Tag: BJYM

  • ತನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದವರಿಗೆ ಸಿಹಿ ತಿಂಡಿ ಕೊಟ್ಟ ರಾಹುಲ್ ಗಾಂಧಿ

    ತನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದವರಿಗೆ ಸಿಹಿ ತಿಂಡಿ ಕೊಟ್ಟ ರಾಹುಲ್ ಗಾಂಧಿ

    – ಬಿಹಾರದಲ್ಲಿ ಮತದಾರ ಅಧಿಕಾರ ಯಾತ್ರೆ ವೇಳೆ ಘಟನೆ
    – ಮೋದಿ ಹೀಗೆ ಸಾರ್ವಜನಿಕವಾಗಿ ಓಡಾಡಬಹುದೇ ಅಂತ ಪ್ರಶ್ನೆ

    ಪಾಟ್ನಾ: ಬಿಹಾರದಲ್ಲಿ ವೋಟ್‌ ಅಧಿಕಾರ ಯಾತ್ರೆ ವೇಳೆ ತನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆವೈಎಂ ಕಾರ್ಯಕರ್ತರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಿಹಿ ತಿಂಡಿ ಕೊಟ್ಟ ಘಟನೆ ನಡೆದಿದೆ.

    ಬಿಹಾರದ ದರ್ಭಾಂಗದಲ್ಲಿ (Darbhanga) ರಾಹುಲ್‌ ಗಾಂಧಿ ಅವರ ‘ಮತದಾರ ಅಧಿಕಾರ ಯಾತ್ರೆ’‌ ವೇಳೆ ಕಾಂಗ್ರೆಸ್ ಧ್ವಜ ಹಿಡಿದ ವ್ಯಕ್ತಿಯೋರ್ವ ಪ್ರಧಾನಿ ಮೋದಿ (PM Modi) ಮತ್ತು ಅವರ ದಿವಂಗತ ತಾಯಿ ಹೀರಾಬೆನ್‌ ಮೋದಿ ಅವರ ಬಗ್ಗೆ ಅವಾಚ್ಯ ಪದ ಬಳಸಿ ನಿಂದಿಸಿದ ಘಟನೆ ನಡೆದಿತ್ತು. ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ಕೂಡ ನಡೆಸಿತ್ತು. ಇಂದು ಬಿಜೆವೈಎಂ ಕಾರ್ಯಕರ್ತರು ಸಹ ರಾಹುಲ್‌ ಗಾಂಧಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ:  ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ 85%ಗೆ ಏರಿಕೆ: ತೇಜಸ್ವಿ ಯಾದವ್

    ರಾಹುಲ್‌ ಗಾಂಧಿ ಇದ್ದ ವಾಹನದ ಕಡೆಗೆ ಬಂದು ಕಪ್ಪು ಬಾವುಟ ಪ್ರದರ್ಶಿಸಿದರು. ಆದರೂ ಕೋಪಗೊಳ್ಳದ ರಾಹುಲ್‌ ಬಿಜೆವೈಎಂ ಕಾರ್ಯಕರ್ತನಿಗೆ ಸಿಹಿ ತಿಂಡಿ ಕೊಟ್ಟು ಕಳಿಸಿದರು. ಈ ಕುರಿತ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಪಾಕ್‌ ಹುಟ್ಟಡಗಿಸಲು ಐಎಎಫ್‌ ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರ: ವಾಯುಪಡೆಯ ಉಪಮುಖ್ಯಸ್ಥ ಮಾಹಿತಿ

    ವಿಡಿಯೋನಲ್ಲಿ ಏನಿದೆ?
    ಮತದಾರ ಅಧಿಕಾರ ಯಾತ್ರೆ ಹೊರಡುತ್ತಿದ್ದ ಹಾದಿಯಲ್ಲಿ ಪ್ರತಿಭಟನೆ ಗಮನಿಸಿದ ರಾಹುಲ್‌ ಗಾಂಧಿ ವಾಹನ ನಿಲ್ಲಿಸುವಂತೆ ಡ್ರೈವರ್‌ಗೆ ಹೇಳಿದರು. ಬಳಿಕ ಬಿಜೆವೈಎಂ ಕಾರ್ಯಕರ್ತರಲ್ಲಿ ಒಬ್ಬರನ್ನ ಕರೆದುಕೊಂಡುಬರುವಂತೆ ಕಾಂಗ್ರೆಸ್‌ ನಾಯಕರಿಗೆ ಹೇಳಿದ್ರು. ಆದ್ರೆ ಪ್ರತಿಭಟನಾಕಾರ ರಾಹುಲ್ ಕಾರಿನ ಬಳಿ ಹೋಗಲು ಕೊಂಚ ಹೆದರಿದರು. ಬಳಿಕ ರಾಹುಲ್‌ ಕಾರಿನ ಬಳಿ ಬಂದಾಗ ಆತನಿಗೆ ಸಿಹಿ ತಿಂಡಿ ಕೊಟ್ಟು ಕಳಿಸಿದರು.

    ಇದೇ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ʻನಿಮ್ಮ ಮೋದಿ ಈ ರೀತಿ ಸಾರ್ವಜನಿಕವಾಗಿ ಓಡಾಡಬಹುದೇ?ʼ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ‘ಮಾನವ ಜಿಪಿಎಸ್’ ಎಂದೇ ಕುಖ್ಯಾತಿ ಪಡೆದಿದ್ದ ಬಾಗು ಖಾನ್ ಹತ್ಯೆ

  • ರಾಹುಲ್‌ ಜೊತೆ ಸಂವಾದಕ್ಕೆ BJYM ಉಪಾಧ್ಯಕ್ಷ ಅಭಿನವ್‌ ಪ್ರಕಾಶ್‌ ಕಳುಹಿಸುತ್ತೇವೆ : ತೇಜಸ್ವಿ ಸೂರ್ಯ ಕೌಂಟರ್‌

    ರಾಹುಲ್‌ ಜೊತೆ ಸಂವಾದಕ್ಕೆ BJYM ಉಪಾಧ್ಯಕ್ಷ ಅಭಿನವ್‌ ಪ್ರಕಾಶ್‌ ಕಳುಹಿಸುತ್ತೇವೆ : ತೇಜಸ್ವಿ ಸೂರ್ಯ ಕೌಂಟರ್‌

    ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಜೊತೆ ಸಂವಾದ ನಡೆಸಲು ಬಿಜೆಪಿ ಯುವ ಮೋರ್ಚಾ ಘಟಕದ ರಾಷ್ಟ್ರೀಯ ಅಪಾಧ್ಯಕ್ಷ ಅಭಿನವ್‌ ಪ್ರಕಾಶ್‌ (Abhinav Prakash) ಹೆಸರನ್ನು ಸೂಚಿಸಿದೆ.

    ಈ ಸಂಬಂಧ ಭಾರತೀಯ ಜನತಾ ಯುವ ಮೋರ್ಚಾ (BJYM) ಅಧ್ಯಕ್ಷ ತೇಜಸ್ವಿ ಸೂರ್ಯ ಅವರು, ಪ್ರೀತಿಯ ರಾಹುಲ್‌ ಗಾಂಧಿ ಅವರೇ ಬಿಜೆವೈಎಂ ನಿಮ್ಮ ಜೊತೆ ಚರ್ಚಿಸಲು ಅಭಿನಾ ಪ್ರಕಾಶ್‌ ಅವರನ್ನು ನೇಮಕ ಮಾಡಿದೆ. ಇವರು ರಾಯ್‌ಬರೇಲಿಯಲ್ಲಿ ಸುಮಾರು 30% ರಷ್ಟಿರುವ ಪಾಸಿ ಸಮುದಾಯದ ಯುವ ಮತ್ತು ವಿದ್ಯಾವಂತ ನಾಯಕರಾಗಿದ್ದಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: 400 ಸ್ಥಾನಗಳನ್ನು ಗೆಲ್ಲುವ ಗುರಿ ಕೇವಲ ಘೋಷಣೆಯಲ್ಲ, ವಾಸ್ತವದಲ್ಲೂ ಅದು ನಿಜವಾಗುತ್ತೆ: ಮೋದಿ

    ಇದು ರಾಜಕೀಯ ಕುಡಿ ಮತ್ತು ಕಠಿಣ ಹಾದಿಯಲ್ಲಿ ಬಂದ ಸಾಮಾನ್ಯ ಯುವಕನ ನಡುವಿನ ಉತ್ಕೃಷ್ಟ ಚರ್ಚೆಯಾಗಲಿದೆ ಎಂದು ತೇಜಸ್ವಿ ಸೂರ್ಯ (Tejasvi Surya) ಅಭಿಪ್ರಾಯಪಟ್ಟಿದ್ದಾರೆ.

    ನಿವೃತ್ತ ನ್ಯಾಯಧೀಶರು ಮೋದಿ-ರಾಹುಲ್ ಗಾಂಧಿ ನಡುವೆ ಬಹಿರಂಗ ರಾಜಕೀಯ ಸಂವಾದಕ್ಕೆ ಬರುವಂತೆ ಪತ್ರದ ಮೂಲಕ ಆಹ್ವಾನ ನೀಡಿದ್ದರು. ಈ ಆಹ್ವಾನಕ್ಕೆ ರಾಹುಲ್‌ ಗಾಂಧಿ ಒಪ್ಪಿಗೆ ನೀಡಿದ ಬೆನ್ನಲ್ಲೇ ತೇಜಸ್ವಿ ಸೂರ್ಯ ಅಭಿನವ ಪ್ರಕಾಶ್‌ ಅವರನ್ನು ಬಿಜೆಪಿ ಪ್ರತಿನಿಧಿಯಾಗಿ ಕಳುಹಿಸುತ್ತೇವೆ ಎಂದು ಹೇಳುವ ಮೂಲಕ ಠಕ್ಕರ್‌ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ(Social Media) ಮೋದಿ ರಾಹುಲ್‌ ಸಂವಾದ ವಿಚಾರದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ. ಪ್ರಧಾನಿ ಮೋದಿ ಆಹ್ವಾನ ಸ್ವೀಕರಿಸಿಲ್ಲ. ರಾಹುಲ್‌ ಕಂಡರೆ ಭಯ ಎಂದು ಕಾಂಗ್ರೆಸ್‌ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಇತ್ತ ಮೋದಿ ಅಭಿಮಾನಿಗಳು INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? ಪ್ರಧಾನಿ ಅಭ್ಯರ್ಥಿಯೇ ಘೋಷಣೆ ಆಗದೇ ಇರುವಾಗ ರಾಹುಲ್‌ ಜೊತೆ ಸಂವಾದಕ್ಕೆ ಹೋಗುವುದರಲ್ಲಿ ಅರ್ಥ ಏನಿದೆ ಎಂದು ಪ್ರಶ್ನಿಸುತ್ತಿದ್ದಾರೆ.