Tag: Bike Ride

  • ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿದ ಡಿಸಿಎಂ – ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ಓಡಿಸಿದ ಸ್ಟೈಲ್ ನೋಡಿ

    ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿದ ಡಿಸಿಎಂ – ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ಓಡಿಸಿದ ಸ್ಟೈಲ್ ನೋಡಿ

    ಬೆಂಗಳೂರು: ಕೆ.ಆರ್ ಪುರದಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ವಿಸ್ತರಿತ ಮೇಲ್ಸೆತುವೆಯನ್ನು (Hebbal Flyover) ಸೋಮವಾರ (ಇಂದು) ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಉದ್ಘಾಟಿಸಿದರು.

    700 ಮೀ. ಉದ್ದದ ಕೆ.ಆರ್ ಪುರನಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಈ ಫ್ಲೈಓವರ್ ಆರಂಭ ಸ್ಥಳದಲ್ಲಿ ಡಿಕೆಶಿ ಉದ್ಘಾಟಸಿದರು. ಫ್ಲೈಓವರ್ ಅಂತ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿಸದ್ದಾರೆ. ಬಳಿಕ ಹೊಸ ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ರೈಡ್ ಮಾಡಿ ಖುಷಿಪಟ್ಟರು. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

    ಇತ್ತೀಚೆಗೆ ಡಿಸಿಎಂ ಬೈಕ್ ಓಡಿಸಿ ಫ್ಲೈಓವರ್ ವೀಕ್ಷಣೆ ಮಾಡಿದ್ದರು, ಈ ವೇಳೆ ದಂಡ ಬಾಕಿಯಿರುವ ಬೈಕ್ ಓಡಿಸಿರೋದಾಗಿ ಬಿಜೆಪಿ ಕಾಲೆಳೆದಿತ್ತು. ಹಾಗಾಗಿ ಕಳೆದ ಬಾರಿಯ ಎಡವಟ್ಟು ಮರು ಕಳಿಸದಂತೆ ಎಚ್ಚರವಹಿಸಿ, ತನ್ನ ಪ್ರೀತಿಯ Yezdi ಬೈಕ್ ತರಿಸಿಕೊಂಡು, ಹೊಸ ಹೆಲ್ಮಟ್ ಖರೀದಿ ಮಾಡಿ ಬೈಕ್ ಓಡಿಸಿದರು. ಇದನ್ನೂ ಓದಿ: Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್‌

    ನಂತರ ಮಾತನಾಡಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಈ ಫ್ಲೈಓವರ್ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಪ್ಲಾನ್ ಆಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ನಾನು ಬಂದ ಮೇಲೆ ಹಣ ಕೊಟ್ಟು, ಅನುಮತಿ ನೀಡಿದೆ. 80 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ಮಾಡಲಾಗಿದೆ. ಇನ್ನೊಂದು ಜಂಕ್ಷನ್ ರೋಡ್ ಮಾಡಲಾಗುತ್ತದೆ. 6 ಲೇನ್ ನವೆಂಬರ್ ಒಳಗೆ ಆಗುತ್ತದೆ. 3 ತಿಂಗಳಲ್ಲಿ ಇನ್ನೊಂದು ಲೂಪ್ ಬರಲಿದೆ. ಎಸ್ಟಿಮ್ ಮಾಲ್‌ನಿಂದ ಒಂದೂವರೆ ಕಿ.ಮೀ ತನಕ ಟನಲ್ ಮಾಡಲಾಗುತ್ತದೆ. ಎಮೆರ್ಜೆನ್ಸಿಗೆ ಇದರ ಬಳಕೆಯಾಗುತ್ತದೆ. ಏರ್ಪೋರ್ಟ್ನಿಂದ ಬರುವವರಿಗೆ ಅನುಕೂಲವಾಗಲಿದೆ. ಟನಲ್ ಯೋಜನೆಗೆ ಹೊಸ ಟೆಂಡರ್ ಸದ್ಯದಲ್ಲಿಯೇ ಶುರುವಾಗುತ್ತದೆ ಹೇಳಿದ್ದಾರೆ.

    ಉದ್ಘಾಟನೆ ವೇಳೆ ಸಚಿವ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿ.ಡಿ.ಎ ಅಧ್ಯಕ್ಷ, ಶಾಸಕ ಎನ್ ಎ ಹ್ಯಾರಿಸ್, ಮಾಜಿ ಸಂಸದೆ, ನಟಿ ರಮ್ಯಾ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿ.ಡಿ.ಎ. ಕಮಿಷನರ್ ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಡಾ ಮಹೇಶ್ವರರಾವ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.

  • ಬೆಂಗಳೂರಲ್ಲಿ ಪ್ರೇಮಿಗಳ ಜಾಲಿ ರೈಡ್ – ಬೈಕ್‌ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡ್ಗಿ ಕೂರಿಸ್ಕೊಂಡು ರೊಮ್ಯಾನ್ಸ್;‌ ಅಸಲಿಯತ್ತೇನು?

    ಬೆಂಗಳೂರಲ್ಲಿ ಪ್ರೇಮಿಗಳ ಜಾಲಿ ರೈಡ್ – ಬೈಕ್‌ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡ್ಗಿ ಕೂರಿಸ್ಕೊಂಡು ರೊಮ್ಯಾನ್ಸ್;‌ ಅಸಲಿಯತ್ತೇನು?

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ  ರೀಲ್ಸ್‌ (Social Media Reels) ಹಾಕುವ ಸಲುವಾಗಿ ಯುವಕರು ಬೈಕ್‌ ವ್ಹೀಲಿಂಗ್‌, ಸ್ಟಂಟ್‌ ಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದರಲ್ಲೂ ಸಿಲಿಕಾನ್‌ ಸಿಟಿಯಲ್ಲಿ ಕೇಳುವಂತೆಯೇ ಇಲ್ಲ. ಪೊಲೀಸರು (Bengaluru Traffic Police) ಆಗಾಗ್ಗೆ ಬಿಸಿ ಮುಟ್ಟಿಸುತ್ತಿದ್ದರೂ ಪುಂಡರು ಡೋಂಟ್‌ ಕೇರ್‌ ಅನ್ನುತ್ತಿದ್ದಾರೆ. ಇದನ್ನೂ ಓದಿ: ಸೊಂಟ ಕಾಣಿಸುವಂತೆ ಹಸಿರು ಸೀರೆಯುಟ್ಟು ಬಂದ ಉರ್ಫಿ – ಒಳಉಡುಪು ಎಲ್ಲಿ ಹೋಯ್ತು ಅಂದ ನೆಟ್ಟಿಗರು

    ಇದರಿಂದ ರಸ್ತೆಯಲ್ಲಿ ಹೋಗುವ ಇತರ ಸವಾರರಿಗೂ ಕಿರಿಕಿರಿ ಉಂಟಾಗುವುದನ್ನು ಕಾಣುತ್ತಿರುತ್ತೇವೆ. ಈ ನಡುವೆ ಪ್ರೇಮಿಗಳಿಬ್ಬರು ಜಾಲಿ ರೈಡ್ (Lovers Jolly Ride) ಮಾಡಿರುವ ಘಟನೆಯೊಂದು ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ಯುವಕನೊಬ್ಬ ಬೈಕ್‌ ಚಲಾಯಿಸಿದ್ದಾನೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!

    ಹೌದು. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರೇಮಿಗಳಿಬ್ಬರ ಜಾಲಿರೈಡ್‌ ಅನ್ನು ಹಿಂದೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮೇಲ್ನೋಟಕ್ಕೆ ಪ್ರಾಂಕ್‌ ಮಾಡುವ ಉದ್ದೇಶದಿಂದ ಈ ವೀಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾಗ್ತಿದೆ. ಯುವಕನೇ ಯುವತಿಯ ರೀತಿ ಹೇರ್‌ಸ್ಟೈಲ್‌ ಮಾಡಿಕೊಂಡು ವೀಡಿಯೋ ಚಿತ್ರೀಕರಣ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಇದನ್ನೂ ಓದಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ

  • ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ – ತಂದೆಗೆ 25,000 ರೂ. ದಂಡ!

    ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ – ತಂದೆಗೆ 25,000 ರೂ. ದಂಡ!

    ಶಿವಮೊಗ್ಗ: ಅಪ್ರಾಪ್ತನೊಬ್ಬ ದ್ವಿಚಕ್ರ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

    ತನ್ನ ಮಗನಿಗೆ ತಂದೆಯೇ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ತೀರ್ಥಹಳ್ಳಿ ನ್ಯಾಯಾಲಯವು (Thirthahalli Court) ತಂದೆಗೆ 25,000 ರೂ. ದಂಡ ವಿಧಿಸಿದೆ. ದ್ವಿಚಕ್ರ ವಾಹನ ಚಾಲನೆ ಮಾಡಿದ 17 ವರ್ಷದ ಬಾಲಕ ಮೂಲತಃ ತೀರ್ಥಹಳ್ಳಿಯವನು (Thirthahalli) ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೆಹಲಿಯಲ್ಲಿ ನೀರಿನ ಬಿಕ್ಕಟ್ಟು – 2ನೇ ದಿನಕ್ಕೆ ಕಾಲಿಟ್ಟ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

    ತೀರ್ಥಹಳ್ಳಿ ಟೌನ್ ದೊಡ್ಮನೆ ಕೇರಿ ಬಳಿಕ ಶಿವಮೊಗ್ಗ ಸಂಚಾರ ಪೊಲೀಸರು (Shivamogga Traffic Police) ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಿದ್ದ 17 ವರ್ಷದ ಅಪ್ರಾಪ್ತನನ್ನು ತಡೆದು ಪರವಾನಗಿ ಪರಿಶೀಲಿಸಿದರು.

    ನಂತರ ಆತ ಅಪ್ರಾಪ್ತ ಮತ್ತು ಪರವಾನಗಿಯಿಲ್ಲದೇ ಬೈಕ್‌ ಚಾಲನೆ ಮಾಡುತ್ತಿದ್ದ ಕಾರಣಕ್ಕೆ ಪೊಲೀಸರು ಆತನನ್ನ ಕೋರ್ಟ್‌ಗೆ ಹಾಜರು ಪರಿಡಿಸಿದ್ದರು. ಇದನ್ನು ಗಮನಿಸಿದ ತೀರ್ಥಹಳ್ಳಿ ಪಿಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ 25,000 ದಂಡ ವಿಧಿಸಿ ಆದೇಶಿಸಿತು. ಇದನ್ನೂ ಓದಿ: ಹಣಕಾಸು ಆಯೋಗದ ಶಿಫಾರಸಿನ ಅನುದಾನವನ್ನು ಕರ್ನಾಟಕಕ್ಕೆ ನೀಡಿ – ಕೇಂದ್ರದ ಮುಂದೆ ರಾಜ್ಯ ಸರ್ಕಾರ ಡಿಮ್ಯಾಂಡ್!

  • ಕೆಟಿಎಮ್ 390 ಬೈಕ್‌ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ

    ಕೆಟಿಎಮ್ 390 ಬೈಕ್‌ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ

    ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಸ್ತುತ ಲಡಾಖ್ (Ladakh) ಪ್ರವಾಸ ಕೈಗೊಂಡಿದ್ದು, ಶನಿವಾರ ಬೈಕ್ ರೈಡ್ (Bike Ride) ಮೂಲಕ ಪ್ಯಾಂಗಾಂಗ್ ಸರೋವರಕ್ಕೆ (Pangong Lake) ತೆರಳಿದ್ದಾರೆ. ರಾಹುಲ್ ಗಾಂಧಿ ಅವರ ಬೈಕ್ ರೈಡ್ ಫೋಟೋಸ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

    ರಾಹುಲ್ ಗಾಂಧಿ ತಾವು ಬೈಕ್ ಓಡಿಸುತ್ತಿರುವ ಫೋಟೋಗಳನ್ನು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ಫೋಟೋಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್ ಗಾಂಧಿ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕೆಲವು ಸಾಲುಗಳನ್ನು ಕೂಡಾ ಬರೆದಿದ್ದಾರೆ. ಪ್ಯಾಂಗಾಂಗ್ ಸರೋವರ ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದು ಎಂದು ನಮ್ಮ ತಂದೆ ಸರೋವರಕ್ಕೆ ಹೋಗುತ್ತಿದ್ದ ದಾರಿಯಲ್ಲಿ ಹೇಳುತ್ತಿದ್ದರು ಎಂದು ರಾಗಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ನಿತಿನ್ ಗಡ್ಕರಿ ಸ್ಪಷ್ಟನೆ

    ಮಾಹಿತಿಗಳ ಪ್ರಕಾರ, ರಾಹುಲ್ ಗಾಂಧಿ ಆಗಸ್ಟ್ 20ರಂದು ತಮ್ಮ ತಂದೆ ರಾಜೀವ್ ಗಾಂಧಿಯವರ (Rajiv Gandhi) ಜನ್ಮದಿನದ ಸಲುವಾಗಿ ಪ್ಯಾಂಗಾಂಗ್ ಸರೋವರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ತಮ್ಮದೇ ಆದ ಕೆಟಿಎಮ್ ಬೈಕ್ ಅನ್ನು ಹೊಂದಿದ್ದರೂ ಸಹಿತ ಅವರ ಭದ್ರತಾ ಸಿಬ್ಬಂದಿ ಅದರಲ್ಲಿ ಸವಾರಿ ಮಾಡಲು ಬಿಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: Rajasthan: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸಮಿತಿ ರಚಿಸಿದ ರಾಜಸ್ಥಾನ ಸಿಎಂ

    ರಾಹುಲ್ ಗಾಂಧಿ ಕೆಟಿಎಮ್ 390 ಅಡ್ವೆಂಚರ್ ಬೈಕ್ ಅನ್ನು ಸವಾರಿ ಮಾಡುತ್ತಿದ್ದು, ಹೆಲ್ಮೆಟ್, ಕೈಗವಸು, ಸವಾರಿ ಬೂಟುಗಳು ಮತ್ತು ಜಾಕೆಟ್ ಧರಿಸಿರುವುದನ್ನು ಫೋಟೋದಲ್ಲಿ ಕಾಣಬಹುದು. ಕೆಟಿಎಮ್ 390 ಅಡ್ವೆಂಚರ್ ಬೈಕ್ 373 ಸಿಸಿ ಬೈಕ್ ಆಗಿದ್ದು, ಗರಿಷ್ಠ 32 ಕಿಲೋ ವ್ಯಾಟ್ ಪವರ್ ಮತ್ತು 37 ಎನ್‌ಎಮ್ ಗರಿಷ್ಠ ಟಾರ್ಕ್ ಅನ್ನು ಹೊಂದಿದೆ. ಅಲ್ಲದೇ ಗರಿಷ್ಠ 155 ಕಿಲೋ ಮೀಟರ್ ವೇಗವನ್ನು ಹೊಂದಿದೆ. ಇದನ್ನೂ ಓದಿ: ಸರ್ಕಾರದ ಎಲ್ಲ ಸಂಸ್ಥೆಗಳಲ್ಲೂ RSS ತನ್ನ ಜನರನ್ನಿರಿಸಿದೆ – ರಾಹುಲ್ ಗಾಂಧಿ ಆರೋಪ

    ರಾಹುಲ್ ಗಾಂಧಿ ಕೆಟಿಎಮ್ ಬೈಕ್ ಅನ್ನು ಹೊಂದಿದ್ದರೂ ಸಹಿತ ಅವರ ಭದ್ರತಾ ಸಿಬ್ಬಂದಿ ಅದರಲ್ಲಿ ಸವಾರಿ ಮಾಡಲು ಬಿಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಅಮೇಥಿಯಿಂದ ರಾಹುಲ್, ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಕ್ ಮೇಲೆ ಸವಾರಿ : ಪೊಲೀಸ್ ಎಂಟ್ರಿ ನಂತರ ಉಲ್ಟಾ ಹೊಡೆದ ಅಮಿತಾಭ್ ಬಚ್ಚನ್

    ಬೈಕ್ ಮೇಲೆ ಸವಾರಿ : ಪೊಲೀಸ್ ಎಂಟ್ರಿ ನಂತರ ಉಲ್ಟಾ ಹೊಡೆದ ಅಮಿತಾಭ್ ಬಚ್ಚನ್

    ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮೊನ್ನೆಯಷ್ಟೇ ಬೈಕ್ ಮೇಲೆ ಸವಾರಿ (Bike Ride) ಮಾಡಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಟ್ರಾಫಿಕ್ ಸಮಸ್ಯೆಯ ಕಾರಣದಿಂದಾಗಿ ಅಪರಿಚಿತ ವ್ಯಕ್ತಿಯೋರ್ವನಿಂದ ಬೈಕ್ ನಲ್ಲಿ ಡ್ರಾಪ್ ಹಾಕಿಸಿಕೊಂಡೆ ಎಂದು ಬರೆದುಕೊಂಡಿದ್ದರು. ಬೈಕ್ ಸವಾರಿ ವೇಳೆ ಇಬ್ಬರೂ ಹೆಲ್ಮೆಟ್ ಹಾಕಿಕೊಳ್ಳದೇ ಇರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮುಂಬೈ ಪೊಲೀಸ್ ಕೂಡ ಎಂಟ್ರಿ ಕೊಟ್ಟಿದ್ದರು.

    ಪ್ರಭಾವಿಶಾಲಿಗಳೇ ಹೀಗೆ ಕಾನೂನು ಉಲ್ಲಂಘಿಸಿದರೆ ಹೇಗೆ? ಅವರ ಮೇಲೆ ಅಗತ್ಯ ಕ್ರಮ ತಗೆದುಕೊಳ್ಳಬೇಕು ಎಂದು ಹಲವರು ಮುಂಬೈ (Mumbai) ಟ್ರಾಫಿಕ್ ಪೊಲೀಸರಿಗೆ ಆಗ್ರಹಿಸಿದ್ದರು. ಈ ಆಗ್ರಹ ಜೋರಾಗುತ್ತಿದ್ದಂತೆಯೇ ಬಿಗ್ ಬಿ ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಟಾ ಹೊಡೆದಿದ್ದಾರೆ. ತಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಬೈಕ್ ಸವಾರಿ ಕೂಡ ಆಗಿಲ್ಲ. ಅದು ಶೂಟಿಂಗ್ ಸ್ಥಳದಲ್ಲಿ ನಡೆದ ಘಟನೆ. ನಲವತ್ತು ಮೀಟರ್ ಕೂಡ ಸವಾರಿ ಮಾಡಿಲ್ಲ ಎಂದು ತೇಪೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೇ, ಬೈಕ್ ಸವಾರಿ ಮಾಡಬೇಕಾದ ಸಂದರ್ಭ ಬಂದಾಗ ಹೆಲ್ಮೆಟ್ ಧರಿಸಿರುವ ಕುರಿತು ಹೇಳಿದ್ದಾರೆ.

    ಏನಿದರ ಹಿನ್ನೆಲೆ?

    ಮೊನ್ನೆ ಬೈಕ್ ಸವಾರನ ಫೋಟೋ ಹಂಚಿಕೊಂಡಿದ್ದ ಬಚ್ಚನ್, ‘ಡ್ರಾಪ್ ನೀಡಿದ್ದಕ್ಕೆ ಗೆಳೆಯನಿಗೆ ಧನ್ಯವಾದಗಳು. ನನ್ನನ್ನು ಸರಿಯಾದ ಸಮಯಕ್ಕೆ ಸೇರಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೀಯಾ. ಕ್ಯಾಪ್, ಶರ್ಟ್ಸ್ ಮತ್ತು ಹಳದಿ ಬಣ್ಣದ ಟೀ ಶರ್ಟ್ ತೊಟ್ಟಿದ್ದ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು. ಈ ಫೋಟೋದಲ್ಲಿ ಬೈಕ್ ಓಡಿಸುವವರು ಮತ್ತು ಅಮಿತಾಭ್ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಹಾಗಾಗಿ ವ್ಯಕ್ತಿಯೊಬ್ಬರು ಆ ಫೋಟೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ದಂಡ ಹಾಕುವಂತೆ ಒತ್ತಾಯಿಸಲಾಗಿತ್ತು. ಇದನ್ನೂ ಓದಿ:ದಿ ಕೇರಳ ಸ್ಟೋರಿ ನಂತರ ವಿವಾದಕ್ಕೆ ಗುರಿಯಾಯ್ತು ತಮಿಳಿನ ಚಿತ್ರ

    ಮುಂಬೈ ಪೊಲೀಸ್ (Police) ಇದೀಗ ಕ್ರಮ ತಗೆದುಕೊಳ್ಳಲು ಮುಂದಾಗಿದ್ದು, ಸಾರಿಗೆ ನಿಮಯ ಉಲ್ಲಂಘಿಸಿದ್ದಕ್ಕಾಗಿ ದಂಡ ಕಟ್ಟುವಂತೆ ಅಮಿತಾಭ್ ಮತ್ತು ಸವಾರನಿಗೆ ಸೋಷಿಯಲ್ ಮೀಡಿಯಾ ಮೂಲಕವೇ ತಿಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಮಿತಾಭ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ದಂಡ ಕಟ್ಟುವುದು ಅಮಿತಾಭ್ ಗೆ ಅನಿವಾರ್ಯವಾಗಿದೆ. ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ.

    ಅಮಿತಾಭ್ ಚಿತ್ರೀಕರಣಕ್ಕೆ (Shooting) ತೆರಳಬೇಕಿತ್ತು. ಆದರೆ, ಟ್ರಾಫಿಕ್ ನಲ್ಲಿ ಸಿಲುಕಿ ಏನೂ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಿತ್ರೀಕರಣಕ್ಕೆ ಎಂದೂ ತಡವಾಗಿ ಹೋಗದ ಅಮಿತಾಭ್, ಆ ಕ್ರಿಯೆಯನ್ನು ಉಳಿಸಿಕೊಳ್ಳಬೇಕಿತ್ತು. ಹಾಗಾಗಿ ಅವರು ಬೈಕ್ ಸವಾರನ ಮೊರೆ ಹೋಗಿದ್ದರು. ಅವನು ಕೂಡ ಬಿಗ್ ಬಿಗೆ ಡ್ರಾಪ್ ಮಾಡಿದ್ದ ಎಂದು ಹೇಳಲಾಗಿತ್ತು.

  • ದಂಪತಿ ಈ ಕೆಲಸ ಮಾಡಿದ್ರೆ ದಾಂಪತ್ಯ ಜೀವನ ಸುಖಮಯವಾಗಿರುತ್ತೆ..

    ದಂಪತಿ ಈ ಕೆಲಸ ಮಾಡಿದ್ರೆ ದಾಂಪತ್ಯ ಜೀವನ ಸುಖಮಯವಾಗಿರುತ್ತೆ..

    ದಾಂಪತ್ಯ ಎಂಬುದು ಬದುಕಿನ ಒಂದು ಅಮೂಲ್ಯ ಘಟ್ಟ. ಪ್ರತಿ ಸನ್ನಿವೇಶದಲ್ಲೂ ಸತಿ-ಪತಿ ಹೊಂದಾಣಿಕೆಯಿಂದ ಸಾಗಿದರೆ ಸಂಸಾರ ಸುಂದರವಾಗಿರುತ್ತೆ. ದಾಂಪತ್ಯದ ಪ್ರತಿ ಕ್ಷಣವೂ ಸುಮಧುರವಾಗಿರಬೇಕು. ಮುಂದೊಮ್ಮೆ ಅದರ ನೆನಪುಗಳು ಸಿಹಿಯಾಗಿರಬೇಕು.

    ದಾಂಪತ್ಯದಲ್ಲಿ ಹೊಂದಾಣಿಕೆಯ ಬದುಕು ಅಷ್ಟು ಸುಲಭವಲ್ಲ. ಸಾಗರದಲ್ಲಿ ನೌಕೆಗೆ ಎದುರಾಗುವ ಅಡೆತಡೆಗಳಂತೆಯೇ ಸಂಸಾರದಲ್ಲೂ ಅಡ್ಡಿ ಆತಂಕಗಳಿರುತ್ತವೆ. ಅದೆಲ್ಲವನ್ನೂ ಸ್ವೀಕರಿಸಿ ಸುಖಿ ಜೀವನ ನಡೆಸಬೇಕು ಎನ್ನುವುದಾದರೆ, ದಂಪತಿ (Couple) ತಮ್ಮ ನಿತ್ಯದ ಬದುಕಿನಲ್ಲಿ ಮಾಡಬೇಕಾದ ಒಂದಷ್ಟು ಕೆಲಸಗಳಿವೆ. ಬನ್ನಿ ಅವುಗಳನ್ನು ತಿಳಿಯೋಣ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಒಟ್ಟಿಗೆ ಡ್ಯಾನ್ಸ್‌ ಮಾಡಿ
    ನಿಮ್ಮ ದಿನಚರಿಯಲ್ಲಿ ಕೆಲಹೊತ್ತು ಇಬ್ಬರೂ ಸೇರಿ ನೃತ್ಯ ಮಾಡಿ. ತುಂಬಾ ಟ್ರೆಂಡಿಂಗ್‌ನಲ್ಲಿರೋ ರೊಮ್ಯಾಂಟಿಕ್‌ ನೃತ್ಯವನ್ನೇ ಆಯ್ಕೆ ಮಾಡಿಕೊಳ್ಳಿ. ಇಬ್ಬರೂ ಒಟ್ಟಿಗೆ ನೃತ್ಯ ಕಲಿಯಿರಿ. ಅದನ್ನು ಚಿತ್ರೀಕರಿಸಿ ಫನ್‌ ಮಾಡಿ.

    ಬೈಕ್‌ ರೈಡ್‌ ಹೋಗಿ
    ದಂಪತಿ ಒಟ್ಟಿಗೆ ಆಗಾಗ ಬೈಕ್‌ ರೈಡ್‌ ಹೋಗಿ. ಬೀದಿ ಬದಿಯಲ್ಲಿ ಸಿಗುವ ತಿನಿಸನ್ನು ಸವಿಯಿರಿ. ಅಲ್ಲಿ ಟೀ, ಕಾಫಿ ಸೇವಿಸಿ. ಬೈಕ್‌ ರೈಡ್‌ನ್ನು ಇಬ್ಬರೂ ಎಂಜಾಯ್‌ ಮಾಡಿ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಇಷ್ಟದ ಅಡುಗೆಯನ್ನು ಜೊತೆಯಾಗಿ ಮಾಡಿ
    ಅಡುಗೆ ಮನೆ ಗೃಹಿಣಿಗೆ ಮಾತ್ರ ಸೀಮಿತ ಅನ್ನೋದು ಕಾಮನ್‌. ಎಂದಾದರೂ ಪುರುಷರೂ ಕಿಚನ್‌ಗೆ ಹೋಗಿ, ಅಡುಗೆ ಮಾಡಲು ಹೆಂಡತಿಗೆ ಸಹಾಯ ಮಾಡಿದ್ದೀರಾ? ಇನ್ಮುಂದೆ ಆ ಮನೋಭಾವ ಬೆಳೆಸಿಕೊಳ್ಳಿ. ನಿಮ್ಮ ಇಷ್ಟದ ಅಡುಗೆಯನ್ನು ಪತ್ನಿಯೊಂದಿಗೆ ಸೇರಿ ಮಾಡಿ. ಬದುಕಿನಲ್ಲಿ ಇಬ್ಬರಿಗೂ ಅದು ಮರೆಯಲಾಗದ ಕ್ಷಣ ಆಗಿರುತ್ತೆ.

    ಮನೆ ಸ್ವಚ್ಛಗೊಳಿಸಿ
    ಮನೆಗೆಲಸವನ್ನು ಪತ್ನಿಗೆ ಮಾತ್ರ ಬಿಡುವುದು ಸರಿಯಲ್ಲ. ಎಲ್ಲಾ ಸಂದರ್ಭದಲ್ಲೂ ಅವರಿಗೆ ಸಾಥ್‌ ನೀಡುವುದು ಪತಿಯ ಕರ್ತವ್ಯ ಆಗಬೇಕು. ಆಗ ನೀವು ಪತ್ನಿ ಮನಸ್ಸಿಗೆ ಇನ್ನಷ್ಟು ಹತ್ತಿರ ಆಗ್ತೀರಾ. ಇಬ್ಬರೂ ಒಟ್ಟಿಗೆ ಮನೆ ಕ್ಲೀನ್‌ ಮಾಡಿ. ವಸ್ತುಗಳನ್ನು ನಿಗದಿತ ಸ್ಥಗಳಲ್ಲಿ ಇಟ್ಟುಕೊಳ್ಳಿ. ಮನೆ ಶುಚಿಯಾಗಿದ್ದಷ್ಟೂ, ಮನಸ್ಸು ಪ್ರಶಾಂತವಾಗಿರುತ್ತೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಮೂವಿ ನೋಡಿ
    ಮೂವಿ ನೋಡಲು ದಂಪತಿ ಸಿನಿಮಾ ಥಿಯೇಟರ್‌ಗಳಿಗೇ ಹೋಗಬೇಕು ಎಂದೇನು ಇಲ್ಲ. ಮನೆಯಲ್ಲೇ ಒಟ್ಟಿಗೆ ಕೂತು ಇಷ್ಟದ ಸಿನಿಮಾ ವೀಕ್ಷಿಸಬಹುದು. ಇಂತಹ ಸಂದರ್ಭದಲ್ಲಿ ಆದಷ್ಟು ಕಾಮಿಡಿ ಸಿನಿಮಾಗಳನ್ನು ನೋಡಿದರೆ ಮತ್ತಷ್ಟು ಎಂಜಾಯ್‌ ಮಾಡಬಹುದು.

    ಆಗಾಗ ಪಿಕ್ನಿಕ್‌ಗೆ ಹೋಗಿ
    ಮನೆ, ಕಚೇರಿ ಅಂತಷ್ಟೇ ಇದ್ದರೆ ಲೈಫು ತುಂಬಾ ಬೇಜಾರು ಎನಿಸುತ್ತೆ. ಕಪಲ್‌ ಆಗಾಗ ಹೊರಗಡೆ ಪಿಕ್ನಿಕ್‌ಗೆ ಹೋಗಬೇಕು. ಮನೆಯಿಂದಲೇ ಒಂದಷ್ಟು ಹಣ್ಣು-ಹಂಪಲು, ಸ್ನ್ಯಾಕ್ಸ್‌ ಪ್ಯಾಕ್‌ ಮಾಡಿಕೊಂಡು, ಪಿಕ್ನಿಕ್‌ ಸ್ಥಳದಲ್ಲಿ ಜೊತೆಯಾಗಿ ಸವಿಯಿರಿ. ಜೀವನದಲ್ಲಿ ಇದು ಕೂಡ ಮರೆಯಲಾಗದ ಕ್ಷಣವಾಗುತ್ತೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

    ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

    ಚಿಕ್ಕಬಳ್ಳಾಪುರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‌ಗೆ (Puneeth Rajkumar) ಪ್ರಕೃತಿ ಅಂದ್ರೆ ಪ್ರೀತಿ. ಪ್ರಕೃತಿಯನ್ನೇ ಆರಾಧಿಸಿ ಅವರು ನಟಿಸಿರೋ ʻಗಂಧದಗುಡಿʼ (Gandhada Gudi) ಸಿನಿಮಾ ತೆರೆ ಮೇಲೆ ಬರೋಕೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಲ್ಲೂ ಗಂಧದಗುಡಿ ಸದ್ದು ಕೇಳಿಬರುತ್ತಿದೆ. ಇದೇ ಹೊತ್ತಲ್ಲಿ ಅಪ್ಪುವಿನ ನೆನಪಿನಾರ್ಥಕವಾಗಿ ಅಪ್ಪು ಫ್ಯಾನ್ಸ್ ಗಂಧದಗುಡಿ ರೈಡ್ ಹೊರಟಿದ್ದಾರೆ. ಅಲ್ಲದೇ ಅಪ್ಪುವಿನ ಹೆಸರಲ್ಲಿ ಆಲದ ಸಸಿಗಳನ್ನು ನೆಟ್ಟು ಸಮಾಜಮುಖಿ ಕಾಯಕ ಮಾಡಿದ್ದಾರೆ.

    ಹೌದು, ಬೆಂಗಳೂರಿನ ಮಲ್ಲೇಶ್ವರಂನಿಂದ ಆವಲಬೆಟ್ಟಕ್ಕೆ ಕಾರು ಹಾಗೂ ಬೈಕ್‌ಗಳ ಮೂಲಕ ಬೆಳ್ಳಂಬೆಳಗ್ಗೆ ರೈಡ್ ಫಾರ್ ಅಪ್ಪು ಅಂತ ಗಂಧದಗುಡಿ ರೈಡ್ ಹೊರಟ ಅಭಿಮಾನಿಗಳಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಚಾಲನೆ ನೀಡಿದರು. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

    ಬೆಂಗಳೂರಿನಿಂದ (Bengaluru) ಚಿಕ್ಕಬಳ್ಳಾಪುರ (Chikkaballapura) ಮಾರ್ಗವಾಗಿ ಹೈವೆ 44 ರ ಮೂಲಕ ಅಫ್ಪು ಫ್ಯಾನ್ಸ್ ಆವಲಬೆಟ್ಟಕ್ಕೆ ಆಗಮಿಸಿದರು. ಅಪ್ಪು ನೆನೆಪಿಗಾಗಿ ರೈಡ್ ಅಷ್ಟೇ ಅಲ್ಲದೆ ಆವಲಬೆಟ್ಟದಲ್ಲಿ ಅಪ್ಪು ಹೆಸರಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟು ಅವರ ಹೆಸರು ಅಜರಾಮರವಾಗುವಂತೆ ಮಾಡಿದರು. ಇಂಚರ ಸ್ಟುಡಿಯೋ, ದ್ವಿಚಕ್ರ ಪ್ರೆಸೆಂಟ್ಸ್ ಸಹಯೋಗದೊಂದಿಗೆ ನೂರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಆಗಮಿಸಿದ ಅಪ್ಪು ಅಭಿಮಾನಿಗಳು, ಅರಣ್ಯ ಇಲಾಖೆಯ ಸಹಕಾರದಿಂದ ಆವಲಬೆಟ್ಟದ ಎರಡು ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟರು.

    ಆವಲಬೆಟ್ಟದ ಪ್ರವೇಶದ್ವಾರದ ಬಳಿ ಆಲದ ಸಸಿ ನೆಟ್ಟು ಪೂಜೆ ಪುನಸ್ಕಾರ ಮಾಡಿ ಅಪ್ಪು ಅಂತ ನಾಮಕರಣ ಸಹ ಮಾಡಿದರು. ಬೆಟ್ಟದ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಆಲದ ಸಸಿಗಳನ್ನು ನೆಟ್ಟು ಇಡೀ ದಿನ ಆವಲಬೆಟ್ಟದಲ್ಲೇ ಅಪ್ಪು ನೆನಪಿನಾರ್ಥಕವಾಗಿ ಕಾಲ ಕಳೆದು ಅಪ್ಪುವನ್ನ ನೆನೆದರು. ಇನ್ನೂ ಇದೇ ತಿಂಗಳು 29 ಕ್ಕೆ ಅಪ್ಪು ನಮ್ಮನ್ನ ಆಗಲಿ ಒಂದು ವರ್ಷ ಆಗಲಿದ್ದು, ಮುನ್ನಾ ದಿನವೇ ಅಭಿಮಾನಿಗಳಿಗೆ ಅಪ್ಪು ನಟನೆಯ ಗಂಧದಗುಡಿ ಸಿನಿಮಾ ಗಿಫ್ಟ್ ಆಗಿ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ ಗೆ ಪುನೀತ್ ಹೆಸರಿಡಲು ಮನವಿ

    ಗಂಧದಗುಡಿ ಸಿನಿಮಾಗೆ ಸ್ವಾಗತ ಕೋರುವುದಕ್ಕೆ ಅಪ್ಪುವನ್ನ ಕಣ್ತುಂಬಿಕೊಳ್ಳೋಕೆ ಈಗಾಗಲೇ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಅಪ್ಪುವಂತೆ ಫ್ಯಾನ್ಸ್ ಕೂಡ ಗಂಧದಗುಡಿ ರೈಡ್ ಹೆಸರಲ್ಲಿ ನೂರಾರು ಆಲದ ಸಸಿ ನೆಟ್ಟು ಇತರರಿಗೂ ಮಾದರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಜಾಗೃತಿಗಾಗಿ ಕಾಶ್ಮೀರ ಟು ಕನ್ಯಾಕುಮಾರಿ ರೈಡ್ ಆರಂಭಿಸಿದ ಯುವಕ

    ಕೊರೊನಾ ಜಾಗೃತಿಗಾಗಿ ಕಾಶ್ಮೀರ ಟು ಕನ್ಯಾಕುಮಾರಿ ರೈಡ್ ಆರಂಭಿಸಿದ ಯುವಕ

    ಧಾರವಾಡ: ಸರ್ಕಾರ ಎಷ್ಟೊಂದು ಕೊರೊನಾ ಜಾಗೃತಿ ಮುಡಿಸುತ್ತಿದೆ. ಆದರೂ ಸಹ ಭಾರತದಲ್ಲಿ ಸಾಕಷ್ಟು ಜನ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಹಿನ್ನೆಲೆ ಧಾರವಾಡದ ಯುವಕ ಕೆ2ಕೆ ಬೈಕ್‍ನಲ್ಲಿ ರೈಡ್ ಆರಂಭಿಸಿದ್ದಾರೆ.

    ಧಾರವಾಡದ ವಿಜೇತ್ ಕುಮಾರ್ ಹೊಸಮಠ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಟ್ಟು 6 ಸಾವಿರ ಕಿ.ಮೀಟರ್ ಬೈಕ್ ರೈಡ್ ಮಾಡಲಿದ್ದಾರೆ. ತನ್ನದೇ 97 ಸಿಸಿಯ ಹೀರೋ ಹೊಂಡಾ ಸ್ಪಂಡ್ಲರ್ ಪ್ಲಸ್ ಬೈಕ್ ನಲ್ಲಿ ಈ ರೈಡ್ ಆರಂಭ ಮಾಡಿದ್ದಾರೆ. ಕಳೆದ 11 ರಂದು ಕಾಶ್ಮೀರ ಲೇಹ್ ಲಡಾಕ್‍ನಿಂದ ವಿಜೇತ್ ಬೈಕ್ ರೈಡ್ ಆರಂಭ ಮಾಡಿದ್ದು, ಇವತ್ತು ಪಂಜಾಬ್ ರಾಜ್ಯದ ಭಟಿಂಡಾಗೆ ತಲುಪಿದ್ದಾರೆ. ಇದನ್ನೂ ಓದಿ: ರೈಲ್ವೆ ಉದ್ಯೋಗ ಕೊಡಿಸುವುದಾಗಿ ವಂಚನೆ – ನಾಲ್ವರು ಆರೋಪಿಗಳು ಅರೆಸ್ಟ್

    ಇದೇ ಅ.20 ರಂದು ವಿಜೇತ್ ಕನ್ಯಾಕುಮಾರಿಗೆ ತಲುಪುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಲೇಹ ಲದಾಖ್ ನ ಕಠಿಣ ರಸ್ತೆಗಳನ್ನು ದಾಟಿ ವಿಜೇತ್ ಈಗ ಪಂಜಾಬ್ ರಾಜ್ಯ ತಲಿಪಿದ್ದಾರೆ. ಇನ್ನೂ ಹಲವು ರಾಜ್ಯಗಳನ್ನು ದಾಟಿ ವಿಜೇತ್ ಕನ್ಯಾಕುಮಾರಿ ತಲುಪಬೇಕಿದೆ.

    ಈ ಹಿಂದೆ ಇದೇ ಯುವಕ 2018 ರ ಲೋಕಸಭಾ ಚುನಾವಣೆ ವೇಳೆ ಧಾರವಾಡದಿಂದ ಕನ್ಯಾಕುಮಾರಿವರೆಗೆ ಇದೇ ಬೈಕ್ ಅಲ್ಲಿ 2,800 ಕಿಲೋ ಮೀಟರ್ ಬೈಕ್ ರೈಡ್ ಮಾಡಿದ್ದರು. ಇದನ್ನೂ ಓದಿ: ಕೋಟೆನಾಡಲ್ಲಿ ಮಳೆಯ ಆರ್ಭಟ- ಸೂರಿಲ್ಲದೇ ಬೀದಿಗೆ ಬಿದ್ದ ಕುಟುಂಬಗಳು

  • ಪತ್ನಿ ಜೊತೆ ವಿವೇಕ್ ಒಬೆರಾಯ್ ಔಟಿಂಗ್- ದಾಖಲಾಯ್ತು ಎಫ್‍ಐಆರ್

    ಪತ್ನಿ ಜೊತೆ ವಿವೇಕ್ ಒಬೆರಾಯ್ ಔಟಿಂಗ್- ದಾಖಲಾಯ್ತು ಎಫ್‍ಐಆರ್

    ಮುಂಬೈ: ಪತ್ನಿ ಜೊತೆ ಔಟಿಂಗ್ ಹೋಗುವಾಗ ಹೆಲ್ಮೆಟ್ ಹಾಗೂ ಮಾಸ್ಕ್ ಹಾಕದ್ದಕ್ಕೆ ನಟ ವಿವೇಕ್ ಒಬೆರಾಯ್ ವಿರುದ್ಧ ಪ್ರಕರಣ ದಾಖಲಾಗಿದ್ದು, ದಂಡ ಸಹ ವಿಧಿಸಲಾಗಿದೆ.

    ವ್ಯಾಲೆಂಟೈನ್ಸ್ ಡೇ ದಿನ ಪತ್ನಿ ಜೊತೆ ವಿವೇಕ್ ಒಬೆರಾಯ್ ಔಟಿಂಗ್ ಹೋಗಿದ್ದ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಹೆಲ್ಮೆಟ್ ಹಾಗೂ ಮಾಸ್ಕ್ ಹಾಕದಿರುವುದು ಕಂಡುಬಂದಿದೆ. ಹೀಗಾಗಿ ದಂಡ ಹಾಕಲಾಗಿದೆ.

    ಹೆಲ್ಮೆಟ್ ಹಾಕದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವುದು ಹಾಗೂ ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸದೇ ಸಂಚರಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಯುವಕರನ್ನು ತಪ್ಪು ದಾರಿಗೆ ಎಳೆಯಲು ಪ್ರೋತ್ಸಾಹಿಸಿದಂತಾಗುತ್ತದೆ. ಹೀಗಾಗಿ ದಂಡ ಕಟ್ಟಬೇಕು ಎಂದು ಒತ್ತಾಯಿಸಲಾಗಿತ್ತು.

    ಇದನ್ನು ಗಮನಿಸಿದ ಮುಂಬೈ ಪೊಲೀಸರು ಕ್ರಮ ಕೈಗೊಂಡಿದ್ದು, ಇ-ಚಲನ್ ನೀಡುವ ಮೂಲಕ ದಂಡ ಹಾಕಿದ್ದಾರೆ. ಹೆಲ್ಮೆಟ್ ಧರಿಸದ್ದಕ್ಕೆ ವಿವೇಕ್ ಒಬೆರಾಯ್ ಅವರಿಗೆ 500 ರೂ.ಗಳ ದಂಡದ ಇ-ಚಲನ್‍ನ್ನು ಸ್ಯಾಂತಾಕ್ರೂಜ್ ವಿಭಾಗದ ಪೊಲೀಸರು ನೀಡಿದ್ದಾರೆ. ಶುಕ್ರವಾರ ಸಂಜೆ 7 ಗಂಟೆಗೆ ಅಸಿಸ್ಟೆಂಟ್ ಇನ್‍ಸ್ಪೆಕ್ಟರ್ ನಂದಕಿಶೋರ್ ಯಾದವ್ ಅವರು ಇ-ಚಲನ್ ನೀಡಿದ್ದಾರೆ.

    ದಂಡ ಮಾತ್ರವಲ್ಲದೆ ಮಾಸ್ಕ್ ಧರಿಸದ್ದಕ್ಕೆ ವಿವೇಕ್ ಒಬೆರಾಯ್ ವಿರುದ್ಧ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19ರಂದು ಎಫ್‍ಐಆರ್ ಸಹ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಮೋಟರ್ ವೆಹಿಕಲ್ಸ್ ಆ್ಯಕ್ಟ್‍ನ ಸೆಕ್ಷನ್ 21ರ ಅಡಿ ಸೆಕ್ಷನ್ 129/177 ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಮಹಾರಾಷ್ಟ್ರ ಕೋವಿಡ್-19 ಮೀಶರ್ಸ್ 2020ಯ ಜುಹು ಠಾಣೆಯ ಸಬ್ ಇನ್‍ಸ್ಪೆಕ್ಟರ್ ಕಾಂಬ್ಳೆ ಅವರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಇಂದು ಪೊಲೀಸರು ವಿವೇಕ್ ಒಬೆರಾಯ್ ಅವರ ಮನೆಗೆ ಹೇಳಿಕೆ ಪಡೆಯಲು ತೆರಳಿದ್ದು, ಈ ವೇಳೆ ಅವರು ದೆಹಲಿಗೆ ತರಳಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ದಂಡ ಬಿದ್ದಿದ್ಯಾಕೆ?
    ವ್ಯಾಲೆಂಟೈನ್ಸ್ ಡೇ ದಿನ ನಟ ವಿವೇಕ್ ಒಬೆರಾಯ್ ಅವರು ಹಾರ್ಲೆ ಡೆವಿಡ್ಸನ್ ಬೈಕ್ ಮೇಲೆ ಪತ್ನಿಯನ್ನು ಕೂರಿಸಿಕೊಂಡು ತೆರಳುತ್ತಿದ್ದರು. ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಬಳಿಕ ಈ ವಿಡಿಯೋ ವೈರಲ್ ಆಗಿತ್ತು. ವ್ಯಾಲೆಂಟೈನ್ಸ್ ಡೇ ಹೇಗೆ ಆರಂಭಿಸಬೇಕು ಎನ್ನುತ್ತಲೇ ನಾನು ನನ್ನ ಪತ್ನಿ ಜಾಯ್ ರೈಡ್ ಮೂಲಕ ರಿಫ್ರೆಶ್ ಆಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.

  • ರೈಲು ಬರ್ತಿದ್ದಾಗಲೇ ದಾಟಲು ಮುಂದಾದ – ಟ್ರ್ಯಾಕ್‍ನಲ್ಲಿ ಸಿಲುಕಿ ಬೈಕ್ ಜಖಂ

    ರೈಲು ಬರ್ತಿದ್ದಾಗಲೇ ದಾಟಲು ಮುಂದಾದ – ಟ್ರ್ಯಾಕ್‍ನಲ್ಲಿ ಸಿಲುಕಿ ಬೈಕ್ ಜಖಂ

    – ಭಯಾನಕ ವೀಡಿಯೋ ವೈರಲ್

    ಹೈದರಾಬಾದ್: ರೈಲ್ವೆ ಕ್ರಾಸಿಂಗ್ ವೇಳೆ ಅಸಡ್ಡೆ ತೋರಿಸುವ ಮಂದಿಗೆ ಭಾರತೀಯ ರೈಲ್ವೆ ಇಲಾಖೆ ಹಲವಾರು ಎಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದೆ. ಆದರೂ ವ್ಯಕ್ತಿಯೊಬ್ಬ ರೈಲ್ವೆ ಗೇಟ್ ಹಾಕಿದ್ದರೂ ಹಳಿ ದಾಟಲು ಮುಂದಾಗಿ ಬೈಕರ್ ಅಪಘಾತದಿಂದ ಅಚಾನಕ್ ಆಗಿ ತಪ್ಪಿಸಿಕೊಂಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬೈಕರ್ ಒಬ್ಬ ರೈಲ್ವೆ ಗೇಟ್ ಹಾಕಿದ್ದರೂ ಕೂಡ ಹಳಿದಾಟಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ರೈಲನ್ನು ನೋಡಿ ಬ್ರೇಕ್ ಹಾಕಿದ್ದಾನೆ. ಆದರೆ ನಿಯಂತ್ರಣ ಕಳೆದುಕೊಂಡ ಬೈಕ್ ಟ್ರ್ಯಾಕ್ ನಲ್ಲಿ ಸಿಲುಕಿ ಛಿದ್ರ ಛಿದ್ರವಾಗಿದೆ. ಅದೃಷ್ಟವಶಾತ್ ಬೈಕಿನಿಂದ ವ್ಯಕ್ತಿ ಹಾರಿದ ಪರಿಣಾಮ ಆತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಟ್ರ್ಯಾಕ್ ನಲ್ಲಿ ಸಿಲುಕಿಕೊಂಡ ಬೈಕ್ ಜಖಂ ಆಗಿದೆ.

    ಇದೀಗ ಈ ಭಯಾನಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲ ನೆಟ್ಟಿಗರು ಬೈಕ್ ಸವಾರ ತನ್ನ ಜೀವಕ್ಕೆ ಅಪಾಯ ತಂದಿಟ್ಟುಕೊಂಡಿದ್ದಲ್ಲದೆ ಅಲ್ಲಿದ್ದ ಸ್ಥಳೀಯರ ಜೀವ ಕೂಡ ಬಾಯಿಗೆ ಬರುವಂತೆ ಮಾಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ.