Tag: birds

  • ಸುವ್ವಿ ರಾಗ ಕೇಳಿದಿರಾ, ಕಾಡಿನ ರೈತನ ನೋಡಿದಿರಾ..? – ಈಗ ಕೇಳಿ ಮಧುರಕಂಠದ ʻಐಯೋರʼ ಗಾನ

    ಸುವ್ವಿ ರಾಗ ಕೇಳಿದಿರಾ, ಕಾಡಿನ ರೈತನ ನೋಡಿದಿರಾ..? – ಈಗ ಕೇಳಿ ಮಧುರಕಂಠದ ʻಐಯೋರʼ ಗಾನ

    ಪಕ್ಷಿಗಳ (Birds) ಸಮೂಹ ಕಾಣುತ್ತಿದ್ದರೆ, ಅವುಗಳ ಚಿಲಿಪಿಲಿ ಸದ್ದನು ಕೇಳುತ್ತಿದ್ದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ತಾನೂ ರೆಕ್ಕೆಬಿಚ್ಚಿ ನೀಲಮೇಘಗಳಲ್ಲಿ ಹಾರಬೇಕು ಎಂದೆನಿಸುತ್ತದೆ. ನೆನಪಿದೆಯಾ ಅಂದು ನಾವು ಪುಟ್ಟ ಮಕ್ಕಳಿದ್ದಾಗ ಪಕ್ಷಿಯ ಚಿತ್ರ ಬರೆಯಲು ಹೇಳಿದ್ರೆ ಚೂಪಾದ ಕೊಕ್ಕು, ದುಂಡಗಿನ ಕಣ್ಣು, ಕೆಂಪನೆಯ ಮುಂಗುರುಳು… ಹೀಗೆ ನಮಗೆ ಇಷ್ಟ ಬಂದ ಆಕಾರ ನೀಡುತ್ತಾ ಅವುಗಳನ್ನ ನಮ್ಮ ಪುಟಗಳಲ್ಲಿ ಹಾರಿಸುತ್ತಿದ್ದ ನೆನಪು ನಿನ್ನೆ ಮೊನ್ನೆಯದೋ ಎಂದೇ ಭಾಸವಾಗುತ್ತಿದೆ. ಆದ್ರೆ ನಗರಗಳು ಬೆಳೆದಂತೆ ಪಕ್ಷಿಗಳು ಮಾಯವಾಗುತ್ತಿವೆ. ಮೃಗಾಲಯ, ಕಾಡುಗಳಲ್ಲಿ ಪ್ರವಾಸಕ್ಕೆ ಹೋಗಿ ಹಕ್ಕಿಗಳನ್ನು ಕಣ್ತುಂಬಿಕೊಳ್ಳಬೇಕಿದೆ.

    ಸಾಮಾನ್ಯವಾಗಿ ಪಕ್ಷಿ ವೀಕ್ಷಣೆಗೆ ಮುಂಜಾನೆ 6 ರಿಂದ 10 ಅಥವಾ ಸಂಜೆ 4 ರಿಂದ 6 ಗಂಟೆಯ ಸಮಯ ಸೂಕ್ತವೆಂದು ಪಕ್ಷಿ ತಜ್ಞರು ಹೇಳುತ್ತಾರೆ. ಬನ್ನಿ ಹಾಗಿದ್ರೆ ಪಕ್ಷಿ ತಜ್ಞರು ಏನು ಹೇಳಿದ್ದಾರೆ.. ಅವುಗಳ ಸುತ್ತ ಒಂದು ಸುತ್ತು ಹಾಕೋಣ…

    ಸುಂದರ ಸುವ್ವಿ ಹಕ್ಕಿ:
    ಸುವ್ವಿ ಹಕ್ಕಿ ಗುಬ್ಬಚ್ಚಿಗಿಂತಲೂ ಸಣ್ಣದಾದ ಪಕ್ಷಿ, ಪ್ರಿನಿಯಾ ಸೊಸಿಯಾಲಿಸ್ ಎಂಬುದು ವೈಜ್ಞಾನಿಕ ಹೆಸೆರು. ಗುಬ್ಬಚ್ಚಿಗಿಂತ ಚಿಕ್ಕದಾದ ಹಕ್ಕಿ. ನೆತ್ತಿ, ಕತ್ತಿನ ಹಿಂಭಾಗ, ರೆಕ್ಕೆ, ಬಾಲದ ಮೇಲ್ಬಾಗದಲ್ಲಿ ಕಡು ಬೂದು ಮಿಶ್ರಿತ ಪಾಚಿ ಬಣ್ಣವಿರುತ್ತದೆ. ಉದ್ದ ಬಾಲ ಅದರ ಅಂಚು ಕಪ್ಪು-ಬಿಳಿ; ನೀಳವಾದ ಕಾಲುಗಳು ಹಾಗೂ ಚಿಕ್ಕದಾದ ಕಪ್ಪು ಕೊಕ್ಕು ಇರುತ್ತದೆ.

    ನೀಳವಾದ ಕಾಲುಗಳು ಗುಲಾಬಿ ಬಣ್ಣದಿಂದ ಕಂಡುಬರುತ್ತದೆ. ಇದರ ಚಿಕ್ಕದಾದ ಕೊಕ್ಕು ಕಪ್ಪಾಗಿರುತ್ತದೆ. ಕುರುಚಲು ಕಾಡು, ಹೂದೋಟ ಮುಂತಾದ ಕಡೆ ಪೊದೆ, ಜೊಂಡು, ವಾಟೆಗಳಲ್ಲಿ ವಾಸಿಸುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ದೊಡ್ದ ಎಲೆಗಳನ್ನ ಹೆಣೆದು ಮಧ್ಯದಲ್ಲಿ ಹತ್ತಿ, ನಾರು ಇತ್ಯಾದಿಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ. ಮಾರ್ಚ್ ತಿಂಗಳಿಂದ ಸೆಪ್ಟೆಂಬರ್ ತಿಂಗಳೊಳಗೆ 3 ರಿಂದ 4 ಕೆಂಪು ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಡುತ್ತದೆ.

    ಕಾಡಿನ ರೈತ ಮಂಗಟ್ಟೆ (Hornbill):
    ಒಮ್ಮೆ ನೋಡಿದ್ರೆ ಮೆರಯುವುದೇ ಇಲ್ಲ ಅಂತಹ ಹಕ್ಕಿ ಇದು. ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣ-ದೊಡ್ಡ ಜೀವಿಗಳನ್ನು ತಿನ್ನುತ್ತದೆಯಾದರೂ ಫಲಾಹಾರಿ ಹಕ್ಕಿಗಳು. ಇವು ಹಣ್ಣುತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ. ಆದ್ದರಿಂದಲೇ ಅನೇಕರು ಇದನ್ನೂ ಕಾಡಿನ ರೈತ ಎಂದೂ ಕರೆಯುತ್ತಾರೆ.

    ಇನ್ನೂ ಇದರ ಸಂತಾನೋತ್ಪತ್ತಿಯ ವಿಶಿಷ್ಟ ಕ್ರಮ ಆಶ್ಚರ್ಯವನ್ನು ತರುತ್ತದೆ. ಹಳೆಯ, ದೊಡ್ಡ ಮರಗಳ ಪೊಟರೆ ಇದರ ಗೂಡು. ಹೆಣ್ಣು ಹಕ್ಕಿ ಇದರ ಒಳಗೆ ಹೋಗಿ ಕೂತ ನಂತರ ಗಂಡು ಹೊರಗಿನಿಂದ ಗೂಡಿನ ಬಾಯನ್ನು ಸಣ್ಣ ಕಿಂಡಿಯೊಂದನ್ನ ಬಿಟ್ಟು ಪೂರ್ತಿ ಮುಚ್ಚಿಬಿಡುತ್ತದೆ. ಒಳಗೆ ಮೊಟ್ಟೆಗಳು ಮರಿಯಾಗಿ ಅವು ತುಸು ಬೆಳೆಯುವವರೆಗೂ ಗಂಡು, ಹೆಣ್ಣು ಹಾಗೂ ಮರಿಗಳಿಗೆ ಆಹಾರವನ್ನ ತಂದು ಒದಗಿಸುತ್ತದೆ. ಮರಿಗಳು ತುಸು ದೊಡ್ಡವಾದನಂತರ ಹೆಣ್ಣು ಗೂಡಿನ ʻಬಾಗಿಲನ್ನುʼ ಒಡೆದುಕೊಂಡು, ಹೊರಬರುತ್ತದೆ. ಮರಿಗಳು ತಮ್ಮ ಮಲದಿಂದ ಮತ್ತೆ ಗೂಡಿನ ಬಾಯಿಯನ್ನು ಒಂದು ಸಣ್ಣ ರಂದ್ರದಷ್ಟು ಬಿಟ್ಟು ಉಳಿದಂತೆ ಮುಚ್ಚಿಬಿಡುತ್ತವೆ. ಆನಂತರ ಗಂಡು ಹೆಣ್ಣು ಎರಡೂ ಸೇರಿ ಮರಿಗಳಿಗೆ ಆಹಾರ ಒದಗಿಸುತ್ತದೆ.

    ದಾಸಮಂಗಟ್ಟೆ: ಇದು ಹದ್ದಿಗಿಂತ ದೊಡ್ಡದಾಗಿದ್ದು, ರಣಹದ್ದಿಗಿಂತ ಚಿಕ್ಕದಾದ ಬೃಹತ್‌ ಪಕ್ಷಿ. ಇದರ ತಲೆ, ಕತ್ತು, ಕೊಕ್ಕು ಹಳದಿ ಬಣ್ಣದಿಂದ ಕೂಡಿರುತ್ತದೆ. ಇದರ ಕಣ್ಣಿನ ಭಾಗದಲ್ಲಿ ಅಗಲವಾದ ಅಡ್ಡ ಕಪ್ಪು ಪಟ್ಟಿಯನ್ನ ಕಾಣಬಹುದು. ನೆತ್ತಿಯಿಂದ ಕೊಕ್ಕಿನ ಮಧ್ಯದವರೆಗೆ ಹಳದಿ ಟೋಪಿ ಕಂಡುಬರುತ್ತದೆ. ಕತ್ತಿನ ತಳಭಾಗ ಮತ್ತು ದೇಹ ಹಾಗೂ ರೆಕ್ಕೆ ಕಪ್ಪು ಬಣ್ಣದ್ದಾಗಿರುತ್ತದೆ. ಇದರ ಹೊಟ್ಟೆ ಮತ್ತು ಬಾಲ ಬಿಳಿಯಾಗಿರುತ್ತದೆ. ಬಾಲದ ಮೇಲೆ ಅಗಲವಾದ ಕಪ್ಪು ಪಟ್ಟಿಯನ್ನ ಕಾಣಬಹುದು. ಅಲ್ಲದೆ ಕಪ್ಪು ರೆಕ್ಕೆಯ ಮೇಲೆ ಅಗಲವಾದ ಬಿಳಿ ಪಟ್ಟಿ ಹಾಗೂ ಬಾಲದ ಮೇಲಿನ ಪಟ್ಟಿಗಳು ಹಾರುವಾಗ ಸ್ಪಷ್ಟವಾಗಿ ಗೋಚರಿಸುತ್ತವೆ. ಇವುಗಳು ಹೆಚ್ಚಾಗಿ ನಿತ್ಯಹರಿದ್ವರ್ಣ, ತೇವ ಪರ್ಣಪಾತಿ ಕಾಡುಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ದಾಂಡೇಲಿ, ಅಣಶಿ, ಕುದುರೆಮುಖ, ಮೂಕಾಂಬಿಕಾ ಅರಣ್ಯಗಳಲ್ಲಿ ಕಾಣಬಹುದು. ಸಂತಾನೋತ್ಪತ್ತಿ ಸಮಯದಲ್ಲಿ ಮರದ ಪೊಟ್ಟರೆಗಳಲ್ಲಿ ಗೂಡು ನಿರ್ಮಿಸಿ ಫೆಬ್ರುವರಿ ತಿಂಗಳಿಂದ ಏಪ್ರಿಲ್ ತಿಂಗಳೊಳಗೆ 2 ಮೊಟ್ಟೆಗಳಿಗೆ ಜನ್ಮ ನೀಡುತ್ತವೆ.

    ಕರ್ನಾಟಕದಲ್ಲಿ ದಾಸ ಮಂಗಟ್ಟೆಹಕ್ಕಿ, ಮಲಬಾರ್ ಮಂಗಟ್ಟೆ ಹಾಗೂ ಸಾಮಾನ್ಯ ಮಂಗಟ್ಟೆ ಹಕ್ಕಿಗಳನ್ನು ನೋಡಬಹುದು. ದುರದೃಷ್ಟವಶಾತ್‌ ಈ ಮಂಗಟ್ಟೆ ಪಕ್ಷಿಗಳಿಂದು ಅಳಿವಿನ ಅಂಚಿನಲ್ಲಿದೆ.

    ಕೆನ್ನೀಲಿ ಬಕ:
    ಸುಮಾರು 90 ಸೆಂ.ಮೀ. ಎತ್ತರದ, ಬೂದು ಬಕ ಪಕ್ಷಿಯಷ್ಟಿರುವ ಈ ಹಕ್ಕಿಯ ಮೇಲ್ಭಾಗದ ಮೈ ನೀಲಿ ಬೂದು ಬಣ್ಣವಾಗಿದ್ದು, ಉದ್ದನೆಯ ಕೊಕ್ಕು, ಕೆನ್ನೆಯಿಂದ ಹೊರಚಾಚುವ ಕರೀಬಣ್ಣದ ಉದ್ದನೆಯ ಪುಕ್ಕ, ಕತ್ತು ಹಾಗೂ ತಲೆಯು ಇಟ್ಟಿಗೆಯ ಬಣ್ಣ ಹೊಂದಿದ್ದು, ಕತ್ತಿನ ಕೆಳಗೆ ಕಪ್ಪು ಹಾಗೂ ತಿಳಿ ಕಂದು ಬಣ್ಣವಿರುತ್ತದೆ. ಸೂರ್ಯನ ಪ್ರಕಾಶದಲ್ಲಿ ನೇರಳೆ ಬಣ್ಣ ಕಾಣುತ್ತದೆ. ಪಕ್ಷಿ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

    ಭಾರತದ ಎಲ್ಲಾ ಭಾಗಗಳಲ್ಲಿ, ಶ್ರೀಲಂಕಾದಲ್ಲಿ ಸ್ಥಳೀಕವಾಗಿಯೂ ಪ್ರಾದೇಶಿಕ ವಲಸೆ ಹಕ್ಕಿಗಳಾಗಿಯೂ ಇವು ಕಂಡುಬರುತ್ತವೆ. ಏಕಾಂಗಿಗಳಾಗಿ ನೀರಿನ ಝರಿಗಳ ಬಳಿ, ನೀರಿನ ಮಡುವುಗಳ ಹತ್ತಿರ ಇವು ಕಾಣಿಸಿಕೊಳ್ಳುತ್ತವೆ. ಮೀನು, ಕಪ್ಪೆ, ಹಾವು ಇದರ ಆಹಾರ. ಜೂನ್-ಮಾರ್ಚ್ ತಿಂಗಳ ಮಧ್ಯೆ ಮರಿ ಮಾಡುತ್ತವೆ. ಈ ಹಕ್ಕಿಗಳು ತಮ್ಮ ಜಾತಿಗೆ ಸೇರಿದ ಹಕ್ಕಿಗಳಿರುವ ಕಾಲೋನಿಗಳಲ್ಲಿಯೇ ಸಾಮಾನ್ಯವಾಗಿ ಮರಿ ಮಾಡುತ್ತವೆ. ಗಿಡಗಳಲ್ಲಿ, ಜೊಂಡು ಹುಲ್ಲಿನ ಹಾಸಿನ ಮೇಲೆ ಕಡ್ಡಿಗಳಿಂದ ಗೂಡನ್ನು ಕಟ್ಟಿ, ನೀಲಿ-ಹಸಿರು ಮಿಶ್ರ ಬಣ್ಣದ 3-5 ಮೊಟ್ಟೆಗಳನ್ನು ಇಡುತ್ತವೆ.

    ಸೌಂದರ್ಯಕ್ಕೆ ಮತ್ತೊಂದು ಹೆಸರು ಬಾಲದಂಡೆಯ ಹಕ್ಕಿ (Asian Paradise):
    ಕಣ್ಣಿಗೆ ಸುಂದರ ನೋಟ ಬೀರುವ ಹಕ್ಕಿಗಳನ್ನು ಪಟ್ಟಿ ಮಾಡುತ್ತಾ ಹೋದ್ರೆ ಅವುಗಳಲ್ಲಿ ಪ್ರಮುಖವಾದುದು ಬಾಲದಂಡೆಯ ಹಕ್ಕಿ. ಅದರ ಬಾಲವೇ ಅದಕ್ಕೇ ಸೌಂದರ್ಯ. ಛಾಯಾಗ್ರಾಹಕನೂ ಇದರ ಫೋಟೋ ಕ್ಲಿಕ್ಕಿಸಬೇಕೆಂದರೆ ಹರಸಾಹಸ ಮಾಡಲೇಬೇಕು. ಏಕೆಂದರೆ ಇದರ ಬಾಲ ಪೂರ್ಣ ನೋಡಿಕೊಂಡು ಫೋಟೋ ಕ್ಲಿಕ್ಕಿಸುವಷ್ಟರಲ್ಲೇ ಸರ್ರನೆ ಹಾರಿಬಿಡುತ್ತೆ.

    ಗಂಡು ರಾಜಹಕ್ಕಿಗೆ ಕಡು ನೀಲಿಗಪ್ಪು ತಲೆ, ಜುಟ್ಟು, ಗಲ್ಲ, ಹೊಳೆಯುವ ಬಿಳಿದೇಹ, ರೆಕ್ಕೆಯಲ್ಲಿ ಅಲ್ಲಲ್ಲಿ ಕಪ್ಪು ಗರಿಗಳು. ಮೊದಲೇ ತಿಳಿಸಿದಂತೆ ಒಂದೂವರೆ ಅಡಿ ಉದ್ದದ ಬಿಳಿ ರಿಬ್ಬನ್ ತರಹದ ಬಾಲ. ಇದರಲ್ಲಿ ಮತ್ತೊಂದು ಒಳಪ್ರಭೇದವಿದೆ. ಈ ಪ್ರಭೇದದಲ್ಲಿ ಬಿಳಿದೇಹದ ಬದಲು ಕೆಂಗಂದು ದೇಹ ಮತ್ತು ಕೆಂಗಂದು ರಿಬ್ಬನ್ ಬಾಲ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಬಾಲ ಬೆಳೆಯುತ್ತಾ ಹೋಗುತ್ತದೆ, 3 ವರ್ಷಗಳ ನಂತರ ಒಂದು ಅಡಿ ಮೀರುತ್ತದೆ. ಜೊತೆಗೆ ಬಾಲ್ಯದ ಕೆಂಪು ಬಿಳಿಯತ್ತ ಹೊರಳುತ್ತದೆ. ಕೆಂಗಂದು ಮತ್ತು ಬಿಳಿ ಮಿಶ್ರಿತ ರಾಜಹಕ್ಕಿಯನ್ನು ನಾವು ಕೆಲವೊಮ್ಮೆ ಕಂಡರೆ ಅದನ್ನು ಟ್ರಾನಿಯೆಂಟ್‌ ಫೇಸ್‌ ಎಂದು ತಿಳಿಯಬೇಕು. ಹೀಗೆ ಅಚ್ಚ ಬಿಳಿದೇಹ ಹೊಂದಿದ ರಾಜಹಕ್ಕಿಯನ್ನು ಹಿಂದಿಯಲ್ಲಿ ದೂದ್‍ರಾಜ ಎಂದು ಹೇಳುತ್ತಾರೆ.

    ಈ ಪಕ್ಷಿ ಬೇಸಿಗೆಯಲ್ಲಿ ಮೇಲುಕೋಟೆ, ಬಂಡೀಪುರ, ನಂದಿಬೆಟ್ಟ, ಸಾವನ ದುರ್ಗ, ದೇವರಾಯನ ದುರ್ಗ, ಬನ್ನೇರುಘಟ್ಟ, ಮುತ್ತತ್ತಿಯಂಥಾ ಕಾಡುಗಳಲ್ಲಿ ಕಾಣಸಿಗುತ್ತವೆ. ಚಳಿಗಾಲದಲ್ಲಿ ದಕ್ಷಿಣಭಾರತದ ಅನೇಕ ಜಾಗಗಳಲ್ಲಿ ಚದುರಿ ಹೋಗುತ್ತವೆ. ಮರಗಳು ದಟ್ಟವಿರುವ, ವಿವಿಧ ಬೆಳೆಗಳಿಂದ ಕೂಡಿದ ತೋಟ, ಬಿದುರು ಕಾಡುಗಳೆಂದರೆ ಇವಕ್ಕೆ ಬಲು ಪ್ರಿಯ.

    ಮಧುರ ಕಂಠ:
    ನಮ್ಮ ಅತಿ ಸುಂದರ ಹಕ್ಕಿಗಳಲ್ಲಿ ಈ ಮಧುರಕಂಠವೂ ಒಂದು. ಹೆಸರಿಗೆ ತಕ್ಕಂತೆ ಇದು ಶ್ರಾವ್ಯವಾಗಿ ಹಾಡುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಐಯೋರ ಎಂಬ ಇಂಪಾದ ಹೆಸರಿನಿಂದಲೇ ಕರೆಯುತ್ತಾರೆ.

    ದಕ್ಷಿಣ ಏಷ್ಯಾದಲ್ಲಿ ಎರಡು ಜಗತ್ತಿನಲ್ಲಿ 4 ಬಗೆಯ ಮಧುರಕಂಠಗಳು ಕಂಡುಬರುತ್ತವೆ. ಎಲ್ಲವೂ ಹಸಿರು, ಹಳದಿ, ಬಿಳಿ ಹಾಗೂ ಕಪ್ಪು ವರ್ಣಗಳ ಸಂಯೋಜನೆಯ ಹಕ್ಕಿಗಳೇ. ಗಂಡು ಹೆಣ್ಣಿನ ವರ್ಣ ಸಂಯೋಜನೆ ಬೇರೆ ಬೇರೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿ ಕಪ್ಪು ಟೋಪಿಯನ್ನು ಮೆರೆಸುತ್ತದೆ. ಇದರ ಪ್ರೇಮಯಾಚನಾ ಪ್ರಸಂಗ ಪ್ರಸಿದ್ಧವಾದದ್ದು. ಎಲೆಗಳ ನಡುವೆ ನುಸುಳಿ ಕೀಟಗಳನ್ನು ಹೆಕ್ಕಿಕೊಳ್ಳುವುದು ಇದರ ಆಹಾರ ಸಂಪಾದನೆಯ ಕ್ರಮ. ಕಂಬಳಿ ಹುಳುಗಳೂ ಇದರ ಆಹಾರ ಕ್ರಮವಾಗಿದೆ.

    ದಕ್ಷಿಣ ಭಾರತದಲ್ಲಿ ಕಂಡುರುವುದು ಸಾಮಾನ್ಯ ಮಧುರಕಂಠ. ಉತ್ತರ-ಪಶ್ಚಿಮ ಭಾರತದಲ್ಲಿ ಮಾರ್ಷಲ್ ಮಧುರಕಂಠ ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿಯೂ ಮಾರ್ಷಲ್ಸ್ ಕಂಡುಬರುತ್ತದೆ. ಇದರ ಬಾಲದಿಂದಲೇ ಇದನ್ನು ಗುರುತಿಸಬಹುದು ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕೇರಳದಲ್ಲಿ ಹಕ್ಕಿ ಜ್ವರದ ಭೀತಿ – 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

    ಕೇರಳದಲ್ಲಿ ಹಕ್ಕಿ ಜ್ವರದ ಭೀತಿ – 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

    ತಿರುವನಂತಪುರಂ: ಕೇರಳದ (Kerala) ಕೊಟ್ಟಾಯಂ (Kottayam) ಜಿಲ್ಲೆಯ 3 ಪಂಚಾಯಿತಿಗಳಲ್ಲಿ ಏಕಾಏಕಿ ಹಕ್ಕಿ ಜ್ವರ (Bird Flu) ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ 6,000ಕ್ಕೂ ಅಧಿಕ ಪಕ್ಷಿಗಳನ್ನು (Birds) ಹತ್ಯೆ ಮಾಡಲಾಗಿದೆ.

    ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಭೀತಿ ಆವರಿಸಿದ್ದು, ಈ ಮಧ್ಯೆ ದೇಶದಲ್ಲಿ ಹಕ್ಕಿ ಜ್ವರ ಸದ್ದು ಮಾಡುತ್ತಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ವೇಚೂರು, ನಿಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ 6,017 ಪಕ್ಷಿಗಳನ್ನು ಸಂಹರಿಸಲಾಗಿದೆ. ಅದರಲ್ಲೂ ಹೆಚ್ಚಾಗಿ ಬಾತುಕೋಳಿಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    Bird flu

    ಕೇರಳದ ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನಿಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳನ್ನು ಕೊಲ್ಲಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?

    ಈ ಹಕ್ಕಿ ಜ್ವರದ ಭೀತಿಯಿಂದಾಗಿ ಇಂದು ಮುಂಜಾನೆ ಕೇರಳದ ರೈತರು ಬಾತುಕೋಳಿಗಳನ್ನು ಹಿಡಿದು ಅವುಗಳನ್ನು ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಕೇರಳದಲ್ಲಿ ಹಕ್ಕಿಜ್ವರದ ಹರಡುತ್ತಿರುವುದರ ಬಗ್ಗೆ ವರದಿಯಾದ ಬೆನ್ನಲ್ಲೇ ಲಕ್ಷದ್ವೀಪಗಳಿಗೆ ಕೋಳಿಯನ್ನು ಸಾಗಿಸುವುದನ್ನು ನಿಷೇಧಿಸಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ. ಇದನ್ನೂ ಓದಿ: ರಾಜಕೀಯ ಜಂಜಾಟದ ನಡುವೆ ಯುವಕರೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

    Live Tv
    [brid partner=56869869 player=32851 video=960834 autoplay=true]

  • ಈ ಹಿಂದೆ ಹಾವಿನ ಮೊಟ್ಟೆ, ಇದೀಗ ಹಕ್ಕಿ ಗೂಡಿನಿಂದಾಗಿ ರಾ. ಹೆದ್ದಾರಿ ಕೆಲಸ ಸ್ಥಗಿತ!

    ಈ ಹಿಂದೆ ಹಾವಿನ ಮೊಟ್ಟೆ, ಇದೀಗ ಹಕ್ಕಿ ಗೂಡಿನಿಂದಾಗಿ ರಾ. ಹೆದ್ದಾರಿ ಕೆಲಸ ಸ್ಥಗಿತ!

    ಕಾಸರಗೋಡು: ಕೆಲೆ ತಿಂಗಳ ಹಿಂದೆ ಹಾವಿನ ಮೊಟ್ಟೆಗೆ ಕಾವು ನೀಡುವ ಕಾರಣ, ಇದೀಗ ಪಕ್ಷಿಗಳ ಗೂಡುಗಳನ್ನು ರಕ್ಷಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿಯನ್ನು ಸ್ಥಗಿತಗೊಳಿಸಲಾದ ಘಟನೆಯೊಂದು ನಡೆದಿದೆ.

    ಹೌದು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯ ಅನ್ವಯ ತಲಪಾಡಿಯಿಂದ ಚೆರ್ಕಳವರೆಗಿನ ಮೊದಲ ರೀಚ್‍ನ ಕಾಮಗಾರಿ ಭರದಿಂದ ಸಾಗುತ್ತಿತ್ತು. ಅಂತೆಯೇ ಚೆರ್ಕಳ ಪೇಟೆಯ ಒಂದು ಭಾಗದ ರಸ್ತೆ ಬದಿಯಲ್ಲಿ ಮರಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಹಕ್ಕಿಗಳು(Birds) ಗೂಡು ಕಟ್ಟಿರುವುದು ಬೆಳಕಿಗೆ ಬಂದಿದೆ.

     

    ಚೆರ್ಕಳ ಜಂಕ್ಷನ್‍ನಲ್ಲಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದರಲ್ಲಿ ಸುಮಾರು 100ಕ್ಕೂ ಅಧಿಕ ನೀರು ಕಾಗೆಗಳು ಹಾಗೂ ಕೊಕ್ಕರೆಗಳು ಗೂಡು ಕಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಇವುಗಳ ಸಂರಕ್ಷಣೆಗೆ 25 ದಿನ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರ ಸೊಸೈಟಿ, ಅರಣ್ಯ ಇಲಾಖೆ ಹಾಗೂ ಪಕ್ಷಿ ತಜ್ಞರು ಸಮಾಲೋಚಿಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಇದನ್ನೂ ಓದಿ: ಹೆದ್ದಾರಿಗಾಗಿ ಧರೆಗುರುಳಿದ ಬೃಹತ್ ಮರ- ನೂರಾರು ಹಕ್ಕಿಗಳ ಮಾರಣಹೋಮ

    ವಿದ್ಯುತ್ ತಂತಿ ಬದಲಾವಣೆ ಮಾಡುವ ಸಲುವಾಗಿ 12 ಮೀಟರ್ ಎತ್ತರದ ಮರದ ರೆಂಬೆ ಕಡಿಯಲು ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದರು. ಆಗ ಪಕ್ಷಿಗಳ ಗೂಡು ಕಂಡುಬಂದಿತ್ತು. ಕೂಡಲೇ ಸಂಸ್ಥೆಯ ಜಿ.ಎಂ ಬಾಲಸುಬ್ರಹ್ಮಣ್ಯಂ, ಸಾಮಾಜಿಕ ಅರಣ್ಯ ಇಲಾಖೆ ಡೆಪ್ಯುಟಿ ಕನ್ಸರ್ವೇಟರ್ ಪಿ.ಧನೇಶ್ ಕುಮಾರ್, ಭಕ್ತಿ ನಿರೀಕ್ಷಕ ರಾಜು ಕಿದೂ ಸ್ಥಳಕ್ಕಾಗಮಿಸಿ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

    ಮೇ ತಿಂಗಳಿಂದ ಅಕ್ಟೋಬರ್‍ವರೆಗೆ ಕಡಲು ಕಾಗೆ, ಕೊಕ್ಕರೆಗಳು ತಮ್ಮ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತವೆ. ಈ ಸಮಯದಲ್ಲಿ ಅವುಗಳ ಗೂಡು ತೆರವು ಮಾಡಿದರೆ ಮರಿಗಳು ಸಾಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ 25 ದಿನ ಕಾದು ಆ ಹಕ್ಕಿಗಳು ತಾನಾಗಿ ಗೂಡಿನಿಂದ ಹಾರಿಹೋದ ನಂತರ ಕಾಮಗಾರಿ ಆರಂಭಿಸಲು ತೀರ್ಮಾನ ಮಾಡಲಾಗಿದೆ. ಈ ಹಿಂದೆಯೂ ಇದೇ ರಸ್ತೆ ಕಾಮಗಾರಿ ಸಂದರ್ಭ ಹಾವಿನ ಮೊಟ್ಟೆಗೆ ಕಾವು ನೀಡುವ ಕಾರಣಕ್ಕಾಗಿ ಮಂಜೇಶ್ವರ ಆಸು-ಪಾಸಿನಲ್ಲಿ ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ: ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ

    Live Tv
    [brid partner=56869869 player=32851 video=960834 autoplay=true]

  • ಹೆದ್ದಾರಿಗಾಗಿ ಧರೆಗುರುಳಿದ ಬೃಹತ್ ಮರ- ನೂರಾರು ಹಕ್ಕಿಗಳ ಮಾರಣಹೋಮ

    ಹೆದ್ದಾರಿಗಾಗಿ ಧರೆಗುರುಳಿದ ಬೃಹತ್ ಮರ- ನೂರಾರು ಹಕ್ಕಿಗಳ ಮಾರಣಹೋಮ

    ತಿರುವನಂತಪುರಂ: ರಾಷ್ಟ್ರೀಯ ಹೆದ್ದಾರಿಗಾಗಿ ಬೃಹತ್ ಮರವೊಂದನ್ನು ಉರುಳಿಸಿದ ಪರಿಣಾಮ ನೂರಾರು ಪಕ್ಷಿಗಳು ಮಾರಣಹೋಮವಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗದಿ ನಗರದ ವಿಕೆ ಪಡಿ ಎಂಬಲ್ಲಿ ನಡೆದಿದೆ.

    ಸಾವಿರಾರು ಪಕ್ಷಿಗಳ ಮಾರಣಹೋಮವಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪಕ್ಷಿಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮರ ಉರುಳಿಸಿದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೇ ಮರವನ್ನು ಉರುಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

    ರಾಷ್ಟ್ರೀಯ ಹೆದ್ದಾರಿ 66 ಅನ್ನು ವಿಸ್ತರಣೆ ಮಾಡುವ ಸಲುವಾಗಿ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿತ್ತು. ಅಂತೆಯೇ ಗುರುವಾರ ಭಾರೀ ಗಾತ್ರದ ಮರವನ್ನು ನೆಲಕ್ಕುರುಳಿಸಿದರಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

    ಮರ ಕಡಿಯುವುದಕ್ಕೂ ಮುನ್ನ ಅವುಗಳಿಗೆ ಹಾರಲು ಅವಕಾಶ ನೀಡಬೇಕಿತ್ತು. ಇಲ್ಲವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಇದ್ಯಾವುದೂ ಮಾಡದೇ ಏಕಾಏಕಿ ಮರವನ್ನು ಉರುಳಿಸಿರುವ ಪರಿಣಾಮ ಗೂಡು ಸಮೇತ ಹಕ್ಕಿಗಳು ಮರದ ಕೊಂಬೆಗಳಿಗೆ ಸಿಲುಕಿ ಮೃತ ಪಟ್ಟಿವೆ. ಇನ್ನೂ ಕೆಲವು ಮರ ಬಿದ್ದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿ ಸಾವನ್ನಪ್ಪಿವೆ.

    ಹುಣಸೆ ಮರದಲ್ಲಿ ಶಿಳ್ಳೆ ಹೊಡೆಯುವ ಬಾತುಕೋಳಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಗೂಡುಕಟ್ಟಿಕೊಂಡು ಬದುಕು ನಡೆಸುತ್ತಿದ್ದವು. ಈ ಬಡ ಜೀವಿಗಳ ಜೀವನದ ಬಗ್ಗೆ ಹೆಚ್ಚು ಗಮನ ಹರಿಸದ ಜನರ ಮೇಲೆ ಇದೀಗ ನೆಟ್ಟಿಗರು ಗರಂ ಆಗಿದ್ದಾರೆ. ಈ ಪಕ್ಷಿಗಳನ್ನು ಉಳಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳದೆ ಮರವನ್ನು ಉರುಳಿಸಲು ನಿರ್ಧರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿಗಳ ಕಲರವ – ಪ್ರವಾಸಿಗರಿಗೆ ರಸದೌತಣ

    ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿಗಳ ಕಲರವ – ಪ್ರವಾಸಿಗರಿಗೆ ರಸದೌತಣ

    ಮಂಡ್ಯ: ಬೇಸಿಗೆ ಬಂತು ಅಂದ್ರೆ ಸಾಕು ಜನರು ಬೀಚ್‍ಗಳ ಕಡೆ ಮುಖ ಮಾಡ್ತಾರೆ. ಆದ್ರೆ ರಂಗನತಿಟ್ಟು ಪಕ್ಷಿಧಾಮ ಬೇಸಿಗೆಯಲ್ಲೂ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಸೆಳೆಯುತ್ತಿದೆ.

    ನೀರಿನ ಮಧ್ಯೆ ಬಣ್ಣ-ಬಣ್ಣದ ಪಕ್ಷಿಗಳ ಕಲರವ, ಗೂಡು ನಿರ್ಮಾಣಕ್ಕೆ ಕಡ್ಡಿಗಳನ್ನು ತರುತ್ತಿರುವ ಕೆಲ ಪಕ್ಷಿಗಳು, ತನ್ನ ಮರಿಗಳನ್ನು ಸಂರಕ್ಷಣೆ ಮಾಡುತ್ತಿರುವ ತಾಯಿ, ಸಂತಾನೋತ್ಪತ್ತಿ ಮಾಡುತ್ತಿರುವ ಜೋಡಿ ಹಕ್ಕಿಗಳು, ಮೀನಿನ ಭೇಟೆಗಾಗಿ ಹೊಂಚು ಹಾಕುತ್ತಿರುವ ಮತ್ತಷ್ಟು ಪಕ್ಷಿಗಳು, ಈ ಮಧ್ಯ ಭಯ ಹುಟ್ಟಿಸುವ ಹಾಗೆ ಮಲಗಿರುವ ಮೊಸಳೆಗಳು, ನೀರಿನಲ್ಲಿ ಮುಳುಗೇಳುತ್ತಿರುವ ನೀರು ನಾಯಿ. ಈ ದೃಶ್ಯ ಕಾಣಲು ಸಿಗುವುದು ರಂಗನತಿಟ್ಟು ಪಕ್ಷಿಧಾಮದಲ್ಲಿ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಬೇಸಿಗೆಗಾಲದಲ್ಲೂ ಪಕ್ಷಿಗಳ ಕಲರವ ಹಾಗೂ ಕಾವೇರಿ ತಾಯಿಯಿಂದ ಕಂಗೊಳಿಸುತ್ತಿದೆ. ಇದನ್ನೂ ಓದಿ: ತುಂಬು ಗರ್ಭಿಣಿ ಪತ್ನಿಯನ್ನು ಬಿಟ್ಟು ಉಕ್ರೇನ್ ಹೇಗೆ ತೊರೆಯಲಿ..?- ಭಾರತೀಯನ ಅಳಲು

    ಸದ್ಯ ರಂಗನತಿಟ್ಟು ಪಕ್ಷಿಧಾಮಕ್ಕೆ ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶ-ವಿದೇಶದಿಂದ ಆಹಾರಕ್ಕಾಗಿ ಹಾಗೂ ಸಂತಾನೋತ್ಪತ್ತಿಗಾಗಿ ಬರುತ್ತವೆ. ಹೀಗಾಗಿ ಈ ಆರು ತಿಂಗಳ ಕಾಲ ರಂಗನತಿಟ್ಟು ಪಕ್ಷಿಧಾಮದಕ್ಕೆ ಪ್ರಕೃತಿ ದೇವತೆಯೇ ಧರಗೆ ಇಳಿದು ಬಂದ ಹಾಗೆ ಭಾವಿಸುತ್ತದೆ. ಈಗ ಪೆಲಿಕಾನ್, ಓಪನ್ ಬಿಲ್ ಸ್ಟಾರ್ಕ್, ಸ್ಫೂನ್ ಬಿಲ್, ಕಾರ್ಮಾರೆಂಟ್, ಐಬಿಸ್, ಇಗ್‍ರೀಟ್, ಕಿಂಗ್ ಫಿಶರ್, ಪೆಂಟೆಂಡ್ ಸ್ಟಾಕ್ ಸೇರಿದಂತೆ 170 ಬಗೆಯ ಲಕ್ಷಾಂತರ ಪಕ್ಷಿಗಳು ರಂಗತಿಟ್ಟಿನ 25 ನಡುಗಡ್ಡೆಗಳಲ್ಲಿ ವಾಸ ಮಾಡುತ್ತಿವೆ. ಇದಲ್ಲದೇ ರಂಗನತಿಟ್ಟಿನಲ್ಲಿ 100ಕ್ಕೂ ಹೆಚ್ಚು ಮೊಸಳೆಗಳು ಸಹ ವಾಸವಾಗಿದ್ದು, ಅಲ್ಲಲ್ಲಿ ಕಾಡು ನಾಯಿಗಳು ನೀರಿನಲ್ಲಿ ಮುಳುಗೇಳುವ ದೃಶ್ಯಗಳು ಸಹ ಗೋಚರಿಸುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಹರಿದು ಬರುತ್ತಿದ್ದಾರೆ.

    ಇಷ್ಟು ದಿನ ಕೊರೊನಾ ಸಂಖ್ಯೆ ಹೆಚ್ಚಿದ್ದ ಕಾರಣ ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಇದೀಗ ಕೊರೊನಾ ಸಂಖ್ಯೆ ಕಡಿಮೆಯಾಗಿರುವುದು ಮತ್ತು ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾಲ ಇದಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬೋಟಿಂಗ್ ಮೂಲಕ ಪಕ್ಷಿ ಸೌಂದರ್ಯದ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ರಂಗನತಿಟ್ಟಿನಲ್ಲಿ ಇಷ್ಟಲ್ಲದೇ ಉದ್ಯಾನವನ, ಮಕ್ಕಳು ಆಡವಾಡುವ ಉಪಕರಣಗಳು ಸಹ ಇದೆ. ಒಮ್ಮೆ ರಂಗನತಿಟ್ಟು ಪಕ್ಷಿಧಾಮ ಪ್ರವೇಶ ಮಾಡಿದ್ರೆ ಸುಮಾರು ನಾಲ್ಕು ಗಂಟೆಳಾದ್ರು ಸಹ ಪಕ್ಷಿಧಾಮವನ್ನು ಸುತ್ತಲೂ ಬೇಕಾಗಿಬರುತ್ತದೆ. ಇಲ್ಲಿಗೆ ಬಂದಂತಹ ಪ್ರವಾಸಿಗರಂತು ಫುಲ್ ಎಂಜಾಯ್ ಮಾಡ್ತಾ ಇದ್ದಾರೆ. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್

    ಒಟ್ಟಾರೆ ಒಂದು ಕಡೆ ರಂಗನತಿಟ್ಟಿನಲ್ಲಿ ಪಕ್ಷಿಗಳ ಕಲರವ ನೋಡುಗರಿಗೆ ಮುದ ನೀಡುತ್ತಿದ್ದು, ಇನ್ನೊಂದು ಕಡೆ ಕೊರೊನಾ ಕಡಿಮೆಯಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮದ ಕಡೆ ಮುಖ ಮಾಡುತ್ತಿದ್ದಾರೆ.

  • ಹವಾಮಾನ ಬದಲಾವಣೆಯಿಂದ ಪಕ್ಷಿಗಳಲ್ಲೂ ಡೈವೋರ್ಸ್!

    ಹವಾಮಾನ ಬದಲಾವಣೆಯಿಂದ ಪಕ್ಷಿಗಳಲ್ಲೂ ಡೈವೋರ್ಸ್!

    ಲಂಡನ್: ಹವಾಮಾನ ವೈಪರೀತ್ಯವು ಪಕ್ಷಿಗಳ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತಿದ್ದು ಅವುಗಳ ನಡುವೆ ವಿಚ್ಛೇದನಕ್ಕೆ ಕಾರಣವಾಗುತ್ತಿದೆ ಎಂಬ ಆಘಾತಕಾರಿ ವಿಷಯೊವಂದನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ.

    ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿ ಪ್ರಕಟಿಸಿದ ಅಧ್ಯಯನದ ಪ್ರಕಾರ ಹವಾಮಾನದ ಬದಲಾವಣೆಯು ದಕ್ಷಿಣ ಅಂಟ್ಲಾಟಿಕ್ ಫಾಕ್ ಲ್ಯಾಂಡ್ ದ್ವೀಪದ ಕಪ್ಪು-ಕಂದು ಕಡಲು ಕೋಳಿಗಳ ಸಂತಾನೋತ್ಪತ್ತಿಯಲ್ಲಿ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ

    ಸಾಮಾನ್ಯವಾಗಿ ದೀರ್ಘಕಾಲ ಏಕ ಸಂಗಾತಿ ಸಂಬಂಧ ಹೊಂದುವ ಕಡಲು ಕೋಳಿಗಳು( Albatrosses) ಸಂತಾನೋತ್ಪತ್ತಿಯಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಯಶಸ್ಸು ಪಡೆಯಲು ಹೊಸ ಸಂಗಾತಿಯನ್ನು ಹುಡುಕುತ್ತಿವೆ. ಇದು ಪಕ್ಷಿ ಜೋಡಿಗಳ ನಡುವೆ ವಿಚ್ಛೇದನಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ಅಧ್ಯಯನದಲ್ಲಿ 2003ರಿಂದ ಫಾಕ್‍ಲ್ಯಾಂಡ್ ದ್ವೀಪದಲ್ಲಿ ವಾಸವಾಗಿರುವ ಸುಮಾರು 15,500 ಜೋಡಿ ಕಡಲುಕೋಳಿಗಳ ಸಂತಾನೋತ್ಪತ್ತಿ ನಡುವಳಿಕೆಯನ್ನು ಸಂಗ್ರಹಿಸಲಾಗಿದೆ. ಇದನ್ನೂ ಓದಿ:  ಮೃತ ವೃದ್ಧೆಯ ಹೆಬ್ಬೆಟ್ಟನ್ನು ಪೇಪರ್‌ಗೆ ಒತ್ತಿಸಿಕೊಂಡ ಪ್ರಕರಣ – ಎಫ್‍ಐಆರ್ ದಾಖಲು

  • ಜಲಮಾಲಿನ್ಯದಿಂದ ವಿನಾಶದ ಅಂಚಿಗೆ ತಲುಪಿದ ಪಕ್ಷಿಧಾಮ – ವಿದೇಶಿ ಹಕ್ಕಿಗಳ ಕಲರವ ಮರೀಚಿಕೆ

    ಜಲಮಾಲಿನ್ಯದಿಂದ ವಿನಾಶದ ಅಂಚಿಗೆ ತಲುಪಿದ ಪಕ್ಷಿಧಾಮ – ವಿದೇಶಿ ಹಕ್ಕಿಗಳ ಕಲರವ ಮರೀಚಿಕೆ

    ಚಿತ್ರದುರ್ಗ: ಅದೊಂದು ಬರದನಾಡಿನ ಪಕ್ಷಿಧಾಮ. ಅಲ್ಲಿಗೆ ಪ್ರತಿವರ್ಷ ವಿದೇಶಿ ಹಕ್ಕಿಗಳು ವಲಸೆ ಬರುತ್ತವೆಂಬ ಹೆಗ್ಗಳಿಕೆ ಗಳಿಸಿದ್ದ ಚಿತ್ರದುರ್ಗ ತಾಲೂಕಿನ ಮಲ್ಲಾಪುರದ ಕೆರೆಯಂಗಳದ ಪಕ್ಷಿಧಾಮ ಈ ಬಾರಿ ಖಾಲಿಖಾಲಿಯಾಗಿದೆ.

    ಬೆಳ್ಳಂಬೆಳಗ್ಗೆ ಚಿಲಿಪಿಲಿ ಎನ್ನುತ್ತಿದ್ದ ವಿದೇಶಿ ಹಕ್ಕಿಗಳ ಕಲರವ ನಾಪತ್ತೆಯಾಗಿದೆ. ಈ ಕೆರೆಗೆ ಚಿತ್ರದುರ್ಗ ನಗರದ ಯೂಜಿಡಿನೀರು ಹರಿದು ಬರುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಕೆರೆಯಲ್ಲಿ ಭರ್ತಿಯಾಗಿದೆ. ಹೀಗಾಗಿ ದುರ್ನಾಥ ಬೀರುತ್ತಿರುವ ಕೆರೆ ಸಂಪೂರ್ಣ ಮಲೀನವಾಗಿ ನೀರು ಹಚ್ಚ ಹಸುರಾಗಿದೆ. ಇದರಿಂದಾಗಿ ಈ ವರ್ಷ ಪಕ್ಷಿಗಳ ಸದ್ದಿಲ್ಲದೇ ಆಕರ್ಷಕ ಪಕ್ಷಿಧಾಮ ಬಿಕೋ ಎನ್ನುತ್ತಿದೆ.

    ಪ್ರತಿವರ್ಷ ವಿವಿಧೆಡೆಯಿಂದ ವಿದೇಶಿ ಹಕ್ಕಿಗಳು ವಲಸೆ ಬರುತ್ತಿದ್ದವು. ಇಲ್ಲಿನ ನೈಸರ್ಗಿಕ ಸೊಬಗನ್ನು ಹೆಚ್ಚಿಸುತಿದ್ದವು. ಹೀಗಾಗಿ ಈ ದೃಶ್ಯವನ್ನು ಸವಿಯಲು ಪ್ರವಾಸಿಗರು ಧಾವಿಸುತ್ತಿದ್ದರು. ಅಲ್ಲದೆ ಇಲ್ಲಿನ ನಾಗರೀಕರು ಸಹ ವಾಯುವಿಹಾರಕ್ಕೆ ಬರುತ್ತಿದ್ದರು. ಆದರೆ ಈ ಬಾರಿ ಒಂದು ಪಕ್ಷಿಯ ಸಹ ಕೆರೆಯತ್ತ ಸುಳಿದಿಲ್ಲ ಅಂತ ಪಕ್ಷಿ ಪ್ರಿಯರಾದ ಬಸವರಾಜ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ

    ಈ ಕೆರೆ ತುಂಬಿದಾಗ ಜಮೀನುಗಳಿಗೆ ನುಗ್ಗುವ ನೀರಿನಿಂದಾಗಿ ಬರದನಾಡಿನ ರೈತರ ಬೆಳೆಗಳು ಸಹ ನಾಶವಾಗ್ತಿವೆ. ಹೀಗಾಗಿ ಯೂಜಿಡಿ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಅಂತ ಇಲ್ಲಿನ ರೈತ ಹೊರಕೇರಪ್ಪ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಕರ್ಷಕ ನೈಸರ್ಗಿಕ ಪಕ್ಷಿಧಾಮ ಉಳಿಸಬೇಕು. ಮುಂದಿನ ಪೀಳಿಗೆಗೆ ಈ ಸೊಬಗನ್ನು ವೀಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆದರೆ ಬರದನಾಡಲ್ಲಿ ಸ್ವಯಂ ನಿರ್ಮಾಣವಾದ ನೈಸರ್ಗಿಕ ಪಕ್ಷಿಧಾಮ ವಿನಾಶದ ಅಂಚಿಗೆ ತಲುಪಿರೋದು ಬೇಸರಮೂಡಿಸಿದೆ ಎಂದು ಅಸಮಧಾನ ಹೊರಹಾಕಿದ್ದಾರೆ.

  • ಮೃಗಾಲಯದ ಪ್ರಾಣಿ ಪಕ್ಷಿಗಳಿಗೂ ತಟ್ಟಿದ ಕೊರೊನಾ ಲಾಕ್‍ಡೌನ್ ಬಿಸಿ

    ಮೃಗಾಲಯದ ಪ್ರಾಣಿ ಪಕ್ಷಿಗಳಿಗೂ ತಟ್ಟಿದ ಕೊರೊನಾ ಲಾಕ್‍ಡೌನ್ ಬಿಸಿ

    ಗದಗ: ಮಹಾಮಾರಿ ಕೊರೊನಾ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಕೊರೊನಾ ಬಿಸಿ ಈಗ ಉತ್ತರ ಕರ್ನಾಟಕದ ಏಕೈಕ ಮೃಗಾಲಯ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ.

    ಆದಾಯವಿಲ್ಲದೇ ಪ್ರಾಣಿಗಳನ್ನು ಹೇಗೆ ಸಾಕುವುದು ಎಂಬ ಪರಿಸ್ಥಿತಿಯಲ್ಲಿ ಝೂ ಇದೆ. ಮಹಾಮಾರಿ ಕೊರೊನಾದಿಂದ ಮುದ್ರಣಾ ಕಾಶಿಯ ಮಕ್ಕಳ ಉದ್ಯಾನವನ ಹಾಗೂ ಮೃಗಾಲಯ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಕೊರೊನಾದ ಆರ್ಥಿಕ ಕರಿ ಛಾಯೆಯಿಂದ ಹೊರಬರಲು ಝೂ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಲಾಗುತ್ತಿದೆ.

    ಉತ್ತರ ಕರ್ನಾಟಕದ ಏಕೈಕ ಮೃಗಾಲಯವೆಂದೇ ಹೆಸರಾಗಿರುವ ಗದಗದ ಬಿಂಕದಕಟ್ಟಿ ಝೂ ಸಾಕಷ್ಟು ಆಕರ್ಷಣಿಯವಾಗಿದ್ದು, ಲಾಕ್‍ಡೌನ್ ಮೊದಲು ಈ ಮೃಗಾಲಯಕ್ಕೆ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿ, ಪಕ್ಷಿ ಪ್ರಿಯರು, ಪ್ರವಾಸಿಗರು ಬರುತ್ತಿದ್ದರು. ಆದರೆ, ಈ ಕಿಲ್ಲರ್ ಕೊರೊನಾ ಅಟ್ಟಹಾಸದಿಂದ ಮೃಗಾಲಯಕ್ಕೆ ಬೀಗ ಬಿದ್ದಿದೆ. ಹೀಗಾಗಿ ಬಿಂಕದಕಟ್ಟಿ ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇಲ್ಲಿನ ಪ್ರಾಣಿಗಳನ್ನು ಸಾಕುವುದು ಅರಣ್ಯ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ಇತ್ತೀಚೆಗೆ ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಝೂ ಗಳಲ್ಲಿನ ಪ್ರಾಣಿಗಳನ್ನ ದತ್ತು ಪಡೆಯುವುದಕ್ಕೆ ಕರೆ ನೀಡಿದ್ದರು. ಇದರಿಂದ ಅಭಿಮಾನಿಗಳು ಮುಂದೆ ಬಂದು ಅನೇಕ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ನಟ ದರ್ಶನ್ ಕರೆಯಿಂದ ನಮ್ಮ ಬಿಂಕದಕಟ್ಟಿ ಮೃಗಾಲಯಕ್ಕೆ 4 ಲಕ್ಷಕ್ಕೂ ಅಧಿಕ ಹಣ ಹರಿದು ಬರುತ್ತಿದೆ. ಇನ್ನು ಅಭಿಮಾನಿಗಳು ಮುಂದೆ ಬಂದು ದತ್ತು ಪಡೆಯಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಈ ಮೃಗಾಲಯದಲ್ಲಿ 37 ಜಾತಿಯ 396 ಪ್ರಾಣಿ ಪಕ್ಷಿಗಳಿವೆ. ಗಿಳಿ, ಹದ್ದು, ಕಾಡು ಕೋಳಿ, ಎಮ್ಮೊ ಕೋಳಿ, ಕೋಗಿಲೆ, ನವಿಲು ನಂತಹ ಅನೇಕ ಜಾತಿಯ ಪಕ್ಷಿಗಳಿವೆ. ನರಿ, ಕರಡಿ, ಹುಲಿ, ಚಿರತೆ, ಸಿಂಹಗಳಂತಹ ಕ್ರೂರ ಪ್ರಾಣಿಗಳು ಈ ಮೃಗಾಲಯದಲ್ಲಿ ಕಾಣಬಹುದು. ಇದರ ನಿರ್ವಹಣೆಗೆ ವಾರ್ಷಿಕ 1 ಕೋಟಿ 90 ಲಕ್ಷ ರೂಪಾಯಿ ವ್ಯವವಾಗುತ್ತದೆ. ಡೋನೇಷನ್ ರೂಪದಲ್ಲಿ 45 ಸಾವಿರ ರೂಪಾಯಿ ಬಂದಿದೆ. ಲಾಕ್‍ಡೌನ್‍ಗೂ ಮುನ್ನ ಪ್ರವೇಶ ಫೀಜ್ ನಿಂದಾಗಿ 2 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಉಳಿದ ಸುಮಾರು 1 ಕೋಟಿ 80 ಲಕ್ಷ ರೂಪಾಯಿಯಷ್ಟು ಸರ್ಕಾರಕ್ಕೆ ಹೊರೆಯಾಗುತ್ತದೆ. ಹೀಗಾಗಿ ಝೂಗಳಲ್ಲಿ ಪ್ರಾಣಿ ಪಕ್ಷಿಗಳ ದತ್ತು ಪಡೆಯಲು ಅವಕಾಶ ಮಾಡಲಾಗಿದೆ. ವಾರ್ಷಿಕ 1 ಸಾವಿರ ರೂಪಾಯಿಯಿಂದ 1 ಲಕ್ಷದ ವರೆಗೆ ಹಣ ಪಾವತಿಸಿ ವಿವಿಧ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಈ ವರ್ಷ ವಿವಿಧ ದಾನಿಗಳಿಂದ ಕೇವಲ 4 ಲಕ್ಷ ಮಾತ್ರ ಸಂಗ್ರಹವಾಗಿತ್ತು. ನಟ ದರ್ಶನ್ ಕರೆ ನೀಡಿದ ನಂತರ ಅವರ ಅಭಿಮಾನಿಗಳು ಮತ್ತೆ 4 ಲಕ್ಷ ರೂಪಾಯಿ ಮೊತ್ತ ನೀಡಿ ಜನರು ಪ್ರಾಣಿಗಳ ದತ್ತು ಪಡೆದಿದ್ದಾರೆ. ಜನ ಮುಂದೆ ಬಂದು ಮೂಕ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ನಾನು ದರ್ಶನ್ ಎನ್ನುವ ಮೂಲಕ ನೀವು ಬನ್ನಿ ಪ್ರಾಣಿ ಪಕ್ಷಿ ರಕ್ಷಿಸಿ ಎಂದು ಪ್ರಾಣಿ ಪ್ರಿಯರು ಹೇಳುತ್ತಿದ್ದಾರೆ.

    ಮಾತನಾಡುವ ಮನುಜನನ್ನು ದತ್ತು ತೆಗೆದುಕೊಂಡು ಮಾನವೀಯತೆ ಮೆರೆಯುವುದನ್ನು ನೋಡಿದ್ದೇವೆ. ಆದರೆ ಮಾತು ಬಾರದ ಈ ಮೂಕ ಪ್ರಾಣಿಗಳಿಗೆ ಮನ ಮಿಡಿಯುವ ಹೃದಯವಂತರು ಬೇಕಾಗಿದೆ. ಪ್ರಮುಖವಾಗಿ ಮಾಂಸಾಹಾರಿ ಪ್ರಾಣಿಗಳನ್ನು ದಾನಿಗಳು ದತ್ತು ಪಡೆಯುವಂತೆ ಮೃಗಾಲಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸರ್ಕಾರ ಕೂಡಾ ಇಂಥಹ ಕಾರ್ಯಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಅನುದಾನ ಬಿಡುಗಡೆ ಮಾಡಬೇಕಾಗಿದೆ. ಇದನ್ನೂ ಓದಿ: ಉತ್ತರ ಕನ್ನಡದ ಜೋಯಿಡಾದಲ್ಲಿ ಭೂಕುಸಿತ- ಹೆದ್ದಾರಿ ಬಂದ್

  • ಒಂದು ಗಿಡ ಬಿಟ್ಟು ಇಡೀ ಬಾಳೆ ತೋಟ ನಾಶಗೊಳಿಸಿದ ಆನೆಗಳು

    ಒಂದು ಗಿಡ ಬಿಟ್ಟು ಇಡೀ ಬಾಳೆ ತೋಟ ನಾಶಗೊಳಿಸಿದ ಆನೆಗಳು

    – ಅಚ್ಚರಿಯ ವೀಡಿಯೋ ವೈರಲ್

    ಚೆನ್ನೈ: ಸಾಮಾನ್ಯವಾಗಿ ಆನೆಗಳನ್ನು ದೈತ್ಯ ಜೀವಿಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ಮರಗಳನ್ನು ಉರುಳಿಸಬಹುದು ಮತ್ತು ಒಂದೇ ಬಾರಿಗೆ ಎಲ್ಲವನ್ನು ವಿನಾಶ ಮಾಡುತ್ತದೆ. ಇತರ ಪ್ರಾಣಿಗಳಿಗೆ ಹೋಲಿಸಿದರೆ ಆನೆಗಳಿಗೆ ಹೆಚ್ಚು ಬುದ್ಧಿ, ಸಮಯಪ್ರಜ್ಞೆ, ಹೃದಯವಂತಿಕೆ ಹೊಂದಿದೆ ಎಂದೇ ಹೇಳಬಹುದು.

    ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ತಮಿಳುನಾಡಿನ ಹಳ್ಳಿಯೊಂದರಲ್ಲಿ ಕಾಡು ಆನೆಗಳ ಗುಂಪು ಬಾಳೆ ತೋಟದ ಮೇಲೆ ದಾಳಿ ನಡೆಸಿ 300ಕ್ಕೂ ಅಧಿಕ ಬಾಳೆ ಗಿಡಗಳನ್ನು ನೆಲಕ್ಕುರುಳಿಸಿವೆ. ಇಡೀ ತೋಟವನ್ನು ಸಂಪೂರ್ಣ ನಾಶ ಪಡಿಸಿದ ಆನೆಗಳು ಅಲ್ಲಿಯೇ ಇದ್ದ ಪುಟ್ಟ ಪುಟ್ಟ ಪಕ್ಷಿಗಳ ಗೂಡಿನ ಮರವನ್ನು ಮಾತ್ರ ಹಾಗೆಯೇ ಬಿಟ್ಟು ಹೋಗಿದೆ. ಇದನ್ನು ನೋಡಿ ಗ್ರಾಮಸ್ಥರು ಬೆರಗಾಗಿದ್ದಾರೆ.

    ಈ ವೀಡಿಯೋವನ್ನು ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಸಂತಾ ನಂದಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಕಾಡು ಆನೆಗಳು ಬಾಳೆ ತೋಟವನ್ನು ನಾಶಪಡಿಸಿದ್ದು, ಪುಟ್ಟ ಪುಟ್ಟ ಪಕ್ಷಿಗಳ ಮರಿಗಳಿದ್ದ, ಹಕ್ಕಿಯ ಗೂಡಿಗೆ ಮಾತ್ರ ಯಾವುದೇ ಹಾನಿಗೊಳಿಸದಿರುವುದನ್ನು ಕಾಣಬಹುದಾಗಿದೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕ ಮಂದಿ ವೀಕ್ಷಿಸಿದ್ದು, ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿ ಮಳೆಯೇ ಹರಿದುಬರುತ್ತಿದೆ.

  • ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ವಿದೇಶಿ ಹಕ್ಕಿಗಳ ಕಲರವ- ವಿಶೇಷ ಅತಿಥಿಗಳ ನೋಡಲು ಪ್ರವಾಸಿಗರ ದಂಡು

    ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ವಿದೇಶಿ ಹಕ್ಕಿಗಳ ಕಲರವ- ವಿಶೇಷ ಅತಿಥಿಗಳ ನೋಡಲು ಪ್ರವಾಸಿಗರ ದಂಡು

    ಹಾಸನ: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ವಿದೇಶ ಹಕ್ಕಿಗಳ ಕಲರವ ಜೋರಾಗಿದ್ದು, ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ.

    ಜಿಲ್ಲೆಯ ಆಲೂರು ತಾಲೂಕಿನ ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನ ಸಮೀಪ ಹರಡಿಕೊಂಡಿರುವ ಭರತವಳ್ಳಿ, ನಾಗವಾರ, ಶೆಟ್ಟಿಹಳ್ಳಿ ಭಾಗದಲ್ಲಿ ದೂರದ ಮಂಗೋಲಿಯಾ ಟಿಬೆಟ್, ಚೀನಾ ಭಾಗದಿಂದ ವಿಶೇಷ ಬಾತುಕೋಳಿಗಳು ವಲಸೆ ಬಂದಿವೆ. ಸಾವಿರಾರು ಕಿಲೋಮೀಟರ್ ದೂರದಿಂದ ಪರ್ವತ ದಾಟಿ ಆಗಮಿಸಿರೋ ಈ ಬಾತುಗಳನ್ನು ಪಟ್ಟೆ ತಲೆ ಬಾತು ಎಂದು ಕರೆಯಲಾಗುತ್ತೆ. ಇಂಗ್ಲೀಷ್ ನಲ್ಲಿ ಇವುಗಳನ್ನು ಬಾರ್ ಹೆಡೆಡ್ ಗೂಸ್ ಎಂದು ಕರೆಯಲಾಗುತ್ತೆ.

    ಹೇಮಾವತಿ ಹಿನ್ನೀರು ಇಳಿದಾಗ ಅಲ್ಲಿ ಬೆಳೆಯುವ ಹುಲ್ಲು ಮತ್ತು ಅದರ ಬೀಜ ಈ ವಿಶೇಷ ಪಕ್ಷಿಗಳಿಗೆ ಪ್ರಿಯವಾದ ಆಹಾರ. ಮನುಷ್ಯರು ಹತ್ತಿರ ಹೋದರೆ ಹೆದರುವ ಈ ಪಕ್ಷಿಗಳನ್ನ ಸುಮಾರು 500 ಮೀಟರ್ ದೂರದಲ್ಲಿ ನಿಂತು ನೋಡಿದರೆ ಮಾತ್ರ ಕಾಣಸಿಗುತ್ತವೆ. ಸಾವಿರಾರು ಕಿಲೋ ಮೀಟರ್ ದೂರದಿಂದ ಬರುವ ಈ ಪಕ್ಷಿಗಳು ಮಂಗೋಲಿಯಾ, ಟಿಬೆಟ್, ಚೀನಾದಲ್ಲಿ ಅತಿ ಹೆಚ್ಚು ಚಳಿಯ ಕಾರಣ ಉತ್ತಮ ಹವಾಗುಣ ಹುಡುಕಿಕೊಂಡು ಇಲ್ಲಿಗೆ ಬರುತ್ತವೆ.

    ಈ ಪಟ್ಟೆತಲೆ ಬಾತುಕೋಳಿ ನೋಡಲು ಬಹಳ ಆಕರ್ಷಕವಾಗಿದ್ದು, ನುರಾರು ಸಂಖ್ಯೆಯಲ್ಲಿ ಹೇಮಾವತಿ ಹಿನ್ನೀರಿನ ಭಾಗಕ್ಕೆ ಬಂದಿವೆ. ಆದರೆ ಈ ಸುಂದರ ಪಕ್ಷಿಗಳನ್ನ ಇಲ್ಲಿ ಮಾಂಸಕ್ಕಾಗಿ ಬೇಟೆಯಾಡುತ್ತಾರೆಂಬ ಬಗ್ಗೆಯೂ ಆರೋಪವಿದೆ. ಹಾಸನ ಅರಣ್ಯ ಇಲಾಖೆ ಈ ಬಗ್ಗೆ ಜಾಗ್ರತೆ ಮೂಡಿಸಬೇಕಾಗಿದೆ. ಕಪ್ಪು, ಬಿಳಿ, ಕೊಂಚ ಕೇಸರಿ. ತಲೆಯ ಮೇಲೆ ಕಪ್ಪು ಪಟ್ಟಿ ಈ ಬಾತುಗಳ ವಿಶೇಷ. ಹವ್ಯಾಸಿ ಫೋಟೋಗ್ರಾಫರ್‍ಗಳು ಇಲ್ಲಿಗೆ ಬಂದು ವಿಶೇಷ ಪಕ್ಷಿಗಳ ಫೋಟೋ ಕ್ಲಿಕ್ಕಿಸಿ ಸಂತಸ ಪಡುತ್ತಾರೆ. ಅದೇ ರೀತಿ ಪ್ರವಾಸಿಗರು ಕೂಡ ಈ ವಿಶೇಷ ಹಕ್ಕಿಗಳನ್ನು ನೋಡಿ ಸಂಭ್ರಮಿಸುತ್ತಾರೆ.