Tag: Bigg Boss OTT

  • ಕಾನೂನುಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ಆರೋಪಕ್ಕೆ ಸೋನು ಫಸ್ಟ್ ರಿಯಾಕ್ಷನ್

    ಕಾನೂನುಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ಆರೋಪಕ್ಕೆ ಸೋನು ಫಸ್ಟ್ ರಿಯಾಕ್ಷನ್

    ಗುವನ್ನು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಎಂದೇ ಖ್ಯಾತರಾಗಿದ್ದ ಸೋನು ಶ್ರೀನಿವಾಸ್ ಗೌಡರನ್ನು (Sonu Srinivas Gowda) 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ ಬೆಂಗಳೂರಿನ ಸಿಜೆಎಂ ಕೋರ್ಟ್. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಗೌಡ ಫಸ್ಟ್‌ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:Bigg Boss: ಸಲ್ಮಾನ್ ಖಾನ್ ಶೋನಲ್ಲಿ ‘ಸೋ ಬ್ಯೂಟಿಫುಲ್’ ಖ್ಯಾತಿಯ ಜಾಸ್ಮಿನ್ ಕೌರ್?

    ಪೊಲೀಸ್ ವಾಹನದಲ್ಲಿ ತೆರಳುವುದಕ್ಕೂ ಮುನ್ನ ಮಾಧ್ಯಮಗಳ ಎದುರು ಸೋನು ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ. ಲೀಗಲ್ ಆಗಿ ತನಿಖೆ ನಡೆಯುತ್ತಿದೆ. ಏನೂ ತೊಂದರೆ ಇಲ್ಲ. ಒಂದು ಹುಡುಗಿಯನ್ನು ರಕ್ಷಣೆ ಮಾಡೋಕೆ ಅಂತ ನಾನು ಕರೆದುಕೊಂಡು ಬಂದಿದ್ದು. ಅವಳು ಈಗಲೂ ಆರಾಮಾಗಿ, ಸುರಕ್ಷಿತವಾಗಿ ಇದ್ದಾಳೆ ಎಂದು ಸೋನು ಗೌಡ ಹೇಳಿದ್ದಾರೆ. ಕೇಸ್‌ಗೆ ಸಂಬಂಧಪಟ್ಟಂತೆ ಅವರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಪೊಲೀಸರು ತನಿಖೆ ಮಾಡಲಿದ್ದಾರೆ. ಮಾರ್ಚ್ 25ರಂದು ಅವರನ್ನು ಕೋರ್ಟ್‌ಗೆ ಹಾಜರುಪಡಿಸಬೇಕಿದೆ. ನಿಯಮ ಪಾಲಿಸದೇ ಮಗು ದತ್ತು ಪಡೆದ ಆರೋಪದಲ್ಲಿ ಅವರು ಈಗ ಕಾನೂನು ಸಂಕಷ್ಟ ಎದುರಿಸಬೇಕಾಗಿದೆ.

    ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಸೋನು ಅನ್ನು ಇಂದು ಬೆಳಗಿನ ಜಾವ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿತ್ತು.

    ಈ ಹಿಂದೆಯಷ್ಟೇ ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿದ್ದರು. ಸ್ವತಃ ಸೋನು ಗೌಡ ಅವರೇ ಆ ಮಗುವನ್ನು ಇಟ್ಟುಕೊಂಡು ವಿಡಿಯೋ ಕೂಡ ಮಾಡಿದ್ದರು. ಈ ಮಗುವಿನ ಪರಿಚಯವನ್ನು ಸೋನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದರು.

    ದತ್ತು ಪಡೆಯುವ ಯಾವುದೇ ನಿಯಮವನ್ನು ದತ್ತು ಪಾಲಿಸದೇ ಇರುವ ಕಾರಣಕ್ಕಾಗಿ ಮಕ್ಕಳ ಹಕ್ಕು ಕಸಿದಿರುವ ಆರೋಪ ಸೋನು ಮೇಲಿದೆ. ಉತ್ತರ ಕರ್ನಾಟಕದ 8 ವರ್ಷದ ಮಗು ಅದಾಗಿದ್ದು, ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಮುಂದಾಗಿದ್ದರು ಎನ್ನುವ ಆರೋಪ ಕೂಡ ಇದೆ. ಮಗುವನ್ನ ದತ್ತು ಪಡೆದ ಮೇಲೆ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ಸೋನು ತಂತ್ರ ರೂಪಿಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಮಕ್ಕಳ ರಕ್ಷಣಾಧಿಕಾರಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರಿಂದ ಸೋನು ಶ್ರೀನಿವಾಸ್ ಗೌಡ ಬಂಧನವಾಗಿತ್ತು.

  • ಬಿಗ್ ಬಾಸ್ ಮನೆಯಲ್ಲಿ ಲಿಪ್ ಲಾಕ್ : ಬೇಸರಿಸಿಕೊಂಡ ಸಲ್ಮಾನ್ ಖಾನ್

    ಬಿಗ್ ಬಾಸ್ ಮನೆಯಲ್ಲಿ ಲಿಪ್ ಲಾಕ್ : ಬೇಸರಿಸಿಕೊಂಡ ಸಲ್ಮಾನ್ ಖಾನ್

    ಹಿಂದಿ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಬ್ಬರು ಮೂವತ್ತು ಸೆಕೆಂಡ್ ಕಾಲ ಲಿಪ್ ಲಾಕ್ ಮಾಡಿಕೊಂಡಿದ್ದರು. ಇದು ಚರ್ಚೆಗೂ ಗ್ರಾಸವಾಗಿತ್ತು. ಈ ಕುರಿತು ಕಾರ್ಯಕ್ರಮ ನಡೆಸಿಕೊಡುವ ಸಲ್ಮಾನ್ ಖಾನ್ (Salman Khan) ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಸಲ್ಮಾನ್ ಬೇಸರ ವ್ಯಕ್ತ ಪಡಿಸಿದ್ದಾರೆ. ಇದು ಫ್ಯಾಮಿಲಿ ಶೋ ಆಗಿರುವುದರಿಂದ ಆ ರೀತಿಯ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

    ಬಿಗ್ ಬಾಸ್ (Bigg Boss OTT)  ಮನೆಯಲ್ಲಿ ಏನು ಆಗಬಾರದು ಎಂದು ಪದೇ ಪದೇ ಸಲ್ಮಾನ್ ಖಾನ್ ಹೇಳುತ್ತಿದ್ದರೋ ಅದೇ ಆಗಿತ್ತು. ಇಬ್ಬರು ಸ್ಪರ್ಧಿಗಳ ಮುತ್ತಿನಾಟಕ್ಕೆ ಪ್ರೇಕ್ಷಕರು ತಲೆತಿರುಗಿ ಬಿದ್ದಿದ್ದರು. ಬಿಗ್ ಬಾಸ್ ಇದೊಂದು ಫ್ಯಾಮಿಲಿ ಶೋ. ದಯವಿಟ್ಟು ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಸಾಕಷ್ಟು ಬಾರಿ ಸಲ್ಮಾನ್ ಖಾನ್ ನಿರೂಪಣಾ ವೇಳೆಯಲ್ಲಿ ಹೇಳಿದ್ದರು. ಆದರೂ ಆಗಬಾರದ್ದು ಆಗಿ ಹೋಗಿತ್ತು. ಆದ ಘಟನೆಗೆ ಅನೇಕ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ.

    ಮೊನ್ನೆ ಬಿಗ್ ಬಾಸ್ ಮನೆ ಸಖತ್ ಬಿಸಿ ಬಿಸಿಯಾಗಿತ್ತು. ಒಂದು ಕಡೆ ಆಕಾಂಕ್ಷಾ (Akanksha)  ಮತ್ತು ಜದ್ (Jad) ಏಕಾಂತದಲ್ಲಿ ಕೂತಿದ್ದರು. ಮತ್ತೊಂದು ಕಡೆ ಪೂಜಾ ಭಟ್ (Pooja Bhatt) ತಮ್ಮದೇ ಧ್ಯಾನದಲ್ಲಿ ಮಗ್ನರಾಗಿದ್ದರು. ಒಂದು ರೀತಿಯಲ್ಲಿ ಬಿಗ್ ಬಾಸ್ ಮನೆ ಪಡ್ಡೆಗಳು ರೊಮ್ಯಾಂಟಿಕ್ ಪಾರ್ಕ್ ಆಗಿತ್ತು. ಇಂತಹ ಸಮಯದಲ್ಲಿ ಸಚ್ ದೇವ್ ಸುಮ್ಮನಿರದೇ ‘ಆಕಾಂಕ್ಷ ಅವರು ಜಿದ್‍ ಗೆ ಕಿಸ್ ಮಾಡಬೇಕು’ ಎಂದು ಸವಾಲು ಎಸೆದೇ ಬಿಟ್ಟರು.

    ಸಚ್ ದೇವ್ (Sach Dev) ಇಂಥದ್ದೊಂದು ಬೇಡಿಕೆ ಇಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಕಾಂಕ್ಷ ಮತ್ತು ಜದ್ ಗೆ ಇದು ಅನಿರೀಕ್ಷಿತವೂ ಅಲ್ಲ. ಏಕೆಂದರೆ ಅವರಿಬ್ಬರ ಮಧ್ಯ ಏನೋ ನಡೆಯುತ್ತಿದೆ ಎನ್ನುವಂತೆ ಸಾಕಷ್ಟು ಭಾರೀ ಅವರೇ ತೋರಿಸಿಕೊಂಡಿದ್ದಾರೆ. ಹಾಗಾಗಿ ಆಕಾಂಕ್ಷ ಮತ್ತು ಜಿದ್ ಅದನ್ನು ಮಾಡುತ್ತಾರೆ ಎನ್ನುವುದು ಸಚ್ ದೇವ್ ಊಹೆ ಆಗಿತ್ತು. ಈತನ ಬೇಡಿಕೆಯಂತೆ ಇಬ್ಬರೂ ಬರೋಬ್ಬರಿ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ (Lip Lock) ನಲ್ಲೇ ಇದ್ದರು. ಇದನ್ನೂ ಓದಿ:ರೂಪೇಶ್ ಶೆಟ್ಟಿ ‘ಸರ್ಕಸ್’ಗೆ ಬಿಗ್ ಬಾಸ್ ಟೀಮ್ ಸಾಥ್

    ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಅದನ್ನು ಸದುಪಯೋಗ ಪಡಿಸಿಕೊಂಡ ಆಕಾಂಕ್ಷ ಮತ್ತು ಜದ್ ಬರೋಬ್ಬರಿ ಅರ್ಧ ನಿಮಿಷಗಳ ಕಾಲ್ ಲಿಪ್ ಲಾಕ್ ಮಾಡಿಕೊಂಡಿದ್ದರು. ಅದನ್ನು ಕಂಡು ಪೂಜಾ ಭಟ್ ಇರಿಸುಮುರುಸುಗೊಂಡರು. ಥೋ.. ಸಾಕು ನಿಲ್ಲಿಸಿ ಎಂದು ಕೂಗಾಡಿದರು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿದ್ದರಿಂದ ಪೂಜಾ ಕೂಗು ಯಾರಿಗೂ ಕೇಳಿಸದಂತಾಯಿತು.

     

    ಆಕಾಂಕ್ಷಾ ಮತ್ತು ಜದ್ ಲಿಪ್ ಲಾಕ್ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಕೆಲವರು ಸ್ಕ್ರಿಪ್ಟ್ ರೀತಿಯಲ್ಲೇ ನಡೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇಂಥದ್ದನ್ನು ಮಾಡುವುದಕ್ಕಾಗಿಯೇ ಇವರು ಇಲ್ಲಿಗೆ ಬಂದಿರುತ್ತಾರೆ ಎಂದು ಕಾಲೆಳೆದಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ  ಪೂಜಾ ಭಟ್

    ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಹಿಂದಿ ಬಿಗ್ ಬಾಸ್ (Bigg Boss OTT)  ಮನೆಯಲ್ಲಿ ಏನು ಆಗಬಾರದು ಎಂದು ಪದೇ ಪದೇ ಸಲ್ಮಾನ್ ಖಾನ್ ಹೇಳುತ್ತಿದ್ದರೋ ಅದೇ ಆಗಿದೆ. ಇಬ್ಬರು ಸ್ಪರ್ಧಿಗಳ ಮುತ್ತಿನಾಟಕ್ಕೆ ಪ್ರೇಕ್ಷಕರು ತಲೆತಿರುಗಿ ಬಿದ್ದಿದ್ದಾರೆ. ಬಿಗ್ ಬಾಸ್ ಇದೊಂದು ಫ್ಯಾಮಿಲಿ ಶೋ. ದಯವಿಟ್ಟು ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಸಾಕಷ್ಟು ಬಾರಿ ಸಲ್ಮಾನ್ ಖಾನ್ ನಿರೂಪಣಾ ವೇಳೆಯಲ್ಲಿ ಹೇಳಿದ್ದಾರೆ. ಆದರೆ, ನಿನ್ನೆ ನಡೆದ ಘಟನೆಗೆ ಅನೇಕ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ.

    ನಿನ್ನೆ ಬಿಗ್ ಬಾಸ್ ಮನೆ ಸಖತ್ ಬಿಸಿ ಬಿಸಿಯಾಗಿತ್ತು. ಒಂದು ಕಡೆ ಆಕಾಂಕ್ಷಾ (Akanksha)  ಮತ್ತು ಜದ್ (Jad) ಏಕಾಂತದಲ್ಲಿ ಕೂತಿದ್ದರು. ಮತ್ತೊಂದು ಕಡೆ ಪೂಜಾ ಭಟ್ (Pooja Bhatt) ತಮ್ಮದೇ ಧ್ಯಾನದಲ್ಲಿ ಮಗ್ನರಾಗಿದ್ದರು. ಒಂದು ರೀತಿಯಲ್ಲಿ ಬಿಗ್ ಬಾಸ್ ಮನೆ ಪಡ್ಡೆಗಳು ರೊಮ್ಯಾಂಟಿಕ್ ಪಾರ್ಕ್ ಆಗಿತ್ತು. ಇಂತಹ ಸಮಯದಲ್ಲಿ ಸಚ್ ದೇವ್ ಸುಮ್ಮನಿರದೇ ‘ಆಕಾಂಕ್ಷ ಅವರು ಜಿದ್‍ ಗೆ ಕಿಸ್ ಮಾಡಬೇಕು’ ಎಂದು ಸವಾಲು ಎಸೆದೇ ಬಿಟ್ಟರು.

    ಸಚ್ ದೇವ್ (Sach Dev) ಇಂಥದ್ದೊಂದು ಬೇಡಿಕೆ ಇಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಕಾಂಕ್ಷ ಮತ್ತು ಜದ್ ಗೆ ಇದು ಅನಿರೀಕ್ಷಿತವೂ ಅಲ್ಲ. ಏಕೆಂದರೆ ಅವರಿಬ್ಬರ ಮಧ್ಯ ಏನೋ ನಡೆಯುತ್ತಿದೆ ಎನ್ನುವಂತೆ ಸಾಕಷ್ಟು ಭಾರೀ ಅವರೇ ತೋರಿಸಿಕೊಂಡಿದ್ದಾರೆ. ಹಾಗಾಗಿ ಆಕಾಂಕ್ಷ ಮತ್ತು ಜಿದ್ ಅದನ್ನು ಮಾಡುತ್ತಾರೆ ಎನ್ನುವುದು ಸಚ್ ದೇವ್ ಊಹೆ ಆಗಿತ್ತು. ಈತನ ಬೇಡಿಕೆಯಂತೆ ಇಬ್ಬರೂ ಬರೋಬ್ಬರಿ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ (Lip Lock) ನಲ್ಲೇ ಇದ್ದರು. ಇದನ್ನೂ ಓದಿ:‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್

    ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಅದನ್ನು ಸದುಪಯೋಗ ಪಡಿಸಿಕೊಂಡ ಆಕಾಂಕ್ಷ ಮತ್ತು ಜದ್ ಬರೋಬ್ಬರಿ ಅರ್ಧ ನಿಮಿಷಗಳ ಕಾಲ್ ಲಿಪ್ ಲಾಕ್ ಮಾಡಿಕೊಂಡಿದ್ದರು. ಅದನ್ನು ಕಂಡು ಪೂಜಾ ಭಟ್ ಇರಿಸುಮುರುಸುಗೊಂಡರು. ಥೋ.. ಸಾಕು ನಿಲ್ಲಿಸಿ ಎಂದು ಕೂಗಾಡಿದರು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿದ್ದರಿಂದ ಪೂಜಾ ಕೂಗು ಯಾರಿಗೂ ಕೇಳಿಸದಂತಾಯಿತು.

    ಆಕಾಂಕ್ಷಾ ಮತ್ತು ಜದ್ ಲಿಪ್ ಲಾಕ್ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಸ್ಕ್ರಿಪ್ಟ್ ರೀತಿಯಲ್ಲೇ ನಡೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇಂಥದ್ದನ್ನು ಮಾಡುವುದಕ್ಕಾಗಿಯೇ ಇವರು ಇಲ್ಲಿಗೆ ಬಂದಿರುತ್ತಾರೆ ಎಂದು ಕಾಲೆಳೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮಾಜಿ ‘ನೀಲಿ’ತಾರೆ ಮಿಯಾ ಖಲೀಫಾ

    ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮಾಜಿ ‘ನೀಲಿ’ತಾರೆ ಮಿಯಾ ಖಲೀಫಾ

    ನೀಲಿ ಸಿನಿಮಾಗಳ ಮಾಜಿ ತಾರೆ ಮಿಯಾ ಖಲೀಫಾ (Mia Khalifa) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್ ಬಾಸ್ ಓಟಿಟಿ ಸೀಸನ್ 2ರಲ್ಲಿ (Bigg Boss OTT 2) ಮಿಯಾ ಭಾಗಿಯಾಗಲಿದ್ದಾರೆ ಎಂದು ಬಿ ಟೌನ್ ಮಾತಾಡಿಕೊಳ್ಳುತ್ತಿದೆ. ಬಿಗ್ ಬಾಸ್ ಮನೆ ಪ್ರವೇಶ ಮಾಡಲು ಕ್ಷಣಗಣನೆ ಶುರುವಾಗಿದ್ದು, ಮಿಯಾ ಪ್ರವೇಶಿಸಿದರೆ ಮನೆಯ ವಾತಾವರಣ ಹೇಗೆಲ್ಲ ಇರಲಿದೆ ಎನ್ನುವ ಕುರಿತು ಕುತೂಹಲ ಮೂಡಿದೆ.

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Hindi)) ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಮೊದಲ ಬಿಗ್ ಬಾಸ್ ಒಟಿಟಿ ಯಶಸ್ವಿಯಾಗಿತ್ತು. ಈಗ 2ನೇ ಸೀಸನ್ ಬಿಗ್ ಬಾಸ್ ಒಟಿಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

    ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಫಸ್ಟ್ ಪ್ರೋಮೋ ರಿವೀಲ್ ಆಗಿದೆ. ಸಲ್ಲು ಭಾಯ್ ಎಂಟ್ರಿಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಇಂದಿನಿಂದ ಒಟಿಟಿ ಬಿಗ್ ಬಾಸ್ ಶುರುವಾಗಲಿದೆ. ಜಿಯೋ ಸಿನಿಮಾ ವೇದಿಕೆಯಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.

    ಮೊದಲ ಸೀಸನ್ ಬಿಗ್ ಬಾಸ್ ಒಟಿಟಿಯನ್ನ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ 2ನೇ ಸೀಸನ್‌ನ ಸಲ್ಮಾನ್ ಖಾನ್ ನಿರೂಪಣೆ ಮಾಡುವ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬಿದ್ದಿದೆ. ಜೊತೆಗೆ ಸಲ್ಮಾನ್ ಈ ಸೀಸನ್ ಹೇಗಿರಲಿದೆ ಎನ್ನುವ ಕುರಿತು ಮಾತನಾಡಿದ್ದಾರೆ.

     

    ಕಳೆದ ಸೀಸನ್‌ನಲ್ಲಿ ದಿವ್ಯಾ ಅಗರ್‌ವಾಲ್ ವಿನ್ನರ್ ಆಗಿದ್ದರು. ಉರ್ಫಿ ಜಾವೇದ್, ನಿಶಾಂತ್ ಭಟ್, ಶಮಿತಾ, ಪ್ರತೀಕ್, ನೇಹಾ ಸೇರಿದಂತೆ ಹಲವು ಸ್ಪರ್ಧಿಗಳು ಭಾಗವಹಿಸಿದ್ದರು. ಬಿಗ್ ಬಾಸ್ 2ನೇ ಸೀಸನ್‌ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದಕ್ಕೆ ಕಾದುನೋಡಬೇಕಿದೆ.

  • ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ಮುಂಬೈ: ವಿವಿಧ ಬಗೆಯ ಕಾಸ್ಟ್ಯೂಮ್ ನಿಂದಾಗಿಯೇ ಗಮನ ಸೆಳೆಯುವ ಬಾಲಿವುಡ್ ಬಿಗ್‌ಬಾಸ್ (Bigg Boss OTT) ತಾರೆ ಉರ್ಫಿ ಜಾವೇದ್ (Urfi Javed), ಇದೀಗ ನೆಟ್ಟಿಗರ ವಿರುದ್ಧ ಸಿಡಿದಿದ್ದಾರೆ.

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, `ಏಕೆ ತುಂಡು ಉಡುಗೆಗಳನ್ನು ಧರಿಸುತ್ತೀರಿ?’ ಎಂಬ ನೆಟ್ಟಿಗರ ಪ್ರಶ್ನೆಗೆ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

    urfi

    ನನ್ನ ಬಳಿ ತೋರಿಸೋಕೆ ಏನೂ ಇಲ್ಲ. ಅಲ್ಲದೇ ನಾನೇನು ನನ್ನ ಖಾಸಗಿ ಭಾಗಗಳನ್ನ ಪ್ರದರ್ಶನ ಮಾಡ್ತಿಲ್ಲ. ಲೈಂಗಿಕ ಪ್ರಚೋದನೆಗೆ ಒಳಪಡಿಸುತ್ತಿಲ್ಲ. ನೀವೇಕೆ ವರಿ ಮಾಡ್ತೀರಿ? ಏನು ಕಾಣುತ್ತದೆಯೋ, ಅದಕ್ಕೆ ಸಂಬಂಧಿಸಿದ ವೀಡಿಯೋ, ಫೋಟೋಗಳು ಮಾರಾಟವಾಗುತ್ತಿದೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೂರು ಕೊಟ್ಟವರ ವಿರುದ್ಧ ಗರಂ ಆದ ಉರ್ಫಿ: ಬಿಕಿನಿಯಲ್ಲೇ ಓಡಾಡ್ತೀನಿ ಎಂದ ನಟಿ

    FotoJet 50

    ನನಗೆ ಫ್ಯಾಷನ್ (Fashion) ಬಗ್ಗೆ ಅಷ್ಟು ಜ್ಞಾನ ಇರಲಿಲ್ಲ. ಏನನ್ನ ಧರಿಸಬೇಕು ಅನ್ನೋದು ಮಾತ್ರ ಗೊತ್ತಿತ್ತು. ಆದ್ರೆ ನಾನು ತುಂಡು ಉಡುಗೆಗಳನ್ನ ಧರಿಸೋದಕ್ಕೆ ನನ್ನ ತಂದೆ ಅನುಮತಿಸುವುದಿಲ್ಲ ಎಂದು ಬಹಳ ಕಷ್ಟದಿಂದ ಮನೆಬಿಟ್ಟು ಬಂದಿದ್ದೇನೆ. ನಾನು ಯಾವಾಗಲೂ ಅತ್ಯುತ್ತಮವಾಗಿ ಕಾಣಲು ಬಯಸುತ್ತೇನೆ. ವಿಭಿನ್ನವಾಗಿ ಕಾಣಲು ಬಯಸುತ್ತೇನೆ. ಆದ್ದರಿಂದ ಪಾರ್ಟಿಗೆ ಹೋದಾಗ ಎಲ್ಲರೂ ನನ್ನತ್ತ ತಿರುಗಿ ನೋಡ್ತಾರೆ ಎಂದು ಹೇಳಿಕೊಂಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಕಾಂತಾರ’ ಸಿನಿಮಾ ನೋಡಿ ಆಸ್ಪತ್ರೆಗೆ ದಾಖಲಾಗಿದ್ದ ಸೋನು ಶ್ರೀನಿವಾಸ್ ಗೌಡ

    `ಕಾಂತಾರ’ ಸಿನಿಮಾ ನೋಡಿ ಆಸ್ಪತ್ರೆಗೆ ದಾಖಲಾಗಿದ್ದ ಸೋನು ಶ್ರೀನಿವಾಸ್ ಗೌಡ

    ಬಾಕ್ಸಾಫೀಸ್‌ನಲ್ಲಿ `ಕಾಂತಾರ’ (Kantara) ಕೋಟಿ ಕೋಟಿ ಲೂಟಿ ಮಾಡಿ ದಾಖಲೆ ಬರೆದ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ರಿಷಬ್ ಶೆಟ್ಟಿ (Rishab Shetty) ಮಿಂಚ್ತಿದ್ದಾರೆ. `ಕಾಂತಾರ’ ಸಿನಿಮಾ ಕಥೆಗೆ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಹೀಗಿರುವಾಗ `ಕಾಂತಾರ’ ಚಿತ್ರ ನೋಡಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ (Sonu Srinivas Gowda) ಜ್ವರ ಬಂದಿತ್ತಂತೆ. ಈ ಹಿಂದಿನ ವಿಚಾರವನ್ನು ಸೋನು ಇದೀಗ ರಿವೀಲ್ ಮಾಡಿದ್ದಾರೆ.

    ಸೋಷಿಯಲ್ ಮೀಡಿಯಾ ಸೆನ್ಸೆಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಸೋನು, ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Kannada Ott) ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಿದ್ದರು. ದೊಡ್ಮನೆಯಿಂದ ಬಂದ ಮೇಲೆ ಮೊದಲು ನೋಡಿದ್ದೆ ಕಾಂತಾರ ಸಿನಿಮಾವಾಗಿದ್ದು, ಚಿತ್ರ ನೋಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

    ನನ್ನ ಸ್ನೇಹಿತರು `ಕಾಂತಾರ’ ಸಿನಿಮಾ ನೋಡು ಎಂದು ಹೇಳಿದ್ದರು. ಆಗ ನಾನು ಸಿನಿಮಾ ನೋಡುವ ಆಸಕ್ತಿ ಕಳೆದುಕೊಂಡಿದ್ದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹೊರ ಹೋಗಲು ನನಗೆ ಮನಸ್ಸು ಇರಲಿಲ್ಲ. ಎಲ್ಲರು ಹೇಳುತ್ತಿದ್ದಾರೆ ಎಂದು ರಾತ್ರಿ ಶೋಗೆ ಅಕ್ಕನನ್ನು ಕರೆದುಕೊಂಡು ಹೋದೆ. ಸಿನಿಮಾ ಪೂರ್ತಿ ಇರುವುದು ಮಂಗಳೂರು ಭಾಷೆಯಲ್ಲಿ, ಆರಂಭದಲ್ಲಿ ಸಿನಿಮಾ ಏನೂ ಅರ್ಥವಾಗುತ್ತಿರಲಿಲ್ಲ. ಹಾಗೆ ಹೋಗ್ತಾ ಹೋಗ್ತಾ ಸಿನಿಮಾ ಸೂಪರ್ ಆಗಿದೆ. ಚಿತ್ರದ ಕೊನೆ 20 ನಿಮಿಷ ಇದ್ಯಲ್ಲ ಗುರು ಸೂಪರ್ ಎಂದು ವಾಹಿನಿಯ ಸಂದರ್ಶನದಲ್ಲಿ ಸೋನು ಮಾತನಾಡಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಜೊತೆ ಕಾಣಿಸಿಕೊಂಡ ಕಿಚ್ಚ ಸುದೀಪ್ : ಕುತೂಹಲ ಮೂಡಿಸಿದ ಭೇಟಿ

    `ಕಾಂತಾರಾ’ ಸಿನಿಮಾ ನೋಡಿ ಕೊಂಡು ಮನೆಗೆ ಬಂದು ಮಲಗಿದ್ದಾಗ ರಾತ್ರಿ ನನಗೆ ಚಳಿ ಜ್ವರ ಬಂದಿತ್ತು. ಸ್ವಲ್ಪ ಆರೋಗ್ಯ ಕೆಟ್ಟಿತ್ತು, ಜೊತೆಗೆ ಈ ಚಳಿ ಜ್ವರ ಇದ್ದ ಕಾರಣ ಆಸ್ಪತ್ರೆಗೆ ಹೋದೆ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಬೆಂಗಳೂರಿನಲ್ಲಿ ಒಂದು ವಾರ ಮಂಡ್ಯದಲ್ಲಿ ಒಂದು ವಾರ ಆಸ್ಪತ್ರೆಯಲ್ಲಿದ್ದೆ. ಈ ಚಿತ್ರದ ಕೊನೆ 20 ನಿಮಿಷ ನೋಡಿ ನನಗೆ ಹೇಗೆ ಅನಿಸಿತ್ತು ಅಂದ್ರೆ ಈ ರೀತಿಯ ಸಿನಿಮಾಗಳನ್ನು ಮಾಡಲು ಹೇಗೆ ಸಾಧ್ಯ. ಕೆಲವೊಂದು ಸಿನಿಮಾಗಳಲ್ಲಿ ತುಂಬಾ ಗ್ರಾಫಿಕ್ಸ್ ಮಾಡಿರುತ್ತಾರೆ ಆದರೆ `ಕಾಂತಾರ’ ತುಂಬಾ ಸಿಂಪಲ್ ಮತ್ತು ವಿಭಿನ್ನವಾಗಿ ಮಾಡಿದ್ದಾರೆ ಎಂದು ಚಿತ್ರದ ಬಗ್ಗೆ ಸೋನು ಹಾಡಿ ಹೊಗಳಿದ್ದಾರೆ.

    ಬಿಗ್ ಬಾಸ್ ಒಟಿಟಿ ನಂತರ ಈಗ ಸಿನಿಮಾಗಾಗಿ ಸೋನು ಎದುರು ನೋಡ್ತಿದ್ದಾರೆ. ಸೋನು ಅವರದ್ದೇ ಯೂಟ್ಯೂಬ್, ಸೋಷಿಯಲ್ ಮೀಡಿಯಾ ಪ್ರಮೋಷನ್ ಅಂತಾ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಂದುಗೆ ಕೈಕೊಟ್ಟು ಬೇರೆ ಹುಡುಗಿ ಜೊತೆ ಬಿಗ್ ಬಾಸ್ ಜಶ್ವಂತ್ ಡೇಟಿಂಗ್?

    ನಂದುಗೆ ಕೈಕೊಟ್ಟು ಬೇರೆ ಹುಡುಗಿ ಜೊತೆ ಬಿಗ್ ಬಾಸ್ ಜಶ್ವಂತ್ ಡೇಟಿಂಗ್?

    ಬಿಗ್ ಬಾಸ್ ಒಟಿಟಿ (Bigg Boss Ott) ಮೂಲಕ ಖ್ಯಾತಿ ಪಡೆದಿದ್ದ ಜೋಡಿ ಜಶ್ವಂತ್ (Jashwanth) ಮತ್ತು ನಂದು (Nandu) ಇದೀಗ ಬೇರೆ ಬೇರೆಯಾಗಿದ್ದಾರೆ. ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಹೈಲೈಟ್ ನಂದು, ಜಶ್ ಜೋಡಿ ಬ್ರೇಕಪ್ ಸುದ್ದಿ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದರು. ಈಗ ಜಶ್ವಂತ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ನಂದುಗೆ ಕೈಕೊಟ್ಟು ಬೇರೇ ಹುಡುಗಿ ಜೊತೆ ಜಶ್ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಬಿಗ್ ಬಾಸ್ ಮನೆಯಲ್ಲಿ ನಂದು ಮತ್ತು ಜಶ್ ಜೋಡಿನ ನೋಡಿದವರೆಲ್ಲ, ಜೋಡಿ ಅಂದರೆ ಹೀಗಿರಬೇಕು ಎಂದು ಹಾಡಿ ಹೊಗಳುತ್ತಿದ್ದರು. ಈ ಜೋಡಿಯ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಏನೋ, ನಂದು ಮತ್ತು ಜಶ್ ದೂರ ದೂರ (Breakup) ಆಗಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಬಿಗ್ ಬಾಸ್ ಸ್ಪರ್ಧಿ ನಂದು ತಿಳಿಸಿದ್ದರು.

    ಈ ಬೆನ್ನಲ್ಲೇ ಜಶ್ವಂತ್ ಬಗ್ಗೆ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಜಶ್ವಂತ್ ಬೇರೆ ಹುಡುಗಿ ಡೇಟ್ ಮಾಡ್ತಿದ್ದಾರೆ. ಹಾಗಾಗಿ ನಂದುಗೆ ಜಶ್ ಕೈಕೊಟ್ಟಿದ್ದಾರೆ ಎಂದು ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ.

    ಸಾನ್ಯ ಅಯ್ಯರ್ ಬಂದ ಮೇಲೆನೇ ನಂದು ಮತ್ತು ಜಶ್ವಂತ್ ನಡುವೆ ಬಿರುಕು ಮೂಡಿತ್ತು ಎನ್ನಲಾಗುತ್ತಿದೆ. ಬಿಗ್ ಬಾಸ್ ಶೋ ಬಳಿಕ ನಂದು ರಿಲೇಷನ್‌ಶಿಪ್‌ಗೆ ಬೈ ಹೇಳಿ, ಬೇರೆ ಹುಡುಗಿ ಜೊತೆ ಜಶ್ವಂತ್ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಶ್ವಂತ್ ನನ್ನ ಜೊತೆಯಿಲ್ಲ ಎಂದು ಬೇಸರಪಡಲ್ಲ: ಬ್ರೇಕಪ್ ಬಗ್ಗೆ ನಂದು ಪ್ರತಿಕ್ರಿಯೆ

    ಜಶ್ವಂತ್ ನನ್ನ ಜೊತೆಯಿಲ್ಲ ಎಂದು ಬೇಸರಪಡಲ್ಲ: ಬ್ರೇಕಪ್ ಬಗ್ಗೆ ನಂದು ಪ್ರತಿಕ್ರಿಯೆ

    `ರೋಡಿಸ್’ (Roadies Show) ಖ್ಯಾತಿಯ ನಂದು ಮತ್ತು ಜಶ್ವಂತ್ (Jashwanth) ಪ್ರೇಮ ಪಕ್ಷಿಗಳಾಗಿ ಬಿಗ್ ಬಾಸ್ ಒಟಿಟಿಗೆ(Bigg Boss) ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಕೂಡ ಲವ್ ಬರ್ಡ್ಸ್ ಆಗಿಯೇ ಹೈಲೈಟ್ ಆಗಿದ್ದರು. ಬಿಗ್ ಬಾಸ್ ಶೋ ನಂತರ ಇಬ್ಬರ ಲವ್ ಸ್ಟೋರಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಈ ಬಗ್ಗೆ ಸ್ವತಃ ಬಿಗ್ ಬಾಸ್ ನಂದು (Nandu) ಉತ್ತರ ಕೊಟ್ಟಿದ್ದಾರೆ.

    ಒಟಿಟಿ ಬಿಗ್ ಬಾಸ್‌ನಲ್ಲಿ ನಂದು ಮತ್ತು ಜಶ್ ಜೋಡಿಗಳಾಗಿ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಈ ಶೋ ಬಳಿಕ ನಂದು ಮತ್ತು ಜಶ್ವಂತ್ ಭೋಪಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎನ್ನಲಾಗಿತ್ತು. ಈಗ ಈ ಎಲ್ಲಾ ಊಹಾಪೋಹಗಳಿಗೆ ಸ್ಪರ್ಧಿ ನಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ನಾವಿಬ್ಬರು ಒಟ್ಟಿಗೆ ಇದ್ವಿ, ಜೊತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ವಿ. ಜೊತೆಯಲ್ಲಿದ್ದಾಗ ಖುಷಿಯಿಂದ ಜೀವಿಸಿದ್ವಿ. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್ ಅಪ್ ಮಾಡಬಾರು ಎಂದು ಯೋಚಿಸಿದ್ದೆ, ಆದರೆ ಸಂಬಂಧ (Relationship) ಅಂತ್ಯಗೊಳಿಸುವ (Breakup) ಸಮಯದಲ್ಲಿ ಹಾಗೇ ಇರಲಿಲ್ಲ. ಜಶ್ವಂತ್, ನನಗೆ ಸ್ವಲ್ಪ ಸಮಯ ಬೇಕು ಅಂತಾ ಹೇಳಿದಾಗ ಅವನ ಖುಷಿ ಕೂಡ ನಾನು ಆಯ್ಕೆ ಮಾಡಬೇಕಾಗುತ್ತದೆ. ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕಾಗುತ್ತದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೀನಿ. ನಾವು ಡಿಸೈಡ್ ಮಾಡಿದ್ದೀವಿ, ನಮ್ಮ ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು ಅಂತಾ ಎಂದು ಸೋಷಿಯಲ್ ಮೀಡಿಯಾದ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

    ನಾನು ಯಾವಗಲೂ ಅವರ ಖುಷಿನಾ ಅವರೇ ಚ್ಯೂಸ್ ಮಾಡಲಿ ಅಂತಾ ಬಿಡ್ತೀನಿ. ಸೋ, ಅವನ ಖುಷಿ ಅವನಿಗೆ ಎನು ಬೇಕು ಅನ್ನೋದನ್ನ ಯೋಚನೆ ಮಾಡಿದ್ದಾನೆ. ನನ್ನ ಖುಷಿ ಅಷ್ಟೇ ಮುಖ್ಯ ಆಗಲ್ಲ. ಅವನ ಖುಷಿ ಕೂಡ ಅಷ್ಟೇ ಮುಖ್ಯ. ಈ ಬಗ್ಗೆ ಜಶ್ವಂತ್‌ಗೆ ಎನು ಹೇಳಬೇಡಿ, ಸಮಯ ಬಂದಾಗ ಅವನ ಎನು ಎಂಬುದನ್ನ ಅವನೇ ಪ್ರೂವ್ ಮಾಡುತ್ತಾನೆ ಎಂದು ಜಶ್ವಂತ್ ಬಗ್ಗೆ ಸಕರಾತ್ಮಕವಾಗಿ ನಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದೆ ಅದಕ್ಕೆ ನಾನು ಅಭಾರಿಯಾಗಿರುತ್ತೇನೆ. ಎಲ್ಲದ್ದಕ್ಕಿಂತ್ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಪಾಸಿಟಿವ್‌ ಆಗಿ ನಂದು ಬರೆದುಕೊಂಡಿದ್ದಾರೆ. ಜಶ್ವಂತ್ ಜೊತೆಗಿನ ಬ್ರೇಕಪ್ (Breakup)  ಆಗಿರುವ ಬಗ್ಗೆ ಅಧಿಕೃತವಾಗಿ ನಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಕೇಶ್ ಅಡಿಗ ಸ್ಮಾರ್ಟ್ ಗೇಮ್‌ಗೆ, ಸ್ಪರ್ಧಿಗಳಿಗೆ ಶುರುವಾಯ್ತು ಟೆನ್ಷನ್

    ರಾಕೇಶ್ ಅಡಿಗ ಸ್ಮಾರ್ಟ್ ಗೇಮ್‌ಗೆ, ಸ್ಪರ್ಧಿಗಳಿಗೆ ಶುರುವಾಯ್ತು ಟೆನ್ಷನ್

    ಬಿಗ್ ಬಾಸ್ ಮನೆಯ(Bigg Boss Kannada) ಸ್ಪರ್ಧಿಗಳಲ್ಲಿ ಅಜಾತಶತ್ರು ಅಂದ್ರೆ ರಾಕೇಶ್ ಅಡಿಗ. ಯಾರ ಕೆಂಗಣ್ಣಿಗೂ ಗುರಿಯಾಗದೇ ಕೂಲ್ ಆಗಿ ತಮ್ಮದೇ ಶೈಲಿಯಲ್ಲಿ ಆಡುತ್ತಿದ್ದಾರೆ. ದೊಡ್ಮನೆ ಆಟ 50 ದಿನ ಪೂರೈಸಿರುವ ಬೆನ್ನಲ್ಲೇ ರಾಕೇಶ್ ಅಡಿಗ ಅವರ ಆಟ ಈಗ ಮನೆಯವರ ಕಣ್ಣಿಗೆ ಹೈಲೈಟ್ ಆಗುತ್ತಿದೆ. ಇವರೂ ಹೀಗೆ ಆಡಿದರೆ ರಾಕೇಶ್(Rakesh Adiga) ಅವರೇ ಬಿಗ್ ಬಾಸ್ ವಿನ್ನರ್ ಪಟ್ಟ ತೆಗೆದುಕೊಳ್ಳುತ್ತಾರೆ ಎಂಬ ಟೆನ್ಷನ್ ಮನೆಮಂದಿಗೆ ಶುರುವಾಗಿದೆ.

    ದೊಡ್ಮನೆಯ ಆಟ 50 ದಿನ ಸಾಗಿದೆ. ಅರ್ಧ ದಾರಿ ಸಾಗಿರುವ ಬಿಗ್ ಬಾಸ್‌ನಲ್ಲಿ(Bigg Boss) ಒಂದು ಸರ್‌ಪ್ರೈಸ್ ಇತ್ತು. ಆರ್ಯವರ್ಧನ್(Aryavardhan) ಅವರನ್ನು ಮೊದಲು ಎಲಿಮಿನೇಟ್ ಮಾಡಲಾಗಿತ್ತು. ಆದರೆ, ಈ ವಾರ ಎಲಿಮಿನೇಷನ್ ಮಾಡಲ್ಲ ಎಂದು ಬಿಗ್ ಬಾಸ್ ನಂತರ ಘೋಷಿಸಿದರು. ಈ ವೇಳೆ ಎಲ್ಲಾ ಸ್ಪರ್ಧಿಗಳು ಖುಷಿಪಟ್ಟರು. ಮತ್ತೊಂದೆಡೆ ಈ ಫೇಕ್ ಎಲಿಮಿನೇಷನ್‌ನಿಂದ ಎಲ್ಲಾ ಸ್ಪರ್ಧಿಗಳಿಗೆ ಶಾಕ್ ಕೂಡ ಆಗಿತ್ತು.

    ಪ್ರತಿ ವೀಕೆಂಡ್‌ನಲ್ಲಿ ಕಿಚ್ಚ ಒಂದು ಸ್ಪರ್ಧಿಗೆ ಚಪ್ಪಾಳೆ ನೀಡುತ್ತಾರೆ. ಈ ಚಪ್ಪಾಳೆ ತೆಗೆದುಕೊಳ್ಳೋಕೆ ಸ್ಪರ್ಧಿಗಳು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಕಳೆದ ವಾರವೂ ಸುದೀಪ್ ಚಪ್ಪಾಳೆ ನೀಡಿದ್ದಾರೆ. ಒಂದು ವಾರದ ಪರ್ಫಾರ್ಮೆನ್ಸ್ ನೋಡಿ ಅಲ್ಲ. ಬದಲಿಗೆ ಕಳೆದ 50 ದಿನಗಳನ್ನು ಗಮನಿಸಿ ಸುದೀಪ್ (Kiccha Sudeep) ಚಪ್ಪಾಳೆ ನೀಡಿದ್ದಾರೆ. ಈ ಚಪ್ಪಾಳೆ ಸಿಕ್ಕಿದ್ದು ರಾಕೇಶ್ ಪಾಲಿಗೆ. ಇದನ್ನೂ ಓದಿ: ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

    ಬಿಗ್ ಬಾಸ್ ಒಟಿಟಿಯಿಂದ ರಾಕೇಶ್ ಅಡಿಗ ಗಮನ ಸೆಳೆದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ರಾಕಿ ಹೈಲೈಟ್ ಆಗುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಅವರು ಒಂದೇ ರೀತಿಯ ಪರ್ಫಾರ್ಮೆನ್ಸ್ ನೀಡುತ್ತಾ ಬಂದಿದ್ದಾರೆ. ಅವರು ಜಗಳ ಮಾಡಿಕೊಳ್ಳೋದೇ, ಮನೆ ಮಂದಿಯ ನಂಬಿಕೆಗೆ ರಾಕೇಶ್ ಪಾತ್ರರಾಗಿದ್ದಾರೆ. ಟಾಸ್ಕ್‌ಗಳ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಸದ್ಯ ರಾಕೇಶ್ ಆಟ ನೋಡಿ ಮನೆಯವರಿಗೆ ಹೆಚ್ಚು ಟೆನ್ಷನ್ ಆಗಿದೆ. ರೂಪೇಶ್ ಶೆಟ್ಟಿ ಸೇರಿದಂತೆ ಮೊದಲಾದವರು ಈ ಬಗ್ಗೆ ಟೆನ್ಷನ್ ಮಾಡಿಕೊಂಡಿದ್ದಾರೆ. ರಾಕೇಶ್ ಅವರನ್ನು ಸೆಡ್ಡು ಹೊಡೆಯದೇ ಇದ್ದರೆ ಸಂಕಷ್ಟ ಪಕ್ಕಾ ಎಂಬುದು ಅವರಿಗೆ ಗೊತ್ತಾಗಿದೆ. ಹೀಗೆಯೇ ಮುಂದುವರಿದರೆ ಅವರು ಬಿಗ್ ಬಾಸ್ ವಿನ್ನರ್ ಆಗಬಹುದು ಎಂದು ಲೆಕ್ಕಚಾರ ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಮನೆಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ ಸೋನು ಶ್ರೀನಿವಾಸ್ ಗೌಡ

    ದೊಡ್ಮನೆಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ ಸೋನು ಶ್ರೀನಿವಾಸ್ ಗೌಡ

    ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಮೂಲಕ ವೈರಲ್ ಆದ ಪ್ರತಿಭೆ ಸೋನು ಗೌಡ(Sonu Srinivas Gowda) ಬಿಗ್ ಬಾಸ್ ಓಟಿಟಿಗೆ ಮಿಂಚಿದ್ದರು. ಗ್ರ್ಯಾಂಡ್ ಫಿನಾಲೆವರೆಗೂ ಪೈಪೋಟಿ ಕೊಟ್ಟ ಸ್ಪರ್ಧಿ ಸೋನು ಇದೀಗ ಟಿವಿ ಬಿಗ್ ಬಾಸ್‌ಗೆ ಬರಲಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಬ್ಯೂಟಿ ಸೋನು ಶ್ರೀನಿವಾಸ್ ಗೌಡ ಓಟಿಟಿ ಬಿಗ್ ಬಾಸ್(Bigg Boss Ott) ಮೋಡಿ ಮಾಡಿದ್ದರು. ನೆಗೆಟಿವ್ ಮಾತುಗಳಿಂದ ಪ್ರಚಾರ ಪಡೆದುಕೊಂಡಿದ್ದರು. ತಮ್ಮ ಖಡಕ್ ಮಾತುಗಳಿಂದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ. ಇದೀಗ ಬಿಗ್ ಬಾಸ್ ಸೀಸನ್ 9ಕ್ಕೆ ಸೋನು ಬರಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು

    ಬಿಗ್ ಬಾಸ್ ಸೀಸನ್ 9 ಕಾವೇರುತ್ತಿದೆ. ದಿನದಿಂದ ದಿನಕ್ಕೆ ಆಟಗಳು ಸಾಕಷ್ಟು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇದೀಗ ದೊಡ್ಮನೆಗೆ ಹೊಸ ಟ್ವಿಸ್ಟ್ ಕೊಡಲು ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಸೋನು ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಓಟಿಟಿಯ ಗುರೂಜಿ, ರೂಪೇಶ್ ಶೆಟ್ಟಿ, ಸಾನ್ಯ, ರಾಕೇಶ್ ಬಳಿಕ 5ನೇ ಸ್ಪರ್ಧಿಯಾಗಿ ಬರಲಿದ್ದಾರೆ.

    ಇನ್ನೂ ಓಟಿಟಿಯಲ್ಲಿ ರಾಕೇಶ್ ಮತ್ತು ಸೋನು ಆಪ್ತತೆ ಬೆಳೆದಿತ್ತು. ಟಿವಿ ಬಿಗ್ ಬಾಸ್‌ಗೆ ಸೋನು ಎಂಟ್ರಿ ಕೊಡುವುದರಿಂದ ಆಟ ಮತ್ತಷ್ಟು ರೋಚಕವಾಗಿರಲಿದೆ. ಅಷ್ಟಕ್ಕೂ ಸೋನು ಬಿಗ್ ಬಾಸ್ ಬರಲಿದ್ದಾರಾ ಎಂಬುದು ಅಧಿಕೃತವಾಗಿ ಎಂಟ್ರಿ ಆದ ಮೇಲೆ ತಿಳಿಯಲಿದೆ.

    Live Tv
    [brid partner=56869869 player=32851 video=960834 autoplay=true]