Tag: BL Santhosh

  • ನಮ್ಮ ದೇಶದಲ್ಲಿ ಯಾವುದರಿಂದ್ಲೂ ಧರ್ಮವನ್ನು ಹೊರಗೆ ತೆಗೆಯೋಕೆ ಆಗಲ್ಲ: ಬಿ.ಎಲ್ ಸಂತೋಷ್

    ನಮ್ಮ ದೇಶದಲ್ಲಿ ಯಾವುದರಿಂದ್ಲೂ ಧರ್ಮವನ್ನು ಹೊರಗೆ ತೆಗೆಯೋಕೆ ಆಗಲ್ಲ: ಬಿ.ಎಲ್ ಸಂತೋಷ್

    ಬೆಳಗಾವಿ: ನಮ್ಮ ದೇಶದಲ್ಲಿ ಯಾವುದರಿಂದಲೂ ಧರ್ಮವನ್ನು ಹೊರಗೆ ತೆಗೆಯೋಕೆ ಯಾರೂ ಪ್ರಯತ್ನಪಟ್ಟರೂ ಆಗಲ್ಲ. ನಮ್ಮ ದೇಶದಲ್ಲಿ ಸಾಮಾಜಿಕ ಜನಜೀವನದಿಂದ ಆಡಳಿತ ವ್ಯವಸ್ಥೆಯಿಂದ ಧರ್ಮ ಹೊರ ತೆಗೆಯೋಕೆ ಯಾರು ಪ್ರಯತ್ನಪಟ್ಟರೂ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ (B.L Santhosh) ಹೇಳಿದರು.

    ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ಕನ್ನೇರಿ ಮಠ ಹತ್ತಾರು ವಿಶ್ವವಿದ್ಯಾಲಯ, ನೂರಾರು ಸಂಘ ಸಂಸ್ಥೆಗಳ ಕೆಲಸ ಮಾಡ್ತಿದೆ. ಒಂದು ದೊಡ್ಡದಾದ ಸರ್ಕಾರ ಮಾಡಬೇಕಾದ ಕೆಲಸ ಒಂದು ಸೀಮಿತವಾದ ಜಾಗದಲ್ಲಿ ಮಾಡ್ತಿರೋದು ಹೆಮ್ಮೆ ಅನಿಸುತ್ತದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಪೂಜ್ಯ ಶ್ರೀಗಳು ತಮ್ಮ ಆಧ್ಯಾತ್ಮ ಶಕ್ತಿಯಿಂದ ಸಾಮಾಜಿಕ ಮನೋಭಾವ ಕಾರಣಕ್ಕೆ ಮಾಡಿ ತೋರಿಸುತ್ತಿದ್ದಾರೆ. ಇಲ್ಲಿ ಏನಿದೆ ಅಂತಾ ಪಟ್ಟಿ ಮಾಡುವುದಕ್ಕಿಂತ ಏನಿಲ್ಲ ಅಂತಾ ಪಟ್ಟಿ ಮಾಡಿದ್ರೆ ಬೇಗ ಮುಗಿದು ಹೋಗಿ ಬಿಡುತ್ತದೆ ಎಂದರು.

    ಗೋಶಾಲೆ ಕೇವಲ ಪೂಜೆಗೆ ಸೀಮಿತವಾಗಿಲ್ಲ, ಆರ್ಥಿಕತೆಗೆ ಗೋಶಾಲೆ ಹೇಗೆ ಬೆಳೆಸಬಹುದು ಎಂಬ ವ್ಯವಹಾರಿಕ ಪ್ರಜ್ಞೆ ಕೂಡ ಇದೆ. ಕೃಷಿ ವಿಜ್ಞಾನ ಕೇಂದ್ರವಿದೆ, ಭಾರತದ ಆಧ್ಯಾತ್ಮಿಕ ವಿಜ್ಞಾನ ಪರಂಪರೆಯನ್ನು ತೋರಿಸುವ ಆಲಯಗಳಿವೆ. ಶ್ರೀಗಳ ಸಾಮರ್ಥ್ಯದಿಂದ ಸುತ್ತಮುತ್ತಲಿನ 250ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಪ್ರವೇಶಾತಿ ಹಾಜರಾತಿ ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಸತ್ವ ಮತ್ತು ಶಾಸ್ತ್ರ ಧರ್ಮ ಮತ್ತು ರಾಜಪರಂಪರೆ ಈ ಎರಡೂ ಒಟ್ಟಿಗೆ ಸೇರಿದಾಗ ತುಂಬಾ ದೊಡ್ಡ ದೊಡ್ಡ ಬದಲಾವಣೆ ನಮ್ಮ ದೇಶದಲ್ಲಿ ಆಗಿವೆ. ಒಂದಿಷ್ಟು ವಿಶ್ವಾಮಿತ್ರರ ಜೊತೆ ರಾಮ-ಲಕ್ಷ್ಮಣರು ಕೈ ಜೋಡಿಸಿದಾಗ ಈ ದೇಶದಲ್ಲಿ ರಾವಣನ ಸಂಹಾರ ಆಗುತ್ತೆ, ರಾಮಾಯಣ (Ramayana) ಅಂತಾ ದೊಡ್ಡ ಕಥೆಗಳು ಸಿಗುತ್ತದೆ.

    ಸಮರ್ಥ ರಾಮದಾಸರ ಮಾರ್ಗದರ್ಶನ ಶಿವಾಜಿಗೆ ಸಿಕ್ಕಿದಾಗ ಶಿವಾಜಿ ಮಹಾರಾಜ ರಾಜ ಮಾತ್ರ ಆಗದೇ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡ್ತಾರೆ ಅದಕ್ಕೆ ಸಮರ್ಥ ರಾಮದಾಸರು ಪ್ರೇರಣೆ ಆಗ್ತಾರೆ. ಹಾಗೆಯೇ ಹಕ್ಕ ಬುಕ್ಕರಿಗೆ ಸ್ವಾಮಿ ವಿದ್ಯಾರಣ್ಯರ ಮಾರ್ಗದರ್ಶನ ಸಿಕ್ಕಿದಾಗ ಆ ಕಾಲದಲ್ಲಿ ನವಾಬರ, ನಿಜಾಮರ ಅತ್ಯಾಚಾರ ದೌರ್ಜನ್ಯ ತುಂಬಿದ ಆಡಳಿತದ ವಿರುದ್ಧ ವಿಜಯ ನಗರ (Vijayanagar) ಸಾಮ್ರಾಜ್ಯ ಪ್ರಾರಂಭ ಮಾಡ್ತಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಲ್ಲಿ ವಿಸ್ತರಿಸಿದ ವಿಜಯ ನಗರ ಸಾಮ್ರಾಜ್ಯದಲ್ಲಿ ಆಡಳಿತ ಹೇಗಿರಬೇಕು, ಸಂಸ್ಕೃತಿ ಹೇಗೆ ಅರಳಬೇಕು? ಸಾಹಿತ್ಯ ಹೇಗೆ ನಿರ್ಮಾಣ ಆಗಬೇಕು? ಧರ್ಮಕ್ಕೆ ರಾಜ್ಯ ಆಧಾರವಾಗಬೇಕು ಎಂಬುದಕ್ಕೆ ವಿಜಯ ನಗರ ಸಾಮ್ರಾಜ್ಯ ಬಹುದೊಡ್ಡ ಉದಾಹರಣೆ ಎಂದರು. ಇದನ್ನೂ ಓದಿ: ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಮೋದಿ ಒಳ್ಳೆಯ ನಾಟಕವಾಡುತ್ತಾರೆ: ಸಿದ್ದರಾಮಯ್ಯ

    ಈ ದೇಶದಲ್ಲಿ ಧರ್ಮ ಆಡಳಿತದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಮಧ್ಯದಲ್ಲಿ ಯಾರದ್ದೋ ಕೆಲವರ ಮಹತ್ವಾಕಾಂಕ್ಷೆಗೆ ಇನ್ಯಾರದೋ ಕುತಂತ್ರಗಳಿಗೆ ನಮ್ಮ ದೇಶದಲ್ಲಿ ಜಾತ್ಯಾತೀತತೆ ಸೆಕ್ಯುಲರಿಸಮ್ ಭ್ರಮೆಯನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಪ್ರಯತ್ನವನ್ನು ಕೆಲ ರಾಜಕೀಯ ಶಕ್ತಿಗಳು ಮಾಡ್ತಾವೆ.ಕೆಲ ಬುದ್ಧಿ ಜೀವಿಗಳು ಮಾಡ್ತೀರ್ತಾರೆ. ನಿಜವಾದ ಅರ್ಥದಲ್ಲಿ ಆ ಜಾತ್ಯಾತೀತತೆ, ಸೆಕ್ಯುಲರಿಸಮ್‍ನ್ನು ಅಳವಡಿಸಿಕೊಂಡರೆ ಯಾವುದು ಏನೂ ಅಪಚಾರ ಇಲ್ಲ. ಎಲ್ಲರಿಗೂ ಒಂದೇ ತರಹವಾದ ಭಾವನೆ ಇರುತ್ತದೆ. ಆದರೆ ಜಾತ್ಯಾತೀತತೆ, ಸೆಕ್ಯುಲರಿಸಮ್ (Secularism) ಹೆಸರಲ್ಲಿ ನಮ್ಮ ಸಮಾಜದಲ್ಲಿ ಇರುವ ಒಳ್ಳೆಯ ಅಂಶಗಳನ್ನು ತೆಗೆದು ಹಾಕ್ತೀವಿ ಅಂತಾ ಪ್ರಯತ್ನ ಪಟ್ಟಾಗ ಸಮಾಜ ತನ್ನದೇ ರೀತಿ ವಿರೋಧಿಸುತ್ತದೆ. ಈ ದೇಶದಲ್ಲಿ ಮನುಷ್ಯನ ಬದುಕಿನಲ್ಲಿ ಧರ್ಮವೇ ಆಧಾರ. ಅಧಿಕಾರದ ನಿರ್ವಹಣೆಗೂ ಧರ್ಮವೇ ಆಧಾರ. ಶಿಕ್ಷಣ, ಸಂಸ್ಕಾರ ವ್ಯವಸ್ಥೆಗೂ ಧರ್ಮವೇ ಆಧಾರ ಎಂದು ಹೇಳಿದರು.

    ಕರ್ನಾಟಕದಲ್ಲಿ ವಿಜಯದಶಮಿ ದಿನ ಬನ್ನಿ ಮುಡಿತಾರೆ. ಹತ್ತಾರು ತಾಲೂಕಿನಲ್ಲಿ ಬನ್ನಿ ಮುಡಿಯುವ ಮೊದಲನೆಯ ವ್ಯಕ್ತಿ ಅಲ್ಲಿಯ ತಹಶೀಲ್ದಾರ್. ಕನ್ಯಾಕುಮಾರಿಯಲ್ಲಿ ನವರಾತ್ರಿ ದಿನ ಮೊದಲನೇಯ ಪೂಜೆಗೆ ನಿಂತುಕೊಳ್ಳುವುದು ತಿರುವನಂತಪುರದ ಎಸ್ ಪಿ ಡಿಸಿ ಮುಸಲ್ಮಾನ, ಕ್ರಿಶ್ಚಿಯನ್, ಹಿಂದೂ ಆಗಿರಲಿ ಮೊದಲನೆಯ ಪೂಜೆಗೆ ಬೇಕಾದ ವಸ್ತು ತೆಗೆದುಕೊಂಡು ಹೋಗುತ್ತಾರೆ. ನಮ್ಮ ದೇಶದಲ್ಲಿ ಯಾವುದರಿಂದಲೂ ಧರ್ಮವನ್ನು ಹೊರಗೆ ತೆಗೆಯೋಕೆ ಯಾರು ಪ್ರಯತ್ನ ಪಟ್ಟರೂ ಆಗಲ್ಲ. ನಮ್ಮ ದೇಶದಲ್ಲಿ ಸಾಮಾಜಿಕ ಜನಜೀವನದಿಂದ, ಆಡಳಿತ ವ್ಯವಸ್ಥೆಯಿಂದ ಧರ್ಮ ಹೊರ ತಗೆಯೋಕೆ ಯಾರು ಪ್ರಯತ್ನ ಪಟ್ಟರೂ ಆಗಲ್ಲ. ಯಾಕಂದ್ರೆ ಈ ಮಣ್ಣಿನ ಗುಣ ಅದು. ನಮ್ಮ ದೇಶದಲ್ಲಿ ಧರ್ಮವನ್ನು ದೂರ ಇಡಬೇಕು ಎಂಬ ಭ್ರಮೆ ಇದೆ. ಧರ್ಮವನ್ನು ದೂರ ಇಟ್ರೆ ಅಧರ್ಮ ಬೆಳೆಯುತ್ತದೆ ಎಂದು ಬಿ.ಎಲ್.ಸಂತೋಷ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆ ನೆನೆಯದಿದ್ದರೆ ನರಕಕ್ಕೆ ಹೋಗ್ತೀರಾ: ಬಿ.ಎಲ್. ಸಂತೋಷ್‌

    ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆ ನೆನೆಯದಿದ್ದರೆ ನರಕಕ್ಕೆ ಹೋಗ್ತೀರಾ: ಬಿ.ಎಲ್. ಸಂತೋಷ್‌

    ಹುಬ್ಬಳ್ಳಿ: ದೇಶಕ್ಕೆ ಗಾಂಧೀಜಿ (Gandhiji) ಒಬ್ಬರಿಂದಲೇ ಸ್ವಾತಂತ್ರ್ಯ ಬಂದಿದ್ದಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ವೀರ ಸಾವರ್ಕರ್ (Veer Savarkar) ಕೊಡುಗೆ ನೆನೆಯದಿದ್ದರೆ ನರಕಕ್ಕೆ ಹೋಗ್ತೀರಾ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ (BL Santosh)  ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಸ್ವರಾಜ್-75 ಪುಸ್ತಕ ಬಿಡುಗಡೆ ಸಮಾರಂಭದ ಭಾಷಣದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಒಬ್ಬರೇ ಹೋರಾಟವನ್ನು ಮಾಡಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟ ರೂಪುಗೊಂಡಿತ್ತು. ಅನೇಕ ಮಹನೀಯರು ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಬಂದದ್ದು. ಆದರೆ ಕೆಲವು ಇತಿಹಾಸಕಾರರು ಸತ್ಯವನ್ನು ಹೇಳಲೇ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಪೋಸ್ಟ್‌ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

    ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿ ಸ್ಥಾಪಿಸಲು 2014ನೇ ಇಸವಿ ಬರಬೇಕಾಯಿತು. ಈ ದೇಶ ವಾಮ ಪಂಥೀಯರಿಂದಲೇ ಹಾಳಾಗಿದ್ದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: BJP ಹಿಂದೂ-ಮುಸ್ಲಿಂ, ದಲಿತ-ಬ್ರಾಹ್ಮಣರ ನಡುವೆ ಜಗಳ ತಂದಿಡುತ್ತಿದೆ: ಸುರ್ಜೇವಾಲಾ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಯೋಗ್ಯತೆ ಇಲ್ಲದವರು ಈಗ ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ – ಗುಡುಗಿದ ಬಿ.ಎಲ್ ಸಂತೋಷ್

    ಯೋಗ್ಯತೆ ಇಲ್ಲದವರು ಈಗ ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ – ಗುಡುಗಿದ ಬಿ.ಎಲ್ ಸಂತೋಷ್

    ಚಿಕ್ಕಬಳ್ಳಾಪುರ: ಯೋಗ್ಯತೆ ಇಲ್ಲದವರು ವೀರ ಸಾವರ್ಕರ್ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಸಾರ್ವಕರು ವಿರೋಧಿಗಳ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಗುಡುಗಿದ್ದಾರೆ.

    ಸಮೃದ್ದ ಭಾರತ ಎನ್‍ಜಿಒ ಸಂಸ್ಥೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ರೈಡ್‌ ಫಾರ್ ನೇಷನ್ ಎಂಬ ಬೈಕ್ ರ‍್ಯಾಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬಿ.ಎಲ್ ಸಂತೋಷ್ ಭಾಗಿಯಾಗಿದ್ದರು. ಬೈಕ್ ರೈಡರ್ಸ್ ಉದ್ದೇಶಿಸಿ ಭಾಷಣ ಮಾಡಿದ ಬಿ.ಎಲ್ ಸಂತೋಷ್ ಸಾವರ್ಕರ್ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನೃತ್ಯದಲ್ಲಿ ಸಾವರ್ಕರ್‌ ಫೋಟೋ – ಮುಖ್ಯೋಪಾಧ್ಯಾಯರನ್ನು ಕರೆಸಿ ಕ್ಷಮೆ ಹೇಳಿಸಿದ ಪಂಚಾಯತ್‌

    ಸಾವರ್ಕರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಯಾರು ಹೆಸರು ಹೇಳಲು ಯೋಗ್ಯತೆ ಇಲ್ಲದಂತಹ ವಂಶದಲ್ಲಿ ಹುಟ್ಟಿದ್ದಾರೋ ಅಂತವರು ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ. ಹಿಂದಿನ ನಾಲ್ಕು ತಲೆಮಾರು ಮುಂದಿನ 25 ತಲೆಮಾರಿನ ಜನರಿಗೆ ಸಾವರ್ಕರ್ ಬಗ್ಗೆ ಮಾತನಾಡಲು ಯೋಗ್ಯತೆ ಇರಲ್ಲ. ಅಂತವರು ಸಾವರ್ಕರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ – ಯುವಕನಿಗೆ ಚಾಕು ಇರಿತ

    Live Tv
    [brid partner=56869869 player=32851 video=960834 autoplay=true]

  • ನಾಯಕತ್ವ ಬದಲಾವಣೆ ಅಂದ್ರೆ ಯಾರ ಬದಲಾವಣೆ?: ಬಿಜೆಪಿಯಲ್ಲಿ ಬಿಎಲ್‍ಎಸ್ ಬಿಸಿ

    ನಾಯಕತ್ವ ಬದಲಾವಣೆ ಅಂದ್ರೆ ಯಾರ ಬದಲಾವಣೆ?: ಬಿಜೆಪಿಯಲ್ಲಿ ಬಿಎಲ್‍ಎಸ್ ಬಿಸಿ

    ಬೆಂಗಳೂರು: ಅವರು ಚೇಂಚ್ ಆಗ್ತಾರೆ ಇವರು ಚೇಂಜ್ ಆಗ್ತಾರೆ..! ಏಪ್ರಿಲ್ ಎಂಡ್‍ಗೆ ಆಗುತ್ತೆ. ಮೇ ಸೆಕೆಂಡ್ ವೀಕ್ ಆಗುತ್ತೆ..! ಹೀಗೆ ಅಲ್ಲೊಬ್ಬ ಇಲ್ಲೊಬ್ಬ ಬಿಜೆಪಿ ನಾಯಕರು ಮಾತಾಡ್ತಿದ್ರು. ಆದ್ರೀಗ ಬಿಜೆಪಿ ಹೈಕಮಾಂಡ್‍ನ ಟಾಪ್ 5 ಸ್ಥಾನದ ನಾಯಕ ಮಾತನಾಡಿದ್ದಾರೆ. ಹಾಗಾದ್ರೆ ಯಾರ ಬದಲಾವಣೆ? ಬಿ.ಎಲ್.ಸಂತೋಷ್ ಸುಳಿವು ಏನು? ಎಂಬ ಕುತೂಹಲ ಮನೆಮಾಡಿದೆ.

    ಹೊಸತನಕ್ಕಾಗಿ ಗುಜರಾತ್‍ನಲ್ಲಿ ಬದಲಾವಣೆ ಅಂತೆ! ಹಾಗಾದ್ರೆ ಕರ್ನಾಟಕದಲ್ಲಿ ಬದಲಾವಣೆಯೇ ಬಿಜೆಪಿಗೆ ಶಕ್ತಿ ಎನ್ನುವಂತಾಗುತ್ತಾ? ಇದು ‘ಸಂತೋಷ’ದ ಸುಳಿವೋ..? ಅಥವಾ ಉದಾಹರಣೆಗಷ್ಟೇ ಸೀಮಿತವೋ..? ಎಂಬ ಪ್ರಶ್ನೆಗಳು ಎದ್ದಿವೆ. ಡೆಲ್ಲಿಯಲ್ಲಿ ಟಾಪ್ 5 ನಾಯಕನ ಸ್ಥಾನದಲ್ಲಿ ಕುಳಿತವರ ಬಾಯಿಂದ ಬದಲಾವಣೆ ಮಾತು ಹೊರಬಿದ್ದಿದೆ. ನಿನ್ನೆ ಮೈಸೂರಿನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮಾತು ಗಂಭೀರ ಚರ್ಚೆ ಹುಟ್ಟುಹಾಕಿದೆ. ಇದು ಸಂತೋಷದ ಮಾತೋ..? ಅಥವಾ ಪಾಸಿಂಗ್ ಟಾಕ್ಸೋ..? ಅಥವಾ ಉದಾಹರಣೆಗೆ ಹರಿಬಿಟ್ಟದ್ದು..? ಎಂಬ ಪ್ರಶ್ನೆಗಳು ಬಿಜೆಪಿಗರ ತಲೆ ಹೊಕ್ಕು ಕೊರೆಯುವಂತೆ ಮಾಡಿದೆ. ಗುಜರಾತ್‍ನಲ್ಲಿ ಸಿಎಂ ಬದಲಾವಣೆಯಾದಗ ಇಡೀ ಮಂತ್ರಿ ಮಂಡಲವೇ ಬದಲಾಯ್ತು..! ಯಾವುದೇ ದೂರು ಅಂತಲ್ಲ, ಹೊಸತನ ತರಬೇಕು ಎಂಬ ಹೇಳಿಕೆಯಂತೂ ವಾಟ್ ನೆಕ್ಸ್ಟ್..? ಎನ್ನುವಂತೆ ಮಾಡಿದೆ. ಎರಡು ನಿಮಿಷ 12 ಸೆಕೆಂಡ್‍ಗಳ ವೀಡಿಯೋದಲ್ಲಿ ಯಾರಿಗೆಲ್ಲ ಪರೋಕ್ಷವಾಗಿ ಸಂದೇಶ ರವಾನಿಸಬೇಕು ಆ ಕೆಲಸವನ್ನು ಬಿ.ಎಲ್.ಸಂತೋಷ್ ಜಾಣತನದಿಂದ ಮಾಡಿ ಮುಗಿಸಿದ್ದಾರೆ. ಇದನ್ನೂ ಓದಿ: ನಮ್ಮಿಂದ ಯಾವುದೇ ಭೂ ಪ್ರದೇಶಗಳನ್ನು ಚೀನಾ ಕಸಿದುಕೊಳ್ಳಲು ಬಿಡಲ್ಲ: ಮನೋಜ್ ಪಾಂಡೆ

    ಯಾರ ನಾಯಕತ್ವ ಬದಲಾವಣೆ?
    ಈ ನಡುವೆ ನಾಯಕತ್ವ ಬದಲಾವಣೆ ಅಂದ್ರೆ ಯಾರ ನಾಯಕತ್ವ..? ಸಂಘಟನೆಯ ನಾಯಕತ್ವವೋ..? ಸರ್ಕಾರದ ನಾಯಕತ್ವವೋ..? 50 ಸೀಟು 56 ವಯಸ್ಸಿನವರಿಗಷ್ಟೇ ಮುಖ್ಯಮಂತ್ರಿ ಕುರ್ಚಿನಾ..? ಎಂಬ ಚರ್ಚೆಗೂ ಸಂತೋಷ್ ಹೇಳಿಕೆ ಕಾರಣವಾಗಿದೆ. ಬಿ.ಎಲ್.ಸಂತೋಷ್ ಈ ಹೇಳಿಕೆಯ ಹಿಂದಿನ ಅಸಲಿಯತ್ತು ಏನು..? ಕರ್ನಾಟಕದಲ್ಲಿ ಕಡೇ ಆಟದ ಪ್ರಯೋಗ ಏನಾದರೂ ಇದೆಯೋ..? ಹೊಸತನ ಅಂದ್ರೆ ಸಂಪುಟ ಪುನಾರಚನೆವೋ..? ಬೇರೆನೋ..? ಎಂಬ ಕುತೂಹಲ ಹುಟ್ಟು ಹಾಕಿದೆ. ಬೆಂಗಳೂರಿಗೆ ಅಮಿತ್ ಷಾ ಆಗಮಿಸುವ ಎರಡು ದಿನ ಮೊದಲೇ ಸಂತೋಷ್ ಅವರ ಮಾತುಗಳ ಹಿಂದಿನ ಮರ್ಮ ಏನು ಎಂಬುದರ ಬಗ್ಗೆ ನಾನಾ ದೃಷ್ಟಿಕೋನಗಳಿಂದ ಬಿಜೆಪಿ ಒಳಗೆ ಚರ್ಚೆಗಳು ಶುರುವಾಗಿವೆ. ಸಂಘಟನೆಯ ನಾಯಕತ್ವದಲ್ಲಿ ಬದಲಾವಣೆ ತರಬಹುದಾ. ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ತರಬಹುದಾ. ಮುಂದಿನ ಚುನಾವಣೆಯ ಭವಿಷ್ಯದ ನಾಯಕತ್ವದಲ್ಲಿ ಬದಲಾವಣೆ ತರುವ ಮಾತುಗಳ ಎಂಬುದಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ. ಕುಟುಂಬ ರಾಜಕಾರಣ ವಿರೋಧಿಸಿ ಸಿಎಂ ಕುರ್ಚಿಗೆ ವಯಸ್ಸಿನ ಮಿತಿಯನ್ನು ಫಿಕ್ಸ್ ಮಾಡಿ ಸಂತೋಷ್ ಆಡಿರುವ ಮಾತುಗಳು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ: ಸಿದ್ದು ವಿರುದ್ಧ ಸೋಮಣ್ಣ ಕಿಡಿ

    ಒಟ್ನಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಬದಲಾವಣೆಯ ಬಲೂನ್ ಆಕಾಶದೆತ್ತರಕ್ಕೆ ಹಾರಾಡ್ತಿರೋದು ಕಮ್ಮಿ ಏನಲ್ಲ, ಆದ್ರೆ ಉತ್ತರವಿಲ್ಲದ ಪ್ರಶ್ನೆಗಳನ್ನು ತೇಲಿಬಿಟ್ಟು ರಾಜಕೀಯ ಮೇಲಾಟವನ್ನು ದೂರದಲ್ಲಿ ನಿಂತು ನೋಡುವ ತಂತ್ರಗಾರಿಕೆಗೂ ಕೊರತೆ ಇಲ್ಲ ಎನ್ನಬಹುದು. ಬದಲಾವಣೆಯ ಬಲೂನ್‍ಗೆ ಉಸಿರು ತುಂಬಿದವರು ಯಾರು..? ಆ ಬಲೂನ್ ಎಷ್ಟು ಎತ್ತರ ಎಷ್ಟು ಅವಧಿಗೆ ಹಾರಾಡುತ್ತೆ..? ಕಡೇ ಆಟದಲ್ಲಿ ಯಾರಿಗೆ ಗೆಲುವು ಸಿಗುತ್ತೆ..? ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಇದನ್ನೂ ಓದಿ: ಬಿಜೆಪಿ ಸೇರಿ ಸುಖವಾಗಿದ್ದೇವೆ: ನಾರಾಯಣ ಗೌಡ

    – ರವೀಶ್.ಹೆಚ್.ಎಸ್. ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

  • ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

    ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

    ಮೈಸೂರು: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿದೆ. ಪ್ರಯೋಗ ಗುಜರಾತ್‍ನಲ್ಲೂ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.

    ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸಿದ್ದೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದರು.

    ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನು ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದರು. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ನರ್ಸ್ ಮೃತದೇಹ ಪತ್ತೆ – ಅತ್ಯಾಚಾರ ಆರೋಪ ಮಾಡಿದ ಕುಟುಂಬಸ್ಥರು

    ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ. ರಾಜ್ಯದ 2023ರ ವಿಧಾನಸಭಾ ಚುನಾವಣೆಗೂ ಅನ್ವಯವಾಗುತ್ತಾ, ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದ್ದಾರೆ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಇದನ್ನೂ ಓದಿ: ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ಕಾಫಿನಾಡ ಬಿ.ಎಸ್.ರಾಜು ನೇಮಕ

  • ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ಇಂದು ರಾತ್ರಿಯೇ ಬೆಂಗ್ಳೂರಿಗೆ ಬಿ.ಎಲ್ ಸಂತೋಷ್

    ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ಇಂದು ರಾತ್ರಿಯೇ ಬೆಂಗ್ಳೂರಿಗೆ ಬಿ.ಎಲ್ ಸಂತೋಷ್

    ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಈ ಮಧ್ಯೆ ಇಂದು ರಾತ್ರಿಯೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ದೆಹಲಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಇಂದು ರಾತ್ರಿ 8:30ರ ವಿಮಾನದ ಮೂಲಕ ಬೆಂಗಳೂರಿಗೆ ಸಂತೋಷ್ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಾರ್ಲಿಮೆಂಟ್ ಬೋರ್ಡ್ ಸದಸ್ಯರಾಗಿರುವ ಸಂತೋಷ್ ಅವರು ಸಭೆಗೂ ಮುನ್ನ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ವೀಕ್ಷಕರ ಭೇಟಿಗೂ ಮುನ್ನ ರಾಜ್ಯಕ್ಕೆ ಸಂತೋಷ್ ಭೇಟಿ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಬಂಪರ್ ಗಿಫ್ಟ್

    ಇತ್ತ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದಾರೆ. ರಾತ್ರಿ 8:30 ರ ವಿಸ್ತಾರ ವಿಮಾನದ ಮೂಲಕ ಬೆಂಗಳೂರಿಗೆ ಹೋಗಲಿದ್ದಾರೆ. ಅಮಿತ್ ಶಾ ಭೇಟಿಗಾಗಿ ಬಂದಿದ್ದರು. ಆದರೆ ನಾಳೆ ರಾಜ್ಯಕ್ಕೆ ವೀಕ್ಷಕರ ಆಗಮನ ಹಿನ್ನೆಲೆಯಲ್ಲಿ ಇದೀಗ ಅಮಿತ್ ಶಾ ಅವರನ್ನು ಭೇಟಿಯಾಗದೇ ನಿರಾಣಿ ವಾಪಸ್ಸಾಗುತ್ತಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು

    ಈ ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ಇದೀಗ ವೀಕ್ಷಕರಾಗಿ ಆಯ್ಕೆಯಾಗಿದ್ದಾರೆ. ಧರ್ಮೆಂದ್ರ ಪ್ರಧಾನ್ ಗೆ ಕರ್ನಾಟಕಕ್ಕೆ ತೆರಳಲು ಹೈಕಮಾಂಡ್ ಸೂಚನೆ ನೀಡಿದೆ. ಅದರಂತೆ ರಾಜ್ಯಕ್ಕೆ ಭೇಟಿ ಕೊಡಲಿರುವ ಪ್ರಧಾನ್ ಅವರು ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ನಡೆಸಲಿದ್ದಾರೆ. ಮುಂದಿನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಕಸರತ್ತು ಆರಂಭವಾಗಿದ್ದು, ನಾಳೆ ರಾಜ್ಯಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ರಾಜ್ಯಕ್ಕೆ ಭೇಟಿ ನಿಡಲಿದ್ದಾರೆ.

  • ಬಿ.ಎಲ್ ಸಂತೋಷ್ ಭೇಟಿಯಾದ ರಮೇಶ್ ಜಾರಕಿಹೊಳಿ!

    ಬಿ.ಎಲ್ ಸಂತೋಷ್ ಭೇಟಿಯಾದ ರಮೇಶ್ ಜಾರಕಿಹೊಳಿ!

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಇಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ.

    ದೆಹಲಿಯ ಬಿ.ಎಲ್ ಸಂತೋಷ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೂ ಮುನ್ನ ದೆಹಲಿಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ, ಇದೀಗ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ.

    ಭೇಟಿ ವೇಳೆ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ನಿರಂತರ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಸಿಎಂ ಭೇಟಿಯಾಗದೇ ಪ್ರತ್ಯೇಕ ಕಾರ್ಯತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದೆಹಲಿಗೆ ತೆರಳಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಾರಕಿಹೊಳಿ, ಸಿಎಂ ಆಗಮನದ ವಿಚಾರ ನನಗೆ ಗೊತ್ತಿರಲಿಲ್ಲ. ನಾನು ಬಂದ ಬಳಿಕ ಸಿಎಂ ದೆಹಲಿಗೆ ಬಂದಿದ್ದಾರೆ. ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ ಜಲ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಆದರೆ ಸಿಎಂ ನಿಗದಿತ ಸಮಯಕ್ಕಿಂತ ಬೇಗ ಬೆಂಗಳೂರಿಗೆ ವಾಪಸ್ ಆಗಿದ್ದರಿಂದ ಅವರನ್ನು ದೆಹಲಿಯಲ್ಲಿ ಭೇಟಿಯಾಗಲು ಸಾಧವಾಗಲಿಲ್ಲ ಎಂದಿದ್ದರು.

    ಸಿಎಂ ಅವರನ್ನು ಉದ್ದೇಶ ಪೂರ್ವಕವಾಗಿ ಭೇಟಿ ಮಾಡಿಲ್ಲ ಎನ್ನುವುದು ಸುಳ್ಳು. ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಬೇಡ ಎನ್ನುವುದು ಕೆಲವರ ಅಭಿಪ್ರಾಯ. ಸಚಿವ ಸ್ಥಾನ ಯಾರಿಗೆ ನೀಡಬೇಕು ಎನ್ನುವುದು ಅಂತಿಮವಾಗಿ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.

    ಇತ್ತೀಚೆಗಷ್ಟೇ ಜಾರಕಿಹೊಳಿ ಅವರು ಪ್ರಹ್ಲಾದ್ ಜೋಶಿಯನ್ನು ಭೇಟಿ ಮಾಡಿದ್ದರು. ಸದ್ಯ ಜೆ.ಪಿ ನಡ್ಡಾ ಭೇಟಿಗೂ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

  • ಸಂತೋಷ್ ರಾಷ್ಟ್ರೀಯ ನಾಯಕರು, ಯಾರೂ ಒಪ್ಪಿಲ್ಲ ಎಂದು ಹೇಳಲು ಬರುತ್ತಾ – ಸಿಟಿ ರವಿ

    ಸಂತೋಷ್ ರಾಷ್ಟ್ರೀಯ ನಾಯಕರು, ಯಾರೂ ಒಪ್ಪಿಲ್ಲ ಎಂದು ಹೇಳಲು ಬರುತ್ತಾ – ಸಿಟಿ ರವಿ

    ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ರಾಷ್ಟ್ರೀಯ ನಾಯಕರು. ಅವರನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಯಾರೂ ಒಪ್ಪಿಲ್ಲ ಎಂದು ಹೇಳಲು ಬರುತ್ತಾ ಎಂದು ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.

    ರಾಜ್ಯಸಭಾ ಟಿಕೆಟ್ ಹಂಚಿಕೆ ಸಂಬಂಧ ಬಿಎಲ್ ಸಂತೋಷ್ ಅವರ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲು ಸಂತೋಷ್ ಅವರ ಪಾತ್ರವಿದೆ. ಅದೇ ರೀತಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸಂತೋಷ್ ಅವರ ಪಾತ್ರವಿದೆ. ಹೇಗೆ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ನಾವು ಒಪ್ಪಿಕೊಂಡಿದ್ದೇವೋ ಅದೇ ರೀತಿಯಾಗಿ ಸಂತೋಷ್ ಅವರನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಉತ್ತರಿಸಿದರು.

    ನಾವು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿಲ್ಲ. ನಮ್ಮ ಪಕ್ಷ ಮೊದಲಿನಿಂದಲೂ ಕೇಡರ್ ಆಧಾರಿತ ಪಕ್ಷ. ಟಿಕೆಟ್ ಸಿಕ್ಕಿರುವುದು ಅವರಿಗೂ ಅನಿರೀಕ್ಷಿತ, ನಮಗೂ ಅನಿರೀಕ್ಷಿತ. ನಮ್ಮ ಪಕ್ಷ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಘೋಷಣೆ ಮಾಡಿದ್ದು ನಮ್ಮ ಸಂಸದೀಯ ಮಂಡಳಿ. ಟಿಕೆಟ್ ಹಂಚಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜ್ಯಾಧ್ಯಕ್ಷರ ಜತೆ ನಮ್ಮ ವರಿಷ್ಠರು ಸಮಾಲೋಚಿಸಿದ್ದಾರೆ. ಈ ಸಭೆಯಲ್ಲಿ ಏನು ಚರ್ಚೆ ನಡೆದಿದೆ ಎಂದು ಹೇಳಲು ನಾನು ಪ್ರತ್ಯಕ್ಷದರ್ಶಿಯಲ್ಲ. ರಾಜಕೀಯದಲ್ಲಿ ಲಾಬಿ ಇದ್ದದ್ದೆ. ಆದರೆ ಯಾವಾಗಲೂ ಲಾಬಿ ನಡೆಯುವುದಿಲ್ಲ ಎಂದರು.

    ಈಗ ಯಡಿಯೂರಪ್ಪನವರೇ ಸಿಎಂ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿದ್ದು, ಅವರೇ ನಮ್ಮ ನಾಯಕರು. ನಾಯಕತ್ವ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮೂಗು ಇರುವ ತನಕ ನೆಗಡಿ ಬರುತ್ತದೆ. ನೆಗಡಿ ಬಂತು ಎಂದು ಹೇಳಿ ಮೂಗನ್ನು ಕುಯ್ದುಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದರು.

  • ಬಿಎಸ್‍ವೈ ಸಫಾರಿಯ 2 ಜೇಬಿನ ರಹಸ್ಯ ಬಿಚ್ಚಿಟ್ಟ ಬಿ.ಎಲ್ ಸಂತೋಷ್

    ಬಿಎಸ್‍ವೈ ಸಫಾರಿಯ 2 ಜೇಬಿನ ರಹಸ್ಯ ಬಿಚ್ಚಿಟ್ಟ ಬಿ.ಎಲ್ ಸಂತೋಷ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಫೇವರೇಟ್ ಡ್ರೆಸ್ ಸಫಾರಿ. ಬಿಳಿ ಸಫಾರಿ ಅವರ ನೆಚ್ಚಿನ ಡ್ರೆಸ್. ಆ ಸಫಾರಿಯ ಕೆಳ ಭಾಗದಲ್ಲಿ ಎರಡು ಜೇಬುಗಳು ಮಾತ್ರ ವಿಶಿಷ್ಟವಾದವು. ಆ ಎರಡು ಜೇಬಿನ ರಹಸ್ಯವನ್ನ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಿಚ್ಚಿಟ್ಟಿದ್ದಾರೆ.

    ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿ.ಎಲ್ ಸಂತೋಷ್ ಯಡಿಯೂರಪ್ಪ ಬಗ್ಗೆ ಮಾತನಾಡಿ ಹಲವು ವಿಷಯಗಳನ್ನ ಬಿಚ್ಚಿಟ್ಟರು. ಹೀಗೆ ಮಾತನಾಡುವಾಗ ಯಡಿಯೂರಪ್ಪ ಅವರ ಜೇಬು ಮತ್ತು ಚೀಟಿಯ ಬಗ್ಗೆ ಹೇಳಿದ್ದು ವಿಶೇಷವಾಗಿತ್ತು. ಯಡಿಯೂರಪ್ಪ ಅವರ ಸಫಾರಿಯಲ್ಲಿ ಎರಡು ಜೇಬುಗಳು ಇರುತ್ತವೆ. ಆ ಜೇಬುಗಳಲ್ಲಿ ಯಾವಾಗಲೂ ಒಂದಷ್ಟು ಚೀಟಿಗಳು ಇರುತ್ತವೆ. ಆ ಎರಡು ಜೇಬುಗಳು ಅವರಿಗೆ ಗಣಿ ಇದ್ದಂತೆ. ಏನಾದ್ರೂ ಘೋಷಣೆ ಮಾಡ್ಬೇಕಾಗಲೀ, ಯಾರನ್ನಾದ್ರೂ ಬೈಯ್ಯಬೇಕಾಗಲೀ, ಆ ಚೀಟಿ ತೆಗೆದರೆ ಸಾಕಾಗುತ್ತೆ ಅಂತೇಳಿದ್ರು.

    ಅಷ್ಟೇ ಅಲ್ಲ ಬಿಜೆಪಿ ಸಭೆಗಳಲ್ಲಿ ಯಡಿಯೂರಪ್ಪ ಚೀಟಿಗೆ ಕುತೂಹಲ ಇರುತ್ತಿದ್ದನ್ನು ಸಹ ಬಹಿರಂಗಪಡಿಸಿದ್ರು. ನಾವೆಲ್ಲ ಸಭೆಗಳಲ್ಲಿ ಕುಳಿತಿರುವಾಗ ಯಡಿಯೂರಪ್ಪ ಭಾಷಣ ಮಾಡಲು ಎದ್ದರೆ ಎಷ್ಟು ಚೀಟಿ ತೆಗೆಯುತ್ತಾರೆ ಅಂತ ಕುತೂಹಲದಿಂದ ನೋಡುತ್ತಿದ್ದೆವು. ಇಂದು ಕೂಡ ಅವರ ಜೇಬಲ್ಲಿ ಚೀಟಿಗಳಿವೆ. ಅದನ್ನ ತೆಗೆಯುತ್ತಾರೆ ನೋಡಿ ಬೇಕಾದ್ರೆ ಎಂದು ಬಿ.ಎಲ್.ಸಂತೋಷ್ ಹೇಳಿದ್ರು.

  • ಕಮಲ ಮನೆಯೊಂದರೊಳಗೆ ಮೂರು ಯಜಮಾನಿಕೆ ಅವತಾರ

    ಕಮಲ ಮನೆಯೊಂದರೊಳಗೆ ಮೂರು ಯಜಮಾನಿಕೆ ಅವತಾರ

    – ರವೀಶ್ ಎಚ್.ಎಸ್
    ರಾಜಕಾರಣದಲ್ಲಿ ಕುಟಿಲತೆ ಹಾಗೂ ಕಠಿಣತೆ ಇದೆ. ಶಕುನಿಗಳತಂಹ ಕ್ಯಾರೆಕ್ಟರ್‍ಗಳು ಬಹಳ. ರಾಜಕೀಯ ಚದುರಂಗದಾಟದಲ್ಲಿ ಯಾರು ಯಾವಾಗ ಯಾವ ಪಾನ್ ಬೇಕಾದರೂ ಮುನ್ನಡೆಸಬಹುದು. ಕೆಲವು ಸಂದರ್ಭದಲ್ಲಿ ಘಟಾನುಘಟಿ ಆನೆ ಅಂತಹ ಪಾನ್‍ಗಳೇ ಸೈನಿಕ, ಒಂಟೆ, ಕುದುರೆಗಳಂತಹ ಪಾನ್‍ಗಳ ಚಕ್ರವ್ಯೂಹಕ್ಕೆ ಸಿಲುಕಿ ಆಟದಿಂದ ಹೊರಕ್ಕೆ ತಳಲ್ಪಡುತ್ತವೆ. ಇದೆಲ್ಲ ಗೊತ್ತಿರುವ ವಿಚಾರವೇ. ಆದರೆ ಇದು ಪಕ್ಷದಿಂದ ಪಕ್ಷಕ್ಕೆ ನಡೆಯುವ ಪಂದ್ಯವಾದರೆ ಸಮಸ್ಯೆಯೇನೂ ಇಲ್ಲ. ಈ ಚದುರಂಗದಾಟ ಒಂದು ಪಕ್ಷದೊಳಗೆ ನಡೆದುಬಿಟ್ಟರೆ ಮಾತ್ರ ಕಷ್ಟ.

    ಅಂದಹಾಗೆ ಕರ್ನಾಟಕದ ಕಮಲ ಪಕ್ಷದೊಳಗೆ ಕುಟಿಲ ಚದುರಂಗದಾಟದ ಮೈದಾನ ಸೃಷ್ಟಿಯಾಗಿಬಿಟ್ಟಿದೆ. ಚಟವೋ, ಹಟವೋ ಎಂಬಂತೆ ಒಬ್ಬನ ಕಾಲನ್ನು ಮತ್ತೊಬ್ಬ ಎಳೆಯಲು ಶುರು ಮಾಡಿದ್ದಾರೆ. ನಾನಾ ನೀನಾ ಎನ್ನುತ್ತಾ ಹಾವು-ಏಣಿಯಾಟಕ್ಕಿಳಿದಿದ್ದಾರೆ ರಾಜ್ಯ ಬಿಜೆಪಿ ನಾಯಕರು. ಮೇಲ್ನೋಟಕ್ಕೆ ಇದು ಸುಳ್ಳು ಎಂದು ಉದ್ಗಾರಿಸುವ ನಾಯಕರೇ ತಮ್ಮ ಜತೆಗಾರರ ಬಳಿ ಕುಳಿತಾಗ ಸತ್ಯವನ್ನೇ ಹೇಳಿರೋದು ಬಿಡಿ ಅಂತಾ ಗಹಗಹಿಸಿ ನಗುತ್ತಾರೆ. ಇದಕ್ಕೆಲ್ಲ ಕಾರಣ ಒಂದು ಮನೆಯೊಳಗಣ ಮೂರು ಯಜಮಾನಿಕೆಯ ಅವತಾರ ಸೃಷ್ಟಿಯಾಗಿರೋದು. ಒಂದು ಹೈಕಮಾಂಡ್, ಇನ್ನೊಂದು ಯಡಿಯೂರಪ್ಪ, ಯಜಮಾನಿಕೆ. ಮಗದೊಂದು ಹೈಕಮಾಂಡ್+ಯಡಿಯೂರಪ್ಪ ಮಧ್ಯೆ ನಿಂತ ಬಿ.ಎಲ್.ಸಂತೋಷ್.

    ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬುದು ತುಂಬಾ ಹಳೆಯ ಡೈಲಾಗ್. ಬರೀ ವಿಧಾನಸೌಧ ಮಾತ್ರ ಅಲ್ಲ ಬಿಜೆಪಿ ನಾಯಕರು ನಡುಗುತ್ತಿದ್ದ ಕಾಲವಿತ್ತು. ಆದರೀಗ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ನಡುಗುವ, ನಡುಗಿಸುವ ಕಾಲ ಮಗ್ಗಲು ಬದಲಿಸಿದೆ. 2 ಸೀಟು ಇದ್ದ ಬಿಜೆಪಿಯನ್ನ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಗಟ್ಟಿತನದ ರಾಜಕಾರಣಿ ಯಡಿಯೂರಪ್ಪ ಅನ್ನೋದು ಸತ್ಯ. ಆದರೆ ಅದೇ ಯಡಿಯೂರಪ್ಪ ಕೆಲ ಜೊಳ್ಳುತನದ ಕೆಟ್ಟ ನಿರ್ಧಾರಗಳನ್ನ ತೆಗೆದುಕೊಂಡಿದ್ದು, ಕೆಲ ತಪ್ಪುಗಳನ್ನು ಮಾಡಿದ್ದು ಅಷ್ಟೇ ಸತ್ಯ ಅನ್ನೋದನ್ನು ಒಪ್ಪಿಕೊಳ್ಳಬೇಕು. ಅಡ್ವಾಣಿ, ಮುರಳಿ ಮನೋಹರ ಜೋಷಿ ಅಂತಹ ಘಟಾನುಘಟಿ ನಾಯಕರು ತೆರೆಮರೆಗೆ ಸರಿದಾಗಲೇ ಯಡಿಯೂರಪ್ಪರಂತಹ ನಾಯಕರು ತೆರೆಗೆ ಸರಿದು ಬಿಡ್ತಾರೆ ಅನ್ನುತ್ತಿದ್ದರು. ಆದರೆ ಕರ್ನಾಟಕದ ರಾಜಕೀಯ ಪರಿಸ್ಥಿತಿ, ಸಮೂಹ ನಾಯಕನಿಲ್ಲದ ಬಿಜೆಪಿಯ ಸ್ಥಿತಿ ಯಡಿಯೂರಪ್ಪರನ್ನ ಕಡೆಗಣಿಸಲು ಸಾಧ್ಯವಾಗಲಿಲ್ಲ. ತೆರೆಮರೆಗೆ ಸರಿಸದೇ ಇದ್ದರೂ ತೊಗಲು ಗೊಂಬೆಯಾಟದಂತ ರೀತಿ ತೆರೆಯ ಮೇಲೆ ನಿಯಂತ್ರಿತವಾಗಿ ವಿಜೃಂಭಿಸ್ತಿದ್ದಾರೆ ಯಡಿಯೂರಪ್ಪ. ಮೂರು ಅಧಿಕಾರ ಕೇಂದ್ರಗಳ ನಿಯಂತ್ರಣದಿಂದಲೇ ನಿಯಂತ್ರಿತ ವಿಜೃಂಭಣೆ ಆಗುತ್ತಿರುವುದು ಅಂತಾ ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ.

    ಸಂತೋಷ್ ಒಂದು ಕಾಲದಲ್ಲಿ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದರು. ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಯಡಿಯೂರಪ್ಪಗೆ ಮತ್ತಷ್ಟು ಹತ್ತಿರವಾದ್ರು. ಪಕ್ಷ ಮತ್ತು ಸಂಘದ ಸಂಪರ್ಕ ಸೇತುವಾಗಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಇಬ್ಬರ ಸಂಬಂಧ ಅಷ್ಟಕ್ಕಷ್ಟೇ ಎನ್ನುವಂತಾಯ್ತು ಅಂತಾ ಬಿಎಸ್‍ವೈ ಆಪ್ತರು ಹೇಳ್ತಾರೆ. ಅಲ್ಲಿಂದ ಯಡಿಯೂರಪ್ಪ ಕುರ್ಚಿಯಿಂದ ಇಳಿದ ಮೇಲೆ ಇಬ್ಬರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿ ಪಕ್ಷ ಬಿಟ್ಟ ಬಳಿಕವೂ ಅಂತರ ಬೃಹದಾಕಾರವಾಗಿ ಬೆಳದಿತ್ತು ಅನ್ನೋದಂತೂ ಸುಳ್ಳಲ್ಲ. ಆದರೀಗ ಇನ್ನಷ್ಟು ರಾಜಕೀಯ ಪಥ ಬದಲಿಸಿದೆ. ಯಡಿಯೂರಪ್ಪ ವಾಪಸ್ ಪಕ್ಷಕ್ಕೆ ಬಂದು ನಾನಾ ಸರ್ಕಸ್, ನಾನಾ ಆಪರೇಷನ್ ಮಾಡಿ ಮತ್ತೆ ಪಕ್ಷವನ್ನ ಈಗ ಅಧಿಕಾರಕ್ಕೆ ತಂದಿದ್ದಾರೆ. ಇದೇ ಯಡಿಯೂರಪ್ಪ ಮನೆಗೆ ಸಂತೋಷ್ ಬಂದು ಮಾತುಕತೆ ಮಾಡಿ ಹೋಗುತ್ತಾರೆ. ಆದರೂ ಯಜಮಾನಿಕೆ ವಿಷಯ ಬಂದಾಗ ಮಾತ್ರ ಇದೇ ಸಂತೋಷ್, ಇದೇ ಯಡಿಯೂರಪ್ಪ ವಿಭಿನ್ನ ದಾರಿಯಲ್ಲಿ ಓಡಲು ಶುರು ಮಾಡುತ್ತಾರೆ. ಇವರಿಬ್ಬರ ದಾರಿಗಳು ಬೇರೆಯಾದರೆ, ಆಗಾಗ್ಗೆ ಅಚ್ಚರಿಗಳನ್ನ ಕೊಡುವುದರಲ್ಲಿ ಎತ್ತಿದ ಕೈ ಎನ್ನುವ ಮೋದಿ, ಅಮಿತ್ ಷಾ ಜೋಡಿಯದ್ದು ಕೂಡ ಇನ್ನೊಂದು ದಾರಿ. ಈ ಮೂರು ಯಜಮಾನಿಕೆಯ ಮೂರು ದಾರಿಗಳು ಕಮಲ ಮನೆಯ ಮನಸ್ಸುಗಳನ್ನ ಒಡೆದು ಚೂರು ಮಾಡಿವೆ ಅಂದರೂ ತಪ್ಪಾಗಲಾರದು.

    ಯಜಮಾನಿಕೆಯ ವಿಚಾರ ಪ್ರಸ್ತಾಪಕ್ಕೆ ಕಾರಣ ಇಷ್ಟೆ. ಸಂಪುಟ ವಿಸ್ತರಣೆಯಲ್ಲಿ ಆದ ಗೊಂದಲ. ಯಡಿಯೂರಪ್ಪ ಹೋಗಿ 10+3 ಸುತ್ರದಲ್ಲಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆದುಕೊಂಡು ಬಂದರು. ಸ್ವತಃ ಯಡಿಯೂರಪ್ಪ ಅವರೇ ಮಾಧ್ಯಮದ ಮುಂದೆ ಸೂತ್ರವನ್ನ ಘೋಷಣೆ ಮಾಡಿದ್ದರು. ಆದರೂ ಕೂಡ ದೆಹಲಿಯಲ್ಲಿ ಕುಳಿತ ಒಂದು ಗುಂಪು ಮಾತ್ರ ನೋಡ್ತಾ ಇರಿ. ಬರೀ 10 ಶಾಸಕರು ಸಚಿವರಾಗುವುದು ಅಂತಾ ನಸುನಗುತ್ತಿದ್ದರಂತೆ. ಯಡಿಯೂರಪ್ಪ ಕರ್ನಾಟಕದಲ್ಲಿ ರಾಜಕೀಯ ಮಾಡುತ್ತಿದ್ದರೆ, ದೆಹಲಿಯಲ್ಲಿ ಸಂತೋಷ್ ಕರ್ನಾಟಕದ ರಾಜಕೀಯವನ್ನು ಸಹ ಮಾಡುತ್ತಿದ್ದಾರೆ ಅನ್ನೋ ಮಾತುಗಳಿವೆ. ಬಿಜೆಪಿಯಲ್ಲಿ ಸಂತೋಷ್ ಬಳಗ ಗಟ್ಟಿಯಾಗುತ್ತಿದೆ. ಸಂಘಟನಾ ವಿಷಯ ಬಂದಾಗಲಂತೂ ಈಗ ಸಂತೋಷ್ ಪಡೆಯೇ ಮುಂದೆ. ಇನ್ನೊಂದೆಡೆ ಯಡಿಯೂರಪ್ಪ ಅವರಿಗೆ ಪುತ್ರನ ಭವಿಷ್ಯ ಬಿಟ್ಟು ಪಕ್ಷದ ಬೇರೆ ವಿಚಾರಗಳಿಗೆ ತಲೆಕೆಡಿಸಿಕೊಳ್ಳುತ್ತಿಲ್ಲವೇನೋ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಸಂಘಟನೆ ವಿಚಾರದಲ್ಲಿ ಯಾವುದಕ್ಕೂ ಹಸ್ತಕ್ಷೇಪ ಮಾಡದೇ ಯಡಯೂರಪ್ಪ ಸುಮ್ಮನಾಗಿದ್ದಾರೆ ಅನ್ನೋದು ಬಹು ಚರ್ಚಿತ ವಿಚಾರ. ನನ್ನ ವಿಜೃಭಂಣೆ ಸಾಕು. ಅಧಿಕಾರ ಮುಗಿದ ಬಳಿಕ ನಿವೃತ್ತಿಯಾಗಿಬಿಡಬೇಕು ಎನ್ನುವಂತೆ ಬಾಸವಾಗುವಂತೆ ಪಕ್ಷದ ಚಟುವಟಿಕೆಗಳ ಬಗ್ಗೆ ಯಡಿಯೂರಪ್ಪಗೆ ಈಗ ಅಷ್ಟಕಷ್ಟೆ.

    ಈ ನಡುವೆ ಬಿಜೆಪಿ ಹೈಕಮಾಂಡ್‍ಗೆ ಯಡಿಯೂರಪ್ಪ ಮೇಲಿನ ನಂಬಿಕೆಗಿಂತ ಸಂತೋಷ್ ಮೇಲಿನ ನಂಬಿಕೆ ದೊಡ್ಡದು ಅಂದುಕೊಂಡಿರಬಹುದು. ಆ ಕಾರಣಕ್ಕಾಗಿಯೇ ಸಂತೋಷ್ ಮಾತನ್ನ ಗಂಭೀರವಾಗಿ ಪರಿಗಣಿಸ್ತಾರೆ ಅನ್ನೋ ವಾದವೂ ಇದೆ. ಸಹಜವಾಗಿಯೇ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವುದರಿಂದ ಬಿ.ಎಲ್.ಸಂತೋಷ್ ಮೋದಿ, ಷಾ, ನಡ್ಡಾ ಜತೆ ಸಿಕ್ಕ ಸಿಕ್ಕಾಗಲೆಲ್ಲ ಮಾತನಾಡಬಹುದು. ಆದರೆ ಬೆಂಗಳೂರಲ್ಲಿ ಕೂರುವ ಯಡಿಯೂರಪ್ಪಗೆ ಸಮಯ ಕೊಡಬೇಕಾದರೆ ಬಹಳಷ್ಟು ಯೋಚನೆ ಮಾಡ್ತಾರೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿ ಕರ್ನಾಟಕ ಬಿಜೆಪಿಯ ವಿಚಾರಕ್ಕೆ ಆಗಿರಬಹುದು, ರಾಜ್ಯ ಸರ್ಕಾರದ ವಿಚಾರಕ್ಕೆ ಆಗಿರಬಹುದು ಒಂದು ನಿರ್ಧಾರಕ್ಕೆ ಮೂರು ಯಜಮಾನಿಕೆಗಳು ಅಡ್ಡ ನಿಲ್ಲುತ್ತಿವೆ. ಕಮಲ ಮನೆಯೊಳಗಿನ ಮೂರು ಯಜಮಾನಿಕೆಯ ಹಾವು-ಏಣಿ ಆಟ ನಿಂತಾಗ ಮಾತ್ರ ಹೊರಗಿನ ಎದುರಾಳಿಗಳನ್ನ ಎದುರಿಸಬಹುದು. ಇಲ್ಲದಿದ್ದರೆ ಭವಿಷ್ಯದ ಬಿಜೆಪಿಯ ರಾಜಕೀಯ ನಡೆ ಕಷ್ಟ.

    ಹೂಚೆಂಡು: ಯಡಿಯೂರಪ್ಪ ಮಾತು ಕೇಳಿಕೊಂಡು ಮೂವರು ಶಾಸಕರು ಸಚಿವರಾಗುವುದಕ್ಕೆ ಹೊಸ ಬಟ್ಟೆ ಹೊಲಿಸಿಕೊಂಡು ಸಿದ್ಧವಾಗಿದ್ದರಂತೆ. ಆದ್ರೆ ಇದನ್ನ ನೋಡಿದ ದೆಹಲಿಯಲಿದ್ದ ರಾಜ್ಯ ಬಿಜೆಪಿಯ ಒಂದು ಗುಂಪು ಅವರ ಹೊಸ ಬಟ್ಟೆ ಯುಗಾದಿಗೆ ಹೊರತು ಸಚಿವರಾಗಲು ಅಲ್ಲ ಅಂತಾ ಮುಸಿಮುಸಿ ನಗುತ್ತಿದ್ದರಂತೆ. ಇದು ಗೊತ್ತಾಗಿ ತಿರುಗುಬಾಣ ಆಗುತ್ತೆ ನೋಡುತ್ತಾ ಇರಿ ನಾವು ಕಾಯುತ್ತೇವೆ ಅಂತಾ ವಂಚಿತರು ಹಲ್ಲು ಕಡಿಯುತ್ತಿದ್ದಾರಂತೆ.