Tag: bidar

  • ಸತ್ಯ ಹೊರ ಬರುತ್ತೆ, ಜಾರ್ಜ್‍ಗೆ ಜೈಲೇಗತಿ: ಜಾವಡೇಕರ್

    ಸತ್ಯ ಹೊರ ಬರುತ್ತೆ, ಜಾರ್ಜ್‍ಗೆ ಜೈಲೇಗತಿ: ಜಾವಡೇಕರ್

    ಬೀದರ್: ಡಿವೈಎಸ್‍ಪಿ ಗಣಪತಿ ಕೇಸ್ ನಲ್ಲಿ ಈ ಬಾರಿ ಸಚಿವ ಕೆಜೆ ಜಾರ್ಜ್‍ರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ, ಸತ್ಯ ಹೊರ ಬರುತ್ತೆ. ಕೆಜೆ ಜಾರ್ಜ್‍ಗೆ ಜೈಲೇಗತಿ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

    ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಮಾಣಿಕ್‍ನಗರ ಪ್ರವಾಸಿ ಮಂದಿರದಲ್ಲಿ ಕೋರ ಕಮೀಟಿ ಸಭೆ ಮಾಡಿ ನಂತರ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸಂಸದ ಭಗವತ್ ಖೂಬಾ, ಔರಾದ್ ಶಾಸಕ ಪ್ರಭು ಚವ್ಹಾಣ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಜಾವಡೇಕರ್ ಪಾಪ ಮಾಡೋದು ರಾಜಕಾರಣಿಗಳು, ಸಾಯೋದು ಅಧಿಕಾರಿ. ರಾಜಕಾರಣಿಗಳು ಏನೇ ಮಾಡಿದರು ಕ್ಲೀನ್ ಚಿಟ್ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಅಹಿಂದ ಹೆಸರನ್ನು ಹೇಳುತ್ತಾರೆ ಆದರೆ, ಅಹಿಂದಕ್ಕಾಗಿ ನೀವು ಏನು ಮಾಡಿದ್ದೀರಿ? ಜನತೆಗಾಗಿ ಏನು ಮಾಡಿದ್ದೀರಿ? ಕರ್ನಾಟಕ ರಾಜ್ಯಕ್ಕಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ನಿಮ್ಮ ಸರ್ಕಾರದಲ್ಲಿ ನೀವು ಏನೂ ಮಾಡಿಲ್ಲ. ಬರೀ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆಯಾದ ಡೈರಿಗಳು ಸಿಕ್ಕಿವೆ. ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯವಲ್ಲ ನಮ್ಮದು ಮೋದಿಭಾಗ್ಯ ಎಂದು ಕೇಂದ್ರ ಸರ್ಕಾರವನ್ನು ಹೊಗಳಿದರು.

    ಭಾರತದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತಿದ್ದು ಜೀವನ ಉದ್ದಕ್ಕೂ ವಿದೇಶ ಪ್ರವಾಸ ಮಾಡಿಕೊಂಡೇ ಇರಲಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಬಗ್ಗೆ ವ್ಯಂಗವಾಡಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಗುತ್ತಿಗೆದಾರ ಮಂತ್ರಿ ಎಂದು ಪ್ರಸಿದ್ಧಿ ಪಡೆದಿದ್ದು, ತಾವೇ ಸ್ವತಃ ಗುತ್ತಿಗೆ ತೆಗೆದುಕೊಳ್ಳುತ್ತಾರೆ ಎಂದು ಜಾವಡೇಕರ್ ಆರೋಪ ಮಾಡಿದರು.

     

  • ಪೋಷಕರ ಸಾವಿನ ನೋವಲ್ಲೂ ಕಷ್ಟಪಟ್ಟು ಓದಿ MBBS ಸೀಟ್ ಪಡೆದ ಯುವಕ- ಹಾಸ್ಟೆಲ್ ಫೀಸ್‍ಗೆ ಬೇಕಿದೆ ಸಹಾಯ

    ಪೋಷಕರ ಸಾವಿನ ನೋವಲ್ಲೂ ಕಷ್ಟಪಟ್ಟು ಓದಿ MBBS ಸೀಟ್ ಪಡೆದ ಯುವಕ- ಹಾಸ್ಟೆಲ್ ಫೀಸ್‍ಗೆ ಬೇಕಿದೆ ಸಹಾಯ

    ಬೀದರ್: ಗ್ರಾಮೀಣ ಪ್ರತಿಭೆಗಳು ಮನಸ್ಸು ಮಾಡಿದರೆ ಏನು ಬೇಕಾದ್ರು ಸಾಧನೆ ಮಾಡಿ ತೋರಿಸುತ್ತಾರೆ ಎಂಬುದಕ್ಕೆ ಇದು ಒಂದು ನೈಜ ಉದಾಹರಣೆಯಾಗಿದೆ.

    ಒಂದು ವರ್ಷ ಹಿಂದೆ ಪೋಷಕರನ್ನು ಕಳೆದುಕೊಂಡು, ಒಂದು ಹೊತ್ತಿನ ಊಟ, ಮಲಗಲು ಸ್ವಲ್ಪ ಜಾಗಕ್ಕೂ ಕಷ್ಟ ಪಟ್ಟು, ಜೊತೆಗೆ ವಿಕಲಚೇತನ ತಮ್ಮನ ಮಾಸಾಶನದಲ್ಲಿ ಮನೆ ಬಾಡಿಗೆ ಕಟ್ಟಿಕೊಂಡು ವ್ಯಾಸಂಗ ಮಾಡುತ್ತಿರುವ ಯುವ ಪ್ರತಿಭೆಯೇ ಸತೀಶ್. ಬೀದರ್ ನಗರದ ಶಾಹಗಾಂವ್ ನಿವಾಸಿಯಾದ ಸತೀಶ್ ಈ ವರ್ಷದ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ 2360 ನೇ ರ್ಯಾಂಕ್ ಗಳಿಸುವ ಮುಲಕ ಬೀದರ್ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಪ್ರವೇಶ ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ.

    ಒಂದು ವರ್ಷದ ಹಿಂದೆ ಪೋಷಕರನ್ನು ಕಳೆದುಕೊಂಡರೂ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾರೆ. ದಾನಿಗಳ ಸಾಹಾಯದಿಂದ 30 ಸಾವಿರ ರೂ. ಶುಲ್ಕವನ್ನು ಕಾಲೇಜಿಗೆ ಕಟ್ಟಿದ್ದಾರೆ. ಆದರೆ ಹಾಸ್ಟೆಲ್ ಶುಲ್ಕ 20 ಸಾವಿರ ಕಟ್ಟಬೇಕಿದೆ. ಆದ್ದರಿಂದ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಕೇಳಿಕೊಂಡು ಬಂದಿದ್ದಾರೆ.

    ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಹೀರೆಮಠ ಎಂಬ ಶಿಕ್ಷಕರು ಕೈಲಾದಷ್ಟು ಸಹಾಯ ಮಾಡುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ ಹಾಸ್ಟೆಲ್ ಶುಲ್ಕ, ಪುಸ್ತಕ ಮತ್ತು ವೈದ್ಯಕೀಯ ಉಪಕರಣಗಳಿಗೆ ಈಗ ಸಹಾಯ ಬೇಕಾಗಿದೆ. ಒಂದೆಡೆ ವಿಧಿಯ ಅಟ್ಟಹಾಸ, ಮತ್ತೊಂದೆಡೆ ಕಡುಬಡತನ ಇದ್ದರೂ ಹಗಲು ರಾತ್ರಿ ಎನ್ನದೇ ಓದಿ ಸಾಧನೆ ಮಾಡುತ್ತಿರುವ ಈ ಗ್ರಾಮೀಣ ಪ್ರತಿಭೆಗೆ ಸಹಾಯ ಮಾಡಿ ಎಂದು ಹೀರೆಮಠ ಅವರು ಕೇಳಿಕೊಂಡಿದ್ದಾರೆ.

    ಪೋಷಕರ ಸಾವಿನ ದುಃಖದ ನಡುವೆಯೂ ಎದೆಗುಂದದೆ ಓದಿ ಮೇಡಿಕಲ್ ಸೀಟು ಪಡೆದಿರುವ ಸತೀಶ್ ಅದೆಷ್ಟೋ ಉಳ್ಳವರ ಮಕ್ಕಳಿಗೆ ಮಾದರಿಯಾಗಿದ್ದಾರೆ. ಈಗ ಇದೊಂದು ಸಹಾಯ ಸಿಕ್ಕರೆ ಈ ಗ್ರಾಮೀಣ ಪ್ರತಿಭೆಯ ಜೀವನದಲ್ಲಿ ಬೆಳಕು ಮೂಡುತ್ತದೆ ಎಂಬುದಷ್ಟೆ ನಮ್ಮ ಕಳಕಳಿಯಾಗಿದೆ.

    https://youtu.be/vaTBQAqQ_ic

  • ಶೌಚಾಲಯಕ್ಕೆ ಇಟ್ಟಿಗೆ ಉಚಿತ, ಗ್ರಾಮಕ್ಕೆಲ್ಲಾ ಸಿಮೆಂಟ್ ರೋಡ್ ಮಾಡಿಸಿದ ಸೇವಕ ಬೀದರ್‍ನ ಓಂ ರೆಡ್ಡಿ

    ಶೌಚಾಲಯಕ್ಕೆ ಇಟ್ಟಿಗೆ ಉಚಿತ, ಗ್ರಾಮಕ್ಕೆಲ್ಲಾ ಸಿಮೆಂಟ್ ರೋಡ್ ಮಾಡಿಸಿದ ಸೇವಕ ಬೀದರ್‍ನ ಓಂ ರೆಡ್ಡಿ

    ಬೀದರ್: ಊರಿನಲ್ಲಿ ಶೌಚಾಲಯ ಕಟ್ಟಿಸಲು ಇಟ್ಟಿಗೆ ಉಚಿತ, ಗ್ರಾಮಕ್ಕೆಲ್ಲಾ ಸಿಮೆಂಟ್ ರೋಡ್ ಹಾಗೂ ಬಡವರಿಗೆ ಉಚಿತ ಔಷಧಿ ವಿತರಣೆ ಮಾಡೋ ಓಂ ರೆಡ್ಡಿ ಶಹಬಾಬ್ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಈ ಕಲಿಯುಗದ ಕರ್ಣ ಓಂ ರೆಡ್ಡಿ ಶಹಬಾಬ್ ಬೀದರ್‍ನ ಔರಾದ್ ತಾಲೂಕಿನ ಸಿರ್ಸಿ ಗ್ರಾಮದವರು. ಇವರು ಮೆಡಿಕಲ್ ಶಾಪ್ ಬ್ಯುಸಿನೆಸ್ ಮಾಡುತ್ತಾರೆ. ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದರೂ ಅವು ನೆಲ ಕಚ್ಚುತ್ತವೆ. ಆದರೆ ರೆಡ್ಡಿ ಅವರು ಒಮ್ಮೆ ಕೈ ಹಾಕಿದ ಕೆಲಸವನ್ನು ಮುಗಿಸದೇ ಬಿಡುವುದಿಲ್ಲ.

    ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ಇವರು ತನ್ನ ಸ್ವಂತ ದುಡ್ಡಲ್ಲೇ ಮಾಡುತ್ತಿದ್ದಾರೆ. ಮಹಿಳೆಯರ ಸಂಕಷ್ಟ ನೋಡಲಾಗದೇ ತಮ್ಮ ಗ್ರಾಮವನ್ನು ಬಯಲು ಮುಕ್ತ ಶೌಚಾಲಯ ಮಾಡಲು ಹೊರಟಿದ್ದಾರೆ. ಅಷ್ಟೆ ಅಲ್ಲದೆ ರಸ್ತೆ ಮಾಡಿಕೊಟ್ಟಿದ್ದಾರೆ. ಬಡವರಿಗೆ ಉಚಿತ ಔಷಧಿ ವಿತರಣೆ ಮಾಡುತ್ತಿದ್ದಾರೆ.

    ತಾವು ಹುಟ್ಟಿದ ಗ್ರಾಮದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಉಚಿತವಾಗಿ ಸಿಮೆಂಟ್ ಇಟ್ಟಿಗೆಗಳನ್ನು ನೀಡಿದ್ದಾರೆ. ಆರು ಸಿಸಿ ರಸ್ತೆಗಳನ್ನು ಮಾಡಿಸಿದ್ದಾರೆ. ಅಷ್ಟೆ ಅಲ್ಲದೆ ಬಡವರಿಗೆ ಉಚಿತ ಔಷಧಿ ವಿತರಣೆ ಮಾಡುತ್ತಾರೆ. ತಮ್ಮ ಗ್ರಾಮದಲ್ಲಿ ಮಾತ್ರವಲ್ಲದೆ ಪಕ್ಕದ ಬೈರನಹಳ್ಳಿ ಗ್ರಾಮದಲ್ಲಿ 25 ಶೌಚಾಲಯಗಳು ಮತ್ತು 2 ಸಿಸಿ ರಸ್ತೆಗಳನ್ನು ಮಾಡಿಸಿದ್ದಾರೆ. ಸರ್ಕಾರದಿಂದ ಅನುದಾನ ಪಡೆದು ಸಾಕಷ್ಟು ಕೆಲಸ ಕೂಡಾ ಮಾಡಿಸಿದ್ದಾರೆ.

    ಈ ಕ್ಷೇತ್ರದ ಶಾಸಕ ಮಾನ್ಯ ಅಶೋಕ್ ಖೇಣಿ ಸಾಹೇಬ್ರು ಕ್ಷೇತ್ರವನ್ನು ಸಿಂಗಾಪುರ ಮಾಡುವುದಾಗಿ ಹೇಳಿ ಹೋದವರು ಮತ್ತೆ ಈ ಕಡೆ ಬಂದಿಲ್ಲ. ಆದರೆ ನಮ್ಮ ರೆಡ್ಡಿ ಸಾಹೇಬರು ಯಾವ ಅಪೇಕ್ಷೆ ಇಲ್ಲದೇ ನಮ್ಮ ಸೇವೆ ಮಾಡ್ತಿದ್ದಾರೆ. ಇದರಿಂದ ನಾವೆಲ್ಲರೂ ಖುಷಿ ಪಡುತ್ತಿದ್ದೇವೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ.

    https://www.youtube.com/watch?v=st5gv-oLHrk

  • 22 ಕೋಟಿ ರೂ. ಸರ್ಕಾರಿ ಆಸ್ತಿಯನ್ನು ಕೇವಲ 28 ಸಾವಿರ ರೂ.ಗೆ ಮಾರಿದ್ರು!

    22 ಕೋಟಿ ರೂ. ಸರ್ಕಾರಿ ಆಸ್ತಿಯನ್ನು ಕೇವಲ 28 ಸಾವಿರ ರೂ.ಗೆ ಮಾರಿದ್ರು!

    ಬೀದರ್: 22 ಕೋಟಿ ರೂ. ಬೆಲೆಬಾಳುವ ಸರ್ಕಾರದ ಆಸ್ತಿಯನ್ನು ಕೇವಲ 28 ಸಾವಿರ ರೂ.ಗಳಿಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವಂಥ ಅಕ್ರಮ ಬೀದರ್ ನಗರಸಭೆಯಲ್ಲಿ ನಡೆದಿದೆ.

    ನಗರಸಭೆ ಆಯುಕ್ತ ಕೆ. ನರಸಿಂಹಮೂರ್ತಿ ಹಾಗೂ ಹಿರಿಯ ಉಪ ನೋಂದಣಾಧಿಕಾರಿ ಎಸ್.ಎಂ ಹೆಮೇಶ್ ಕೆಲ ಖಾಸಗಿ ವ್ಯಕ್ತಿಗಳಿಗೆ ಕೋಟಿ ಕೋಟಿ ಬೆಲೆಬಾಳುವ ಆಸ್ತಿಯನ್ನು ಕೇವಲ 28 ಸಾವಿರಕ್ಕೆ ಮಾರಾಟ ಮಾಡಿದ್ದಾರೆಂದು ಡಿಯುಡಿಸಿ ಅಧಿಕಾರಿ ನಗರದ ಮಾರ್ಕೆಟ್ ಠಾಣೆಯಲ್ಲಿ ಕ್ರೀಮಿನಲ್ ಕೇಸ್ ದಾಖಲಿಸಿದ್ದರು. ಇದೀಗ ಪೊಲೀಸರು ನಗರಸಭೆ ಆಯುಕ್ತರು ಹಾಗೂ ಉಪನೊಂದಣಾಧಿಕಾರಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಇನ್ನು ಜಿಲ್ಲಾಧಿಕಾರಿಗಳಿಗೆ ಪೌರಾಡಳಿತ ಸಚಿವರು ಪತ್ರ ಬರೆದಿದ್ದು, ತನಿಖೆ ಕೈಗೊಂಡು ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಡಿಯುಡಿಸಿ ಅಧಿಕಾರಿಗಳ ದೂರಿನ ಮೇರೆಗೆ ಮುನ್ಸಿಪಲ್ ಕಾಯ್ದೆ ಮತ್ತು ಕ್ರೀಮಿನಲ್ ಕೇಸ್ ದಾಖಲು ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪಬ್ಲಿಕ್ ಟಿವಿಗೆ ಎಸ್‍ಪಿ ದೇವರಾಜ್ ಹೇಳಿದ್ದಾರೆ.

  • ಶೇ.80ರಷ್ಟು ಬಾಲಕಿಯರು ಇರೋ ಬೀದರ್ ಶಾಲೆಗೆ ಬೇಕಿದೆ ಶೌಚಾಲಯ!

    ಶೇ.80ರಷ್ಟು ಬಾಲಕಿಯರು ಇರೋ ಬೀದರ್ ಶಾಲೆಗೆ ಬೇಕಿದೆ ಶೌಚಾಲಯ!

    ಬೀದರ್: ಒಂದು ಕಡೆ ಶೇ.25 ರಷ್ಟು ಶೌಚಾಲಯ ಕಟ್ಟಿ ಹಾಗೇ ಬಿಟ್ಟಿರುವ ಗುತ್ತಿಗೆದಾರರು. ಮೊತ್ತೊಂದು ಕಡೆ ರಸ್ತೆಯಲ್ಲೆ ಮುಜುಗರದಿಂದ ಶೌಚ ಮಾಡಬೇಕಾದ ಕರ್ಮ ಈ ವಿದ್ಯಾರ್ಥಿಗಳದ್ದು.

    ಹೌದು. ಬೀದರ್ ತಾಲೂಕಿನ ಸಿಕಿಂದ್ರಾಪೂರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಪ್ರತಿನಿತ್ಯ ಅನುಭವಿಸುತ್ತಿರೋ ಸಂಕಟದ ಕಥೆ ಇದು. ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿ ಇರಬೇಕು ಎಂಬ ನಿಯಮವನ್ನು ಇಲ್ಲಿ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ.

    ಒಟ್ಟು 270 ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿ ಶೇ.8ಂ ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಶೌಚಾಲಯವಿಲ್ಲದ ಮುಜುಗರದಿಂದ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು 9 ಶಿಕ್ಷಕರ ಪೈಕಿ 7 ಜನ ಶಿಕ್ಷಕಿಯರು ಇದ್ದಾರೆ ಅವರಿಗೂ ಶೌಚಾಲಯದ್ದೇ ಸಮಸ್ಯೆ.

    ನೈಸ್ ರಸ್ತೆಯ ಮೇಲೆ ನೈಸ್ ಆಗಿ ಓಡಾಡಿಕೊಂಡಿರೋ ಕ್ಷೇತ್ರದ ಶಾಸಕರಾದ ಖೇಣಿ ಸಾಹೇಬ್ರಿಗೆ ಮಕ್ಕಳ ಈ ಸಮಸ್ಯೆ ಕಾಣದಿರುವುದು ನಾಚಿಕೆಗೇಡಿನ ಸಂಗತಿ. ಇತ್ತ ಶಿಕ್ಷಣ ಇಲಾಖೆಯು ಕೂಡ ಜಾಣ ಕುರುಡು ತೋರುತ್ತಿದ್ದು ವಿದ್ಯಾರ್ಥಿಗಳ ಸಂಕಟಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರೋದೆ ಕಡಿಮೆ ಎಂಬ ಆರೋಪವಿದೆ. ಆದ್ರೆ ಇಲ್ಲಿ ಮಕ್ಕಳು ಬರುತ್ತಿದ್ದಾರೆ. ಕನಿಷ್ಟ ಮೂಲಭೂತ ಸೌಲಭ್ಯ ಇಲ್ಲ. ಈ ರೀತಿ ಮೂಲಭೂತ ಸೌಕರ್ಯ ನೀಡದೆ ಶಾಲೆಯ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುತ್ತಿರುವುದು ಎಷ್ಟು ಸರಿ?

    ಪ್ರತಿದಿನ ವಿದ್ಯಾರ್ಥಿನಿಯರು ಶೌಚಕ್ಕಾಗಿ ಬಯಲಿಗೆ ಹೋಗುತ್ತಿದ್ದು ಮುಜುಗರದಿಂದ ಶಾಲೆ ಬಿಡುವ ಹಂತಕ್ಕೆ ತಲುಪಿದ್ದಾರೆ. ಇನ್ನು ಮುಂದೆಯಾದರೂ ಈ ಬೆಳಕು ಕಾರ್ಯಕ್ರಮದ ಮೂಲಕ ನಮ್ಮ ಸಮಸ್ಯೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ವಿದ್ಯಾರ್ಥಿಗಳು.

     

  • ಸಿಇಓ ಎದುರಲ್ಲೇ ಗ್ರಾ.ಪಂ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಜಿ.ಪಂ ಸದಸ್ಯ!

    ಸಿಇಓ ಎದುರಲ್ಲೇ ಗ್ರಾ.ಪಂ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಜಿ.ಪಂ ಸದಸ್ಯ!

    ಬೀದರ್: ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರು ಸಿಇಓ ಎದುರಲ್ಲೇ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಸವಕಲ್ಯಾಣ ತಾಲೂಕಿನ ಹುಲಸೂರ ಜಿಪಂ ಸದಸ್ಯ ಸುಧೀರ್ ಕಾಡಾದಿ ರೋಷಾವೇಶದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ದೆಟನೆ ಎಂಬವರ ಮುಖಕ್ಕೆ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಶನಿವಾರ ಪಂಚಾಯತಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ಡಾ. ಆರ್ ಸೇಲ್ವಮಣಿ ಎದುರಲ್ಲೇ ಈ ಘಟನೆ ನಡೆದಿದ್ದು, ಸಿಇಓ ಸಾಹೇಬ್ರು ಜನ ಪ್ರತಿನಿಧಿಗಳ ರಂಪಾಟ ನೋಡಿ ದಂಗಾಗಿ ಹೊಗಿದ್ದರು.

    ಕುಡಿಯುವ ನೀರಿನ ಯೋಜನೆಯಡಿಯಲ್ಲಿ 32 ಲಕ್ಷದ ಕಾಮಗಾರಿ ಪೂರ್ಣಗೊಂಡಿದ್ದು ಅದರ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಗ್ರಾಪಂ ಅಧ್ಯಕ್ಷರು ಮನವಿ ಮಾಡಿದ್ದರು. ಆದ್ರೆ ಇದಕ್ಕೆ ವಿರೋಧಿಸಿದ ಜಿ.ಪಂ ಸದಸ್ಯ ಸುಧೀರ್ ಕಾಡಾದಿ ಮತ್ತು ಅವರ ಟೀಂ ಅಶ್ಲೀಲವಾಗಿ ಮಾತನಾಡುತ್ತಾ ಗ್ರಾಪಂ ಅಧ್ಯಕ್ಷರ ಮತ್ತು ಮುಖಂಡರ ಮೇಲೆ ಹಲ್ಲೆಗೆ ಮುಂದಾದರು ಎನ್ನಲಾಗಿದೆ.

    ಈ ಕುರಿತು ಹುಲಸೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/jPubjLqjr0A

  • ಎರಡು ಲಕ್ಷಕ್ಕೆ ಮಗಳನ್ನೇ ಮಾರಲು ಮುಂದಾದ ತಾಯಿ

    ಎರಡು ಲಕ್ಷಕ್ಕೆ ಮಗಳನ್ನೇ ಮಾರಲು ಮುಂದಾದ ತಾಯಿ

    ಬೀದರ್: ತಾಯಿಯೊಬ್ಬಳು ತಾನು ಹೆತ್ತ ಮಗಳನ್ನೇ ಎರಡು ಲಕ್ಷ ರೂ.ಗೆ ಮಾರಲು ಹೊರಟಿದ್ದ ಘಟನೆ ಬೀದರ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅಪ್ರಾಪ್ತ ಮಗಳನ್ನು ತಾಯಿ ತನ್ನ ಪ್ರಿಯಕರನಾದ ಖಾಜಾಮಿಯಾ ಎಂಬಾತನ ಜೊತೆ ಸೇರಿ ಮಾರಟ ಮಾಡಲು ಸಂಚು ರೂಪಿಸಿದ್ದಳು. ಮಗಳನ್ನು ರಾಜಸ್ಥಾನದ ರಾಜ್‍ಕೋಟ್ ನ ವ್ಯಕ್ತಿಗೆ 2 ಲಕ್ಷ ರೂ. ಒಪ್ಪಂದದ ಮೇರೆಗೆ ಗುಜ್ಜರ್ ಕೀ ಶಾದಿ ಮಾಡಲು ನಿರ್ಧರಿಸಿದ್ದಳು.

    ಇದನ್ನೂ ಓದಿ: ಹಣಕ್ಕೆ ಹೆಣ್ಣು: ಗುಜ್ಜರ್ ಕೀ ಶಾದಿಯನ್ನು ನಿಲ್ಲಿಸಿದ ಅಧಿಕಾರಿಗಳು

    ಆದ್ರೆ ನೆರೆ ಮನೆಯವರ ಸಹಾಯದಿಂದಾಗಿ ಬಾಲಕಿ ತಪ್ಪಿಸಿಕೊಂಡು ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ಬಾಲಕಿಯ ತಾಯಿ ಮತ್ತು ಆಕೆಯ ಪ್ರಿಯಕರ ಖಾಜಾಮಿಯಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

     

  • ಲಿಂಗಾಯತ ಜಾತಿಯನ್ನು ಸ್ವತಂತ್ರ ಧರ್ಮ ಮಾಡಲು ಆಗ್ರಹಿಸಿ ಬೀದರ್‍ನಲ್ಲಿ ಬೃಹತ್ ಮೆರವಣಿಗೆ

    ಲಿಂಗಾಯತ ಜಾತಿಯನ್ನು ಸ್ವತಂತ್ರ ಧರ್ಮ ಮಾಡಲು ಆಗ್ರಹಿಸಿ ಬೀದರ್‍ನಲ್ಲಿ ಬೃಹತ್ ಮೆರವಣಿಗೆ

    ಬೀದರ್: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಆಗ್ರಹಿಸಿ ಬೀದರ್ ನಲ್ಲಿ ಲಿಂಗಾಯತ ಧರ್ಮ ಸಮನ್ವಯ ಸಮಿತಿಯಿಂದ ಬುಧವಾರ ಬೃಹತ್ ಮೆರವಣಿಗೆ ನಡೆಯಿತು. ಸರ್ಕಾರದ ಮೇಲೆ ಒತ್ತಡ ಹೇರಲು ನಡೆದ ಈ ಮೆರವಣಿಗೆಯಲ್ಲಿ ಲಿಂಗಾಯತ ಸಮುದಾಯ ಭಾಗವಹಿಸುವ ಮೂಲಕ ಹೋರಾಟಕ್ಕೆ ಸಾಕ್ಷಿಯಾದರು.

    ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಲಿಂಗಾಯತ ಸಮುದಾಯ ತಮ್ಮ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದರು. ಗುರುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಲಿಂಗಾಯತ ಸಮುದಾಯ ನೇಹರು ಕ್ರೀಡಾಂಗಣದಿಂದ ವಿವಿಧ ವೃತ್ತಗಳ ಮೂಲಕ ಮೌನ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ರು. ಲಿಂಗಾಯತ ಜಾತಿಯನ್ನು ಸ್ವತಂತ್ರ ಧರ್ಮ ಮಾಡಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಬಸವಣ್ಣ ಕರ್ಮಭೂಮಿಯಿಂದ ಎಚ್ಚರಿಕೆ ನೀಡಿದ್ರು.

    ಇಂದು ಕೂಡಾ ಎಲ್ಲಾ ಲಿಂಗಾಯತ ಸಮನ್ವಯ ಸಮಿತಿ ಸದಸ್ಯರು ಒಂದೆಡೆ ಸೇರಿ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಾವಿ, ಲಾತೂರ್, ಬೆಂಗಳೂರು, ದೆಹಲಿಯಲ್ಲಿ ಸಮಾವೇಶಗಳನ್ನು ಮಾಡಲಿದ್ದಾರೆ ಎನ್ನಲಾಗಿದೆ.

  • ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಕ್ಕೆ ದರ್ಗಾ ಸಮಿತಿಯಿಂದ ಬಹಿಷ್ಕಾರ

    ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಕ್ಕೆ ದರ್ಗಾ ಸಮಿತಿಯಿಂದ ಬಹಿಷ್ಕಾರ

    ಬೀದರ್: ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ ದರ್ಗಾ ಸಮಿತಿ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಹಳ್ಳಿಖೇಡ್ ಬಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ನೀಡುವುದನ್ನು ಬಿಟ್ಟು ಅತ್ಯಾಚಾರಕ್ಕೆ ಒಳಗಾದ ಕುಟುಂಬಕ್ಕೆ ಬಹಿಷ್ಕಾರ ಹಾಕಿ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಲಾಗಿದೆ.

    ಅತ್ಯಾಚಾರದ ವಿರುದ್ಧ ಪೊಲೀಸರಿಗೆ ನೀಡಿದ ದೂರು ವಾಪಸ್ ತೆಗೆದುಕೊಳ್ಳಿ ಎಂದು ಮೌಲಾಲಿ ಮತ್ತು ದರ್ಗಾ ಸಮಿತಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಕುಟುಂಬಕ್ಕೆ ಒತ್ತಡ ಹೇರಿದ್ದು, 20 ದಿನಗಳಿಂದ ಕುಟುಂಬವನ್ನ ಗ್ರಾಮದಿಂದ ಬಹಿಷ್ಕಾರ ಹಾಕಿದೆ.

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಬಳಿಕ ಆರೋಪಿ ಅಕ್ರಮ್ ಶಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಬೆದರಿಕೆಯೊಡ್ಡಿದ್ದ. ನಂತರ ಪೋಷಕರು ಮದುವೆಗೆ ಬಾರದೆ ಇದ್ದರೂ ದರ್ಗಾ ಸಮಿತಿಯಲ್ಲಿ ಮದುವೆ ಮಾಡಲಾಗಿತ್ತು. ನಂತರ ಆರೋಪಿ ಅಕ್ರಮ್ ಶಾ ಬಾಲಕಿಯನ್ನು ಗರ್ಭಿಣಿ ಮಾಡಿ, ನಿನಗೆ ಅಡುಗೆ ಬರಲ್ಲ ಎಂದು ಹೇಳಿ ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

    4 ತಿಂಗಳ ಹಿಂದೆ ಈ ಕುರಿತು ಹಳ್ಳಿಖೇಡ್ ಬಿ ಪೊಲೀಸ್ ಠಾಣೆಯಲ್ಲಿ ಅಕ್ರಮ್ ಹಾಗೂ ಮದುವೆಗೆ ಸಹಕರಿಸಿದವರ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಅಕ್ರಮ್‍ನನ್ನು ಮಾತ್ರ ಬಂಧಿಸಿದ್ದು ಇನ್ನುಳಿದ ಆರೋಪಿಗಳನ್ನು ಬಂಧಿಸಿಲ್ಲ. ಅಲ್ಲದೆ ಮೌಲಾಲಿ ಸುಲೇಮಾನ್ ಹಮ್ಮದ್ ಬಾಲಕಿಯ ಕುಟುಂಬಸ್ಥರಿಂದ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.

    ಹೀಗಾಗಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಇದೆಯೋ ಅಥವಾ ಸತ್ತಿದೆಯೋ ಎಂದು ಅಖಿಲ ಕರ್ನಾಟಕ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆಎಸ್ ಲಕ್ಷ್ಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

     

  • ಬಚ್ಚಾ ರಾಹುಲ್ ಗಾಂಧಿಯಿಂದ ಮೋದಿ ಕಲಿಯುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ

    ಬಚ್ಚಾ ರಾಹುಲ್ ಗಾಂಧಿಯಿಂದ ಮೋದಿ ಕಲಿಯುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ

    ಬೀದರ್: ದೇಶದ ಅತ್ಯಂತ ದುರ್ಬಲ ಪ್ರಧಾನಿ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿಗೆ ಬೀದರ್‍ನಲ್ಲಿ ಶೋಭಾ ಕರಂದ್ಲಾಜೆ ಬಚ್ಚಾ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಬಚ್ಚಾ ರಾಹುಲ್ ಗಾಂಧಿಯಿಂದ ಪ್ರಧಾನಿ ನರೇಂದ್ರ ಮೋದಿ ಕಲಿಯುವ ಅಗತ್ಯವಿಲ್ಲ. ರಾಹುಲ್ ಗಾಂಧಿ ಅವರಿಗೆ ನಾನು ಉತ್ತರ ಹೇಳುವುದಿಲ್ಲ. ಮೊದಲು ಅವರು ಪಕ್ಷದಲ್ಲಿರುವ ಹುಳುಕನ್ನು ಸರಿಪಡಿಸಲಿ ಎಂದು ಅವರು ಹೇಳಿದರು.

    ಮೋದಿ ಅವರಿಂದಾಗಿ ಭಾರತವನ್ನು ಈಗ ಇಡೀ ವಿಶ್ವವೇ ನೋಡುತ್ತಿದೆ. ಮೊದಲ ಬಾರಿಗೆ ಇಸ್ರೇಲ್‍ಗೆ ಹೋಗುವ ಎದೆಗಾರಿಕೆಯನ್ನು ಮೋದಿ ತೋರಿಸಿದ್ದಾರೆ. ಮೋದಿ ಅವರ ಸಾಧನೆ ಏನು ಎನ್ನುವ ಪ್ರಶ್ನೆಗೆ ವಿಶ್ವವೇ ಉತ್ತರಿಸುತ್ತದೆ ಎಂದು ಹೇಳಿದರು.

    ನೈಸ್ ವಿರುದ್ಧ ಗರಂ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಟೋಲ್ ದರ ಹೆಚ್ಚಳ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಭಾಗದಲ್ಲಿ ಇನ್ನು ದುಬಾರಿ ಶುಲ್ಕದ ವಸೂಲಿ ಬಗ್ಗೆ ಹೋರಾಟಗಳು ನಡೆಯುತ್ತಿವೆ. ಯಶವಂತಪುರ ಶಾಸಕಿಯಾಗಿದ್ದಾಗ ನಾನು ಪ್ರತಿಭಟನೆ ನಡೆಸಿದ್ದೇನೆ. ಕೂಡಲೇ ಟೋಲ್ ದರ ಕಡಿಮೆಯಾಗಬೇಕು. ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.