Tag: Bicycle

  • 30 ನಿಮಿಷದಲ್ಲಿ 33 ಹಂತ, 768 ಮೆಟ್ಟಿಲು ಏರಿದ ಯುವಕ – ವೀಡಿಯೋ ವೈರಲ್

    30 ನಿಮಿಷದಲ್ಲಿ 33 ಹಂತ, 768 ಮೆಟ್ಟಿಲು ಏರಿದ ಯುವಕ – ವೀಡಿಯೋ ವೈರಲ್

    ಕ್ಯಾನ್ಬೆರಾ: ಒಬ್ಬ ಮನುಷ್ಯ 33 ಹಂತವನ್ನು ಏರಲು ಎಷ್ಟು ಸಮಯ ಬೇಕಾಗುತ್ತದೆ? ಅದರಲ್ಲೂ ಪಾದವನ್ನು ನೆಲಕ್ಕೆ ತಾಕಿಸದೆ ಬೈಸಿಕಲ್ ನಲ್ಲಿ ಮೆಟ್ಟಿಲು ಏರಲು ಸಾಧ್ಯವೇ ಇಲ್ಲ. ಆದರೆ ಫ್ರೆಂಚ್ ಮೂಲದ ಸೈಕಲಿಷ್ಟ್ ಮತ್ತು ಮೌಂಡೆನ್ ಬೈಕರ್ ಯುರೆಲಿಯನ್ ಫಾಂಟೆನಾಯ್ ಎಂಬವನು ಕೇವಲ 30 ನಿಮಿಷಗಳಲ್ಲಿ 768 ಮಟ್ಟಿಲುಗಳನ್ನು ಬೈಸಿಕಲ್ ಮೂಲಕ 33ನೇ ಹಂತ ಏರಿದ್ದಾನೆ. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

     

    ಪ್ಯೂಟಾಕ್ಸ್ ಟವರ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಗಗನವನ್ನೇ ಚುಂಬಿಸುವಂತಿರುವ ಟ್ರಿನಿಟಿ ಟವರ್ ಕಟ್ಟಡವನ್ನು ತನ್ನ ಪಾದಗಳನ್ನು ನೆಲಕ್ಕೆ ತಾಗಿಸದೇ 33ನೇ ಹಂತ ಬರುವವರೆಗೂ ಬೈಸಿಕಲ್ ನಲ್ಲಿಯೇ ಏರಿದ್ದಾನೆ. ಹೀಗೆ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದಾನೆ. ಈ ವೀಡಿಯೋ ಇದೀಗ ಟ್ವಿಟ್ಟರ್ ಮತ್ತು ಯುಟ್ಯೂಬ್ ಗಳಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋದಲ್ಲಿ ಯುರೆಲಿಯನ್ ಸವಾಲನ್ನು ಮೊದಲ ಮೆಟ್ಟಿಲಿಂದ ಆರಂಭಿಸಿ, ಅಂಕು ಡೊಂಕಾಗಿರುವ ಮೆಟ್ಟಲಿನ ಮೇಲೆ ನಿಧಾನಗತಿಯಲ್ಲಿ ಬೈಸಿಕಲ್ ಮೂಲಕ 33 ಹಂತದ ಮೆಟ್ಟಿಲುಗಳನ್ನು ಏರುತ್ತಿರುವುದು ಕಂಡು ಬಂದಿದೆ. ಅಲ್ಲದೆ ಸಾರ್ವಜನಿಕರು ಆತನಿಗೆ ಹಿಂದಿನಿಂದ ಚಪ್ಪಾಳೆ ತಟ್ಟಿ ಪ್ರೇರೆಪಿಸುತ್ತಿರುವುದನ್ನು ಕಾಣಬಹುದಾಗಿದೆ.

  • 100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ

    100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ

    – ಸಾಮಾನ್ಯ ಉಡುಪಿನಲ್ಲೇ ಮದುವೆ

    ಲಕ್ನೋ: ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಅನೇಕರು ಬೈಕಿನಲ್ಲಿ ವಧುವಿನ ಮನೆಗೆ ತೆರಳಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇಲ್ಲೊಬ್ಬ ಯುವಕ ಸೈಕಲ್ ಮೇಲೆ ಸವಾರಿ ಮಾಡಿಕೊಂಡು ಹೋಗಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಹಮೀರ್ ಪುರ ಜಿಲ್ಲೆಯ ಪೌಥಿಯಾ ಗ್ರಾಮದ ಕಲ್ಕು ಪ್ರಜಾಪತಿ (23) ಸೈಕಲ್ ಮೂಲಕ ವಧು ರಿಂಕಿ ಮನೆಗೆ ಹೋಗಿ ಮದುವೆಯಾಗಿದ್ದಾನೆ. ವರ ತಾನು ಮದುವೆಯಾಗುವ ವಧುವಿನ ಮನೆಗೆ ತಲುಪಲು ಸುಮಾರು 100 ಕಿ.ಮೀ ದೂರದವರೆಗೂ ಸೈಕಲ್ ತುಳಿದಿದ್ದಾನೆ. ತಮ್ಮ ಮದುವೆಯ ದಿನಾಂಕವನ್ನು ಮುಂದೂಡಲಾಗದೆ ಒಂಟಿಯಾಗಿ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಇದನ್ನೂ ಓದಿ: ದಿನಸಿ ತರಲು ಕಳುಹಿಸಿದ್ರೆ ಪತ್ನಿ ಜೊತೆ ಬಂದ ಮಗ – ತಾಯಿ ಶಾಕ್

    ಕಲ್ಕು ಪ್ರಜಾಪತಿ ಏಪ್ರಿಲ್ 25 ರಂದು ತಮ್ಮ ಮದುವೆಗೆ ಜಿಲ್ಲಾಡಳಿತದ ಅನುಮತಿಗಾಗಿ ಕಾಯುತ್ತಿದ್ದನು. ಆದರೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಕೊನೆಗೆ ಲಕ್ನೋದಿಂದ 100 ಕಿ.ಮೀ ದೂರದಲ್ಲಿರುವ ಮಹೋಬಾ ಜಿಲ್ಲೆಯ ಪುನಿಯಾ ಗ್ರಾಮದಲ್ಲಿರುವ ವಧು ರಿಂಕಿಯ ಮನೆಗೆ ತನ್ನ ಬೈಸಿಕಲ್‍ನಲ್ಲಿ ಏಕಾಂಗಿಯಾಗಿ ಹೋಗಲು ನಿರ್ಧರಿಸಿದ್ದನು. ಅದರಂತೆಯೇ ಸೈಕಲ್ ಮೂಲಕ ಹೋಗಿ ಹಳ್ಳಿಯ ದೇವಸ್ಥಾನವೊಂದರಲ್ಲಿ ಪ್ರಜಾಪತಿ ಮತ್ತು ರಿಂಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ವಧು-ವರ ಇಬ್ಬರು ಮದುವೆ ಉಡುಪನ್ನು ಧರಿಸಿದೆ ಸಾಮಾನ್ಯ ಉಡುಪಿನಲ್ಲಿ ಮದುವೆಯಾಗಿದ್ದಾರೆ. ನಮ್ಮ ಮದುವೆಗೆ ಸ್ಥಳೀಯ ಪೊಲೀಸರಿಂದ ಅನುಮತಿ ಸಿಗಲಿಲ್ಲ. ಹೀಗಾಗಿ ನಾನು ಸೈಕಲ್ ಮೂಲಕ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ನನ್ನ ಬಳಿ ಬೈಕ್ ಇದೆ. ಆದರೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಕೊನೆಗೆ ಸೈಕಲ್ ಮೂಲಕ ಹೋದೆ. ಆದರೆ ಸೋಂಕಿನಿಂದ ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಬಾಯಿಗೆ ಕರವಸ್ತ್ರ ಕಟ್ಟಿಕೊಂಡಿದ್ದೆ. ಅಲ್ಲದೇ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿಕೊಂಡು ಹೋಗಿದ್ದೆ ಎಂದು ರೈತ ಪ್ರಜಾಪತಿ ಹೇಳಿದರು.

    ಮದುವೆಗೆ ನಾವು ಕಾರ್ಡ್ ಕೂಡ ರೆಡಿ ಮಾಡಿಸಿದ್ದು, ಸಂಬಂಧಿಕರಿಗೆ ನೀಡಿದ್ದೆವು. ಆದರೆ ಲಾಕ್‍ಡೌನ್‍ನಿಂದ ಅದ್ಧೂರಿ ಮದುವೆಯಾಗಲು ಸಾಧ್ಯವಾಗಿಲ್ಲ. ಆದರೆ ವಾಪಸ್ ಬರುವಾಗ ಪತ್ನಿಯ ಜೊತೆ ಬಂದಿದ್ದೇನೆ. ಎರಡೂ ಕುಟುಂಬದವರು ನಮ್ಮ ಮದುವೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಹೀಗಾಗಿ ಅಡುಗೆ ಮಾಡಲು ಯಾರೂ ಇಲ್ಲದಿರುವುದರಿಂದ ಅನಿವಾರ್ಯವಾಗಿ ಮದುವೆಯಾಗಬೇಕಿತ್ತು. ಇದಲ್ಲದೆ ಲಾಕ್‍ಡೌನ್ ಮುಗಿಯಲು ಎಷ್ಟು ದಿನವಾಗುತ್ತದೋ ಗೊತ್ತಿಲ್ಲ. ಹೀಗಾಗಿ ಏಕಾಂಕಿಯಾಗಿ ಸೈಕಲ್ ನಲ್ಲಿ ಹೋಗಿ ವಿವಾಹವಾದೆ ಎಂದು ವರ ಹೇಳಿದನು.

  • ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಕಲೆಕ್ಟರ್

    ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಕಲೆಕ್ಟರ್

    – ಸಾಮಾಜಿಕ ಜಾಲಾತಣದಲ್ಲಿ  ಭಾರೀ ಮೆಚ್ಚುಗೆ

    ಹೈದರಾಬಾದ್: ಕಲೆಕ್ಟರ್ ಒಬ್ಬರು ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿವೆ.

    ನಿಜಾಮಾಬಾದ್ ಕಲೆಕ್ಟರ್ ನಾರಾಯಣ್ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ 3 ದಿನಗಳ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಸಾಮಾನ್ಯ ಉಡುಪಿನಲ್ಲಿದ್ದ ಅವರು ತಲೆಗೆ ಬಿಳಿ ಟೋಪಿ ಹಾಕಿಕೊಂಡು, ಸೈಕಲ್‍ನಲ್ಲಿ ಬೆಳಗ್ಗೆ 8 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು. ಬಳಿಕ ಹೊರ ರೋಗಿಗಳ ವಿಭಾಗ (ಒಪಿಡಿ) ಸೇರಿದಂತೆ ಹಲವಾರು ವಾರ್ಡ್‍ಗಳ ರೋಗಿಗಳ ಸಮಸ್ಯೆಯನ್ನು ನಾರಾಯಣ್ ರೆಡ್ಡಿ ಆಲಿಸಿದರು.

    ಆರ್‍ಒ ವಾಟರ್ ಪ್ಲಾಂಟ್‍ಗಳು ಹಾಗೂ ಔಷಧಿ ಅಂಗಡಿಗಳಲ್ಲಿ ಇರುವ ಔಷಧಿಗಳ ಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಕಲೆಕ್ಟರ್ ನಾರಾಯಣ್ ರೆಡ್ಡಿ ಅವರು ಆಸ್ಪತ್ರೆಗೆ ತಲುಪಿದ ಬಗ್ಗೆ ಮಾಹಿತಿ ಪಡೆದ ಸ್ವಲ್ಪ ಸಮಯದ ನಂತರ, ಆಸ್ಪತ್ರೆಯ ಅಧೀಕ್ಷಕ ಡಾ.ರಾಮುಲು ಕೂಡ ಸ್ಥಳಕ್ಕೆ ತಲುಪಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವ ನೌಕರರಿಗೆ ನೋಟಿಸ್ ನೀಡುವಂತೆ ಡಾ.ರಾಮುಲು ಅವರಿಗೆ ನಾರಾಯಣ್ ರೆಡ್ಡಿ ಸೂಚನೆ ನೀಡಿದರು.

    ನಾರಾಯಣ್ ರೆಡ್ಡಿ ಅವರು ಡಿಸೆಂಬರ್ 24ರಂದು ಅಧಿಕಾರ ವಹಿಸಿಕೊಂಡರು. ಬಳಿಕ ಆಸ್ಪತ್ರೆಗೆ ತಲುಪುವ ಮೊದಲು ರಸ್ತೆ ಮತ್ತು ಕಟ್ಟಡ ಇಲಾಖೆಯ ಅತಿಥಿ ಗೃಹದ ಸ್ಥಿತಿಯನ್ನು ಗಮನಿಸಿದ್ದರು.

    ಈ ಆಸ್ಪತ್ರೆ ದೇಶದ ಅತ್ಯುತ್ತಮ ಆಸ್ಪತ್ರೆಗಳಲ್ಲಿ 17 ನೇ ಸ್ಥಾನದಲ್ಲಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಆಸ್ಪತ್ರೆ ಇದಾಗಿದೆ. ಇಲ್ಲಿಗೆ ಪಕ್ಕದ ಎರಡು ಜಿಲ್ಲೆಯ ಜನರು ಸಹ ಚಿಕಿತ್ಸೆಗಾಗಿ ಬರುತ್ತಾರೆ. ಇದನ್ನು ಗಮನಿಸಿದ ನಾರಾಯಣ್ ರೆಡ್ಡಿ ಅವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡುವಂತೆ ಆದೇಶಿಸಿದ್ದಾರೆ. ಕಲೆಕ್ಟರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  • ಸೈನಿಕರ ಮೇಲೆ ಅಭಿಮಾನ – ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದ ವೈದ್ಯ

    ಸೈನಿಕರ ಮೇಲೆ ಅಭಿಮಾನ – ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದ ವೈದ್ಯ

    ಕಾರವಾರ: ಭಾರತೀಯ ಸೈನಿಕರ ಮೇಲೆ ಅಭಿಮಾನ ಮತ್ತು ಪ್ರೀತಿಯಿಂದ ಜಿಲ್ಲೆಯ ಸಿದ್ದಾಪುರ ತಾಲೂಕಿನ ವೈದ್ಯರೊಬ್ಬರು ಶ್ರೀನಗರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದು ಗಮನ ಸೆಳೆದಿದ್ದಾರೆ.

    ಸಿದ್ದಾಪುರ ತಾಲೂಕಿನ ಅತ್ತಿಗಾರ ಜಡ್ಡಿ ಗ್ರಾಮದ ಯುವ ವೈದ್ಯ ಡಾ.ಹರ್ಷವರ್ಧನ್ ನಾರಾಯಣ ನಾಯ್ಕ ಸೈನಿಕರ ಅಭಿಮಾನದಿಂದ ಸಾಧನೆ ಮಾಡಿದ್ದಾರೆ. ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ 3,715 ಕಿಲೋಮೀಟರ್ ದೂರವನ್ನು ಕೇವಲ 19 ದಿನ 5  ಗಂಟೆ ಒಳಗೆ ಕ್ರಮಿಸಿ ಸಾಧನೆ ಮಾಡಿದ್ದಾರೆ.

    ನವೆಂಬರ್ 14 ರಂದು ಶ್ರೀನಗರದಿಂದ ಸೈಕಲ್ ತುಳಿಯಲು ಪ್ರಾರಂಭಿಸಿದ ವೈದ್ಯ ಪ್ರತಿ ದಿನ 200 ಕಿ.ಮೀ. ಸೈಕಲ್ ತುಳಿದು ಶ್ರೀನಗರ, ಅಮೃತಸರ, ಕಿಶನ್ ಗಡ, ಶಿರಡಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು, ಹೊಸೂರು, ಧರ್ಮಾಪುರಿ, ಮಧುರೈ ಮೂಲಕ ಕನ್ಯಾಕುಮಾರಿ ತಲುಪಿ ಇಂದು ಕರ್ನಾಟಕಕ್ಕೆ ಮರಳಿದ್ದಾರೆ.

    ಮೂಲತಃ ಸಿದ್ದಾಪುರದವರಾದ ಇವರು ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ ಬೆಂಗಳೂರಿನ ಹೆಚ್.ಸಿ.ಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತಿದ್ದರು. ಚಿಕ್ಕ ವಯಸ್ಸಿನಲ್ಲೇ ಸೈನಿಕರ ಮೇಲೆ ಪ್ರೀತಿ ಹೊಂದಿದ್ದ ಇವರ ಕುಟುಂದಲ್ಲಿ ಅಣ್ಣ, ಬಾವ ಸೇರಿದಂತೆ ಬಹುತೇಕರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರಣಾಂತರದಿಂದಾಗಿ ಇವರು ಸೈನ್ಯಕ್ಕೆ ಸೇರುವ ಅವಕಾಶ ತಪ್ಪಿದ ಕಾರಣ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು.

    ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ್ ನಿಂದ ಸ್ಫೂರ್ತಿ ಪಡೆದು ಜನರಲ್ಲಿ ಸೈನ್ಯದ ಬಗ್ಗೆ ಅರಿವು ಸೈನ್ಯಕ್ಕೆ ಸೇರಲು ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸೆಲ್ಯುಟ್ ಫಾರ್ ಅವರ್ ಸೋಲ್ಜರ್ಸ್ ಎಂಬ ಹೆಸರಿನ ಮೂಲಕ ಸೈಕಲ್ ಯಾತ್ರೆ ಪ್ರಾರಂಭಿಸಿದರು. ಇದಕ್ಕಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಈ ಕೆಲಸಕ್ಕೆ ಕೈ ಹಾಕಿ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.

    ಯಾತ್ರೆಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯುವಕರಲ್ಲಿ ಸ್ಪೂರ್ತಿ ಹಾಗೂ ಸೈನ್ಯಕ್ಕೆ ಸೇರುವಂತೆ ಜಾಗೃತಿ ಮೂಡಿಸಿದ್ದೇನೆ. ಭಾರತೀಯ ಸೈನಿಕರ ಮೇಲೆ ನಮ್ಮ ದೇಶದಲ್ಲಿ ಅಪಾರ ಪ್ರೀತಿ ಹೊಂದಿರುವ ಜನ ನಾನು ಬಂದಾಗ ಸೆಲ್ಯೂಟ್ ಮಾಡಬೇಕು ಎಂಬ ಆಸೆ ನನ್ನದು. ಈ ಯಾತ್ರೆ ನಂತರವೂ ಸೈನ್ಯಕ್ಕೆ ಯುವಕರು ಸೇರುವಂತೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸುತ್ತೇನೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.

  • ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

    ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

    ಚಿಕ್ಕಮಗಳೂರು: ಆಯುಧ ಪೂಜೆಯ ಹಿನ್ನೆಲೆ ಕೆರೆಯಲ್ಲಿ ತಮ್ಮ ಸೈಕಲ್‍ಗಳನ್ನು ತೊಳೆದು, ಬಳಿಕ ಈಜಲು ನೀರಿಗೆ ಇಳಿದಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೌಸಿಂಗ್ ಬೋರ್ಡ್ ನಿವಾಸಿಗಳಾದ ಮುರುಳಿ(15), ಜೀವಿತ್(14), ಚಿರಾಗ್(15) ಮೃತ ದುರ್ದೈವಿಗಳು. ಸೋಮವಾರ ಆಯುಧ ಪೂಜೆ ಇದ್ದ ಕಾರಣಕ್ಕೆ ಸಂಜೆ ತಮ್ಮ ಸೈಕಲ್‍ಗಳನ್ನು ತೊಳೆಯಲೆಂದು ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆ ಬಳಿ ಮೂವರು ಬಾಲಕರು ತೆರೆಳಿದ್ದರು. ಹೀಗೆ ಕೆರೆಯಲ್ಲಿ ಸೈಕಲ್ ತೊಳೆದ ಬಳಿಕ ಈಜಲು ಬಾಲಕರು ನೀರಿಗೆ ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಈಜಲು ಕೆರೆಯಲ್ಲಿ ಇಳಿದಿದ್ದ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುರುಳಿ, ಜೀವಿತ್ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ಚಿರಾಗ್ ಮೃತ ದೇಹಕ್ಕಾಗಿ ಸ್ಥಳದಲ್ಲಿ ಪೊಲೀಸ್ ಹಾಗೂ ಸ್ಥಳೀಯರಿಂದ ಶೋಧಕಾರ್ಯ ಮುಂದುವರಿದಿದೆ.

    ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ಐಜ್ವಾಲ್: ಮಕ್ಕಳು ಶುದ್ಧ ಮನಸ್ಸಿನ ದೇವರ ಪ್ರತಿರೂಪಗಳು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಸದ್ಯ ಈ ಮಾತಿಗೆ ನೈಜ ಸಾಕ್ಷಿಯಂತೆ ಮಿಜೋರಾಂನ ಸೈರಂಗ್ ಬಾಲಕ ಮಾಡಿದ ಮುಗ್ಧ ಮನಸ್ಸಿನ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ನಡೆದಿದ್ದೇನು?
    ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.

    ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು ‘ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಬಾಲಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಪೋಸ್ಟಿಗೆ ಇದುವರೆಗೂ 1 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. 74 ಸಾವಿರ ಮಂದಿ ಶೇರ್ ಮಾಡಿದ್ದರೆ, 9 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕನ ಈ ನಡೆಗೆ ಮೆಚ್ಚುಗೆ ಸೂಚಿಸಿರುವ ಹಲವು ಮಂದಿ ಆತನ ಪೋಷಕರು ಬಾಲಕನನ್ನು ಬೆಳೆಸಿದ ಪರಿಗೂ ಶಹಬ್ಬಾಶ್ ಗಿರಿ ನೀಡಿದ್ದಾರೆ.

  • ದೇಶದ ಮೊದಲ ಸಾರ್ವಜನಿಕ ಸೈಕಲ್ ಸೇವೆ ಮೈಸೂರಿನಲ್ಲಿ ಸೂಪರ್ ಹಿಟ್

    ದೇಶದ ಮೊದಲ ಸಾರ್ವಜನಿಕ ಸೈಕಲ್ ಸೇವೆ ಮೈಸೂರಿನಲ್ಲಿ ಸೂಪರ್ ಹಿಟ್

    ಮೈಸೂರು: ನಗರದಲ್ಲಿ ನೂತನವಾಗಿ ಆರಂಭವಾಗಿರುವ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಈ ಯೋಜನೆಯ ಅಧಿಕೃತ ಚಂದಾದಾರರಾಗಿ 10 ಸಾವಿರ ಮಂದಿ ನೊಂದಣಿಯಾಗಿದ್ದು, ಟ್ರಿಣ್ ಟ್ರಿಣ್ ಯೋಜನೆ ದಿನೇ ದಿನೇ ಮತ್ತಷ್ಟು ಜನಪ್ರಿಯವಾಗುತ್ತಿದೆ. ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆದಾರರ ಸಂಖ್ಯೆ 10 ಸಾವಿರ ಗಡಿ ದಾಟಿರುವುದು ಯೋಜನೆಯ ಸಫಲತೆಗೆ ಸಾಕ್ಷಿಯಾಗಿದೆ.

    2017 ಜೂನ್ 4ರಂದು ಈ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆ ಚಾಲನೆಗೊಂಡಿತ್ತು. ಕಳೆದ ಶುಕ್ರವಾರದ ವೇಳೆಗೆ ಒಟ್ಟು 10 ಸಾವಿರ ಸದಸ್ಯರು ನೋಂದಣಿಯಾಗಿದ್ದರೆ. ತಿಂಗಳಿಗೆ ಸರಾಸರಿ 300 ರಿಂದ 500 ಮಂದಿ ನೋಂದಣಿಯಾಗಿದ್ದು, ಪ್ರತಿನಿತ್ಯ ಸರಾಸರಿ 800 ರಿಂದ 1000 ಮಂದಿಯಿಂದ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ.

    ಮೈಸೂರು ನಗರದಾದ್ಯಂತ ಒಟ್ಟು 52 ಟ್ರಿಣ್ ಟ್ರಿಣ್ ಬೈಸಿಕಲ್ ಕೇಂದ್ರಗಳಿವೆ. ಒಟ್ಟು 12 ಕಡೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿಯಾಗಿದೆ. ಸೈಕಲ್ ಸವಾರಿ ನಮ್ಮ ಹೆಮ್ಮೆಯ ಸವಾರಿ ಎಂದು ಚಂದಾದರರು ಹೇಳುತ್ತಿದ್ದಾರೆ.

    ನಗರದಲ್ಲಿ ಹೆಚ್ಚುತ್ತಿದ್ದ ವಾಹನ ದಟ್ಟಣೆಯಿಂದ ಉಂಟಾಗುತ್ತಿದ್ದ ಹಾನಿಯಿಂದ ಪರಿಸರವನ್ನು ಸಂರಕ್ಷಿಸುವ ದೃಷ್ಟಿಯಿಂದ ಮೈಸೂರು ನಗರ ಪ್ರಮುಖ ಭಾಗಗಳಲ್ಲಿ ಟ್ರಿಣ್ ಟ್ರಿಣ್ ಸೇವೆ ಆರಂಭಿಸಲಾಗಿತ್ತು. ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಸಹ ವಾಹನ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿತ್ತು. ಸದ್ಯ ಸರ್ಕಾರ ಈ ಯೋಜನೆಗೆ ಯಶಸ್ವಿಯಾಗಿ ಜಾರಿಗೆ ಯಾಗಿದೆ.

  • ಇಂಧನ ಬೆಲೆ ಏರಿಕೆ – ಸೈಕಲ್ ತುಳಿದು ಕೋಲಾರದಲ್ಲಿ ರಾಗಾ ಪ್ರತಿಭಟನೆ

    ಇಂಧನ ಬೆಲೆ ಏರಿಕೆ – ಸೈಕಲ್ ತುಳಿದು ಕೋಲಾರದಲ್ಲಿ ರಾಗಾ ಪ್ರತಿಭಟನೆ

    ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಇಂಧನ ಬೆಲೆ ಏರಿಕೆ ಕುರಿತು ಸೈಕಲ್ ತುಳಿದು ಪ್ರತಿಭಟನೆ ನಡೆಸಿದರು.

    ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಕೋಲಾರದ ಮಾಲೂರಿನಲ್ಲಿ ಸೈಕಲ್ ತುಳಿದು ಪ್ರತಿಭಟನೆ ನಡೆಸಿದರು. ಸಾವಿರಾರು ಕಾರ್ಯಕರ್ತರ ನಡುವೆ ಸೈಕಲ್ ತುಳಿದ ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಅನುಸರಣೆ ಮಾಡುತ್ತಿದೆ. ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಬಾರಿ ಪ್ರಮಾಣದ ಆದಾಯ ಗಳಿಸುತ್ತಿರುವ ಕೇಂದ್ರ ಸರ್ಕಾರ ಈ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿ, ನಿಮಗೇ ಸಾಧ್ಯವಿದ್ದರೆ ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಎಂದು ಸವಾಲು ಎಸೆದರು.

    ಬಳಿಕ ರೋಡ್ ಶೋ ವೇಳೆ ಸಿಲಿಂಡರ್ ಹಿಡಿದು ಕೇಂದ್ರ ವಿರುದ್ಧ ಪ್ರತಿಭಟನೆ ಮಾಡಿದರು. ಈ ವೇಳೆ ಎತ್ತಿನ ಗಾಡಿ ಮೇಲೆ ನಿಂತು ಭಾಷಣ ಮಾಡಿದ ಅವರು, ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮಂದುವರೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಆದ್ರೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅರೋಪಿಸುತ್ತೀರಾ ಸದ್ಯ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೇರಿದೆ. ಇದನ್ನೂ ಜಿಎಸ್‍ಟಿ ವ್ಯಾಪ್ತಿಗೆ ಏಕೆ ಒಳಪಡಿಸಿಲ್ಲ. ಈ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

    ಬಡವರಿಗಾಗಿ ಬಿಜೆಪಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಲ್ಲ. ರೈತರ ಸಾಲ ನನ್ನ ಮಾಡಿಲ್ಲ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗಿದೆ ಆದರೆ ಕೇಂದ್ರದಲ್ಲಿ ಯಾಕೆ ಸಾಲ ಮನ್ನಾ ಮಾಡಿಲ್ಲ. ಲೋಕಸಭೆ ಚುನಾವಣೆಗೆ ಒಂದು ವರ್ಷ ಉಳಿದಿದೆ. 2019 ರಲ್ಲಿ ನಮ್ಮ ಸರ್ಕಾರ ಬಂದಾಗ ಸಾಲ ಮನ್ನಾ ಮಾಡುತ್ತೇವೆ ಎಂದರು.

    ಗುಜರಾತ್ ನಲ್ಲಿ ನರೇಂದ್ರ ಮೋದಿ ಎಲ್ಲಾ ಸಂಸ್ಥೆಗಳನ್ನ ಖಾಸಗೀಕರಣ ಮಾಡಿದ್ದಾರೆ. ರಾಜ್ಯದಲ್ಲಿ ಉಚಿತ ಅಕ್ಕಿ, ಶಿಕ್ಷಣ, ಇಂದಿರಾ ಕ್ಯಾಂಟೀನ್ ಮೂಲಕ ಊಟ ನೀಡುತ್ತಿದ್ದೇವೆ. ಮೋದಿಯವರೆ ಯಾವುದಾದರೂ ಒಂದು ಬಡವರ ಪರವಾದ ಕಾರ್ಯಕ್ರಮ ಹೇಳಿ. ರಾಜ್ಯದ ಬಿಜೆಪಿ ನಾಯಕ ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದವರು. ಯಾವ ಆಧಾರದ ಮೇಲೆ ಅವರನ್ನು ಮುಖ್ಯಮಂತ್ರಿ ಅಭಯರ್ಥಿಯನ್ನಾಗಿ ಘೋಷಣೆ ಮಾಡಿದ್ದೀರಿ. ದೇಶದಲ್ಲಿ ಆರ್‍ಎಸ್‍ಎಸ್ ಮತ್ತು ಮಹಾತ್ಮಗಾಂಧಿ ಆದರ್ಶಗಳ ನಡುವೆ ಇಂದು ಸಂಘರ್ಷ ನಡೆಯುತ್ತಿದೆ ಎಂದು ಆರೋಪಿಸಿದರು.

  • ನಿರಂತರ 24 ದಿನ, 600 ಕಿ.ಮೀ. ಸೈಕಲ್ ತುಳಿದ ಬಳಿಕ ಕೊನೆಗೂ ಪತ್ನಿಯನ್ನ ಹುಡುಕಿದ ಪತಿ!

    ನಿರಂತರ 24 ದಿನ, 600 ಕಿ.ಮೀ. ಸೈಕಲ್ ತುಳಿದ ಬಳಿಕ ಕೊನೆಗೂ ಪತ್ನಿಯನ್ನ ಹುಡುಕಿದ ಪತಿ!

    ರಾಂಚಿ: ಪತಿ ಸಾಹಸ ಮಾಡಿ ನಾಪತ್ತೆಯಾಗಿದ್ದ ಪತ್ನಿಯನ್ನು 24 ದಿನಗಳ ನಂತರ ಪತ್ತೆ ಹಚ್ಚಿರುವ ಘಟನೆ ಜಾರ್ಖಂಡ್ ನ ಜಮ್ಶೆದ್‍ಪುರನಲ್ಲಿ ನಡೆದಿದೆ.

    ಮನೋಹರ ನಾಯಕ್ ತನ್ನ ಪತ್ನಿಗಾಗಿ 24 ದಿನಗಳಲ್ಲಿ ಸುಮಾರು 600 ಕಿಲೋಮೀಟರ್ ಸೈಕಲ್ ನಲ್ಲಿ ಸುತ್ತಾಡಿ ಕೊನೆಗೂ ಪತ್ನಿಯನ್ನು ಹುಡುಕಿದ್ದಾರೆ. ಇವರು ಮುಸಬಾನಿ ಬಾಲಿಗೊಡಾ ಗ್ರಾಮದವರು. ಇವರ ಪತ್ನಿ ಅನಿತಾ ಜನವರಿ 14ರಂದು ಸಂಕ್ರಾಂತಿ ಹಬ್ಬಕ್ಕೆಂದು ಕುಮಾರ್ಸಾಲ್ ಹಳ್ಳಿಯ ತವರಿಗೆ ಹೋಗಿದ್ದಾಗ ಕಾಣೆಯಾಗಿದ್ದರು.

    ಆದರೆ ಎರಡು ದಿನಗಳಾದರೂ ಪತ್ನಿ ಹಿಂದಿರುಗದಿದ್ದಾಗ ಮನೋಹರ್, ಮುಸಬಾನಿ ಮತ್ತು ದುಮಾರಿಯಾ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದರು. ಮನೋಹರ್ ಕಾರ್ಮಿಕರಾಗಿದ್ದು, ಪತ್ನಿ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗದಿದ್ದಾಗ ಕೊನೆಗೆ ತಾವೇ ಪತ್ನಿಯನ್ನ ಹುಡುಕುವ ದೃಢ ನಿರ್ಧಾರ ಮಾಡಿದರು. ಮನೋಹರ್ ಪತ್ನಿ ಅನಿತಾ ಅವರ ಮಾನಸಿಕ ಸ್ಥಿತಿ ಚೆನ್ನಾಗಿರಲಿಲ್ಲ ಹಾಗೂ ಅವರಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲವಾದ ಕಾರಣ ತಾನಾಗಿಯೇ ಪತ್ನಿಯನ್ನ ಹುಡುಕಿ ಹೊರಟರು.

    ನಾನು ನನ್ನ ಹಳೆಯ ತುಕ್ಕು ಹಿಡಿದ ಸೈಕಲ್ ರಿಪೇರಿ ಮಾಡಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಪ್ರಯಾಣಿಸಿದೆ. ಎಷ್ಟು ದೂರ ಬಂದಿದ್ದೇನೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಮನೋಹರ್ ಹೇಳಿದ್ದಾರೆ.

    ಮನೋಹರ್ ದಿನಕ್ಕೆ 25 ಕಿ.ಮೀ. ದೂರ ಸೈಕಲ್ ತುಳಿದು 24 ದಿನಗಳಲ್ಲಿ ಸುಮಾರು 65 ಗ್ರಾಮಗಳನ್ನು ಸುತ್ತಾಡಿದ್ದಾರೆ. ಆದ್ರೆ ನಿಂತರವಾಗಿ ಪತ್ನಿಯನ್ನ ಹುಡುಕಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪತ್ನಿಯ ಫೋಟೋವನ್ನು ಸ್ಥಳೀಯ ಪತ್ರಿಕೆಗಳಿಗೆ ನೀಡಿ ಕಾಣೆಯಾದ ವ್ಯಕ್ತಿಗಳ ಅಂಕಣದಲ್ಲಿ ಪ್ರಕಟಿಸಲು ಕೇಳಿದ್ದರು. ಫೋಟೋ ನೋಡಿದವರೊಬ್ಬರು ಮನೋಹರ್ ಪತ್ನಿ ಕೊಲ್ಕತ್ತಾದ ಖರಗ್‍ಪುರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಕುಳಿತಿರುವುದನ್ನ ನೋಡಿ ಗುರುತು ಹಿಡಿದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಅಲ್ಲಿಂದ ಮುಸಬಾನಿ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಅವರು ಮನೋಹರ್ ಗೆ ಮಾಹಿತಿ ತಿಳಿಸಿದ್ದಾರೆ. ಮನೋಹರ್ ಅಲ್ಲಿಗೆ ಹೋಗಿ ತಮ್ಮ ಪತ್ನಿಯನ್ನು ಮನೆಗೆ ಕರೆತಂದಿದ್ದಾರೆ.

    ನಾವು ಕೂಡಲೇ ಅಧಾರ್ ಕಾರ್ಡ್ ಸಮೇತ ಅಲ್ಲಿಗೆ ಹೋಗುವಂತೆ ಮನೋಹರ್ ಗೆ ಹೇಳಿದೆವು. ಫೆಬ್ರವರಿ 10ರಂದು ಮನೋಹರ್ ಹಾಗೂ ಪತ್ನಿ ಅನಿತಾ ಜೊತೆಯಾಗಿದ್ದಾರೆ ಎಂದು ಮುಸಬಾನಿ ಎಸ್‍ಹೆಚ್‍ಓ ಸುರೇಶ್ ಲಿಂಡಾ ಹೇಳಿದ್ದಾರೆ. ಫೆಬ್ರವರಿ 11ರಂದು ದಂಪತಿ ಮನೆಗೆ ವಾಪಸ್ ಬಂದಿದ್ದಾರೆ.

  • ನನ್ನ ಮಗನನ್ನ ನೋಡಿದ್ರಾ..?- ನಾಪತ್ತೆಯಾಗಿರೋ ಮಗನಿಗಾಗಿ ಹುಡುಕುತ್ತಾ 5 ತಿಂಗಳಿಂದ 1500 ಕಿ.ಮೀ ಸೈಕಲ್ ಓಡಿಸಿರೋ ತಂದೆ

    ನನ್ನ ಮಗನನ್ನ ನೋಡಿದ್ರಾ..?- ನಾಪತ್ತೆಯಾಗಿರೋ ಮಗನಿಗಾಗಿ ಹುಡುಕುತ್ತಾ 5 ತಿಂಗಳಿಂದ 1500 ಕಿ.ಮೀ ಸೈಕಲ್ ಓಡಿಸಿರೋ ತಂದೆ

    ಲಕ್ನೋ: ನಾಪತ್ತೆಯಾಗಿರುವ ಮಗನನ್ನು ಹುಡುಕುತ್ತಾ ತಂದೆಯೊಬ್ಬರು 5 ತಿಂಗಳಿಂದ ಸುಮಾರು 1500 ಕಿಮೀ ದೂರು ಸೈಕಲ್ ತುಳಿದಿರೋ ಮನಕಲಕುವ ಘಟನೆಯಯೊಂದು ವರದಿಯಾಗಿದೆ.

    ಮೂಲತಃ ಉತ್ತರ ಪ್ರದೇಶದ ಹಾತ್ರಾಸ್ ಜಿಲ್ಲೆಯ ನಿವಾಸಿಯಾಗಿರುವ 48 ವರ್ಷದ ಸತೀಶ್ ಚಂದಾ ಒಬ್ಬ ರೈತರಾಗಿದ್ದು, ಮಗನ ಹುಡುಕಾಟದಲ್ಲಿದ್ದಾರೆ. 6 ತಿಂಗಳ ಹಿಂದೆ ಇವರ 11 ವರ್ಷದ ಮಾನಸಿಕ ಅಸ್ವಸ್ಥ ಮಗ ನಾಪತ್ತೆಯಾಗಿದ್ದಾನೆ. ಅಂದಿನಿಂದಲು ಪೊಲೀಸರ ಸಹಾಯವನ್ನು ತೆಗೆದುಕೊಳ್ಳದೆ ಸೈಕಲ್ ತುಳಿಯುತ್ತ ಊರೂರು ಅಲೆಯುತ್ತಾ ಮಗನಿಗಾಗಿ ಹುಡುಕುತ್ತಿದ್ದಾರೆ.

    ಶಾಲೆಗೆ ಹೋದವನು ವಾಪಸ್ ಬರಲಿಲ್ಲ: ಚಂದಾ ಅವರು ಈಗಾಗಲೇ ದೆಹಲಿ ಮತ್ತು ಹರಿಯಾಣ ದಲ್ಲಿ ಹುಡುಕಾಡಿ ಈಗ ಆಗ್ರಾ ಸಮೀಪದ ಎಟ್ಮಾದ್ಪುರ ತಲುಪಿದ್ದಾರೆ. ನಾನು ಹತ್ರಾಸ್ ಜಿಲ್ಲೆಯ ದ್ವಾರಿಕಾಪುರ್ ಗ್ರಾಮದವನು, ಜೂನ್ 24 ರಂದು ನನ್ನ ಮಗ ಗೋದ್ನಾ ಶಾಲೆಗೆಂದು ಮನೆಯಿಂದ ಹೋಗಿ ಮತ್ತೆ ಸಂಜೆ ಮನೆಗೆ ವಾಪಸ್ ಬರಲಿಲ್ಲ. ಶಾಲೆಯಲ್ಲಿ ಸ್ನೇಹಿತರ ಬಳಿ ವಿಚಾರಿಸಿದಾಗ ಕೆಲವರು ಸಸ್ನಿ ರೈಲ್ವೇ ನಿಲ್ದಾಣದ ಬಳಿ ನೋಡಿದೆವು ಎಂದು ಹೇಳಿದರು. ಅಲ್ಲಿಗೂ ಹೋಗಿ ಹುಡುಕಾಡಿದೆವು. ಆದರೆ ಅಲ್ಲೂ ಸಿಗಲಿಲ್ಲ ಎಂದರು.

    ಕೊನೆಗೆ ನಾಲ್ಕು ದಿನ ಕಾದು ಜೂನ್ 28 ರಂದು ಪೊಲೀಸರಿಗೆ ದೂರು ನೀಡಿದೆ. ಆದರೆ ಅವರು ದೂರು ದಾಖಲಿಸಲು ನಿರಾಕರಿಸಿದರು. ನಾನು ಮತ್ತೆ ಮತ್ತೆ ಮನವಿ ಮಾಡಿದಾಗ ದೂರಿನ ಪ್ರತಿ ಮೇಲೆ ಸ್ಟ್ಯಾಂಪ್ ಒತ್ತಿ, ಸರಿ ಹೋಗು ಎಂದರು. ಬಳಿಕ ನಾನೇ ಸೈಕಲ್ ತೆಗೆದುಕೊಂಡು ಮಗನಿಗಾಗಿ ಹುಡುಕಾಟ ಆರಂಭಿಸಿದೆ. ನನ್ನಲ್ಲಿ ಹಣವಿಲ್ಲ, ಅಧಿಕಾರ ಇಲ್ಲ, ನನಗೆ ಯಾರು ಸಹಾಯ ಮಾಡುತ್ತಾರೆ? ಎಂದು ಸತೀಶ್ ಚಂದ್ ಅಲವತ್ತುಕೊಂಡಿದ್ದಾರೆ.

    ನನ್ನ ಮಗನನ್ನು ನೋಡಿದ್ರಾ?: ಇಲ್ಲಿವರೆಗೂ ದೆಹಲಿ, ಕಾನ್ಪುರ, ರೆವತಿ, ಹರಿಯಾಣ ಸೇರಿದಂತೆ ಸುಮಾರು 1,500 ಕಿ.ಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸಿದ್ದಾರೆ. 100 ಗ್ರಾಮಗಳಿಗೆ ತಲುಪಿ ಸಾವಿರಾರು ಜನರಿಗೆ ಮಗನ ಫೋಟೋ ತೋರಿಸಿ, ನಮ್ಮ ಹುಡುಗನನ್ನ ನೋಡಿದ್ರಾ? ಎಂದು ಕೇಳುತ್ತಾ ಹುಡುಕುತ್ತಿದ್ದಾರೆ. ಪ್ರಸ್ತುತ ಎತ್‍ಮದ್‍ಪುರದ ಬ್ರಹ್ಮನ್ ಗ್ರಾಮದಲ್ಲಿ ಇದ್ದಾರೆ. ಇವರ ಬಗ್ಗೆ ತಿಳಿದ ಆಗ್ರಾದ ಮಕ್ಕಳ ಹಕ್ಕುಗಳ ಕಾರ್ಯಕರ್ತ ನರೇಶ್ ಪರಸ್, ಉತ್ತರಪ್ರದೇಶ ಪೊಲೀಸರಿಗೆ ಟ್ವೀಟ್ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರಷ್ಟೇ ಅಲ್ಲದೆ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಮುಖ್ಯಮಂತ್ರಿಗಳ ಜನ್‍ಸುನ್ವಾಯಿ ಪೋರ್ಟಲ್‍ಗೂ ನರೇಶ್ ಪರಸ್ ಪೋಸ್ಟ್ ಮಾಡಿದ್ದಾರೆ.

    ಇಬ್ಬರು ಮಕ್ಕಳನ್ನ ಕಳೆದುಕೊಂಡಿದ್ದ ಪೋಷಕರು: ಸತೀಶ್ ಚಂದ್ ಪತ್ನಿ ಅರ್ಚನಾ ಕೂಡ ಮಗ ವಾಪಸ್ ಬರುತ್ತಾನೆಂಬ ಭರವಸೆಯಲ್ಲಿದ್ದಾರೆ. ಇವರ ಹಿರಿಯ ಮಗಳು ಸರಿತಾ 2005ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ನಂತರ 2011ರಲ್ಲಿ 9 ವರ್ಷದ ಮಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಈಗ ಮತ್ತೋರ್ವ ಮಗನೂ ಕಾಣೆಯಾಗಿದ್ದು, ಪೋಷಕರಿಗೆ ದಿಕ್ಕು ತೋಚದಂತಾಗಿದೆ.

    ಇವರು ಸುತ್ತಾಡಿದ ಜಿಲ್ಲೆಗಳಲ್ಲಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದ ಹಲವರ ಫೋನ್ ನಂಬರ್ ತೆಗೆದುಕೊಂಡಿದ್ದಾರೆ. ನನ್ನ ಮಗ ಒಂದಲ್ಲಾ ಒಂದು ದಿನ ಸಿಕ್ಕರೆ ಅವರು ನಮಗೆ ವಿಷಯ ತಿಳಿಸುತ್ತಾರೆ ಅಂತ ನಂಬಿದ್ದಾರೆ.