆ. ಆದರೆ ಇದುವರೆಗೂ ಯಾರನ್ನು ಸಹ ಬಂಧಿಸಲಾಗಿಲ್ಲ.

  • ‘ಭಾರತದ ಶ್ರೀಮಂತ ಮಹಿಳೆ’ಯಿಂದ ಸೋನು ಫೌಂಡೇಶನ್‍ಗೆ 15,000ರೂ. ದೇಣಿಗೆ

    ‘ಭಾರತದ ಶ್ರೀಮಂತ ಮಹಿಳೆ’ಯಿಂದ ಸೋನು ಫೌಂಡೇಶನ್‍ಗೆ 15,000ರೂ. ದೇಣಿಗೆ

    ಮುಂಬೈ: ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಿವುಡ್ ನಟ ಸೋನು ಸೂದ್ ಫೌಂಡೇಶನ್‍ಗೆ ಅಂಧ ಮಹಿಳೆ ದೇಣಿಗೆ ನೀಡಿದ್ದಾರೆ.

    ಬುಡ ನಾಗಲಕ್ಷ್ಮೀ ಎಂಬ ಅಂಧ ಮಹಿಳೆ ತಮ್ಮ 5 ತಿಂಗಳ ಪಿಂಚಣಿ ಹಣದಲ್ಲಿ 15 ಸಾವಿರ ರೂ. ಹಣವನ್ನು ಸೋನು ಫೌಂಡೇಶನ್‍ಗೆ ನೀಡಿದ್ದಾರೆ. ಜೊತೆಗೆ ಭಾರತದ ಶ್ರೀಮಂತ ಮಹಿಳೆ ಎಂದು ಸೋನು ಸೂದ್ ಕರೆದಿದ್ದಾರೆ.

    ಆಂಧ್ರದಲ್ಲಿ ಸೋನು ಸೂದ್ ಫೌಂಡೇಶನ್ ವತಿಯಿಂದ ಆಮ್ಲಜನಕ ಘಟಕ ಸ್ಥಾಪಿಸಲಾಗುತ್ತಿದ್ದು, ಜುಲೈ 23ರಂದು ಇದನ್ನು ಉದ್ಘಾಟಿಸಲು ಬುಡ ನಾಗಲಕ್ಷ್ಮಿಯವರನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಸೋನು ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಬುಡ ನಾಗಲಕ್ಷ್ಮಿ ಎಂಬ ಅಂಧ ಮಹಿಳೆ ತಮ್ಮ 5 ತಿಂಗಳ ಪಿಂಚಣಿ ಹಣದಲ್ಲಿ 15,000ರೂ ದೇಣಿಗೆ ನೀಡಿದ್ದು, ಜುಲೈ 23ರಂದು ಆಂಧ್ರ ಪ್ರದೇಶದಲ್ಲಿ ಆಮ್ಲಜನಕ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ಈ ಕಾರ್ಯಕ್ರಮದಲ್ಲಿ ಐಟಿ ಗೌತಮ್ ರೆಡ್ಡಿ, ಚಂದ್ರಾಧರ್ ಬಾಬು, ಜಿಲ್ಲಾಧಿಕಾರಿ ಪಾಲ್ಗೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

  • ಅಂಧ ಯುವತಿಗೆ ಬಾಳು  ಕೊಟ್ಟ ಯುವಕ -ಸಂಭ್ರಮದಿಂದ ನಡೆಯಿತು ಮದುವೆ

    ಅಂಧ ಯುವತಿಗೆ ಬಾಳು ಕೊಟ್ಟ ಯುವಕ -ಸಂಭ್ರಮದಿಂದ ನಡೆಯಿತು ಮದುವೆ

    ಕೋಲಾರ: ತಾನು ಮದುವೆಯಾಗುವ ಹುಡುಗಿ ಸುಂದರವಾಗಿರಬೇಕು, ಕೈ ತುಂಬಾ ಹಣ-ಅಂತಸ್ತು ತರಬೇಕು ಎನ್ನುವ ಜನಗಳ ನಡುವೆ ಯಾವುದನ್ನು ಲೆಕ್ಕಿಸದೆ ಅಂಧ ಹುಡುಗಿಯನ್ನು ಮದುವೆಯಾಗುವ ಮೂಲಕ ಸಮಾಜಕ್ಕೆ ವ್ಯಕ್ತಿಯೊಬ್ಬರು ಮಾದರಿಯಾದ್ದಾರೆ.

    ಹೌದು, ಕೋಲಾರದ ಬಯಲು ಬಸವೇಶ್ವರ ದೇವಾಲಯದಲ್ಲಿಂದು ಜಿಲ್ಲೆಯ ಮಾಲೂರು ತಾಲೂಕಿನ ಅರಳೇರಿ ಗ್ರಾಮದ ರುದ್ರಮ್ಮ ಹಾಗೂ ಬಾಗಲಕೋಟೆ ಮೂಲದ ಸಂಗಮೇಶ ಮದುವೆ ಸಂಭ್ರಮದ ನಡೆಯಿತು.

    ಹುಟ್ಟಿನಿಂದ ಅಂಧರಾಗಿರುವ ರುದ್ರಮ್ಮ ಅವರು ಓದಿನಲ್ಲಿ ಜಾಣೆಯಾಗಿದ್ದು, ಅಂಧರಿಗಾಗಿ ನಡೆಸುವ ಬೆಂಗಳೂರಿನ ವಸತಿ ಶಾಲೆಯಲ್ಲಿ ಸಂಗೀತ ಮತ್ತು ಇಂಗ್ಲೀಷ್ ಭಾಷೆ ಕಲಿಸುವ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಶಿಕ್ಷಣವನ್ನು ಅಭ್ಯಾಸ ಮಾಡುತ್ತಿರುವಾಗಲೇ ಬಸವರಾಜು ಎಂಬುವರ ಮೂಲಕ ರುದ್ರಮ್ಮಳಿಗೆ ಉತ್ತರ ಕರ್ನಾಟಕದ ಬಾಗಲಕೋಟೆ ಮೂಲದ ಖಾಸಗಿ ಕಂಪೆನಿಯಲ್ಲಿ ಸೇಲ್ಸ್ ಮೆನ್ ಆಗಿರುವ ಸಂಗಮೇಶ್ ಪರಿಚಯವಾಗಿ ಮದುವೆ ಸಹ ಮಾಡಿಕೊಂಡಿದ್ದಾರೆ.

    ಇನ್ನೂ ಹುಟ್ಟು ಕುರುಡಳಾಗಿರುವ ರುದ್ರಮ್ಮ ಅವರು ಕೋಲಾರ ನಗರದಲ್ಲಿನ ವಿಮಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಗಮೇಶ ಸ್ನೇಹಿತರ ಮೂಲಕ ರುದ್ರಮ್ಮಳನ್ನು ಮದುವೆಯಾಗುವ ಕುರಿತು ತಿಳಿಸಿದ್ದ. ಎರಡೂ ಕುಟುಂಬಗಳವರು ಚರ್ಚಿಸಿ ನಿರ್ಧರಿಸಿದ ಬಳಿಕ ರುದ್ರಮ್ಮ, ಸಂಗಮೇಶ ಅವರ ಮದುವೆ ನೂರಾರು ಜನರ ಸಮ್ಮುಖದಲ್ಲಿ ಸೋಮವಾರ ಕೋಲಾರದಲ್ಲಿನ ಬಯಲು ಬಸವೇಶ್ವರ ದೇವಾಲಯದಲ್ಲಿ ಸರಳವಾಗಿ ನಡೆಯಿತು.

    ಈ ಕುರಿತು ಮಾತನಾಡಿದ ರುದ್ರಮ್ಮ, ಚಿಕ್ಕಂದಿನಲ್ಲಿ ಕಳೆದುಕೊಂಡ ತನ್ನ ತಾಯಿ ಈ ಸಂಭ್ರಮ ನೋಡುವಂತಿದ್ದರೆ ಚೆನ್ನಾಗಿತ್ತು. ಇದೀಗ ನನ್ನ ತಾಯಿ ಜಾಗದಲ್ಲಿ ಗಂಡ ಸಂಗಮೇಶ್ ಇದ್ದಾರೆ ಅವರು ನನ್ನ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಇಬ್ಬರ ಮದುವೆಗೆ ಸಾಕ್ಷಿಯಾದ ಸಂಬಂಧಿಕರು, ಹಿತೈಷಿಗಳು ಮನಸಾರೆ ಶುಭ ಕೋರಿದ್ದು, ದೃಷ್ಟಿಯಿಲ್ಲದ ಯುವತಿಯೊಬ್ಬಳಿಗೆ ಬದುಕು ಕೊಟ್ಟ ಸಂಗಮೇಶ್ ಅವರ ಹೃದಯವಂತಿಕೆಯನನ್ನು ಹಲವರು ಮೆಚ್ಚಿದ್ದಾರೆ.