Tag: bidar

  • ಜಿಂಕೆಗಳ ಕಾಟದಿಂದ ಬೇಸತ್ತಿದ್ದಾರೆ ಬೀದರ್ ರೈತರು!

    ಜಿಂಕೆಗಳ ಕಾಟದಿಂದ ಬೇಸತ್ತಿದ್ದಾರೆ ಬೀದರ್ ರೈತರು!

    ಬೀದರ್: ಜಿಂಕೆಗಳ ಕಾಟದಿಂದಾಗಿ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಾಳ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

    ಸಾಲ ಮಾಡಿ ಬೆಳೆದ ಬೆಳೆಗಳನ್ನು ಹಿಂಡು ಹಿಂಡಾಗಿ ಬರುವ ಜಿಂಕೆಗಳು ತಿಂದು ಹಾಕುತ್ತಾ ರೈತರ ಪಾಲಿನ ಶತ್ರುಗಳಾಗಿವೆ. ಅಲ್ಲದೇ ಚಟ್ನಾಳ್ ಗ್ರಾಮದ ಗ್ರಾಮಸ್ಥರು ಜಿಂಕೆಗಳ ಉಪಟಳಕ್ಕೆ ತೀವ್ರವಾಗಿ ಬೇಸತ್ತು ಹೋಗಿದ್ದಾರೆ.

    ಗದ್ದೆಯಲ್ಲಿ ಬೆಳೆದ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಗದ್ದೆಗಳಿಗೆ ಬರುವ ಜಿಂಕೆಗಳನ್ನು ಓಡಿಸುವುದು ಕಷ್ಟವಾಗಿದ್ದು, ಜಿಂಕೆಗಳು ಬರದಂತೆ ಬೇಲಿ ಹಾಕಲು ಸಾಧ್ಯವಾಗುತ್ತಿಲ್ಲ. ಮುಂಗಾರು ಹಂಗಾಮಿನ ಬೆಳೆಗಳಾದ ತೊಗರಿ, ಉದ್ದು, ಹೆಸರು, ಜೋಳ, ಸೋಯಾಬಿನ್ ಸಸಿಗಳನ್ನು ತಿಂದು ಹಾಳು ಮಾಡಿತ್ತಿವೆ. ಜಿಂಕೆಯ ದಾಳಿಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾಳಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಕಬ್ಬಿನ ಗದ್ದೆಗಳಿಗೆ ಲಗ್ಗೆ ಇಡುವ ಜಿಂಕೆಗಳ ಹಿಂಡು ಫಲವತ್ತಾದ ಬೆಳೆಯನ್ನು ತಿಂದು ಹಾಕುತ್ತಿವೆ. ಇದರಿಂದ ಬೇಸತ್ತ ರೈತರು ಅರಣ್ಯ ಇಲಾಖೆಗೆ ಹಲವು ಬಾರಿ ದೂರನ್ನು ನೀಡಿದ್ದಾರೆ. ಆದರೆ ಈ ಕುರಿತು ಯಾವುದೇ ಪ್ರಯೋಜನವಾಗಿಲ್ಲ ಎಂದು ಅರಣ್ಯ ಇಲಾಖೆಯ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

  • ಕುಡಿದ ಮತ್ತಿನಲ್ಲಿ ಸಾರ್ವಜನಿಕ ಸ್ಥಳದಲ್ಲೇ ಅರೆ ನಗ್ನ- ಪೊಲೀಸರಿಂದ ವ್ಯಕ್ತಿಗೆ ಲಾಠಿಯೇಟು!

    ಕುಡಿದ ಮತ್ತಿನಲ್ಲಿ ಸಾರ್ವಜನಿಕ ಸ್ಥಳದಲ್ಲೇ ಅರೆ ನಗ್ನ- ಪೊಲೀಸರಿಂದ ವ್ಯಕ್ತಿಗೆ ಲಾಠಿಯೇಟು!

    ಬೀದರ್: ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನನಾಗಿ ಪೊಲೀಸರ ಮುಂದೆ ಹೈಡ್ರಾಮ ಮಾಡಿ ಬಿಸಿ ಬಿಸಿ ಲಾಠಿ ಏಟು ತಿಂದ ಘಟನೆ ಬೀದರ್ ನಲ್ಲಿ ನಡೆದಿದೆ.

    ನಗರದ ಅಂಬೇಡ್ಕರ್ ವೃತ್ತದಲ್ಲಿ ವ್ಯಕ್ತಿ ಸಾರ್ವಜನಿಕವಾಗಿ ನಿಂದನೆ ಮಾಡುತ್ತಾ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಮದ್ಯಪಾನ ಸೇವಿಸಿ ಫುಲ್ ನಶೆಯಲ್ಲಿದ್ದ ಅಪರಿಚಿತ ವ್ಯಕ್ತಿ ಅರೆ ನಗ್ನವಾಗಿ, ಅಸಭ್ಯ ವರ್ತನೆಗೆ ಸಾರ್ವಜನಿಕರು ಪುಲ್ ಗರಂ ಆಗಿದ್ರು.

    ಪೊಲೀಸರು ವ್ಯಕ್ತಿಯನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟು ವಿಫಲರಾದಾಗ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವ್ಯಕ್ತಿಗೆ ಲಾಠಿಯೇಟು ಕೊಟ್ಟು, ಠಾಣೆಗೆ ಕರೆದೊಯ್ದಿದ್ದಾರೆ.

  • ಮಕ್ಕಳ ವದಂತಿ ನಂಬಿ ಹತ್ಯೆ, 30 ಮಂದಿ ಅರೆಸ್ಟ್

    ಮಕ್ಕಳ ವದಂತಿ ನಂಬಿ ಹತ್ಯೆ, 30 ಮಂದಿ ಅರೆಸ್ಟ್

    ಬೀದರ್: ಮಕ್ಕಳ ಕಳ್ಳರೆಂದು ಮುಸುಕುಧಾರಿಗಳಿಗೆ ಗ್ರಾಮಸ್ಥರು ಗಂಭೀರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾನಗರ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ.

    ಶುಕ್ರವಾರ ತಡರಾತ್ರಿ ಪೊಲೀಸರು ಜನರನ್ನು ಬಂಧಿಸಿದ್ದಾರೆ. ಪೊಲೀಸರು ವಿಡಿಯೋ ನೋಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲೆಯ ಔರಾದ್ ತಾಲೂಕಿನ ಮೂರ್ಕಿ ಗ್ರಾಮದ ಬಳಿ ಮಕ್ಕಳ ಕಳ್ಳರೆಂದು ಮುಸುಕುದಾರಿಗಳಿಗೆ ಗ್ರಾಮಸ್ಥರು ಹಿಗ್ಗಾ-ಮುಗ್ಗಾ ಥಳಿಸಿದ್ದರು. ಜನರು ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಜಮ್(26) ಆರೋಪಿ ಮೃತಪಟ್ಟಿದ್ದನು.

    ಗ್ರಾಮಸ್ಥರು ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಬಳಿಕ ಈ ವಿಡಿಯೋವನ್ನು ಪೊಲೀಸರು ಗಮನಿಸಿ ಜನರನ್ನು ಬಂಧಿಸಲು ಮುಂದಾಗಿದ್ದರು. ಈ ಬಗ್ಗೆ ತಿಳಿದುಕೊಂಡು ಗ್ರಾಮಸ್ಥರು ಬಂಧನದ ಭೀತಿಯಿಂದ ಗ್ರಾಮವನ್ನು ತೊರೆದಿದ್ದರು.

    ಶುಕ್ರವಾರ ತಡರಾತ್ರಿ ಪೊಲೀಸರು ಬಂಧಿಸಲು ಹೋದಾಗ ಜನರು ಗಲಾಟೆ ಮಾಡುತ್ತಿದ್ದರು. ಸ್ಥಳಕ್ಕೆ ಎಸ್.ಪಿ ದೇವರಾಜ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಕುರಿತು ಕಮಲಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಬೀದರ್ ಬ್ರೀಮ್ಸ್ ಕಾಲೇಜಿನಲ್ಲಿ ಅಗ್ನಿ ಅವಘಡ – ನಿರ್ದೇಶಕರ ಹಾಲ್ ನಲ್ಲಿ ಮಾತ್ರ ಬೆಂಕಿ!

    ಬೀದರ್ ಬ್ರೀಮ್ಸ್ ಕಾಲೇಜಿನಲ್ಲಿ ಅಗ್ನಿ ಅವಘಡ – ನಿರ್ದೇಶಕರ ಹಾಲ್ ನಲ್ಲಿ ಮಾತ್ರ ಬೆಂಕಿ!

    ಬೀದರ್: ಶಾರ್ಟ್ ಸರ್ಕ್ಯೂಟ್‍ ನಿಂದಾಗಿ ಗುರುವಾರ ತಡರಾತ್ರಿ ಬೀದರ್ ನ ಬ್ರೀಮ್ಸ್ ಮೆಡಿಕಲ್ ಕಾಲೇಜು ನಿರ್ದೇಶಕರ ಹಾಲ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

    ಗುರುವಾರ ತಡರಾತ್ರಿ ಈ ಬೆಂಕಿ ಅನಾಹುತ ಸಂಭವಿಸಿದ್ದು, ಕಾಲೇಜಿನ ಮಹತ್ವದ ದಾಖಲೆಗಳು, ಒಂದು ಕಂಪ್ಯೂಟರ್, ಎಲ್‍ಇಡಿ ಟಿವಿ ಸೇರಿದಂತೆ ನಿರ್ದೇಶಕರ ಹಾಲ್ ಸಂಪೂರ್ಣ ಸುಟ್ಟು ಭಸ್ನವಾಗಿದೆ. ಕಳೆದ ಹಲವು ದಿನಗಳ ಹಿಂದೆ ನಿರ್ದೇಶಕ ಡಾ.ಚನ್ನಣ್ ವರ್ಗಾವಣೆಗೊಂಡಿದ್ದು ಸದ್ಯ ಡಾ.ಕ್ಷೀರಸಾಗರ ಪ್ರಭಾರಿಯಾಗಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

    ಕಾಲೇಜಿನ ಎಲ್ಲಾ ಕೊಠಡಿ ಬಿಟ್ಟು ನಿರ್ದೇಶಕರ ಹಾಲ್ ನಲ್ಲಿ ಮಾತ್ರ ಬೆಂಕಿ ಅವಘಡ ಸಂಭವಿಸಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿದೆ. ಅಗ್ನಿ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

    ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲ್ಲಾ ಅನುಮಾನಗಳಿಗೆ ಪೊಲೀಸರ ತನಿಖೆಯಿಂದ ಮಾತ್ರ ಉತ್ತರ ಸಿಗಬೇಕಿದೆ.

  • ಬ್ಯಾಂಕ್ ಅಧಿಕಾರಿಗಳಿಂದ ಕಿರುಕುಳ- ಮನನೊಂದು ಬಾವಿಗೆ ಹಾರಿ ರೈತ ಆತ್ಮಹತ್ಯೆ

    ಬ್ಯಾಂಕ್ ಅಧಿಕಾರಿಗಳಿಂದ ಕಿರುಕುಳ- ಮನನೊಂದು ಬಾವಿಗೆ ಹಾರಿ ರೈತ ಆತ್ಮಹತ್ಯೆ

    ಬೀದರ್: ಬ್ಯಾಂಕ್ ಅಧಿಕಾರಿಗಳು ಮನೆಗೆ ಹೋಗಿ ಸಹಿ ಮಾಡುವಂತೆ ಕಿರುಕುಳ ನೀಡಿದ್ದಕ್ಕೆ ಮನನೊಂದ ರೈತರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮೇರಗುಡಿ ಗ್ರಾಮದ ರೈತ ವೆಂಕಟ್ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಕಾರ್ಪೋರೇಶನ್ ಬ್ಯಾಂಕ್ ನ ಅಧಿಕಾರಿಗಳು ರೈತನ ಮನೆಗೆ ಬಂದು ಪತ್ರದ ಮೇಲೆ ಸಹಿ ಮಾಡು ಎಂದು ಪೀಡಿಸಿದ್ದಾರೆ. ಇದರಿಂದ ಮನನೊಂದ ರೈತ ವೆಂಕಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ರೈತ ವೆಂಕಟ್ ಕಾರ್ಪೋರೇಶನ್ ಬ್ಯಾಂಕಿನಲ್ಲಿ 3 ಲಕ್ಷ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 1 ಲಕ್ಷ 70 ಸಾವಿರ ರೂ. ಸಾಲ ಮಾಡಿಕೊಂಡಿದ್ದರು. ನಿನ್ನೆ ಇದ್ದಕ್ಕಿಂದ್ದಂತೆ ಬ್ಯಾಂಕ್ ಅಧಿಕಾರಿಗಳು ವೆಂಕಟ್ ರವರ ಮನೆಗೆ ಬಂದು ಪತ್ರವೊಂದಕ್ಕೆ ಸಹಿ ಹಾಕುವಂತೆ ಪೀಡಿಸಿದ್ದಾರೆ. ಇದರಿಂದ ಮನನೊಂದು ಊರ ಪಕ್ಕದಲ್ಲಿ ಇದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತಂತೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವೆಂಕಟ್ ಪುತ್ರ ನನ್ನ ತಂದೆ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಆದರೆ ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಪತ್ರಕ್ಕೆ ಸಹಿ ಮಾಡುವಂತೆ ಕಿರುಕುಳ ನೀಡುತ್ತಿದ್ದರು. ಹಾಗಾಗಿ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಜುಲೈ 5 ರಂದು ಬಜೆಟ್ ನಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ರೈತರ ಹಿತದೃಷ್ಟಿಯಿಂದ 2 ಲಕ್ಷ ರೂವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದರು.

  • ಬೀದರ್ ನಲ್ಲಿ 150 ಕಡುಬಡವರಿಗೆ ಸಿಕ್ಕಿತು ಎಮ್ಮೆ ಭಾಗ್ಯ

    ಬೀದರ್ ನಲ್ಲಿ 150 ಕಡುಬಡವರಿಗೆ ಸಿಕ್ಕಿತು ಎಮ್ಮೆ ಭಾಗ್ಯ

    ಬೀದರ್: ಕಡು ಬಡವರ ಜೀವನದಲ್ಲಿ ಆಶಾಕಿರಣ ಮೂಡಿಸಲು ಸಲುವಾಗಿ ರಿಲ್ಯಾನ್ಸ್ ಪೌಂಡೇಶನ್ ಸಹಯೋಗದಲ್ಲಿ ಸುಮಾರು 150 ಬಡವರಿಗೆ ಎಮ್ಮೆ ಭಾಗ್ಯ ಸಿಕ್ಕಿದೆ.

    ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಎಂ ಗ್ರಾಮದಲ್ಲಿ ರಿಲಾಯನ್ಸ್ ಪೌಂಡೇಶನ್ ಸಹಯೋಗದಲ್ಲಿ `ಬಸವೇಶ್ವರ ರೈತ ಸಂಘ’ ಗ್ರಾಮದ ಜನರ ಒಳಿತಿಗಾಗಿ ದುಡಿಯತ್ತಿದೆ. ರೈತ ಸಂಘದಿಂದ 16 ಗ್ರಾಮಗಳಲ್ಲಿ ಈ ವರ್ಷ 150 ಜನರನ್ನು ಕಡು ಬಡವರೆಂದು ಗುರುತು ಮಾಡಿದ್ದು, ಅವರಿಗೆ ಎಮ್ಮೆ ನೀಡಿ ಜೀವನ ರೂಪಿಸಲು ಸಹಕಾರಿಯಾಗಿದೆ.

    ನಾಗೂರು ಎಂ, ನಾಗೂರು ಎನ್, ಕಾಶೆಂಪೂರು, ಕಪ್ಪೆಕೇರಿ, ನವಲಾಸಪೂರು, ವಿಲಾಸಪೂರು, ಜೈನಾಪೂರು, ಸಿದ್ದಿಪೂರು, ದದ್ದಿಪೂರು, ಪತ್ತೆಪೂರು, ಕಾಜಾಪೂರು ಹೀಗೇ 16 ಗ್ರಾಮಗಳ ಕಡು ಬಡವರಿಗೆ ಈ ಯೋಜನೆಯನ್ನು ನೀಡಿದ್ದಾರೆ. ಗ್ರಾಮದ ಎಲ್ಲಾ ಜನರು ಸಮಾನರಾಗಿರಬೇಕು ಎಂಬ ದೃಷ್ಟಿಯಿಂದ ಕಡು ಬಡವರು ಆರ್ಥಿಕ ಸಮತೋಲನವನ್ನು ಕಾಣಲಿ ಎಂಬ ಉದ್ದೇಶದಿಂದ ಈ ಎಮ್ಮೆ ಭಾಗ್ಯವನ್ನು ನೀಡಿದ್ದಾರೆ ಎನ್ನುವುದು ಸ್ಥಳೀಯರ ಮಾತಾಗಿದೆ.

    ಜನರಿಗೆ ಎಮ್ಮೆ ಭಾಗ್ಯ ಅಷ್ಟೇ ಅಲ್ಲದೇ ಕೋಳಿ ಭಾಗ್ಯ, ಕುರಿಭಾಗ್ಯ, ಮೇಕೆಭಾಗ್ಯ, ಕತ್ತೆಭಾಗ್ಯ ಹೀಗೆ ಹತ್ತು ಹಲವಾರು ಭಾಗ್ಯಗಳನ್ನು ರಿಲ್ಯಾನ್ಸ್ ಪೌಂಡೇಶನ್ ಕಡು ಬಡವರಿಗೆ ನೀಡಲು ಸಿದ್ಧವಾಗಿದೆ. ಬಡವರ ಸಂಪತ್ತನ್ನು ಕಿತ್ತುಕೊಂಡು ತಿನ್ನುತ್ತಿರುವ ಈ ದಿನಗಳಲ್ಲಿ ರೈತ ಸಂಘಟನೆ ಗಡಿ ಭಾಗದಲ್ಲಿರುವ ಕಡು ಬಡವರಿಗಾಗಿ ಈ ರೀತಿ ಯೋಜನೆಗಳನ್ನು ನಿರೂಪಿಸಿದ್ದು ಮಾತ್ರ ಸಂತೋಷದ ಸಂಗತಿಯಾಗಿದೆ.

    ಹೀಗಾಗಲೇ 16 ಗ್ರಾಮಗಳಲ್ಲಿ 150 ಜನಕ್ಕೆ ಈ ಯೋಜನೆಯ ಲಾಭ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನು ಹತ್ತಾರು ಗ್ರಾಮಗಳಿಗೆ ಅನುಷ್ಠಾನ ಮಾಡುವ ಉದ್ದೇಶವಿದೆ. ಬಜೆಟ್‍ನಲ್ಲಿ ಮೈತ್ರಿ ಸರ್ಕಾರ ಸಾಲ ಮನ್ನಾ ಮಾಡಿದ್ದು, ರೈತರು ಕೊಂಚ ನೀರಾಳವಾಗಿದ್ದಾರೆ. ಈ ರೀತಿ ವಿಭಿನ್ನ ಯೋಜನೆ ಹಾಕಿಕೊಂಡರೆ ರೈತರ ಬೆಳವಣೆಗೆಯಾಗುತ್ತದೆ. ರಿಲ್ಯಾನ್ಸ್ ಪೌಂಡೇಶನ್ ವತಿಯಿಂದಾಗಿ ಬಸವೇಶ್ವರ ರೈತ ಸಂಘ ನಮಗೂ ಎಮ್ಮೆಯನ್ನು ನೀಡಿದ್ದು, ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಫಲಾನುಭವಿಗಳು ಹೇಳುತ್ತಿದ್ದಾರೆ.

  • ಆಸ್ಪತ್ರೆಯಿಂದ ಹೆಣ್ಣು ಶಿಶುವನ್ನು ಕದ್ದಿದ್ದ ಮಹಿಳೆಯ ಬಂಧನ

    ಆಸ್ಪತ್ರೆಯಿಂದ ಹೆಣ್ಣು ಶಿಶುವನ್ನು ಕದ್ದಿದ್ದ ಮಹಿಳೆಯ ಬಂಧನ

    ಬೀದರ್: ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣು ಮಗುವನ್ನು ಅಪಹರಿಸಿದ್ದ ಮಹಿಳಾ ಆರೋಪಿಯನ್ನು ತೆಲಂಗಾಣ ಹಾಗೂ ಬೀದರ್ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಯನ(34) ಮಗು ಅಪಹರಿಸಿದ್ದ ಆರೋಪಿ. ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಸ್ವಗ್ರಾಮದಲ್ಲಿ ಆರೋಪಿಯನ್ನ ಬಂಧಿಸಿಲಾಗಿದೆ. ಬೀದರ್ ತಾಲೂಕಿನ ಕಾಶಂಪೂರ್ (ಬಿ) ಗ್ರಾಮದ ನಿವಾಸಿಯಾಗಿರುವ ನಯನ ಕಳೆದ ಎರಡು ದಿನಗಳ ಹಿಂದೆ ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣುಮಗು ಅಪಹರಿಸಿ ಬೀದರ್ ಜಿಲ್ಲಾಸ್ಪತ್ರೆಯ ನಲ್ಲಿ ಮಗು ಬಿಟ್ಟು ಪರಾರಿಯಾಗಿದ್ದಳು. ಇದನ್ನೂ ಓದಿ: ಹೈದರಾಬಾದ್‍ನಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆ

    ಮದುವೆ ಬಳಿಕ ಹೈದ್ರಾಬಾದ್ ನಲ್ಲಿಯೇ ವಾಸವಾಗಿದ್ದ ನಯನಾಗೆ ಎರಡು ಬಾರಿ ಗರ್ಭಪಾತವಾಗಿತ್ತು. ಇದರಿಂದ ಮನನೊಂದು ನಯನ ಮಗುವನ್ನು ಅಪಹರಿಸಿದ್ದಳು ಎನ್ನಲಾಗಿದೆ.

    ಈ ಕುರಿತು ಹೈದ್ರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮಗುವಿನ ಪೋಷಕರಿಂದ ಅಪಹರಣ ಪ್ರಕರಣ ದಾಖಲಾಗಿತ್ತು.

  • ತುಪ್ಪದ ಜಾತ್ರೆ – ಬೇಕಾದಷ್ಟು ತುಪ್ಪ, ಹೋಳಿಗೆ ಸವಿಯಬಹುದು

    ತುಪ್ಪದ ಜಾತ್ರೆ – ಬೇಕಾದಷ್ಟು ತುಪ್ಪ, ಹೋಳಿಗೆ ಸವಿಯಬಹುದು

    ಬೀದರ್: ಸಾಲ ಮಾಡಿಯಾದ್ರು ತುಪ್ಪ ತಿನ್ನು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದರೆ ನೀವು ಜಿಲ್ಲೆಯಲ್ಲಿ ನಡೆಯುವ ತುಪ್ಪದ ಜಾತ್ರೆಗೆ ಬಂದ್ರೆ ಸಾಲ ಮಾಡದೆ ನಿಮಗೆ ಬೇಕಾದಷ್ಟು ತುಪ್ಪ ತಿನ್ನಬಹುದು.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖೇಡ್ ಗ್ರಾಮದಲ್ಲಿ ನಡೆಯುತ್ತಿರುವ ಪವಾಡ ಪುರುಷ ಶ್ರೀ ರೇವಪ್ಪಯ ಸ್ವಾಮಿಯ ಜಾತ್ರೆಯ ವಿಶೇಷತೆ ಇದು. ಈ ಜಾತ್ರೆಗೆ ಬಂದ ಭಕ್ತಾಧಿಗಳು ತಮಗೆ ಬೇಕಾದಷ್ಟು ತುಪ್ಪ ಹೋಳಿಗೆ ಸವಿಯಬಹುದಾಗಿದೆ. 20 ವರ್ಷಗಳಿಂದ ಈ ಜಾತ್ರೆ ಮಾಡಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಜೇಷ್ಠಮಾಸದಲ್ಲಿ ಈ ಜಾತ್ರೆ ಮಾಡುತ್ತಾರೆ.

    ಜೇಷ್ಠ ಮಾಸದಲ್ಲಿ ಈ ಜಾತ್ರೆ ಮಾಡಲು ಹಲವು ಕಾರಣಗಳು ಇವೆ. ಜೇಷ್ಠ ಮಾಸದಲ್ಲಿ ವಾತ, ಪಿತ್ತ, ಕಫಾ ಹೆಚ್ಚಾಗಿ ಬರುತ್ತವೆ. ಆದ್ದರಿಂದ ತುಪ್ಪ ಮತ್ತು ಹೋಳಿಗೆಯಲ್ಲಿರುವ ಬೆಲ್ಲ, ಬೇಳೆಯಲ್ಲಿ ಹಲವು ಔಷಧಿಯ ಗುಣಗಳು ಇವೆ. ಇದರಿಂದ ಈ ಪ್ರಸಾದ ಸವಿದರೆ ಎಲ್ಲಾ ರೋಗಗಳು ವಾಸಿಯಾಗುತ್ತವೆ ಎಂದು ರಾಜೇಶ್ವರ್ ಶಿವಚಾರ್ಯ ಸ್ವಾಮಿಗಳು ಹೇಳಿದ್ದಾರೆ.

    ಪವಾಡ ಪುರುಷ ರೇವಪ್ಪಯ್ಯ ಸ್ವಾಮಿಯ ಜಾತ್ರೆಗೆ ಬರುವ ಭಕ್ತಾಧಿಗಳ ಪ್ರಸಾದಕ್ಕಾಗಿ 7 ಕ್ವಿಂಟಲ್ ಬೇಳೆ, 7 ಕ್ವಿಂಟಲ್ ಬೆಲ್ಲ, 14 ಕ್ವಿಂಟಲ್ ಅಕ್ಕಿ, 15 ಕೆಜಿಯ 45 ತುಪ್ಪದ ಡಬ್ಬಗಳು ಬಳಕೆ ಮಾಡುತ್ತಾರೆ. ಈ ಜಾತ್ರೆಯ ಮೊತ್ತೊಂದು ವಿಶೇಷತೆಯಂದರೆ ಪವಾಡ ಪುರುಷ ರೇವಪ್ಪಯ್ಯ ನೀರಿನಿಂದ ತುಪ್ಪ ಮಾಡಿದ್ದು, ಅದನ್ನೆ ಭಕ್ತಾಧಿಗಳಿಗೆ ಪ್ರಸಾದವಾಗಿ ನೀಡಲಾಗುತ್ತದೆ. ರೇವಪ್ಪಯ್ಯ ಸ್ವಾಮಿಗಳು ಹಲವು ವರ್ಷಗಳ ಕಾಲ ಈ ಸ್ಥಳದಲ್ಲಿ ತಪಸ್ಸು ಮಾಡಿ ಹಲವಾರು ಪವಾಡಗಳನ್ನು ಸೃಷ್ಠಿ ಮಾಡಿದ್ದಾರೆ.

    ಶ್ರೀ ರೇವಪ್ಪಯ್ಯ ಸ್ವಾಮಿ ಜಾತ್ರೆ ನೋಡಲು ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ರಾಜ್ಯದ ವಿವಿದ ಮೂಲೆಗಳಿಂದ ಸಾವಿರಾರು ಜನ ಬರುತ್ತಾರೆ. ಈ ಪವಾಡ ಪುರುಷನ ಜಾತ್ರೆ ನೋಡಿ ಕಣ್ಣತುಂಬಿಕೊಳ್ಳುವುದು ಒಂದು ಕಡೆಯಾದರೆ, ಮೊತ್ತೊಂದು ಕಡೆ ತಮಗೆ ಇಷ್ಟವಾದ ಹೋಳಿಗೆ ತುಪ್ಪ ಸವಿದು ದೇವರ ಕೃಪೆಗೆ ಭಕ್ತರು ಪಾತ್ರರಾಗುತ್ತಾರೆ.

  • ಹೈದರಾಬಾದ್‍ನಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆ

    ಹೈದರಾಬಾದ್‍ನಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆ

    ಬೀದರ್: ಹೈದರಾಬಾದ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಾಪತ್ತೆಯಾಗಿದ್ದ ಆರು ದಿನದ ಹೆಣ್ಣು ಮಗು ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಪತ್ತೆಯಾಗಿದೆ.

    ಹೈದರಾಬಾದ್ ನ ಸುಲ್ತಾನ್ ಬಜಾರ್ ನಲ್ಲಿರುವ ಕೊಟ್ಟಿ ಆಸ್ಪತ್ರೆಯಲ್ಲಿ ಸಬಾವತ್ ನಾರಿ ಹಾಗೂ ವಿಜಯ ಎಂಬ ದಂಪತಿಗಳ ಮಗುವನ್ನ ಸೋಮವಾರ ಅಪಹರಣ ಮಾಡಲಾಗಿತ್ತು. ಈ ಬಗ್ಗೆ ಹೈದರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನವಜಾತ ಶಿಶುವಿನ ದಂಪತಿಗಳು ದೂರು ದಾಖಲಿಸಿದ್ದರು. ಮಗುವಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆ ಕಂದನನ್ನು ತೆಗೆದುಕೊಂಡು ಹೋಗಿದ್ದು ತನಿಖೆಯಲ್ಲಿ ತಿಳಿದು ಬಂದಿತ್ತು.

    ಆರೋಪಿ ಮಹಿಳೆ ಕಂದನನ್ನು ಕರೆದುಕೊಂಡು ಬೀದರ್ ನತ್ತ ಪ್ರಯಾಣ ಬೆಳೆಸಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈಗಾಗಲೇ ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಸಿಕ್ಕ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ನ್ನ ಆಧರಿಸಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಮಂಗಳವಾರ ಆರೋಪಿ ಮಗುವನ್ನು ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನ ಪರಿಶೀಲಿಸದಾಗ ಹೈದ್ರಾಬಾದ್ ನಲ್ಲಿ ನಾಪತ್ತೆಯಾಗಿದ್ದ ಕಂದ ಎನ್ನವುದನ್ನು ಖಚಿತ ಪಡೆಸಿಕೊಂಡಿದ್ದಾರೆ.

    ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ತೆಲಂಗಾಣ ಹಾಗೂ ಕರ್ನಾಟಕ ಪೊಲೀಸರು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ. ಬಳಿಕ ತೆಲಂಗಾಣ ಹಾಗೂ ರಾಜ್ಯ ಪೊಲೀಸರು ಜಂಟಿ ಸುದ್ದಿಗೋಷ್ಠಿ ಮಾಡಿದ್ದು ಎಸ್ಪಿ ದೇವರಾಜ್ ಮಾತನಾಡಿ ಮಗುವನ್ನ ಕದ್ದ ಆರೋಪಿಯ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಆರೋಪಿ ಯಾವ ಕಾರಣಕ್ಕಾಗಿ ಮಗು ಕದ್ದಿದ್ದಾಳೆ ಎನ್ನುವುದು ತಿಳಿಯಬೇಕಿದೆ. ಸದ್ಯ ತನಿಖೆ ಮುಂದುವರೆಸಲಾಗಿದೆ ತಿಳಿಸಿದರು.

  • ಅಡ್ಮಿಷನ್ ಬಳಿಕ ಬೀಗ ಹಾಕಿದ ಶಾಲೆ: ವಿದ್ಯಾರ್ಥಿಗಳ ಪರದಾಟ!

    ಅಡ್ಮಿಷನ್ ಬಳಿಕ ಬೀಗ ಹಾಕಿದ ಶಾಲೆ: ವಿದ್ಯಾರ್ಥಿಗಳ ಪರದಾಟ!

    ಬೀದರ್: ನಗರದ ಮಹಾದೇವ್ ಕಾಲೋನಿಯಲ್ಲಿ ಖಾಸಗಿ ಶಾಲೆಯೊಂದು ಅಡ್ಮಿಷನ್ ಮಾಡಿಕೊಂಡ ಬಳಿಕ ಬೀಗ ಹಾಕಿದ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗಿದ್ದಾರೆ.

    ಶಿಕ್ಷಣ ಹಕ್ಕು ಕಾಯ್ದೆಯಡಿ ಅನುದಾನವಿಲ್ಲದ ಖಾಸಗಿ ಶಾಲೆಯಲ್ಲಿ ಸೇರಿರೋ ಮಕ್ಕಳ ಸ್ಥಿತಿ ಡೋಲಾಯಮಾನವಾಗಿದೆ. ನಗರದ ಮಹಾದೇವ್ ಕಾಲೋನಿಯಲ್ಲಿನ ಶೆಡ್ ನಲ್ಲಿ ನಡೆಸುತ್ತಿದ್ದ ಭಾರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಬೀಗ ಬಿದ್ದಿದೆ. ಶಾಲೆಗೆ ಅನುದಾನವಿಲ್ಲದ ಕಾರಣ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚಿದ್ದಾರೆ.

    ಶೈಕ್ಷಣಿಕ ವರ್ಷದಲ್ಲಿ ಆರ್ ಟಿಇ ವತಿಯಿಂದ 10 ಹಾಗೂ ಇತರೆ 60 ವಿದ್ಯಾರ್ಥಿಗಳು ಭಾರತಿ ಶಾಲೆಗೆ ದಾಖಲಾಗಿದ್ದರು. ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಅಡ್ಮಿಷನ್ ನಂತರ ಅನುದಾನ ಸಿಕ್ಕಿಲ್ಲವೆಂದು ಶಾಲೆಗೆ ಏಕಾಏಕಿ ಬೀಗ ಹಾಕಿದೆ.

    ಶಾಲೆಗೆ ದಿಢೀರನೇ ಬೀಗ ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಂಗಾಲಾಗಿದ್ದಾರೆ. ಇದರಿಂದಾಗಿ ಮಕ್ಕಳ ಟಿಸಿ ಹಾಗೂ ಮಾಕ್ಸ್ ಕಾರ್ಡ್ ಸಿಗದೇ ಬೇರೆ ಶಾಲೆಗೆ ಅಡ್ಮಿಷನ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಪೋಷಕರು ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.