Tag: Bichchugatti

  • ಚಿತ್ರರಂಗಕ್ಕೆ ಹರಿಪ್ರಿಯಾ ಚಿಕ್ಕ ಬ್ರೇಕ್!

    ಚಿತ್ರರಂಗಕ್ಕೆ ಹರಿಪ್ರಿಯಾ ಚಿಕ್ಕ ಬ್ರೇಕ್!

    ಬೆಂಗಳೂರು: ಹರಿಪ್ರಿಯಾ ಅಂದರೆ ಭಿನ್ನಾತಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದಿರೋ ಪ್ರತಿಭಾವಂತ ನಟಿ. ಅವರ ಪಾಲಿಗೆ ಈ ವರ್ಷ ಸುಗ್ಗಿ ಸಂಭ್ರಮ. ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿ, ಇನ್ನೂ ಒಂದಷ್ಟು ಅವಕಾಶಗಳೂ ಅವರಿಗಾಗಿ ಕಾದು ನಿಂತಿವೆ. ಹೀಗಿರುವಾಗಲೇ ಹರಿಪ್ರಿಯಾ ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರ ಸರಿಯೋ ನಿರ್ಧಾರ ಪ್ರಕಟಿಸಿದ್ದಾರೆ!

    ಈ ಸುದ್ದಿ ಕೇಳಿದಾಕ್ಷಣವೇ ಅರೇ ಅಂಥಾದ್ದೇನಾಯ್ತೆಂಬ ದಿಗಿಲು ತುಂಬಿದ ಪ್ರಶ್ನೆ ಕಾಡೋದು ಸಹಜವೇ. ಆದರೆ ಈ ಬಗ್ಗೆ ಖುದ್ದು ಹರಿಪ್ರಿಯಾ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಕೆಲ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರವಾಗಿ ಹೇಳೋದಾದರೆ ಈ ತಾತ್ಕಾಲಿಕ ಬ್ರೇಕ್ ಹಿಂದಿರೋದು ರಿಲ್ಯಾಕ್ಸ್ ಆಗೋ ಉದ್ದೇಶವಷ್ಟೇ!

    `ನಾನು ನಟಿಸಲು ಒಪ್ಪಿಕೊಂಡಿದ್ದ ಬಿಚ್ಚುಗತ್ತಿ, ಕುರುಕ್ಷೇತ್ರ, ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲೀತನಕ, ಕಥಾ ಸಂಗಮ ಸೇರಿದಂತೆ ಎಲ್ಲ ಚಿತ್ರಗಳ ನನ್ನ ಭಾಗದ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿದ್ದೇನೆ. ಈ ಎಲ್ಲ ಸಿನಿಮಾಗಳಲ್ಲಿಯೂ ನನ್ನ ಪಾತ್ರ ವಿಭಿನ್ನವಾಗಿದೆ. ಅದನ್ನು ಪ್ರೇಕ್ಷಕರೆದುರು ಅನಾವರಣಗೊಳಿಸಲು ಕಾತರಳಾಗಿದ್ದೇನೆ. ಇದೆಲ್ಲವನ್ನೂ ಬಿಡುವೇ ಇಲ್ಲದಂತೆ ಮಾಡಿ ಮುಗಿಸಿದ್ದೇನೆ. ಇದೀಗ ನಾನು ಪ್ರವಾಸ ಹೊರಟಿದ್ದೇನೆ. ಈ ಚಿಕ್ಕ ಬ್ರೇಕ್ ಆದ ನಂತರ ಹೊಸ ಚಿತ್ರದ ವಿವರಗಳೊಂದಿಗೆ ನಿಮ್ಮೆದುರು ಮತ್ತೆ ಬರುತ್ತೇನೆ’ ಎಂಬರ್ಥದಲ್ಲಿ ಹರಿಪ್ರಿಯಾ ಬರೆದುಕೊಂಡಿದ್ದಾರೆ.

     

    ಹರಿಪ್ರಿಯಾ ವರ್ಷದಿಂದೀಚೆಗೆ ಒಂದರ ಹಿಂದೊಂದರಂತೆ ಬಿಡುವೇ ಇರದೇ ನಟಿಸುತ್ತಾ ಬಂದಿದ್ದಾರೆ. ಆದ ಕಾರಣ ಒಂದಷ್ಟು ದಿನ ರಿಲ್ಯಾಕ್ಸ್ ಆಗಲು ಪ್ರವಾಸ ಹೊರಟಿರುವಂತಿದೆ. ಇನ್ನು ಮುಂದೆ ಅವರು ನಟಿಸಿರೋ ಸಾಲು ಸಾಲು ಚಿತ್ರಗಳು ತೆರೆ ಕಾಣಲಿವೆ. ಅದರ ಜೊತೆಗೆ ಈ ಬ್ರೇಕ್ ಮುಗಿಸಿಕೊಂಡು ಅವರು ಮತ್ತೆ ಮರಳಲಿದ್ದಾರೆ.

  • ಬಿಚ್ಚುಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯ

    ಬಿಚ್ಚುಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯ

    ಮೊದಲ ಪೋಸ್ಟರ್ ಮೂಲಕವೇ ಸ್ಯಾಂಡಲ್‍ವುಡ್ ಸಿನಿಮಂದಿಯನ್ನು ಗಮನ ಸೆಳೆದಿದ್ದ ಬಿಚ್ಚು ಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಇದಕ್ಕೆ ಖ್ಯಾತ ಕಾದಂಬರಿಕಾರ ಬಿ.ಎಲ್.ವೇಣು ಚಿತ್ರಕತೆ ಬರೆದಿದ್ದರು. ವಿಶೇಷವೆಂದರೆ ಇದು ಬಿ.ಎಲ್. ವೇಣು ಅವರ ಬಿಚ್ಚುಗತ್ತಿ ಭರಮಣ್ಣ ನಾಯಕ ಕಾದಂಬರಿ ಆಧಾರಿತ ಚಿತ್ರವೂ ಕೂಡ. ವಿಕ್ಟರಿ 2 ಬಳಿಕ ಹರಿ ಸಂತೋಷ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದರು.

    ಇನ್ನು ಬಿಚ್ಚುಗತ್ತಿ ಭರಮಣ್ಣ ನಾಯಕನಾಗಿ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿನಯಿಸುತ್ತಿದ್ದು, ಹರಿಪ್ರಿಯ ಚಿತ್ರದ ನಾಯಕಿಯಾಗಿದ್ದಾರೆ. ಬಹುತೇಕ ವೈವಿಧ್ಯಮಯ ಪಾತ್ರಗಳನ್ನೇ ಇತ್ತೀಚೆಗೆ ಆರಿಸಿಕೊಳ್ಳುತ್ತಿರುವ ಹರಿಪ್ರಿಯಾ ಅವರಿಗೂ ಬಿಚ್ಚುಗತ್ತಿ ಹೊಸ ಅನುಭವ ಕೂಡ. ಇನ್ನು ಬಿಚ್ಚುಗತ್ತಿಯಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರೀನಿವಾಸ್ ಮೂರ್ತಿ, ಕಲ್ಯಾಣಿ, ಶಿವರಾಮ್, ರೇಖಾ, ರಮೇಶ್ ಪಂಡಿತ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

    ಬಿಚ್ಚುಗತ್ತಿ ಚಿತ್ರವು ಶ್ರೀ ಕೃಷ್ಣ ಪ್ರೊಡಕ್ಷನ್‍ನಲ್ಲಿ ನಿರ್ಮಾಣವಾಗಲಿದೆ. ಕೆ.ಎಂ. ಪ್ರಕಾಶ್ ಸಂಕಲನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಎಡ್ವರ್ಡ್ ಕೆನಡಿ ಕಲಾ ನಿರ್ದೇಶಕರಾಗಿ ಬಿಚ್ಚುಗತ್ತಿಯಲ್ಲಿ ಕಾರ್ಯನಿವರ್ಹಿಸಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿರುವುದು ವಿಶೇಷವಾಗಿದೆ. ಈ ಚಿತ್ರವು ಎರಡು ಭಾಗಗಳಲ್ಲಿ ಬರಲಿದ್ದು, ಚಾಪ್ಟರ್ 1 ದಳವಾಯಿ ದಂಗೆಯ ಕಥೆ ಹೇಳುತ್ತದೆ.