Tag: big boss kannada 11

  • ವೆಕೇಷನ್ ಮೂಡ್‌ನಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಮೋಕ್ಷಿತಾ ಪೈ

    ವೆಕೇಷನ್ ಮೂಡ್‌ನಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಮೋಕ್ಷಿತಾ ಪೈ

    ‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ಸಂಚಲನ ಮೂಡಿಸಿದ ಸ್ಪರ್ಧಿ ಮೋಕ್ಷಿತಾ ಪೈ (Mokshitha Pai) ವೆಕೇಷನ್ ಮೂಡ್‌ನಲ್ಲಿದ್ದಾರೆ. ಫ್ರೆಂಡ್ಸ್ ಜೊತೆ ಕೇರಳದ ವಯನಾಡುಗೆ (Wayanad) ನಟಿ ಭೇಟಿ ನೀಡಿದ್ದಾರೆ. ಇದರ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಟಿ ಮೋಕ್ಷಿತಾ ಪೈ ಅವರು ‘ಬಿಗ್ ಬಾಸ್’ ಶೋ ಆದ್ಮೇಲೆ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಕೇರಳದಲ್ಲಿನ ಸುಂದರ ಸ್ಥಳಗಳಿಗೆ ನಟಿ ಭೇಟಿ ನೀಡುತ್ತಿದ್ದಾರೆ. ಫ್ರೆಂಡ್ಸ್ ಜೊತೆ ಟ್ರೆಕ್ಕಿಂಗ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಪಿಜ್ಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್

    ಇನ್ನೂ ಇತ್ತೀಚೆಗೆ ‘ಬಿಗ್ ಬಾಸ್’ ರಂಜಿತ್ ಎಂಗೇಜ್‌ಮೆಂಟ್‌ನಲ್ಲಿ ಶಿಶಿರ್, ಐಶ್ವರ್ಯಾ, ಅನುಷಾ ರೈ ಜೊತೆ ಮೋಕ್ಷಿತಾ ಕೂಡ ಭಾಗಿಯಾಗಿದ್ದರು. ನವಜೋಡಿಗೆ ಶುಭಕೋರಿ ಬಂದಿದ್ದರು. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ದೃಷ್ಟಿಬೊಟ್ಟು’ ಸೀರಿಯಲ್ ನಟಿ

    ಇನ್ನೂ ಮೋಕ್ಷಿತಾ ‘ಮಿಡಲ್ ಕ್ಲಾಸ್ ರಾಮಾಯಣ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಕಪ್ಪು ಹುಡುಗಿಯ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

    ‘ಮಿಡಲ್ ಕ್ಲಾಸ್ ರಾಮಾಯಣ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಅವರು ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ ಆಗಿದೆ. ಈ ಚಿತ್ರದ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

     

    View this post on Instagram

     

    A post shared by Mokshitha Pai (@mokshitha22)

    ಇನ್ನೂ ‘ಪಾರು’ (Paaru Serial) ಸೀರಿಯಲ್ ಮೂಲಕ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. ಪಾರು ಆಗಿ ಕಿರುತೆರೆಯಲ್ಲಿ ಮನೆ ಮಾತಾದರು.

  • BBK 11: ಅಂಕಲ್, ಆಂಟಿ ಅಂತ ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಗೌತಮಿ

    BBK 11: ಅಂಕಲ್, ಆಂಟಿ ಅಂತ ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಗೌತಮಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಈ ವಾರಾಂತ್ಯದಲ್ಲಿ ಬ್ರೇಕ್ ಬೀಳಲಿದೆ. ಸದ್ಯ ಬಿಗ್ ಬಾಸ್‌ನಿಂದ ಹೊರಬಂದಿರುವ ಗೌತಮಿ ಜಾಧವ್ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಅದಷ್ಟೇ ಅಲ್ಲ, ಅಂಕಲ್, ಆಂಟಿ ಎಂದು ಕೆಟ್ಟದಾಗಿ ಮಂಜು ಜೊತೆ ಟ್ರೋಲ್ (Troll) ಮಾಡಿದವರಿಗೆ ಗೌತಮಿ (Gouthami Jadav) ತಕ್ಕ ಉತ್ತರ ನೀಡಿದ್ದಾರೆ. ಟ್ರೋಲ್ ಮಾಡುತ್ತಿರುವವರಿಗೆ ನಾನು ಏನು ಅಂತನೇ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಹನುಮಂತ ಆ ಹುಡುಗಿಯ ಮನಸ್ಸನ್ನು ಗೆದ್ದಿದ್ದಾನೆ: ಗೆಳೆಯನ ಮದುವೆ ಬಗ್ಗೆ ಧನರಾಜ್ ಮಾತು

    ಹೀಗೆ ಟ್ರೋಲ್ ಮಾಡಿರೋದನ್ನು ನೋಡಿ ಥ್ಯಾಂಕ್ ಗಾಢ್ ನನ್ನ ಕುಟುಂಬ ಉತ್ತಮ ರೀತಿಯಲ್ಲಿ ತೆಗೆದುಕೊಂಡಿದ್ದಾರೆ. ನನ್ನನ್ನು ಹೊಸಬರು ಎರಡ್ಮೂರು ತಿಂಗಳಿನಿಂದ ನೋಡುತ್ತಿರುವವರು. ಆದರೆ ನನ್ನ ಫ್ಯಾಮಿಲಿ ಇದನ್ನೆಲ್ಲಾ ಧೈರ್ಯವಾಗಿ ಸ್ವೀಕರಿಸಿದ್ದಾರೆ. ಯಾಕೆಂದರೆ ಅವರಿಗೆ ನಾನು ಏನು ಅಂತ ಗೊತ್ತು. ಟ್ರೋಲ್ ಮಾಡುವವರಿಗೆ ನಾನು ಏನು ಅಂತನೇ ಗೊತ್ತಿಲ್ಲ. ಅವರುಗಳು ಆಟದಲ್ಲಿ ನೋಡಿದ್ದಾರೆ. ನನ್ನ ಬಗ್ಗೆ ಗೊತ್ತಿದಿದ್ರೆ ಅವರು ಟ್ರೋಲ್ ಮಾಡುತ್ತಿರಲಿಲ್ಲ ಎಂದಿದ್ದಾರೆ ಗೌತಮಿ.

    ಅಂಕಲ್, ಆಂಟಿ ಸ್ಟೋರಿ ಅನ್ನೋಕೆ ಅಲ್ಲಿ ಏನು ಇರಲಿಲ್ಲ. ಅಲ್ಲಿ ಲವ್ ಸ್ಟೋರಿ ಇರಲಿಲ್ಲ. ಒಂದು ಒಳ್ಳೆಯ ಸ್ನೇಹವಿತ್ತು. ಅದು ಕೇವಲ ಟ್ರೋಲ್ ಅಷ್ಟೇ. ಟ್ರೋಲ್‌ಗೂ ಅಭಿಪ್ರಾಯಕ್ಕೂ ವ್ಯತ್ಯಾಸವಿದೆ. ನನ್ನ ಕೊಡೋ ಸ್ಪಷ್ಟತೆ ಏನು ಅಂದರೆ ನನ್ನ ಮತ್ತು ಮಂಜು ನಡುವೆ ಅಂತಹದ್ದು ಏನು ಇರಲಿಲ್ಲ. ನನ್ನ ಜೀವನದಲ್ಲಿ ಅಭಿಷೇಕ್ ಜೊತೆ ಮಾತ್ರ ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಇದೆ. ಅದು ನನಗೆ ಏಳೇಳು ಜನ್ಮಕ್ಕೂ ಬೇಕು ಅಂತ ಬಯಸುವವಳು. ನನ್ನ ಜೀವನದಲ್ಲಿ ಪ್ರೀತಿಗೆ ಕೊರತೆಯಿಲ್ಲ. ಮಂಜು (Ugramm Manju) ಜೊತೆಗಿನ ಸ್ನೇಹಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದಿದ್ದಾರೆ. ಅವರೊಂದಿಗೆ ಒಂದೊಳ್ಳೆಯ ಫ್ರೆಂಡ್‌ಶಿಪ್ ಸ್ಟೋರಿ ಅಂತೂ ಖಂಡಿತ ಇದೆ ಎಂದಿದ್ದಾರೆ.

    ಇನ್ನೂ ‘ಬಿಗ್ ಬಾಸ್ ಕನ್ನಡ 11’ರಲ್ಲಿ ಯಾರು ಗೆಲ್ಲಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೌತಮಿ, ನನಗೆ ಹನುಮಂತ ಗೆಲ್ಲಬೇಕು. ಅವರು ಚೆನ್ನಾಗಿ ಆಟ ಆಡುತ್ತಿದ್ದಾರೆ ಎಂದಿದ್ದಾರೆ.

  • BBK 11: ಕಳಪೆ ಎಂದ ಮೋಕ್ಷಿತಾಗೆ ಅಸಲಿ ಆಟ ಈಗ ಶುರು ಎಂದು ಸವಾಲೆಸೆದ ಧನರಾಜ್

    BBK 11: ಕಳಪೆ ಎಂದ ಮೋಕ್ಷಿತಾಗೆ ಅಸಲಿ ಆಟ ಈಗ ಶುರು ಎಂದು ಸವಾಲೆಸೆದ ಧನರಾಜ್

    ಕಿರುತೆರೆಯ ಅತೀ ದೊಡ್ಡ ಶೋ ‘ಬಿಗ್ ಬಾಸ್ ಸೀಸನ್ 11’ (Bigg Boss Kannada 11) ಇದೀಗ 8ನೇ ವಾರಕ್ಕೆ ಕಾಲಿಡುವ ಹೊಸ್ತಿಲಲ್ಲಿದೆ. ಹೀಗಿರುವಾಗ ದೊಡ್ಮನೆಯಲ್ಲಿ ರಂಪಾಟ ನಡೆದಿದೆ. ವಾಹಿನಿಯು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋವೊಂದನ್ನು ಶೇರ್ ಮಾಡಿಕೊಂಡಿದೆ. ಮೋಕ್ಷಿತಾಗೆ (Mokshitha Pai) ಅಹಂಕಾರ ಇದೆ ಎಂದು ಧನರಾಜ್ ತಿವಿದಿದ್ದಾರೆ.‌ ಇದನ್ನೂ ಓದಿ:ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್

    ಹೊಸ ಪ್ರೋಮೋದಲ್ಲಿ ಎಂದಿನಂತೆ ವಾರಾಂತ್ಯದಲ್ಲಿ ಈ ವಾರದ ಕಳಪೆ ಪ್ರದರ್ಶನ ಪ್ರಕ್ರಿಯೆ ನಡೆದಿದೆ. ಮನೆಯ ಸದಸ್ಯರು ಒಬ್ಬಬ್ಬರಾಗಿ ಬಂದು ಈ ವಾರದ ಕಳಪೆ ಪ್ರದರ್ಶನ ನೀಡಿದ್ದು, ಯಾರು ಅಂತ ಹೇಳಬೇಕು. ಆದರೆ ಈ ವಾರದ ಜೋಡಿ ಟಾಸ್ಕ್‌ನಲ್ಲಿ ತಮ್ಮ ಜೊತೆಯಾಗಿದ್ದ ಧನರಾಜ್ ಅವರನ್ನೇ ಮೋಕ್ಷಿತಾ ಕಳಪೆ ಎಂದಿದ್ದಾರೆ. ಇದು ಧನರಾಜ್ (Dhanraj Achar) ಕೋಪಕ್ಕೆ ಕಾರಣವಾಗಿದೆ.

    ಈ ವಾರದ ಕಳಪೆ ಪಟ್ಟವನ್ನು ಧನರಾಜ್‌ಗೆ ಮನೆಯ ಇತರೆ ನೀಡಿದ್ದಾರೆ. ಇದರ ಪೈಕಿ ಮೋಕ್ಷಿತಾ ಅವರು, ಟಾಸ್ಕ್ ವಿಚಾರ ಅಂತ ಬಂದಾಗ ಸ್ಮಾರ್ಟ್ ಆಗಿ ನೀವು ಯೋಚನೆ ಮಾಡ್ತಾ ಇರಲಿಲ್ಲ. ಜೋಡಿಯಾಗಿದ್ದಕ್ಕೆ ನೀವು ಎಷ್ಟು ಸಪೋರ್ಟಿವ್ ಆಗಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

    ಆಗ ಧನರಾಜ್ ಅಹಂಕಾರ ಇದೆ ನಿಮಗೆ ಅಂತ ಹೇಳಿ ಆ ಕಳಪೆ ಪಟ್ಟವನ್ನು ಮೋಕ್ಷಿತಾ ಅವರಿಗೆ ಕಟ್ಟಿದ್ದಾರೆ. ಮೋಕ್ಷಿತಾ ಅಹಂಕಾರಿ ಎಂದು ಧನರಾಜ್ ತಿವಿದಿದ್ದಾರೆ. ಮೋಕ್ಷಿತಾಗೆ ಇನ್ಮೇಲೆ ಅಸಲಿ ಆಟ ತೋರಿಸುತ್ತೇನೆ ಎಂದು ಧನರಾಜ್ ಸವಾಲು ಹಾಕುತ್ತಾ ಬಿಗ್ ಬಾಸ್‌ನಲ್ಲಿರುವ ಜೈಲಿಗೆ ಹೋಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಳಿವು ಮತ್ತು ಉಳಿವಿಗಾಗಿ ಇಬ್ಬರ ನಡುವಿನ ಫ್ರೆಂಡ್‌ಶಿಪ್ ಕಟ್ ಆಯ್ತಾ? ಎಂಬು ಅನುಮಾನ ನೋಡುಗರಲ್ಲಿ ಮೂಡಿದೆ.

  • BBK 11: ಧರ್ಮ ಜೊತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ ಐಶ್ವರ್ಯಾ

    BBK 11: ಧರ್ಮ ಜೊತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ ಐಶ್ವರ್ಯಾ

    ನ್ನಡದ ‘ಬಿಗ್ ಬಾಸ್ ಸೀಸನ್ 11’ಕ್ಕೆ ‘ರಾಮಾಚಾರಿ’ (Ramachari) ಸೀರಿಯಲ್ ಖ್ಯಾತಿಯ ಜೋಡಿ ಮೌನ ಗುಡ್ಡೆಮನೆ (Mouna Guddemane) ಮತ್ತು ರಿತ್ವಿಕ್ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ‘ಬಿಗ್ ಬಾಸ್’ನಲ್ಲಿ ಮನರಂಜನೆ ದುಪ್ಪಟ್ಟಾಗಿದೆ. ರಾಮಾಚಾರಿ ಸೀರಿಯಲ್ ಜೋಡಿಯ ಮುಂದೆ ‘ರಾ ರಾ ರಕ್ಕಮ್ಮ’ ಹಾಡಿಗೆ ಐಶ್ವರ್ಯಾ (Aishwarya Shindogi) ಮತ್ತು ಧರ್ಮ ಹೆಜ್ಜೆ ಹಾಕಿದ್ದಾರೆ.

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ನಲ್ಲಿ ಹನುಮಂತನ ಎಂಟ್ರಿ ಆದ್ಮೇಲೆ ಕಾರ್ಯಕ್ರಮ ಮತ್ತಷ್ಟು ರಂಗೇರಿದೆ. ಇಂದಿನ ಸಂಚಿಕೆಯಲ್ಲಿ ಜನಪ್ರಿಯ ರಾಮಾಚಾರಿ ಮತ್ತು ಚಾರು ಜೋಡಿ ದೊಡ್ಮನೆಗೆ ಆಗಮಿಸಿದ್ದಾರೆ. ಇವರನ್ನು ಇಂಪ್ರೆಸ್ ಮಾಡೋದೆ ಸ್ಪರ್ಧಿಗಳು ಟಾಸ್ಕ್ ಆಗಿದೆ. ಇದನ್ನೂ ಓದಿ:ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಹಾಲಿವುಡ್ ನಟಿ

    ಅದರಂತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಭರ್ಜರಿಯಾಗಿ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ ಸಿಂಧೋಗಿ ಹೆಜ್ಜೆ ಹಾಕಿದ್ದಾರೆ. ಇವರಿಗೆ ಶಿಶಿರ್ ಕೂಡ ಸಾಥ್ ನೀಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿನ ಸುದೀಪ್ ಸ್ಟೈಲ್‌ ಅನ್ನೇ ಧರ್ಮ (Dharma Kirthiraj) ಅನುಕರಣೆ ಮಾಡಿದ್ದಾರೆ. ಜೀನ್ಸ್‌ ಪ್ಯಾಂಟ್‌ಗೆ ರವಿಕೆ ಮತ್ತು ಕೆಂಪು ಶಾಲ್ ಹಾಕಿ ಐಶ್ವರ್ಯಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಧರ್ಮ ಮತ್ತು ಐಶ್ವರ್ಯಾ ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ಡ್ಯಾನ್ಸ್‌ಗೆ ‘ರಾಮಾಚಾರಿ’ ಸೀರಿಯಲ್ ಜೋಡಿ ಇಂಪ್ರೆಸ್ ಆದ್ರಾ? ಕಾದುನೋಡಬೇಕಿದೆ. ಇಂದಿನ ಎಪಿಸೋಡ್ ರಾತ್ರಿ 9:30ಕ್ಕೆ ಉತ್ತರ ಸಿಗಲಿದೆ. ಒಟ್ನಲ್ಲಿ ಇಂದಿನ ಸಂಚಿಕೆ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.