Tag: Bike Ride

  • ಗೆಳೆಯರ ಜೊತೆ ‘ರಾಬರ್ಟ್’ ಬೈಕ್ ರೈಡ್ – 3 ದಿನ ಮಡಿಕೇರಿಯಲ್ಲಿ ಸಾರಥಿ

    ಗೆಳೆಯರ ಜೊತೆ ‘ರಾಬರ್ಟ್’ ಬೈಕ್ ರೈಡ್ – 3 ದಿನ ಮಡಿಕೇರಿಯಲ್ಲಿ ಸಾರಥಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಚಿತ್ರರಂಗದ ಗೆಳೆಯರು ಮತ್ತು ಕೆಲ ಬಾಲ್ಯದ ಸ್ನೇಹಿತರ ಜೊತೆಗೆ ಜಾಲಿಯಾಗಿ ಬೈಕ್ ರೈಡ್ ಹೋಗಿದ್ದಾರೆ.

    ದರ್ಶನ್ ಅವರು ಆಗಾಗ ಟ್ರಿಪ್ ಹೋಗುತ್ತಿರುತ್ತಾರೆ. ಅದರಲ್ಲೂ ಕಾರು, ಬೈಕಿನ ಮೇಲೆ ಹೆಚ್ಚಿನ ಕ್ರೇಜ್ ಹೊಂದಿರುವ ಡಿಬಾಸ್, ಗೆಳೆಯರ ಜೊತೆ ವರ್ಷಕ್ಕೆ ಒಂದು ಬಾರಿ ಟ್ರಿಪ್ ಹೋಗುತ್ತಾರೆ. ಅಂತಯೇ ಈ ಬಾರಿ ಕೂಡ ತಮ್ಮ 15ಕ್ಕೂ ಹೆಚ್ಚು ಮಂದಿ ಗೆಳೆಯರೊಂದಿಗೆ ಮಡಿಕೇರಿಗೆ ಮೂರು ದಿನದ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.

    ಇಂದು ಆರ್.ಆರ್ ನಗರದ ನಿವಾಸದಿಂದ ಸಾರಥಿಯ ನೇತೃತ್ವದಲ್ಲೇ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್ ಮತ್ತು ಚಿಂಗಾರಿಯ ಬಾಲ್ಯದ ಗೆಳೆಯರು ಮಡಿಕೇರಿ ಕಡೆ ಹೋಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಡಿಬಾಸ್ ಮತ್ತವರ ಸ್ನೇಹಿತರು ಅಲ್ಲೇ ತಂಗಲಿದ್ದಾರೆ. ದರ್ಶನ್ ಅವರು ಟ್ರಿಪ್ ಹೊರಟಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

    ದರ್ಶನ್ ಅವರ ನಿವಾಸದ ಮುಂದೆ ಸುಮಾರು 15ಕ್ಕೂ ಹೆಚ್ಚಿನ ಬೈಕ್‍ಗಳು ನಿಂತಿರುವ ಫೋಟೋಗಳು ಮತ್ತು ಅವರು ಮನೆಯಿಂದ ಸೂಪರ್ ಬೈಕಿನಲ್ಲಿ ಹೋಗುತ್ತಿರುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಡಿ ಬಾಸ್ ತಮ್ಮ ನೀಲಿ ಬಣ್ಣದ ಬೈಕಿನಲ್ಲಿ ಕಪ್ಪು ಜಾಕೆಟ್ ತೊಟ್ಟು ರೈಡ್‍ಗೆ ಹೋಗಿದ್ದಾರೆ. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅವರು ತಾವು ರೈಡಿಗೆ ಸಿದ್ಧವಾಗಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

  • ಇನ್‍ಸ್ಟಾ ಫೋಟೋ ನೋಡಿ ಯುವಕನ ಮೇಲೆ ಗ್ಯಾಂಗ್‍ರೇಪ್

    ಇನ್‍ಸ್ಟಾ ಫೋಟೋ ನೋಡಿ ಯುವಕನ ಮೇಲೆ ಗ್ಯಾಂಗ್‍ರೇಪ್

    – ಚಲಿಸುತ್ತಿದ್ದ ಕಾರಿನಲ್ಲಿ ಮೂರು ಗಂಟೆ ಅತ್ಯಾಚಾರ
    – ನಾಲ್ವರು ಕಾಮುಕರಲ್ಲಿ ಓರ್ವ ಅಪ್ರಾಪ್ತ

    ಮುಂಬೈ: ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ಆಧರಿಸಿ 22 ವರ್ಷದ ಯುವಕನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮುಂಬೈನ ವಿಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ವ್ಯಕ್ತಿಯ ಮೇಲೆ ಅತ್ಯಾಚಾರ ಎಸಗಲು ಸಹಾಯ ಮಾಡಿದೆ ಎಂಬುದು ಇನ್ನೂ ಅಚ್ಚರಿಯ ಸಂಗತಿಯಾಗಿದೆ. ಚಲಿಸುತ್ತಿದ್ದ ಕಾರಿನಲ್ಲಿ ಯುವಕನ ಮೇಲೆ ಅತ್ಯಾಚಾರ ಎಸಗಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣದ ಸಂಬಂಧ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಅಡಿ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಒಬ್ಬ ಅಪ್ರಾಪ್ತನಾಗಿದ್ದು, ಬಾಲಾಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗಿದೆ.

    ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿ, ಯುವಕ ಮುಂಬೈನಲ್ಲಿ ವಾಸವಿದ್ದು, ನಗರದ ಹೊರವಲಯದಲ್ಲಿರುವ ರೆಸ್ಟೋರೆಂಟಿಗೆ ಭೇಟಿ ನೀಡಿ ಅಲ್ಲಿ ಸೆಲ್ಫಿ ತೆಗೆದುಕೊಂಡಿದ್ದ ಚಿತ್ರಗಳನ್ನು ಇನ್‍ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದನ್ನು ಆಧರಿಸಿ ನಾಲ್ವರು ಆರೋಪಿಗಳು ಸಂತ್ರಸ್ತ ಯುವಕ ತಂಗಿರುವ ಜಾಗಕ್ಕೆ ತೆರಳಿದ್ದಾರೆ ಎಂದು ವಿವರಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿಗಳು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್‍ಸ್ಟಾಗ್ರಾಂ ನಲ್ಲಿ ಹಾಕಿದ ಫೋಟೊ ಆಧರಿಸಿ ವ್ಯಕ್ತಿ ಇರುವ ಲೊಕೇಶನ್ ಹುಡುಕಿದೆವು. ಆಗ ನಾಲ್ವರೂ ರೆಸ್ಟೊರೆಂಟಿಗೆ ತೆರಳಿದೆವು, ನಾವು ನಿಮ್ಮನ್ನು ಇನ್‍ಸ್ಟಾಗ್ರಾಂ ನಲ್ಲಿ ಫಾಲೋ ಮಾಡುತ್ತಿದ್ದೇವೆ. ನಿಮ್ಮ ಅಭಿಮಾನಿಗಳಾಗಿದ್ದೇವೆ ಎಂದು ಪರಿಚಯಿಸಿಕೊಂಡೆವು ಎಂದು ಹೇಳಿದ್ದಾರೆ.

    ನಂತರ ಬೈಕ್ ರೈಡಿಗೆ ಹೊರಟಿದ್ದೇವೆ ನಮ್ಮ ಜೊತೆ ಬಂದು ಕಂಪನಿ ಕೊಡಿ ಎಂದು ಆರೋಪಿಯನ್ನು ಮನವೊಲಿಸಿದೆವು. ಇದಕ್ಕೆ ಸಂತ್ರಸ್ತ ಒಪ್ಪಿದ, ಸುಮಾರು 20 ನಿಮಿಷಗಳ ಬೈಕ್ ರೈಡ್ ನಂತರ ಸಂತ್ರಸ್ತನನ್ನು ಮುಂಬೈ ವಿಮಾನ ನಿಲ್ದಾಣದ ಬಳಿಯ ಹೋಟೆಲಿಗೆ ಕರೆದೊಯ್ದೆವು. ನಂತರ ಕಾರಿನಲ್ಲಿ ಕರೆದೊಯ್ದು ಮೂರು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿ ಯುವಕನನ್ನು ರಸ್ತೆ ಬಳಿ ಬಿಟ್ಟು ಹೊರಟೆವು ಎಂದು ವಿವರಿಸಿದ್ದಾರೆ.

    ನಂತರ ಸಂತ್ರಸ್ತ ಪೋಷಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಪೊಲೀಸರಿಗೂ ಕರೆ ಮಾಡಿ ಘಟನೆ ಕುರಿತು ವಿವರಿಸಿ ದೂರು ದಾಖಲಿಸಿದ್ದಾರೆ. ಮರುದಿನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನಂತರ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇನ್ನೊಬ್ಬ ಅಪ್ರಾಪ್ತನಾಗಿದ್ದು ಬಾಲಾಪರಾಧಿಗಳ ಕಾರಾಗೃಹದಲ್ಲಿಡಲಾಗಿದೆ.

    ಘಟನೆ ಕುರಿತು ವಿ.ಬಿ.ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮಾಧುರಿ ಪೊಕ್ಲೆ ಮಾಹಿತಿ ನೀಡಿ, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಎಲ್ಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. ತನಿಖೆ ನಡೆಯುತ್ತಿದೆ, ಸಂತ್ರಸ್ತನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಕ್ಲೆ ತಿಳಿಸಿದ್ದಾರೆ.

  • ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ದರ್ಶನ್ ಪ್ರಚಾರ

    ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ದರ್ಶನ್ ಪ್ರಚಾರ

    ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕಿಳಿದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವತಃ ತಾವೇ ಬೈಕ್ ಓಡಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಇಂದು ಮಳವಳ್ಳಿ ತಾಲೂಕಿನಲ್ಲಿ ಡಿ ಬಾಸ್ ಸುಮಲತಾ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ರಾಮಂದೂರು ಗ್ರಾಮಕ್ಕೆ ತೆರಳಿದ್ದು, ಅವರ ಅಭಿಮಾನಿಗಳು ಪ್ರೀತಿಯಿಂದ ದರ್ಶನ್‍ರನ್ನು ಸ್ವಾಗತಿಸಿ ಬೈಕ್ ಓಡಿಸುವಂತೆ ಕೋರಿದ್ದಾರೆ. ಆದ್ದರಿಂದ ಫ್ಯಾನ್ಸ್ ಬಲವಂತಕ್ಕೆ ಮನಸೋತ ದಚ್ಚು ಸ್ವತಃ ತಾವೇ ಬೈಕ್ ಓಡಿಸಿ ಅವರನ್ನು ಖುಷಿಪಡಿಸಿದರು.

    ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್‍ನಲ್ಲಿ ಹಿಂದೆ ಒಬ್ಬ ಅಭಿಮಾನಿಯನ್ನು ಕೂರಿಸಿಕೊಂಡು, ದರ್ಶನ್ ಊರೊಳಗೆ ಒಂದು ರೌಂಡ್ ಹೋಗಿ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಕೂಡ ಡಿ ಬಾಸ್‍ಗೆ ಸಾಥ್ ನೀಡಿದ್ದು, ಅವರ ಬೈಕ್ ಹಿಂದೆಯೇ ತಾವು ಹೋಗಿ ಅಭಿಮಾನ ಮೆರೆದರು.

    ಗುರುವಾರದಂದು ಕೆಆರ್ ಪೇಟೆ ಸೋಮನಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ಡಿ ಬಾಸ್‍ ಆಗಮಿಸಿದ್ದರು. ಆಗ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದರು. ಈಗ ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ಮತ್ತೊಮ್ಮೆ ದಚ್ಚು ಎಲ್ಲರ ಗಮನ ಸೆಳೆದಿದ್ದಾರೆ.

  • ಬೈಕ್ ರೈಡ್ ಮಾಡ್ಕೊಂಡು ಜನರ ಸಮಸ್ಯೆ ಆಲಿಸಿದ ಕಾಂಗ್ರೆಸ್  ಶಾಸಕ- ವಿಡಿಯೋ ವೈರಲ್

    ಬೈಕ್ ರೈಡ್ ಮಾಡ್ಕೊಂಡು ಜನರ ಸಮಸ್ಯೆ ಆಲಿಸಿದ ಕಾಂಗ್ರೆಸ್ ಶಾಸಕ- ವಿಡಿಯೋ ವೈರಲ್

    ರಾಯಚೂರು: ಕಾಂಗ್ರೆಸ್ ಶಾಸಕರೊಬ್ಬರು ಬೈಕ್ ಓಡಿಸಿಕೊಂಡು ಜನರ ಸಮಸ್ಯೆಗಳನ್ನು ಆಲಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನರ ಮೆಚ್ಚುಗೆ ಪಡೆದಿದೆ.

    ಅಧಿಕಾರದಲ್ಲಿದ್ದವರು ಕಾರಲ್ಲಿಯೇ ಓಡಾಡುವುದು ಹೆಚ್ಚು. ಆದ್ರೆ ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಿಗೇರಿ ಅವರು ಪಟ್ಟಣದಲ್ಲಿ ಬೈಕ್ ರೈಡ್ ಮಾಡಿಕೊಂಡೇ ಜನರ ಸಮಸ್ಯೆಗಳನ್ನ ಆಲಿಸಿ ಗಮನ ಸೆಳೆದಿದ್ದಾರೆ. ಲಿಂಗಸುಗೂರಿನ ಗಲ್ಲಿ ಗಲ್ಲಿಗಳಲ್ಲಿ ಬೈಕ್ ರೈಡ್ ಮಾಡಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳನ್ನ ಪರಿಶೀಲಿಸಿದ ಶಾಸಕರು, ಅಲ್ಲಿನ ನಿವಾಸಿಗಳ ಜೊತೆ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

    ಕಾರನ್ನು ಬದಿಗಿಟ್ಟು ಶಾಸಕರು ಬೈಕ್‍ನಲ್ಲಿ ಹೋಗಿದ್ದರಿಂದ ಅಧಿಕಾರಿಗಳು ಸಹ ಬೈಕ್‍ನಲ್ಲಿಯೇ ಅವರನ್ನು ಹಿಂಬಾಲಿಸಿದರು. ಈ ವೇಳೆ ಸಿಸಿ ರಸ್ತೆಗಳು (ಕಾಂಕ್ರೀಟ್ ರೋಡ್) ಇಲ್ಲದ ಬಡಾವಣೆಗಳನ್ನ ಗುರುತಿಸಿ ಮಾಹಿತಿ ಕೊಡುವಂತೆ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಶಾಸಕ ಹೂಲಿಗೇರಿ ಸೂಚಿಸಿದ್ದಾರೆ. ಕಾಂಗ್ರೆಸ್ ಶಾಸಕ ಡಿ.ಎಸ್ ಹೂಲಿಗೇರಿ ಅವರು ಬೈಕ್ ರೈಡ್ ಮಾಡಿ ಪಟ್ಟಣದಲ್ಲಿ ಓಡಾಡಿರೋ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.youtube.com/watch?v=WiT7lberodA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ರೈಡಿಂಗ್- ಬೈಕಿನಲ್ಲೇ ಮುತ್ತಿನ ಸುರಿಮಳೆ

    ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ರೈಡಿಂಗ್- ಬೈಕಿನಲ್ಲೇ ಮುತ್ತಿನ ಸುರಿಮಳೆ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ಜಿಲ್ಲೆಯ ನಂದಿಗಿರಿಧಾಮದ ರಸ್ತೆಯಲ್ಲಿ ಅಂಕು ಡೊಂಕಿನ ರಸ್ತೆಯಲ್ಲಿ ಬೈಕಿನ ಹಿಂಬದಿ ಸೀಟಿನಲ್ಲಿ ಕೂತು ಸಾಗಬೇಕಾದ ಯುವತಿಯೊಬ್ಬಳು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂತು ಸಾಗಿದ್ದಾಳೆ.

    ಪ್ರೇಮಿಗಳಿಬ್ಬರು ನಂದಿಗಿರಿಧಾಮದ ರಸ್ತೆಯಲ್ಲಿ ಅಸಭ್ಯವಾಗಿ ಬೈಕ್ ಚಲಾಯಿಸಿರುವ ವಿಡಿಯೋವೊಂದು ಲಭ್ಯವಾಗಿದೆ. ತನ್ನ ಪ್ರೇಮಿಯನ್ನು ಬೈಕಿನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪ್ರಿಯಕರ ಬೈಕ್ ಓಡಿಸಿದ್ದಾನೆ. ಪ್ರೇಮಿಗಳ ಜಾಲಿ ರೈಡನ್ನು ಅವರ ಹಿಂದೆ ಬರುತ್ತಿದ್ದ ಸವಾರರು ವಿಡಿಯೋ ಮಾಡಿದ್ದಾರೆ.

    ಯುವತಿಯೊಬ್ಬಳು ತನ್ನ ಪ್ರಿಯಕರನ್ನ ತನ್ನ ತೋಳಲ್ಲಿ ಬಂಧಿ ಮಾಡಿಕೊಂಡು ಬೈಕಿನ ಟ್ಯಾಂಕ್ ಮೇಲೆ ಕುಳಿತು ಹೋಗಿದ್ದಾಳೆ. ಇತ್ತ ಬೈಕ್ ರೈಡ್ ಮಾಡುತ್ತಿದ್ದ ಪ್ರಿಯಕರ ಲೋಕದ ಪರಿವೇ ಇಲ್ಲದಂತೆ ಬೈಕ್ ರೈಡ್ ಮಾಡುತ್ತಿದ್ದನು. ಅಸಲಿಗೆ ಕಾನೂನನ್ನ ಗಾಳಿಗೆ ತೂರಿ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಜೋಡಿಯ ಹುಚ್ಚಾಟ ಇತರೆ ಪ್ರವಾಸಿಗರಿಗೆ ಇರುಸು ಮುರುಸು ಉಂಟುಮಾಡಿತ್ತು ಎಂದು ಪ್ರವಾಸಿಗ ಚಿಕ್ಕ ಅಂಜಿನಪ್ಪ ಹೇಳಿದ್ದಾರೆ.

    ಪ್ರೇಮಿಗಳ ಪಾಲಿನ ಸ್ವರ್ಗ ತಾಣದಲ್ಲಿ ವಿಹರಿಸಿ ಬಂದಿದ್ದ ಈ ಜೋಡಿ ಇಡೀ ಲೋಕದ ಪರಿವೆಯನ್ನ ಮರೆತಿದ್ದರು. ಬೈಕಿನ ಮುಂಭಾಗದ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನ್ನ ಬಿಗಿದಪ್ಪಿಕೊಂಡಿದ್ದು, ತನ್ನ ಪ್ರಿಯತಮೆಯ ತೋಳಲ್ಲಿ ಬಂಧಿಯಾಗಿದ್ದ ಆ ಯುವಕ ಜಾಂ ಜೂಮ್ ಅಂತ ಬೈಕ್ ರೈಡ್ ಮಾಡುತ್ತಿದ್ದನು. ನಡುರಸ್ತೆಯಲ್ಲಿ ಯಾರಿಗೂ ಡೋಂಟ್ ಕೇರ್ ಎಂಬಂತೆ ಬೈಕಿನಲ್ಲಿ ಸಾಗುತ್ತಿದ್ದ ಈ ಜೋಡಿಯ ಹುಚ್ಚಾಟ ಇತರೆ ವಾಹನ ಸವಾರರಿಗೆ ಮುಜುಗರವನ್ನುಂಟು ಮಾಡಿತ್ತು. ಇದು ಇದೊಂದು ಜೋಡಿಯ ಕಥೆ ಅಲ್ಲ ಬಹುತೇಕರದ್ದು ಇದೆ ತರ ಅಂತ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

    ನಂದಿಗಿರಿಧಾಮ ಹೇಳಿ ಕೇಳಿ ಪ್ರೇಮಿಗಳ ಪಾಲಿನ ಅಚ್ಚು ಮೆಚ್ಚಿನ ತಾಣವಾಗಿದೆ. ಆದರೆ ಪ್ರೇಮದ ಹೆಸರಲ್ಲಿ ನಡುರಸ್ತೆಯಲ್ಲೇ ಯಾರಿಗೂ ಡೋಂಟ್ ಕೇರ್ ಮಾಡದ ಜೋಡಿ ಹಕ್ಕಿಗಳು ಸಭ್ಯತೆಯ ಎಲ್ಲೆಯನ್ನೇ ಮೀರಿ ನಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೀಕೆಂಡ್ ನಲ್ಲಿ `ಕಿರಿಕ್ ಜೋಡಿ’ ಜಾಲಿ ಬೈಕ್ ರೈಡ್

    ವೀಕೆಂಡ್ ನಲ್ಲಿ `ಕಿರಿಕ್ ಜೋಡಿ’ ಜಾಲಿ ಬೈಕ್ ರೈಡ್

    ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ಬಳಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಐಶಾರಾಮಿ ಕಾರುಗಳಿರುತ್ತವೆ. ಕಾರ್ ಇದ್ದಾಗ ಬೈಕ್‍ ನಲ್ಲಿ ಸುತ್ತಾಟ ಮಾಡೋದು ತುಂಬಾ ಕಮ್ಮಿ. ಆದರೆ ಈ ವೀಕೆಂಡ್ ನಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಬೈಕ್‍ ನಲ್ಲಿ ಸ್ವಚ್ಛಂದವಾಗಿ ಬೆಂಗಳೂರಿನ ಬೀದಿಬೀದಿಗಳಲ್ಲಿ ಹಾರಾಡಿದೆ.

    ಸ್ಯಾಂಡಲ್ ವುಡ್‍ ನಲ್ಲಿ ಸದ್ಯಕ್ಕಂತೂ ಅಭಿಮಾನಿಗಳ ಹಾಟ್ ಫೆವರೇಟ್ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ. ಇವರು ಎಂಗೇಜ್ಡ್ ಕಪಲ್ ಎನ್ನುವುದು ಸೀಕ್ರೇಟ್ ಆಗಿ ಉಳಿದಿರೋ ವಿಷಯವಂತೂ ಅಲ್ಲ. ಹೀಗಾಗಿ ಸ್ಟಾರ್ ಜೋಡಿ ಈ ವೀಕೆಂಡ್ ನಲ್ಲಿ ಬೈಕ್ ರೈಡ್ ಮಾಡೋಕೆ ಮನಸ್ಸು ಮಾಡಿತ್ತು.

    ಭಾನುವಾರ ಶೂಟಿಂಗ್ ಗೆ ಗೇಟ್‍ಪಾಸ್ ಕೊಟ್ಟು `ಹಾರ್ಲೇ ಡೇವಿಡ್‍ಸನ್ ಬ್ರೇಕ್‍ ಔಟ್’ ಬೈಕ್ ಏರಿ ಔಟ್ ಹೋಗಿತ್ತು ಕಿರಿಕ್ ಜೋಡಿ. ಭಾನುವಾರ ಮಧ್ಯಾಹ್ನ ಬೆಂಗಳೂರಿನ ಬೆಸ್ಟ್ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿ ಬೀದಿ ಬೀದಿಗಳಲ್ಲಿ ಸಖತ್ ರೈಡ್ ಮಾಡಿದರು. ಅದೃಷ್ಟವಶಾತ್ ಇಬ್ಬರ ಮುಖ ಹೆಲ್ಮೆಟ್‍ ನಿಂದ ಮುಚ್ಚಿದ್ದೇ ಪುಣ್ಯ ಇಲ್ಲವಾದರೆ ರಸ್ತೆಯಲ್ಲೇ ಅಭಿಮಾನಿಗಳ ಸೆಲ್ಫಿಗಾಗಿ ಕಿರಿಕ್ ಮಾಡುತ್ತಿದ್ದರೋ ಏನೋ?

    ವೀಕೆಂಡ್ ನಲ್ಲಿ ಜಾಲಿ ರೈಡ್ ಹೋಗೋಕೆ ಕಾಯುತ್ತಿದ್ದ ಪ್ರೇಮಪಕ್ಷಿಗಳಿಗೆ ಸಿನಿಮಾ ಕೂಡ ಮುಖ್ಯ. ಈ ವಾರ ರಶ್ಮಿಕಾ ಮಂದಣ್ಣ ಅಭಿನಯದ ಅಂಜನಿಪುತ್ರ ಬಿಡುಗಡೆಯಾಗೋದಕ್ಕೆ ರೆಡಿಯಾಗಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಸ್ಟಾರ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿದ್ದ ದಿಢೀರ್ ಪತ್ರಿಕಾಗೋಷ್ಠಿಗೂ ರಶ್ಮಿಕಾ ಬರಲೇಬೇಕಿತ್ತು. ಹೀಗಾಗಿ ಸ್ಟಾರ್ ಹೊಟೇಲ್ ಗೂ ರಶ್ಮಿಕಾಗೆ ಭಾವೀ ಪತಿ ರಕ್ಷಿತ್ ಶೆಟ್ಟಿ ಬೈಕ್‍ ನಲ್ಲೇ ಡ್ರಾಪ್ ಮಾಡಿದರು.

    ಬೆಂಗಳೂರು ಎಂದರೆ ಹೆವೀ ಟ್ರಾಫಿಕ್. ಕಾರ್ ಏರಿ ಹೊರಟರಂತೂ ಇನ್ನೂ ಹೆಚ್ಚು ಟೈಂ ಬೇಕೇ ಬೇಕು. ಹೀಗಾಗೇ ಭಾನುವಾರವೊಂದೆ ಫ್ರೀ ಇರುವ ರಕ್ಷಿತ್- ರಶ್ಮಿಕಾ ತಾರಾ ಜೋಡಿ ಆಗಾಗ ಬೈಕ್‍ ನಲ್ಲೇ ರೈಡ್ ಹೋಗುತ್ತಾರಂತೆ. ಹೇಳಿ ಕೇಳಿ ರಕ್ಷಿತ್‍ ಗಂತೂ ಬೈಕ್ ಎಂದರೆ ಪ್ರೀತಿ. ಇನ್ನು ಹುಡುಗಿಯರಿಗಂತೂ ಬಿಡಿ ಬೈಕ್‍ ನಲ್ಲಿ ಸುತ್ತಾಡೋದರಲ್ಲಿ ಇರೋ ಖುಷಿನೇ ಬೇರೆ.

  • ರಸ್ತೆಯಲ್ಲಿ ಜೆಡಿಎಸ್ ರೆಬಲ್ ಶಾಸಕ ಜಮೀರ್ ಅಹ್ಮದ್ ಖಾನ್ ದರ್ಬಾರ್!

    ರಸ್ತೆಯಲ್ಲಿ ಜೆಡಿಎಸ್ ರೆಬಲ್ ಶಾಸಕ ಜಮೀರ್ ಅಹ್ಮದ್ ಖಾನ್ ದರ್ಬಾರ್!

    ಬೆಂಗಳೂರು: ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿ ಚಾಮರಾಜ ಪೇಟೆಯ ಜೆಡಿಎಸ್ ರೆಬಲ್ ಶಾಸಕ ಜಮೀರ್ ಅಹ್ಮದ್ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ.

    ಚಾಮರಾಜ ಪೇಟೆಯ ರಸ್ತೆಯಲ್ಲಿ ಕಳೆದ ಎರಡು ದಿನದಿಂದ ರಾತ್ರಿ ಚುನಾವಣೆ ಪ್ರಚಾರಕ್ಕಾಗಿ ಜಮೀರ್ ಅಹ್ಮದ್ ಓಡಾಡುತ್ತಿದ್ದಾರೆ. ಬೈಕ್ ನಲ್ಲಿ ಹೆಲ್ಮೆಟ್ ಹಾಕದೇ ಹಿಂಬದಿಯಲ್ಲಿ ಕಾರ್ಯಕರ್ತನನ್ನು ಕೂರಿಸಿ ಸಿಗ್ನಲ್ ಜಂಪ್ ಮಾಡಿ ಮನಸೋ ಇಚ್ಛೆ ಗಾಡಿ ಚಲಾಯಿಸಿದ್ದಾರೆ ಎನ್ನುವ ಆರೋಪ ಈಗ ಜಮೀರ್ ಮೇಲೆ ಕೇಳಿಬಂದಿದೆ.

    ಜಮೀರ್ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದರೂ ಮೂಕ ಪ್ರೇಕ್ಷಕ ನಂತೆ ಪೊಲೀಸರು ನಿಂತಿದ್ದರು. ಜಮೀರ್ ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಬುಧವಾರ ಟ್ರಾಫಿಕ್ ಇರುವ ರಸ್ತೆಯಲ್ಲಿ ಒನ್ ವೇಯಲ್ಲಿ ಜಮೀರ್ ಅಹ್ಮದ್ ಸವಾರಿ ಮಾಡಿದ್ದರು. ಈ ವೇಳೆ ಜಮೀರ್ ಕಾರಿನಲ್ಲಿ ಕಾರ್ಯಕರ್ತರು ಹತ್ತಿ ನಿಂತಿದ್ದರು.

    ಮಹಾರಾಜರಂತೆ ಜಮೀರ್ ಕಾರಿನಲ್ಲಿ ಸವಾರಿ ಮಾಡುತ್ತಿದ್ರೆ ರಸ್ತೆಯದ್ದಕ್ಕೂ ಅವರ ಗಾಡಿ ಹಿಂದೆ ಬಹುಪರಾಕ್ ಹೇಳಲು ಕಾರ್ಯಕರ್ತರ ದಂಡು ಬರುತ್ತಿದ್ದು, ಇದರಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

     

    https://youtu.be/1xqGbIO-Asw

     

  • ಮೈಸೂರು ಕಾಲೇಜು ವಿದ್ಯಾರ್ಥಿಗಳ ಬೈಕ್ ಸ್ಟಂಟ್‍ನ ರಸದೌತಣ !

    ಮೈಸೂರು ಕಾಲೇಜು ವಿದ್ಯಾರ್ಥಿಗಳ ಬೈಕ್ ಸ್ಟಂಟ್‍ನ ರಸದೌತಣ !

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಬೈಕ್ ಸ್ಟಂಟ್ ಪ್ರೇಕ್ಷಕರಿಗೆ ಫುಲ್ ಕಿಕ್ ನೀಡಿದೆ.

    ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ 9ನೇ ವರ್ಷದ ತತ್ವಮ್ ಫೆಸ್ಟ್‍ನಲ್ಲಿ ಬೈಕ್ ಹಾಗೂ ಕಾರುಗಳ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ 15 ಸೂಪರ್ ಬೈಕ್‍ಗಳು, 15 ವಿನ್ಟೇಜ್ ಕಾರುಗಳನ್ನು ಪ್ರದರ್ಶನ ಮಾಡಲಾಯಿತು. ನಂತರ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ಬೈಕ್ ಸ್ಟಂಟ್ ಮಾಡಿಸಲಾಯಿತು.

    ಈ ವೇಳೆಯಲ್ಲಿ ಬಿಂದಾಸ್ ಬೈಕ್ ರೈಡ್‍ನಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಾಡಿದ ಬೈಕ್ ಸ್ಟಂಟ್ ಗೆ ಪ್ರೇಕ್ಷಕರು ಫುಲ್ ಫಿದಾ ಆದರು. ನೋಡುಗರಿಗೆ ಮೈ ಜುಮ್ ಅನ್ನುವಂತೆ ವಿದ್ಯಾರ್ಥಿಗಳು ರಸದೌತಣ ನೀಡಿದರು.

    ಯುವಕರಿಗಿಂತ ನಾನೇನೂ ಕಡಿಮೆ ಇಲ್ಲವೆಂಬಂತೆ ಯುವತಿಯೂ ಕೂಡ ಬಿಂದಾಸ್ ಹಾಗೆ ಬೈಕ್ ಸ್ಟಂಟ್ ಮಾಡಿದರು. ಇವರು ಬೈಕ್ ಹೋಡೆಯೋ ಸ್ಟೈಲ್ ನೆರೆದಿದ್ದವರಿಗೆ ಬಾಯಿಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿತು. ಅಲ್ಲಿ ಇದ್ದಂತಹ ಜನರು ವಿದ್ಯಾರ್ಥಿಗಳು ದೊಡ್ಡವರು ಚಿಕ್ಕವರೆನ್ನದೆ ಈ ಯುವತಿಯ ಬೈಕ್ ರೈಡಿಂಗ್ ಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

    ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಬೈಕ್ ಸ್ವಂಟ್ ಜೊತೆ ವಿನ್ಟೇಜ್ ಕಾರುಗಳ ಪ್ರದರ್ಶನವೂ ಕೂಡ ನೋಡುಗರ ಮನಸೂರೆಗೊಳಿಸಿತು.

  • ಗರ್ಲ್ ಫ್ರೆಂಡ್ಸ್ ಜೊತೆ ಲಾಂಗ್ ರೈಡಿಗೆ 28 ಬೈಕ್ ಕದ್ದ!

    ಗರ್ಲ್ ಫ್ರೆಂಡ್ಸ್ ಜೊತೆ ಲಾಂಗ್ ರೈಡಿಗೆ 28 ಬೈಕ್ ಕದ್ದ!

    – ಬೈಕ್ ಇಲ್ಲಾಂದ್ರೆ ಬರಲ್ಲ ಅಂತಾರಂತೆ ಗರ್ಲ್ ಫ್ರೆಂಡ್
    – ಬೈಕ್ ಕದ್ದಿದ್ದಕ್ಕೆ 5ನೇ ಬಾರಿ ಜೈಲು ಸೇರಿದ ಅಜರ್

    ಹೈದರಾಬಾದ್: ಪ್ರೇಮಿಗಳು ಬೈಕ್ ನಲ್ಲಿ ಸುತ್ತಾಡೋದನ್ನು ನೀವು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಗರ್ಲ್ ಫ್ರೆಂಡ್ಸ್ ಗಾಗಿ 28 ಬೈಕ್ ಗಳನ್ನೇ ಕದ್ದಿರೋ ಘಟನೆ ನಡೆದಿದೆ.

    ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಈತ 4 ಬಾರಿ ಜೈಲಿಗೆ ಹೋಗಿದ್ದರೂ ಈತನಿಗೆ ಬುದ್ಧಿ ಬಂದಿಲ್ಲ. ಮತ್ತೆ ಮತ್ತೆ ಬೈಕ್ ಕಳ್ಳತನವನ್ನೇ ಮಾಡುತ್ತಿರುವ ಈತ ಈಗ ಹೈದರಾಬಾದ್ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದಾನೆ.

    ಸಾಮಾನ್ಯವಾಗಿ ಬೈಕ್ ಕಳ್ಳತನ ಮಾಡಿದವರು ಅದನ್ನು ಹಣಕ್ಕಾಗಿ ಮಾರಾಟ ಮಾಡುತ್ತಾರೆ. ಆದರೆ ಬೇಗಂಪೇಡೆಯ ಪಾತಿಗಡ್ಡದ ಅಜರ್ ಹುಸೇನ್ ಬೈಕ್ ಗಳನ್ನು ಕದ್ದು ಯಾವತ್ತೂ ಮಾರಾಟ ಮಾಡಿಲ್ಲ. ಬದಲಾಗಿ ಕದ್ದಾಗ ಬೈಕ್ ನಲ್ಲಿದ್ದ ಪೆಟ್ರೋಲ್ ನಲ್ಲಿ ಎಷ್ಟು ದೂರಕ್ಕೆ ಹೋಗುತ್ತೋ ಅಲ್ಲಿಯವರೆಗೆ ಹೋಗಿ ಪೆಟ್ರೋಲ್ ಖಾಲಿಯಾಗುತ್ತಿದ್ದಂತೆಯೇ ಬೈಕ್ ಅಲ್ಲೇ ಬಿಟ್ಟು ಜಾಗ ಖಾಲಿ ಮಾಡುತ್ತಾನೆ.

    ಅಷ್ಟಕ್ಕೂ ಈತ ಬೈಕ್ ಕಳ್ಳತನ ಮಾಡೋದು ಯಾಕೆ ಅಂತಾ ಕೇಳಿದ್ರೆ ವಿಚಿತ್ರವಾದ ವಿಷಯ ಬಿಚ್ಚಿಡ್ತಾನೆ ಅಜರ್. ಈತನಿಗೆ ಈಗಾಗಲೇ ಮದುವೆ ಆಗಿದೆ. ಆದರೆ ಹೆಂಡ್ತಿಗೆ ಡೈವೋರ್ಸ್ ಕೊಟ್ಟಿದ್ದಾನೆ. ಬಳಿಕ ನಗರದ ಕೆಲವು ಮಹಿಳೆಯರ ಜೊತೆ ಗೆಳೆತನ ಬೆಳೆಸಿದ್ದಾನೆ. ನಂತರ ಇವರನ್ನು ಲಾಂಗ್ ರೈಡ್ ಗೆ ಕರೆದುಕೊಂಡು ಹೋಗುತ್ತಾನೆ. ತನ್ನ ಈ ಗರ್ಲ್ ಫ್ರೆಂಡ್ ಗಳನ್ನು ಸುತ್ತಾಡಿಸಲೆಂದೇ ಬೈಕ್ ಕಳ್ಳತನಕ್ಕೆ ಇಳಿದಿದ್ದಾನೆ. ಇದುವರೆಗೆ ಪೊಲೀಸರು 4 ಬಾರಿ ಅಜರ್ ನನ್ನು ಬಂಧಿಸಿದ್ದಾರೆ. ಗರ್ಲ್ ಫ್ರೆಂಡ್ ಗಳು ಇದ್ದಾಗ ಮಾತ್ರ ಪೆಟ್ರೋಲ್ ಹಾಕಿಸ್ತಾನೆ ಅನ್ನೋದು ಬಿಟ್ಟರೆ ಉಳಿದ ಟೈಮ್ ಬೈಕ್ ಎಲ್ಲಿ ನಿಲ್ಲುತ್ತೋ ಅಲ್ಲೇ ಪಾರ್ಕ್ ಮಾಡಿ ಪರಾರಿಯಾಗ್ತಾನೆ ಅಜರ್.

    ಪ್ರತಿ ಬಾರಿ ಪೊಲೀಸ್ ತನಿಖೆ ಮಾಡಿದಾಗಲೂ, ಬೈಕ್ ಇಲ್ಲ ಎಂದರೆ ಗರ್ಲ್ ಫ್ರೆಂಡ್ ನನ್ನ ಜೊತೆ ಬರಲ್ಲ ಅಂತಾರೆ. ಹೀಗಾಗಿ ನಾನು ಬೈಕ್ ಕದ್ದಿದ್ದೇನೆ ಎನ್ನುತ್ತಾನೆ. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಗೆ ಬರುತ್ತಾನೆ. ಇದೇ ಮಂಗಳವಾರ ಅಜರ್ 5ನೇ ಬಾರಿಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ.

  • 30 ತಿಂಗಳು, 40 ದೇಶ, 1 ಲಕ್ಷ ಕಿ.ಮೀ. ಬೈಕ್‍ನಲ್ಲೇ ದಂಪತಿ ಪ್ರಯಾಣ!

    ಬಳ್ಳಾರಿ: ಗಂಡ ಹೆಂಡತಿ ಇಬ್ಬರೂ ಬೈಕ್ ರೈಡ್ ಮಾಡುತ್ತಾ ಮೂವತ್ತು ತಿಂಗಳು, ನಲವತ್ತು ದೇಶ ಹಾಗೂ ಒಂದು ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಬಂದಿದ್ದಾರೆ.

    ಬೈಕ್ ರೈಡ್ ಕ್ರೇಜ್ ಯಾರಿಗೆ ಇಷ್ಟವಿಲ್ಲ ಹೇಳಿ ಕೊಲಂಬಿಯಾದಲ್ಲಿ ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಜಾರ್ಜ್ ಓಸೋರಿಯೋ, ಪತ್ನಿ ಅನಾ ಕಳೆದ ಮೂವತ್ತು ತಿಂಗಳಿನಿಂದ ಬೈಕ್ ಪ್ರಯಾಣ ಆರಂಭಿಸಿ ಈಕ್ವೆಡಾರ್, ಪೆರು, ಬುಲೊವಾಯೋ, ಬ್ರಿಜಿಲ್, ವೆನಿಜುವೆಲಾ, ಉರುಗ್ವೆ, ಅರ್ಜೈಂಟೆನಾ, ಚಿಲಿ, ಸೆಹಗಲ್, ಹಂಗೇರಿಯಾ, ಪರುಗ್ವೇ, ಪನಾಮ, ಜರ್ಮನಿ, ಆಸ್ಟ್ರೀಯಾ, ಸ್ಲೋವೇನಿಯಾ, ಪೋಲೆಂಡ್, ಇಟಲಿ, ಸ್ವಿಜರ್ಲ್ಯಾಂಡ್, ಸುತ್ತಿ ಒಂದು ತಿಂಗಳಿನಿಂದ ಭಾರತವನ್ನು ಸುತ್ತುತ್ತಿದ್ದಾರೆ.

    ತಮ್ಮ ಬೈಕ್‍ಗೆ ಟಿ.ವಿ.ಯಿಂದ ದೂರವಿರಿ, ದುಶ್ಚಟಗಳಿಗೆ ದಾಸರಾಗಬೇಡಿ ಎನ್ನುವ ಸಂದೇಶಗಳನ್ನು ಸಾರುತ್ತಾ ತಾವು ಆ ದೇಶ ಸುತ್ತಿದ ನೆನಪಿಗಾಗಿ ರಾಷ್ಟ್ರಧ್ವಜವನ್ನು ಬೈಕಿಗೆ ಅಂಟಿಸಿಕೊಂಡಿದ್ದಾರೆ ತಾವು ಸುತ್ತುವ ದೇಶದ ಚಿತ್ರಗಳನ್ನು ತಮ್ಮದೇ ವೆಬ್ ಸೈಟ್ ನಲ್ಲಿ ಹಾಕಿ ಆ ದೇಶದ ಕಲೆ ಸಂಸ್ಕೃತಿ ಪರಿಚಯಿಸುತ್ತಿದ್ದಾರೆ.

    ಕೊಪ್ಪಳದ ಜಿಲ್ಲೆಯ ಅಂಜನಾದ್ರಿ, ಪಂಪಾಸರೋವರ ನೋಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಆಗಮಿಸದ್ದಾರೆ ಸ್ಮಾರಕಗಳನ್ನು ನೋಡಿ ಹಂಪಿ ಬಜಾರ್ ನಲ್ಲಿ ವಿಶ್ರಾಂತಿ ಪಡೆಯುವಾಗ ದೇಶಿ ವಿದೇಶಿ ಪ್ರವಾಸಿಗರು ಮಾತನಾಡಿಸಿ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಕ್ಯಾಮರಾಗಳಲ್ಲಿ ಬೈಕ್ ಫೋಟೋ ಕ್ಲಿಕಿಸುತ್ತಿದ್ದರು. ಭಾರತದಲ್ಲಿ ರಸ್ತೆಯು ಬಹಳ ಚೆನ್ನಾಗಿವೆ ಇಲ್ಲಿ ಅನೇಕ ಐತಿಹಾಸಿಕ ಸ್ಥಳಗಳನ್ನು ವಿಶ್ವ ವಿಖ್ಯಾತ ಸ್ಮಾರಕಗಳನ್ನು ನೋಡಿ ಖುಷಿಯಾಗಿದೆ ಎಂದು ಓಸೋರಿಯಾ ದಂಪತಿ ತಿಳಿಸಿದರು.