Tag: BJP< JDS

  • ಮಹಿಳೆಯರಿಗೆ ಫ್ರೀ ಬಸ್‌ ಕೊಟ್ಟರು, ಪಾಪ ಪುರುಷರಿಗೆ ಏನ್‌ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ

    ಮಹಿಳೆಯರಿಗೆ ಫ್ರೀ ಬಸ್‌ ಕೊಟ್ಟರು, ಪಾಪ ಪುರುಷರಿಗೆ ಏನ್‌ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ

    – ವಕ್ಫ್‌ ವಿಚಾರ ತಂದು ಸರ್ಕಾರ ಹಿಂದೂ-ಮುಸ್ಲಿಮರನ್ನು ಒಡೆಯುತ್ತಿದೆ
    – ನಿಖಿಲ್‌ರನ್ನ ಗೆಲ್ಲಿಸದಿದ್ರೆ ನಾವೆಲ್ಲ ಪಾಪ ಮಾಡಿದಂತೆ ಎಂದ ನಟಿ

    ರಾಮನಗರ: ಕಾಂಗ್ರೆಸ್‌ನವರು ಮಹಿಳೆಯರಿಗಾಗಿ ಫ್ರೀ ಬಸ್‌ ಮಾಡಿದ್ರು, ಪಾಪ ಪುರುಷರು ಏನ್‌ ಮಾಡಿದ್ರು? ಪುರುಷರ ಜೇಬಿಗೆ ಕತ್ತರಿ ಹಾಕಿ, ಮಹಿಳೆಯರಿಗೆ ಕೊಟ್ಟರು. ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರನ್ನ ಈಗಲೂ ಶಾಸಕರಾಗಿ ನಾವು ಆಯ್ಕೆ ಮಾಡದಿದ್ದರೆ, ನಾವೆಲ್ಲ ಪಾಪ ಮಾಡಿದಂತೆ ಎಂದು ನಟಿ ತಾರಾ ಅನುರಾಧ (Tara Anuradha) ಹೇಳಿದರು.

    ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ-ಜೆಡಿಎಸ್‌ ನಾಯಕರ (BJP JDS Leaders) ಮೈತ್ರಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಅಘೋಷಿತ ಕಾನೂನು ಜಾರಿ ಆದಂತಿದೆ: ಛಲವಾದಿ ನಾರಾಯಣಸ್ವಾಮಿ

    ಹಿಂದೂ-ಮುಸ್ಲಿಮರನ್ನು ಸರ್ಕಾರ ಒಡೆಯುತ್ತಿದೆ:
    ಚನ್ನಪಟ್ಟಣದ (Channapatna) ಜನ ಬಂಗಾರದ ಗೊಂಬೆಯಾಗಿ ಮಾಡಿ ನಿಖಿಲ್ ರನ್ನ ಶಾಸಕರಾಗಿ ಮಾಡ್ತೀರೆಂಬ ನಂಬಿಕೆಯಿದೆ. ಚನ್ನಪಟ್ಟಣದಲ್ಲಿ ಹಿಂದೂ-ಮುಸ್ಲಿಮರು ಭಾಯಿ ಭಾಯಿಯಂತಿದ್ದಾರೆ, ಎಲ್ಲ ಹಬ್ಬಗಳಲ್ಲಿ ಒಂದಾಗಿರ್ತಾರೆ. ಆದ್ರೆ ವಕ್ಫ್ ವಿಚಾರ ತಂದು ಹಿಂದೂ-ಮುಸ್ಲಿಮರನ್ನ ಒಡೆಯುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಕಿಡಿ ಕಾರಿದರು.

    ನಿಖಿಲ್ ಎರಡು ಅಗ್ನಿಪರೀಕ್ಷೆ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ಗೆಲ್ಲಿಸದಿದ್ರೆ ನಾವು ಪಾಪ ಮಾಡಿದಂತೆ. ನಿಖಿಲ್ ಕೈ ಹಿಡಿದು ಮೇಲೆತ್ತಿ ನನ್ನ ಅಣ್ಣನ ಮಗ ನಿಖಿಲ್ ರನ್ನ ಗೆಲ್ಲಿಸಿ ಅಂತ ತಾರಾ ಮನವಿ ಮಾಡಿದರು.

    ಇದೇ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿ, ಚನ್ನಪಟ್ಟಣದಲ್ಲಿ ನಿಖಿಲ್ ಪರ ದೊಡ್ಡ ಗಾಳಿ ಬೀಸ್ತಿದೆ. ಸರ್ಕಾರದ ವಿರುದ್ಧ ಅಲೆ ಇದೆ, ಯೋಗೇಶ್ವರ್ ಕಾಂಗ್ರೆಸ್‌ ಸೇರಿ ತಮ್ಮ ಮೈಮೇಲೆ ತಾವೇ ಗಾಯ ಮಾಡ್ಕೊಂಡು ಔಷಧಿ ಇಲ್ಲದೇ ಪರದಾಡ್ತಿದ್ದಾರೆ. ಗುತ್ತಿಗೆದಾರರರಿಂದ ಸಂಗ್ರಹಿಸಿದ ಹಣ ತಂದು ಕಾಂಗ್ರೆಸ್‌ನವ್ರು ಚುನಾವಣೆ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: Chikkaballapura | ಪುರಾತನ ಆಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ!

    ನಿಖಿಲ್ ಎರಡು ಸಲ ಏನೂ ತಪ್ಪು ಮಾಡದೇ ನೋವು ಅನುಭವಿಸಿದ್ದಾರೆ. ನಿಖಿಲ್ ರಾಮನಗರದಲ್ಲಿ, ಮಂಡ್ಯದಲ್ಲಿ ಸೋತಿರಬಹುದು, ಆದರೆ ಚನ್ನಪಟ್ಟಣದ ಜನ ನಿಖಿಲ್‌ಗೆ ಜನ ದೊಡ್ಡಮಟ್ಟದಲ್ಲಿ ಆಶೀರ್ವಾದ ಮಾಡ್ತಾರೆ ಅಂತ ಭವಿಷ್ಯ ನುಡಿದರು.

  • MUDA Scam | ವೈಟ್ನರ್‌ ಹಿಂದಿರುವ ಅಕ್ಷರಗಳೇನು? – ವೀಡಿಯೋ ಸಮೇತ ಸಾಕ್ಷಿ ನೀಡಿದ ಸಿದ್ದರಾಮಯ್ಯ

    MUDA Scam | ವೈಟ್ನರ್‌ ಹಿಂದಿರುವ ಅಕ್ಷರಗಳೇನು? – ವೀಡಿಯೋ ಸಮೇತ ಸಾಕ್ಷಿ ನೀಡಿದ ಸಿದ್ದರಾಮಯ್ಯ

    – ಬಿಜೆಪಿ–ಜೆಡಿಎಸ್‌ ಪಕ್ಷಗಳ ವಿವೇಕ ಶೂನ್ಯ ನಾಯಕರಿಂದು ಜನರೆದುರು ಬೆತ್ತಲಾಗಿದ್ದಾರೆ: ಸಿಎಂ

    ಬೆಂಗಳೂರು: ವೈಟ್ನರ್ (Whitener) ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿಡಿಯೋ ಸಮೇತ ಸ್ಪಷ್ಟೀಕರಣ ನೀಡಿದ್ದಾರೆ. ವೈಟ್ನರ್ ಹಾಕಿರುವ ಸಾಲಿಗೆ ಲೈಟ್ ಬಿಟ್ಟು ವಿಡಿಯೋ ಮಾಡಲಾಗಿದ್ದು, ಅದರಲ್ಲಿನ ಸಾಲುಗಳು ಏನಿತ್ತು ಎಂಬುದನ್ನ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಭೂಮಿಯಲ್ಲೇ ನಿವೇಶನ ಕೊಡಿ ಎಂಬ ಮನವಿ ಅಷ್ಟೆ ಇದೆ ಎಂದು ವಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಟಕ್ಕರ್ ಕೊಟ್ಟಿದ್ದಾರೆ.

    ಮುಡಾ ದಾಖಲಾತಿಯಲ್ಲಿ ವೈಟ್ನರ್‌ ಹಚ್ಚಿ ಅಕ್ರಮ ಮರೆ ಮಾಚಿದ್ದಾರೆ ಎಂಬ ಬಿಜೆಪಿ-ಜೆಡಿಎಸ್‌ ನಾಯಕರ (BJP-JDS Leader) ಆರೋಪಗಳಿಗೆ ಸಿಎಂ ವೀಡಿಯೋ ಸಮೇತ ಸಾಕ್ಷಿ ನೀಡಿದ್ದಾರೆ. 33 ಸೆಕೆಂಡುಗಳ ವೀಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಹಣ ನೀಡಲು ಮುಂದೆ ಬಂದ ಬಿಜೆಪಿ ನಾಯಕರು ಯಾರೆಂದು ತಿಳಿಸಿ; ಇಲ್ಲವಾದ್ರೆ ಇದು ಹಿಟ್&ರನ್ ಆಗುತ್ತೆ: ಆರ್.ಅಶೋಕ್

    ಸಿಎಂ ಎಕ್ಸ್‌ ಖಾತೆಯಲ್ಲಿ ಏನಿದೆ?
    ಮುಡಾ ಅಕ್ರಮವಾಗಿ ಸ್ವಾದೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್‌ ಹೆಚ್ಚಿದನ್ನೇ ಮಹಾನ್‌ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ – ಜೆಡಿಎಸ್‌ ನಾಯಕರೇ, ವೈಟ್ನರ್‌ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ. ಇದನ್ನೂ ಓದಿ: Jammu Kashmir Election | ಘೋಷಿಸಿದ ಪಟ್ಟಿ ಹಿಂಪಡೆದು ಕೊನೆಗೂ 15 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ

    ನನ್ನ ಪತ್ನಿ ಬದಲೀ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ “ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ” ಎಂಬ ನಾಲ್ಕೈದು ಪದಗಳಿಗೆ ವೈಟ್ನರ್‌ ಹಾಕಿ, ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂಬ ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಭೂಮಿಯಲ್ಲೇ ನಿವೇಶನ ಕೊಡಿ ಎಂಬ ಮನವಿ ಅಷ್ಟೆ ಇದೆ.

    ವೈಟ್ನರ್‌ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ, ಸಿಎಂ ಪತ್ನಿ ನಿವೇಶನ ಕೇಳಿದ್ದು ವಿಜಯನಗರದಲ್ಲಿ, ಮುಡಾ ವಿಚಾರ ಚರ್ಚೆಗೆ ಬಂದ ನಂತರ ಸಿದ್ದರಾಮಯ್ಯ ಅವರ ಪರವಾಗಿ ಯಾರೋ ಹೋಗಿ ವೈಟ್ನರ್‌ ಹಚ್ಚಿ ಬಂದಿದ್ದಾರೆಂದು ಬೊಬ್ಬೆ ಹಾಕುತ್ತಿದ್ದ ಸ್ವಯಂ ಘೋಷಿತ ಕಾನೂನು ಪಂಡಿತರು ಈಗೇನು ಹೇಳುತ್ತಾರೆ? ಆತುರದಲ್ಲಿ ಮೂಗು ಕತ್ತರಿಸಿಕೊಂಡು, ರಾತ್ರಿಯೆಲ್ಲ ಕನ್ನಡಿ ಮುಂದೆ ನಿಂತು ಕಣ್ಣೀರು ಹಾಕಿದ್ದರಂತೆ ಹಾಗಾಯಿತು ಕೆಲವು ಅತಿ ಬುದ್ದಿವಂತರ ಕತೆ. ಇದನ್ನೂ ಓದಿ: ಗೃಹ ಸಚಿವರೇ ನಿಮ್ಮದು ಯಾವ ನ್ಯಾಯ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಏಕೆ?- ಸಾರ್ವಜನಿಕರಿಂದ ತರಾಟೆ

    ಕಪೋಲ ಕಲ್ಪಿತ ಕಟ್ಟುಕತೆಗಳ ಮೂಲಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವಿನಾಃಕಾರಣ ಅಪರಾಧಿಗಳಂತೆ ಬಿಂಬಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಬಿಜೆಪಿ – ಜೆಡಿಎಸ್‌ ಪಕ್ಷಗಳ ವಿವೇಕ ಶೂನ್ಯ ನಾಯಕರು ಇಂದು ಜನರೆದುರು ಬೆತ್ತಲಾಗಿದ್ದಾರೆ. ಸತ್ಯ ಹಾಗೆಯೇ, ಅರಿವಿಗೆ ಬರುವುದು ಸ್ವಲ್ಪ ತಡವಾಗಬಹುದು, ಆದರೆ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ ಅಂತ ಬರೆದುಕೊಂಡಿದ್ದಾರೆ.

  • ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ – ಡಿಕೆಶಿ ವಾರ್ನಿಂಗ್‌

    ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ – ಡಿಕೆಶಿ ವಾರ್ನಿಂಗ್‌

    – ಸಿಎಂ ಬೆನ್ನಿಗೆ ನಿಂತ ಕೈ ನಾಯಕರು; ಮೈತ್ರಿಕೂಟದ ವಿರುದ್ಧ ಕೌಂಟರ್‌ ಅಟ್ಯಾಕ್‌
    – ಡಿಕೆಶಿ ಭಾಷಣದ ವೇಳೆ ʻಗೃಹಲಕ್ಷ್ಮಿʼ ಬರ್ತಿಲ್ಲ, ಬರ್ತಿಲ್ಲ ಅಂತ ಘೋಷಣೆ

    ಮಂಡ್ಯ: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ (BJP JDS Padayatra) ಕೌಂಟರ್‌ ಕೊಡಲು ಇಂದಿನಿಂದ (ಆ.5) ಎರಡು ದಿನಗಳ ಕಾಲ ಕಾಂಗ್ರೆಸ್‌ ಜನಾಂದೋಲನ ಆರಂಭಿಸಿದೆ. ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಜನಾಂದೋಲನ ಸಮಾವೇಶ ಮೊದಲ ದಿನ ಕಾಂಗ್ರೆಸ್‌ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರ ಬ್ಯಾಟ್‌ ಬೀಸಿದ್ದಾರೆ. ಅಲ್ಲದೇ ಬಿಜೆಪಿ – ಜೆಡಿಎಸ್‌ ಮೈತ್ರಿಕೂಟದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

    ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಭಾಷಣ ಮಾಡುತ್ತಾ, ಸಿದ್ದರಾಮಯ್ಯ ಏನು ಮಾಡಬಾರದ ತಪ್ಪು ಮಾಡಿದ್ದಾರೆ? ಸಿದ್ದರಾಮಯ್ಯ ಕಳ್ಳತನ ಮಾಡಿದ್ದಾರ? ಸರ್ಕಾರಿ ಜಮೀನು ಒಡೆದಿದ್ದಾರ? ಸರ್ಕಾರ ಪಡೆದು ಬೇರೆ ಜಾಗ ಕೊಟ್ಟಿದೆ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ನಿಮ್ಮ (ಬಿಜೆಪಿ) ಸರ್ಕಾರದಲ್ಲಾದ ಹಗರಣಗಳ ಬಗ್ಗೆ ಮೊದಲು ಉತ್ತರ ಕೊಡಿ. ಆನಂತರ ಪಾದಯಾತ್ರೆ ಮಾಡಿ. ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ 2ನೇ ಬಾರಿಗೆ ಸಿಎಂ ಆಗಿದ್ದು ನಿಮಗೆ ಸಹಿಸಲು ಆಗ್ತಿಲ್ಲ. ಸರ್ಕಾರ ಮಾಡುವ ಅವಕಾಶ ನಮಗೆ ಸಿಗಲಿಲ್ಲ ಎಂದು ಸಾಯುತ್ತಿದ್ದಾರೆ ಎಂದು ಬಿಜೆಪಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋಚಿಂಗ್‌ ಸೆಂಟರ್‌ಗಳು ಡೆತ್‌ ಚೇಂಬರ್‌ಗಳಾಗಿ ಮಾರ್ಪಟ್ಟಿವೆ – ಸುಪ್ರೀಂ ಚಾಟಿ

    ಗೃಹಲಕ್ಷ್ಮಿ ಯೋಜನೆ ಹಣ ಬರ್ತಿಲ್ಲ, ಬರ್ತಿಲ್ಲ:
    ಮದ್ದೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಜನಾಂದೋಲನ ಸಮಾವೇಶದಲ್ಲಿ, ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಪ್ರಸ್ತಾಪಿಸಿ ಡಿಕೆಶಿ ಭಾಷಣ ಮಾಡುತ್ತಿದ್ದರು. ಈ ವೇಳೆ ಈ ವೇಳೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಬರ್ತಿದೆಯೋ – ಇಲ್ವೋ? ಎಂದು ಪ್ರಶ್ನಿಸಿದಾಗ ಗೃಹಲಕ್ಷ್ಮಿ ಯೋಜನೆ ಹಣ ಬರ್ತಿಲ್ಲ, ಬರ್ತಿಲ್ಲ ಎಂದು ಮಹಿಳೆಯರು ಕೂಗಿದ ದೃಶ್ಯವೂ ಕಂಡುಬಂದಿತು. ತಕ್ಷಣ ಎಚ್ಚೆತ್ತ ಡಿಕೆಶಿ, ಬರುತ್ತೆ ಬರುತ್ತೆ ಎಂದು ಸಮಾಧಾನಪಡಿಸಿದರು.

    ಮುಂದುವರಿದು ಮಾತನಾಡುತ್ತಾ, ಒಂದು, ಎರಡು ತಿಂಗಳದ್ದು ಬಂದಿಲ್ಲ. ಅನುದಾನ ಬಿಡುಗಡೆಯಾಗಿದೆ ಶೀಘ್ರವೇ ಬರಲಿದೆ. ವಿದ್ಯುತ್ ಬಿಲ್ ಉಚಿತ ಜೀರೋ ಬರ್ತಿಲ್ವಾ? ನಮ್ಮದು 10 ತಿಂಗಳ ಸರ್ಕಾರ ಅಲ್ಲ. 10 ವರ್ಷದ ಸರ್ಕಾರ ನಮ್ಮದು ಎಂದು ಹೆಚ್‌ಡಿಕೆಗೆ ಟಾಂಗ್‌ ನೀಡಿದರು. ಇದನ್ನೂ ಓದಿ: Valmiki Scam | 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ – ನಾಗೇಂದ್ರ, ದದ್ದಲ್‌ ಹೆಸರಿಲ್ಲ

  • ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

    ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

    ಮಂಡ್ಯ: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರ ಫಲಿತಾಂಶದಲ್ಲಿ ಬಿಜೆಪಿ-ಜೆಡಿಎಸ್‌ (BJP- JDS) ಮೈತ್ರಿ ಅಭ್ಯರ್ಥಿ ಹೆಚ್‌.ಡಿ ಕುಮಾರಸ್ವಾಮಿ ಬಹುತೇಕ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

    ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (Star Chandru) ವಿರುದ್ಧ ಹೆಚ್‌ಡಿಕೆ 2,71,344 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್‌ಡಿಕೆ ಗೆಲುವು ಬಹುತೇಕ ಖಚಿತವಾಗಿದೆ. ಮತಎಣಿಕೆ ಆರಂಭವಾದಿಗಿನಿಂದಲೂ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡು ಬಂದಿದ್ದರು.

    ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರೀ ಪೈಪೋಟಿ ಏರ್ಪಟ್ಟಿತ್ತು. ಎನ್‌ಡಿಎ ಅಭ್ಯರ್ಥಿ, ಜೆಡಿಎಸ್‌ನ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಕಾಂಗ್ರೆಸ್‌ನ ವೆಂಕಟರಮಣೇಗೌಡ ಅಲಿಯಾಸ್‌ ಸ್ಟಾರ್‌ ಚಂದ್ರು ನಡುವೆ ಇಲ್ಲಿ ಫೈಟ್‌ ಇತ್ತು. ಇದೀಗ ಸ್ಟಾರ್ ಚಂದ್ರು ವಿರುದ್ಧ ಹೆಚ್‌ಡಿಕೆ ಗೆಲುವು ಸಾಧಿಸಿದರೂ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಆಗಬೇಕಷ್ಟೇ.

    ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದರು. ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್‌ ಕಣಕ್ಕಿಳಿದು ನಿಖಿಲ್‌ ವಿರುದ್ಧ ಭರ್ಜರಿ ಜಯಗಳಿಸಿದ್ದರು. ಈ ಬಾರಿಯೂ ನಿಖಿಲ್‌ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೆ ಅಂತ ಹೇಳಲಾಗ್ತಿತ್ತು. ಈ ನಡುವೆ ಸುಮಲತಾ ಅಂಬರೀಶ್‌ ಕೂಡ ಬಿಜೆಪಿಯಿಂದ ಟಿಕೆಟ್‌ಗಾಗಿ ಭಾರೀ ಕಸರತ್ತು ನಡೆಸಿದ್ದರು. ಆದರೆ ಕೊನೆಗೆ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರೇ ಸ್ವತಃ ಕಣಕ್ಕಿಳಿದಿದ್ರು.

    ವಿಜಯೋತ್ಸವಕ್ಕೆ ಬ್ರೇಕ್: ವಿಜಯೋತ್ಸವ, ಸಂಭ್ರಮಾಚರಣೆ, ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿರುವ ಮಂಡ್ಯ ಜಿಲ್ಲಾಡಳಿತ ಜೂನ್ 4 ರ ಬೆಳಗ್ಗೆ 6 ಗಂಟೆಯಿಂದ ಜೂನ್ 5ರ ಬೆಳಗ್ಗೆ 6 ರವರೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಅಲ್ಲದೇ ಮಂಡ್ಯ ನಗರ ವ್ಯಾಪ್ತಿಯಲ್ಲಿ ಜೂನ್ 3ರ ಸಂಜೆ 6 ಗಂಟೆಯಿಂದ 5 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

  • ಗ್ರಾಮ ಪಂಚಾಯತ್ ಗಾದಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ – ವೀಡಿಯೋ ವೈರಲ್

    ಗ್ರಾಮ ಪಂಚಾಯತ್ ಗಾದಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ – ವೀಡಿಯೋ ವೈರಲ್

    ಚಾಮರಾಜನಗರ: ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರು ಮೈತ್ರಿ ಧರ್ಮ ಪಾಲನೆ ಮಾಡಿ ಮಾತುಕತೆಯಂತೆ ಆಣೆ ಪ್ರಮಾಣ ಮಾಡಿರುವ ವೀಡಿಯೋವೊಂದು ಇದೀಗ ವೈರಲ್ ಆಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ 15 ಸದಸ್ಯ ಬಲವಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ 3 ಪಕ್ಷಗಳ ತಲಾ 5 ಬೆಂಬಲಿತರು ಗೆದ್ದಿದ್ದರು. ಆದರೆ ಇಲ್ಲಿ ಅಧಿಕಾರ ಹಿಡಿಯಲು ಯಾವುದಾದರೂ 2 ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಿದ್ಧವಾಗಿ 2 ಪಕ್ಷಗಳ ಸದಸ್ಯರು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಈ ವೇಳೆ ಕೆಲ ಸದಸ್ಯರು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಮುಂಭಾಗ ಕರ್ಪೂರ ಹಚ್ಚಿ ನಾವೆಲ್ಲ ಆಡಿದ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ.

    ಮತ್ತೊಂದು ವೀಡಿಯೋದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹನೂರು ತಾಲೂಕು ಘಟಕದ ಅಧ್ಯಕ್ಷ ಕಣ್ಣೂರು ಬಸವರಾಜಪ್ಪ ಮಾತನಾಡಿ ಮೊದಲ 10 ತಿಂಗಳ ಅವಧಿಗೆ ಬಸವರಾಜು, ಮುಂದಿನ 12 ತಿಂಗಳು ಮಮತಾರಾಣಿ ಮತ್ತು ಉಳಿದ 8 ತಿಂಗಳಿಗೆ ಶಬಾನ ಖಾನಮ್ ಅವರು ಅಧ್ಯಕ್ಷರಾಗಲಿದ್ದಾರೆ. ಏನೇ ಆದರೂ ನಾವೆಲ್ಲಾ 50:50 ಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

    ಇದೇ ವೇಳೆ ಮತ್ತೊರ್ವ ಮುಖಂಡ ಫೈರೋಜ್ ಮಾತನಾಡಿದ್ದು 5 ವರ್ಷ ಈಗ ಹೇಗಿದ್ದೇವೆ ಹಾಗೆಯೇ ಇರಬೇಕು, ಯಾರಾದರು ಒಬ್ಬರು ಹೆಚ್ಚು ಕಡಿಮೆ ಮಾಡಿದರೆ ಅವರ ಮನೆ ಮುರಿದು ಹೋಗುತ್ತದೆ ಎಂದು ಹೇಳಿದ್ದಾರೆ. ಈ ಎರಡು ವಿಡಿಯೋಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಅಥವಾ ಚುನಾವಣಾ ಆಯೋಗ ಮಧ್ಯೆ ಪ್ರವೇಶಿಸಿ ಏನಾದರೂ ಕ್ರಮ ಕೈಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • ಕುಚುಕು ದೋಸ್ತಿಗಳು ಅರಳಿಸಿದ ಕಮಲದ `ಮೊಗ್ಗು’ ಯಾರ ಮುಡಿಗೆ..?

    ಕುಚುಕು ದೋಸ್ತಿಗಳು ಅರಳಿಸಿದ ಕಮಲದ `ಮೊಗ್ಗು’ ಯಾರ ಮುಡಿಗೆ..?

    ಹೈ ವೋಲ್ಟೇಜ್ ಮ್ಯಾಚನ್ನ ಸೀಟ್ ತುದೀಲಿ ಕೂತು ನೋಡಿದ ಹಾಗಿನ ಮಜಾ ಕೊಡುತ್ತೆ ಶಿವಮೊಗ್ಗದ ರಾಜಕಾರಣ. ಇಲ್ಲಿನ ಜನರ ನರ ನಾಡಿಗಳಲ್ಲಿ ರಕ್ತದ ಜೊತೆಗೆ ರಾಜಕೀಯವೂ ಬೆರೆತು ಹೋಗಿದೆ. ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ, ಶಾಂತವೇರಿ ಗೋಪಾಲ ಗೌಡರಂತಹಾ ದಿಗ್ಗಜ ರಾಜಕೀಯ ಪಟುಗಳ ತವರೂರು ಶಿವಮೊಗ್ಗ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ನವರಂತಹಾ ದಿಗ್ಗಜರ ಊರು. ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪನವರ ರಾಜಕೀಯ ದಾಯಾದಿತ್ವವನ್ನ ನೋಡಿರೋ ಊರೇ ಶಿವಮೊಗ್ಗ. ಶಿವಮೊಗ್ಗ ಅನ್ನೋ ಸಾಮ್ರಾಜ್ಯದಲ್ಲಿ ಯಾವ ಪಕ್ಷ ತನ್ನ ಹಿಡಿತ ಸಾಧಿಸುತ್ತೆ ಅನ್ನೋದೇ ಕದನ ಕಣದ ಕುತೂಹಲವನ್ನ ಹೆಚ್ಚಿಸಿದೆ.

    ಶಿವಮೊಗ್ಗೆಯ ಹೆಸರಿನ ಹಿಂದಿದೆ ಸಿಹಿಯಾದ ಕಥೆ..!
    ಶಿವಮೊಗ್ಗ ಹೆಸರಿನ ಹಿಂದೆ ಒಂದು ರೋಚಕ ಇತಿಹಾಸವಿದೆ. ಶಿವಮುಖ ಅನ್ನೋ ಹೆಸರು ಮುಂದೆ ಸಿಹಿ ಮೊಗೆ ಅಂದ್ರೆ ಸಿಹಿಯಾದ ಮೊಗ್ಗಾಗಿ ಅರಳಿದ್ದೇ ಶಿವಮೊಗ್ಗ ಅನ್ನೋ ಸುಂದರ ಊರು. ಮೌರ್ಯ ಸಾಮ್ರಾಜ್ಯದ ಕುರುಹುಗಳೂ, ಚಾಲುಕ್ಯ, ಗಂಗರು, ರಾಷ್ಟ್ರಕೂಟರು, ಹೊಯ್ಸಳರ ಹೆಜ್ಜೆ ಗುರುತುಗಳೂ ಇಲ್ಲಿ ಆಳವಾಗಿ ಬೇರೂರಿವೆ. ಶಿವಮೊಗ್ಗೆಯ ಇತಿಹಾಸವೇ ರೋಚಕ, ರೋಮಾಂಚಕ.

    ಮೊಗೆದಷ್ಟೂ ಮುಗಿಯಲ್ಲ ಶಿವಮೊಗ್ಗೆಯ ಪ್ರವಾಸೀ ತಾಣಗಳು
    ಐದು ನದಿಗಳ ಹರಿವನ್ನು ಹೊಂದಿರುವ ಶಿವಮೊಗ್ಗ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು ಕರ್ನಾಟಕ ಆಹಾರದ ತೊಟ್ಟಿಲು ಮತ್ತು ಕರ್ನಾಟಕದ ಅಕ್ಕಿಯ ಕಣಜ ಎಂಬ ಹೆಸರು ಪಡೆದಿದೆ. ಸಹ್ಯಾದ್ರಿ ಬೆಟ್ಟಗಳ ಸಾಲಿನಿಂದಾಗಿ ಶಿವಮೊಗ್ಗೆಯಲ್ಲಿ ಹರಿಯುವ ನದಿಗಳು ವರ್ಷಪೂರ್ತಿ ಮಳೆಯನ್ನು ಕಂಡು ತುಂಬಿ ಹರಿಯುತ್ತವೆ. ಸ್ಥಳೀಯರು ಶಿವಮೊಗ್ಗವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ. ಇಲ್ಲಿ ದೇವಸ್ಥಾನಗಳು, ಬೆಟ್ಟಗುಡ್ಡಗಳು, ತರಕಾರಿ ಬೆಳೆಯುವ ಸ್ಥಳಗಳು ಮತ್ತು ಭಾರತದಲ್ಲಿಯೇ ಅತಿ ಎತ್ತರದ ಪ್ರಸಿದ್ದ ಜೋಗ ಜಲಪಾತ ಇಲ್ಲಿದೆ.

    ಪ್ರವಾಸಿಗರಿಗೆ ಅಚ್ಚರಿಗಳ ತೊಟ್ಟಿಲು
    ಆಗುಂಬೆಯಾ ಪ್ರೇಮ ಸಂಜೆಯಾ ಅನ್ನೋ ಹಾಡಿಗೆ ಸ್ಪೂರ್ತಿ ನೀಡಿದ ಸೂರ್ಯಾಸ್ತದ ಬೆಡಗಿ ಇಲ್ಲೇ ಇರೋದು. ಶಿವಮೊಗ್ಗದಿಂದ 90 ಕಿಲೋ ಮೀಟರ್ ದೂರದಲ್ಲಿದೆ ಈ ಸುಂದರಾತಿ ಸುಂದರ ತಾಣ. ಗಾಜನೂರಿನ ಬಳಿಯಿರೋ ತುಂಗಾ ಜಲಾಶಯ, ಕುಪ್ಪಳ್ಳಿಯ ಕುವೆಂಪು ಮನೆ, ತಾವರೆಕೊಪ್ಪ ಸಿಂಹಧಾಮ, ಬಳುಕೋ ಶ್ವೇತ ಸುಂದರಿ ಧರೆಗಿಳಿದಂತೆ ಕಾಣೋ ಜೋಗ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, ಕೊಡಚಾದ್ರಿ ಬೆಟ್ಟ, ಸಿರಿ ಮನೆ ಜಲಪಾತ ಹೀಗೆ ಪ್ರವಾಸಿಗರ ಮನಸ್ಸಿಗೆ ಮುದ ಕೊಡೋ ಸ್ಥಳಗಳು ಲೆಕ್ಕವಿಲ್ಲದಷ್ಟಿವೆ.

    ಈಸೂರಿನ ಕದನ ಕಲಿಗಳು ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದು ಹೇಗೆ ಗೊತ್ತಾ..?
    ಈಸೂರಿನ ಸ್ವಾತಂತ್ರ್ಯ ಕಲಿಗಳು ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ಸಮರಾಹ್ವಾನ ಕೊಟ್ಟಿದ್ದೂ ಇದೇ ಮಣ್ಣಿನಲ್ಲಿ. ಏಸೂರು ಕೊಟ್ಟರೂ ಈಸೂರು ಕೊಡೆವು ಅನ್ನೋ ಎಂಬ ಘೋಷಣೆಯೊಂದಿಗೆ ಸಣ್ಣ ಸಣ್ಣ ಹುಡುಗರಿಂದ ಶುರುವಾದ ಈಸೂರು ಸ್ವಾತಂತ್ರ್ಯ ಚಳವಳಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಮುದ್ರಿತಗೊಂಡಿವೆ. ಮಾನಪ್ಪ ನಾಯಕರ ನೇತೃತ್ವದಲ್ಲಿ ಇಡೀ ಜಿಲ್ಲೆಗೆ ಜಿಲ್ಲೆಯ ಜನ್ರೇ ರೊಚ್ಚಿಗೆದ್ದಿದ್ರು. ಕರನಿರಾಕರಣೆ, ಉಪ್ಪಿನ ಮೇಲಿನ ತೆರಿಗೆ, ಅರಣ್ಯ ಹೀಗೆ ಅನೇಕ ವಿಷಯಗಳನ್ನಿಟ್ಕೊಂಡು ಬ್ರಿಟೀಷರ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನವೇ ನಡೆದು ಹೋಯ್ತು. ಜನರನ್ನ ಸಂಘಟಿಸೋಕೆ ಹರಿಕಥೆ, ಕೀರ್ತನೆ ಹಾಗೂ ಹಾಡುಗಳು ನೆರವಾದ್ವು. ಏಸೂರ ಕೊಟ್ಟರೂ ಈಸೂರ ಬಿಡೆವು ಅನ್ನೋ ಗೀತೆ ಇಂದಿಗೂ ಮಾರ್ದನಿಸುತ್ತದೆ.

    ಶಿವಮೊಗ್ಗದ ರಂಗೀನ್ ರಾಜಕಾರಣಕ್ಕೆ ಇದೆ ಭರ್ಜರಿ ಇತಿಹಾಸ..!!

    ಹೋರಾಟ ಹಾಗೂ ರಾಜಕಾರಣವನ್ನ ತನ್ನಲ್ಲಿ ಮೊದಲಿನಿಂದಲೂ ಹೊತ್ತುಕೊಂಡು ಬಂದ ಶಿವಮೊಗ್ಗ ಸ್ಟಾರ್ ಕ್ಷೇತ್ರವೂ ಹೌದು. ಕರ್ನಾಟಕ ಚುನಾವಣೆ ಅಂದ್ರೆ ಜನರ ಕುತೂಹಲ ಮೊದಲು ಹೋಗೋದೇ ಶಿವಮೊಗ್ಗೆಯತ್ತ. ಹಾಗಾದ್ರೆ, ಶಿವಮೊಗ್ಗದ ರಾಜಕೀಯ ಚಿತ್ರಣ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ. ಕಾಂಗ್ರೆಸ್ ನ ಏಳು ಸುತ್ತಿನ ಕೋಟೆಯನ್ನ ಅಂದ ಕಾಲದಲ್ಲಿ ಬೇಧಿಸಿದ್ದು ಯಡಿಯೂರಪ್ಪ ಮತ್ತು ಈಶ್ವರಪ್ಪ ಅನ್ನೋ ಜಗರಿ ದೋಸ್ತ್ ಗಳು. ಕಾಂಗ್ರೆಸ್ ತನ್ನ ಸಾಮ್ರಾಜ್ಯ ವಿಸ್ತರಣೆಯ ತವಕದಲ್ಲಿದ್ರೆ, ಬಿಜೆಪಿಗೆ ಮತ್ತೆ ತನ್ನ ಬಲಿಷ್ಠತೆಯನ್ನ ಒರೆಗೆ ಹಚ್ಚೋ ಸಮಯ. ಇದೆಲ್ಲದ್ರ ನಡುವೆ ಜೆಡಿಎಸ್ ಗೂ ಇಲ್ಲಿ ಅಳಿವು ಉಳಿವಿನ ಪ್ರಶ್ನೆ.

    ಯಡಿಯೂರಪ್ಪನವರು ಈ ಬಾರಿಯೂ ಶಿಕಾರಿ ಹೊಡೀತಾರಾ..?
    ಉತ್ತರ ಕರ್ನಾಟಕ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಈ ಹಿಂದೆ ಕೇಳಿ ಬರ್ತಿತ್ತು. ಆದ್ರೆ, ಯಡಿಯೂರಪ್ಪನವರು ತಮ್ಮ ಸ್ವ ಕ್ಷೇತ್ರ ಶಿಕಾರಿಪುರದಲ್ಲೇ ಶಿಕಾರಿ ಹೊಡೆಯೋಕೆ ನಿಂತಿದ್ದಾರೆ. 2013ರಲ್ಲಿ ನಡೆದ ಎಲೆಕ್ಷನ್ ನಲ್ಲಿ ಬಿಎಸ್ ಯಡಿಯೂರಪ್ಪನವರು 69, 126 ಮತಗಳನ್ನು ಗಳಿಸಿದ್ರು. ಆ ಟೈಮಲ್ಲಿ ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್ ನ ಶಾಂತವೀರಪ್ಪ ಸ್ಪರ್ಧಿಸಿದ್ರೆ, ಜೆಡಿಎಸ್ ನಿಂದ ಎಚ್ ಬಳಿಗಾರ್ ಕಣದಲ್ಲಿದ್ರು. ನಂತ್ರ ನಡೆದ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರರನ್ನ ಜನ ಆರಿಸಿದ್ರು. ಶಿಕಾರಿಪುರ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಜಿ ಬಿ ಮಾಲತೇಶ್ ರನ್ನ ಕಣಕ್ಕಿಳಿಸಿದೆ. ಮಾಲತೇಶ್ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯೋ ಕ್ಯಾಂಡಿಡೇಟ್ ಅಲ್ಲ ಅನ್ನೋದು ಕಾಂಗ್ರೆಸ್ ವಲಯದವ್ರಲ್ಲೇ ಕೇಳಿ ಬರ್ತಿರೋ ಮಾತು. ಹೀಗಾಗಿ ಶಿಕಾರಿಪುರ ಯಡಿಯೂರಪ್ಪನವರಿಗೆ ಸಲಭದ ತುತ್ತಾಗುತ್ತೆ ಅಂತಾನೂ ಹೇಳಲಾಗ್ತಿದೆ. ಇನ್ನು ಜೆಡಿಎಸ್ ಎಚ್.ಟಿ.ಬಳಿಗಾರ್ ರನ್ನ ಅಖಾಡಕ್ಕಿಳಿಸಿದೆ. ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಲ್ಲಿ ಮಾಡಿರೋ ಅಭಿವೃದ್ಧಿ ಕೆಲಸಗಳೇ ಅವ್ರಿಗೆ ಶ್ರೀರಕ್ಷೆ. ಆದ್ರೆ, ಈ ಹಿಂದೊಮ್ಮೆ ಯಡಿಯೂರಪ್ಪನವರೂ ಈ ಕ್ಷೇತ್ರದಲ್ಲಿ ಸೋತಿದ್ದನ್ನೂ ಮರೆಯುವಂತಿಲ್ಲ.

    ಶಿವಮೊಗ್ಗದಲ್ಲಿ ಅರಳೋರು ಯಾರು..? ಅಳೋರು ಯಾರು..?
    ಶಿವಮೊಗ್ಗದಲ್ಲಿ ಈ ಬಾರಿ ಕೆ.ಎಸ್ ಈಶ್ವರಪ್ಪ ಬಿಜೆಪಿ ಹುರಿಯಾಳು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ.ಎಸ್ ಈಶ್ವರಪ್ಪನವರಿಗೆ ಕಳೆದ ಬಾರಿ ಕಾಂಗ್ರೆಸ್ ನ ಕೆ ಬಿ ಪ್ರಸನ್ನ ಕುಮಾರ್ ಸೆಡ್ಡು ಹೊಡೆದು ಗೆಲುವಿನ ನಗೆ ಬೀರಿದ್ರು. ಬಿಜೆಪಿ-ಕೆಜೆಪಿಯ ನಡುವಿನ ರಾಜಕೀಯದಲ್ಲಿ ಪ್ರಸನ್ನ ಕುಮಾರ್ ಗೆದ್ದಿದ್ರು. ಆದ್ರೆ ಆ ತಪ್ಪುಗಳನ್ನ ಈ ಬಾರಿ ಸರಿಪಡಿಸಿಕೊಳ್ಳೋ ತವಕದಲ್ಲಿ ಬಿಜೆಪಿ ಇದೆ.

    ಗ್ರಾಮಾಂತರದಲ್ಲಿ ರಾಜಕೀಯದ್ದೇ ಗಮ್ಮತ್ತು..!
    ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕಿ ಜೆಡಿಎಸ್ ನ ಶಾರದಾ ಪೂರ್ಯಾನಾಯ್ಕ ಈ ಬಾರಿಯೂ ರಣಕಣದಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ಕಳೆದ ಬಾರಿಯ ಅಭ್ಯರ್ಥಿ ಕೆ.ಜಿ ಕುಮಾರಸ್ವಾಮಿಯವ್ರ ಬದಲಾಗಿ ಕೆ.ಬಿ.ಅಶೋಕ ನಾಯ್ಕ್ ರನ್ನ ಬಿಜೆಪಿ ತನ್ನ ಕ್ಯಾಂಡಿಡೇಟ್ ಆಗಿ ಆಯ್ಕೆ ಮಾಡಿದೆ. ಇನ್ನು ಕಾಂಗ್ರೆಸ್ ನಿಂದ ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ. ಶ್ರೀನಿವಾಸ್ ಕರಿಯಣ್ಣ ಅವ್ರಿಗೆ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ ಯಾವ ರೀತಿ ಫೈಟ್ ಇರುತ್ತೆ ಅನ್ನೋ ಕುತೂಹಲ ಇದ್ದೇ ಇದೆ.

    ಹುಟ್ಟುತ್ತಾ ಅಣ್ಣತಮ್ಮಂದಿರು ಈಗ ರಾಜಕೀಯದಲ್ಲೂ ದಾಯಾದಿಗಳು..!
    ಸೊರಬ ಕ್ಷೇತ್ರ ಈ ಬಾರಿ ಅಣ್ಣ ತಮ್ಮಂದಿರ ಕದನಕ್ಕೆ ಸಾಕ್ಷಿಯಾಗ್ತಿದೆ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪರ ಮಕ್ಕಳಾದ ಕುಮಾರ್ ಬಂಗಾರಪ್ಪ ಕಮಲದ ಕೈ ಹಿಡಿದು ಕಂಟೆಸ್ಟ್ ಮಾಡ್ತಿದ್ರೆ, ಮಧು ಬಂಗಾರಪ್ಪ ತೆನೆ ಹೊತ್ತೇ ದಿಟ್ಟ ಉತ್ತರ ಕೊಡೋದಕ್ಕೆ ರೆಡಿಯಾಗಿದ್ದಾರೆ. ಹಾಲಿ ಶಾಸಕ ಮಧು ಬಂಗಾರಪ್ಪ 2013ರ ಎಲೆಕ್ಷನ್ ನಲ್ಲಿ 58,541 ಮತಗಳನ್ನು ಪಡೆದು ಗೆಲುವನ್ನ ಸಾಧಿಸಿದ್ರು. ಇನ್ನು ಕುಮಾರ್ ಬಂಗಾರಪ್ಪ ಕೈ ಬಿಟ್ಟು ಕಮಲ ಹಿಡಿದಿರೋದ್ರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಬಿಜೆಪಿಯನ್ನ ಬಿಟ್ಟು ಬಂದ ರಾಜು ಎಂ ತಲ್ಲೂರ್ ಅವ್ರನ್ನ ಕಣಕ್ಕೆ ಇಳಿಸಿದೆ. ಏನಿದ್ರೂ ಇಲ್ಲಿ ದಾಯಾದಿಗಳ ಕುಟುಂಬ ಕಲಹ ಮನೆ ಬಾಗಿಲು ದಾಟಿ ರಾಜಕೀಯದವರೆಗೆ ತಲುಪಿರೋದೇ ದೊಡ್ಡ ದುರಂತ..!

    ತೀರ್ಥಹಳ್ಳಿಯಲ್ಲಿ ಯಾರ ಮುಕುಟಕ್ಕೆ `ರತ್ನ’?
    ತೀರ್ಥಹಳ್ಳಿ ಕ್ಷೇತ್ರದಲ್ಲಿ ಈ ಬಾರಿಯೂ ಹಾಲಿ ಶಾಸಕ ಹಾಗೂ ಮಾಜಿ ಸಚಿವರೂ ಆಗಿರುವ ಕಿಮ್ಮನೆ ರತ್ನಾಕರ್ ಪ್ರಬಲ ಅಭ್ಯರ್ಥಿ. ಬಿಜೆಪಿಯಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮೊದಲೇ ಟಿಕೆಟ್ ಫಿಕ್ಸ್ ಆಗಿತ್ತು. ಇನ್ನು, ಜೆಡಿಎಸ್ ನಿಂದ ಕಾಂಗ್ರೆಸ್ನಿಂದ ಬಂದಂತಹಾ ಆರ್. ಎಂ ಮಂಜುನಾಥ್ ಗೌಡ ಸ್ಪರ್ಧೆಯಲ್ಲಿದ್ದಾರೆ. ಆದ್ರೆ, ಈ ಕ್ಷೇತ್ರದಲ್ಲೇನಿದ್ರೂ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮೆಲುಗೈ ಸಾಧಿಸಿದೆ ಅನ್ನೋ ಲೆಕ್ಕಾಚಾರ ಇದೆ.

    ಭದ್ರಾವತಿಯಲ್ಲಿ ಗೆಲ್ಲೋ ಉಕ್ಕಿನ ಮನುಷ್ಯ ಯಾರು..?
    ಉಕ್ಕಿನ ನಗರಿ ಭದ್ರಾವತಿಯಲ್ಲಿ ಜೆಡಿಎಸ್ ದ್ದೇ ಪಾರುಪತ್ಯ. ಹಾಲಿ ಶಾಸಕ ಜೆಡಿಎಸ್ ನ ಎಂಜೆ ಅಪ್ಪಾಜಿ ಯವರೇ ಅಭ್ಯರ್ಥಿ. ಕಳೆದ ಬಾರಿ ಟಿಕೆಟ್ ಕೈ ತಪ್ಪಿದ್ರಿಂದ ಪಕ್ಷ ಬಿಟ್ಟು ಮುನಿಸಿಕೊಂಡಿದ್ದ ಬಿ.ಕೆ ಸಂಗಮೇಶ್ ಗೆ ಈ ಬಾರಿ ಕಾಂಗ್ರೆಸ್ ಜೈ ಅಂದಿದೆ. ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ. ಏನಿದ್ರೂ ಅಪ್ಪಾಜಿ ಗೌಡ ಹಾಗೂ ಸಂಗಮೇಶ್ ನಡ್ವೇನೇ ಫೈಟ್ ಆಗೋದು.

    ಸಾಗರದ ಸರದಾರ ಯಾರಾಗ್ತಾರೆ..?
    ಲಿಂಗನಮಕ್ಕಿಯಿಂದ ನಾಡಿಗೆ ಬೆಳಕು ಹರಿಯುತ್ತೆ. ಆದ್ರೆ, ಬಿಜೆಪಿ ಮಟ್ಟಿಗೆ ಇಲ್ಲಿ ಈ ಬಾರಿ ಇದ್ದ ಪವರ್ ಕೂಡಾ ಸ್ವಲ್ಪ ಮಟ್ಟಿಗೆ ಆಫ್ ಆಗಿರೋ ರೀತಿ ಕಾಣಿಸ್ತಿದೆ. ಹಾಲಿ ಶಾಸಕ ಕಾಗೋಡು ತಿಮ್ಮಪ್ಪ ಅವ್ರು ಇಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಆದ್ರೆ, ಈ ಬಾರಿ ಕಾಂಗ್ರೆಸ್ ಹಲವಾರು ಗೊಂದಲಗಳ ನಡುವೆ ಅವ್ರಿಗೇ ಮಣೆ ಹಾಕಿದೆ. ಇನ್ನು, ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲ ಕೃಷ್ಣ ನಡುವೆ ಟಿಕೆಟ್ ಗಾಗಿ ನಡೆದ ಪ್ರಹಸನದ ಬಳಿಕ ಅಂತಿಮವಾಗಿ ಹರತಾಳು ಟಿಕೆಟ್ ಗಿಟ್ಟಿದ್ರು. ಇದ್ರಿಂದ ಸಿಟ್ಟಿಗೆದ್ದ ಬೇಳೂರು ಕಾಂಗ್ರೆಸ್ ಕೈ ಹಿಡಿದು ಜೈ ಅಂದಿದ್ದೂ ಆಯ್ತು. 2013ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ 71, 960 ಮತ ಪಡೆದಿದ್ರು. ಕೆಜೆಪಿಯ ಬಿ.ಆರ್.ಜಯಂತ್ 30,712 , ಜೆಡಿಎಸ್‌ನ ಬೇಳೂರು ಗೋಪಾಲಕೃಷ್ಣ 23,217 ಮತ, ಬಿಜೆಪಿಯ ಶರಾವತಿ ಸಿ.ರಾವ್ 5,355 ಮತಗಳನ್ನು ಪಡೆದಿದ್ರು. ಹೀಗಾಗಿ ಈ ಬಾರಿ ಸಾಗರದ ಜನ ಯಾರಿಗೆ ಜೈ ಅಂತಾರೆ ಅನ್ನೋದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.