Tag: Blackbuck

  • ಮಾಜಿ‌ ಸಚಿವರ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ 30 ವನ್ಯಜೀವಿಗಳ ಪೈಕಿ 2 ಪ್ರಾಣಿ ಸಾವು

    ಮಾಜಿ‌ ಸಚಿವರ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ 30 ವನ್ಯಜೀವಿಗಳ ಪೈಕಿ 2 ಪ್ರಾಣಿ ಸಾವು

    ದಾವಣಗೆರೆ: ಇತ್ತೀಚೆಗಷ್ಟೇ ಮಾಜಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ (SS Mallikarjun) ಒಡೆತನದ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮಹೌಸ್‌ನಲ್ಲಿ ಪತ್ತೆ ಆಗಿದ್ದ ವನ್ಯ ಜೀವಿಗಳ ಪೈಕಿ ಕೃಷ್ಣಮೃಗ (Blackbuck) ಹಾಗೂ ಕಾಡುಹಂದಿ (Wild Boar) ಮೃತಪಟ್ಟಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ.

    ಡಿ.21ಕ್ಕೆ ಕಲ್ಲೇಶ್ವರ ಮಿಲ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆ ಒಟ್ಟು 30 ಜೀವಿಗಳನ್ನು ವಶಕ್ಕೆ ಪಡೆದು, ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿತ್ತು. ಜೊತೆಗೆ ಘಟನೆಯ ಕುರಿತು ಸಂಪಣ್ಣ, ಕರಿಬಸವಯ್ಯ, ಸೆಂಥಿಲ್‌ ಹಾಗೂ ಮಿಲ್‌ನ ಮಾಲೀಕರಾದ ಮಾಜಿ ಸಚಿವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

    ಇದಾದ ಬಳಿಕ ಒಟ್ಟು 30 ವನ್ಯಜೀವಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ಅರಣ್ಯ ಇಲಾಖೆ ಕಲ್ಲೇಶರ ಮಿಲ್ ಹಿಂಭಾಗದ ಫಾರ್ಮ್‌ಹೌಸ್‌ನಿಂದ ವಶಕ್ಕೆ ಪಡೆದು, ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಮಿಲ್‌ನಲ್ಲಿ ಪತ್ತೆಯಾದ 6 ಕಾಡು ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಇನ್ನುಳಿದ 22 ಕಾಡು ಪ್ರಾಣಿಗಳನ್ನು ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಬಿಡಲಾಗಿತ್ತು. ಆ ವನ್ಯ ಜೀವಿಗಳಲ್ಲಿ 11 ಕೃಷ್ಣಮೃಗ, 7 ಜಿಂಕೆ, 2 ನರಿ, 3 ಮುಂಗುಸಿ, 7 ಕಾಡು ಹಂದಿಗಳಿತ್ತು.

    ಈ ಪೈಕಿ ಈಗಾಗಲೇ ಮೃತಪಟ್ಟಿದ್ದ ಕಾಡು ಹಂದಿಯನ್ನು ಕೋರ್ಟ್ ಆದೇಶದಂತೆ ವಿಲೇವಾರಿ ಮಾಡಲಾಗಿದೆ. ಅಲ್ಲದೆ, ಸೋಮವಾರ ಒಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಅದರ ದೇಹ ವಿಲೇವಾರಿಗಾಗಿ ನ್ಯಾಯಾಲಯಕ್ಕೆ ಅರಣ್ಯ ಇಲಾಖೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಇನ್ನುಳಿದಂತೆ ಇದೀಗ ಮೃತಪಟ್ಟಿರುವ ಒಂದು ಕೃಷ್ಣಮೃಗ ಹೊರತುಪಡಿಸಿ, 10 ಕೃಷ್ಣಮೃಗ ಹಾಗೂ 7 ಜಿಂಕೆಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ಅನುಮತಿ ದೊರೆತರೆ, ಅವುಗಳನ್ನು ಸಹ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ: ಡಿಕೆಶಿ

    ನ್ಯಾಯಾಲಯದ ಆದೇಶದಂತೆ ಕಿರು ಮೃಗಾಲಯದಲ್ಲಿ ಇರಿಸಲಾಗಿದೆ. ಕೋರ್ಟ್ ಅನುಮತಿ ನೀಡಿದ ಪ್ರಾಣಿಗಳನ್ನು ಕಾಡಿಗೆ ಬಿಡಲಾಗಿದೆ. ಇನ್ನುಳಿದ ಪ್ರಾಣಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ದೇಶನ ನೀಡಿದರೆ, ಅವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುತ್ತೇವೆ. ಡಿಎಫ್ಓ ಜಗನ್ನಾಥ್ ಅವರು ಪ್ರಾಣಿಗಳನ್ನು ಸಾವ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ಇದನ್ನೂ ಓದಿ: ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ – ಧೀರೇಂದ್ರ ಶಾಸ್ತ್ರಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಜಯಪುರದಲ್ಲಿ ವಿಸ್ಮಯಕಾರಿಯಾಗಿ ಹೆಚ್ಚುತ್ತಿದೆ ಕೃಷ್ಣ ಮೃಗಗಳ ಸಂತತಿ

    ವಿಜಯಪುರದಲ್ಲಿ ವಿಸ್ಮಯಕಾರಿಯಾಗಿ ಹೆಚ್ಚುತ್ತಿದೆ ಕೃಷ್ಣ ಮೃಗಗಳ ಸಂತತಿ

    ಬೆಂಗಳೂರು: ಸೊಸೈಟಿ ಫಾರ್ಟೆ ಪ್ರೋಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಸಂಸ್ಥಾಪಕ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಪುತ್ರ ಧ್ರುವ ಪಾಟೀಲ್ ವಿಜಯಪುರದ ಅಪರೂಪದ ವನ್ಯಜೀವಿಗಳನ್ನು ಬೆಳಕಿಗೆ ತರುತ್ತಿದ್ದಾರೆ. ಇದೀಗ ಜಿಲ್ಲೆಯ ಇಂಡಿ ತಾಲೂಕು ಕೃಷ್ಣ ಮೃಗಗಳ ಆವಾಸಸ್ಥಾನವಾಗಿರುವುದನ್ನು ಪತ್ತೆ ಮಾಡಿದ್ದಾರೆ. ವಿಶೇಷವಾಗಿ ಇಂಡಿ ತಾಲೂಕನ್ನು ‘ಕೃಷ್ಣ ಮೃಗಗಳ ಪತ್ಯೇಕ ವನ್ಯಜೀವಿ ತಾಣ’ವನ್ನಾಗಿ ರೂಪಿಸಬೇಕೆಂದು ಹೇಳಿದರು.

    ಈ ಕುರಿತು ಮಾತನಾಡಿದ ಧ್ರುವ ಪಾಟೀಲ್, ಇಂಡಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೇವಲ ಎರಡು ಕೃಷ್ಣ ಮೃಗಗಳಿದ್ದವು. ಆದರೆ ಇದೀಗ ಇವುಗಳ ಸಂಖ್ಯೆ ವಿಸ್ಮಯಕಾರಿಯಾಗಿ 300ಕ್ಕೆ ಏರಿಕೆಯಾಗಿವೆ. ಕೃಷ್ಣ ಮೃಗಗಳು ಇಷ್ಟೊಂದು ಕಡಿಮೆ ಸಮಯದಲ್ಲಿ ಗಣನೀಯವಾಗಿ ಏರಿಕೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ತನ್ನದೆ ಆದ ಇತಿಹಾಸ ಅಥವಾ ಅತಿಯಾದ ತಾಪಮಾನಕ್ಕೆ ಹೆಸರುವಾಸಿಯಾದ ಜಿಲ್ಲೆ ವಿಜಯಪುರದಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾರಾಟಕ್ಕಿದ್ದಾನೆ ವರ – ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಸಿಕ್ತಾನೆ ವರ 

    ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳನ್ನು ರಕ್ಷಿಸಲು ವಿಜಯಪುರದಲ್ಲಿ ರಾಜ್ಯ ಅರಣ್ಯ ಇಲಾಖೆಯೊಂದಿಗೆ ಸೊಸೈಟಿ ಫಾರ್ ಪ್ರೋಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಪರಿಣಾಮಕಾರಿ ಮಾರ್ಗಗಳನ್ನು ರೂಪಿಸಿದೆ. ಇಂಡಿ ತಾಲೂಕಿನ ಐದು ಗ್ರಾಮಗಳಲ್ಲಿ 300 ಕ್ಕೂ ಹೆಚ್ಚು ಕೃಷ್ಣಮೃಗಗಳು(antilopecervicapra) ಕಾಣಿಸಿಕೊಂಡಿದ್ದು, ಇವುಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

    ಹುಲಿಗಳು ಮತ್ತು ಆನೆಗಳಂತೆಯೇ ವನ್ಯಜೀವಿ(ರಕ್ಷಣೆ) ಕಾಯಿದೆ 1972, 1ರ ಅಡಿಯಲ್ಲಿ ಕೃಷ್ಣಮೃಗಗಳು ಕೂಡ ಇದೆ ಕಾನೂನಿನ ಅಡಿಯಲ್ಲಿ ಸಂರಕ್ಷಿತವಾಗಿವೆ. ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳ ಉಳಿವು ಜಿಲ್ಲೆಯ ರೈತರೊಂದಿಗೆ ಸಹಬಾಳ್ವೆಯ ಮೇಲೆ ಅವಲಂಬಿತವಾಗಿದೆ. ಇಲ್ಲಿಯವರೆಗೆ ಕೃಷ್ಣಮೃಗಗಳಿಗಾಗಿ ಯಾವುದೇ ಸಂರಕ್ಷಿತ ಮೀಸಲು ಇಲ್ಲದಿರುವುದರಿಂದ ಕೃಷ್ಣಮೃಗಗಳು ಬೇಟೆಗೆ ಗುರಿಯಾಗುತ್ತವೆ. ಕೃಷ್ಣಮೃಗಗಳು ದ್ರಾಕ್ಷಿತೋಟಗಳಿಗೆ ಹಾರಿ ಬೆಳೆಗಳನ್ನು ತಿನ್ನುವುದರಿಂದ ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಎಂದರು. ಇದನ್ನೂ ಓದಿ: ಹರ್ ಘರ್ ತಿರಂಗ: ರಾಷ್ಟ್ರಧ್ವಜವನ್ನ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ ಭಾರತೀಯ ಅಂಚೆ ಸೇವೆ 

    ವಿಜಯಪುರ ಜಿಲ್ಲೆಯ ರೈತರು ಇಲ್ಲಿಯವರೆಗೂ ಕೃಷ್ಣಮೃಗಗಳ ಸ್ವಚ್ಛಂದ ಬದುಕಿನಲ್ಲಿ ಹಸ್ತಕ್ಷೇಪ ಮಾಡಿಲ್ಲ. ಏಕೆಂದರೆ ಅವುಗಳು ಧಾರ್ಮಿಕವಾಗಿ ಮಹತ್ವದ್ದಾಗಿವೆ. ದೇವರಾದ ಕೃಷ್ಣನ ಮೃಗಗಳು ಎಂದೇ ಪರಿಗಣಿಸಲಾಗಿದೆ. ಆದರೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರಾಣಿಗಳು ತಮ್ಮ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುವುದನ್ನು ತಡೆಯಲು ರೈತರು ಈಗ ವಿದ್ಯುತ್ ಬೇಲಿಗಳನ್ನು ಅಳವಡಿಸುತ್ತಿದ್ದಾರೆ. ಇದು ಭವಿಷ್ಯದಲ್ಲಿ ಬ್ಲ್ಯಾಕ್‍ಬಕ್‍ಗಳ ಪಾಲಿಗೆ ಮಾರಣಾಂತಿಕ ಗಾಯಕ್ಕೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ನಾಡಿನತ್ತ ಹೆಜ್ಜೆ ಹಾಕುತ್ತಿರುವ ಜಿಂಕೆ, ಕೃಷ್ಣಮೃಗಗಳು – ನಾಯಿ ದಾಳಿಗೆ ಸಾವು

    ನಾಡಿನತ್ತ ಹೆಜ್ಜೆ ಹಾಕುತ್ತಿರುವ ಜಿಂಕೆ, ಕೃಷ್ಣಮೃಗಗಳು – ನಾಯಿ ದಾಳಿಗೆ ಸಾವು

    ಕೋಲಾರ: ಆಹಾರ ನೀರು ಹರಸಿ ನಾಡಿನತ್ತ ಹೆಜ್ಜೆ ಹಾಕುತ್ತಿರುವ ಜಿಂಕೆ, ಕೃಷ್ಣ ಮೃಗಗಳು ನಾಯಿ ದಾಳಿಯಿಂದ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ನಾಯಿಗಳ ದಾಳಿಗೆ ತುತ್ತಾಗಿ ಮೃತಪಡುತ್ತಿರುವ ಜಿಂಕೆಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಕೋಲಾರದಲ್ಲಿ ಹೆಚ್ಚಾಗುತ್ತಲೆ ಇದೆ. ಕೋಲಾರ ಜಿಲ್ಲೆಯ ಕೆಜಿಎಫ್ ಸುತ್ತಮುತ್ತ ಸಾವಿರಾರು ಕೃಷ್ಣ ಮೃಗಗಳು ಹಾಗೂ ಜಿಂಕೆಗಳು ವಾಸ ಮಾಡುತ್ತಿದ್ದು, ಅವುಗಳಿಗೆ ರಕ್ಷಣೆ ಇಲ್ಲದಂತ್ತಾಗಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ಲೇಔಟ್‍ನಲ್ಲಿ ಗುಡಿಸಲು ನಿರ್ಮಾಣ

    ಬಂಗಾರಪೇಟೆ ತಾಲ್ಲೂಕಿನ ದೊಡ್ಡ ವಲಗಮಾದಿ ಹಾಗೂ ಕೆಜಿಎಫ್ ನಗರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಜಿಂಕೆಗಳ ಸಾವು ಹೆಚ್ಚಾಗುತ್ತಲೆ ಇದೆ. ಮೇವಿಗಾಗಿ ನಗರ ವ್ಯಾಪ್ತಿಗೆ ಬಂದಾಗ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದು, ಸಾವಿರಾರು ಜಿಂಕೆಗಳು ವಾಸವಿರುವ ಅರಣ್ಯ ಪ್ರದೇಶದಲ್ಲಿ ನಾಯಿಗಳ ದಾಳಿಗೆ ಸಾವನ್ನಪ್ಪುತ್ತಿದ್ರು ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸುತ್ತಿದೆ. ತಲೆ ಕೆಡೆಸಿಕೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

  • ಹಾವೇರಿಯಲ್ಲಿ ಕೃಷ್ಣ ಮೃಗಗಳ ದಾಳಿಗೆ ರೈತರ ಬೆಳೆನಾಶ

    ಹಾವೇರಿಯಲ್ಲಿ ಕೃಷ್ಣ ಮೃಗಗಳ ದಾಳಿಗೆ ರೈತರ ಬೆಳೆನಾಶ

    ಹಾವೇರಿ: ರೈತರು ಬೆಳೆದ ಬೆಳೆ ಕೃಷ್ಣ ಮೃಗಗಳ ದಾಳಿಗೆ ಹಾಳಾಗಿ ಜಿಲ್ಲೆಯ ಹಲವಾರು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ದಿನದಿಂದ ದಿನಕ್ಕೆ ಜಿಲ್ಲೆಯ ದೇವಗಿರಿ ಯಲ್ಲಾಪುರ, ನಾಗನೂರು, ಮೊಟೇಬೆನ್ನೂರು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಕೃಷ್ಣಮೃಗಗಳ ಕಾಟ ಹೆಚ್ಚಾಗುತ್ತಿದೆ. ರೈತರು ಬೆಳೆದ ಬೆಳೆಯನ್ನು ತಿಂದು ಹಾಳುಮಾಡುತ್ತಿವೆ. ಇದರಿಂದ ಅನ್ನದಾತ ಮತ್ತೆ ಸಂಕಷ್ಟಕ್ಕೆ ಈಡಾಗಿದ್ದಾನೆ.

    13 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳಾದ ಹತ್ತಿ, ಶೇಂಗಾ, ಸೋಯಾಬಿನ್, ಮಕ್ಕೆಜೋಳದ ಬೆಳೆಗಳನ್ನು ಸಂಪೂರ್ಣವಾಗಿ ತಿಂದು ಹಾಕಿವೆ. ಈ ವಿಚಾರವನ್ನು ಹಲವಾರು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೆ ಯಾವ ಅಧಿಕಾರಿಗಳೂ ಸಹ ಜಮೀನುಗಳಿಗೆ ಭೇಟಿ ನೀಡಿಲ್ಲ.

    ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗುತ್ತಿದೆ. ರೈತರು ಕೂಡ ಬೆಳೆ ಚೆನ್ನಾಗಿ ಬರುವ ನಿರೀಕ್ಷೆಯನ್ನು ಹೊದಿದ್ದಾರೆ. ಆದರೆ ರೈತರ ಜಮೀನುಗಳಲ್ಲಿ ದಿನದಿಂದ ದಿನಕ್ಕೆ ಕೃಷ್ಣಮೃಗಗಳ ಕಾಟ ಹೆಚ್ಚಾಗುತ್ತಿದೆ. ಹಾವೇರಿ ಸಮೀಪದ ದೇವಗಿರಿ ಯಲ್ಲಾಪುರ, ನಾಗನೂರು, ಮೊಟೇಬೆನ್ನೂರು ಸೇರಿದಂತೆ ವಿವಿಧ ಗ್ರಾಮದ ರೈತರ ಬೆಳೆಗಳನ್ನು ಜಿಂಕೆಗಳು ದಿನನಿತ್ಯ ತಿಂದು ಹಾಳುಮಾಡುತ್ತಿವೆ.

    ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಿ ಬೆಳೆಯನ್ನು ಈಗಾಗಲೇ ಎರಡು ಬಾರಿ ಬಿತ್ತನೆ ಮಾಡಿದ್ದೇವೆ. ಈಗ ಮತ್ತೊಮ್ಮೆ ಬಿತ್ತನೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

     

  • ಜೈಲಿನಲ್ಲಿದ್ದಾಗ ನಿರ್ಮಾಪಕರ ಬಗ್ಗೆ ನೋವಾಗಲಿಲ್ವಾ ಎಂದು ಪ್ರಶ್ನಿಸಿದ್ದಕ್ಕೆ ಖಡಕ್ಕಾಗಿ ಉತ್ತರಿಸಿದ ಸಲ್ಮಾನ್!

    ಜೈಲಿನಲ್ಲಿದ್ದಾಗ ನಿರ್ಮಾಪಕರ ಬಗ್ಗೆ ನೋವಾಗಲಿಲ್ವಾ ಎಂದು ಪ್ರಶ್ನಿಸಿದ್ದಕ್ಕೆ ಖಡಕ್ಕಾಗಿ ಉತ್ತರಿಸಿದ ಸಲ್ಮಾನ್!

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟಿಸಿದ ರೇಸ್-3 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾದ ಮೇಲೆ ಸಲ್ಮಾನ್ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಪತ್ರಕರ್ತರ ಮೇಲೆ ಗುಡುಗಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ನಟನೆಯ ರೇಸ್-3 ಟ್ರೇಲರ್ ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಆಗ ಪತ್ರಕರ್ತರು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನೀವು ಅಪರಾಧಿಯಾಗಿ ಜೈಲಿನಲ್ಲಿದ್ದಿರಿ. ಆಗ ನಿಮಗೆ ನಿಮ್ಮ ನಿರ್ಮಾಪಕರು ಹಾಗೂ ಅವರ ಹಣದ ಬಗ್ಗೆ ನಿಮಗೆ ನೋವಾಗಲಿಲ್ಲವೇ ಎಂದು ಸಲ್ಮಾನ್ ಖಾನ್‍ಗೆ ಪ್ರಶ್ನಿಸಿದ್ದರು.

    ಈ ಪ್ರಶ್ನೆಗೆ ಸಲ್ಮಾನ್ ಖಾನ್ ರೊಚ್ಚಿಗೆದ್ದು, ನಾನು ಜೀವನ ಪೂರ್ತಿ ಜೈಲಿನಲ್ಲೇ ಇರುತ್ತೇನೆ ಎಂದು ನೀವೆಲ್ಲಾ ಅಂದುಕೊಂಡಿದ್ದೀರ ಎಂದು ಸಲ್ಮಾನ್ ಖಾನ್ ಖಡಕ್ ಉತ್ತರ ನೀಡುವ ಮೂಲಕ ಪತ್ರಕರ್ತರಿಗೆ ಮರು ಪ್ರಶ್ನಿಸಿದ್ದಾರೆ. ಸಲ್ಮಾನ್ ಪ್ರಶ್ನೆಗೆ ಪತ್ರಕರ್ತರು ಹಾಗೇನು ಇಲ್ಲ ಎಂದು ಉತ್ತರಿಸಿದ್ದಾರೆ. ಆಗ ಸಲ್ಮಾನ್ ಖಾನ್, ‘ಥ್ಯಾಂಕ್ಯೂ ನಾನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

    1998ರ ಸೆಪ್ಟೆಂಬರ್ 26 ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ `ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣ ಮೃಗದ ಬೇಟೆ ಆಡಿದ್ದರು. ಸಲ್ಮಾನ್ ಬೇಟೆ ಆಡುವ ವೇಳೆ ಸೈಫ್ ಅಲಿ ಖಾನ್, ತಬು, ಸೊನಾಲಿ ಬೇಂದ್ರೆ, ನೀಲಮ್ ಸಹ ಹಾಜರಿದ್ದರು. ಅಳಿವಿನಂಚಿನಲ್ಲಿರುವ ಕೃಷ್ಣ ಮೃಗ ಬೇಟೆಗೆ ನಟರು ಜಿಪ್ಸಿ ಬಳಸಿದ್ದರು. ಅಕ್ರಮ ಶಸ್ತ್ರಾಸ್ತ್ರ, ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಸಲ್ಮಾನ್ ಸೇರಿ ಎಲ್ಲರ ಮೇಲೆ ನಾಲ್ಕು ಕೇಸ್ ದಾಖಲಾಗಿತ್ತು.

    ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆ ತೀರ್ಪು ನೀಡಿತ್ತು. ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯ ಪ್ರಮಾಣವನ್ನು ಜೋದ್‍ಪುರ ಕೋರ್ಟ್ ಪ್ರಕಟಿಸುತ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಾಳದಲ್ಲಿ ನಡುಕ ಆರಂಭವಾಗಿತ್ತು.

    ಸಲ್ಮಾನ್ ಖಾನ್ ಗಾಗಿ ಈಗಾಗಲೇ ಹಲವು ನಿರ್ಮಾಪಕರು 500 ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿದ್ದರು. ಒಂದು ವೇಳೆ ಸಲ್ಮಾನ್ ಖಾನ್‍ಗೆ ಜಾಮೀನು ಸಿಗದೇ ಇದ್ದರೆ ನಿರ್ಮಾಪಕರು ಕೋಟ್ಯಾಂತರ ರೂ. ನಷ್ಟ ಅನುಭವಿಸಬೇಕಿತ್ತು. ಕೃಷ್ಣಮೃಗ ಬೇಟೆ ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಎಲ್ಲಿಯೂ ಮಾತನಾಡಿರಲಿಲ್ಲ. ಹಾಗಾಗಿ ಪತ್ರಕರ್ತರು ರೇಸ್-3 ಸುದ್ದಿಗೋಷ್ಠಿ ವೇಳೆ ಸಲ್ಮಾನ್ ಖಾನ್ ಅವರಲ್ಲಿ ಈ ಮೇಲಿನ ಪ್ರಶ್ನೆಯನ್ನು ಕೇಳಿದ್ದರು.

    ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ರಮೇಶ್ ಎಸ್.ತೌರಾನಿ ಮತ್ತು ಸಲ್ಮಾನ್ ಖಾನ್ ಬಂಡವಾಳ ವಿನಿಯೋಗಿಸಿದ್ದಾರೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ ಮತ್ತು ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಸಿನಿಮಾ ಈ ಬಾರಿಯ ಈದ್ ಗೆ ರಿಲೀಸ್ ಆಗಲಿದೆ.

  • ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

    ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

    ಜೋಧಪುರ: ಕೃಷ್ಣಮೃಗ ಭೇಟೆಯಾಡಿದ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಮೊದಲ ದಿನ ಯಾವುದೇ ಆಹಾರ ಸೇವಿಸಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

    ಜೈಲಿನ ಮೊದಲ ರಾತ್ರಿ ಊಟ ದಾಲ್ ರೋಟಿಯನ್ನು 52 ವರ್ಷದ ಸಲ್ಮಾನ್ ಖಾನ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ಹೊರಗಿನಿಂದಲೂ ಊಟವನ್ನು ತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

    ಜೈಲಿಗೆ ಬಂದಾಗ ಸಲ್ಮಾನ್‍ಗೆ ರಕ್ತದ ಒತ್ತಡ ಹೆಚ್ಚಾಗಿತ್ತು. ಸ್ವಲ್ಪ ಸಮಯದ ನಂತರ ದೇಹ ಸಹಜ ಸ್ಥಿತಿಗೆ ಮರಳಿತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜೈಲಿನ ಅಧೀಕ್ಷಕ ವಿಕ್ರಮ್ ಸಿಂಗ್ ತಿಳಿಸಿದರು. ಇದನ್ನೂ ಓದಿ: ಕೋಟಿ ಕೋಟಿ ಲಾಸ್ – ಸಲ್ಮಾನ್ ಗೆ ಶಿಕ್ಷೆ ಪ್ರಕಟವಾಗ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಲ್ಲಿ ಢವ ಢವ!

    ಸಲ್ಮಾನ್ ಖಾನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ. ಅವರ ಕೋಣೆಯಲ್ಲಿ ಒಂದು ಮರದ ಮಂಚ, ಒಂದು ಕಂಬಳಿ, ಒಂದು ಕೂಲರ್ ಇರುತ್ತದೆ. ಜೈಲಿನ ಆಹಾರ ಪದ್ಧತಿಯಂತೆ ದಾಲ್, ಚಪಾತಿ ಇರಲಿದೆ. ಬೆಳಗಿನ ಊಟದಲ್ಲಿ ಕಿಚಡಿ ಇರಲಿದೆ ಎಂದು ಸಿಂಗ್ ತಿಳಿಸಿದ್ದಾರೆ.

    ಇವತ್ತಿನಿಂದ ಕೆಲವು ಕೈದಿಗಳು ಜೊತೆ ಸಲ್ಮಾನ್‍ರನ್ನು ಇರಿಸಲಾಗುತ್ತದೆ. ಬೆದರಿಕೆ ಇರುವ ಹಿನ್ನೆಲೆಯಲ್ಲಿ ಒಂಟಿ ಎಂದು ಭಾವಿಸುವ ಅಗತ್ಯ ಇಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

    ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆಯನ್ನುನಿನ್ನೆ ಪ್ರಕಟಮಾಡಿತ್ತು.

  • ಅಸಾರಾಂ ಬಾಪು ಪಕ್ಕದಲ್ಲಿರುವ ಕೋಣೆಯಲ್ಲಿ ಮಲಗಲಿದ್ದಾರೆ ಸಲ್ಮಾನ್-ಕೋರ್ಟ್ ನಲ್ಲಿ ಕಣ್ಣೀರಿಟ್ಟ ಅಲ್ವಿರಾ

    ಅಸಾರಾಂ ಬಾಪು ಪಕ್ಕದಲ್ಲಿರುವ ಕೋಣೆಯಲ್ಲಿ ಮಲಗಲಿದ್ದಾರೆ ಸಲ್ಮಾನ್-ಕೋರ್ಟ್ ನಲ್ಲಿ ಕಣ್ಣೀರಿಟ್ಟ ಅಲ್ವಿರಾ

    ಜೋಧಪುರ: ರೀಲ್ ಲೈಫ್‍ನಲ್ಲಿ ಸೂಪರ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡರೂ, ರಿಯಲ್ ಲೈಫ್‍ನಲ್ಲಿ ಬ್ಯಾಡ್‍ಬಾಯ್ ಅಂತಲೇ ಕುಖ್ಯಾತಿ ಪಡೆದ ಸಲ್ಮಾನ್ ಖಾನ್ ಈಗ ಜೈಲುಪಾಲಾಗಿದ್ದಾರೆ.

    20 ವರ್ಷಗಳ ಹಿಂದೆ ಅಂದರೆ 1998ರಲ್ಲಿ `ಹಮ್ ಸಾಥ್ ಸಾಥ್ ಹೈ’ ಅನ್ನೋ ಚಿತ್ರದ ಶೂಟಿಂಗ್ ವೇಳೆ ಅವಸಾನದ ಅಂಚಿನಲ್ಲಿರುವ ಅಪರೂಪದ ಪ್ರಭೇದ ಕೃಷ್ಣಮೃಗವನ್ನ ಬೇಟೆಯಾಡಿದ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 5 ವರ್ಷ ಶಿಕ್ಷೆ, 10 ಸಾವಿರ ದಂಡಕ್ಕೀಡಾಗಿದ್ದಾರೆ. 10 ಸಾವಿರ ಅವರಿಗೆ ಜುಜುಬಿ ಅನಿಸಿದರೂ 5 ವರ್ಷದ ಸೆರೆಮನೆ ವಾಸ ಮಾತ್ರ ಸಲ್ಮಾನ್ ಸಿನಿ ಜೀವನಕ್ಕೆ ಘಾಸಿಗೊಳಿಸಿದೆ.

    ಜೋಧಪುರ ಸಿಜೆಎಂ ಕೋರ್ಟ್‍ನಲ್ಲಿ ಬೆಳಗ್ಗೆ 11.15ಕ್ಕೆ ಅಂತಿಮ ತೀರ್ಪು ಪ್ರಕಟಿಸುವ ಪ್ರಕ್ರಿಯೆ ಆರಂಭವಾಯ್ತು. 11.30ರ ವೇಳೆಗೆ ಸಲ್ಮಾನ್ ಖಾನ್ ದೋಷಿ ಅಂತಲೂ ಉಳಿದ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಜಡ್ಜ್ ದೇವ್ ಕುಮಾರ್ ಖತ್ರಿ ತೀರ್ಪು ಪ್ರಕಟಿಸಿದರು.

    ಶಿಕ್ಷೆ ಪ್ರಮಾಣ ಎಷ್ಟು ಅನ್ನೋದರ ಬಗ್ಗೆ ಗೊಂದಲ-ಜಿಜ್ಞಾಸೆ ಮೂಡಿತ್ತು. 12 ಗಂಟೆ ಸುಮಾರಿಗೆ ಎಲ್ಲಾ ಮಾಧ್ಯಮಗಳಲ್ಲೂ 2 ವರ್ಷ ಶಿಕ್ಷೆ, ಸಲ್ಮಾನ್‍ಗೆ ಬೇಲ್ ಸಿಗತ್ತೆ ಅಂತಲೇ ಸುದ್ದಿ ಪ್ರಸಾರವಾಯ್ತು. ಆದ್ರೆ, ಇದೆಲ್ಲಾ ಸುಳ್ಳಾಯ್ತು. ನಂತರ 2.15ರ ಸುಮಾರಿಗೆ 5 ವರ್ಷಗಳ ಶಿಕ್ಷೆ ಪ್ರಕಟಿಸಿದ ಜಡ್ಜ್, ಎಲ್ಲ ಗೊಂದಲಗಳಿಗೂ ಕೊನೆ ಹಾಡಿದರು.

    ಕೋರ್ಟ್ ಹಾಲ್‍ನಲ್ಲಿ ಸಹೋದರಿ ಅಲ್ವಿರಾ ಹಾಗು ಕುಟುಂಬಸ್ಥರು ಸಲ್ಮಾನ್‍ಗೆ ಮೊದಲಿನಿಂದಲೂ ಧೈರ್ಯ ತುಂಬುತ್ತಿದ್ದರು. ಆದ್ರೆ, ದೋಷಿ ಅಂತ ಆದೇಶ ಬರುತ್ತಿದ್ದಂತೆಯೇ ಸಲ್ಮಾನ್ ಕಳಾಹೀನರಾದರು. ಆದರೂ, ಶಿಕ್ಷೆ ಕಡಿಮೆ ಇರಲಿದೆ ಧೃತಿಗೆಡಬೇಡ ಅಂತ ಮಾನಸಿಕಸ್ಥೈರ್ಯ ತುಂಬುವ ಕಾರ್ಯ ಮಾಡಿದರು.

    ಸಲ್ಮಾನ್ ಪರ ವಕೀಲರು ಸಹ, ನ್ಯಾಯಾಧೀಶರಿಗೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಮನವಿ ಮಾಡಿದರು. ಆದ್ರೆ, ಪ್ರಾಸಿಕ್ಯೂಷನ್ ಮಾತ್ರ 6 ವರ್ಷ ಶಿಕ್ಷೆ ವಿಧಿಸಲು ಮನವಿ ಮಾಡಿತ್ತು. ಎರಡು ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್, 5 ವರ್ಷ ಶಿಕ್ಷೆ ಪ್ರಕಟಿಸಿತು.

    ಸಲ್ಮಾನ್ ನಿಂತಲ್ಲೇ ಅರೆಕ್ಷಣ ನಿಂತರೆ ಸಹೋದರಿ ಅಲ್ವಿರಾ ಕಣ್ಣೀರು ಸುರಿಸಿದರು. ಕೆಲಕ್ಷಣಗಳ ನಂತರ ಕೋರ್ಟ್‍ನಲ್ಲೇ ಅರೆಸ್ಟ್ ಮಾಡಿದ ಪೊಲೀಸರು, ಸಲ್ಮಾನ್‍ಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಸೆಂಟ್ರಲ್ ಜೈಲ್‍ಗೆ ಕರೆದೊಯ್ದರು. ಕೋರ್ಟ್‍ಹಾಲ್‍ನಲ್ಲಿ ಸಲ್ಮಾನ್ ಅಭಿಮಾನಿಗಳು ತುಂಬಿ ಹೋಗಿದ್ದರು.

    ಅಪ್ರಾಪ್ತೆಯರ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಅಸಾರಾಂ ಬಾಪು ಪಕ್ಕದಲ್ಲೇ ಸಲ್ಮಾನ್ ಕೋಣೆ ಇದೆ. ಸದಾ ಎಸಿ ಕಾರ್, ಎಸಿ ರೂಮ್‍ಗಳಲ್ಲೇ ತಿರುಗಾಡುತ್ತಿದ್ದ ಸಲ್ಮಾನ್ ಇವತ್ತು ಜೋಧಪುರದ ಸೆಂಟ್ರಲ್ ಜೈಲಿನಲ್ಲಿ ಸೆಕೆಯಲ್ಲಿ ರಾತ್ರಿ ಕಳೆಯಬೇಕಾಗಿದೆ.

    ಜೋಧಪುರದಲ್ಲಿ ಸದ್ಯಕ್ಕೆ ಇವತ್ತು 39ರಿಂದ 40 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. ಜಾಮೀನಿಗಾಗಿ ಮನವಿ ಸಲ್ಲಿಸಿದ್ದು ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ. ಹಿಟ್ ಅಂಡ್ ರನ್ ಕೇಸ್‍ನಲ್ಲಿ ಬಚಾವ್ ಆಗಿದ್ದ ಸಲ್ಮಾನ್ ಬೇಟೆ ಕೇಸಲ್ಲಿ ಅಂದರ್ ಆಗಿದ್ದಾರೆ. ಈಗ ಸೇವ್ ಸಲ್ಮಾನ್ ಎಂದು ಬಾಲಿವುಡ್ ವಲಯದಿಂದ ಅಭಿಯಾನ ಆರಂಭವಾಗಿದೆ.

     

     

  • ಕೃಷ್ಣ ಮೃಗ ಬೇಟೆ ಪ್ರಕರಣ-ಸಲ್ಮಾನ್ ದೋಷಿ, ಉಳಿದ ಆರು ಮಂದಿಗೆ ಬಿಗ್ ರಿಲೀಫ್!

    ಕೃಷ್ಣ ಮೃಗ ಬೇಟೆ ಪ್ರಕರಣ-ಸಲ್ಮಾನ್ ದೋಷಿ, ಉಳಿದ ಆರು ಮಂದಿಗೆ ಬಿಗ್ ರಿಲೀಫ್!

    ನವದೆಹಲಿ: ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ದೋಷಿ ಎಂದು ಜೋಧಪುರ ಸಿಜೆಎಂ ಕೋರ್ಟ್ ತೀರ್ಪು ನೀಡಿದೆ.

    ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಮುಖ್ಯ ನ್ಯಾಯಮೂರ್ತಿ ದೇವ್ ಕುಮಾರ್ ಖತ್ರ ತೀರ್ಪು ಪ್ರಕಟಿಸಿದ್ದಾರೆ. ಸದ್ಯ ಶಿಕ್ಷೆ ಪ್ರಮಾಣದ ಬಗ್ಗೆ ವಾದ-ಪ್ರತಿವಾದ ನಡೀತಿದ್ದು, ಸನ್ನಡತೆ ಆಧಾರದ ಮೇಲೆ ಶಿಕ್ಷೆ ಕಡಿಮೆಗೊಳಿಸುವಂತೆ ಸಲ್ಮಾನ್ ಪರ ವಕೀಲ ಮನವಿ ಮಾಡಿದ್ದಾರೆ.

    1998ರ ಸೆಪ್ಟೆಂಬರ್ 26 ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣ ಮೃಗದ ಬೇಟೆ ಆಡಿದ್ದರು. ಸಲ್ಮಾನ್ ಬೇಟೆ ಆಡುವ ವೇಳೆ ಸೈಫ್ ಅಲಿ ಖಾನ್, ತಬು, ಸೊನಾಲಿ ಬೇಂದ್ರೆ, ನೀಲಮ್ ಸಹ ಹಾಜರಿದ್ದರು. ಅಳಿವಿನಂಚಿನಲ್ಲಿರುವ ಕೃಷ್ಣ ಮೃಗ ಬೇಟೆಗೆ ನಟರು ಜಿಪ್ಸಿ ಬಳಸಿದ್ದರು. ಅಕ್ರಮ ಶಸ್ತ್ರಾಸ್ತ್ರ, ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಸಲ್ಮಾನ್ ಸೇರಿ ಎಲ್ಲರ ಮೇಲೆ ನಾಲ್ಕು ಕೇಸ್ ದಾಖಲಾಗಿತ್ತು.

    ಬೇಟೆಯಾಡುವ ವೇಳೆ ಪ್ರವಾಸಿ ಗೈಡ್ ಗಳಾದ ದುಶ್ಯಂತ್ ಸಿಂಗ್ ಮತ್ತು ಸಲ್ಮಾನ್ ಸಹಾಯಕ ದಿನೇಶ್ ಗೌರೆ ಸಹ ಸಲ್ಮಾನ್ ಜೊತೆಯಲ್ಲಿದ್ದರು. ಅಂದು ಸಲ್ಮಾನ್ ಜೊತೆಯಲ್ಲಿದ್ದ ಸಹಾಯಯ ಇಲ್ಲಿಯವರೆಗೆ ಎಲ್ಲಿದ್ದಾನೆ ಎನ್ನುವುದು ಪತ್ತೆಯಾಗಿಲ್ಲ.