Tag: bidar

  • ಬೀದರ್‌ನಲ್ಲಿ ಯುವ ಉದ್ಯಮಿ ಕಿಡ್ನಾಪ್

    ಬೀದರ್‌ನಲ್ಲಿ ಯುವ ಉದ್ಯಮಿ ಕಿಡ್ನಾಪ್

    ಬೀದರ್: ನಗರದ ಯುವ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ನಗರದ ನಿವಾಸಿ ಅಭಿಷೇಕ್ ಇನಾನಿ ಅಪಹರಣವಾದ ಯುವ ಉದ್ಯಮಿ. ಅಭಿಷೇಕ್ ಅವರು ಬುಧವಾರ ಸಂಜೆ ಕಂಪನಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಕೋಳಾರದ ಕೈಗಾರಿಕಾ ಪ್ರದೇಶದಲ್ಲಿರುವ ಆಂಜನೇಯ ದೇವಸ್ಥಾನ ಸಮೀಪದ ನಿರ್ಜನ ಪ್ರದೇಶದಲ್ಲಿ ಅಪಹರಣ ಮಾಡಿದ್ದಾರೆ.

    ಅಭಿಷೇಕ್ ಅವರು ಕೋಳಾರ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ದಾಲ್ ಮಿಲ್ ಫ್ಯಾಕ್ಟರಿ ನಡೆಸುತ್ತಿದ್ದರು. ಅಪಹರಣಕ್ಕೂ ಎರಡು ದಿನ ಮುಂಚೆ ಅಭಿಷೇಕ್ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅಭಿಷೇಕ್ ಅವರು ಬೀದರ್ ಜಿಲ್ಲಾ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ದುಷ್ಕರ್ಮಿಗಳು ಹಣದಾಸೆಗೆ ಅಭಿಷೇಕ್ ಅವರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬುಧವಾರ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

  • ಮುಗಿಯದ ಬ್ರಿಮ್ಸ್ ಸಮಸ್ಯೆ – ಕುಡಿಯುವ ನೀರಿನ ಘಟಕಗಳಿದ್ದರೂ ಪ್ರಯೋಜನಕ್ಕೆ ಬರಲ್ಲ

    ಮುಗಿಯದ ಬ್ರಿಮ್ಸ್ ಸಮಸ್ಯೆ – ಕುಡಿಯುವ ನೀರಿನ ಘಟಕಗಳಿದ್ದರೂ ಪ್ರಯೋಜನಕ್ಕೆ ಬರಲ್ಲ

    ಬೀದರ್: ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಬ್ರಿಮ್ಸ್) ಗ್ರಹಣ ಬಡಿದಿದ್ದು, ಬ್ರಿಮ್ಸ್ ನ ಸಮಸ್ಯೆಗಳಿಗೆ ಯಾವಾಗ ಮುಕ್ತಿ ಸಿಗುತ್ತದೆ ಎನ್ನುವ ಹಾಗಾಗಿದೆ. ಇಲ್ಲಿ ಕುಡಿಯುವ ನೀರಿನ ಘಟಕಗಳಿದ್ದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ.

    ಬ್ರಿಮ್ಸ್ ನಲ್ಲಿ ಇರುವ ಸಮಸ್ಯೆಗಳಿಗೆ ಮುಗಿಯದ ಕಥೆಯಾಗಿ ಬಿಟ್ಟಿದೆ. ಒಂದು ಕಡೆ ಸರಿಯಾದ ವೈದ್ಯಕೀಯ ವ್ಯವಸ್ಥೆ ಸಿಗದೇ ಜನ ಪರದಾಡುತ್ತಿದ್ದರೆ, ಇನ್ನೊಂದೆಡೆ ಹೆಸರಿಗೆ ಮಾತ್ರ ಕುಡಿಯುವ ನೀರಿನ ಘಟಕಗಳಿವೆ. ಆದ್ರೆ ಅದರಲ್ಲಿ ನೀರೇ ಬರುತ್ತಿಲ್ಲ.

    ಹೌದು. ಬ್ರಿಮ್ಸ್ ನಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದ್ರೆ 1 ವರ್ಷದಿಂದ ಯಾವುದು ಕೆಲಸ ಮಾಡುತ್ತಿಲ್ಲ. ಈ ವೈದ್ಯಕೀಯ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಮಾಡ್ತಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಶುದ್ಧ ನೀರಿನ ಘಟಕಗಳನ್ನು ಹಾಕಲಾಗಿತ್ತು. ಆದರೆ ವರ್ಷದ ನಂತರ ಈ ಘಟಕಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಸರ್ಕಾರ ಅಭಿವೃದ್ಧಿಗೆ ನೀಡಿದ ಹಣ ಎಲ್ಲಿ ಹೋಗುತ್ತಿದೆ? ಬ್ರಿಮ್ಸ್ ಸ್ಥಿತಿ ಯಾವಾಗ ಬದಲಾಗುತ್ತದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

    ಇತ್ತೀಚಿಗಷ್ಟೇ ಮಳೆಗೆ ವರ್ಷದ ಹಿಂದೆಯಷ್ಟೇ ನಿರ್ಮಿಸಿದ್ದ ಬ್ರಿಮ್ಸ್ ನ ಮುಂಭಾಗ ಕುಸಿದು ಬಿದ್ದಿತ್ತು. ಇದಾದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಬ್ರಿಮ್ಸ್ ಗೆ ಭೇಟಿ ನೀಡಿದ್ದರು. ಈ ವೇಳೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸರ್ಕಾರ ಒದಗಿಸಿದ್ದ ಬೆಡ್‍ಗಳನ್ನು ಕೋಣೆಯೊಂದರಲ್ಲಿ ಕೂಡಿಟ್ಟು ಧೂಳು ಹಿಡಿಸಿದ್ದ ವಿಚಾರ ಬಯಲಾಗಿತ್ತು.

    ಬ್ರಿಮ್ಸ್ ದುಸ್ಥಿತಿಯನ್ನು ಕಂಡು ಬೇಸತ್ತ ಸ್ಥಳೀಯರೊಬ್ಬರು ಸಚಿವರ ಭೇಟಿ ವೇಳೆ ಇಂಥ ಸಂಸ್ಥೆ ಯಾಕ್ ಬೇಕು? ಬೀಗ ಹಾಕ್ಕೊಂಡು ಹೋಗಿ ಅಂತ ಆರೋಗ್ಯ ಸಚಿವರ ಕೈಗೆ ಬೀಗ ಕೊಟ್ಟು ಅಸಮಾಧಾನವನ್ನು ಹೊರ ಹಾಕಿದ್ದರು.

  • 100 ಇದ್ದ ಸದಸ್ಯರನ್ನು 104 ಮಾಡ್ಲಿಕ್ಕೆ ಆಗಿಲ್ಲ, 15 ಜನ ಶಾಸಕರನ್ನು ಆಪರೇಷನ್ ಮಾಡ್ತಾರಾ – ಐವಾನ್

    100 ಇದ್ದ ಸದಸ್ಯರನ್ನು 104 ಮಾಡ್ಲಿಕ್ಕೆ ಆಗಿಲ್ಲ, 15 ಜನ ಶಾಸಕರನ್ನು ಆಪರೇಷನ್ ಮಾಡ್ತಾರಾ – ಐವಾನ್

    ಬೀದರ್: ಬಿಬಿಎಂಪಿಯ 100 ಮಂದಿ ಬಿಜೆಪಿ ಸದಸ್ಯರ ಬಲವನ್ನು 104 ಮಾಡಲಿಕ್ಕೆ ಆಗಿಲ್ಲ. ಇನ್ನು 15 ಜನ ಶಾಸಕರನ್ನು ಬಿಜೆಪಿಯವರು ಆಪರೇಷನ್ ಮಾಡತ್ತಾರಾ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಪ್ರಶ್ನೆ ಮಾಡಿದ್ದಾರೆ.

    ಒಂದು ವರ್ಷದಿಂದ ಎಷ್ಟು ವಿಕೆಟ್ ಹೋಗಿದೆ ಎಂದು ಪ್ರಶ್ನಿಸಿದ ಅವರು ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಜನರಲ್ಲಿ ಒಳ್ಳೆಯ ಪ್ರತಿಕ್ರಿಯೆ ಇದೆ. ಆದರೆ ಬಿಜೆಪಿಯವರು ಹಣ ವ್ಯರ್ಥ ಎಂದು ಹೇಳುತ್ತಾರೆ. ಹಾಗಾದರೆ ಮೋದಿ ಪ್ರಪಂಚ ಸುತ್ತುವುದರಿಂದ ದೇಶಕ್ಕೆ ಒಳ್ಳೆಯು ಆಗಿದ್ಯಾ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು

    ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸಮಯ ಬಂದಾಗ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದರು.

  • ನೀರು ತರಲು ರೈಲಿನಿಂದ ಕೆಳಗಿಳಿದಿದ್ದ ವ್ಯಕ್ತಿ ಸಾವು

    ನೀರು ತರಲು ರೈಲಿನಿಂದ ಕೆಳಗಿಳಿದಿದ್ದ ವ್ಯಕ್ತಿ ಸಾವು

    – ಪತಿಯ ಶವ ಸಾಗಿಸಲು ಪತ್ನಿಯ ಪರದಾಟ

    ಬೆಂಗಳೂರು: ನೀರು ತರಲು ರೈಲಿನಿಂದ ಕೆಳಗಿಳಿದಿದ್ದ ಪತಿ ಶವವಾಗಿ ಪತ್ತೆಯಾದ ಘಟನೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಪವನ್ ವಿಜಯ್‍ಕುಮಾರ್ ಪಾಟೀಲ್ (32) ಸಾವನ್ನಪ್ಪಿದ ದುರ್ದೈವಿ. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಭಾನುವಾರವೇ ಘಟನೆ ನಡೆದಿದ್ದು, ಪವನ್ ಅವರು ಮೃತಪಟ್ಟಿರುವುದು ಪತ್ನಿಗೆ ಮಂಗಳವಾರ ಗೊತ್ತಾಗಿದೆ.

    ಆಗಿದ್ದೇನು?
    ಬೀದರ್ ಜಿಲ್ಲೆಯ ಪವನ್ ವಿಜಯ್‍ಕುಮಾರ್ ಪಾಟೀಲ್ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲು ಪವನ್ ಪತ್ನಿ ಹಾಗೂ ಮಗುವಿನ ಜೊತೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಪಡೆದು ಭಾನುವಾರ ಬೀದರ್ ಗೆ ರೈಲಿನಲ್ಲಿ ಮರಳುತ್ತಿದ್ದರು. ಈ ವೇಳೆ ಯಶವಂತಪುರ ನಿಲ್ದಾಣದಲ್ಲಿ ರಾತ್ರಿ ರೈಲು ನಿಂತಿದ್ದಾಗ ಪವನ್ ನೀರು ತರಲು ಹೋಗಿದ್ದರು. ರೈಲು ಆರಂಭವಾದರೂ ಪತಿ ಬಾದರಿದ್ದಾಗ ಗಾಬರಿಗೊಂಡ ಪವನ್ ಅವರ ಪತ್ನಿ ಮಗುವನ್ನು ಎತ್ತಿಕೊಂಡು ರೈಲು ಇಳಿದಿದ್ದರು.

    ರೈಲು ಹತ್ತಲು ಹೋಗಿ ಪವನ್ ಕೆಳಗೆ ಬಿದ್ದಿದ್ದರು. ಅಷ್ಟೇ ಅಲ್ಲದೆ ಅವರ ಅಂಗಿ ರೈಲಿಗೆ ಸಿಕ್ಕಿಕೊಂಡಿದ್ದರಿಂದ ಮೃತದೇಹ ರೈಲು ನಿಲ್ದಾಣದಿಂದ ದೂರದಲ್ಲಿ ಬಿದ್ದಿತ್ತು. ಆದರೆ ಪವನ್ ಅವರ ಪತ್ನಿ ಮಾತ್ರ ಪತಿಗಾಗಿ ಹುಡುಕಾಟ ನಡೆಸಿದ್ದರು. ಭಾನುವಾರ ರಾತ್ರಿ, ಸೋಮವಾರ ಹಾಗೂ ಮಂಗಳವಾರ ಪತಿಯನ್ನು ಹುಡುಕಿದ್ದಾರೆ. ಆದರೆ ಪತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಯಶವಂತಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ವೇಳೆ ಪವನ್ ಅವರ ಪತ್ನಿ ಪತಿಯ ಫೋಟೋ ತೋರಿಸಿದ್ದಾರೆ. ಫೋಟೋವನ್ನು ನೋಡಿದ ಪೊಲೀಸರು ಪವನ್ ವಿಜಯ್‍ಕುಮಾರ್ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

    ಪತಿಯ ಸಾವಿನ ಸುದ್ದಿ ಕೇಳಿ ಪವನ್ ಅವರ ಪತ್ನಿ ಆಘಾತಕ್ಕೆ ಒಳಾಗದರು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಪತಿ ಈಗ ಹೆಣವಾಗಿದ್ದಾರೆ ಎಂದು ಕಣ್ಣೀರು ಹಾಕಿದರು. ಮಗುವನ್ನು ಎತ್ತಿಕೊಂಡು ಪತಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಪವನ್ ಪತ್ನಿ ಪರದಾಟುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

  • ನಿವೃತ್ತಿ ಹಣಕ್ಕಾಗಿ ಮೊಮ್ಮಗನಿಂದಲೇ ಚಾಕು ಇರಿದು ಅಜ್ಜಿಯ ಬರ್ಬರ ಕೊಲೆ

    ನಿವೃತ್ತಿ ಹಣಕ್ಕಾಗಿ ಮೊಮ್ಮಗನಿಂದಲೇ ಚಾಕು ಇರಿದು ಅಜ್ಜಿಯ ಬರ್ಬರ ಕೊಲೆ

    ಬೀದರ್: ನಿವೃತ್ತಿ ಹಣಕ್ಕಾಗಿ ಸ್ವತಃ ಮೊಮ್ಮಗನೇ ತನ್ನ ಅಜ್ಜಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಕೊಲೆಯಾದ ಅಜ್ಜಿಯನ್ನು ಲೀಲಾವತಿ (62) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಮೊಮ್ಮಗ ಆಕಾಶ್ (21) ನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕಣಜಿ ಬಿಸಿಎಂ ಹಾಸ್ಟೆಲಿನಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಸುತ್ತಿದ್ದ ಲೀಲಾವತಿ ಕೆಲ ದಿನಗಳ ಹಿಂದೆ ನಿವೃತ್ತಿ ಹೊಂದಿದ್ದು, ನಿವೃತ್ತಿಯ ನಂತರ 6 ಲಕ್ಷ ರೂ. ಹಣ ಬಂದಿತ್ತು. ಈ ಹಣದ ಮೇಲೆ ಕಣ್ಣಿಟ್ಟಿದ್ದ ಮೊಮ್ಮಗ ಆಕಾಶ್ ನನಗೆ ಅ ಹಣ ಕೊಡು ಎಂದು ಹಲವು ತಿಂಗಳಿನಿಂದ ಅಜ್ಜಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ಹಣ ಕೊಡಲು ನಿರಾಕರಿಸಿದ ಅಜ್ಜಿಯನ್ನು ಆಕಾಶ್ ಇಂದು ಕೊಲೆ ಮಾಡಿದ್ದಾನೆ.

    ಈ ಸಂಬಂಧ ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಕೆಮಿಕಲ್ ರಿಯಾಕ್ಟರ್ ಸ್ಫೋಟ: ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

    ಕೆಮಿಕಲ್ ರಿಯಾಕ್ಟರ್ ಸ್ಫೋಟ: ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

    ಬೀದರ್: ಕೆಮಿಕಲ್ ರಿಯಾಕ್ಟರ್ ಸ್ಫೋಟಗೊಂಡು ಭಾರೀ ಅಗ್ನಿ ಅವಘಡ ಸಂಭವಿಸಿ, ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಬೀದರ್‌ನ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಚಂದ್ರಾಲ್ಯಾಬ್ ಎಂಬ ಕೆಮಿಕಲ್ ಫ್ಯಾಕ್ಟರಿಯ ದೇವರಾಜ್ ಗಂಭೀರವಾಗಿ ಗಾಯಗೊಂಡ ಕಾರ್ಮಿಕ. ಕೆಮಿಕಲ್ ರಿಯಾಕ್ಟರ್ ಪಕ್ಕದಲ್ಲಿಯೇ ದೇವರಾಜ್ ನಿಂತಿದ್ದರು. ಹೀಗಾಗಿ ದೇವರಾಜ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳವು ಮೂರು ವಾಹನಗಳ ಸಹಾಯದಿಂದ ಬೆಂಕಿ ನಂದಿಸಿದ್ದಾರೆ. ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಬೀದರ್‌ನ ಕೊಳಾರ ಕೈಗಾರಿಕಾ ಪ್ರದೇಶದ ಸೃಜನ ಫಾರ್ಮಾ ಲಿಮಿಟೆಡ್‍ನಲ್ಲಿ ಇದೇ ವರ್ಷ ಜನವರಿ 17ರಂದು ರಾತ್ರಿ ಇಂತಹದ್ದೇ ಘಟನೆ ನಡೆದಿತ್ತು. ಈ ವೇಳೆ 10 ಜನರು ಗಾಯಗೊಂಡಿದ್ದರು.

  • ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ: ಸಿಎಂ

    ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ: ಸಿಎಂ

    ಬೀದರ್: ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ ಎಂದು ಗ್ರಾಮ ವಾಸ್ತವ್ಯದ ಬಗ್ಗೆ ಕೇಳಿಬಂದ ವಿಪಕ್ಷಗಳ ಟೀಕೆಗಳಿಗೆ ಸಿಎಂ ಅವರು ಕುವೆಂಪು ಅವರ ಸ್ಲೋಗನ್ ಮೂಲಕ ಟಾಂಗ್ ನೀಡಿದರು.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಯಾದಗಿರಿ ಜಿಲ್ಲೆಯ ಚಂಡರಕಿ ಶಾಲೆಯಲ್ಲಿ ಮಲಗಿದ್ದಾಗ ಕುವೆಂಪುರವರ ಸ್ಲೋಗನ್ ಓದಿದ್ದೆ. ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ ಎಂದು ಬರೆದಿತ್ತು. ಹೀಗಾಗಿ ಟೀಕೆ ಮಾಡುವವರಿಗೆ ಉತ್ತರ ನೀಡದಿರುವುದೇ ಸೂಕ್ತ ಎಂಬುದು ನನ್ನ ಅಭಿಪ್ರಾಯ ಎನ್ನುವ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದರು.

    ಗ್ರಾಮವಾಸ್ತವ್ಯದ ಕ್ರೆಡಿಟ್ ಜೆಡಿಎಸ್‍ಗೆ ಬರುತ್ತಿದೆ ಎನ್ನುವುದು ತಪ್ಪು. ಇದು ಸಮ್ಮಿಶ್ರ ಸರ್ಕಾರದ ಕ್ರೆಡಿಟಾಗಿದ್ದು ಗುರುವಾರದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲೆಯ ಮೂವರು ಮಂತ್ರಿಗಳು ಬಂದಿದ್ದರು. ಹಾಗಾಗಿ ಒಟ್ಟಾರೆ ಇದು ಸಮ್ಮಿಶ್ರ ಸರ್ಕಾರದ ಕ್ರೆಡಿಟ್ ಎಂದು ಸಿಎಂ ಸ್ಪಷ್ಟನೆ ನೀಡಿದರು.

    ವಿದೇಶ ಪ್ರವಾಸ ವಿಚಾರ ಮಾತನಾಡಿದ ಸಿಎಂ, ಆದಿಚುಂಚನಗಿರಿಯ ಶ್ರೀಗಳು ನ್ಯೂಜೆರ್ಸಿಯಲ್ಲಿ ಮಠವೊಂದನ್ನ ಕಟ್ಟಿಸುತ್ತಿದ್ದಾರೆ. ಅದರ ಶಂಕುಸ್ಥಾಪನೆಗಾಗಿ ನಾನು ಬರಲೇಬೇಕೆಂದು ಶ್ರೀಗಳು ಒತ್ತಾಯ ಮಾಡುತ್ತಿದ್ದಾರೆ. ನಾನೇನೂ ಸರ್ಕಾರದ ವೆಚ್ಚದಲ್ಲಿ ಹೋಗುತ್ತಿಲ್ಲ, ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

  • ಇಂದು ರಾತ್ರಿ ಅಮೆರಿಕಾಗೆ ಸಿಎಂ- ನನ್ನ ದುಡ್ಡಲ್ಲಿ ಫಾರಿನ್ ಟ್ರಿಪ್ ಎಂದ ಮುಖ್ಯಮಂತ್ರಿ

    ಇಂದು ರಾತ್ರಿ ಅಮೆರಿಕಾಗೆ ಸಿಎಂ- ನನ್ನ ದುಡ್ಡಲ್ಲಿ ಫಾರಿನ್ ಟ್ರಿಪ್ ಎಂದ ಮುಖ್ಯಮಂತ್ರಿ

    ಬೀದರ್: ಮುಖ್ಯಮಂತ್ರಿ ಇಂದು ರಾತ್ರಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆದಿಚುಂಚನಗಿರಿ ಮಠದ ಶಂಕುಸ್ಥಾಪನೆಗಾಗಿ ಸಿಎಂ 9 ದಿನ ಪ್ರವಾಸ ಕೈಗೊಳ್ಳುತ್ತಿದ್ದು, ಹೀಗಾಗಿ ಸಿಎಂ ಅವರು ಸ್ವಲ್ಪ ದಿನ ರಾಜ್ಯದಲ್ಲಿ ಇರಲ್ಲ.

    ಈ ಕುರಿತು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಸಿಎಂ, ಆದಿಚುಂಚನಗಿರಿಯ ಶ್ರೀಗಳು ನ್ಯೂಜೆರ್ಸಿಯಲ್ಲಿ ಮಠವೊಂದನ್ನ ಕಟ್ಟಿಸುತ್ತಿದ್ದಾರೆ. ಅದರ ಶಂಕು ಸ್ಥಾಪನೆಗಾಗಿ ನಾನು ಬರಲೇಬೇಕೆಂದು ಶ್ರೀಗಳು ಒತ್ತಾಯ ಮಾಡುತ್ತಿದ್ದಾರೆ. ನಾನೇನೂ ಸರ್ಕಾರದ ವೆಚ್ಚದಲ್ಲಿ ಹೋಗುತ್ತಿಲ್ಲ. ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಬೀದರ್‍ನ ಬಸವಕಲ್ಯಾಣದ ಉಜಳಂಬದಲ್ಲಿ ಮುಖ್ಯಮಂತ್ರಿಗಳು ತಮ್ಮ ಗ್ರಾಮ ವಾಸ್ತವ್ಯ ಮುಗಿಸಿದ್ದಾರೆ. ಗುರುವಾರ ರಾತ್ರಿ 9 ಗಂಟೆವರೆಗೂ ಜನತಾ ದರ್ಶನ ನಡೆಸಿದ ಸಿಎಂ, 4 ಸಾವಿರಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಿದರು. ಇಂದು ಬೀದರ್ ವಾಯುನೆಲೆಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣಿಸಲಿದ್ದು, ಮಧ್ಯಾಹ್ನ 12.30ಕ್ಕೆ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.

    ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಾಧಕ-ಬಾಧಕ ಕುರಿತು ವರದಿ ನೀಡಲು ಸಮಿತಿ ರಚಿಸುವ ಸಾಧ್ಯತೆ ಇದೆ. ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ. ಈ ನಡ್ವೆ ಇಂದು ರಾತ್ರಿ ಸಿಎಂ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.

  • ಗ್ರಾಮ ವಾಸ್ತವ್ಯದ ವೇಳೆ ಮೂರ್ಛೆ ತಪ್ಪಿ ಬಿದ್ದ ಎಎಸ್‍ಐ

    ಗ್ರಾಮ ವಾಸ್ತವ್ಯದ ವೇಳೆ ಮೂರ್ಛೆ ತಪ್ಪಿ ಬಿದ್ದ ಎಎಸ್‍ಐ

    ಬೀದರ್: ಬಿಸಿಲು ತಾಳಲಾರದೇ ಎಎಸ್‍ಐ ಒಬ್ಬರು ಮೂರ್ಛೆ ತಪ್ಪಿ ಬಿದ್ದ ಘಟನೆ ಗುರುವಾರ ಸಿಎಂ ಗ್ರಾಮ ವಾಸ್ತವ್ಯ ಹೂಡಿರುವ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ.

    ಗುರುಮಠಕಲ್ ಠಾಣೆಯ ಎಎಸ್‍ಐ ರಾಜೇಂದ್ರ ಅವರನ್ನು ಉಜಳಂಬ ಗ್ರಾಮದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ರಾಜೇಂದ್ರ ಅವರು ಉಜಳಂಬ ಗ್ರಾಮದ ಹೊರವಲಯದಲ್ಲಿ ವಾಹನ ಪಾರ್ಕಿಂಗ್ ಹಾಗೂ ತಪಾಸಣೆ ನಡೆಸುತ್ತಿದ್ದರು. ಹೀಗಾಗಿ ಭಾರೀ ಬಿಸಿಲು ಇದ್ದರಿಂದ ಅಸ್ವಸ್ಥಗೊಂಡ ಅವರು ಮೂರ್ಛೆ ತಪ್ಪಿ ಬಿದ್ದಿದ್ದರು. ತಕ್ಷಣವೇ ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ.

    ರಾಜೇಂದ್ರ ಅವರಿಗೆ ಮಧುಮೇಹ ಹಾಗೂ ಬಿಪಿ (ರಕ್ತದೊತ್ತಡ) ಸಮಸ್ಯೆ ಇತ್ತು. ಬೆಳಗ್ಗೆಯಿಂದ ಅವರು ಬಿಸಿಲಿನಲ್ಲಿಯೇ ಕೆಲಸ ಮಾಡಿದ್ದರಿಂದ ಆಯಾಸಗೊಂಡು ಬಿದ್ದಿದ್ದಾರೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ರಾಜೇಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಉಜಳಂಬ ಗ್ರಾಮ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರಿಗೆ ಅದ್ಧೂರಿಗಾಗಿ ಸ್ವಾಗತ ಕೋರಲು ಆನೆಯನ್ನು ಕರೆತರಲಾಗಿತ್ತು. ಆದರೆ ಆನೆ ಹಾಕಿದ ಹೂವಿನ ಹಾರ ಎರಡು ಬಾರಿಯೂ ಸಿಎಂ ಕೊರಳಿಗೆ ಬೀಳಲಿಲ್ಲ.

    ಸಿಎಂ ಅವರಿಗೆ ಹಾರ ಹಾಕಿಸಲೆಂದೇ ಜಿಲ್ಲಾಡಳಿತ ಕಲಬುರಗಿಯ ಕಡಗಂಚಿ ಮಠದ ಆನೆಯನ್ನು ಗ್ರಾಮಕ್ಕೆ ಕರೆತಂದಿತ್ತು. ಇಂದು ಸಿಎಂ ಗ್ರಾಮಕ್ಕೆ ಹೋದಾಗ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಿಎಂ ಸ್ವಾಗತ ಕೋರಲು ಆನೆಯಿಂದ ಹೂವಿನ ಹಾರ ಹಾಕಿಸಲು ಗ್ರಾಮಸ್ಥರು ಮುಂದಾದರು. ಈ ಸಂದರ್ಭದಲ್ಲಿ ಆನೆ ಹಾರ ಹಾಕಿದ್ದು, ಈ ಹಾರ ಸಿಎಂ ಕೊರಳಿಗೆ ಬೀಳದೇ ನೆಲಕ್ಕೆ ಬಿದ್ದಿದೆ.

    https://www.youtube.com/watch?v=Vz3pwT5YEWE

    ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಆನೆಯಿಂದ ಹಾರ ಹಾಕಿಸುವಂತೆ ಅಲ್ಲಿದ್ದ ಜನ ಆಗ್ರಹಿಸಿದ್ದಾರೆ. ಆಗ ಒಲ್ಲದ ಮನಸ್ಸಿನಿಂದ ಸಿಎಂ ಹಾರ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆಗಲೂ ಆನೆ ಹಾಕಿದ ಹಾರ ಸಿಎಂ ಕೊರಳಿಗೆ ಬೀಳದೇ ಎತ್ತಿನ ಬಂಡಿಯ ಮೇಲೆ ಬಿದ್ದಿದೆ.

  • ಆನೆ ಎರಡು ಬಾರಿ ಹಾಕಿದರೂ ನಾಡದೊರೆಯ ಕೊರಳಿಗೆ ಬೀಳಲಿಲ್ಲ ಹಾರ

    ಆನೆ ಎರಡು ಬಾರಿ ಹಾಕಿದರೂ ನಾಡದೊರೆಯ ಕೊರಳಿಗೆ ಬೀಳಲಿಲ್ಲ ಹಾರ

    ಬೀದರ್: ಇಂದು ಸಿಎಂ ಜಿಲ್ಲೆಯನ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮ ವಾಸ್ತವ್ಯ ಹೂಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಅವರಿಗೆ ಅದ್ಧೂರಿಗಾಗಿ ಸ್ವಾಗತ ಕೋರಲು ಆನೆಯನ್ನು ಕರೆತರಲಾಗಿತ್ತು. ಆದರೆ ಆನೆ ಹಾಕಿದ ಹೂವಿನ ಹಾರ ಎರಡು ಬಾರಿಯೂ ಸಿಎಂ ಕೊರಳಿಗೆ ಬೀಳಲಿಲ್ಲ.

    ಸಿಎಂ ಅವರಿಗೆ ಹಾರ ಹಾಕಿಸಲೆಂದೇ ಜಿಲ್ಲಾಡಳಿತ ಕಲಬುರಗಿಯ ಕಡಗಂಚಿ ಮಠದ ಆನೆಯನ್ನು ಉಜಳಂಬ ಗ್ರಾಮಕ್ಕೆ ಕರೆತಂದಿದ್ದರು. ಇಂದು ಸಿಎಂ ಗ್ರಾಮಕ್ಕೆ ಹೋದಾಗ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಿಎಂ ಸ್ವಾಗತ ಕೋರಲು ಆನೆಯಿಂದ ಹೂವಿನ ಹಾರ ಹಾಕಿಸಲು ಗ್ರಾಮಸ್ಥರು ಮುಂದಾದರು. ಈ ಸಂದರ್ಭದಲ್ಲಿ ಆನೆ ಹಾರ ಹಾಕಿದ್ದು, ಈ ಹಾರ ಸಿಎಂ ಕೊರಳಿಗೆ ಬೀಳದೇ ನೆಲಕ್ಕೆ ಬಿದ್ದಿದೆ.


    ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಆನೆಯಿಂದ ಹಾರ ಹಾಕಿಸುವಂತೆ ಅಲ್ಲಿದ್ದ ಜನ ಆಗ್ರಹಿಸಿದ್ದಾರೆ. ಆಗ ಒಲ್ಲದ ಮನಸ್ಸಿನಿಂದ ಸಿಎಂ ಹಾರ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆಗಲೂ ಆನೆ ಹಾಕಿದ ಹಾರ ಸಿಎಂ ಕೊರಳಿಗೆ ಬೀಳದೇ ಎತ್ತಿನ ಬಂಡಿಯ ಮೇಲೆ ಬಿದ್ದಿದೆ.

    https://www.youtube.com/watch?v=Vz3pwT5YEWE