Tag: Bigg Boss Second Innings

  • ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

    ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

    ಬಿಗ್ ಬಾಸ್ ಎಲಿಮಿನೇಟ್ ಆಟ ಸ್ಪರ್ಧಿಗಳನ್ನೆಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಆದರೆ ವೀಕ್ಷಕರಿಗೆ ಹಾಗೂ ಬಿಗ್‍ಬಾಸ್‍ಗೆ ಮಾತ್ರ ಫುಲ್ ಮನರಂಜನೆ ಸಿಗುತ್ತಿದೆ. ಒಟ್ನಲ್ಲಿ ಮನಯೊಳಗೆ ಏನೇನೋ ಆಗುತ್ತಿದೆ.

    ಭಾನುವಾರ ಪ್ರಶಾಂತ್ ಸಂಬರಗಿ ಎಲಿಮಿನೇಟ್ ಪ್ರ್ಯಾಂಕ್ ಎಂಬುದು ಆರಂಭದಲ್ಲಿ ಬಿಗ್ ಬಾಸ್ ವೀಕ್ಷಕರಿಗೆ ತಿಳಿಸಿದ್ದರು. ಬಳಿಕ ಇದನ್ನು ಮನೆಯವರಿಗೂ ತಿಳಿಸಲಾಯಿತು. ಆದರೆ ಈ ವೇಳೆ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್‍ನ್ನು ಬಿಗ್ ಬಾಸ್ ನೀಡಿದ್ದರು. ಸ್ಪರ್ಧಿಗಳಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರಲ್ಲೂ ಆತಂಕ, ದುಗುಡ ಎದುರಾಗಿದೆ.

    ಈ ವಾರ ಯಾರೂ ಎಲಿಮಿನೇಟ್ ಆಗಿಲ್ಲ, ಪ್ರಶಾಂತ್ ಸಂಬರಗಿ ಎಲಿಮಿನೇಟ್ ಕೂಡ ಪ್ರ್ಯಾಂಕ್ ಎಂದು ಬಿಗ್ ಬಾಸ್ ಈಗಾಗಲೇ ಖಚಿತಪಡಿಸಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತಿದ್ದರೂ ಬಿಗ್ ಬಾಸ್ ಮಾತ್ರ ಚೆನ್ನಾಗಿ ಆಟ ಆಡಿಸಿದ್ದರು. ಇದು ಬಿಗ್ ಮನೆಯ ಸ್ಪರ್ಧಿಗಳಿಗೆ ಪ್ರಾಣಸಂಕಟವಾಗಿ ಕಾಡಿತ್ತು.

    ಹೌದು ಪ್ರಶಾಂತ್ ಸಂಬರಗಿ ಮನೆಯಲ್ಲಿದ್ದರೂ ಇನ್‍ವಿಸಿಬಲ್, ಯಾರಿಗೂ ಕಾಣಲ್ಲ. ಸ್ಪರ್ಧಿಗಳು ಅವರಿಲ್ಲ ಎಂದೇ ಭಾವಿಸಿ ಆಟವಾಡಬೇಕು ಎಂದು ಷರತ್ತು ವಿಧಿಸಿದ್ದರು. ಹೀಗಾಗಿ ಪ್ರಶಾಂತ್ ಸಂಬರಗಿ ಪರದಾಡುವಂತಾಗಿತ್ತು. ಯಾಕೆ ಮಾತನಾಡಿಸುತ್ತಿಲ್ಲ ಎಂದು ಸ್ಪರ್ಧಿಗಳೆಲ್ಲರನ್ನೂ ಸಂಬರಗಿ ಹಿಡಿದು ಕೇಳುತ್ತಿದ್ದರು. ಆದರೆ ಯಾರೂ ಉತ್ತರಿಸುವ ಸ್ಥಿತಿಯರಲಿಲ್ಲ.

    ಎಲ್ಲರನ್ನೂ ಮಾತನಾಡಿಸಿ ಸುಸ್ತಾದ ಪ್ರಶಾಂತ್ ಸಂಬರಗಿ, ಕೊನೆಗೆ ಶುಭ ಪೂಂಜಾ ಅವರನ್ನು ಮಾತನಾಡಿಸಿ, ಎಲ್ಲರೂ ಯಾಕೆ ಹೀಗೆ ಮಾಡುತ್ತಿದ್ದೀರಿ, ಇಷ್ಟೇನಾ ಸ್ನೇಹ, ಪ್ರೀತಿ, ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಶುಭಾ ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆದರೆ ಶುಭ ಮಾತ್ರ ಏನೂ ಮಾತನಾಡಿಲ್ಲ, ಹೀಗಾಗಿ ಪ್ರಶಾಂತ್ ಸಂಬರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಕೊನೆಗೆ ಬಿಗ್ ಬಾಸ್ ಪ್ರಶಾಂತ್ ಸಂಬರಗಿ ಅನುಮಾನವನ್ನು ಪರಿಹಿರಿಸಿ ಇದು ಪ್ರ್ಯಾಂಕ್ ಎಂದು ತಿಳಿಸಿದ್ದಾರೆ. ಈ ವಿಚಾರ ತಿಳಿಯತ್ತಿದ್ದಂತೆ ಸಂಬರಗಿ ನಕ್ಕಿದ್ದರೆ ಚಂದ್ರಚೂಡ್, ಅರವಿಂದ್, ದಿವ್ಯಾ, ವೈಷ್ಣವಿ, ಶಮಂತ್ ಸಂಬರಗಿಯನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಬಿಗ್‍ಬಾಸ್ ಈ ಆಟಕ್ಕೆ ಸಂಬರಗಿ ಸುಸ್ತಾಗಿದ್ದು ಮಾತ್ರ ನಿಜ.

  • ನಿಮ್ಮಿಬ್ಬರಲ್ಲಿ ಒಬ್ಬರು ಮನೆಯಲ್ಲಿರಬೇಕು, ಯಾರನ್ನು ಆಯ್ಕೆ ಮಾಡುತ್ತೀರಿ- DU ಗೆ ಕಿಚ್ಚನ ಪ್ರಶ್ನೆ

    ನಿಮ್ಮಿಬ್ಬರಲ್ಲಿ ಒಬ್ಬರು ಮನೆಯಲ್ಲಿರಬೇಕು, ಯಾರನ್ನು ಆಯ್ಕೆ ಮಾಡುತ್ತೀರಿ- DU ಗೆ ಕಿಚ್ಚನ ಪ್ರಶ್ನೆ

    – ನಯವಾಗಿಯೇ ಉತ್ತರಿಸಿದ ದಿವ್ಯಾ ಉರುಡುಗ

    ಬಿಗ್ ಬಾಸ್ 2ನೇ ಇನ್ನಿಂಗ್ಸ್ ಆರಂಭವಾಗಿದೆ, ಸ್ಪರ್ಧಿಗಳ ಹಾರಾಟ, ಚೀರಾಟ ಜೋರಾಗಿದೆ. ಜಗಳ, ಸೆಂಟಿಮೆಂಟ್, ಕಾಡಿಮಿ ಮೂಲಕ ಮನರಂಜಿಸುತ್ತಿದ್ದಾರೆ. ಆದರೆ ಇದರ ಜೊತೆಗೆ 2ನೇ ಇನ್ನಿಂಗ್ಸ್ ನ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ಫುಲ್ ಕಿಕ್ ನಿಡುತ್ತಿದೆ. ಇದೀಗ ಕಿಚ್ಚ ಸುದೀಪ್ ದಿವ್ಯಾ ಉರುಡುಗ ಅವರಿಗೆ ಕೇಳಿದ ಪ್ರಶ್ನೆ ಸಹ ಸಖತ್ ಕುತೂಹಲ ಮುಡಿಸಿದೆ. ಇದಕ್ಕೆ ದಿವ್ಯಾ ಸಹ ನಯವಾಗಿಯೇ ಉತ್ತರಿಸಿದ್ದಾರೆ.

    ಈ ಕುರಿತು ಪ್ರೊಮೋ ಬಿಡುಗಡೆಯಾಗಿದ್ದು, ಇದರಲ್ಲಿ ಕಿಚ್ಚ ಸುದೀಪ್ ಅವರು ದಿವ್ಯಾ ಉರುಡುಗ ಅವರಿಗೆ ಅಚ್ಚರಿಯ ಪ್ರಶ್ನೆಯನ್ನು ಕೇಳುತ್ತಾರೆ. ದಿವ್ಯಾ ಸಹ ಅಷ್ಟೇ ನಾಜೂಕಾಗಿ ಉತ್ತರಿಸಿದ್ದಾರೆ. ಆರಂಭದಲ್ಲಿ ಸುದೀಪ್ ಅವರು ಅರವಿಂದ್ ಅವರಿಗೆ ನಿಮ್ಮ ಪ್ರಕಾರ ಮನೆಯಲ್ಲಿ ಬೆಸ್ಟ್ ಡ್ರೆಸ್ಟ್ ಯಾರು (ಯಾರ ಉಡುಪು ಚೆನ್ನಾಗಿದೆ ಆಗಿದೆ?) ಎಂದು ಪ್ರಶ್ನಿಸುತ್ತಾರೆ. ಆಗ ಅರವಿಂದ್ ಉತ್ತರಿಸಿ ದಿವ್ಯಾ ಉರುಡುಗ ಎನ್ನುತ್ತಾರೆ. ಥಟ್ಟನೇ ಸುದೀಪ್ ಪ್ರತಿಕ್ರಿಯಿಸಿ, ತುಂಬಾ ಬದಲಾವಣೆ ಆಗಿದೆ ರೀ ಎನ್ನುತ್ತಾರೆ.

    ಬಳಿಕ ದಿವ್ಯಾ ಉರುಡುಗ ಅವರನ್ನು ಪ್ರಶ್ನಿಸಿ ದಿವ್ಯಾ ಉರುಡುಗ ಅವರೇ, ಫ್ರೆಂಡ್ ರಿಸಲ್ಟ್‍ನಲ್ಲಿ ನಿಮ್ಮಿಬ್ಬರಲ್ಲಿ ಒಬ್ಬರು ಮನೆಯಲ್ಲಿ ಉಳಿಯಬಹುದು, ಒಬ್ಬರು ಹೊರಗೆ ಹೋಗಬೇಕು ಎಂಬ ಆಯ್ಕೆಯನ್ನು ನಿಮಗೆ ಬಿಟ್ಟರೆ ನಿಮ್ಮ ಉತ್ತರ ಏನು ಎಂದು ಪ್ರಶ್ನಿಸುತ್ತಾರೆ. ಆಗ ಡಿಯು ಫುಲ್ ಶಾಕ್ ಆಗುತ್ತಾರೆ. ಸರ್ ಇಬ್ಬರೂ ಎಂದು ಆರಂಭದಲ್ಲಿ ಹೇಳುತ್ತಾರೆ ಬಳಿಕ ಎಂತ ಸರ್ ಎಂದು ಒಂದು ಕ್ಷಣ ತಲೆ ತಗ್ಗಿಸುತ್ತಾರೆ. ಆದರೆ ಇವರ ಉತ್ತರ ಏನು ಎಂಬುದು ಫುಲ್ ಎಪಿಸೋಡ್ ಪ್ರಸಾರವಾದಮೇಲೇ ತಿಳಿಯಬೇಕಿದೆ.

    ಬಿಗ್ ಬಾಸ್ 2ನೇ ಇನ್ನಿಂಗ್ಸ್ ಸಖತ್ ಕಿಕ್ಕೇರಿಸುತ್ತಿದ್ದು, ಸ್ಪರ್ಧಿಗಳು ಫುಲ್ ಜೋಶ್‍ನಲ್ಲಿದ್ದಾರೆ. ಅಲ್ಲದೆ ಕಳೆದ ಬಾರಿ ಮಾಡಿದ ತಪ್ಪುಗಳನ್ನು ಈ ಬಾರಿ ಮಾಡಲ್ಲ, ಒಬ್ಬರಿಗೇ ಸೀಮಿತವಾಗಲ್ಲ ಎಂದು ಹೇಳಿದ್ದಾರೆ. ವಿಶೇಷವಾಗಿ ಅರವಿಂದ್ ಹಾಗೂ ದಿವ್ಯಾ ಉರುಡುಗ, ಮತ್ತೊಂದು ಜೋಡಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್. ಆದರೆ ಈ ಜೋಡಿಗಳು ಅಂತರ ಕಾಯ್ದುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತಿದೆ. ಹೀಗಾಗಿ ಈ ರೀತಿಯ ಪ್ರಶ್ನೆಗಳು ಸಹ ಸಹಜವಾಗಿ ಏಳುತ್ತಿವೆ. ಹೀಗಾಗಿ ಸುದೀಪ್ ಅವರು ಸಹ ಪ್ರಶ್ನಿಸಿದ್ದಾರೆ.

  • ರಾಖಿ ಇಲ್ಲ ಮಂಜಣ್ಣ ಇದನ್ನೇ ಕಟ್ತೀನಿ: ವೈಷ್ಣವಿ

    ರಾಖಿ ಇಲ್ಲ ಮಂಜಣ್ಣ ಇದನ್ನೇ ಕಟ್ತೀನಿ: ವೈಷ್ಣವಿ

    ಬಿಗ್ ಬಾಸ್ ಮನೆಯಲ್ಲಿ ರಣರೋಚಕ ಟಾಸ್ಕ್‍ಗಳ ಜೊತೆಗೆ ಜಗಳ, ಗುದ್ದಾಟಗಳ ನಡುವೆ ಬಂಧಗಳು ಸಹ ಬೆಸೆಯುತ್ತಿದ್ದು, ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಅದರಂತೆ ಬಿಗ್ ಮನೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮಂಜು ಪಾವಗಡಗೆ ರಾಖಿ ಕಟ್ಟಿಸಿಕೊಳ್ಳುವ ಭಾಗ್ಯ ಸಿಕ್ಕಿದೆ. ಆದರೆ ಮಂಜು ಕೊಂಚ ಬೇಸರ, ಖುಷಿಯಿಂದಲೇ ರಾಖಿ ಕಟ್ಟಿಸಿಕೊಳ್ಳಲಿ ಕೈ ಮುಂದೆ ಚಾಚಿದ್ದಾರೆ.

    ಹೌದು ಈ ಕುರಿತ ಪ್ರೋಮೋ ಬಿಡುಗಡೆಯಾಗಿದ್ದು, ವೈಷ್ಣವಿ ಅವರು ಮಂಜು ಪಾವಗಡೆ ಅವರುಗೆ ರಾಖಿ ಕಟ್ಟಿದ್ದಾರೆ. ಟಾಸ್ಕ್ ಮಾಡುವ ವೇಳೆ ಸೀಟ್‍ನಲ್ಲಿ ಹಲವು ಸ್ಪರ್ಧಿಗಳು ಕುಳಿತಿದ್ದು, ಈ ವೇಳೆ ವೈಷ್ಣವಿ ಅವರು ದಾರವನ್ನು ತೆಗೆದುಕೊಂಡು, ಮಂಜಣ್ಣ ಸದ್ಯಕ್ಕೆ ರಾಕಿ ಇಲ್ಲ, ಇದನ್ನೇ ರಾಕಿ ಎಂದು ತಿಳಿದುಕೋ ಎನ್ನುತ್ತಾರೆ. ಆಗ ಮಂಜು ಪಾವಗಡ ರೈಟ್ ಹ್ಯಾಂಡೇ ಕೊಡ್ತೀನವ್ವಾ ಎಂದು ಕೈ ಮುಂದೆ ಚಾಚುತ್ತಾರೆ. ದುಃಖವಾಗುವ ರೀತಿ ನಾಟಕವಾಡುತ್ತ ಮಂಜು ವೈಷ್ಣವಿ ಅವರ ಕಡೆಯಿಂದ ರಾಕಿ ಕಟ್ಟಿಸಿಕೊಂಡಿದ್ದಾರೆ.

    ರಾಕಿ ಕಟ್ಟುತ್ತಲೇ ಪ್ರಿಯಾಂಕಾ ವೈಷ್ಣವಿಗೆ ಏನು ಗಿಫ್ಟ್ ಕೊಡುತ್ತೀರಿ ಎಂದು ಹೇಳುತ್ತಾರೆ. ಆಗ ಶಮಂತ್ 500 ರೂ.ಬೇಕಂತೆ ಎನ್ನುತ್ತಾರೆ. ಮಂಜು ನಿನಗೋಸ್ಕರ ಏಲಕ್ಕಿ ಗಿಫ್ಟ್ ಕೊಡುತ್ತೇನೆ ಎಂದು ಹೇಳಿ ಏಲಕ್ಕಿ ನೀಡಿದ್ದಾರೆ. ಆಗ ವೈಷ್ಣವಿ ಇದೇನ್ ಮಂಜಣ್ಣ ಇಷ್ಟೊಂದು ಪ್ರೀತಿ ಕೊಡಬೇಡಿ ನೀವು ಎಂದು ಹೇಳುತ್ತಾರೆ. ನಿಮ್ ಹತ್ರ ಇದೆ ಅಂತ ಗೊತ್ತು, ಆದರೂ ನಾನೂ ಕೊ0ಡಬೇಕಲ್ಲ ಪ್ರೀತಿಯಾ, ತಗೋ ಈ ಪ್ರೀತಿ ಹೀಗೆ ಇರಲಿ ಎಂದು ಮಂಜು ಹೇಳುತ್ತಾರೆ.

    ಈ ಮೂಲಕ ವೈಷ್ಣವಿ ಕಡೆಯಿಂದ ಮಂಜು ರಾಕಿ ಕಟ್ಟಿಸಿಕೊಂಡಿದ್ದು, ತಂಗಿಯಾಗಿ ಸ್ವೀಕರಿಸಿದ್ದಾರೆ. ಅಷ್ಟೇ ಪ್ರೀತಿಯಿಂದ ವೈಷ್ಣವಿ ಸಹ ರಾಕಿ ಕಟ್ಟಿದ್ದಾರೆ. ಈ ಮೂಲಕ ಟಾಸ್ಕ್, ಜಗಳ ಕಿತ್ತಾಟಗಳ ಮಧ್ಯೆ ಬಾಂಧವ್ಯ ಸಹ ವೃದ್ಧಿಯಾಗುತ್ತಿದೆ.