Tag: Bigg boss-8

  • ದಿವ್ಯಾ ಜೊತೆ ಹೆಚ್ಚಿದ್ರೂ ಎಲ್ಲರ ಜೊತೆ ಬೆರೀತಾನೆ, ಅರವಿಂದ್ ಒಳ್ಳೆ ಹುಡ್ಗ ಗುರು

    ದಿವ್ಯಾ ಜೊತೆ ಹೆಚ್ಚಿದ್ರೂ ಎಲ್ಲರ ಜೊತೆ ಬೆರೀತಾನೆ, ಅರವಿಂದ್ ಒಳ್ಳೆ ಹುಡ್ಗ ಗುರು

    ರವಿಂದ್ ದಿವ್ಯಾ ಉರುಡುಗ ಜೊತೆ ಎಷ್ಟೇ ಇದ್ದರೂ ಎಲ್ಲರನ್ನೂ ಸಂಭಾಳಿಸುತ್ತಾನೆ, ಮಾತನಾಡಿಸುತ್ತಾನೆ, ನಮಗೂ ಟೈಮ್ ಕೊಡುತ್ತಾನೆ. ದಿವ್ಯಾ ಉರುಡುಗ ಬಂದ್ರೆ ಅರವಿಂದ್ ಸರಿ ಹೋಗಬಹುದು ಎಂದು ಚಕ್ರವರ್ತಿ ಚಂದ್ರಚೂಡ್ ಮತ್ತೆ ಬಿಗ್ ಮನೆಯಲ್ಲಿ ದಿವ್ಯಾ ನೆನಪಿಸಿಕೊಂಡಿದ್ದಾರೆ.

    ಹುಡ್ಗ-ಹುಡ್ಗಿ ಜೋಡಿಯಾಗಿದ್ರೆ ಒಂದು ರೀತಿಯ ಪ್ಯಾಂಪರಿಂಗ್ ಇರುತ್ತೆ, ಹುರುಪಿನಿಂದ ಟಾಸ್ಟ್ ಮಾಡುತ್ತಾರೆ. ಆದರೆ ನಮಗೆ ಪೇರ್ ಇಲ್ಲದಕ್ಕೆ ಹೀಗೆ ಆಗುತ್ತಿದೆ. ಈಗ ದಿವ್ಯಾ ಇಲ್ಲದ್ದಕ್ಕೆ ಅರವಿಂದ್ ಎನರ್ಜಿ ಕುಸಿಯುತ್ತಿದೆ. ವೈಷ್ಣವಿ ಹಾಗೂ ಅರವಿಂದ್‍ಗೂ ಪೇರ್ ಆಗಲ್ಲ. ಈಗ ದಿವ್ಯಾ ಬಂದ್ರೆ ಅರವಿಂದ್ ಸರಿ ಹೋಗಬಹುದು. ಆದರೆ ಅರವಿಂದ್ ತುಂಬಾ ಒಳ್ಳೆ ಹುಡುಗ ಗುರು, ನನಗೆ ಒಬ್ಬಬ್ಬರ ಬಗ್ಗೆ ಹೇಳಿ ಎಂದು ಕೇಳಿದರೆ, ಸರಿಯಾಗಿ ಹೇಳುತ್ತೇನೆ. ಇವರೆಗೆಲ್ಲ ಹೆದರುವುದಿಲ್ಲ ಎಂದು ಚಕ್ರವರ್ತಿ ನೇರವಾಗಿ ಮಾತನಾಡಿದ್ದಾರೆ.

    ಮಂಜು ಪಾವಗಡ ಬಗ್ಗೆ ಸಹ ಚಕ್ರವರ್ತಿ ಅಸಮಾಧಾನ ಹೊರ ಹಾಕಿದ್ದಾರೆ. ಮನೆಯ ಎಂಟರ್‍ಟೈನರ್, ವಿದೂಷಕ ಎನ್ನುವುದು ತಿಳಿದ ವಿಚಾರ. ಆದರೆ ಮಂಜು ತಮ್ಮ ಹಾಸ್ಯ ಪ್ರಜ್ಞೆ ಬಗ್ಗೆ ಮೈಮರೆತಿದ್ದಾರೆ. ಹೀಗಾಗಿ ಮನೆಯಲ್ಲಿ ಗುಸುಗುಸು ಶುರುವಾಗಿದ್ದು, ಒಂದು ಹುಡುಗಿಗಾಗಿ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಚಕ್ರವರ್ತಿ ಹೇಳಿದ್ದಾರೆ.

    ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿಯವರು ಎಲ್ಲ ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಿರುವಾಗ ಮಂಜು ಪಾವಗಡ ಬಗ್ಗೆ ಸಹ ಮಾತನಾಡಿದ್ದು, ವಿದೂಷಕರಾಗಿ ಕೆಲಸ ಮಾಡುವುದು ತುಂಬಾ ಕಷ್ಟ. ಮತ್ತೊಬ್ಬರನ್ನು ನಗಿಸುವುದು ಸುಲಭವಲ್ಲ, ಆದರೆ ಒಂದು ಹುಡುಗಿಗಾಗಿ ಮಂಜು ತನ್ನ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ. ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿದ್ದಾನೆ ಎಂದು ಚಕ್ರವರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಚಕ್ರವರ್ತಿ ಮಾತ್ರವಲ್ಲ, ಈ ಹಿಂದೆ ಕಿಚ್ಚ ಸುದೀಪ್ ಸಹ ಮಂಜುಗೆ ನೇರವಾಗಿ ಹೇಳಿದ್ದರು. ನೀವು ಒಬ್ಬ ಎಂಟರ್‍ಟೈನರ್, ಹಾಸ್ಯ ಕಲಾವಿದರು ಎನ್ನುವುದನ್ನೇ ಮರೆಯುತ್ತಿದ್ದೀರಿ ಎಂದು ಎಚ್ಚರಿಸಿದ್ದರು. ಆದರೂ ಮಂಜು ಮಾತ್ರ ಎಚ್ಚರವಾಗಿಲ್ಲ.

    ಮಂಜು ಬಗ್ಗೆ ಮುಂದುವರಿದು ಮಾತನಾಡಿರುವ ಚಕ್ರವರ್ತಿ, ದಿವ್ಯಾ ಸುರೇಶ್ ಹೋದರೆ ಮಂಜು ಕಥೆ ಅಷ್ಟೇ ಎಂದು ಚಕ್ರವರ್ತಿ ಹೇಳುತ್ತಾರೆ. ಇಲ್ಲ ದಿವ್ಯಾ ಹೋದರೆ ಮತ್ತೊಬ್ಬರನ್ನು ಜೊತೆ ಮಾಡಿಕೊಳ್ಳುತ್ತಾನೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

    ಇಂದು ಎಲ್ಲ ಸ್ಪರ್ಧಿಗಳ ಜೊತೆ ಮಾತನಾಡಿದ ಕಣ್ಮಣಿ ಸಹ ಮಂಜುಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹಾಸ್ಯ ಕಲಾವಿದರಾಗಿ ಎಲ್ಲರನ್ನೂ ನಗಿಸಲು ಇನ್ನೂ ಎಷ್ಟು ದಿನಗಳು ಬೇಕು ಎಂದು ಪ್ರಶ್ನಿಸಿದ್ದಾರೆ. ಆಗ ನಾನು ಮನೆಯಲ್ಲಿದ್ದರೆ ಸೋಮವಾರದಿಂದ ನಗಿಸುತ್ತೇನೆ ಎಂದು ಮಂಜು ಹೇಳಿದ್ದಾರೆ. ಆದರೆ ಈಗ ಒಂದು ವಾರ ವೇಸ್ಟ್ ಆಯಿತಲ್ಲ ಎಂದು ಕಣ್ಮಣಿ ಬೇಸರ ವ್ಯಕ್ತಪಡಿಸಿದ್ದಾರೆ.

  • ದಿವ್ಯಾ, ಅರವಿಂದ್ ವಾಟರ್ ಬಾಟಲ್ ಸೀಕ್ರೆಟ್

    ದಿವ್ಯಾ, ಅರವಿಂದ್ ವಾಟರ್ ಬಾಟಲ್ ಸೀಕ್ರೆಟ್

    ದಿವ್ಯಾ ಉರುಡುಗ ಹೊರ ಹೋಗಿದ್ದಕ್ಕೆ ಬಿಗ್ ಮನೆಯಲ್ಲಿ ಇನ್ನೂ ನೀರವ ಮೌನ ಆವರಿಸಿದ್ದು, ಸ್ಪರ್ಧಿಗಳಲ್ಲಿ ಬೇಸರ ಕಾಡುತ್ತಿದ್ದರೆ, ಅರವಿಂದ್ ಅವರಿಗೆ ಒಂಟಿತನ ಕಾಡುತ್ತಿದೆ. ಇದೇ ವೇಳೆ ದಿವ್ಯಾ ಹಾಗೂ ಅರವಿಂದ್ ನೀರಿನ ಬಾಟಲ್ ಸೀಕ್ರೆಟ್ ನ್ನು ಶುಭಾ ಪೂಂಜಾ ಬಿಚ್ಚಿಟ್ಟಿದ್ದಾರೆ.

    ಬೆಳ್ಳಂ ಬೆಳಗ್ಗೆಯೇ ಅರವಿಂದ್ ಬೇಸರದಲ್ಲಿರುವುದನ್ನು ಕಂಡು ಮಂಜು ಪಾವಗಡ ಸಮಾಧಾನ ಮಾಡಲು ಯತ್ನಿಸಿದ್ದಾರೆ. ಒಕೆ ನಾ… ಏನೂ ಮಾಡಕ್ಕಾಗಲ್ಲ, ನನಗೇ ಹಿಂಸೆ ಆಗುತ್ತಾಳೆ. ಸಿಕ್ಕಾಪಟ್ಟೆ ಬೇಜಾರುತ್ತಿದೆ, ಅವಳು ನಗುತ್ತಿದ್ದದ್ದು, ಆ ಕ್ಷಣಕ್ಕೆ ಏನೇನೋ ಮಾತನಾಡಿ ಬಿಡುತ್ತೇವೆ, ಅದು ನಿಜವಾದಾಗ ತುಂಬಾ ಬೇಸರವಾಗುತ್ತದೆ, ಒಂಟಿತನ ಫೀಲ್ ಆಗುತ್ತೆ. ಜೊತೆಯಲ್ಲಿದ್ದು, ಹೊಡೆದಾಡಲಿ, ಬಡಿದಾಡಲಿ ಏನೇ ಮಾಡಲಿ. ಆದರೆ ಸಡನ್ ಆಗಿ ನಮ್ಮೋರು ಅಂತ ನಮಗೆ ಇರಲ್ಲಲಾ ಜೊತೆಯಲ್ಲಿ. ಹಾಗಂತ ಯಾರಿಗೂ ಹೇಳಿಕೊಳ್ಳುವ ಹಾಗಿಲ್ಲ, ಬಿಡೋ ಹಾಗಿಲ್ಲ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮಂಜು ಪಾವಗಡ ಹೀಗೆ ಹೇಳುತ್ತಿದ್ದಂತೆ ಅರವೀಂದ್ ಫುಲ್ ಬೇಜಾರಾಗಿ ಸಪ್ಪೆ ಮೋರೆ ಹೊತ್ತು, ತಲೆ ತಗ್ಗಿಸಿ ಅಳು ಕಂಟ್ರೋಲ್ ಮಾಡಿಕೊಳ್ಳುತ್ತಾರೆ.

    ಬಳಿಕ ಶುಭ ಹಾಗೂ ಮಂಜು ಪಾವಗಡ ಗಾರ್ಡನ್ ಏರಿಯಾದಲ್ಲಿ ಕುಳಿತಾಗ, ಮಂಜು ವಾಟರ್ ಬಾಟಲ್ ಇಲ್ಲೇ ಇದೆ ಎನ್ನುತ್ತಾರೆ. ಆಗ ಶುಭ ಅದನ್ನು ಅರವಿಂದ್ ಬಳಸುತ್ತಿದ್ದಾರೆ, ಅವರ ಬಾಟಲ್ ದಿವ್ಯಾಗೆ ಕೊಟ್ಟಿದ್ದಾರೆ ಎಂದು ಉತ್ತರಿಸುತ್ತಾರೆ. ಆಗ ಮಂಜು ಹೆಂಗಿದಾಳೋ ಏನೋ ಪಾಪ ಎಂದು ಕಳವಳ ವ್ಯಕ್ತಪಡಿಸುತ್ತಾರೆ. ಐ ಥಿಂಕ್ ಅವಳು ಫೈನ್ ಆಗಿರುತ್ತಾಳೆ ರೆಸ್ಟ್ ಬೇಕಿರುತ್ತೆ ಅನ್ಸುತ್ತೆ. ಈ ಟೈಮಲ್ಲಿ ಕೇರ್, ಮೆಡಿಕೇಶನ್ಸ್ ಬೇಕಿರುತ್ತದೆ, ಬಿಗ್ ಬಾಸ್ ಮನೆಯ ಒಳಗಡೆ ಅದು ಕಷ್ಟ. ಬರ್ತಾ ಬರ್ತಾ ಮನೆ ಸೈಲೆಂಟ್, ಖಾಲಿ ಅನ್ನಿಸುತ್ತಿದೆ ಕಣೋ ಎಂದು ಶುಭ ಪ್ರತಿಕ್ರಿಯಿಸುತ್ತಾರೆ.

  • ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ವೈಷ್ಣವಿ ಮದುವೆ?

    ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ವೈಷ್ಣವಿ ಮದುವೆ?

    ಬಿಗ್ ಬಾಸ್ ಮನೆಯಲ್ಲಿ ಮನೆ ಮಂದಿ ಹಿಂದೆಂದಿಗಿಂತ ಆಕ್ಟಿವ್ ಆಗಿದ್ದಾರೆ. ಒಬ್ಬರಿಗೊಬ್ಬರು ಕ್ಲೋಸ್ ಆಗ್ತಾ ಇದ್ದಾರೆ. ತಮ್ಮ ವೈಯಕ್ತಿಕ ವಿಚಾರಗಳನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇರೋದು ಸ್ವಲ್ಪೇ ದಿನ, ಸುದೀಪ್ ಕಿವಿ ಮಾತು ಹೇಳುವ ಮುನ್ನ ಇದೊಂದು ಬಿಗ್ಬಾಸ್ ಮನೆ, ಬಂದಿರೋದು ಆಡೋಕೆ ಅಂತ ನೋಡ್ತಿದ್ದವರು, ಈಗ ಇಲ್ಲಿರುವವರೇ ನಮ್ಮವರು ಅಂತ ಭಾವಿಸ್ತಾ ಇದ್ದಾರೆ. ಅದಕ್ಕೆ ಉದಾಹರಣೆ ಇಂದು ದಿವ್ಯ ಎಸ್ ಹಾಗೂ ವೈಷ್ಣವಿ ಕುಳಿತು ಆಡಿದ ಮಾತುಕತೆ.

    ತೀರಾ ವೈಯಕ್ತಿಕ ವಿಚಾರಗಳನ್ನ ಯಾರು ಅಷ್ಟು ಸುಲಭದಲ್ಲಿ ಶೇರ್ ಮಾಡಿಕೊಳ್ಳಲ್ಲ ಅದರಲ್ಲೂ ವೈಷ್ಣವಿ ಸ್ವಲ್ಪ ಚೂಸಿ ಹುಡುಗಿ. ಆದ್ರೆ ಇವತ್ತು ತೀರಾ ವೈಯಕ್ತಿಕ ಆಸೆಯನ್ನ ದಿವ್ಯಾ ಬಳಿ ಹಂಚಿಕೊಂಡಿದ್ದಾರೆ. ದಿವ್ಯಾ ಮತ್ತು ವೈಷ್ಣವಿ ಇಬ್ಬರೆ ಕುಳಿತಿದ್ರು. ಆಗ ದಿವ್ಯಾ, ವೈಷ್ಣವಿಯನ್ನ ಮದುವೆ ವಿಚಾರದ ಬಗ್ಗೆ ಕೇಳ್ತಾರೆ. ನಿಮ್ಗೆ ಮದುವೆ ಬಗ್ಗೆ ಏನ್ ಅನ್ಸುತ್ತೆ ಅಂತ ಅದ್ಕೆ ವೈಷ್ಣವಿ ಅದರ ಬಗ್ಗೆ ಇರುವ ಒಂದು ದೊಡ್ಡ ಕನಸನ್ನೇ ತೆರೆದಿಟ್ಟಿದ್ದಾರೆ.

    ಮದುವೆ ಆಗೋದಕ್ಕೆ ನಾನ್ ತುದಿಗಾಲಲ್ಲಿ ನಿಂತಿದ್ದೀನಿ. ಮ್ಯಾರೇಜ್ ಅನ್ನೋದು ತುಂಬಾ ಇಷ್ಟ. ಅದರಲ್ಲಿ ಪ್ರೀತಿ, ಕನೆಕ್ಷನ್, ಕೇರಿಂಗ್, ನಿಮ್ಮೋರು ಅಂತ ಹೇಳಿಕೊಳ್ಳೋಕೆ ಒಂದು ಕಂಪ್ಯಾನಿಯನ್ ಇರುತ್ತೆ. ಗಂಡ ಅನ್ನೋ ಸೆಂಟಿಮೆಂಟ್ ಬೇರೆ. ಎಲ್ಲವನ್ನು ಎಲ್ಲರ ಬಳಿ ಹೇಳಿಕೊಳ್ಳೋಕೆ ಆಗಲ್ಲ. ಅಣ್ಣ ತಮ್ಮ ಇರಬಹುದು, ಅಪ್ಪ ಅಮ್ಮ ಇರಬಹುದು, ಇವನ್ ಗಂಡನ ಬಳಿಯೂ ಎಲ್ಲವನ್ನು ಹೇಳಿಕೊಳ್ತೀವಿ ಅಂತಲ್ಲ. ನಂಗೆ ಫ್ರೆಂಡ್ಸ್ ಯಾರಿಲ್ಲ ಅಂದಾಗ ದಿವ್ಯ ಯಾಕಿಲ್ಲ ಫ್ರೆಂಡ್ಸ್ ಅಂತಾಳೆ. ಅದಕ್ಕೆ ವೈಷ್ಣವಿ. ನಾನು ಎಲ್ಲರನ್ನು ನಂಬಲ್ಲ. ಒಬ್ಬರನ್ನ ನಂಬ್ತೀನಿ, ಗ್ಯಾಂಗ್ ಇರೋದಕ್ಕೆ ಇಷ್ಟಪಡಲ್ಲ ಅಂತಾಳೆ. ಅಲ್ಲಿಗೆ ದಿವ್ಯಾ ಹಾಗೂ ವೈಷ್ಣವಿ ನಡುವಿನ ಮಾತುಕತೆ ಮುಗಿಯುತ್ತೆ.

    ರಘು, ಶುಭಾ, ಅರವಿಂದ್, ಶಮಂತ್ ಕೂತು ಮಾತಾಡ್ತಾ ಇರ್ತಾರೆ. ಅಲ್ಲಿಗೆ ಬಂದ ವೈಷ್ಣವಿ ಮಾತುಕತೆಯಲ್ಲಿ ಭಾಗಿಯಾಗ್ತಾರೆ. ಆಗ ಶುಭಾಗೆ ಏನ್ ಅನ್ನಿಸ್ತೋ ಏನೋ ನಿನ್ ಮದ್ವೆ ಆಗೋನು ಎರಡು ವಾರಾನೂ ಇರಲ್ಲ. ಬೋರ್ ಆಗಿ ಓಡಿ ಹೋಗ್ತಾನೆ ಅಂತಾಳೆ. ಇಲ್ಲ ಅವ್ನು ತುಂಬಾ ಖುಷಿ ಪಡ್ತಾನೆ ಅಂತ ವೈಷ್ಣವಿ ಅಂದಾಗ ಅದೇ ಭ್ರಮೆನಲ್ಲಿ ಬದುಕ್ತಾನೆ ಅನ್ನೋ ಅರ್ಥದಲ್ಲಿ ರಘು ಹಾಗೂ ಶುಭಾ ರೇಗಿಸ್ತಾರೆ.

  • ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

    ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

    ಳೆದ ಕೆಲ ದಿನಗಳಿಂದ ಪ್ರಿಯಾಂಕಾ ಹಾಗೂ ಶಮಂತ್ ಜೋಡಿ ಕುರಿತು ಸಖತ್ ಚರ್ಚೆಯಾಗುತ್ತಿದ್ದು, ಚಕ್ರವರ್ತಿ ಇವರಿಬ್ಬರನ್ನು ಸೇರಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಮಾತ್ರ ನಾಚುತ್ತಲೇ ತಿರಸ್ಕರಿಸುತ್ತಿದ್ದಾರೆ. ಇಬ್ಬರೂ ಪರೋಕ್ಷವಾಗಿ ಮಾತನಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಈ ಮಧ್ಯೆ ಕನ್ವಿನ್ಸ್ ಮಾಡಲು ಬಂದ ಚಕ್ರವರ್ತಿ ಅವರಿಗೆ ನಗುತ್ತಲೇ ತಕ್ಕ ಉತ್ತರ ನೀಡಿದ್ದಾರೆ.

    ನಿನ್ನೆ ನಾನು ಹೇಳಿದ್ದಕ್ಕೆ ಶಮಂತ್ ತುಂಬಾ ಡಿಸ್ಟರ್ಬ್ ಆಗಿಬಿಟ್ಟಿದ್ದಾನೆ, ಹಾಗೆ ಹೇಳಬೇಡಿ ಸರ್ ಎಂದು ಜಗಳ ಮಾಡಿದ. ನನಗೆ ಇಂಟರೆಸ್ಟ್ ಇಲ್ಲ, ಹೋಗಿ ನೇರವಾಗಿ ಹೇಳುತ್ತೇನೆ ಅವರಿಗೆ ಎಂದು ರೇಗಾಡಿದ ಎಂದು ಚಕ್ರವರ್ತಿ ಪ್ರಿಯಾಂಕಾಗೆ ಹೇಳಿದ್ದಾರೆ. ಇದಕ್ಕೆ ಕೋಪದಿಂದಲೇ ಉತ್ತರಿಸಿದ ಪ್ರಿಯಾಂಕಾ, ನೀವು ನಿನ್ನೆ ತುಂಬಾ ಅತಿಯಾಗಿ ಮಾತನಾಡಿದಿರಿ ಎಂದು ಹೇಳಿದ್ದಾರೆ. ಇದಕ್ಕೆ ಚಕ್ರವರ್ತಿ ಉತ್ತರಿಸಿ ನನಗೇನು ಗೊತ್ತು, ನೀನು ಲವ್ ಸಿಂಬಲ್ ಮಾಡಿದ್ದಕ್ಕೆ ಆ ರೀತಿ ಅಫೆಕ್ಷನ್ ಇರಬಹುದು ಎಂದುಕೊಂಡೆ ಎಂದಿದ್ದಾರೆ. ತಕ್ಷಣವೇ ಉತ್ತರಿಸಿದ ಪ್ರಿಯಾಂಕಾ, ನನಗೆ ಹೊರಗಡೆ ತುಂಬಾ ಜನ ಬೇಕಾದವರಿದ್ದಾರೆ, ಈ ಮನೆಗೆ ಅದಕ್ಕೋಸ್ಕರ ಬಂದಿಲ್ಲ. ಆ ರೀತಿ ಯೋಚನೆಗಳೂ ಬರಲ್ಲ ಎಂದು ಖಾರವಾಗಿ ಪ್ರತಿಕ್ರಿಸಿದ್ದಾರೆ.

    ಇದಕ್ಕಾಗಿಯೇ ಬರಲ್ಲ, ಆ ರೀತಿ ಸಂಭವಿಸಬಹುದು ಎಂದು ಚಕ್ರವರ್ತಿ ಸಮರ್ಥಿಸಿಕೊಳ್ಳಲು ಹೋಗಿದ್ದಾರೆ. ನಿಮಗೆ ನೀವೇ ಹೇಗೆ ಯೋಚನೆ ಮಾಡುತ್ತೀರಿ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಹಾಗೆ ಅನ್ನಿಸಿದ್ದಕ್ಕೆ ಬಂದು ನಿನ್ನನ್ನು ಕೇಳಿದೆ, ಹಾಗೆ ಅನ್ನಿಸಿಲ್ಲ ಎಂದು ಗೊತ್ತಾದ ಮೇಲೆ ಬಿಟ್ಟಾಕಿದೆ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ಅಷ್ಟು ಬುದ್ಧಿವಂತರಾಗಿ ಹೀಗೆ ಮಾಡಿದರೆ ಹೇಗೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಈ ಬಗ್ಗೆ ಶಮಂತ್ ಸಹ ಬೇಡ ಸರ್ ನಂಗೆ ಇಂಟರೆಸ್ಟ್ ಇಲ್ಲ ಅಂದ, ಸರಿ ಫ್ರೆಂಡ್ ಆಗಿರಿ ಎಂದು ಹೇಳಿದೆ ಎಂದು ಚಕ್ರವರ್ತಿ ಹೇಳುತ್ತಾರೆ.

    ಹಾಗಾದರೆ ನಮಗೆ ಇಂಟರೆಸ್ಟ್ ಇದೆ ಅಂತಾನಾ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಆಗ ನನಗೆ ಮೂರ್ನಾಲ್ಕು ದಿನದಿಂದ ಹಾಗೆ ಅನ್ನಿಸುತ್ತಿತ್ತು, ನಿಮ್ಮಿಬ್ಬರ ನಡುವೆ ಅಫೆಕ್ಷನ್ ಇದೆ ಎಂದು ಭಾಸವಾಗಿತ್ತು ಎಂದು ಚಕ್ರವರ್ತಿ ಹೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸ್‍ನಲ್ಲಿ ಅಥವಾ ಎಲ್ಲಿ ಪರಿಚಯವಾಗಿದ್ದಿಯಾ ಗೊತ್ತಿಲ್ಲ, ಒಟ್ನಲ್ಲಿ ನೀನು ಚೆನ್ನಾಗಿರಬೇಕು ಅಷ್ಟೇ. ಇದಕ್ಕಾಗಿ ನಮ್ಮ ಕೈಲಾಗಿದ್ದನ್ನು ನಾವು ಮಾಡುತ್ತೇವೆ, ನಮಗೆ ದೇವರು ಶಕ್ತಿ, ಅಸ್ಥಿತ್ವ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಹೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಅದನ್ನು ಇಂತಹ ಕೆಲಸಗಳಿಗೆ ಉಪಯೋಗಿಸಬೇಡಿ, ಬೇರೆ ಕೆಲಸಗಳಿವೆ ಅವುಗಳನ್ನು ಮಾಡಿ, ನಾವು ಯಾರನ್ನು ಮದುವೆ ಆಗಬೇಕು ಎಂಬುದು ನಮಗೆ ಗೊತ್ತಿದೆ ಎಂದು ತಕ್ಕ ಉತ್ತರ ನೀಡಿದ್ದಾರೆ.

  • ಶುಭಾ ಪೂಂಜಾ ಕಣ್ಣೀರು ಹಾಕಿದ್ಯಾಕೆ? ದಿವ್ಯಾ ಜೊತೆ ಏನ್ ಸಂಬಂಧ?

    ಶುಭಾ ಪೂಂಜಾ ಕಣ್ಣೀರು ಹಾಕಿದ್ಯಾಕೆ? ದಿವ್ಯಾ ಜೊತೆ ಏನ್ ಸಂಬಂಧ?

    ನಾರೋಗ್ಯದ ಕಾರಣ ದಿವ್ಯಾ ಉರುಡುಗ ಮನೆಯಿಂದ ಹೊರ ನಡೆದಿರುವುದಕ್ಕೆ ಮನೆಯಲ್ಲಿ ನೀರವ ಮೌನ ಆವರಿಸಿದೆ. ಪ್ರತಿಯೊಬ್ಬ ಸ್ಫರ್ಧಿಯೂ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲದ ಮಧ್ಯೆ ದಿವ್ಯಾ ಉರುಡುಗ ದೂರವಾಗಿದ್ದಕ್ಕೆ ಶುಭಾ ಪೂಂಜಾ ಗಳಗಳನೆ ಅತ್ತಿದ್ದಾರೆ.

    ಹೌದು ದಿವ್ಯಾ ಉರುಡುಗ ಅವರಿಗೆ ಅನಾರೋಗ್ಯದ ಕಾರಣ ಮನೆಯಿಂದ ಹೊರ ಹೋಗಿದ್ದು, ಅವರಿಗೆ ಯೂರಿನ್ ಇನ್ಫೆಕ್ಷನ್ ಆಗಿದೆ, ಸ್ಕ್ಯಾನ್ ಮಾಡಿಸಲು ಹೋಗಿದ್ದಾರೆ, ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ ಎಂದು ನಿನ್ನೆಯೇ ಬಿಗ್ ಬಾಸ್ ತಿಳಿಸಿದ್ದರು. ಇಂದು ಅವರ ಬಟ್ಟೆಯನ್ನು ಸಹ ಸ್ಟೋರ್ ರೂಮ್ ಗೆ ಕಳುಹಿಸುವಂತೆ ಸೂಚಿಸಿದ ಬಳಿಕ ಮನೆ ಮಂದಿಯೆಲ್ಲ ಶಾಕ್ ಆಗಿದ್ದು, ದಿವ್ಯಾ ಉರುಡುಗ ಹೋಗಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಹಿಳಾ ಸ್ಪರ್ಧಿಗಳ ಪೈಕಿ ಶುಭಾ ಬಹಳ ಬೇಸರ ಪಟ್ಟು ಗಳಗಳನೆ ಅತ್ತಿದ್ದಾರೆ.

    ಅರವಿಂದ್ ಹಾಗೂ ಶುಭ ಪೂಂಜಾ ಮಾತನಾಡಿದ್ದು, ಅರವಿಂದ್ ಬೇಸರದಲ್ಲಿದ್ದಿದ್ದಕ್ಕೆ ಸ್ಟೇ ಸ್ಟ್ರಾಂಗ್ ಎಂದು ಹೇಳಿದ್ದಾರೆ. ಅಲ್ಲದೆ ನನಗೂ ಡೇ ಒನ್ ಇಂದ ಅಕ್ಕ ಎಂದು ಕರೆದಿದ್ದು ಅವಳೊಬ್ಬಳೆ ಎಂದು ಹೇಳಿದ್ದಾರೆ. ಈ ಮೂಲಕ ತಾವು ಅಷ್ಟು ಅತ್ತಿದ್ದೇಕೆ, ದಿವ್ಯಾ ಉರುಡುಗ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಹೊರ ಹಾಕಿದ್ದಾರೆ.

    ಅವಳು ಯಾವಾಗಲೂ ಅಕ್ಕ ಎಂದು ಕರೆಯುತ್ತಿದ್ದಳು, ನಾನು ಯಾವಾಗಲೂ ಬೈತಿದ್ದೆ. ಕ್ಲೋಸ್‍ನೆಸ್ ಬೇರೆ, ಸಡನ್ ಆಗಿ ಅವಳು ಕನ್ಫೆಶನ್ ರೂಂಗೆ ಹೋದಳು ಅದೇ ಲಾಸ್ಟ್ ನಾನು ನೋಡಿದ್ದು. ಗುಡ್ ಬೈ ಹೇಳಲಿಲ್ಲ ಏನೂ ಇಲ್ಲ, 65 ದಿನ ಜೊತೆಗಿದ್ದಾಗ ಬಾಂಡಿಂಗ್ ಇದ್ದೇ ಇರುತ್ತದೆ. ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಹೋಗುತ್ತಾರೆ ಎಂದರೆ ದುಃಖ ಆಗೇ ಆಗುತ್ತೆ ಎಂದು ನಿಧಿ ಸುಬ್ಬಯ್ಯ ಬಳಿ ಶುಭಾ ಹೇಳಿಕೊಂಡಿದ್ದಾರೆ.

    ಇದೇ ಸಂದರ್ಭದಲ್ಲಿ ಶುಭ ಜೊತೆ ಅರವಿಂದ್ ಸಹ ಗಳಗಳನೆ ಅತ್ತಿದ್ದಾರೆ. ಆಗ ನಿಧಿ ಸುಬ್ಬಯ್ಯ ಆಗಮಿಸಿ, ದುಃಖ ಆಗಿದೆ ಸೂಪರ್ ಮ್ಯಾನ್ ರೀತಿ ಪೋಸ್ ಕೊಡಬೇಡ ಎಂದು ಸಮಾಧಾನ ಮಾಡಿದ್ದಾರೆ. ಬೇಡ ಎಂದರೂ ನೆನಪಾಗುತ್ತೆ ಅದು. ತುಂಬಾ ಹೊತ್ತು ಟೈಮ್ ಸ್ಪೆಂಡ್ ಮಾಡುತ್ತಿದ್ದೆವು, ಬೆಳಗ್ಗೆಯಿಂದ ರಾತ್ರಿ ವರೆಗೆ ಜೊತೆಗೇ ಇರುತ್ತಿದ್ದೆವು. ಗಲಾಟೆ ಆದ್ರು ನಿನ್ನ ಜೊತೆಗೆ, ಖುಷಿಯಾದ್ರೂ ನಿನ್ನ ಜೊತೆನೆ ಅಂದುಕೊಂಡಿದ್ದೆವು. ಅವಳಿಗೂ ತುಂಬಾ ಬೇಸರವಾಗಿದೆ ಎಂದಿದ್ದಾರೆ. ಎಷ್ಟೇ ತಡೆದುಕೊಂಡರೂ ಕಂಟ್ರೋಲ್ ಆಗುವುದಿಲ್ಲ ಎಂದು ಅರವಿಂದ್ ದುಃಖಿತರಾಗಿದ್ದಾರೆ. ಬಳಿಕ ಮನೆಯವರೆಲ್ಲ ಅರವಿಂದ್ ಅವರನ್ನು ಸಮಾಧಾನ ಮಾಡಿದ್ದಾರೆ.

  • ಅವಳು ಇನ್ನು ರಿಟರ್ನ್ ಬರಲ್ಲ  – ಗಳಗಳನೇ ಕಣ್ಣೀರಿಟ್ಟ ಅರವಿಂದ್

    ಅವಳು ಇನ್ನು ರಿಟರ್ನ್ ಬರಲ್ಲ – ಗಳಗಳನೇ ಕಣ್ಣೀರಿಟ್ಟ ಅರವಿಂದ್

    ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾ, ಪ್ರತಿ ದಿನ ಲವಲವಿಕೆಯಿಂದ ಇರುತ್ತಿದ್ದ ದಿವ್ಯಾ ಉರುಡುಗ ಈಗ ಮನೆಯನ್ನು ತೊರೆದಿದ್ದು ವಿಷಯ ಕೇಳಿ ಅರವಿಂದ್ ಗಳಗಳನೇ ಅತ್ತಿದ್ದಾರೆ.

    67ನೇ ದಿನ ದಿವ್ಯಾ ಉರುಡುಗ ಬಟ್ಟೆಗಳನ್ನು ತಂದು ಸ್ಟೋರ್ ರೂಮಿಗೆ ಇರಿಸಿ ಈ ಕೂಡಲೇ ಎಂದು ಬಿಗ್ ಬಾಸ್ ಆದೇಶಿಸುತ್ತಾರೆ. ಕ್ಯಾಪ್ಟನ್ ಚಕ್ರವರ್ತಿ ಚಂದ್ರಚೂಡ್ ಆದೇಶವನ್ನು ಓದುತ್ತಿದ್ದಂತೆ ಗದ್ಗದಿತರಾದರು.

    ಈ ಆದೇಶವನ್ನು ಕೇಳಿದ ಅರವಿಂದ್,”ಹೋದ್ರೆ ಅವಳು ಇನ್ನೂ ಬರಲ್ಲ ರಿಟರ್ನ್” ಎಂದು ಹೇಳಿ ಕಣ್ಣೀರು ಹಾಕಿದರು.”ದಿನ ಬೆಳಗ್ಗೆ ಎದ್ದು ರಾತ್ರಿ ತನಕ ನನ್ನ ಜೊತೆ ಅವಳು ಇರುತ್ತಿದ್ದಳು. ನಿಮ್ ಜೊತೆ ಗಲಾಟೆಯಾದ್ರೂ ಖುಷಿಯಾದ್ರೂ ನನ್ ಜೊತೇನೆ ಇರ್ತಿದ್ದಳು. ಎಲ್ಲ ಹೋಯ್ತು” ಎಂದು ಹೇಳಿ ಭಾವುಕರಾದರು.

    ಪ್ರಶಾಂತ್ ಸಂಬರಗಿ ನಿನ್ನೆಯಿಂದ ಅರವಿಂದ್ ಡಲ್ ಆಗಿದ್ದಾನೆ ಎಂದರೆ ಮಂಜು ಅರವಿಂದನನ್ನು ನೋಡಲು ನನ್ನಿಂದ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ದಿವ್ಯಾ ಉರುಡುಗ ಮತ್ತೆ ಬಿಗ್ ಬಾಸ್ ಮನೆಗೆ ಬರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಎಲ್ಲ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಳುಹಿಸಲಾಗಿದೆ. ಒಂದು ಬಾರಿ ಮನೆಯಿಂದ ಹೊರಗಡೆ ಹೋದರೆ ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶ ಇಲ್ಲ. ಅಷ್ಟೇ ಅಲ್ಲದೇ ಈಗ ಕೋವಿಡ್ ಇರುವ ಕಾರಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಮತ್ತೆ ಕ್ವಾರಂಟೈನ್ ಆಗಬೇಕಾಗುತ್ತದೆ. ಕೊನೆಯ ಮೂರು ವಾರಗಳ ಕಾಲ ಇರುವ ಕಾರಣ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಮತ್ತೆ ದಿವ್ಯಾ ಬರುವುದಿಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

    ಜೋಡಿ ಟಾಸ್ಕ್ ನಿಂದ ಅರವಿಂದ್ ಮತ್ತು ದಿವ್ಯಾ ಬಾಂಡ್ ಗಟ್ಟಿಯಾಗಿತ್ತು. ಇಬ್ಬರ ಚಿಂತನೆಗಗಳು ಮ್ಯಾಚ್ ಆಗಿದ್ದ ಕಾರಣ ಕೆಮಿಸ್ಟ್ರಿ ವರ್ಕ್ ಆಗಿ ವೀಕ್ಷಕರ ಗಮನ ಸೆಳೆದಿತ್ತು. ಮನೆಯ ಸದಸ್ಯರ ಜೊತೆ ಸುದೀಪ್ ಸಹ ಇಬ್ಬರನ್ನು ಕಾಲೆಳೆಯುತ್ತಿದ್ದರು. ನೀವಿಬ್ಬರು ಲವ್ ಮಾಡ್ತಿದ್ದೀರಾ ಎಂಬ ಮನೆಯವರ ಪ್ರಶ್ನೆಗೆ, ಇಬ್ಬರೂ ನಾವಿಬ್ಬರು ಉತ್ತಮ ಫ್ರೆಂಡ್ಸ್, ಇನ್ನೂ ಆ ಹಂತಕ್ಕೆ ಹೋಗಿಲ್ಲ ಎಂದು ಉತ್ತರ ನೀಡಿದ್ದರೂ ಜೋಡಿಗಳ ರೀತಿ ಮನೆಯಲ್ಲಿ ಇರುತ್ತಿದ್ದರು. ಅಷ್ಟೇ ಅಲ್ಲದೇ ದಿವ್ಯಾ ತನ್ನ ತಂದೆ ನೀಡಿದ್ದ ಡೈಮಂಡ್ ಉಂಗುರವನ್ನು ಅರವಿಂದ್‍ಗೆ ನೀಡಿ ಕೊನೆಯವರೆಗೂ ನನ್ನ ಜೊತೆ ಇರಬೇಕು ಎಂದು ತನ್ನ ಮನಸ್ಸಿನ ಮಾತನ್ನು ಹೇಳಿದ್ದರು.

    ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಿವ್ಯಾ ಈಗ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರೂ ಮನೆಯಲ್ಲಿದ್ದಾಗ ಅರವಿಂದ್ ಬಹಳಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ತನ್ನ ಪಾಲಿನ ಆಹಾರವನ್ನು ನೀಡಿದ್ದು ಅಲ್ಲದೇ ದಿವ್ಯಾ ಅವರ ಬಟ್ಟೆಯನ್ನು ಒಗೆದು ಕೊಡುವ ಮೂಲಕ ಪ್ರೀತಿ ತೋರಿಸಿದ್ದರು. ಹಳೆಯ ಸುಮಧರ ಕ್ಷಣಗಳನ್ನು ನೆನೆದು ಅರವಿಂದ್ ಈಗ ಕಣ್ಣೀರು ಹಾಕಿದ್ದು 67ನೇ ದಿನದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಪ್ರಸಾರವಾಗಲಿದೆ.

    ದಿವ್ಯಾಗೆ ಆಗಿದ್ದು ಏನು?
    66ನೇ ದಿನ ಲಿವಿಂಗ್ ಏರಿಯಾದಲ್ಲಿ ಸದಸ್ಯರು ಕುಳಿತ್ತಿದ್ದಾಗ, ದಿವ್ಯಾ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ. ಅವರು ಕ್ಷೇಮವಾಗಿದ್ದಾರೆ ಎಂದು ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆ ತಿಳಿಸುತ್ತಾರೆ. ಇದನ್ನು ಹೇಳುತ್ತಿದ್ದಂತೆ ಅರವಿಂದ್ ಸ್ವಲ್ಪ ಭಾವುಕರಾಗಿದ್ದರು. ಬಳಿಕ ಬಿಗ್ ಬಾಸ್ ವಾಯ್ಸ್ ಕೇಳಿಸಿದ್ದು, ಸ್ಕ್ಯಾನಿಂಗ್ ಬಳಿಕ ಯೂರಿನರಿ  ಇನ್‍ಫೆಕ್ಷನ್ ಕಂಡು ಬಂದಿರುವುದರಿಂದ ದಿವ್ಯಾ ಉರುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಅರವಿಂದ್ ಭಾವುಕರಾಗಿಯೇ ಯಾ ಯಾ ಎಂದು ಹೇಳುತ್ತಾರೆ. ಅಲ್ಲದೆ ಇಲ್ಲಿಗಿಂತ ಅಲ್ಲಿ ಚೆನ್ನಾಗಿರುತ್ತಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

  • ನಿನ್ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ

    ನಿನ್ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ

    ಬಿಗ್ ಬಾಸ್ ಮನೆಯಲ್ಲಿ ಬರೀ ಜೋಡಿಯದ್ದೇ ಮಾತು. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಂದು ಕಡೆಯಾದರೆ, ಮಂಜು ಹಾಗೂ ದಿವ್ಯಾ ಸುರೇಶ್ ಅವರದ್ದೇ ಮತ್ತೊಂದು ಜೋಡಿ. ಇದನ್ನು ಕಂಡು ಶಮಂತ್‍ಗೆ ಮಾತ್ರ ಸಖತ್ ಹೊಟ್ಟೆ ಉರಿ. ನನಗೂ ಯಾರೂ ಜೋಡಿ ಆಗುತ್ತಿಲ್ಲವಲ್ಲ ಎಂಬ ಕೊರಗು. ಇದನ್ನು ಹಲವು ಬಾರಿ ದಿವ್ಯಾ ಉರುಡುಗ ಬಳಿ ಹೇಳಿಕೊಂಡಿದ್ದಾರೆ ಸಹ. ಆದರೆ ಇದೀಗ ಜೋಡಿಯಾಗುವ ಸೂಚನೆಯನ್ನು ನೀಡಿದ್ದಾರೆ, ಇದಕ್ಕೆ ಸ್ವತಃ ಚಕ್ರವರ್ತಿ ಅವರು ಆರಂಭ ಹಾಡಿದ್ದಾರೆ.

    ಹೌದು ಶಮಂತ್ ಹಾಗೂ ಪ್ರಿಯಾಂಕಾ ವಿಚಾರದಲ್ಲಿ ಚಕ್ರವರ್ತಿ ಮಾತನಾಡಿದ್ದು, ಇಬ್ಬರ ನಡುವಿನ ಕುರಿತು ವಿರಸದ ಬಗ್ಗೆ ಮಾತನಾಡುವಾಗ ಲವ್ ವಿಷಯವನ್ನೂ ತಿಳಿಸಿದ್ದಾರೆ. ಆಟವಾಡಿಕೊಂಡು, ತಿನ್ಕೊಂಡು ಇದ್ರೆ ಬಿಗ್ ಬಾಸ್ ಬೇಗ ಮನೆಯಿಂದ ಆಚೆ ಕಳುಹಿಸುತ್ತಾರೆ ಎಂದೆ ಅದ್ಕೆ ಪ್ರಿಯಾಂಕಾ ಬೇಜಾರಾಗಿದ್ದಾರೆ ಎಂದು ಶಮಂತ್ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ಅವರು, ನೀನು ಆಟವಾಡಿಕೊಂಡು, ತಿನ್ಕೊಂದು ಇರೋದು ನೀನು, ಆ ಹಡುಗಿಗೆ ಯಾಕೆ ಹೇಳ್ತಿಯಾ ಎಂದು ಕೇಳಿದ್ದಾರೆ.

    ಇಷ್ಟೆಲ್ಲಾ ಆದ್ರೂ ನಗ್ತಿದಾರೆ ಅಂದ್ರೆ ಪ್ರಿಯಾಂಕಾಗೆ ನಿನ್ನ ಮೇಲೆ ಲವ್ ಇದೆ ಎಂದು ಚಕ್ರವರ್ತಿ ಹೇಳಿದ್ದು, ಇದಕ್ಕೆ ಪ್ರಶಾಂತ್ ಸಂಬರಗಿ ಸಹ ಸಾಥ್ ನೀಡಿ, ಪ್ರೀತಿ ಇದೆ ಇಬ್ಬರೂ ಹಂಚಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ. ಪ್ರಿಯಾಂಕಾಗೆ ಶಮಂತ್ ಬಗ್ಗೆ ಅಫೆಕ್ಷನ್ ಇದೆ, ಅವರ ಬಾಡಿ ಲಾಂಗ್ವೇಜ್, ನಗೆ, ಮಾತನಾಡುವುದು, ಕಾಮಿಡಿ ಮಾಡುವುದು ಎಲ್ಲವನ್ನೂ ನೋಡಿದರೆ ಇವರಿಬ್ಬರ ಮಧ್ಯೆ ಲವ್ ಇದೆ ಅನ್ನಿಸುತ್ತಿದೆ ಎಂದು ಮಾತನಾಡಿಕೊಂಡಿದ್ದಾರೆ.

    ಅಲ್ಲದೆ ನಿನಗೆ ಅವನ ಬಗ್ಗೆ ಅಫೆಕ್ಷನ್ ಇಲ್ವೇನಮ್ಮ ನಿಜ ಹೇಳು ಎಂದು ಚಕ್ರವರ್ತಿ ನೇರವಾಗಿ ಪ್ರಿಯಾಂಕಾಗೆ ಕೇಳುತ್ತಾರೆ. ನಾನು ಮನೋಶಾಸ್ತ್ರಜ್ಞ, ಬಾಡಿ ಲಾಂಗ್ವೇಜ್, ಕಣ್ಣುಗಳನ್ನು ನೋಡಿದರೆ ಗೊತ್ತಾಗಿ ಬಿಡುತ್ತೆ. ಒಂದೇ ಟೀಮ್‍ನಲ್ಲಿದ್ದು ನಮ್ಮನ್ನು ಯಾಕೆ ಹೀಗೆ ಸಾಯಿಸುತ್ತೀರಿ, ನಿರ್ಧಾರ ಮಾಡಿ ಎಂದಿದ್ದಾರೆ. ಅಲ್ಲದೆ ಪ್ರಿಯಾಂಕಾ ಹಾರ್ಟ್ ಸಿಂಬಾಲ್ ಮಾಡಿದ್ದಕ್ಕೆ ಅದು ನಿನಗೇ ಮಾಡಿದ್ದು ಎಂದು ಚಕ್ರವರ್ತಿ ಶಮಂತ್‍ಗೆ ಹೇಳುತ್ತಾರೆ.

    ಅದೇನು ಸಮಾಧಾನ ಮಾಡಿಕೊಂಡು ಮನವೊಲಿಸಿಕೊಳ್ಳಿ ಎನ್ನುತ್ತಾರೆ, ಆಗ ಶಮಂತ್ ಬೈಯಿಸಿಕೊಂಡು ನಾನೇ ಸಮಾಧಾನ ಮಾಡಲೇ ಎಂದು ಪ್ರಶ್ನಿಸುತ್ತಾರೆ. ಒಂದು ಹುಡುಗಿ ನಿನಗಾಗಿ ಲವ್ ಸಿಂಬಲ್ ಮಾಡಿದೆ ಎಂದರೆ ಇದಕ್ಕಿಂತ ಹಿಂಟ್ ಕೊಡಲು ಸಾಧ್ಯವಿಲ್ಲ. ನಾನು, ಪ್ರಶಾಂತ್ ಸೇರಿ ಮದುವೆ ಮಾಡಿಸುತ್ತೇವೆ ತಲೆ ಕೆಡಿಸಿಕೊಳ್ಳಬೇಡಿ. ನಿನ್ನ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ ಎಂದು ಶಮಂತ್‍ಗೆ ಚಕ್ರವರ್ತಿ ಹೇಳುತ್ತಾರೆ.

    ಇಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಅವರು, ಪ್ರಿಯಾಂಕಾಗೆ ಕಂಗ್ರಾಟ್ಸ್ ಹೇಳುತ್ತಾರೆ, ಆಗ ಪ್ರಿಯಾಂಕಾ ಯಾವ ಖುಷಿಗೆ ಎನ್ನುತ್ತಾರೆ. ತೀರ್ಮಾನ ಮಾಡಿದೆಯಲ್ಲ ಅದ್ಕೆ ಎಂದು ಚಕ್ರವರ್ತಿ ಹೇಳುತ್ತಾರೆ. ಆಗ ನಾಚಿದ ಪ್ರಿಯಾಂಕ ತಗ್ದು ಬಿಟ್ಟಾ ಅಂದ್ರೆ, ಹುಚ್ಚಾ ನಿಮಗೆ, ಕಾಮನ್ ಸೆನ್ಸ್ ಇಲ್ವಾ ಎಂದು ಕಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಮಂತ್ ಒಳ್ಳೆ ಹುಡುಗ ಕಣಮ್ಮ ಎಂದು ಪ್ರಿಯಾಂಕಾಗೆ ಹೇಳುತ್ತಾರೆ ಚಕ್ರವರ್ತಿ, ನಾನು ಅವನಿಗೆ ಕನ್ವೆನ್ಸ್ ಮಾಡುತ್ತೇನೆ ನೀನು ಮುಂದುವರಿ ಎಂದು ಮತ್ತೆ ಪ್ರಿಯಾಂಕಾಗೆ ಹೇಳುತ್ತಾರೆ.

    ಯಾಕೆ ನಾವು ಹೊರಗಡೆ ಹೋಗೋಕೆ ಆಸೆನಾ ನಿಮಗೆ, ನಾವಿಬ್ರೂ ಹೊಡೆದಾಡಿಕೊಂಡು ರಕ್ತ ಬರಿಸಿಕೊಂಡ್ರೆ ಹೊರಗಡೆ ಕಳುಹಿಸುತ್ತಾರೆ ಎಂದು ಪ್ರಿಯಾಂಕಾ ಸಿಟ್ಟಾಗುತ್ತಾರೆ. ಸೆನ್ಸ್ ಇಲ್ವಾ ನಿಮಗೆ, ಏನ್ ತಮಾಷೆ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಚೆನ್ನಾಗಿ ಆಟ ಆಡ್ತಿಲ್ಲ, 500 ರೂ. ಕಳೆದುಕೊಂಡಿದ್ದೀರಿ ಎಂದು ಚಕ್ರವರ್ತಿ ವಿರುದ್ಧ ಪ್ರಿಯಾಂಕಾ ರೇಗಾಡುತ್ತಾರೆ. ಆದರೂ ನಿನ್ ಜೀವನ ಅಲ್ವೇನಮ್ಮ ಎಂದು ಚಕ್ರವರ್ತಿ ಹೇಳುತ್ತಾರೆ, ನನ್ನ ಜೀವನ ಹಾಳಾಗಿ ಹೋಗಲಿ, ನೀವ್ಯಾರು ನನಗೆ ಕೇರ್ ಮಾಡೋಕೆ, ನನಗೆ ನಮ್ಮ ಮನೆಯಲ್ಲಿ ಇದ್ದಾರೆ. ಈ ತರ ಕೇರ್ ಮಾಡೋಕೆ ನೀವ್ಯಾರು, ಎಷ್ಟು ತಾಕತ್ ನಿಮಗೆ? ಎಂದು ರೇಗಾಡುತ್ತಾರೆ. ಇಲ್ವಾ, ತಮಾಷೆ ಮಾಡಿದ್ದಾ? ನಾನು ಸೀರಿಯಸ್ಸಾಗಿ ತಿಳಿದುಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ. ಇದನ್ನೇ ಶುಭ ಪೂಂಜಾ ಅಣಗಿಸಿ, ರಂಜಿಸಿದ್ದಾರೆ.

    ಬಳಿಕ ಶಮಂತ್ ಬಳಿ ಬಂದು, ನಾನ್ ಮಾತಾಡಿದಿನಿ ಬಾ ಮಗ ಫುಲ್ ಸೆಟ್ಲ್ ಮೆಂಟ್ ಮಾಡಿದಿನಿ. ಎಲ್ಲಾ ಸರಿ ಮಾಡಿದೆ, ಒಕೆ ಅಂತೆ ಬಾ, 735 ಮದುವೆ ಮಾಡಿಸಿದ್ದೇನೆ ಇದು 736ನೇಯದ್ದು. ಲವ್ ಮ್ಯಾರೇಜ್, ಓಡೋಗಿರೋ ಮ್ಯಾರೇಜ್ 735 ಮಾಡ್ಸಿದಿನಿ, ಇವನದ್ದು 736ನೇಯದ್ದು. ವಧುವಿನ ಕಡೆಯಿಂದ ಒಕೆ ಆಗಿದೆ, ವರನದ್ದೇ ಸಮಸ್ಯೆ ಎಂದು ಹೇಳುತ್ತಾರೆ. ಬೆಳಗ್ಗೆ ನಾನು ರಿಸಲ್ಟ್ ಹೇಳಬೇಕು ಬಾರಪ್ಪ ಸಪರೇಟ್ ಆಗಿ ಮಾತನಾಡೋಣ, ನೀನು ನನ್ನ ಪುಟ್ಟ ತಮ್ಮ ಬಾರೋ ಎಂದು ಶಮಂತ್‍ಗೆ ಚಕ್ರವರ್ತಿ ಕರೆದಿದ್ದಾರೆ. ನಾನು ಈ ರೂಟಲ್ಲಿ ಹೋಗಬೇಕಾ ಬೇಡವೇ ಎಂಬ ಕನ್ಫ್ಯೂಶನ್‍ನಲ್ಲೇ ಇದ್ದೇ, ಈಗ ರೂಟ್ ಕ್ಲಿಯರ್ ಆಯ್ತು ಎಂದು ಕೊನೆಯದಾಗಿ ಮನೆ ಮಂದಿಗೆ ಚಕ್ರವರ್ತಿ ಹೇಳಿದ್ದಾರೆ.

     

  • ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲು- ಅರವಿಂದ್ ಶಾಕ್

    ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲು- ಅರವಿಂದ್ ಶಾಕ್

    ದಿವ್ಯಾ ಉರುಡುಗ ಅವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಮನೆಮಂದಿಗೆಲ್ಲ ಅಚ್ಚರಿ ಮೂಡಿಸಿತ್ತು. ಆದರೆ ಕಾಣೆಯಾದರು ಎಂಬುದನ್ನು ಬಿಗ್ ಬಾಸ್ ರಾತ್ರಿ ವೇಳೆ ತಿಳಿಸಿದ್ದು, ಸುದ್ದಿ ಕೇಳಿದ ಅರವಿಂದ್ ಫುಲ್ ಶಾಕ್ ಆಗಿದ್ದಾರೆ. ಜೊತೆಗೆ ಮನೆ ಮಂದಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

    ದಿವ್ಯಾ ಉರುಡುಗ ಅವರಿಗೆ ಆರೋಗ್ಯ ಸಮಸ್ಯೆ ಇರುವುದು ಹೊಸದೇನಲ್ಲ. ಆಗಾಗ ಚೆಕಪ್ ಸಹ ಮಾಡಿಸುತ್ತಿದ್ದರು. ಆದರೆ ಇದೀಗ ಇದ್ದಕ್ಕಿಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಮನೆ ಮಂದಿಗೆಲ್ಲ ಅಚ್ಚರಿ ಹಾಗೂ ಬೇಸರಕ್ಕೆ ಒಳಗಾಗಿದ್ದಾರೆ.

    ದಿವ್ಯಾ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ, ಅವರು ಕ್ಷೇಮವಾಗಿದ್ದಾರೆ ಎಂದು ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆ ತಿಳಿಸುತ್ತಾರೆ. ಇದನ್ನು ಹೇಳುತ್ತಿದ್ದಂತೆ ಅರವಿಂದ್ ಸ್ವಲ್ಪ ಭಾವುಕರಾಗಿದ್ದಾರೆ. ಬಳಿಕ ಬಿಗ್ ಬಾಸ್ ವಾಯ್ಸ್ ಕೇಳಿಸಿದ್ದು, ಸ್ಕ್ಯಾನಿಂಗ್ ಬಳಿಕ ಯೂರಿನರಿ ಇನ್‍ಫೆಕ್ಷನ್ ಕಂಡು ಬಂದಿರುವುದರಿಂದ ದಿವ್ಯಾ ಉರುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ.

    ಹೀಗೆ ಹೇಳುತ್ತಿದ್ದಂತೆ ಮನೆಯ ಸದಸ್ಯರು ಅವರು ಹುಶಾರಾಗುತ್ತಾರೆ ಎಂದು ಅರವಿಂದ್‍ಗೆ ಹೇಳುತ್ತಾರೆ. ಆಗ ಅರವಿಂದ್ ಭಾವುಕರಾಗಿಯೇ ಯಾ ಯಾ ಎಂದು ಹೇಳುತ್ತಾರೆ. ಅಲ್ಲದೆ ಇಲ್ಲಿಗಿಂತ ಅಲ್ಲಿ ಚೆನ್ನಾಗಿರುತ್ತಾಳೆ ಎಂದು ಹೇಳುತ್ತಾರೆ. ದಿವ್ಯಾ ಉರುಡುಗ ಅವರು ಯಾವಾಗ ಮನೆ ಬಿಟ್ಟು ಹೊರ ಹೋದರು ಎಂಬುದನ್ನು ಸಹ ತೋರಿಸಲಾಗಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದಾರೆ ಎಂದು ಬಿಗ್ ಬಾಸ್ ಒಮ್ಮೆಲೆ ಹೇಳುತ್ತಾರೆ.

  • ಚಕ್ರವರ್ತಿಗೆ ವಿಲನ್ ಎಂದ ಸಂಬರಗಿ

    ಚಕ್ರವರ್ತಿಗೆ ವಿಲನ್ ಎಂದ ಸಂಬರಗಿ

    ಬಿಗ್ ಮನೆಯಲ್ಲಿ ಸ್ಪರ್ಧಿಗಳು ಫುಲ್ ಮಜಾ ಮಾಡುತ್ತಿದ್ದು, ಟಾಸ್ಕ್ ಜೊತೆಗೆ ಉತ್ತಮ ಮನರಂಜನೆಯನ್ನೂ ನೀಡುತ್ತಿದ್ದಾರೆ. ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿಯವರ ಸ್ನೇಹ ಸಹ ಗಮನಸೆಳೆಯುತ್ತಿದೆ. ಆದರೆ ಇದೀಗ ಇದ್ದಕ್ಕಿದ್ದಂತೆ ಸಂಬರಗಿ ಅವರು ಚಕ್ರವರ್ತಿ ಅವರಿಗೆ ವಿಲನ್ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

    ಟಾಸ್ಕ್‍ಗಳ ಮಧ್ಯೆ ಸ್ಪರ್ಧಿಗಳು ಅವರ ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಇದೀಗ ಲಿವಿಂಗ್ ಏರಿಯಾದಲ್ಲಿ ಸೇರುವ ಮೂಲಕ ಹರಟೆ ಹೊಡೆದಿದ್ದಾರೆ. ಈ ವೇಳೆ ಪ್ರಶಾಂತ್ ಸಂಬರಗಿ ಅವರು ಸಿನಿಮಾದ ಪರಿಕಲ್ಪನೆ ಕುರಿತು ಮಾತನಾಡಿದ್ದು, ಯಾರಿಗೆ ಯಾವ ಪಾತ್ರ ಹೊಂದುತ್ತದೆ ಎಂಬುದನ್ನು ತಿಳಿಸಿದ್ದಾರೆ. ಈ ವೇಳೆ ಚಕ್ರವರ್ತಿ ಅವರಿಗೆ ವಿಲನ್ ಎಂದು ಹೇಳಿದ್ದು, ಅರವಿಂದ್ ಹೀರೋ, ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಇಬ್ಬರನ್ನೂ ಹೀರೋಯಿನ್ ಎಂದಿದ್ದಾರೆ. ವೈಷ್ಣವಿಗೆ ಮಾತ್ರ ಹೀರೋಯಿನ್ ಅಮ್ಮ ಎಂದು ಹೇಳಿ ನಗಿಸಿದ್ದಾರೆ.

    ಲಿವಿಂಗ್ ಏರಿಯಾದಲ್ಲಿದ್ದಾಗ ಈಗ ಫಿಲಂ ಮಾಡೋಣ ಎಂದು ಹೇಳಿ, ಹೀರೋ ಅರವಿಂದ್, ಹೀರೋಯಿನ್ ಇಬ್ಬರು ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್. ವಿಲನ್ ಚಕ್ರವರ್ತಿ, ಮಂಜು ಪೊಲೀಸ್ ಇನ್‍ಸ್ಪೆಕ್ಟರ್. ನಿಧಿ ಸುಬ್ಬಯ್ಯ ಡ್ಯಾನ್ಸರ್, ನಾನು ಸುಪಾರಿ ಕೊಡಲು ಹುಡುಗಿ ಅಣ್ಣ ವಿಲನ್. ಪ್ರಿಯಾಂಕ ಹಿರೋಯಿನ್ ಅಣ್ಣನ ಪತ್ನಿ ಎಂದು ಹೇಳಿದ್ದಾರೆ. ಅಲ್ಲದೆ ಶಮಂತ್ ಇಬ್ಬರೂ ಹುಡುಗಿಯರಿಗೆ ಸ್ಕೆಚ್ ಹಾಕುವವನು ಎಂದಿದ್ದಾರೆ. ಶುಭ ಪೂಂಜಾ ಹಳೆ ಲವ್ ಸ್ಟೋರಿ ಫ್ಲ್ಯಾಶ್ ಬ್ಯಾಕ್ ಎಂದು ಹೇಳಿದ್ದಾರೆ, ತಕ್ಷಣವೇ ಶಮಂತ್ ವೈಷ್ಣವಿ ಹೀರೋಯಿನ್ ಅಮ್ಮ ಎಂದು ಹೇಳಿದ್ದಾರೆ.

    ಹೀಗೆ ಒಂದು ಸಿನಿಮಾ ಮಾಡಿದರೆ ಮನೆ ಮಂದಿ ಯಾವ್ಯಾವ ಪಾತ್ರ ನಿಭಾಯಿಸಬಹುದು ಎಂದು ಊಹಿಸಿದ್ದಾರೆ. ಒಟ್ಟಿನಲ್ಲಿ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದಾರೆ.

  • ಬೇಡ ಬೇಡ ಅಂದ್ರೂ ತಿಂದು, ಮಂಜುಗೆ ಇಟ್ರು ಗುನ್ನ

    ಬೇಡ ಬೇಡ ಅಂದ್ರೂ ತಿಂದು, ಮಂಜುಗೆ ಇಟ್ರು ಗುನ್ನ

    ಬಿಗ್ ಬಾಸ್ ಮನೆಯಲ್ಲಿ ಮತ್ತೆ ಜೋಡಿಗಳ ಭಾವನಾತ್ಮಕತೆ ಕಂಡಿದ್ದು, ಬಿಗ್ ಬಾಸ್ ಮಂಜುಗೆ ನೀಡಿದ ಶಿಕ್ಷೆಯಿಂದಾಗಿ ದಿವ್ಯಾ ಸುರೇಶ್ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಅವರನ್ನು ಸಮಾಧಾನ ಪಡಿಸಲು ಮಂಜು ಹರಸಾಹಸಪಟ್ಟಿದ್ದಾರೆ.

    ಹೌದು ಆಟದ ಮುನ್ನ ಹಾಗೂ ಮುಗಿದ ನಂತರ ಬಿಗ್ ಬಾಸ್ ಮನೆಯ ಪ್ರಾಪರ್ಟಿಯನ್ನು ಅನವಶ್ಯಕವಾಗಿ ಯಾರೂ ಮುಟ್ಟುವಂತಿಲ್ಲ ಎಂಬುದು ನಿಯಮ. ಆದರೆ ‘ಬಿಸ್ಕೆಟ್ ಬಂದು ಬಾಯಿಗ್ ಬಿತ್ತು’ ಟಾಸ್ಕ್ ವೇಳೆ ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯ ಸ್ವಲ್ಪ ಬಿಸ್ಕೆಟ್ ಸೇವಸಿ ಎಡವಟ್ಟು ಮಾಡಿದ್ದು, ಇದಕ್ಕಾಗಿ ಬಿಗ್ ಬಾಸ್ ಪಾಯಿಂಟ್ಸ್ ಕಡಿತಗೊಳಿಸುವ ಶಿಕ್ಷೆ ನೀಡಿದ್ದಾರೆ. ಆಟದ ಉಸ್ತುವಾರಿ ಹೊತ್ತಿದ್ದ ಲ್ಯಾಗ್ ಮಂಜು, ಶಮಂತ್ ಹಾಗೂ ಕ್ಯಾಪ್ಟನ್ ಆಗಿರುವ ಚಕ್ರವರ್ತಿ ಅವರು ಈ ಬಗ್ಗೆ ಗಮನಹರಿಸಬೇಕಿತ್ತು ಎಂದು ಹೇಳಿ ಒಟ್ಟು ಐವರ ತಲಾ 100 ಪಾಯಿಂಟ್ಸ್ ಕಡಿತಗೊಳಿಸಿದ್ದಾರೆ.

    ಇದಕ್ಕೂ ಮುನ್ನ ಶಮಂತ್ ಸಹ ದಿವ್ಯಾ ಸುರೇಶ್‍ಗೆ ತಿನ್ನದಂತೆ ಸೂಚಿಸಿದ್ದರು, ಆದರೂ ದಿವ್ಯಾ ಮತ್ತೊಂದು ಬಟ್ಟಲಿನಲ್ಲಿ ತಿಂದಿದ್ದರು. ಮಂಜು ಸಹ ತುಂಬಾ ಸಲ ಬಿಸ್ಕೆಟ್ ತಿನ್ನದಂತೆ ಮನವಿ ಮಾಡಿದ್ದರು. ಯಾವುದೂ ಮುಟ್ಟಂಗೇ ಇಲ್ಲ, ಹೀಗಿರುವಾಗ ಹೇಗೆ ತಿನ್ನುತ್ತೀರಿ ಎನ್ನುತ್ತಾರೆ. ಮುಟ್ಟಂಗೇ ಇಲ್ಲಾ ಎಂದು ಬಿಗ್ ಬಾಸ್ ಹೇಳಿದ್ದಾರಾ ತೋರಿಸು ಎಂದು ದಿವ್ಯಾ ವಾದಿಸುತ್ತಾರೆ. ಬಳಿಕ ಸ್ವಲ್ಪ ಬಿಸ್ಕೆಟ್ ತಿಂದು ಎಡವಟ್ಟು ಮಾಡಿದ್ದಾರೆ.

    ಬಿಗ್ ಬಾಸ್ ನೀಡಿದ ಶಿಕ್ಷೆಗೆ ಸ್ಪರ್ಧಿಗಳು ಶಾಕ್ ಗಿದ್ದು, ನಾನು ರೀಸಸ್ ಹೋಗಿದ್ದೆ ಗುರು ಅಷ್ಟರಲ್ಲಿ ಇವರು ಸ್ವಲ್ಪ ಬಿಸ್ಕೆಟ್ ತಿಂದಿದ್ದಾರೆ ಎಂದು ಮಂಜು ಬೇಸರ ಹೊರ ಹಾಕಿದ್ದಾರೆ. ಆಗ ನಾನು ಸ್ವಲ್ಪನೇ ತಿಂದಿದ್ದು, ಅದೂ ಕೆಳಗೆ ಬಿದ್ದಿತ್ತು ಎಂದು ದಿವ್ಯಾ ಹಾಗೂ ನಿಧಿ ಹೇಳಿದ್ದಾರೆ. ನಿಧಿ ಒಂದು ಬಿಸ್ಕೆಟ್ 100 ರೂ. ಎಂದು ಶಮಂತ್ ಹೇಳುತ್ತಾರೆ. ಒಂದು ಬಿಸ್ಕೆಟ್ 100 ರೂ. ಅಲ್ಲ ಒಂದು ಚೂರು ಬಿಸ್ಕೆಟ್ 500 ರೂ. ಎಂದು ಮಂಜು ಪ್ರತಿಕ್ರಿಯಿಸಿದ್ದಾರೆ.

    ಇದರಿಂದ ದಿವ್ಯಾ ಸುರೇಶ್ ಸಿಕ್ಕಾಪಟ್ಟೆ ಬೇಜಾರಿದ್ದು, ಒಬ್ಬರೇ ಕುಳಿತಿರುತ್ತಾರೆ, ಮಂಜು ಆಗಮಿಸುತ್ತಿದ್ದಂತೆ ಸಾರಿ ಮಂಜಾ, ಏನಕ್ಕೆ ಕೋಪ ಮಾಡಿಕೊಂಡಿದ್ದೀಯಾ ಎಂದು ಪ್ರಶ್ನಿಸುತ್ತಾರೆ. ಆಗ ಮಂಜು ಬೇಜಾರಾಯಿತು, ಈಗ ಲೆಕ್ಕಕ್ಕೆ ಬರಲ್ಲ, ಕೊನೆಗೆ ಲೆಕ್ಕಕ್ಕೆ ಬರುತ್ತಲ್ಲಾ ಎಂದರು. ನಂಗು ಬೇಜಾರಾಯಿತು, ನನ್ನ ಪಾಯಿಂಟ್ಸ್ ಸಹ ಕಡಿಮೆ ಇದೆಯಲ್ಲ ಎಂದಿದ್ದಾರೆ. ಇದಕ್ಕೆ ಮಂಜು ಆ ಕ್ಷಣಕ್ಕೆ ಹಾಗೆ ಆಯ್ತು ಏನು ಮಾಡಲು ಆಗಲ್ಲ ಎಂದು ಸಮಾಧಾನ ಪಡಿಸಿದ್ದಾರೆ.

    ಆದರೂ ಬೇಸರದಿಂದ ದಿವ್ಯಾ ಸುರೇಶ್ ಕಣ್ಣೀರು ಹಾಕಿದ್ದಾರೆ. ಬೇಜಾರುತ್ತಿದೆ ನಂಗೆ ಎಂದು ಸಡನ್ನಾಗಿ ಕೋಪಗೊಂಡು, ನಿಮ್ದು ಎಲ್ಲ ತಗೋಂಡಿದ್ದಾರಲ್ಲಾ ಬಿಗ್ ಬಾಸ್, ನಮ್ಮದು ಮಾತ್ರ ತೆಗೆದುಕೊಳ್ಳಬಹುದಾಗಿತ್ತು. ನೀವು ಅವರದ್ದೆಲ್ಲ ಪಾಯಿಂಟ್ಸ್ ಯಾಕೆ ತಗೋಂಡ್ರಿ ಬಿಗ್ ಬಾಸ್ ನಮ್ಮ ಪಾಯಿಂಟ್ಸ್ ಮಾತ್ರ ಕಟ್ ಮಾಡಿ ಎಂದು ಬೇಸರದಿಂದ ಹೇಳಿ ಗಳಗಳನೆ ಅತ್ತಿದ್ದಾರೆ.