Tag: bidar

  • ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

    ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

    ಬೀದರ್: ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುವಾಗ ಎರಡು ಬಾರಿ ಕರೆಂಟ್ ಕಟ್ಟಾಗಿದ್ದಕ್ಕೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಗರಂ ಆಗಿದ್ದ ಘಟನೆ ಬೀದರ್‍ ರಂಗಮಂದಿರದಲ್ಲಿ ನಡೆದಿದೆ.

    ಇಂದು ಸಚಿವರಿಗೆ ದಲಿತ ಪರ ಸಂಘಟನೆಗಳಿಂದ ಸನ್ಮಾನ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಈ ವೇಳೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿತ್ತು. ಇದರಿಂದ ಗರಂ ಆದ ಸಚಿವರು ರೈತರಿಗಾಗಿ ನಿರಂತರ ಜ್ಯೋತಿ ನೀಡಬೇಕು ಹಾಗೂ ಸಮಸ್ಯೆ ಇರುವ ಕಡೆ ದುರಸ್ಥಿ ಕಾರ್ಯ ನಡೆಸ ಬೇಕು ಎಂದು ಜೆಎಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆ ಅದರು ಸಮಸ್ಯೆ ಬಗೆಹರಿದಿಲ್ಲ ಎಂದು ಗರಂ ಆದರು.

    ರೈತರು ನಿರಂತವಾಗಿ ಈ ಕುರಿತು ತಮಗೇ ದೂರು ನೀಡುತ್ತಾರೆ. ವಿದ್ಯುತ್ ಸರಿಯಾಗಿ ನೀಡದ ಹಿನ್ನೆಲೆ ಕಬ್ಬು ಸೇರಿದಂತೆ ಹಲವು ಬೆಳೆಗಳು ಒಣಗಿ ಹೋಗಿದೆ. ರೈತರು ಅಧಿಕಾರಿಗಳಿಗೆ ಫೋನ್ ಮಾಡಿ ಸುಸ್ತಾಗಿ ಕೊನೆಗೆ ನಮಗೆ ಫೋನ್  ಮಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ನೀನೇ ಬುಲ್ ಬುಲ್, ನೀನೇ ನನ್ ಜಾನ್ ಅಂತ ಮದ್ವೆ ಮಾಡ್ಕೊಂಡು ಹೊರದಬ್ಬಿದ- ನ್ಯಾಯಕ್ಕಾಗಿ ಯುವತಿ ಕಣ್ಣೀರು

    ನೀನೇ ಬುಲ್ ಬುಲ್, ನೀನೇ ನನ್ ಜಾನ್ ಅಂತ ಮದ್ವೆ ಮಾಡ್ಕೊಂಡು ಹೊರದಬ್ಬಿದ- ನ್ಯಾಯಕ್ಕಾಗಿ ಯುವತಿ ಕಣ್ಣೀರು

    ಬೀದರ್: ನೀನೇ ನನ್ನ ಬುಲ್ ಬುಲ್, ನೀನೆ ನನ್ನ ಜಾನ್ ಎಂಬ ಬಣ್ಣ ಬಣ್ಣದ ಮಾತಿಗೆ ಬಲಿಯಾಗಿ ಮನೆ, ಮಠ ಬಿಟ್ಟು ಪ್ರೀತಿ ಮಾಡಿದವನನ್ನು ನಂಬಿಕೊಂಡು ಬಂದು ಮದುವೆಯಾದ ಯುವತಿ ಈಗ ಬೀದಿ ಪಾಲಾಗಿದ್ದಾರೆ.

    ಹೌದು. ಬೀದರ್ ತಾಲೂಕಿನ ಪೋಲಕಪಳ್ಳಿ ಗ್ರಾಮದ ಯುವತಿಯೊಬ್ಬಳು ತನ್ನ ಹೊಲದಲ್ಲಿ ಕೆಲಸಕ್ಕೆ ಬರುವ ಯುವಕ ಸಿದ್ದಪ್ಪನ್ನು ಪ್ರೀತಿ ಮಾಡಿ ಕುಟುಂಬಸ್ಥರ ಒಪ್ಪಿಗೆ ಇಲ್ಲದೇ 2013ರಲ್ಲಿ ಮದುವೆಯಾಗಿ ಇಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

    ಮದುವೆಯಾದ ಬಳಿಕ ಎರಡು ವರ್ಷ ಚೆನ್ನಾಗಿಯೇ ಇದ್ದ ಸಿದ್ದಪ್ಪ ಇದಕ್ಕಿದ್ದಂತೆ ತನ್ನ ಕುಟುಂಬದವರ ಮಾತು ಕೇಳಿಕೊಂಡು ಯುವತಿ ಜೊತೆಯಲ್ಲಿ ಕಿರಿಕಿರಿ ಶುರು ಮಾಡಿಕೊಂಡು ಜಗಳಕ್ಕೆ ನಿಂತಿಕೊಂಡು ಬಿಟ್ಟಿದ್ದಾನೆಂತೆ. ಬಳಿಕ ಸಿದ್ದಪ್ಪ ಮತ್ತು ಕುಟುಂಬಸ್ಥರು ಸೇರಿಕೊಂಡು ಈ ಯುವತಿಗೆ ಮನಬಂದಂತೆ ಹೊಡೆದು, ತಮ್ಮ ಮನೆಯಿಂದಲೇ ಹೊರ ಹಾಕಿ ಇನ್ನೊಂದು ಮದುವೆ ಮಾಡಿದ್ದಾರೆ.

    ಎರಡನೇ ಪತ್ನಿ ಜೊತೆ ಸಿದ್ದಪ್ಪ ಈಗ ಆರಾಮಾಗಿ ಸಂಸಾರ ನಡೆಸುತ್ತಿದ್ದಾನೆ. ಆದ್ರೆ ಇತ್ತ ಯುವತಿ ಸಹಾಯಕ್ಕೆ ಅವರು ಕುಟುಂಬಸ್ಥರು ಬರುತ್ತಿಲ್ಲ. ಹತ್ತು ಹಲವಾರು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೂ, ಅವರು ಕ್ಯಾರೆ ಎನ್ನುತ್ತಿಲ್ಲವಂತೆ. ಪ್ರೀತಿ, ಪ್ರೇಮಕ್ಕೆ ಬಲಿಯಾಗಿ ಬೀದಿ ಪಾಲಾಗಿರುವ ಯುವತಿ ಇದೀಗ ಒಬ್ಬಂಟಿಯಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

  • ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

    ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

    ಬೀದರ್: ಯುವತಿಯನ್ನು ಚುಡಾಯಿಸಿದಕ್ಕೆ ಕಾಮುಕನಿಗೆ ಮಹಿಳೆ ಮತ್ತು ಯುವತಿಯಿಂದ ಸಖತ್ ಗೂಸ ನೀಡಿದ ಘಟನೆ ಜಿಲ್ಲೆಯ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಯುವಕನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ವೈರಲ್ ಫುಲ್ ವೈರಲ್ ಆಗಿದ್ದು, ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ. ಮಂಗಳವಾರ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ಯುವತಿಯರು ನಿಂತಿದ್ದರು. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದ ಕಾಮುಕ ಯುವತಿಯರನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ.

    ಅದೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಯುವತಿಯನ್ನು ಚುಡಾಯಿಸುತ್ತಿದ್ದನ್ನು ನೋಡಿದ್ದು, ಕಾಮುಕನ ಅಂಗಿ ಹಿಡಿದು ಚಪ್ಪಲಿ ಸೇವೆ ಮಾಡಿದ್ದಾರೆ. ಮಹಿಳೆ ಯುವಕನಿಗೆ ಥಳಿಸುತ್ತಿರುವುನ್ನು ಬಸ್ ನಿಲ್ದಾಣದಲ್ಲಿದ್ದ ಮಹಿಳೆಯರು ಗಮನಿಸಿದ್ದು, ಅವರು ಸಹ ಬಂದು ಕಾಮುಕನಿಗೆ ಸಖತ್ ಆಗಿಯೇ ಥಳಿಸಿದ್ದಾರೆ.

  • ಮುಟ್ಟಿದ್ರೆ, ತಟ್ಟಿದ್ರೆ ಬೀಳುತ್ತೆ ನೀರಿನ ಟ್ಯಾಂಕರ್- ಬೀದರ್ ನಲ್ಲಿ ಅನಾಹುತಕ್ಕಾಗಿ ಕಾಯ್ತಿದ್ಯಾ ಸರ್ಕಾರ..?

    ಮುಟ್ಟಿದ್ರೆ, ತಟ್ಟಿದ್ರೆ ಬೀಳುತ್ತೆ ನೀರಿನ ಟ್ಯಾಂಕರ್- ಬೀದರ್ ನಲ್ಲಿ ಅನಾಹುತಕ್ಕಾಗಿ ಕಾಯ್ತಿದ್ಯಾ ಸರ್ಕಾರ..?

    ಬೀದರ್: ಭಾಲ್ಕಿ ತಾಲೂಕಿನ ಭಾತಾಂಬ್ರಾ ಗ್ರಾಮದ ನೀರಿನ ಟ್ಯಾಂಕ್ ನಿರ್ಮಾಣದಲ್ಲಿ ಮಾಡಿದ ಕಳಪೆ ಕಾಮಗಾರಿಯಿಂದಾಗಿ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    20 ಲಕ್ಷ ರೂ.ಗೂ ಹೆಚ್ಚು ಅನುದಾನದಲ್ಲಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದು, ಅದು ಇಂದು ಅಥವಾ ನಾಳೆ ಬೀಳುವ ಹಂತದಲ್ಲಿದೆ. ಈ ಕುರಿತು ಮೂರು ವರ್ಷಗಳ ಹಿಂದೆ ಪಬ್ಲಿಕ್ ಟಿವಿ ಸುದ್ದಿ ಮಾಡಿದ್ದರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

    ಸರ್ಕಾರ ಗ್ರಾಮೀಣ ನೀರು ಸರಬರಾಜು ಯೋಜನೆಯ ಅಡಿಯಲ್ಲಿ 20 ಲಕ್ಷ ರೂ. ಖರ್ಚು ಮಾಡಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಿತ್ತು. ಈ ಟ್ಯಾಂಕ್ ನಿರ್ಮಾಣವಾಗಿ 20 ವರ್ಷಗಳು ಕಳೆದಿದ್ದು ಈಗಾಗಲೇ ಸಂಪೂರ್ಣವಾಗಿ ಬೀಳುವ ಹಂತಕ್ಕೆ ತಲುಪಿದೆ. ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಈ ಟ್ಯಾಂಕ್ ಪಕ್ಕದಿಂದ ಶಾಲೆಗೆ ಹೋಗಬೇಕಾದ ಅನಿರ್ವಾತೆ ಇದ್ದು, ಸ್ಥಳೀಯರು ಸೇರಿದಂತೆ ಮಕ್ಕಳೂ ಸಹ ಭಯದ ವಾತವರಣದಲ್ಲಿ ತಿರುಗಾಡಬೇಕಾದ ಪರಿಸ್ಥಿತಿ ಎದುರಾಗಿದೆ.

     

    ಈ ಕುರಿತಂತೆ ಪಬ್ಲಿಕ್ ಟಿವಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೂರು ವರ್ಷಗಳ ಹಿಂದೆಯೇ ಈ ಕುರಿತು ಸುದ್ದಿ ಪ್ರಸಾರ ಮಾಡಿತ್ತು. ಆದರೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕರು ಹಾಗೂ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

    ಈಗಾಗಲೇ ಹಲವು ಜಿಲ್ಲೆಗಳಲ್ಲಿ ನೀರಿನ ಟ್ಯಾಂಕ್‍ಗಳು ಕುಸಿದು ಹಲವು ಜೀವಗಳನ್ನು ಬಲಿ ತೆಗೆದುಕೊಂಡಿರುವ ಘಟನೆಗಳು ನಮ್ಮ ಮುಂದಿವೆ. ಆದರೆ ನಮ್ಮ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯುವ ಮೊದಲೇ ಅಧಿಕಾರಿಗಳು ಎಚ್ಚರಗೊಳ್ಳಬೇಕಿದೆ. ಸರ್ಕಾರ ಈ ಕಳಪೆ ಕಾಮಗಾರಿಯ ಬಗ್ಗೆ ಸರಿಯಾದ ತನಿಖೆ ನಡೆಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಯುವಕನ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ್ರು!

    ಯುವಕನ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ್ರು!

    ಬೀದರ್: ಅಪರಿಚಿತ ವ್ಯಕ್ತಿಗಳು ಯುವಕನೊಬ್ಬನ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾದ ಘಟನೆ ಬೀದರ್‍ನ ಹನುಯಮಾನ್ ನಗರದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಆಸೀಫ್ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಆಸೀಫ್ ಮುಖದ ಮೇಲೆ ಆ್ಯಸಿಡ್ ಬಿದ್ದ ಪರಿಣಾಮ ಮುಖದ ಮೇಲೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಆಸೀಫ್‍ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಆ್ಯಸಿಡ್ ದಾಳಿ ನಡೆಸಿದ ದುಷ್ಕರ್ಮಿಗಳು ಯಾರು ಹಾಗೂ ಏಕೆ ದಾಳಿ ನಡೆಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಗಾಂಧಿ ಗಂಜ್  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 11 ಬಾರಿ ಶಾಸಕನಾದ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಖರ್ಗೆ ಅಸಮಾಧಾನ

    11 ಬಾರಿ ಶಾಸಕನಾದ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಖರ್ಗೆ ಅಸಮಾಧಾನ

    ಬೀದರ್: ನಾನು 11 ಬಾರಿ ಶಾಸಕನಾಗಿ ಗೆಲುವು ಸಾಧಿಸಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ. ನನಗೆಷ್ಟು ನೋವು ಆಗಿರಬಹುದು ಎಂದು ಲೋಕಸಭೆಯ ಕಾಂಗ್ರೆಸ್ಸಿನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬೀದರ್ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಸಚಿವ ರಾಜಶೇಖರ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಸಿಗದ್ದಕ್ಕೆ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.

    ಸಚಿವ ಸ್ಥಾನ ವಂಚಿತರಿಗೆ ಸಲಹೆ ನೀಡುತ್ತ ಮಾತನಾಡಿದ ಅವರು, ಕೆಲವರಿಗೆ ಸಮಯಾನುಸಾರ ಸಿಗುತ್ತದೆ, ಇನ್ನು ಕೆಲವೊಮ್ಮೆ ಸಿಗುವುದೇ ಇಲ್ಲ. ರಹೀಂಖಾನ್ ಹಾಗೂ ಈಶ್ವರ್ ಖಂಡ್ರೆಗೆ ಸಚಿವ ಸ್ಥಾನ ಸಿಗದೇ ಇದ್ದಿದ್ದಕ್ಕೆ ನಿಮಗೆ ಬೇಸರವಾಗಿರಬಹುದು. ಆದರೆ ನಾನು 11 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಒಮ್ಮೆಯೂ ನನಗೆ ಸಿಎಂ ಸ್ಥಾನ ಸಿಗಲಿಲ್ಲ. ನನಗೆ ಎಷ್ಟು ನೋವು ಆಗಿರಬಹುದು. ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಆಗಲಾದರೂ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ಹಾಗೂ ಆರ್ ಎಸ್‍ಎಸ್ ಧೋರಣೆಗಳನ್ನು ದೂರವಿಡಬೇಕು ಎನ್ನುವ ಆಲೋಚನೆಯಿಂದ ಮೈತ್ರಿ ಸರ್ಕಾರಕ್ಕೆ ಮುಂದಾಗಿದ್ದೇವೆಯೇ ಹೊರತು ನಮ್ಮ ಖುಷಿಗಾಗಿ ಅಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಣಾಳಿಕೆ ಪ್ರಕಾರ ಕೆಲಸ ಮಾಡಿದೆ. ಆದರೆ ಮತದಾರರು ಯಾಕೆ ಇಂತಹ ಶಿಕ್ಷೆ ಕೊಟ್ಟಿದ್ದಾರೆಂದು ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.

    ಸಚಿವ ಸ್ಥಾನ ವಂಚಿತ ಶಾಸಕ ಈಶ್ವರ್ ಖಂಡ್ರೆ ಗೈರಾಗಿದ್ದರು. ಸಹಕಾರ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ, ಡಾ. ಚಂದ್ರಶೇಖರ ಪಾಟೀಲ ಹಾಗೂ ವಿಜಯಸಿಂಗ್, ಬಸವಕಲ್ಯಾಣ ಶಾಸಕ ಬಿ.ನಾರಾಯಣ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ರೈತನಿಂದ 20 ಅಡಿ ಆಳಕ್ಕೆ ಬಿದ್ದ ನವಿಲು ರಕ್ಷಣೆ!

    ರೈತನಿಂದ 20 ಅಡಿ ಆಳಕ್ಕೆ ಬಿದ್ದ ನವಿಲು ರಕ್ಷಣೆ!

    ಬೀದರ್: 20 ಅಡಿ ಆಳದ ತೆರೆದ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ರಾಷ್ಟ್ರ ಪಕ್ಷಿ ನವಿಲನ್ನು ಬೀದರ್ ತಾಲೂಕಿನ ಚಿಟ್ಟಾವಾಡಿಯ ರೈತರೊಬ್ಬರು ರಕ್ಷಣೆ ಮಾಡಿ ಮಾನವೀಯತೆ ತೋರಿಸಿದ್ದಾರೆ.

    ನವಿಲು ಕಣ್ಣು ಕಾಣದೆ ತೆರೆದ ಬಾವಿಗೆ ಬಿದ್ದಿದೆ. ಆಹಾರವಿಲ್ಲದೆ ಇಂದು ಮುಂಜಾನೆಯಿಂದ ಬಾವಿಯಲ್ಲಿ ಒದ್ದಾಡುತ್ತಿತ್ತು. ಬಾವಿಗೆ ಬಿದ್ದಿದ್ದ ರಾಷ್ಟ್ರ ಪಕ್ಷಿಯನ್ನು ರೈತ ಮಹಮ್ಮದ್ ಜಾಫರ್ ನೋಡಿದ್ದಾರೆ.

    ನಂತರ ಸ್ಥಳಿಯರಿಗೆ ಕರೆ ಮಾಡಿ, ಹಗ್ಗದ ಸಹಾಯದಿಂದ ಬಾವಿಯ ಕೆಳಗೆ ಇಳಿದಿದ್ದಾರೆ. ಬಳಿಕ ಬಾವಿಯಲ್ಲಿದ್ದ ನವಿಲನ್ನು ಹಗ್ಗದ ಸಹಾಯದಿಂದ ತನ್ನ ಸೊಂಟಕ್ಕೆ ಕಟ್ಟಿಕೊಂಡು ಮೇಲೆ ಎತ್ತಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ನವಿಲನ್ನು ರಕ್ಷಣೆ ಮಾಡಿ ರೈತ ಜಾಫರ್ ಪಶು ಇಲಾಖೆಯ ಅಧಿಕಾರಿಗಳ ಬಳಿಗೆ ತಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

  • ಜೀವಂತ ಮೀನಿಗೆ ಔಷಧಿ ಹಚ್ಚಿ ರೋಗಿಗಳ ಬಾಯಿಗೆ ಇಟ್ರೆ ಖಾಯಿಲೆ ವಾಸಿ!

    ಜೀವಂತ ಮೀನಿಗೆ ಔಷಧಿ ಹಚ್ಚಿ ರೋಗಿಗಳ ಬಾಯಿಗೆ ಇಟ್ರೆ ಖಾಯಿಲೆ ವಾಸಿ!

    ಬೀದರ್: ನಾಟಿ ವೈದ್ಯರೊಬ್ಬರು ಅಸ್ತಮಾದಂತಹ ರೋಗಗಳಿಗೆ ಬೀದರ್‍ನಲ್ಲಿ ವಿಶೇಷ ಚಿಕಿತ್ಸೆ ನೀಡುತ್ತಿದ್ದಾರೆ.

    ಶ್ಯಾಮ ಸುಂದರ್ ಜೀವಂತ ಮೀನುಗಳನ್ನು ನೀಡಿ ಚಿಕಿತ್ಸೆ ನೀಡುತ್ತಿರುವ ನಾಟಿ ವೈದ್ಯರು. ಸುಮಾರು 40 ವರ್ಷಗಳಿಂದ ಜೀವಂತ ಮೀನಿಗೆ ಔಷಧಿ ಹಚ್ಚಿ ರೋಗಿಗಳ ಬಾಯಿಗೆ ಹಾಕುತ್ತಾರೆ. ಈ ಮೂಲಕ ಅಸ್ತಮಾ, ಧಮ್ಮು ಮತ್ತು ಕೆಮ್ಮು ಕಾಯಿಲೆಗೆ ಶಾಶ್ವತ ಪರಿಹಾರ ಕೊಡುತ್ತಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಯಾವ ದಿನ ಮೀನಿನ ಚಿಕಿತ್ಸೆ ತೆಗೆದುಕೊಳ್ಳಬೇಕು?
    ಪ್ರತಿ ವರ್ಷ ಮುಂಗಾರು ಮಳೆ ಆರಂಭದ ಮೃಗಾಶೀರ ಜೇಷ್ಠ ಮಾಸದಂದು ಒಂದು ದಿನ ಮಾತ್ರ ಈ ಔಷದೋಪಚಾರ ನಡೆಯುತ್ತೆ. ಹೀಗಾಗಿ ಚಿಕಿತ್ಸೆ ಪಡೆಯಲು ನೆರೆಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿ ಚಿಕಿತ್ಸೆ ಪಡೆದವರಿಗೆ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ ಬರೋದಿಲ್ಲವಂತೆ. ಕಳೆದ ನಾಲ್ಕು ದಶಕಗಳಿಂದ ತಮ್ಮ ಪೂರ್ವಜರು ಈ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ ಎಂದು ಶ್ಯಾಮ್ ಸುಂದರ್ ಹೇಳುತ್ತಾರೆ.

    ಈ ಚಿಕಿತ್ಸೆ ಅಲೋಪತಿಕ್ ವೈದ್ಯರಿಂದ ಅಸಾಧ್ಯವಂತೆ. ವೈದ್ಯರ ಬಳಿ ಹೋದರೂ ವಾಸಿಯಾಗದ ಕಾಯಿಲೆಗಳು ಈ ಜೀವಂತ ಮೀನು ತಿಂದರೆ ವಾಸಿಯಾಗುತ್ತದೆ ಎನ್ನುವ ನಂಬಿಕೆಯಿದೆ. ನಾಟಿ ವೈದ್ಯ ಶ್ಯಾಮ್ ಸುಂದರ್ ಹಲವು ವರ್ಷಗಳಿಂದ ಉಚಿತ ಚಿಕಿತ್ಸೆ ನೀಡುತ್ತಿರುವುದು ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.

    ವೈದ್ಯರ ಬಳಿ ಹೋದರೆ ಅಸ್ತಮಾ ರೋಗಕ್ಕೆ ಸಾಕಷ್ಟು ಪರೀಕ್ಷೆ ಮಾಡುತ್ತಾರೆ. ಅಲ್ಲದೇ ವರ್ಷಗಟ್ಟಲೆ ಚಿಕಿತ್ಸೆ ನೀಡುತ್ತಾ ಹಣ ಸುಲಿಯುತ್ತಾರೆ. ಆದರೂ ರೋಗ ಗುಣಮುಖವಾಗುವ ಲಕ್ಷಣದ ಭರವಸೆ ಇರುವುದಿಲ್ಲ. ನಾಟಿ ವೈದ್ಯ ಶ್ಯಾಮ್ ಸುಂದರ್ ನೀಡುವ ಈ ಮೀನಿನ ಚಿಕಿತ್ಸೆಯಿಂದ ನಮ್ಮ ರೋಗ ನಿವಾರಣೆಯಾಗಿದೆ ಎಂದು ಇವರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದ ಹಲವರು ಹೇಳುತ್ತಾರೆ.

  • ಮೂರು ದಶಕಗಳ ಬಳಿಕ ಬಿಜೆಪಿ ಭದ್ರಕೋಟೆ ಕಾಂಗ್ರೆಸ್ ವಶಕ್ಕೆ

    ಮೂರು ದಶಕಗಳ ಬಳಿಕ ಬಿಜೆಪಿ ಭದ್ರಕೋಟೆ ಕಾಂಗ್ರೆಸ್ ವಶಕ್ಕೆ

    ಕಲಬುರಗಿ: 30 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಈಶಾನ್ಯ ಪದವೀಧರ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ.

    1988ರಲ್ಲಿ ಕ್ಷೇತ್ರ ಸ್ಥಾಪನೆಯಾದಾಗಿನಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಹುಮನಾಬಾದ್ 321 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಗೆ ಈ ಕ್ಷೇತ್ರದಲ್ಲಿ ಗೆಲುವು ಸಿಕ್ಕಂತಾಗಿದೆ.

    ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ಹಾಗೂ ಹರಪನಹಳ್ಳಿ ತಾಲೂಕು ಒಳಗೊಂಡ ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇಕಡ 67.50ರಷ್ಟು ಮತದಾನವಾಗಿತ್ತು. ಕಳೆದ ಶುಕ್ರವಾರ ನಡೆದ ಮತದಾನದಲ್ಲಿ 82,054 ಮತದಾರರ ಪೈಕಿ 55,384 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

    ನಿನ್ನೆ ಗುಲ್ಬರ್ಗಾ ವಿವಿ ಗಣಿತ ವಿಭಾಗದ ಭಾಸ್ಕರ್ ಹಾಲ್ ನಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಇಂದು ಬೆಳಗ್ಗೆ 4 ಗಂಟೆಯವರೆಗೂ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೊದಲ ಪ್ರಾಶಸ್ತ್ಯ ಹಾಗೂ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಯಿತು. ಆದರೆ ಯಾವೊಬ್ಬ ಅಭ್ಯರ್ಥಿಯು ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆಯದ ಹಿನ್ನೆಲೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಸಲಾಯಿತು.

    ಈ ಚುನಾವಣೆಯಲ್ಲಿ ಚಂದ್ರಶೇಖರ್ ಪಾಟೀಲ್ ಹುಮನಾಬಾದ್ 321 ಮತಗಳ ಅಂತರದಿಂದ ವಿಜಯ ಸಾಧಿಸಿದರು. ಚಂದ್ರಶೇಖರ ಪಾಟೀಲ್ ಹುಮನಾಬಾದ್ 18,768 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ್ 18,447 ಮತಗಳನ್ನು ಪಡೆದುಕೊಂಡರು.

    ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಲಬುರಗಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಿಜೇತ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಹುಮನಾಬಾದ್ ಗೆ ಚುನಾವಣಾಧಿಕಾರಿ ಪಂಕಜಕುಮಾರ್ ಪಾಂಡೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ಪಾಟೀಲ್ ಹುಮನಾಬಾದ್ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

  • ಕಾರಿನ ಸಮೇತ 71 ಲಕ್ಷ ಹಣದ ಜೊತೆ ಚಾಲಕ ಪರಾರಿ

    ಕಾರಿನ ಸಮೇತ 71 ಲಕ್ಷ ಹಣದ ಜೊತೆ ಚಾಲಕ ಪರಾರಿ

    ಬೀದರ್: 71 ಲಕ್ಷ ನಗದು ಹಾಗೂ ಕಾರು ಸಮೇತ ಕಾರು ಚಾಲಕ ಪರಾರಿಯಾದ ಘಟನೆ ಬೀದರ್ ನ ಮನ್ನಾಏಖೇಳಿಯಲ್ಲಿ ನಡೆದಿದೆ.

    ಉದ್ಯಮಿ ರಾಜೇಶ್ ಎಂಬವರೇ ಹಣ ಕಳೆದುಕೊಂಡ ವ್ಯಕ್ತಿ. ರಾಜೇಶ್ ಕಾರಿನಲ್ಲಿ 71 ಲಕ್ಷ ಹಣವುಳ್ಳ ಬ್ಯಾಗ್ ಇಟ್ಟು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಕಾರ್ ಚಾಲಕ ಮಾರುತಿ ಹಣ ತೆಗೆದುಕೊಂಡು ಕಾರಿನ ಸಮೇತ ಪರಾರಿಯಾಗಿದ್ದಾನೆ.

    ರಾಜೇಶ್ ಬಳ್ಳಾರಿ ಮೂಲದ ಉದ್ಯಮಿಯಾಗಿದ್ದು, ಸೋಯಾ ಸೀಡ್ಸ್ ವ್ಯಾಪಾರ ಮಾಡುತ್ತಿದ್ದರು. ಆದರೆ ರಾಜೇಶ್ ರೈತ ಸಂಪರ್ಕ ಕೇಂದ್ರದಿಂದ ವಾಪಸ್ ಬರೋವಷ್ಟರಲ್ಲಿ ಚಾಲಕ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ.

    ಕೆಎ – 34, ಎನ್ -5427 ನಂಬರ್ ನ ಕಾರ್, ಪರಾರಿಯಾದ ಚಾಲಕ ಹೈದರಾಬಾದ್ ಕಡೆ ಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಮನ್ನಾಖೇಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.