Tag: birth

  • ಗರ್ಭಗುಡಿಯಲ್ಲಿ ಭಗವಾನ್ ಕೃಷ್ಣ – ಗೋಶಾಲೆಯಲ್ಲಿ ಜೂನಿಯರ್ ಕೃಷ್ಣ

    ಗರ್ಭಗುಡಿಯಲ್ಲಿ ಭಗವಾನ್ ಕೃಷ್ಣ – ಗೋಶಾಲೆಯಲ್ಲಿ ಜೂನಿಯರ್ ಕೃಷ್ಣ

    ಉಡುಪಿ: ಭಗವಾನ್ ಶ್ರೀಕೃಷ್ಣ ಹುಟ್ಟಿದ ದಿನವೇ ಹುಟ್ಟಿದ.ಸ ಶ್ರೀಕೃಷ್ಣ ಭೂಮಿಗೆ ಬಂದ ಘಳಿಗೆ, ನಕ್ಷತ್ರ ತಿಥಿಯಲ್ಲೇ ಆತನ ಜನ್ಮವೂ ಆಗಿದೆ. ಕೃಷ್ಣ ಹುಟ್ಟಿದ್ದು ಆತನ ಭಕ್ತರಿಗೆ ಎಷ್ಟು ಖುಷಿಯಾಗಿದೆಯೋ ಅಷ್ಟೇ ಖುಷಿ ಗೋಶಾಲೆಯಲ್ಲಿದ್ದ ಗೋಪಾಲಕರಿಗೂ ಆಗಿದೆ.

    ದೇವರು ಹುಟ್ಟಿದ ದಿನದಂದೇ ಹುಟ್ಟಿದ ಆತನಿಗೆ ಇದೀಗ ದೇವರ ಹೆಸರನ್ನೇ ಇಡಲಾಗಿದೆ. ಉಡುಪಿ ಕೃಷ್ಣ ಮಠದ ಗರ್ಭಗುಡಿಯಲ್ಲಿ ಅಷ್ಟಮಿಯ ರಾತ್ರಿ 11.55 ಕ್ಕೆ ದೇವರಿಗೆ ಅಘ್ರ್ಯ ಪ್ರದಾನ ನಡೆಯುತ್ತಿತ್ತು. ಪರ್ಯಾಯ ಪಲಿಮಾರು ಸ್ವಾಮೀಜಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿದ್ದರು. ಇತ್ತ ಗೋಶಾಲೆಯಲ್ಲಿ ಹಸುವೊಂದು ಗಂಡು ಕರುವಿಗೆ ಜನ್ಮ ನೀಡಿದೆ.

    ಭಗವಾನ್ ಕೃಷ್ಣನ ಜನ್ಮದಿಂದ ಮಠದೊಳಗೆ ಭಕ್ತರಿಗೆ ಎಷ್ಟು ಖುಷಿಯಾಗಿತ್ತೋ ಅಷ್ಟೇ ಸಂತಸ ಗೋಪಾಲಕರಿಗೆ ಗೋಶಾಲೆಯೊಳಗೆ ಆಗಿದೆ. ಅಷ್ಟಮಿಯಂದು ಹುಟ್ಟಿದ ಗಂಡು ಕರುವಿಗೆ ಇದೀಗ ಕೃಷ್ಣ ಎಂದೇ ಹೆಸರಿಡಲಾಗಿದೆ. ಕರುವಿನ ತಾಯಿಯ ಹೆಸರು ಬದಲಾಯಿಸಿ ದೇವಕಿ ಎಂದು ಪುನರ್ ನಾಮಕರಣ ಮಾಡಲಾಗಿದೆ.

    ಕರುವಿಗೆ ಹೂವಿನ ಮಾಲೆ ಹಾಕಿ ಮಠದ ಗೋಶಾಲೆಗೆ ಸ್ವಾಗತ ಮಾಡಲಾಗಿದೆ. ಅಷ್ಟಮಿಯಂದೆ ಕರುವಿಗೆ ಜನ್ಮ ನೀಡಿದ ತಾಯಿ ಹಸುವಿಗೆ ದೋಸೆ, ಬೆಲ್ಲದ ಪಾನಕ, ಬಾಳೆಹಣ್ಣು, ಸಿಹಿ ಅವಲಕ್ಕಿ ನೀಡಲಾಗಿದೆ. ಕೃಷ್ಣನ ಅಮ್ಮನಿಗೂ ಹೂಮಾಲೆ ಹಾಕಿ ಪೂಜಿಸಲಾಗಿದ್ದು, ಉಡುಪಿ ಕೃಷ್ಣಮಠಕ್ಕೆ ಬರುವ ಭಕ್ತರು ಕಡೆಗೋಲು ಕೃಷ್ಣನನ್ನು ನೋಡುವ ಜೊತೆಗೆ ಜೂನಿಯರ್ ಕರು ಕೃಷ್ಣನನ್ನೂ ನೋಡಿ, ಮುಟ್ಟಿ ಮುದ್ದು ಮಾಡಿ ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ಮೈಸೂರು: ವರಮಹಾಲಕ್ಷ್ಮಿ ಹಬ್ಬದಂದೇ ತಾಯಿಯೊಬ್ಬರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ವಿಜಯನಗರ ನಿವಾಸಿ ಪ್ರೇಮ್ ಕುಮಾರ್ ಅವರ ಪತ್ನಿ ಸವಿತಾಗೆ 3 ಮಕ್ಕಳ ಜನ್ಮವಾಗಿದೆ. ಸವಿತಾ ತಮ್ಮ 2ನೇ ಹೆರಿಗೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಆಪರೇಷನ್ ಮೂಲಕ ಮೂರು ಮಕ್ಕಳನ್ನು ಯಶಸ್ವಿಯಾಗಿ ಡೆಲಿವರಿ ಮಾಡಿಸಿದ್ದಾರೆ.

    ಮೂರು ಮಕ್ಕಳಲ್ಲಿ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗುವಾಗಿದೆ. ಪತ್ನಿಗೆ ಮೂರು ಮಕ್ಕಳಾದ ಹಿನ್ನಲೆಯಲ್ಲಿ ಪತಿ ಪ್ರೇಮ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ಸದ್ಯ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳೂ ಕ್ಷೇಮವಾಗಿದ್ದಾರೆ.

    ಈ ಹಿಂದೆ ಬಳ್ಳಾರಿಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮದುವೆಯಾಗಿ 10 ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕಾ ಎನ್ನುವಂತಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ!

    ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ!

    ಗದಗ: ಮತ್ಸ್ಯ ರೂಪದ ಅಪರೂಪದ ಮಗುವೊಂದು ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಆಸ್ಪತ್ರೆಯಲ್ಲಿ ಜನನವಾಗಿದೆ. ಆದರೆ ಈ ಮಗು ಜನಿಸಿದ ಮೂರು ಗಂಟೆಯೊಳಗೆ ಮೃತಪಟ್ಟಿದೆ. ಈ ಮಗುವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಹಾಗೂ ಪೋಷಕರು ಕಂಡು ದಿಗ್ಭ್ರಮೆಗೊಂಡಿದ್ದಾರೆ.

    ವೈಜ್ಞಾನಿಕವಾಗಿ ಈ ರೀತಿಯ ಮಗುವನ್ನು ಸಿರೆನೋಮೆಲಿಯಾ ಅಥವಾ ಮತ್ಸ್ಯಕನ್ಯೆ ಎಂದು ಕರೆಯುತ್ತಾರೆ. ಪ್ರಪಂಚದಲ್ಲಿ ತೀರಾ ಅಪರೂಪವಾಗಿ ಈ ರೀತಿಯ ಮಗು ಜನನವಾಗುತ್ತೆ ಎಂದು ಹೇಳಲಾಗುತ್ತದೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ್ದರು.

    ಮುಸ್ಕರಾ ಬಿಬಿ(23) ಎಂಬ ಮಹಿಳೆ ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗುವನ್ನು ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಆದರೆ ಹುಟ್ಟಿದ ನಾಲ್ಕು ಗಂಟೆಯಲ್ಲಿ ಈ ಮಗು ಸಾವನ್ನಪ್ಪಿತ್ತು. ಮಗುವಿನ ಅರ್ಧ ದೇಹ ಸರಿಯಾಗಿ ಬೆಳೆಯದ ಕಾರಣ ಮಗುವಿನ ಲಿಂಗ ಯಾವುದು ಎಂದು ಕಂಡು ಹಿಡಿಯುವುದು ಕಷ್ಟವಾಯಿತು ಎಂದು ವೈದ್ಯರು ತಿಳಿಸಿದ್ದರು.

    ಭಾರತದಲ್ಲಿ 2ನೇ ಮತ್ಸ್ಯಕನ್ಯೆಯಾಗಿ ಜನಿಸಿದ ಮಗು ಇದಾಗಿತ್ತು. ಹುಟ್ಟು ಪ್ರತಿ 1 ಲಕ್ಷ ಮಗುವಿನಲ್ಲಿ ಒಂದು ಮಗುವಿನ ದೇಹ ಈ ರೀತಿಯಾಗಿ ಬೆಳವಣಿಗೆಯಾಗುತ್ತದೆ. 2016 ರಲ್ಲಿ ಉತ್ತರ ಪ್ರದೇಶದಲ್ಲಿ ಈ ರೀತಿ ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    ಹೈದರಾಬಾದ್: ನಗರದಲ್ಲಿ ಆಗ್ನೇಯ ಏಷ್ಯಾದ 375 ಗ್ರಾಂ ತೂಕವುಳ್ಳ ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ.

    ಹೈದರಾಬಾದ್‍ನಲ್ಲಿರುವ ರೈನ್‍ಬೋ ಆಸ್ಪತ್ರೆಯಲ್ಲಿ 375 ಗ್ರಾಂ ಮಗು ಜನನವಾಗಿದೆ. ವೈದ್ಯರು ಈ ಮಗುವಿನ ತೂಕ ನೋಡಿ ದಂಗಾಗಿದ್ದಾರೆ. ಅಲ್ಲದೇ ಕಡಿಮೆ ತೂಕವಿರುವ ಮಗು ಆರೋಗ್ಯವಾಗಿ ಇರೋದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ.

    ನಿಖಿತಾ ಹಾಗೂ ಸೌರವ್ ದಂಪತಿಗೆ ಈ ಮಗು ಜನಿಸಿದೆ. ನಿಖಿತಾ ಮೂಲತಃ ಛತ್ತಿಸ್‍ಗಢದವರಾಗಿದ್ದು, ಮಗುವಿನ ತಾಯಿ ನಿಖಿತಾ ಹಾಗೂ ಮಗಳು ಚೆರಿ ಆರೋಗ್ಯಕರವಾಗಿದ್ದಾರೆ ಎಂದು ವರದಿಯಾಗಿದೆ. ಡೆಲಿವರಿ ಸಮಯದಲ್ಲಿ ವೈದ್ಯರು ಈ ಮಗುವನ್ನು ನೋಡಿ ಒಂದು ಕ್ಷಣ ದಂಗಾದರು. ನಂತರ ಮಗು ಆರೋಗ್ಯಕರವಾಗಿದೆ ಎಂದು ತಿಳಿದು ವೈದ್ಯರು ನಿಟ್ಟಸಿರು ಬಿಟ್ಟಿದ್ದಾರೆ.ಸದ್ಯ ಈ ಹೆಣ್ಣು ಮಗು ಯಾವುದೇ ತೊಂದರೆ ಇಲ್ಲದೇ ಸುಖಕರವಾಗಿದೆ ಎಂದು ಹೇಳಲಾಗಿದೆ.

    ಸೌರವ್ ತನ್ನ ಅತ್ಯಂತ ಚಿಕ್ಕ ಮಗುವನ್ನು ಕಂಡು ಸಾಕಷ್ಟು ಖುಷಿಯಾಗಿದ್ದಾರೆ. ಈ ಮಗುವನ್ನು ನಿಖಿತಾ 25 ವಾರದೊಳಗೆ ಜನ್ಮ ನೀಡಿದ್ದಾರೆ. ನಾಲ್ಕು ತಿಂಗಳು ಮೊದಲೇ ಮಗು ಜನಿಸಿದ್ದು, 20 ಸೆ.ಮೀ ಉದ್ದವಿದೆ ಎಂದು ರೈನ್‍ಬೋ ಆಸ್ಪತ್ರೆಯ ಚೇರ್‍ಮೆನ್ ಹಾಗೂ ಎಂಡಿ ರಮೇಶ್ ಕಂಚ್ರಾಲಾ ತಿಳಿಸಿದ್ದಾರೆ.

    ಈ ಹಿಂದೆ ಮುಂಬೈನಲ್ಲಿ ಭಾರತದ ಅತ್ಯಂತ ಚಿಕ್ಕ ಮಗು ಜನಿಸಿತ್ತು. ಆ ಮಗುವಿನ ಹೆಸರು ನಿರ್ವಾನ್ ಆಗಿದ್ದು, ಮುಂಬೈನ ಸೂರ್ಯ ಆಸ್ಪತ್ರೆಯಲ್ಲಿ 5 ತಿಂಗಳಿಗೆ ಜನ್ಮ ಪಡೆದಿತ್ತು. ಮಗುವಿನ ತಾಯಿ ಗರ್ಭವತಿ ಆಗಿ 22ನೇ ವಾರದಲ್ಲಿ ಅಂದರೆ ಮೇ 12, 2017ರಂದು ಜನ್ಮ ನೀಡಿದ್ದರು. ಈ ಮಗು 610 ಗ್ರಾಂ ತೂಕವಿತ್ತು.

  • ಮಂಡ್ಯದಲ್ಲಿ 4 ಕಾಲಿನ ಕೋಳಿ ಮರಿ ಜನನ: ವಿಡಿಯೋ

    ಮಂಡ್ಯದಲ್ಲಿ 4 ಕಾಲಿನ ಕೋಳಿ ಮರಿ ಜನನ: ವಿಡಿಯೋ

    ಮಂಡ್ಯ: 4 ಕಾಲಿನ ಕೋಳಿಮರಿಯೊಂದು ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಮೊಟ್ಟೆಯಿಂದ ಹೊರಬಂದಿದೆ.

    ಸುಧಾ ಮಹಾದೇವು ಎಂಬವರ ಮನೆಯಲ್ಲಿ 4 ಕಾಲಿನ ಕೋಳಿ ಮರಿ ಜನ್ಮ ಪಡೆದಿದ್ದು, ಈ ಅಪರೂಪದ 4 ಕಾಲಿನ ಕೋಳಿ ಮರಿ ನೋಡಿ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

    21 ದಿನಗಳ ಕಾಲ ಕೋಳಿ ಕಾವು ನೀಡಿದ್ದು, ಮಂಗಳವಾರ 4 ಕಾಲಿನ ಕೋಳಿ ಮರಿ ಮೊಟ್ಟೆಯಿಂದ ಹೊರಬಂದಿದೆ. ಸದ್ಯ ಕೋಳಿಮರಿ ನಿಶ್ಯಕ್ತಿಯಿಂದ ಬಳಲುತ್ತಿದೆ.

    https://www.youtube.com/watch?v=YTBNkY3vu14&feature=youtu.be

  • ಮೈಸೂರು ಮೃಗಾಲಯದಲ್ಲಿ ಅತಿಥಿಗಳ ಆಗಮನ – ಪ್ರವಾಸಿಗರಿಗೆ ಸಂತಸ

    ಮೈಸೂರು ಮೃಗಾಲಯದಲ್ಲಿ ಅತಿಥಿಗಳ ಆಗಮನ – ಪ್ರವಾಸಿಗರಿಗೆ ಸಂತಸ

    ಮೈಸೂರು: ನಗರದ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಮೂವರು ಹೊಸ ಅತಿಥಿಗಳ ಆಗಮನವಾಗಿದೆ. ಈ ಹೊಸ ಅತಿಥಿಗಳು ಮೃಗಾಲಯಕ್ಕೆ ಬರುವ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದ್ದು, ಆ ಅತಿಥಿಗಳ ಆಗಮನ ಅಲ್ಲಿನ ಸಿಬ್ಬಂದಿಗಳಿಗೂ ಖುಷಿ ತಂದಿದೆ.

    ಮೃಗಾಲಯದಲ್ಲರುವ ಖುಷಿ ಜಿರಾಫೆ ಹಾಗೂ ನೀರು ಕುದುರೆ ಮರಿಗಳಿಗೆ ಜನ್ಮ ನೀಡಿದ್ದು, ಈಗ ಎಲ್ಲಾ ಪ್ರವಾಸಿಗರ ಆಕರ್ಷಣೆ ಆಗಿದೆ. ಆದರೆ ನೀರು ಕುದುರೆ ಮರಿ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ಕಾರಣ ಆ ಮರಿಗಳು ತಿಂಗಳುಗಟ್ಟಲೆ ನೀರಿನಲ್ಲೇ ಇರುವುದರಿಂದ ಈ ಕುರಿತು ಮಾಹಿತಿ ಸಂಗ್ರಹಣೆ ಕಷ್ಟವಾಗಲಿದೆ.

    ಇವೆರಡೂ ಮರಿಗಳ ಜನನದ ಜೊತೆಗೆ ಮೃಗಾಲಯಕ್ಕೆ ಮತ್ತೆರಡು ವಿಶೇಷ ಅತಿಥಿಗಳು ಆಗಮಿಸಿದ್ದು ತಿಂಗಳ ಹಿಂದೆ ಮೃಗಾಲಯ ಸೇರಿಕೊಂಡಿದ್ದ ಶ್ರೀಲಂಕಾದ ಹಸಿರು ಅನಾಕೊಂಡಗಳು ಇಂದಿನಿಂದ ಸಾರ್ವಜನಿಕರ ವಿಕ್ಷಣೆಗೆ ಲಭ್ಯವಾಗಿವೆ.

    ದೇಶದ ಎರಡೇ ಎರಡು ಮೃಗಾಲಯದಲ್ಲಿ ಈ ಹಸಿರು ಅನಾಕೊಂಡಗಳು ಕಾಣಸಿಗುತ್ತದೆ. ಅದರಲ್ಲಿ ಮೈಸೂರು ಮೃಗಾಲಯ ಕೂಡ ಒಂದು. ಶ್ರೀಲಂಕಾದಿಂದ ಕಳೆದ ತಿಂಗಳು ಆಮದು ಮಾಡಿಕೊಂಡಿರುವ ಅನಾಕೊಂಡ ಹಾವುಗಳನ್ನ ಒಂದು ತಿಂಗಳ ಕಾಲ ಅದರ ಚಲನವಲನಗಳ ಮೇಲೆ ಗಮನ ಹರಿಸಲಾಗಿತ್ತು. ಯಾವುದೇ ಸಮಸ್ಯೆ ಇಲ್ಲ ಎಂದು ದೃಢವಾದ ಬಳಿಕ ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗಿದೆ. ಈಗ ಸದ್ಯ ಈ ಹಸಿರು ಅನಾಕೊಂಡಗಳು ಆರೋಗ್ಯವಾಗಿದ್ದು ಮೃಗಾಲಯಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿವೆ.

  • 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಬಳ್ಳಾರಿ: ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರನ್ನ ನೋಡಿರಬಹುದು, ಆದರೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಕ್ಕಳು ಆರೋಗ್ಯವಾಗಿದ್ದಾರೆ.

    ಮದುವೆಯಾಗಿ ಹತ್ತು ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕ ಎನ್ನುವಂತಾಗಿದೆ. ಮೂವರು ಮಕ್ಕಳು ಆರೋಗ್ಯವಾಗಿರುವ ಪರಿಣಾಮ ಕುಟುಂಬದ ಸದಸ್ಯರಲ್ಲಿ ಹರ್ಷ ಮೂಡಿದೆ.

     

  • ಜಿಲ್ಲಾಸ್ಪತ್ರೆಯ ದ್ವಾರದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

    ಜಿಲ್ಲಾಸ್ಪತ್ರೆಯ ದ್ವಾರದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

    ಕಲಬುರಗಿ: ಹೆರಿಗೆಗೆ ಎಂದು ಆಸ್ಪತ್ರೆಗೆ ಬಂದ ಗರ್ಭಿಣಿಯೊಬ್ಬರು ಆಸ್ಪತ್ರೆಯ ಮುಖ್ಯ ದ್ವಾರದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿಂದು ನಡೆದಿದೆ.

    ಕಲಬುರಗಿ ತಾಲೂಕಿನ ಕಮಲಾಪೂರ ತಾಂಡಾ ನಿವಾಸಿ ಸುಮನ್ ಚೌವ್ಹಾಣ್ ಎಂಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಲು ಆಟೋದಲ್ಲಿ ಬಂದಿದ್ದರು. ಆದರೆ ಆಸ್ಪತ್ರೆ ಒಳಗೆ ಪ್ರವೇಶಿಸಬೇಕು ಎನ್ನುವಷ್ಟರಲ್ಲೇ ಹೆರಿಗೆ ನೋವು ಕಾಣಿಸಿಕೊಂಡು ಕುಸಿದು ಕುಳಿತಿದ್ದಾರೆ. ಈ ಸಮಯದಲ್ಲಿ ಕುಳಿತಲ್ಲಿಯೇ ಸುಮನ್ ಅವರಿಗೆ ಹೆರಿಗೆಯಾಗಿದೆ. ಈ ವೇಳೆ ಆಸ್ಪತ್ರೆಗೆ ಬಂದಿದ್ದ ಇತರೇ ಮಹಿಳೆಯರು ನೆರವಾಗಿದ್ದಾರೆ.

    ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿಯೇ ಹೆರಿಗೆಯಾಗಿದರೂ ತಾಯಿ ಮಗು ಆರೋಗ್ಯವಾಗಿದ್ದಾರೆ. ಹೆರಿಗೆಯಾದ ನಂತರ ಇಬ್ಬರನ್ನು ಆಸ್ಪತ್ರೆಯ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.

    https://www.youtube.com/watch?v=zUFXZZKMtwY

  • ಆರು ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಮೇಕೆ

    ಆರು ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಮೇಕೆ

    ಕೋಲಾರ: ಮೇಕೆಯೊಂದು 6 ಮರಿಗಳಿಗೆ ಜನ್ಮ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕನ್ನಸಂದ್ರ ಗ್ರಾಮದಲ್ಲಿ ನಡೆದಿದೆ.

    ಕನ್ನಸಂದ್ರ ಗ್ರಾಮದ ನಿವಾಸಿ ರೈತ ಸುಬ್ಬಣ್ಣ ಎಂಬುವರಿಗೆ ಸೇರಿದ ಮೇಕೆ ಇಂದು ಮುಂಜಾನೆ ಆರು ಮೇಕೆ ಮರಿಗಳಿಗೆ ಜನ್ಮ ನೀಡಿದೆ. ಮೇಕೆ ಆರು ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದರಿಂದ ಅಪರೂಪ ಎಂಬಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೇಕೆ ಮರಿಗಳನ್ನ ನೋಡಲು ಗುಂಪು ಗುಂಪಾಗಿ ಆಗಮಿಸುತ್ತಿದ್ದಾರೆ.

    ಸಾಮಾನ್ಯವಾಗಿ ಮೇಕೆ 2 ಅಥವಾ 3 ಮರಿಗಳಿಗೆ ಜನ್ಮ ನೀಡುತ್ತದೆ. ಆದರೆ ಈ ಮೇಕೆ 6 ಮರಿಗಳಿಗೆ ಜನ್ಮ ನೀಡಿದೆ. ಜನ್ಮ ನೀಡಿದ ಮರಿಗಳಲ್ಲಿ ನಾಲ್ಕು ಹೆಣ್ಣು ಹಾಗೂ ಎರಡು ಗಂಡು ಮರಿಗಳಾಗಿದ್ದು, ಆರು ಮರಿಗಳಿಗೆ ಜನ್ಮ ನೀಡಿರುವುದು ಅಚ್ಚರಿಯ ಸಂಗತಿಯಾಗಿದೆ.

    ಆರು ಮರಿಗಳಿಗೆ ಜನ್ಮ ನೀಡಿದ್ದರಿಂದ ಸುಬ್ಬಣ್ಣ ಪಶು ವೈದ್ಯರಿಗೆ ತಿಳಿಸಿ ಪರೀಕ್ಷೆ ಮಾಡಲು ಕರೆದುಕೊಂಡು ಬಂದಿದ್ದಾರೆ. ವೈದ್ಯರು ಸದ್ಯಕ್ಕೆ ಮೇಕೆ ಸೇರಿದಂತೆ ಎಲ್ಲಾ ಆರು ಮೇಕೆ ಮರಿಗಳು ಆರೋಗ್ಯವಾಗಿವೆ ಎಂದು ದೃಢಪಡಿಸಿದ್ದಾರೆ.

     

  • ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?

    ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?

    ಮೈಸೂರು: ಬರೋಬ್ಬರಿ 64 ವರ್ಷಗಳ ಬಳಿಕ ಮೈಸೂರಿನ ಯದುವಂಶಕ್ಕೆ ಸಂತಾನ ಪ್ರಾಪ್ತಿಯಾಗಿದೆ. ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಣಿ ತ್ರಿಷಿಕಾ ಕುಮಾರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ.

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಅರಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆಮಾಡಿದೆ. ಮೈಸೂರು ಯದುವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಯದುವೀರ್ ಅವರನ್ನು 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಗಿತ್ತು. 2016 ಜೂನ್ 27ರಂದು ತ್ರಿಷಿಕಾ ಕುಮಾರಿ ಜೊತೆ ಮದುವೆ ಮಾಡಲಾಗಿತ್ತು.

    ಬುಧವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮಗು ಸುಮಾರು 9.50ರ ಸಮಯದಲ್ಲಿ ಪುನರ್ವಸು ನಕ್ಷತ್ರ ಹಾಗೂ ಮಿಥುನ ರಾಶಿಯಲ್ಲಿ ಜನಿಸಿದೆ. ಇದು ಶ್ರೀರಾಮ ಚಂದ್ರ ಜನಿಸಿದ ನಕ್ಷತ್ರವಾಗಿದೆ ಎನ್ನುವುದು ವಿಶೇಷ.

    ದೇವಸ್ಥಾನದಲ್ಲಿ ವಿಶೇಷ ಪೂಜೆ:
    ಯದುವಂಶಕ್ಕೆ ನೂತನ ವಾರುಸುದಾರ ಜನನವಾದ ಹಿನ್ನೆಲೆಯಲ್ಲಿ ಶೃಂಗೇರಿಯ ಶಾರದಾ ಪೀಠದಲ್ಲಿ ಹಾಗೂ ಮನೆದೇವರಾದ ಪರಕಾಲ ಸ್ವತಂತ್ರ ಮಠದಲ್ಲಿ ವಿಶೇಷ ಪೂಜೆ ನೇರವೇರಿಸಲಾಗಿದೆ. ಅರಮನೆಯೊಳಗಿನ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಮನೆದೇವರಾದ ಚಾಮುಂಡಿ ಬೆಟ್ಟದಲ್ಲೂ ವಿಶಿಷ್ಟ ಪೂಜೆ ನಡೆಯುತ್ತಿದೆ. ನೂತನ ಅತಿಥಿಯ ಆಗಮನದಿಂದ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಅರಸು ಮನೆತನದವರು ಅರಮನೆಗೆ ಆಗಮಿಸುವ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ದಸರಾ ಸಂದರ್ಭದಲ್ಲಿ ತ್ರಿಷಿಕಾ ಗರ್ಭ ಧರಿಸಿದ ವಿಚಾರ ತಿಳಿದು ಯದುವಂಶಕ್ಕೆ ತಟ್ಟಿದ್ದ ಅಲಮೇಲಮ್ಮ ಶಾಪ ವಿಮೋಚನೆಯಾಗಿದೆ ಎನ್ನುವ ಸುದ್ದಿಗಳು ಕೇಳಿ ಬಂದಿತ್ತು. ಆದರೆ ಈ ಶಾಪಕ್ಕೂ ಗರ್ಭ ಧರಿಸಿದ್ದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಶಾಪದ ಪ್ರಕಾರ ದತ್ತು ಮಕ್ಕಳಿಗೆ ಮಕ್ಕಳಾಗುತ್ತದೆ. ಆದರೆ ದತ್ತು ಪುತ್ರರಿಗೆ ಆದ ಮಕ್ಕಳಿಗೆ ಸಂತಾನ ಯೋಗ ಇಲ್ಲದೇ ಇರುವ ವಿಚಾರ ಇತಿಹಾಸ ಪುಟದಲ್ಲಿ ಸಿಗುತ್ತದೆ.

    ಅಲಮೇಲಮ್ಮ ಶಾಪ ಏನು?
    ಹಿಂದೆ ಶ್ರೀರಂಗಪಟ್ಟಣವನ್ನು ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗರಾಯ ರಾಜ್ಯಭಾರ ಮಾಡುತ್ತಿದ್ದ ವೇಳೆ ಆತನಿಗೆ ಬೆನ್ನುಪಣಿ ಎಂಬ ಕಾಯಿಲೆ ಬಂದಿತ್ತು. ಶ್ರೀರಂಗರಾಯ ತನ್ನ ಕಾಯಿಲೆ ನಿವಾರಣೆ ಮಾಡಿಕೊಳ್ಳಲು ತನ್ನ ಮಡದಿಯಾಗಿದ್ದ ಅಲಮೇಲಮ್ಮ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಾಲಯಕ್ಕೆ ತೆರಳಿದ್ದ. ರಾಜ ಶ್ರೀರಂಗರಾಯ ಪ್ರಾಂತ್ಯ ಬಿಟ್ಟು ಹೋಗಿರುವ ವಿಚಾರ ತಿಳಿದ ಮೈಸೂರು ಒಡೆಯರು, ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣವನ್ನು ಗೆಲ್ಲಲು ಸುವರ್ಣ ಸಮಯ ಎಂದು ತಿಳಿದು ರಾಜನಿಲ್ಲದ ವೇಳೆಯಲ್ಲಿ ಏಕಾಏಕಿ ಆಕ್ರಮಣ ಮಾಡಿ ಕೊನೆಗೆ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಿದ್ದರು.

    ತಲಕಾಡಿನಲ್ಲಿದ್ದ ರಾಜ ಶ್ರಿರಂಗರಾಯ ಈ ವಿಚಾರ ತಿಳಿದು ಅಲ್ಲಿಯೇ ಮೃತಪಡುತ್ತಾನೆ. ಇನ್ನು ಮಡದಿ ಅಲಮೇಲಮ್ಮ ರಾಜ್ಯ, ಪತಿ ಇಬ್ಬರನ್ನು ಕಳೆದುಕೊಂಡು ಮಾಲಂಗಿಯಲ್ಲಿಯೇ ಉಳಿದುಕೊಂಡಿರುತ್ತಾಳೆ. ಆದರೆ ರಾಜ ಮನೆತನದವರು ಅವರ ಮೇಲೂ ದಾಳಿ ಮಾಡಲು ನಿರ್ಧರಿಸುತ್ತಾರೆ. ಒಡೆಯರು ತನ್ನ ಮೇಲು ಆಕ್ರಮಣ ಮಾಡಲು ನಿರ್ಧಾರ ಮಾಡಿದ ವಿಚಾರವನ್ನು ತಿಳಿದ ಅಲಮೇಲಮ್ಮ “ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ತಲಕಾಡಿನಲ್ಲಿ ಹರಿಯುತ್ತಿದ್ದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

    ದಸಾರೆಯಲ್ಲಿ ಪೂಜೆ:
    ಅಲಮೇಲಮ್ಮ ನೀಡಿದ ಶಾಪದ ವಿಮೋಚನೆಗೆ ಮೈಸೂರು ಅರಸರು ಅಂದಿನಿಂದ ಇಲ್ಲಿಯವರೆಗೂ ದಸರಾ ಉತ್ಸವದಲ್ಲಿ ಅಲಮೇಲಮ್ಮ ಮೂರ್ತಿಗೆ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಆದರೆ ಸುಮಾರು ಯುಗಗಳೇ ಕಳೆದರೂ ಶಾಪದಿಂದ ಮಾತ್ರ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ. ಸಂತಾನ ಭಾಗ್ಯ ಇಲ್ಲದ ಕಾರಣ ರಾಜರು ದತ್ತು ಮಗುವನ್ನು ಪಡೆದುಕೊಂಡು ವಂಶವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.