Tag: Bihar

  • 2019ರಲ್ಲಿ ಬಿಜೆಪಿ ಸೋಲಿಸಲು ಲಾಲೂ ಪ್ರಸಾದ್ ಯಾದವ್ ಐಡಿಯಾ

    2019ರಲ್ಲಿ ಬಿಜೆಪಿ ಸೋಲಿಸಲು ಲಾಲೂ ಪ್ರಸಾದ್ ಯಾದವ್ ಐಡಿಯಾ

    ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿಯನ್ನು ಕಟ್ಟಿ ಹಾಕುವುದು ಹೇಗೆ ಎಂದು ಪ್ರತಿಪಕ್ಷಗಳು ಆಲೋಚಿಸುತ್ತಿರುವಾಗ ಬಿಹಾರದ ಆರ್‍ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಮಹಾಘಟಬಂಧನ್ ಮಾಡಿದ್ರೆ ಸಾಧ್ಯವಿದೆ ಎಂದು ಹೇಳಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ಬಿಹಾರದಲ್ಲಿ ಕಾಂಗ್ರೆಸ್, ಆರ್‍ಜೆಡಿ, ಜೆಡಿಯು ಮೈತ್ರಿಯಿಂದ ಬಿಜೆಪಿಗೆ ಸೋಲಾಗಿದೆ. ಈ ಮಹಾಘಟಬಂಧನ್ ಮತ್ತಷ್ಟು ವಿಸ್ತರಿಸಬೇಕು. ಪಶ್ಚಿಮಬಂಗಾಳದಲ್ಲಿ ಟಿಎಂಸಿ, ಉತ್ತರ ಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿ, ಸೇರಿದ್ರೆ ಬಿಜೆಪಿಯನ್ನು ಸೋಲಿಸಬಹುದು ಎಂದು ಅವರು ಹೇಳಿದ್ದಾರೆ.

    ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬಿಹಾರದಲ್ಲಿ ಬಿಜೆಪಿಗೆ ಸೋಲಾಗಿದೆ. ಉತ್ತರಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿ, ಕಾಂಗ್ರೆಸ್ ಒಂದಾದರೆ ಶೇಖಡಾವಾರು ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿಗೆ ಸೋಲಾಗಬಹುದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಇರುವ ಕಾರಣ ಅಲ್ಲೂ ಬಿಜೆಪಿಗೆ ಕಷ್ಟವಿದೆ ಎಂದು ಅವರು ತಿಳಿಸಿದ್ದಾರೆ.

    ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿ, ಮಾಯಾವತಿ, ಅಖಿಲೇಶ್ ಯಾದವ್ ಅವರನ್ನು ಬಿಜೆಪಿ ಶೋಷಣೆ ಮಾಡಿದೆ. ಹೀಗಾಗಿ ಈ ಮೈತ್ರಿ ವಿಚಾರದ ಬಗ್ಗೆ ನಾನು ಮಾಯಾವತಿ ಜೊತೆ ಮಾತನಾಡಿದ್ದೇನೆ. ಒಂದು ವೇಳೆ ಮೈತ್ರಿ ಯಶಸ್ವಿಯಾದರೆ ಉತ್ತರ ಭಾರತದಲ್ಲಿ ಪೂರ್ವದಿಂದ ಪಶ್ಚಿಮದವರೆಗಿನ ಬಿಜೆಪಿ ಬಲ ಕುಗ್ಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇದೇ ವೇಳೆ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಮಧ್ಯೆ ಮನಸ್ತಾಪ ಇದೆ. ಕೇರಳದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟರು.

    2017ರ ಉತ್ತರಪ್ರದೇಶ ಚುನಾವಣೆಯ 403 ಸ್ಥಾನಗಳ ಪೈಕಿ ಬಿಜೆಪಿ 312, ಎಸ್‍ಪಿ 47, ಬಿಎಸ್‍ಪಿ 19, ಕಾಂಗ್ರೆಸ್ 7ರಲ್ಲಿ ಜಯಗಳಿಸಿತ್ತು. ಶೇಖಡವಾರು ಮತಗಳಿಕೆಯಲ್ಲಿ ಬಿಜೆಪಿಗೆ ಶೇ.39.7,ಬಿಎಸ್‍ಪಿ ಶೇ.22.2, ಎಸ್‍ಪಿ ಶೇ.21.8, ಕಾಂಗ್ರೆಸ್ ಶೇ.6.3ರಷ್ಟು ಪಾಲು ಪಡೆದುಕೊಂಡಿತ್ತು.

  • ಮಗು ಏಲಿಯನ್‍ನಂತಿದೆ ಎಂದು ಹಾಲುಣಿಸಲು ನಿರಾಕರಿಸಿದ ತಾಯಿ!

    ಮಗು ಏಲಿಯನ್‍ನಂತಿದೆ ಎಂದು ಹಾಲುಣಿಸಲು ನಿರಾಕರಿಸಿದ ತಾಯಿ!

    – ಬಿಹಾರದಲ್ಲಿ ವಿರೂಪಗೊಂಡ ಮಗು ಜನನ
    – ಹನುಮಾನ್ ಅವತಾರ ಅಂತಿದ್ದಾರೆ ಸ್ಥಳೀಯರು

    ಪಾಟ್ನಾ: ಬಿಹಾರದ ಕತಿಹಾರ್‍ನಲ್ಲಿ ಮಹಿಳೆಯೊಬ್ಬರು ವಿರೂಪಗೊಂಡ ಮಗುವಿಗೆ ಜನ್ಮ ನೀಡಿದ್ದಾರೆ.

    ನಾಲ್ಕು ಮಕ್ಕಳ ತಾಯಿಯಾಗಿರೋ 35 ವರ್ಷದ ಖಾಲಿದಾ ಬೇಗಂ ಜನ್ಮ ನೀಡಿರೋ ಈ ಮಗುವಿನ ತಲೆ ಮುದುರಿ ಹೋಗಿದ್ದು, ಕಣ್ಣುಗಳು ಉಬ್ಬಿಕೊಂಡಿವೆ. ತಾನೇ ಜನ್ಮ ನೀಡಿರೋ ಮಗುವಿನ ರೂಪ ಕಂಡು ತಾಯಿ ಖಲೀದಾ ಶಾಕ್ ಆಗಿದ್ರು. ಮಗು ನೋಡಲು ಏಲಿಯನ್ ರೀತಿ ಇದೆ ಎಂದು ಹೇಳಿ ಮೊದಲಿಗೆ ಹಾಲುಣಿಸೋದಕ್ಕೂ ನಿರಾಕರಿಸಿದ್ದರು.

    ಮಗುವಿನ ಅನೇಕ ಅಂಗಾಗಗಳು ಸರಿಯಾಗಿ ಬೆಳವಣಿಗೆ ಹೊಂದಿಲ್ಲ. ಡೆಲಿವರಿ ಆದ ನಂತರ ಮೊದಲ ಬಾರಿಗೆ ನಾನು ಮಗು ನೋಡಿ ಶಾಕ್ ಆದೆ. ತುಂಬಾ ಬೇಜಾರಾಗಿ ಮಗುವನ್ನು ನನ್ನ ಕಣ್ಣಿಂದ ದೂರ ಕರೆದುಕೊಂಡು ಹೋಗಿ ಎಂದು ಹೇಳಿದೆ ಅಂತ ಖಲೀದಾ ಹೇಳಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ಖಾಲಿದಾ ಮಗುವನ್ನ ತಿರಸ್ಕರಿಸಿದ್ರೂ, ಮಗುವಿನ ತಂದೆ ಮೊಹಮ್ಮದ್ ಇಮ್ತಿಯಾಸ್ ಸೇರಿದಂತೆ ಇಲ್ಲಿನ ಸ್ಥಳೀಯರು ಇದು ಹನುಮಾನ್ ಅವತಾರ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

    ವೈದ್ಯರ ಪ್ರಕಾರ ನವಜಾತ ಮಗುವಿಗೆ ಹರ್ಲೆಕ್ವಿನ್ ಇಕ್ತ್ಯೋಸಿಸ್ ಎಂಬ ಅನುವಂಶಿಕ ತೊಂದರೆಯಿದ್ದು, ಈ ಸಮಸ್ಯೆ ಇರುವವರಿಗೆ ಚರ್ಮ ದಪ್ಪವಾಗಿ ಅಂಗಾಂಗಗಳು ವಿರೂಪಗೊಂಡಿರುತ್ತವೆ. ಅಲ್ಲದೆ ಈ ಮಗುವಿಗೆ ಅನಾನ್ಸೆಫಲಿ ತೊಂದರೆ ಇರಬಹುದು ಎಂದು ಕೂಡ ತಜ್ಞರು ಊಹಿಸಿದ್ದಾರೆ.