Tag: Bick

  • ಬಸ್-ಬೈಕ್ ಮುಖಾಮುಖಿ ಡಿಕ್ಕಿ- ಚೆಲ್ಲಾಪಿಲ್ಲಿಯಾದ ದೇಹಗಳು

    ಬಸ್-ಬೈಕ್ ಮುಖಾಮುಖಿ ಡಿಕ್ಕಿ- ಚೆಲ್ಲಾಪಿಲ್ಲಿಯಾದ ದೇಹಗಳು

    ಕೊಪ್ಪಳ: ಸರ್ಕಾರಿ ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಬಳಿ ನಡೆದಿದೆ.

    ಗಂಗಾವತಿ ತಾಲೂಕಿನ ಸತೀಶ್ (28) ಹಾಗೂ ಜಾಫರ್ (30) ಮೃತಪಟ್ಟಿದ್ದಾರೆ. ಇಬ್ಬರೂ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದರು. ಅದೃಷ್ಟವಶಾತ್ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಸತೀಶ್ ಹಾಗೂ ಜಾಫರ್ ಇಂದು ಗಂಗಾವತಿಯಿಂದ ಕಾರಟಗಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಾರಟಗಿಯಿಂದ ಗಂಗಾವತಿ ಕಡೆಗೆ ಹೋಗುತ್ತಿದ್ದ ಬಸ್‍ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಇಬ್ಬರು ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಮೊಪೆಡ್ ಚೇಸ್‍ಗೆ ಯತ್ನಿಸಿ ಡಿಕ್ಕಿ ಹೊಡೆದ ಬೈಕ್- ದಂಪತಿ ಸೇರಿ ನಾಲ್ವರ ಮೇಲೆ ಹರಿದ ಟ್ರಕ್

    ಮೊಪೆಡ್ ಚೇಸ್‍ಗೆ ಯತ್ನಿಸಿ ಡಿಕ್ಕಿ ಹೊಡೆದ ಬೈಕ್- ದಂಪತಿ ಸೇರಿ ನಾಲ್ವರ ಮೇಲೆ ಹರಿದ ಟ್ರಕ್

    ಬೆಂಗಳೂರು: ಟ್ರಕ್, ಮೊಪೆಡ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ದಂಪತಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ಸಮೀಪದ ಮೆಣಸಿ ಗ್ರಾಮದ ಬಳಿ ನಡೆದಿದೆ.

    ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿಯ ಶಾಂತಮ್ಮ, ಸತೀಶ್ ದಂಪತಿ ಹಾಗೂ ಅಜ್ಜನಕಟ್ಟೆ ಗ್ರಾಮದ ಮಂಜುನಾಥ್, ನರಸಿಂಹಮೂರ್ತಿ ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿ 207ರ ಡಾಬಸ್ ಪೇಟೆ ಹಾಗೂ ದೊಡ್ಡಬಳ್ಳಾಪುರ ಬಳಿಯ ಮೆಣಸಿ ಗ್ರಾಮದ ಬಳಿ ದುರಂತ ಸಂಭವಿಸಿದ್ದು, ಸ್ಥಳದಲ್ಲಿಯೇ ನಾಲ್ವರೂ ಮೃತಪಟ್ಟಿದ್ದಾರೆ.

    ಶಾಂತಮ್ಮ ಹಾಗೂ ಸತೀಶ್ ದಂಪತಿ ಮೊಪೆಡ್‍ನಲ್ಲಿ ಗೊಲ್ಲಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಹೋಗುತ್ತಿದ್ದರು. ಈ ವೇಳೆ ಸ್ಕೂಟಿಯಲ್ಲಿ ವೇಗವಾಗಿ ಬಂದ ಯುವಕರು ಮೊಪೆಡ್ ಹಿಂದಿಕ್ಕಲು ಯತ್ನಿಸಿದ್ದರು. ಆದರೆ ಸವಾರನ ನಿಯಂತ್ರಣ ಸ್ಕೂಟಿ ಮೊಪೆಡ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಷಣಾರ್ಧದಲ್ಲಿ ಹಿಂಬದಿಯಿಂದ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದ ಎರಡು ಬೈಕ್‍ಗಳ ಮೇಲೆ ಹರಿದಿದೆ. ಇದರಿಂದಾಗಿ ದಂಪತಿ ಹಾಗೂ ಯುವಕರು ಗಂಭೀರವಾಗಿ ಗಾಯಗೊಂಡು ಪ್ರಾಣಬಿಟ್ಟಿದ್ದಾರೆ.

    ಲಾರಿ ಹರಿದ ಪರಿಣಾಮ ಸ್ಕೂಟಿ ಛಿದ್ರ ಛಿದ್ರವಾಗಿದೆ. ಈ ಘಟನೆ ಆಘಾತಕ್ಕೆ ಒಳಗಾದ ಚಾಲಕ ಸ್ಥಳದಲ್ಲೇ ಟ್ರಕ್ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೂವರು ಖತರ್ನಾಕ್ ಕಳ್ಳರು ಅಂದರ್ – 30 ಗ್ರಾಂ ಚಿನ್ನ, 12 ಮೊಬೈಲ್, ಬೈಕ್ ವಶ

    ಮೂವರು ಖತರ್ನಾಕ್ ಕಳ್ಳರು ಅಂದರ್ – 30 ಗ್ರಾಂ ಚಿನ್ನ, 12 ಮೊಬೈಲ್, ಬೈಕ್ ವಶ

    ಬಾಗಲಕೋಟೆ: ಮೂವರು ಖತರ್ನಾಕ್ ಕಳ್ಳರನ್ನು ಮುಧೋಳ ಪೊಲೀಸರು ಬಂಧಿಸಿದ್ದು, 30 ಗ್ರಾಂ ಚಿನ್ನ, 67,700 ರೂ. ನಗದು, 12 ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.

    ಮುಧೋಳ, ಬೆಳಗಾವಿ ಭಾಗದ ಸುನೀಲ್ ರಜಪೂತ್, ತುಕಾರಾಮ್ ರಜಪೂತ್ ಹಾಗೂ ಮಂಜುನಾಥ್ ಲಮಾಣಿ ಬಂಧಿತ ಆರೋಪಿಗಳು. ಎಸ್‍ಪಿ ಅಭಿನವ್ ಖರೇ ಅವರ ಮಾರ್ಗದರ್ಶ ಹಾಗೂ ಮುಧೋಳ ಸಿಪಿಐ ಕೆ.ಬಿ ಲಿಬನ್ನೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಆರೋಪಿಗಳನ್ನು ಬಂಧಿಸಿದೆ.

    ಆರೋಪಿಗಳು ಬೈಕ್‍ನಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದೇವು. ಆದರೆ ಆರೋಪಿಗಳು ಮೊದಲಿಗೆ ಯಾವುದೇ ಮಾಹಿತಿ ನೀಡಲಿಲ್ಲ. ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ. ಅವರ ಬಳಿಯಿದ್ದ 30 ಗ್ರಾಂ ಚಿನ್ನ, 67,700 ರೂ. ನಗದು, ಕೃತ್ಯಕ್ಕೆ ಬಳಸುತ್ತಿದ್ದ 12 ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆರೋಪಿಗಳು ಇತ್ತೀಚೆಗೆ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಬಂಧಿತರ ವಿರುದ್ಧ ಕಳ್ಳತನ ಹಾಗೂ ಸುಲಿಗೆ ಆರೋಪದ ಅಡಿ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ್ರೂ ಬದುಕುಳಿದ ಸವಾರರು: ವಿಡಿಯೋ ನೋಡಿ

    ಬಸ್-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ್ರೂ ಬದುಕುಳಿದ ಸವಾರರು: ವಿಡಿಯೋ ನೋಡಿ

    ಚೆನ್ನೈ: ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಸವಾರರು ಸುಮಾರು ಮೀಟರ್ ದೂರಕ್ಕೆ ಬಿದ್ದರೂ ಬದುಕುಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಮಧುರೈನಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮೂರು ರಸ್ತೆಗಳು ಸೇರುವ ವೃತ್ತದ ಒಂದು ಕಡೆಯಿಂದ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬರುತ್ತಿತ್ತು. ಅದರ ಎಡ ಭಾಗದ ರಸ್ತೆಯಿಂದ ಬೈಕ್‍ನಲ್ಲಿ ಮೂವರು ಸವಾರರು ಬಂದಿದ್ದಾರೆ. ವೇಗವಾಗಿದ್ದ ಇಬ್ಬರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಮೂವರು ಸವಾರರು ಬೈಕ್ ಸಮೇತ ಸುಮಾರು ಮೀಟರ್ ದೂರಕ್ಕೆ ಹಾರಿ ಬಿದ್ದಿದ್ದಾರೆ.

    ಭಾರೀ ಅನಾಹುತದಿಂದ ಎಚ್ಚೆತ್ತುಕೊಂಡ ಚಾಲಕ, ಬಸ್ಸನ್ನು ನಿಯಂತ್ರಕ್ಕೆ ತಂದಿದ್ದಾನೆ. ಇಲ್ಲದಿದ್ದರೇ ಬಸ್ ಮೂವರ ಮೇಲೂ ಹರಿದು ಹೋಗುತ್ತಿತ್ತು. ತಕ್ಷಣವೇ ಕೆಳಗೆ ಇಳಿದು ಬಂದ ಕೆಲ ಪ್ರಯಾಣಿಕರು, ಬಸ್ ಅಡಿಗೆ ಹಾಗೂ ರಸ್ತೆ ಮೇಲೆ ಬಿದ್ದಿದ್ದ ಸವಾರರನ್ನು ಹೊರಕ್ಕೆ ಏಳೆದು, ಆರೈಕೆ ಮಾಡಿದ್ದಾರೆ. ಬಳಿಕ ಸಣ್ಣ ಪುಟ್ಟ ಗಾಯಗಳಾಗಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸವಾರರ ಅಜಾಗೃತಿಯಿಂದಲೇ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv