Tag: Big B

  • ಸಂಚಾರಿ ರೂಲ್ಸ್ ಬ್ರೇಕ್:  ಅರೆಸ್ಟ್ ಆದೆ ಎಂದು ಫೋಟೋ ಹಾಕಿದ ಅಮಿತಾಭ್

    ಸಂಚಾರಿ ರೂಲ್ಸ್ ಬ್ರೇಕ್: ಅರೆಸ್ಟ್ ಆದೆ ಎಂದು ಫೋಟೋ ಹಾಕಿದ ಅಮಿತಾಭ್

    ಮೊನ್ನೆಯಷ್ಟೇ ಹೆಲ್ಮೆಟ್ ಧರಿಸದೇ ಬೈಕ್ ಹಿಂದೆ ಕೂತು ಸವಾರಿ ಮಾಡಿ ಟ್ರೋಲ್ ಆಗಿದ್ದ ಅಮಿತಾಭ್ ಬಚ್ಚನ್ (Amitabh Bachchan), ಇದೀಗ ಪೊಲೀಸ್ (Police) ವ್ಯಾನ್ ಸಮೇತ ಮತ್ತೊಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದ ಜೊತೆ ‘ಅರೆಸ್ಟ್’ (Arrest) ಎಂದು ಬರೆದುಕೊಂಡಿದ್ದಾರೆ. ಈ ರೀತಿ ಬರೆದುಕೊಂಡಿದ್ದು ಅಮಿತಾಭ್ ಅಭಿಮಾನಿಗಳಿಗೆ ಶಾಕ್ ಆಗಿದೆ. ಜೊತೆಗೆ ಇದೇನಾದರೂ ಗಿಮಿಕ್ ಇರಬಹುದಾ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿದೆ.

    ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿದ್ದ ಬಿಗ್ ಬಿ (Big B), ಅದು ರಸ್ತೆ ಮೇಲೆ ಸವಾರಿ ಮಾಡಿದ ಫೋಟೋ ಅಲ್ಲ, ಶೂಟಿಂಗ್ ಸಂದರ್ಭದ್ದು ಎಂದು ಸಮಜಾಯಿಸಿ ನೀಡಿದ್ದರು. ರಸ್ತೆ ನಿಯಮವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೂ, ಪೊಲೀಸ್ ವ್ಯಾನ್ ಜೊತೆ ನಿಂತು ಫೋಟೋ ತಗೆಸಿಕೊಂಡು ಅರೆಸ್ಟ್ ಎಂದು ಬರೆದದ್ದು ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

    ಕೆಲವರು ಯಾವುದೋ ಜಾಹೀರಾತಿನ ಶೂಟಿಂಗ್ ಇರಬೇಕು ಎಂದು ಕಾಮೆಂಟ್ ಮಾಡಿದ್ದರೆ, ಅನೇಕರು ಹೊಸ ಸಿನಿಮಾದ ಪ್ರಮೋಷನ್ ಇರಬಹುದಾ ಎಂದು ಕೇಳಿದ್ದಾರೆ. ಅಥವಾ ಹೊಸ ಸಿನಿಮಾ ಏನಾದರೂ ಒಪ್ಪಿಕೊಂಡು ರೀತಿ ಫೋಟೋ ಹಂಚಿಕೊಂಡಿರಬಹುದಾ ಎನ್ನುವ ಪ್ರಶ್ನೆಯನ್ನೂ ಮಾಡಿದ್ದಾರೆ. ಆದರೆ, ಅರೆಸ್ಟ್ ಗುಟ್ಟನ್ನು ಮಾತ್ರ ಅಮಿತಾಭ್ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ವಿವರವನ್ನು ನೀಡಬಹುದು.

  • ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದ ಅಮಿತಾಭ್ ಬಚ್ಚನ್

    ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದ ಅಮಿತಾಭ್ ಬಚ್ಚನ್

    ಬಾಲಿವುಡ್ (Bollywood) ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಇದೀಗ ತಮ್ಮ ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮುದ್ದು ನಾಯಿ ಜೊತೆಗಿನ ಫೋಟೋ ಹಂಚಿಕೊಂಡು ಬಿಗ್ ಬಿ ಭಾವುಕರಾಗಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಬಿಟೌನ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಲಿಸ್ಟ್ನಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದಾ ಶೂಟಿಂಗ್‌ನಲ್ಲಿ ಬ್ಯುಸಿಯಿರುವ ನಟ ಈಗ ಸೋಷಿಯಲ್ ಮೀಡಿಯಾದಲ್ಲಿ ಎಮೋಷನಲ್ ಆಗಿ ಪೋಸ್ಟ್ ಮಾಡಿದ್ದಾರೆ. ಸಾಕು ನಾಯಿ ನಿಧನಕ್ಕೆ ಬಿಗ್ ಬಿ(Big B) ಭಾವುಕರಾಗಿದ್ದಾರೆ.


    ನನಗೆ ಒಬ್ಬರು ಚಿಕ್ಕ ಸ್ನೇಹಿತರು ಇದ್ದರು. ಕೆಲಸ ಸಮಯದಲ್ಲಿ ಜೊತೆಯಲ್ಲಿದ್ದರು. ಹಾಗೆಯೇ ಬೆಳೆಯುತ್ತಿದ್ದರು. ಒಂದು ದಿನ ಹೇಳದೇ ಹೊರಟು ಬಿಡುತ್ತಾರೆ ಎಂದು ಮುದ್ದಿನ ನಾಯಿ ಬಗ್ಗೆ ಅಮಿತಾಭ್ ಕಣ್ಣೀರಿಟ್ಟಿದ್ದಾರೆ. ಬಿಗ್ ಬಿ ಭಾವುಕರಾಗಿರೋದನ್ನ ನೋಡಿ, ಫ್ಯಾನ್ಸ್ ಕೂಡ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸುದೀಪ್‌ ದಂಪತಿ ಭೇಟಿ

    ಇತ್ತೀಚೆಗೆ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ `ಗುಡ್ ಬೈ’ ಕಾಂತಾರ ಮುಂದೆ ನೆಲಕಚ್ಚಿತ್ತು. ರಶ್ಮಿಕಾ ಮಂದಣ್ಣ ಮತ್ತು ಬಿಗ್ ಬಿ ಜೋಡಿ ಕಮಾಲ್ ಮಾಡುವಲ್ಲಿ ಫ್ಲಾಪ್ ಆಗಿತ್ತು. ಸದ್ಯ ಅಮಿತಾಭ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಅಮಿತಾಭ್ ಬಚ್ಚನ್ ಅವರನ್ನ ಪ್ರಶಾಂತ್‌ನೀಲ್ ಭೇಟಿಯಾಗಿದ್ದು ಏಕೆ?

    ಅಮಿತಾಭ್ ಬಚ್ಚನ್ ಅವರನ್ನ ಪ್ರಶಾಂತ್‌ನೀಲ್ ಭೇಟಿಯಾಗಿದ್ದು ಏಕೆ?

    ಬಾಲಿವುಡ್ ಮತ್ತು ಸೌತ್ ಚಿತ್ರರಂಗದ ತಾರೆಯರಾದ ಅಮಿತಾಭ್ ಬಚ್ಚನ್, ಪ್ರಭಾಸ್, ದುಲ್ಕರ್ ಸಲ್ಮಾನ್, ಪ್ರಶಾಂತ್ ನೀಲ್, ಮತ್ತು ನಾನಿ ಇತ್ತೀಚೆಗೆ ಖಾಸಗಿ ಪಾರ್ಟಿವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜತೆಗೆ ಬಿಗ್‌ಬಿ ಅವರನ್ನು ʻಕೆಜಿಎಫ್ 2ʼ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿಯಾಗಿದ್ದು, ಅಭಿಮಾನಿಗಳ ವಲಯದಲ್ಲಿ ಕುತೂಹಲ ಮೂಡಿಸಿದೆ.

    ವೈಜಯಂತಿ ನಿರ್ಮಾಣ ಸಂಸ್ಥೆಗೆ 50 ವರ್ಷ ತುಂಬಿದ ಬೆನ್ನಲ್ಲೇ ಹೈದರಾಬಾದ್‌ನಲ್ಲಿ ಹೊಸ ಕಛೇರಿಗೆ ಚಾಲನೆ ಕೊಡಲಾಗಿದೆ. ಹೆಸರಾಂತ ಸಂಸ್ಥೆ ವೈಜಯಂತಿ 50 ವರ್ಷದ ಸಂಭ್ರಮಕ್ಕೆ ಬಿಗ್‌ಬಿ, ಪ್ರಭಾಸ್, ದುಲ್ಕರ್, ಪ್ರಶಾಂತ್ ನೀಲ್, ನಾನಿ ಇವರೆಲ್ಲೂ ಸಾಕ್ಷಿಯಾಗಿದ್ದಾರೆ. ಜತೆಗೆ ಹೆಸರಾಂತ ಸಂಸ್ಥೆ ಶುಭಹಾರೈಸಿದ್ದಾರೆ. ಈ ಎಲ್ಲಾ ಬಿಗ್ ಸ್ಟರ‍್ಸ್ ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಪ್ರಸ್ತುತ ಅಮಿತಾಭ್,ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ವೈಜಯಂತಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ತೆಲುಗು ಮತ್ತು ಹಿಂದಿ ಏಕಕಾಲದಲ್ಲಿ ಸಿನಿಮಾ ತೆರೆ ಕಾಣಲಿದೆ. ಜತೆಗೆ ದುಲ್ಕರ್ ನಟನೆಯ `ಸೀತಾ ರಾಮಂ’ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದೆ.

    Live Tv

  • ಆರೋಗ್ಯ ಚೇತರಿಸಿಕೊಳ್ತಿದಂತೆ ಶೂಟಿಂಗ್‌ಗೆ ಹಾಜರ್: ದೀಪಿಕಾ ನಡೆಗೆ ಭೇಷ್ ಎಂದ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ

    ಆರೋಗ್ಯ ಚೇತರಿಸಿಕೊಳ್ತಿದಂತೆ ಶೂಟಿಂಗ್‌ಗೆ ಹಾಜರ್: ದೀಪಿಕಾ ನಡೆಗೆ ಭೇಷ್ ಎಂದ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ದೀಪಿಕಾ ಆರೋಗ್ಯ ಏರುಪೇರಾಗಿತ್ತು. ಚೇತರಿಸಿದ ಬಳಿಕವೇ ಶೂಟಿಂಗ್‌ಗೆ ಬಂದು ಕ್ಯಾಮೆರಾ ಮುಂದೆ ನಿಂತಿದ್ದರು. ಈಗ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ ಅಶ್ವಿನಿ ದತ್ ದೀಪಿಕಾ ವೃತ್ತಿಪರತೆಗೆ ಭೇಷ್ ಅಂದಿದ್ದಾರೆ.‌

    ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣವು ಭರದಿಂದ ಸಾಗುತ್ತಿದೆ. ಕೆಲ ದಿನಗಳ ಹಿಂದೆ ಶೂಟಿಂಗ್ ವೇಳೆಯಲ್ಲಿ ಉಸಿರಾಟದಲ್ಲಿ ಏರುಪೇರಾಗಿ ದೀಪಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿದ ಬಳಿಕವೇ ಮತ್ತೆ ಶೂಟಿಂಗ್‌ಗೆ ಹಾಜರ್ ಆಗಿದ್ದರು. ಆರೋಗ್ಯದ ಸ್ಥಿತಿ ಗತಿ ಹೇಗೆ ಇದ್ದರೂ ಬ್ರೇಕ್ ತೆಗೆದುಕೊಳ್ಳದೇ ಮತ್ತೆ ಚಿತ್ರೀಕರಣಕ್ಕೆ ಹಾಜಾರಾದ ದೀಪಿಕಾ ನಡೆಗೆ `ಪ್ರಾಜೆಕ್ಟ್ ಕೆ’ ನಿರ್ಮಾಪಕಿ ಅಶ್ವಿನಿ ದತ್‌ ಭೇಷ್ ಎಂದಿದ್ದಾರೆ. ಇದನ್ನೂ ಓದಿ: ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕಾನ್ ಫೆಸ್ಟಿವಲ್‌ಗೆ ಜ್ಯೂರಿಯಾಗಿ ಕನ್ನಡತಿ ದೀಪಿಕಾ ಭಾಗವಹಿಸಿ ಸೈ ಎನಿಸಿಕೊಂಡಿದ್ದರು. ಇದಾದ ಬಳಿಕ ಪ್ರಾಜೆಕ್ಟ್ ಕೆ ಶೂಟಿಂಗ್‌ಗೆ ಬಂದಿಳಿದಿದ್ದರು. ಬ್ರೇಕ್ ಇಲ್ಲದೆ ಕೆಲಸ ಮಾಡಿದ ನಿಮಿತ್ತ ದೀಪಿಕಾ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗಿತ್ತು. ಚಿತ್ರತಂಡವನ್ನು ಕಾಯಿಸಬಾರದು ಎಂಬ ಉದ್ದೇಶದಿಂದ ದೀಪಿಕಾ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಇದೀಗ ದೀಪಿಕಾ ಕೆಲಸದ ಭದ್ದತೆಗೆ ಭೇಷ್ ಅಂತಿದ್ದಾರೆ.

    Live Tv

  • ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಫೋಟೋ ಹಂಚಿಕೊಂಡ ಬಿಗ್ ಬಿ ಅಮಿತಾಭ್

    ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಫೋಟೋ ಹಂಚಿಕೊಂಡ ಬಿಗ್ ಬಿ ಅಮಿತಾಭ್

    ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಭೇಟಿಗೆ ಅದೆಷ್ಟೋ ವರ್ಷಗಳಿಂದ ಕಾದವರು ಇದ್ದಾರೆ. ಅವರೊಂದಿಗೆ ಒಂದು ಫೋಟೋ ತಗೆಸಿಕೊಳ್ಳಲು ಪರದಾಡಿದವರು ಇದ್ದಾರೆ. ಅವರ ನಟನೆಯ ಒಂದೇ ಒಂದು ಸಿನಿಮಾದಲ್ಲಿ ಒಂದು ದೃಶ್ಯದಲ್ಲಾದರೂ ನಟಿಸಬೇಕು ಎಂದು ಕನಸು ಕಂಡವರು ಇದ್ದಾರೆ. ಆದರೆ, ಅದೃಷ್ಟವಂತೆ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಿಗ್ ಬಿ ಜತೆ ನಟಿಸುವುದಲ್ಲದೇ, ಆ ಫೋಟೋವನ್ನು ಸ್ವತಃ ಅಮಿತಾಭ್ ಬಚ್ಚನ್ ಅವರೇ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಅಮಿತಾಭ್ ಬಚ್ಚನ್ ಅವರ ಜತೆ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳಲ್ಲಿ ಶೂಟಿಂಗ್  ಕೂಡ ಮುಗಿದಿದೆ. ಈ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ತಗೆದು ಫೋಟೋವನ್ನು ಅಮಿತಾಭ್ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಸದ್ಯ ಅಮಿತಾಭ್ ನಟನೆಯ ಗುಡ್ ಬೈ ಹೆಸರಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರದ್ದು ಅಮಿತಾಭ್ ಮಗಳ ಪಾತ್ರ ಎನ್ನಲಾಗುತ್ತಿದೆ. ಈ ಬಾರಿಯ ಹುಟ್ಟು ಹಬ್ಬವನ್ನು ರಶ್ಮಿಕಾ ಅವರು ಇದೇ ಶೂಟಿಂಗ್ ಸೆಟ್ ನಲ್ಲಿ ಆಚರಿಸಿಕೊಂಡಿದ್ದರು. ಅದಲ್ಲೇ, ಅಮಿತಾಭ್ ಅವರ ಗುಣಗಾನ ಕೂಡ ಮಾಡಿದ್ದರು. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ರಶ್ಮಿಕಾ ಅವರ ಎರಡನೇ ಬಾಲಿವುಡ್ ಸಿನಿಮಾವಿದು. ಕ್ವೀನ್ ಸೇರಿದಂತೆ ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ವಿಕಾಸ್ ಬಹ್ಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ನೀನಾ ಗುಪ್ತಾ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ.

  • ಏನಾಯ್ತು ಅಮಿತಾಭ್ ಬಚ್ಚನ್‌ಗೆ? – ಆತಂಕದಲ್ಲಿ ಅಭಿಮಾನಿಗಳು

    ಏನಾಯ್ತು ಅಮಿತಾಭ್ ಬಚ್ಚನ್‌ಗೆ? – ಆತಂಕದಲ್ಲಿ ಅಭಿಮಾನಿಗಳು

    ನೆನ್ನೆ ರಾತ್ರಿ 10.14ಕ್ಕೆ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಆತಂಕ ಹೆಚ್ಚಿಸಿದ್ದಾರೆ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್. ಅವರು ಆ ರೀತಿಯಲ್ಲಿ ಯಾಕೆ ಟ್ವೀಟ್ ಮಾಡಿದರು? ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿದೆಯಾ? ಅರ್ಥವೇ ಆಗದಂತೆ ಮಾಡಿರುವ ಟ್ವೀಟ್ ಹಿಂದಿರುವ ಉದ್ದೇಶವೇನು ಎನ್ನುವ ಪ್ರಶ್ನೆಯೊಂದಿಗೆ ಆತಂಕ ವ್ಯಕ್ತಪಡಿಸಿದ್ದಾರೆ ಅಮಿತಾಭ್ ಅಭಿಮಾನಿಗಳು. ಅಲ್ಲದೇ, ಏನಾಗಿದೆ ಅಂತ ಬೇಗ ಹೇಳಿ ದೇವರೆ? ಎಂದು ಮರುಟ್ವೀಟ್ ಮಾಡಿದ್ದಾರೆ ಸಾಕಷ್ಟು ಅಭಿಮಾನಿಗಳು. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಆರೋಗ್ಯದ ವಿಷಯದಲ್ಲಿ ಅಮಿತಾಭ್ ಬಚ್ಚನ್ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಒಂದೊಂದು ಬಾರಿ ಅವರೇ ತಮಗಾದ  ಆರೋಗ್ಯ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡರೆ, ಮತ್ತಷ್ಟು ಬಾರಿ ಸುಳ್ಳು ಸುದ್ದಿಗಳು ಹಬ್ಬಿವೆ. ಆದರೆ, ಈ ಬಾರಿ ಸ್ವತಃ ಅಮಿತಾಭ್ ಅವರೇ, “heart pumping .. concerned .. and the hope” ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು

    ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಲಕ್ಷಾಂತರ ಅಭಿಮಾನಿಗಳು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮರು ಟ್ವೀಟ್ ಮಾಡಿದ್ದಾರೆ. ಆಗಿರುವ ಸಮಸ್ಯೆಯನ್ನು ಹೇಳಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಅಮಿತಾಭ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಇನ್ನೂ ಅವರ ಅಭಿಮಾನಿಗಳು ಆತಂಕದಲ್ಲೇ ಇದ್ದಾರೆ.