Tag: bike rally

  • ಮಂಗಳೂರು ಚಲೋಗೆ ‘ಹ್ಯಾಂಡ್’ ಬ್ರೇಕ್: ಶನಿವಾರ ಕರ್ನಾಟಕ ಬಂದ್?

    ಮಂಗಳೂರು ಚಲೋಗೆ ‘ಹ್ಯಾಂಡ್’ ಬ್ರೇಕ್: ಶನಿವಾರ ಕರ್ನಾಟಕ ಬಂದ್?

    ಬೆಂಗಳೂರು: ಯುವ ಮೋರ್ಚಾದ ಮಂಗಳೂರು ಚಲೋ ಬೈಕ್ ರ‍್ಯಾಲಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರಾಜ್ಯ ಬಿಜೆಪಿ ನಾಯಕರು ಸೆಪ್ಟೆಂಬರ್ 9 ರಂದು ಕರ್ನಾಟಕ ಬಂದ್ ನಡೆಸಲು ಚಿಂತನೆ ನಡೆಸಿದ್ದಾರೆ.

    ಬೆಂಗಳೂರು ಮತ್ತು ರಾಜ್ಯದ ಹಲವು ಕಡೆಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮವನ್ನು ಟೀಕಿಸಿ ಬಂದ್ ಕರೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

    ಏನಿದು ಮಂಗಳೂರು ಚಲೋ? ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿತ್ತು. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಈ ರ‍್ಯಾಲಿಯನ್ನು ಬಿಜೆಪಿ ಆಯೋಜಿಸಿತ್ತು.

    https://youtu.be/6vmiYWGCGow

    https://youtu.be/VO7l6AMHDww

    https://youtu.be/CDVIA-TBxKk

    https://twitter.com/ShobhaBJP/status/904911381194915840

     

     

  • ಕರಂದ್ಲಾಜೆ ಹಿಂದೂಗಳ ಪರ ಇಲ್ಲ `ಇವ್ರ’ ಪರ ಇದ್ದಾರೆ: ಸಿಎಂ

    ಕರಂದ್ಲಾಜೆ ಹಿಂದೂಗಳ ಪರ ಇಲ್ಲ `ಇವ್ರ’ ಪರ ಇದ್ದಾರೆ: ಸಿಎಂ

    ಬೆಂಗಳೂರು: ಶೋಭಾ ಕರಂದ್ಲಾಜೆ ಹಿಂದೂಗಳ ಪರ ಇಲ್ಲ. ಸಮಾಜ ಹಾಳು ಮಾಡುವವರ ಪರ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬಿಜೆಪಿ ಮಂಗಳೂರು ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವ ಪರವಾಗಿಲ್ಲ. ಶಾಂತಿ ಕದಡುವ ಪ್ರಯತ್ನ ಮಾಡ್ತಿದ್ದಾರೆ. ಬೈಕ್ ರ‍್ಯಾಲಿಯಿಂದ ಸಾಮರಸ್ಯ ಹಾಳಾಗುತ್ತೆ ಅಂದ್ರು.

    ಇದನ್ನೂ ಓದಿ: ಬಿಜೆಪಿಯ ‘ಸ್ಟಾರ್’ಗಳು ಇವರಂತೆ: ದರ್ಶನ್ ಕೈ ಸೇರ್ಪಡೆಗೆ ಸಿಟಿ ರವಿ ಹೇಳಿದ್ದು ಹೀಗೆ

    ಬೈಕ್ ರ‍್ಯಾಲಿಯಿಂದಾಗಿ ಟ್ರಾಫಿಕ್ ಗೆ ತೊಂದರೆಯಾಗುತ್ತೆ, ಹಾಗಾಗಿ ಬೈಕ್ ರ‍್ಯಾಲಿಗೆ ಅನುಮತಿ ನೀಡಿಲ್ಲ. ಸಮಾವೇಶಕ್ಕೆ ನಮ್ಮ ಅಭ್ಯಂತರವಿಲ್ಲ. ಮಂಗಳೂರು ಚಲೋ ಮಾಡೋ ಬದಲು ದೆಹಲಿ ಚಲೋ ಮಾಡಲಿ ನಾವು ಕೈ ಜೋಡಿಸುತ್ತೇವೆ. ರೈತರ ಸಾಲ ಮನ್ನಾಕ್ಕಾಗಿ ದೆಹಲಿ ಚಲೋ ಮಾಡಲಿ. ನಾವು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ವಿ. ಬೇಕಿದ್ರೆ ಪಾದಯಾತ್ರೆ ಮಾಡಿಕೊಳ್ಳಲಿ. ನಮ್ಮ ಅಭ್ಯಂತರ ಇಲ್ಲ. ಶಾಂತಿ ಕದಡುವ ಯಾವುದೇ ಕೆಲಸವನ್ನ ಸರ್ಕಾರ ಸಹಿಸಲ್ಲ ಎಂದರು.

    ಯಾರಪ್ಪ ಬಂದ್ರು ರ‍್ಯಾಲಿ ತಡೆಯೊಲ್ಲ ಅನ್ನೊ ಬಿಎಸ್ ವೈ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, ಯಡಿಯೂರಪ್ಪ ಹಾಗೇ ಏಕವಚನ ದಲ್ಲಿ ನನಗೆ ಮಾತನಾಡಲು ಬರಲ್ಲ. ಅವರ ಭಾಷೆ, ಕೆಟ್ಟಪದ ನಮಗೆ ಬರಲ್ಲ. ಅವರು ಶಾಂತಿ ಕಾಪಾಡುವ ಪರ ಇಲ್ಲ ಎಂದರು.

    https://www.youtube.com/watch?v=nWAl5y1BfXw

    https://www.youtube.com/watch?v=CDVIA-TBxKk

     

  • ಮಂಗಳೂರು ರ‍್ಯಾಲಿಗೆ ಕ್ಷಣಗಣನೆ-ಕಾವೇರ್ತಿದೆ ಕರಾವಳಿ ಕದನ

    ಮಂಗಳೂರು ರ‍್ಯಾಲಿಗೆ ಕ್ಷಣಗಣನೆ-ಕಾವೇರ್ತಿದೆ ಕರಾವಳಿ ಕದನ

    ಬೆಂಗಳೂರು: ಕಾಂಗ್ರೆಸ್-ಬಿಜೆಪಿ ಮಧ್ಯೆ ಇವತ್ತು ಕರಾವಳಿ ಕದನ ನಡೆಯಲಿದೆ. ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಖಂಡನೆ ಜೊತೆಗೆ ಸಚಿವ ರಮಾನಾಥ್ ರೈ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇವತ್ತು ಮಂಗಳೂರು ಚಲೋ ರ್ಯಾಲಿ ಹಮ್ಮಿಕೊಂಡಿದೆ.

    ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮಂಗಳೂರು, ಹುಬ್ಬಳ್ಳಿ, ಹಾಸನ, ಚಿಕ್ಕಬಳ್ಳಾಪುರ, ನೆಲಮಂಗಲ, ಚಾಮರಾಜನಗರ, ಕಲಬುರಗಿ, ಉಡುಪಿಗಳಲ್ಲಿ ಜಿಲ್ಲಾ ಎಸ್‍ಪಿಗಳು ಅನುಮತಿ ನಿರಾಕರಿಸಿದ್ದಾರೆ. ರ‍್ಯಾಲಿಗೆ ತಡೆ ನೀಡದಂತೆ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಬಿಜೆಪಿ ಮನವಿ ಸಲ್ಲಿಸಿದೆ. ಇನ್ನು ರ‍್ಯಾಲಿಗೆ ತೊಂದರೆ ಕೊಡ್ಬೇಡಿ. ಬಾಲ ಬಿಚ್ಚಿದ್ರೆ ಕಟ್ ಮಾಡಿ ಅಂತಾ ಸಿಎಂ ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಇವತ್ತಿನಿಂದ ಮಂಗಳೂರು ಚಲೋ ಆರಂಭವಾಗಲಿದೆ. ಪೊಲೀಸರ ಅನುಮತಿ ನಿರಾಕರಣೆಯ ನಡುವೆಯೂ ರ‍್ಯಾಲಿ ನಡೆಸಲು ಬಿಜೆಪಿ ಮುಂದಾಗಿದೆ. ಒಟ್ಟು 5 ವಿಭಾಗಗಳಿಂದ ಬೈಕ್ ರ‍್ಯಾಲಿ ಹೊರಡಲಿದ್ದು, ಇವತ್ತು ಬೆಂಗಳೂರು, ಹುಬ್ಬಳ್ಳಿಯಿಂದ ರ್ಯಾಲಿ ಹೊರಟ್ರೆ, ಸೆಪ್ಟಂಬರ್ 6 ರಂದು ಮೈಸೂರು, ಉಡುಪಿ, ಶಿವಮೊಗ್ಗದಿಂದ ರ‍್ಯಾಲಿ ಹೊರಡಲಿದೆ. ಎಲ್ಲಾ ರ‍್ಯಾಲಿಗಳು ಸೆಪ್ಟಂಬರ್ 6 ರಂದು ರಾತ್ರಿ ಉಪ್ಪಿನಂಗಡಿಯಲ್ಲಿ ಸಮಾವೇಶಗೊಳ್ಳಲಿದ್ದು, ಸೆಪ್ಟಂಬರ್ 7 ರಂದು 5 ವಿಭಾಗಗಳ ರ‍್ಯಾಲಿ ಮಂಗಳೂರು ಪ್ರವೇಶಿಸಲಿದೆ. ಬೆಂಗಳೂರಿನಲ್ಲಿ ಇವತ್ತು ಫ್ರೀಡಂ ಪಾರ್ಕ್ ನಲ್ಲಿ ರ‍್ಯಾಲಿಗೆ ಚಾಲನೆ ಸಿಗಲಿದೆ.

    ಇನ್ನು ಬೆಂಗಳೂರಿನಿಂದ ಹೊರಡುವ ರ‍್ಯಾಲಿಯ ರೂಟ್ ಮ್ಯಾಪ್ ಇಲ್ಲಿದೆ.

    > ಇವತ್ತು ಬೆಳಗ್ಗೆ 10.30ಕ್ಕೆ ಸಮಾವೇಶ, ಫ್ರೀಂಡಪಾರ್ಕ್ ಬೆಂಗಳೂರು.
    > 11ಕ್ಕೆ ಹೊರಡಲಿರುವ ಬಿಜೆಪಿ ಬೈಕ್ ರ‍್ಯಾಲಿ.
    > ಮಧ್ಯಾಹ್ನ 1ಕ್ಕೆ ನೆಲಮಂಗಲದಲ್ಲಿ ಮಂಗಳೂರು ಚಲೋ ಸಮಾವೇಶ.
    > ಕುಣಿಗಲ್ ಬೈಪಾಸ್ ಮೂಲಕ ಹಾಸನಕ್ಕೆ ಪ್ರಯಾಣ.
    > ಹಾಸನದಲ್ಲಿ ಇವತ್ತು ರಾತ್ರಿ ವಾಸ್ತವ್ಯ.
    > ಸೆ.6 ಕ್ಕೆ ಸಕಲೇಶಪುರದ ಮೂಲಕ ಮಂಗಳೂರಿನತ್ತ ಪ್ರಯಾಣ.
    > ಸೆ.6ಕ್ಕೆ ರಾತ್ರಿ ಉಪ್ಪಿನಂಗಡಿಯಲ್ಲಿ ವಾಸ್ತವ್ಯ.
    > ಸೆಪ್ಟಂಬರ್ 7ಕ್ಕೆ ಮಂಗಳೂರು ಪ್ರವೇಶಿಸಲಿರುವ ರ್ಯಾಲಿ.
    > ಸೆಪ್ಟಂಬರ್ 7ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶ, ರಾಜ್ಯ ಬಿಜೆಪಿ ನಾಯಕರು ಭಾಗಿ

    ಬಿಜೆಪಿಯ ಮಂಗಳೂರು ಚಲೋ ರ‍್ಯಾಲಿ ಮತ್ತು ಸಮಾವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಲು ಕಾರಣಗಳು ಹೀಗಿವೆ.

    * ರ‍್ಯಾಲಿ ವೇಳೆ ದುಷ್ಕರ್ಮಿಗಳು ದಾಳಿ ಮಾಡುತ್ತಾರೆಂಬ ಗುಪ್ತಚರ ಇಲಾಖೆ ಮಾಹಿತಿ (ಪ್ರಮುಖ ಕಾರಣ)
    * ನೋಟಿಸ್ ನೀಡಿ ಕೆಲವೊಂದು ಮಾಹಿತಿ ಕೇಳಲಾಗಿತ್ತು, ಆದ್ರೆ ಈವರೆಗೆ ಮಾಹಿತಿ ನೀಡಿಲ್ಲ.
    * ನಗರದಲ್ಲಿ ಯಾವುದೇ ಸಭೆ, ಮೆರವಣಿಗೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
    * 1000 ಬೈಕ್‍ಗಳು ರ‍್ಯಾಲಿಯಲ್ಲಿ ಭಾಗಿಯಾದ್ರೆ ಸಂಚಾರ ದಟ್ಟಣೆಯಾಗುತ್ತದೆ, ಜನರಿಗೆ ತೊಂದರೆಯಾಗುತ್ತದೆ.
    * ರ‍್ಯಾಲಿ ವೇಳೆ ಇತರೆ ವಾಹನಗಳೊಂದಿಗೆ ಅಪಘಾತ ಉಂಟಾದ್ರೆ ಸಾರ್ವಜನಿಕೆ ನೆಮ್ಮದಿಗೆ ಭಂಗ.
    * ಬೈಕ್ ರ‍್ಯಾಲಿ ಹಿನ್ನೆಲೆಯಲ್ಲಿ ನಗರದ ಸಂಚಾರಿ ವಿಭಾಗದಿಂದಲೂ ಅನುಮತಿ ಪಡೆದಿಲ್ಲ.
    * ಬೈಕ್ ರ‍್ಯಾಲಿಗೆ ಏಕಕಾಲದಲ್ಲಿ ಪೊಲೀಸರನ್ನ ನಿಯೋಜಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗುತ್ತದೆ.

    ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲಿರುವ ಬಿಎಸ್ ವೈ, ಬಳಿಕ ಬೈಕ್ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರು ರ‍್ಯಾಲಿಗೆ ಮಂಗಳೂರಿನತ್ತ ತೆರಳಲಿದೆ. ಆದ್ರೆ ಫ್ರೀಡಂ ಪಾರ್ಕ್ ಸಮಾವೇಶಕ್ಕೆ, ಬೆಂಗಳೂರಿನಲ್ಲಿ ಬೈಕ್ ರ್ಯಾಲಿ ಹೊರಡಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

     

  • ಶಾಶ್ವತ ನೀರಾವರಿಗೆ ಆಗ್ರಹಿಸಿ ರೈತರ ಬೈಕ್ ಮೆರವಣಿಗೆ- ಬೆಂಗ್ಳೂರಿಗೆ ಬಾರದಂತೆ ತಡೆಯಲು ಸನ್ನದ್ಧರಾದ ಪೊಲೀಸರು

    ಶಾಶ್ವತ ನೀರಾವರಿಗೆ ಆಗ್ರಹಿಸಿ ರೈತರ ಬೈಕ್ ಮೆರವಣಿಗೆ- ಬೆಂಗ್ಳೂರಿಗೆ ಬಾರದಂತೆ ತಡೆಯಲು ಸನ್ನದ್ಧರಾದ ಪೊಲೀಸರು

    ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಇಂದು ಬಯಲು ಸಿಮೆಯ ಸಾವಿರಾರು ರೈತರು ರೈತರು ಬೆಂಗಳೂರಿಗೆ ಬೈಕ್ ಮೆರವಣಿಗೆ ಬರುತ್ತಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆ ಹಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ

    ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನ ರೈತರು ಬೆಂಗಳೂರಿನತ್ತ ಹೊರಟಿದ್ದು ಬಿಗಿ ಭದ್ರತೆ ಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ಎಲ್ಲೆಡೆ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೀಯೋಜಿಸಲಾಗಿದೆ.

    ತುಮಕೂರಿನಿಂದ ಆಗಮಿಸುತ್ತಿದ್ದ ರೈತರನ್ನು ನೆಲಮಂಗಲದ ನವಯುಗ ಟೋಲ್ ಬಳಿ ವಶಕ್ಕೆ ಪಡೆಯಲಾಗಿದೆ. ದೇವನಹಳ್ಳಿ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಆಸುಪಾಸು ಭದ್ರತೆ ಕೈಗೊಳ್ಳಲಾಗಿದೆ.

    ನಂದಿ ಬೆಟ್ಟದ ಕ್ರಾಸ್‍ನಲ್ಲೇ ರೈತರನ್ನು ತಡೆಯಲು ಪೊಲೀಸರು ಸನ್ನದ್ಧರಾಗಿದ್ದಾರೆ. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ರೈತರ ಮೆರವಣಿಗೆ ತಡೆಯಲು ಮುಂದಾಗಿದ್ದಾರೆ. 20 ಕೆಎಸ್‍ಆರ್‍ಪಿ ತುಕಡಿ, ಮೂರು ವಾಟರ್ ಜೆಟ್, 1500 ಪೊಲೀಸರನ್ನ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್‍ನಲ್ಲೂ ಕೂಡ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.