Tag: birth

  • ತುಕಾಲಿ ಸಂತು ಹುಟ್ಟಿದಾಗ ಅವರ ಊರಲ್ಲಿ ನಡೆದಿತ್ತು ಪವಾಡ

    ತುಕಾಲಿ ಸಂತು ಹುಟ್ಟಿದಾಗ ಅವರ ಊರಲ್ಲಿ ನಡೆದಿತ್ತು ಪವಾಡ

    ದಾ ಕಾಮಿಡಿ ಮಾಡಿಕೊಂಡು ಎಲ್ರನ್ನೂ ನಗುನಗಿಸ್ತಾ ಇರ್ತಿದ್ದ ಸಂತೋಷ್ (Tukali Santu), ಅಪರೂಪಕ್ಕೊಮ್ಮೆ ಸೀರಿಯಸ್ ಆಗಿದ್ದಾರೆ. ಅಷ್ಟೇ ಅಲ್ಲ, ತುಂಬ ಸೀರಿಯಸ್ ಆಗಿ ತಮ್ಮ ಹುಟ್ಟಿನ ಪವಾಡದ ಕಥೆಯನ್ನು ರೋಚಕವಾಗಿ ಹೇಳಿಕೊಡುತ್ತಿದ್ದಾರೆ. ಆದ್ರೆ ಏನ್ಮಾಡೋದು? ಅವ್ರು ಸೀರಿಯಸ್ ಆಗಿ ಮಾತಾಡಲಿಕ್ಕೆ ಶುರುಮಾಡಿದಾಗ, ಯಾವಾಗ್ಲೂ ಸೀರಿಯಸ್ ಆಗಿರೋ ಸ್ಪರ್ಧಿಗಳೆಲ್ಲ ಕಾಮಿಡಿ ಮಾಡಿ ಅವ್ರ ಕಾಲೆಳಿಲಿಕ್ಕೆ ಶುರುಮಾಡಿದಾರಪ್ಪಾ. ತಾವು ಹೇಳಿದ ಕಥೆಯನ್ನು ಯಾರೂ ನಂಬ್ಲಿಲ್ಲ ಅಂದ್ರೆ ಸಂತೋಷ್‌ಗೆ ನೋವಾಗಲ್ವಾ? ಹೋಗ್ಲಿ ನೀವಾದ್ರೂ ಅವ್ರ ಹುಟ್ಟಿನ ಕಥೆಯನ್ನು ‘ಸೀರಿಯಸ್’ ಆಗಿ ಕೇಳಿ.

    ’15-01-1990ಕ್ಕೆ ಒಬ್ಬ ಮಹಾನ್ ಸಾಧಕನ ಜನನ ಆಗತ್ತೆ’ ಸಂತೋಷ್ ಕಥೆಯ ಸಾಲಿನ ಬಗ್ಗೆಯೇ ನೀತುಗೆ ಅನುಮಾನ. 1990? ಎಂದು ಪ್ರಶ್ನಾರ್ಥಕವಾಗಿ ಕೇಳ್ತಾರೆ. ಆದ್ರೆ ವಯಸ್ಸನ್ನು ಕಡಿಮೆ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಸಂತೋಷ್‌ ಅವರ ಅನುಮಾನದ ಕಡೆಗೆ ಗಮನಹರಿಸಲು ಸಾಧ್ಯನಾ? ಅವರು ತಮ್ಮ ಪಾಡಿಗೆ ತಾವು ಮಾತು ಮುಂದುವರಿಸುತ್ತಾರೆ. ‘ಪವಾಡ ಪುರುಷ ಅಲ್ಲ ನಾನು. ನಾನು ಹುಟ್ಟಿದ್ದೇ ಒಂದು ಪವಾಡ. ಪವಾಡದಿಂದ (Pavada) ಜನನ. ನಾನು ಹುಟ್ಟಿದ್ದೇ ಒಂದು ಪವಾಡ. ನಿಮಗಿನ್ನ ಗೊತ್ತಿಲ್ಲ, ಒಂಬತ್ತು ತಿಂಗಳಾಗಿ ಮೂರು ದಿನಕ್ಕೆ ನಾನು ಹುಟ್ಟಿರೋದು. ಒಂಬತ್ತುತಿಂಗಳು ಕರೆಕ್ಟಾಗಿ ಬರತ್ತಲ್ಲಾ. ಅವತ್ತು, ಜೋರಾದ ಗುಡುಗು, ಸಿಡಿಲು, ಮಳೆ, ಗಾಳಿ…’ ಇಷ್ಟು ಹೇಳುತ್ತಿದ್ದ ಹಾಗೆಯೇ ಮಧ್ಯ ಬಾಯಿ ಹಾಕಿದೋರು ವರ್ತೂರು ಸಂತೋಷ್. “ಈ ಭೂಮಿಗೆ ಯಾವ್ದೋ ದುಷ್ಟಶಕ್ತಿ ಬರ್ತಿದೆ ಅಂತ ಸೂಚನೆ’ ಎಂದ ಅವರ ಮಾತಿಗೆ ಉಳಿದವರೆಲ್ಲ ಜೋರಾಗಿ ನಕ್ಕರು. ಗೌರೀಶ ಅಕ್ಕಿ, ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘ಧುರ್ಯೋಧನ ಹುಟ್ಟಬೇಕಾದರೆ ಹಿಂಗೇ ಆಗಿತ್ತಂತೆ’ ಎಂದು ಸಂತೋಷ್ ಜನ್ಮಕ್ಕೆ ಪುರಾಣಸ್ಪರ್ಶವನ್ನು ಬೇರೆ ಕೊಟ್ಟುಬಿಟ್ಟರು.

    ತುಕಾಲಿ ಅವರಿಗೆ ಕೋಪ ಬರ್ದೇ ಇರತ್ತಾ? ಆದ್ರೂ ನಗ್ತಾನೇ ‘ನನ್ನ ಹಾಳು ಮಾಡ್ತಿದ್ದಾರೆ ಇವ್ರು’ ಎಂದು ಹೇಳಿ ತಮ್ಮ ಕಥೆಯನ್ನು ಮುಂದುವರಿಸಿದ್ರು. ‘ಜೋರಾದ ಗುಡುಗು, ಸಿಡಿಲು, ಮಳೆ ಬರ್ತಾ ಐತೆ. ರಾತ್ರಿ ಒಂಬತ್ತು ಗಂಟೆ. ಅಮ್ಮ ಬೆಳಿಗ್ಗೆ ತಿಂಡಿ ಮಾಡ್ಬೇಕಲಾ… ತರಕಾರಿ ಹಿಡ್ಕೊಂಡು ಬರ್ತಾ ಇದ್ದಾರೆ ದೇವಸ್ಥಾನದ ಹತ್ರ. ಆಗ ಯಾವ್ದೋ ಒಂದು ಶಬ್ದ’ ಎಂದು ಎರಡು ಸಾಲು ಹೇಳುವಷ್ಟರಲ್ಲಿ ನೀತು ತಲೆಗೆ ಹೊಸ ಆಲೋಚನೆ ಹೊಳೆದಿದೆ. ‘ಈ ಕಥೆಯನ್ನೇ ಸಿನಿಮಾ ಮಾಡ್ಬೋದು ನೀವು’ ಎಂದು ಗೌರೀಶ ಅವರಿಗೆ ಸಲಹೆಯನ್ನೂ ಕೊಟ್ಟುಬಿಟ್ಟರು.

    ಈಗ ಸಂತೋಷ್‌ ತಾಳ್ಮೆಯ ಕಟ್ಟೆ ಒಡೀತು. ‘ಯಾರಾದ್ರೂ ಬಂದು ನನ್ ತಲ್ ತಲೆಗೆ ಹೊಡ್ದುಬಿಡ್ರಪ್ಪಾ… ಹೊಡ್ದುಬಿಡಿ… ನನ್ ಲೈಫ್‌ನ ರಿಯಲ್ ಸ್ಟೋರಿ ಹೇಳ್ತಿದೀನಿ… ಸಿನಿಮಾ ಮಾಡ್ಬೇಕು ಅಂತಿದೀರಲಾ ನೀವು…’ ಎಂದು ಕೋಪಗೊಂಡರೇನೋ ನಿಜ. ಆದ್ರೆ ಕಥೆಯನ್ನು ಹೇಳುವ ಉತ್ಸಾವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ‘ಇದು ನಿಜವಾಗ್ಲೂ ನಡೆದಿದ್ದು. ನಮ್ಮೂರಲ್ಲಿ ಮಾರಮ್ಮನ ಗುಡಿ, ಆಂಜನೇಯ ಸ್ವಾಮಿ ಗುಡಿ ಇವೆ. ಈಗ ದೇವಸ್ಥಾನ ಕಟ್ತವ್ರೆ. ವೆರಿ ಪವರ್‍‌ಫುಲ್ ಆಂಜನೇಯಸ್ವಾಮಿ. ಆ ಗುಡಿ ಹತ್ರ ನಮ್ಮಮ್ಮ ತರಕಾರಿ ಬ್ಯಾಗ್ ಹಿಡ್ಕಂಡು ಬರೋವಾಗ ಒಂದು ಧ್ವನಿ ಕೇಳ್ತಂತೆ.. ನಿನ್ ಮಗ ಇಡೀ ಜಗತ್ತನ್ನೇ….’

    ಸಂತೋಷ್ ಮಾತನ್ನು ತುಂಡರಿಸಿದ ಸಿರಿ (Siri),  ‘ಹಾಳ್ಮಾಡ್ತಾನೆ ಅಂದ್ರಾ?’ ಎಂದು ಕೇಳಿದರು. ‘ಇಲ್ಲ. ಆಳ್ತಾನೆ ಅಂತ. ನಾನು ದೊಡ್ಡ ಇದಾಯ್ತೀನಿ ಅಂತ ಹೇಳಿದ್ದು ಅಲ್ಲಿ’ ಎಂದು ಸಮಾಧಾನದಿಂದ ತಿದ್ದಿದರು ತುಕಾಲಿ ಅವರು. ‘ನಿನ್ ಮಗ ಒಳ್ಳೆ ಅದ್ಭುತ ವ್ಯಕ್ತಿಯಾಗ್ತಾನೆ. ಸಾಧಕನಾಗ್ತಾನೆ. ಇಡೀ ನಾಡನ್ನು ಗೆಲ್ಲುವಂಥ ಶಕ್ತಿ ಸಿಗ್ತದೆ- ಇಷ್ಟು ಮಾತು ಆ ಗುಡುಗು ಸಿಡಿಲು ಮಳೆಯಲ್ಲಿ ಎಲ್ಲೋ ಒಂದು ಕಡೆ ಎಕೋ ಧ್ವನಿಯಲ್ಲಿ ಕೇಳಿಸಿದ್ದು’

     

    ಸಂತೋಷ್ ಇಷ್ಟು ತನ್ಮಯನಾಗಿ ಕಥೆ ಹೇಳ್ತಿದ್ರೆ ಉಳಿದವರಿಗೆಲ್ಲ ಲಾಜಿಕ್‌ನ ಸಮಸ್ಯೆ. ‘ನೀವು ಎಲ್ಲಿದ್ರಿ ಆವಾಗ?’ ‘ನೀವು ಹುಟ್ಟೇ ಇರ್ಲಿಲ್ವಲ್ಲಾ. ನಿಮಗೆ ಹೇಗೆ ಗೊತ್ತಾಯ್ತು?’ ‘ಅಮ್ಮನತ್ರ ಛತ್ರಿ ಇರ್ಲಿಲ್ವಾ?’ -ರೋಚಕ ಪವಾಡದ ಕಥೆಯನ್ನು ಅಷ್ಟೇ ರಸವತ್ತಾಗಿ ಹೇಳುತ್ತಿರುವಾಗ ಅದನ್ನು ಮೈಮರೆತು ಕೇಳಿಸಿಕೊಳ್ಳೋದು ಬಿಟ್ಟು ಎಲ್ರೂ ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳತೊಡಗಿದ್ರೆ ಕಥೆ ಮುಂದುವರಿಸೋದಾದ್ರೂ ಹೇಗೆ? ಆದ್ರೆ ತುಕಾಲಿ ಅವರಿಗೆ ತಮ್ಮನ್ನು ಜನ್ಮದ ಹಿಂದಿನ ‘ಪವಾಡ’ದ ಕಥೆಯನ್ನು ಎಲ್ಲರಿಗೂ ನಂಬಿಸಬೇಕು ಎಂಬ ಹಠ. ಇಂತಹ ಹತ್ತಾರು ಕಥೆಗಳನ್ನು JioCinemaದ ‘Unseen ಕಥೆಗಳ’ಲ್ಲಿ ನೋಡಬಹುದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ: ತುಳಜಾ ಭವಾನಿ ಬಂದ್ಳು ಎಂದ ದಂಪತಿ

    ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ: ತುಳಜಾ ಭವಾನಿ ಬಂದ್ಳು ಎಂದ ದಂಪತಿ

    ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಮನೆಗೆ ಮಗಳು ಬಂದ ಖುಷಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮನೆಗೆ ತುಳಜಾ ಭವಾನಿ ಬಂದಳು ಎಂದು ಸಂಭ್ರಮಿಸಿದ್ದಾರೆ. ಜೀವನದ ನವ ಅಧ್ಯಾಯದ ಕುರಿತು ಶ್ರಾವಣಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದ ಈ ದಂಪತಿ ರಾಜಾ ರಾಣಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಅಲ್ಲದೇ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡ ಕೋಟ್ಯಧಿಪತಿಯಲ್ಲೂ ಸಮೀರ್ ಆಚಾರ್ಯ ಭಾಗಿಯಾಗಿದ್ದರು. ರಾಜಾ ರಾಣಿ ರಿಯಾಲಿಟಿ ಶೋ ವೇಳೆ ತಮಗೆ ಮಿಸ್ ಕ್ಯಾರೇಜ್ ಆಗಿರುವ ಕುರಿತು ಶ್ರಾವಣಿ ಮಾತಾಡಿ ಭಾವುಕರಾಗಿದ್ದರು. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ

    ಮಗುವಿನ ಕಾಲುಗಳನ್ನು ತೋರಿಸುವಂತಹ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಶ್ರಾವಣಿ, ತಮ್ಮ ಮೊದಲ ಮಗುವಿಗೆ ನಿಮ್ಮೆಲ್ಲ ಆಶೀರ್ವಾದವಿರಲಿ ಎಂದು ಕೇಳಿದ್ದಾರೆ. ಈ ದಂಪತಿಯ ಮಗುವಿಗೆ ಶುಭವಾಗಲಿ ಎಂದು ಹಲವರು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 70ನೇ ವರ್ಷಕ್ಕೆ ಮೊದಲ ಮಗುವಿಗೆ ಜನ್ಮ ಕೊಟ್ಟ ತಾಯಿ

    70ನೇ ವರ್ಷಕ್ಕೆ ಮೊದಲ ಮಗುವಿಗೆ ಜನ್ಮ ಕೊಟ್ಟ ತಾಯಿ

    ಗಾಂಧಿನಗರ: ಮೊಮ್ಮಕ್ಕಳೊಂದಿಗೆ ಆಟ ಆಡುತ್ತಾ ತನ್ನ ಸಮಯ ಕಳೆಯ ಬೇಕಾದ ವಯಸ್ಸಿನಲ್ಲಿ ಮಹಿಳೆ ಮಗುವಿಗೆ ಜನ್ಮ ಕೊಟ್ಟಿರುವ ವಿಚಿತ್ರ ಘಟನೆಯೊಂದು ಗುಜರಾತ್‍ನ ಕಛ್‍ನಲ್ಲಿ ನಡೆದಿದೆ.

    ಜಿವುಬೆನ್ ವಾಲಾಭಾಯಿ ರಬಾರಿ 70 ನೇ ವರ್ಷಕ್ಕೆ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮೂಲತಃ ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿದ್ದು, ತನ್ನ ವಯಸ್ಸನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ.

    ನಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ ಈ ವಯಸ್ಸಿನಲ್ಲಿ ತಾವು ಒಂದು ಮಗುವಿಗೆ ಜನ್ಮ ನೀಡಲೇಬೇಕು ಎಂದು ಹೇಳಿಕೊಂಡಿದ್ದರು. ಈ ವೃದ್ಧ ದಂಪತಿಗಳ ಬಯಕೆಗೆ ನಾವು ಮಣಿಯಲೇ ಬೇಕಾಯಿತು ಮತ್ತು ಅವರ ಮೊದಲ ಮಗು, ಅವರು ಮದುವೆಯಾದ ಸರಿ ಸುಮಾರು 45 ವರ್ಷಗಳ ನಂತರ ಜನಿಸಿದೆ ಎಂದು ವೈದ್ಯರು ಹೇಳುತ್ತಾರೆ. ಈ ವಯಸ್ಸಿನಲ್ಲಿ ಗರ್ಭಧಾರಣೆಯ ಅಪಾಯ ತೆಗೆದುಕೊಳ್ಳದಂತೆ ಜಿವುಬೆನ್‍ಗೆ ಸಲಹೆ ನೀಡಿದ್ದೇವು. ಆದರೆ ಮಗುವನ್ನು ಪಡೆಯುವ ಬಗ್ಗೆ ಅವರು ಸಾಕಷ್ಟು ಭಾವುಕರಾಗಿದ್ದರು ಎಂದು ವೈದ್ಯರು ಹೇಳಿದ್ದಾರೆ.

    ನಾವು ಮೊದಲು ಔಷಧಿಗಳನ್ನು ನೀಡವ ಮೂಲಕ ಅವರ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ನಂತರ ವಯಸ್ಸಿನ ಕಾರಣದಿಂದಾಗಿ ಕುಗ್ಗಿದ ಅವರ ಗರ್ಭಾಶಕ್ಕೆ ಚಿಕಿತ್ಸೆ ನೀಡಿದ್ದೇವೆ. ನಂತರ ಬ್ಲಾಸ್ಟೋಸಿಸ್ಟ್ ತಯಾರಾಗುವಂತೆ ಮಾಡಿ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿದೆವು ಎಂದು ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಎರಡು ವಾರಗಳ ನಂತರ ಜಿವುಬೆನ್ ಅವರ ಸೋನೋಗ್ರಫಿ ಮಾಡಿದರು ಮತ್ತು ಭ್ರೂಣವು ಬೆಳೆಯುವುದಕ್ಕೆ ಪ್ರಾರಂಭವಾಯಿತ್ತು. ನಂತರ ಸಮಯಕ್ಕೆ ಸರಿಯಾಗಿ ಹೃದಯ ಬಡಿತವನ್ನು ಕಂಡುಕೊಂಡೆವು, ಯಾವುದೇ ದೋಷ ಕಾಣಲಿಲ್ಲ ಮತ್ತು ಆದ್ದರಿಂದ, ಗರ್ಭಧಾರಣೆಯೊಂದಿಗೆ ಮುಂದುವರೆದರು. ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಒಂದು ಮಗುವಿಗೆ ಜನ್ಮ ನೀಡಬೇಕು ಎಂಬ ತಾಯಿಯ ಭಾವನಾತ್ಮಕ ಹಂಬಲ ಈಡೇರಿದೆ ಎಂದು ಹೇಳಬಹುದು ಎಂದು ವೈದ್ಯರು ಹೇಳಿದ್ದಾರೆ.

  • ಹೆಣ್ಣು ಮಗು ಜನಿಸಿದ್ದಕ್ಕೆ  ಹೆಲಿಕಾಪ್ಟರ್‌ನಲ್ಲಿ ಕರೆತಂದ ಕುಟುಂಬ

    ಹೆಣ್ಣು ಮಗು ಜನಿಸಿದ್ದಕ್ಕೆ ಹೆಲಿಕಾಪ್ಟರ್‌ನಲ್ಲಿ ಕರೆತಂದ ಕುಟುಂಬ

    ಜೈಪುರ್: ಕುಟುಂಬದಲ್ಲಿ 35 ವರ್ಷಗಳ ಬಳಿಕ ಹೆಣ್ಣುಮಗು ಜನಿಸಿದ ಕಾರಣ ಸಂತಸಗೊಂಡ ಕುಟುಂಬಸ್ಥರು ಮಗುವನ್ನು ಹೆಲಿಕಾಪ್ಟರ್‌ನಲ್ಲಿ ಗ್ರಾಮಕ್ಕೆ ಕರೆದುಕೊಂಡು ಬಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಹೆಣ್ಣು ಮಗು ಜನಿಸಿತು ಅಂತ ಕುಟುಂಬದವರು ಖುಷಿ ಪಟ್ಟಿದ್ದಾರೆ. ಹೆಣ್ಣು ಮಗುವಿನ ಸ್ವಾಗತಕ್ಕೆ ವಿವಿಧ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಹಲವು ವರ್ಷಗಳ ನಂತರ ಹೆಣ್ಣು ಮಗು ಜನನವಾಯಿತು ಆ ಮಗುವಿನ ಸ್ವಾಗತಕ್ಕೆ ಹೆಲಿಕಾಪ್ಟರ್ ಬಾಡಿಗೆ ಪಡೆದು ತರಿಸಿದ್ದಾರೆ. ರಾಜಸ್ಥಾನದ ನಾಗಪುರ ಜಿಲ್ಲೆಯ ಚಂದವತ ಗ್ರಾಮದ ಹನುಮಾತ್ ಪ್ರಜಾಪತ್ ಅವರ ರೈತ ಕುಟುಂಬದಲ್ಲಿ 35 ವರ್ಷಗಳಿಂದ ಹೆಣ್ಣುಮಗು ಜನಿಸಿರಲಿಲ್ಲ. 35 ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವಿನಿಂದ ಅವರ ಮನೆಯಲ್ಲಿ ಸಂತಸ ದುಪ್ಪಟ್ಟಾಗಿದೆ.

    ಮಗುವಿನ ಸ್ವಾಗತ ಸಾಧಾರಣವಾಗಿ ಇರಬಾರದು ಎಂದು ನಿರ್ಧರಿಸಿದ ಕುಟುಂಬದ ಯಜಮಾನ ಮೊಮ್ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಬೇಕು ಎಂದು ನಿರ್ಧರಿಸಿದ್ದಾರೆ. ಹಾಗಾಗಿ ಮಗುವಿನ ಅಜ್ಜ ಬೆಳೆಯನ್ನು 5 ಲಕ್ಷಕ್ಕೆ ಮಾರಿ ತನ್ನ ಮೊಮ್ಮಗಳಿಗಾಗಿ ಹೆಲಿಕಾಪ್ಟರ್ ಬಾಡಿಗೆಗೆ ಪಡೆದು ತರಿಸಿದ್ದಾರೆ. ಅದರಲ್ಲಿಯೇ ಮೊಮ್ಮಗಳನ್ನು ಸ್ವಾಗತಿಸಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

    ಮಗುವಿಗೆ ನಾವು ಸಿದ್ದಾಧತ್ರಿ ಎಂದು ಹೆಸರು ಇಟ್ಟಿದ್ದೇವೆ. ನಮ್ಮಲ್ಲಿ ಹಲವರು ಹೆಣ್ಣು ಮಗು ಎಂದು ಮೂಗು ಮುರಿದಿದ್ದಾರೆ. ಆದರೆ ನಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಅದ್ದೂರಿಯಾಗಿ ಸಂಭ್ರಮಿಸುಬೇಕು ಎಂದು ನಿರ್ಧರಿಸಿದ್ದೇವು. ನನ್ನ ಈ ನಡೆಯಿಂದ ಕೆಲವರಾದರು ಪ್ರೇರಣೆ ಪಡೆದರೆ ತುಂಬಾ ಸಂತೋಷವಾಗುತ್ತದೆ ಎಂದು ಹನುಮಾನ್ ಪ್ರಜಾತ್ ಹೇಳಿದ್ದಾರೆ.

  • 108 ಅಂಬುಲೆನ್ಸ್‌ನಲ್ಲಿ ಒಂದೇ ದಿನ ಎರಡು ಹೆರಿಗೆ: ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು

    108 ಅಂಬುಲೆನ್ಸ್‌ನಲ್ಲಿ ಒಂದೇ ದಿನ ಎರಡು ಹೆರಿಗೆ: ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು

    ರಾಯಚೂರು: ಜಿಲ್ಲೆಯಲ್ಲಿ ಒಂದೇ ದಿನ ಎರಡು ಕಡೆ 108 ಆರೋಗ್ಯ ಕವಚ ವಾಹನದಲ್ಲಿ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದಾರೆ.

    ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯ ಮಾನಸಮ್ಮ ಹಾಗೂ ಸಿರವಾರ ತಾಲೂಕಿನ ಮಾಡಗಿರಿಯ ಪದ್ದಮ್ಮ ಅವರಿಗೆ 108 ವಾಹನದಲ್ಲೇ ಹೆರಿಗೆಯಾಗಿದೆ. ವಿಶೇಷವೆಂದರೆ ಗರ್ಭಿಣಿಯರಿಬ್ಬರೂ ಸಹ ಗಂಡು ಮಗುವಿಗೆ ಜನ್ಮನೀಡಿದ್ದಾರೆ.

    ಇಬ್ಬರನ್ನೂ ಪ್ರತ್ಯೇಕವಾಗಿ 108ರಲ್ಲಿ ರಾಯಚೂರಿನ ರಿಮ್ಸ್‌ಗೆ ಕರೆತರುವಾಗ ಹೆರಿಗೆಯಾಗಿವೆ. 108 ಆರೋಗ್ಯ ಕವಚ ವಾಹನದ ಸಿಬ್ಬಂದಿ ಇಬ್ಬರಿಗೂ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಂದಿರು ರಾಯಚೂರಿನ ರಿಮ್ಸ್‌ಗೆ ದಾಖಲಾಗಿದ್ದಾರೆ. ಶಿಶುಗಳು ಹಾಗೂ ಬಾಣಂತಿಯರು ಆರೋಗ್ಯದಿಂದಿದ್ದಾರೆ.

    108 ವಾಹನದಲ್ಲಿ ಹೆರಿಗೆಯಾಗುವುದು ಜಿಲ್ಲೆಯಲ್ಲಿ ಹೊಸದೇನಲ್ಲವಾದರೂ ಒಂದೇ ದಿನ ಎರಡು ಕಡೆಗಳಲ್ಲಿ ಹೆರಿಗೆಯಾಗಿರುವುದು ವಿಶೇಷವಾಗಿದೆ. ಹಾಳಾದ ರಸ್ತೆಗಳಿಂದಾಗಿ ಗರ್ಭಿಣಿಯರು ಆಸ್ಪತ್ರೆ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಉದಾಹರಣೆಗಳು ಸಹ ಇದೆ. ಆದರೆ ಈ ಎರಡು ಪ್ರಕರಣಗಳಲ್ಲಿ ಗರ್ಭಿಣಿಯರು ಹೆರಿಗೆ ನೋವು ಕಾಣಿಸಿಕೊಂಡು ಸಹಜವಾಗಿ ಮಗುವಿಗೆ ಜನ್ಮ ನೀಡಿದ್ದಾರೆ.

  • ವಿಚಿತ್ರ ಮುಖವುಳ್ಳ ಆಡು ಮರಿ ಜನನ!

    ವಿಚಿತ್ರ ಮುಖವುಳ್ಳ ಆಡು ಮರಿ ಜನನ!

    ಚಾಮರಜನಗರ: ಸರಗೂರು ತಾಲೂಕಿನಲ್ಲಿ ವಿಚಿತ್ರ ಮುಖವುಳ್ಳ ಆಡು ಮರಿಯೊಂದು ಜನನವಾಗಿದ್ದು, ಈ ಅಪರೂಪದ ಮರಿಯನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

    ತಾಲೂಕಿನ ಹುಲಿಕುರ ಗ್ರಾಮದಲ್ಲಿ ವಿಚಿತ್ರ ಆಡು ಮರಿ ಜನನವಾಗಿದೆ. ಹುಲಿಕುರ ಗ್ರಾಮದ ನಿವಾಸಿ ದಾಸಯ್ಯ ಅವರ ಮನೆಯಲ್ಲಿ ಸಾಕಿದ್ದ ಆಡಿಗೆ ಈ ಮರಿ ಹುಟ್ಟಿದೆ. ಶನಿವಾರದಂದು ಈ ಆಡು ಮರಿ ಜನಿಸಿತ್ತು. ಇದನ್ನು ನೊಡಿದ ತಕ್ಷಣ ಮನೆಮಂದಿ ಅಚ್ಚರಿಗೊಂಡಿದ್ದರು.

    ಈ ಆಡು ಮರಿಗೆ ನೋಡಲು ಕೊಂಚ ಮಾನವನ ಮುಖ ಲಕ್ಷಣ ಹೋಲುತ್ತದೆ. ಆಡು ಮರಿಗೆ ದೊಡ್ಡದಾದ ಎರಡು ಕಣ್ಣುಗಳಿವೆ ಆದರೆ, ಎರಡಕ್ಕೂ ಒಂದೆ ರೆಪ್ಪೆ ಇದೆ. ಈ ವಿಚಿತ್ರ ಮರಿಯ ವಿಷಯ ತಿಳಿದ ಬಳಿಕ ಇದನ್ನು ನೋಡಲು ಜನರು ಮುಗಿಬಿದ್ದು ದಾಸಯ್ಯ ಅವರ ಮನೆ ಬಳಿ ಸೇರಿದ್ದರು. ಈ ವೇಳೆ ಆಡು ಮರಿಯ ಫೋಟೋ, ವಿಡಿಯೋವನ್ನು ಕೂಡ ಜನ ಸೆರೆಹಿಡಿದಿದ್ದಾರೆ. ಆದರೆ ವಿಪರ್ಯಾಸವೆಂದರೆ ನಿನ್ನೆ ಜನಿಸಿದ್ದ ಆಡು ಮರಿ ನಿನ್ನೆ ಮಧ್ಯರಾತ್ರಿಯೇ ಅಸುನೀಗಿದೆ.

  • ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ – ಅವಿವಾಹಿತೆ, ಮಗು ಸಾವು

    ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ – ಅವಿವಾಹಿತೆ, ಮಗು ಸಾವು

    ಲಕ್ನೋ: ಅವಿವಾಹಿತೆ ಗರ್ಭಿಣಿಯೊಬ್ಬಳು ಯೂಟ್ಯೂಬ್‍ನಲ್ಲಿ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಲು ಮುಂದಾದಾಗ ತೀವ್ರ ರಕ್ತಸ್ರಾವದಿಂದ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಸೋಮವಾರ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

    ಯುವತಿ ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಈ ವೇಳೆ ಮನೆಯ ಮಾಲೀಕ ಹಾಗೂ ಅಕ್ಕಪಕ್ಕದ ಮನೆಯವರು ಯುವತಿಯ ರೂಮಿನ ಹೊರಗೆ ರಕ್ತವನ್ನು ನೋಡಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುವಾಗ ಯುವತಿಯ ಮೊಬೈಲಿನಲ್ಲಿ ವಿಡಿಯೋ ಪ್ಲೇ ಆಗುತ್ತಿತ್ತು.

    ಪೊಲೀಸರ ಪ್ರಕಾರ ಯುವತಿ ಬಹರಾಯಿಚ್‍ನಲ್ಲಿ ವಾಸಿಸುತ್ತಿದ್ದಳು. ನಾಲ್ಕು ದಿನಗಳ ಹಿಂದೆಷ್ಟೇ ಆಕೆ ಗೋರಖ್‍ಪುದ ರವಿ ಉಪಾಧ್ಯಾಯ್ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಕೆಲವು ದಿನಗಳಲ್ಲಿ ನನ್ನ ತಾಯಿ ನನ್ನ ಜೊತೆ ವಾಸಿಸಲು ಬರುತ್ತಾರೆ ಎಂದು ಯುವತಿ ಮನೆ ಮಾಲೀಕನಿಗೆ ಹೇಳಿದ್ದಳು.

    ಯುವತಿಯ ಕುಟುಂಬದವರು ಆಕೆಗೆ ಗರ್ಭಪಾತ ಮಾಡಿಸಬೇಕು ಎಂದುಕೊಂಡಿದ್ದರು. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ. ಸಮಾಜಕ್ಕೆ ಹೆದರಿ ಯುವತಿ ಕೆಲವು ದಿನಗಳ ಹಿಂದಷ್ಟೇ ಬಚರಾಯಿಚ್‍ನಿಂದ ಗೋರಖ್‍ಪುರಕ್ಕೆ ಬಂದಿದ್ದಳು. ಗೋರಖ್‍ಪುರಕ್ಕೆ ಬಂದ ನಂತರ ಯುವತಿ ಬೇರೆ ಬೇರೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.

    ಪೊಲೀಸರು ಯುವತಿಯ ಮೊಬೈಲ್ ಪರಿಶೀಲಿಸಿ ಆಕೆಯ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೋಷಕರಿಗೆ ಕರೆ ಮಾಡಿದ್ದಾಗ ಯುವತಿ ಅವಿವಾಹಿತೆ ಎಂಬುದು ತಿಳಿದುಬಂದಿದೆ. ಸಾಕ್ಷಿಗಳು ನಾಶ ಆಗಬಾರದೆಂದು ಪೊಲೀಸರು ಯುವತಿ ಇದ್ದ ಕೊಠಡಿಯನ್ನು ಸೀಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಳಿ ಕರುಗಳೊಂದಿಗೆ ಸೆಲ್ಫಿಗೆ ಮುಗಿಬಿದ್ದ ಮಕ್ಕಳು!

    ಅವಳಿ ಕರುಗಳೊಂದಿಗೆ ಸೆಲ್ಫಿಗೆ ಮುಗಿಬಿದ್ದ ಮಕ್ಕಳು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಈ ಕರುಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಕ್ಕಳು ಮುಗಿಬಿದ್ದಿದ್ದರು.

    ಬೆಂಗಳೂರಿನ ಮಾರತಹಳ್ಳಿ ಬಳಿಯ ಬಾಲಾಜಿ ಲೇಔಟ್ ನಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಹಳ್ಳಿಗಾಡು ಪ್ರದೇಶಗಳಲ್ಲಿ ಇದು ಕಾಮನ್ ಆಗಿದ್ದರೂ ಈ ದಟ್ಟ ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಹಸುವೊಂದು ಅವಳಿ ಗಂಡು ಕರುಗಳಿಗೆ ಜನ್ಮ ಕೊಟ್ಟಿದ್ದು ಸೆಲ್ಫಿ ಕ್ರೇಜ್‍ಗೆ ಕಾರಣವಾಗಿದೆ.

    ವಿಶ್ವನಾಥ್ ರೆಡ್ಡಿ ಎಂಬವರು ಕಳೆದ 20 ವರ್ಷಗಳಿಂದ ಹಸು ಸಾಗಣಿಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಹಸು ಅವಳಿ ಕರುಗಳಿಗೆ ಜನ್ಮ ಕೊಟ್ಟಿದೆ. ಹೀಗಾಗಿ ತಮಗೂ ಇದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ. ಸಂಡೇ ಸ್ಪೆಷಲ್ ಎಂಬಂತೆ ಅವಳಿ ಕರುಗಳು ಪುಟಾಣಿಗಳ ರಜೆ ಮಜಾವನ್ನು ಮತ್ತಷ್ಟು ಕಲರ್ ಫುಲ್ ಗೊಳಿಸಿದವು.

    ಮಕ್ಕಳು ಅವಳಿ ಕರುವಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

    ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

    ಚೆನ್ನೈ: ತೆಲಂಗಾಣದ ನಾಗಪಟ್ಟಿಣಂ ನಲ್ಲಿ ಒಂದು ಹಸು ಎರಡು ದೇಹ, ಎರಡು ಬಾಲ ಹಾಗೂ ಏಳು ಕಾಲುಗಳನ್ನು ಹೊಂದಿರುವ ಅಸಾಮಾನ್ಯ ಕರುವಿಗೆ ಜನ್ಮ ನೀಡಿದೆ.

    ಭಾನುವಾರ ನಾಗಪಟ್ಟನಂ ಬಳಿಕಯ ವೆಟ್ಟೈಕಾರಣಿರುಪ್ಪು ಗ್ರಾಮದಲ್ಲಿ ಈ ರೀತಿ ಕರು ಜನಿಸಿದೆ. ರೈತ ಜೆಗನ್ ಎಂಬವರಿಗೆ ಸೇರಿದ್ದ ಹಸು ಏಳು ಕಾಲು, ಎರಡು ದೇಹ ಹಾಗೂ ಎರಡು ಬಾಲ ಇರುವ ಕರುವಿಗೆ ಜನ್ಮ ಕೊಟ್ಟಿದೆ.

    ನಾಗಪಟ್ಟಣಂ ಜಿಲ್ಲೆಯ ಪಶುವೈದ್ಯ ವೈದ್ಯರ ಸಹಾಯದಿಂದ ಕರುವಿಗೆ ಸೂಕ್ತವಾದ ಶಸ್ತ್ರ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರೈತ ತಿಳಿಸಿದ್ದಾರೆ. ಅಸಾಮಾನ್ಯ ಕರು ಜನಿಸಿರುವ ಬಗ್ಗೆ ತಿಳಿದು ಗ್ರಾಮದ ಜನರು ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಅಪಾರ ಸಂಖ್ಯೆಯ ಜನರು ಬಂದು ಕರುವನ್ನು ನೋಡುತ್ತಿದ್ದಾರೆ.

    ಇತ್ತೀಚಿನ ‘ಗಜ’ ಚಂಡಮಾರುತದ ಸಮಯದಲ್ಲಿ ಪೀಡಿತ ಗ್ರಾಮಗಳಲ್ಲಿ ವೆಟ್ಟಿಕರಣಿರುಪ್ಪು ಕರಾವಳಿ ಹಳ್ಳಿಯು ಒಂದಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಾಸ್ಟೆಲ್‍ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

    ಹಾಸ್ಟೆಲ್‍ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

    -ಮಗು ಸಹಿತ ಬಾಲಕಿಯನ್ನು ಕಾಡಿಗೆ ಅಟ್ಟಿದ ಹಾಸ್ಟೆಲ್ ಸಿಬ್ಬಂದಿ

    ಭುವನೇಶ್ವರ: ಅಪ್ರಾಪ್ತ ಬಾಲಕಿಯೊಬ್ಬಳು ಆದಿವಾಸಿ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

    ಈ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯ ದರಿಂಗಿಬಾದಿಯಲ್ಲಿರುವ ‘ಸೇವಾ ಆಶ್ರಯ ಹೈಸ್ಕೂಲ್’ ಹಾಸ್ಟೆಲ್‍ನಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಶನಿವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದಾಳೆ. ವಿದ್ಯಾರ್ಥಿನಿಗೆ 14 ವಯಸ್ಸಾಗಿದ್ದು, 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಮಗು ಹುಟ್ಟಿದ ಬಳಿಕ ಆಕೆ ಮತ್ತು ಮಗುವನ್ನು ಹಾಸ್ಟೆಲ್ ನಿಂದ ಹೊರಗೆ ಹತ್ತಿರದ ಅರಣ್ಯಕ್ಕೆ ತಳ್ಳಿದ್ದಾರೆ ಎಂದು ಕಂಧಮಲ್ ಜಿಲ್ಲಾ ಕಲ್ಯಾಣ ಅಧಿಕಾರಿ ಚಾರುಲತಾ ಮಲ್ಲಿಕ್ ತಿಳಿಸಿದ್ದಾರೆ.

    ಈ ಪ್ರಕರಣ ಈಗ ಅಧಿಕಾರಿಗಳಿಗೆ ತಲೆಬಿಸಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಎಸ್‍ಸಿ/ಎಸ್‍ಟಿ ಕಲ್ಯಾಣ ಸಚಿವ ರಮೇಶ್ ಮಝಿ ಅವರು ಆದೇಶಿಸಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಪೊಲೀಸರು ಕೂಡ ಈ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

    ಭಾನುವಾರ ಮುಂಜಾನೆ ಇಬ್ಬರು ಅರಣ್ಯ ಅಧಿಕಾರಿಗಳು ಬಾಲಕಿಯನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿ ಹಾಗೂ ಆಕೆಯ ಮಗು ಇಬ್ಬರು ಫುಲಬಾನಿ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗು ಮತ್ತು ತಾಯಿ ಇಬ್ಬರ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಎಂಟು ತಿಂಗಳ ಹಿಂದೆ ಬಾಲಕಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಆದರೆ ಬಾಲಕಿ ಭಯದಿಂದ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರಿಂಗ್‍ಬಾದಿ ಕಾಲೇಜಿನ ವಿದ್ಯಾರ್ಥಿಯೋರ್ವನನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.

    ಜಿಲ್ಲಾಧಿಕಾರಿ ಬೃಂದ ಅವರು, ಹಾಸ್ಟೆಲ್‍ನ ಇಬ್ಬರು ಅಡುಗೆ ಭಟ್ಟರು, ಮಹಿಳಾ ಮೇಲ್ವಿಚಾರಕಿ ಹಾಗೂ ಓರ್ವ ದಾದಿಯನ್ನು ಅಮಾನತು ಮಾಡಿದ್ದಾರೆ. ಜೊತೆಗೆ ಈ ಶಾಲೆಯ ಮುಖ್ಯಶಿಕ್ಷಕಿ ರಾಧಾ ರಾಣಿ ಅವರನ್ನೂ ಅಮಾನತು ಮಾಡುವಂತೆ ಸರ್ಕಾರ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv