Tag: Bhoomi Shetty

  • ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prasanth Varma) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ʻಜೈ ಹನುಮಾನ್ʼ (Jai Hanuman) ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್ಹೀರೋ ಯೂನಿವರ್ಸ್‌ನ 3ನೇ ಸಿನಿಮಾ ಘೋಷಣೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ವರ್ಮಾ. ಇದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯನ್ನು ಹೊಂದಿರಲಿದೆ. ಈ ಚಿತ್ರಕ್ಕೆ ʻಮಹಾಕಾಳಿʼ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

    ಕುಂದಾಪುರದ ಬೆಡಗಿಗೆ ಭೂಮಿ ಶೆಟ್ಟಿ (Bhoomi Shetty) ಮಹಾಕಾಳಿ ಅವತಾರವೆತ್ತಿದ್ದಾರೆ. ಫಸ್ಟ್ ಲುಕ್‌ನಲ್ಲಿ ಭೂಮಿ ಶೆಟ್ಟಿ ಮುಖವನ್ನು ಕೆಂಪು ಹಾಗೂ ಗೋಲ್ಡ್ ಬಣ್ಣದಿಂದ ಅಲಂಕಾರಗೊಳಿಸಲಾಗಿದೆ. ಸಾಂಪ್ರದಾಯಿಕ ಆಭರಣಗಳನ್ನು ತೊಟ್ಟು ದೈವಿಕ ಅನುಭವ ನೀಡುವ ಗೆಟಪ್ ನಲ್ಲಿ ಭೂಮಿ ಕಾಣಿಸಿಕೊಂಡಿದ್ದಾರೆ.

    ಪ್ರಶಾಂತ್ ವರ್ಮಾ ತಮ್ಮದೇ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿ ಮಹಾಕಾಳಿ ಚಿತ್ರ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಈ ಹಿಂದೆ ಮಾರ್ಟಿನ್ ಲೂಥರ್ ಕಿಂಗ್ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಕೊಲ್ಲೂರು, ಮಹಾಕಾಳಿ ಸಾರಥ್ಯ ವಹಿಸಿಕೊಂಡಿದ್ದಾರೆ.

    ಹಾಗಾದರೆ ಮಹಾಕಾಳಿ ಸಿನಿಮಾದಲ್ಲಿ ಏನಿರಲಿದೆ? ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿಯ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಮಹಾಕಾಳಿ ಸಿನಿಮಾವನ್ನು ಆರ್ಕೆಎಂಡಿ ಸ್ಟುಡಿಯೋಸ್ ಬ್ಯಾನರ್ ಅಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾವನ್ನು ಭಾರತೀಯ ಭಾಷೆ ಮಾತ್ರವಲ್ಲದೆ ಇತರ ವಿದೇಶಿ ಭಾಷೆಗಳಲ್ಲಿಯೂ ಚಿತ್ರ ಮೂಡಿ ಬರಲಿದೆ. ಹನುಮಾನ್ ಸಿನಿಮಾ ಜಪಾನ್ ಹಾಗೂ ಇತರ ಭಾಷೆಗಳಲ್ಲಿ ಭರ್ಜರಿ ಹಿಟ್ ಕಂಡಿತ್ತು.

  • Kendada Seragu: ‘ಈ ಹುಡುಗಿ ಎಷ್ಟು ಚೆಂದ’ ಎಂದು ಹೆಜ್ಜೆ ಹಾಕಿದ ಹರೀಶ್ ಅರಸು-ಪೂರ್ಣಿಮಾ

    Kendada Seragu: ‘ಈ ಹುಡುಗಿ ಎಷ್ಟು ಚೆಂದ’ ಎಂದು ಹೆಜ್ಜೆ ಹಾಕಿದ ಹರೀಶ್ ಅರಸು-ಪೂರ್ಣಿಮಾ

    ಸ್ಯಾಂಡಲ್‌ವುಡ್ ಕನಸಿನ ರಾಣಿ ಮಾಲಾಶ್ರೀ (Malashree) ನಟನೆಯ ಕೆಂಡದ ಸೆರಗು (Kendada Seragu) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾದಂಬರಿ ಆಧಾರಿತ ಈ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಮಸ್ತ್ ಆಗಿರುವ ಚೆಂದದ ಹುಡುಗಿ ಜೊತೆ ಯುವ ನಟ ಹರೀಶ್ ಅರಸು (Harish Arasu) ಹೆಜ್ಜೆ ಹಾಕಿದ್ದಾರೆ.

    ‘ಕೆಂಡದ ಸೆರಗು’ ಚಿತ್ರವನ್ನು ನಿರ್ದೇಶಿಸಿರುವ ರಾಕಿ ಸೋಮ್ಲಿ ‘ಈ ಹುಡುಗಿ ಎಷ್ಟು ಚೆಂದ’ ಹಾಡಿಗೆ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಕಂಠ ಕುಣಿಸಿದ್ದು, ವೀರೇಶ್ ಕಬ್ಲಿ ಟ್ಯೂನ್ ಹಾಕಿದ್ದಾರೆ. ಪಿಆರ್‌ಒ ಕಂ ಯುವ ನಟ ಹರೀಶ್ ಅರಸು ಹಾಗೂ ಪೂರ್ಣಿಮಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ವೈರಲ್ ಆಯಿತು ಭಟ್ಟರ ‘ಕರಟಕ ದಮನಕ’ ಸಿನಿಮಾ ಪೋಸ್ಟರ್

    ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ‘ಬಿಗ್‌ ಬಾಸ್‌’ ಖ್ಯಾತಿಯ ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.

    ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎದೆ ಕಾಣುವಂತೆ ಬೋಲ್ಡ್ ಆಗಿ ಬಂದ ಭೂಮಿ ಶೆಟ್ಟಿಗೆ ನೆಟ್ಟಿಗರಿಂದ ಸಂಸ್ಕಾರದ ಪಾಠ

    ಎದೆ ಕಾಣುವಂತೆ ಬೋಲ್ಡ್ ಆಗಿ ಬಂದ ಭೂಮಿ ಶೆಟ್ಟಿಗೆ ನೆಟ್ಟಿಗರಿಂದ ಸಂಸ್ಕಾರದ ಪಾಠ

    ಕಿರುತೆರೆಯ ‘ಕಿನ್ನರಿ'(Kinnari)  ಭೂಮಿ ಶೆಟ್ಟಿ (Bhoomi Shetty) ಅವರು ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಭಾರೀ ಸದ್ದು ಮಾಡ್ತಿದ್ದಾರೆ. ಇಕ್ಕಟ್ ಸುಂದರಿಯ ಹಾಟ್ ಅವತಾರಕ್ಕೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎದೆ ಟ್ಯಾಟೂ ಕಾಣುವ ಹಾಗೇ ನಟಿ ಕಾಣಿಸಿಕೊಂಡಿದ್ದಾರೆ. ಭೂಮಿ ಶೆಟ್ಟಿಯನ್ನ ಸಖತ್ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ:ನಯನತಾರಾ ಪತಿಗೆ ‘ಹುಷಾರ್’ ಎಂದ ಶಾರುಖ್ ಖಾನ್

    ಕನ್ನಡದ ‘ಕಿನ್ನರಿ’ ಸೀರಿಯಲ್ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ಭೂಮಿ ಶೆಟ್ಟಿ ಅವರು ಬಿಗ್ ಬಾಸ್ (Bigg Boss House) ಮನೆಗೆ ಕಾಲಿಟ್ಟರು. ಶೈನ್ ಶೆಟ್ಟಿ, ದೀಪಿಕಾ ದಾಸ್, ಚಂದನಾ ಅನಂತಕೃಷ್ಣ ಇದ್ದ ಸೀಸನ್‌ನಲ್ಲಿ ತಾವು ಒಬ್ಬ ಗಟ್ಟಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಈ ಕುಂದಾಪುರದ ಶೆಟ್ರ ಹುಡುಗಿಗೆ ಅಪಾರ ಅಭಿಮಾನಿಗಳ ಬಳಗವಿದೆ.

    ‘ಇಕ್ಕಟ್’ (Ikkat)ಎಂಬ ಸಿನಿಮಾದಲ್ಲಿ ಲಾಕ್‌ಡೌನ್ ಕುರಿತ ನೈಜ ಕಥೆಯಲ್ಲಿ ಭೂಮಿ ಶೆಟ್ಟಿ ಸದ್ದು ಮಾಡಿದ್ದರು. ಮೊದಲ ಸಿನಿಮಾದಲ್ಲೇ ತನ್ನ ಪ್ರತಿಭೆ ಎಂತಹದ್ದು ಎಂದು ನಟಿ ಸಾಬೀತುಪಡಿಸಿದ್ದರು. ಹೊಸ ಬಗೆಯ ಪಾತ್ರಗಳನ್ನ ನಟಿ ಎದುರು ನೋಡ್ತಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ಮಾಡ್ತಿದ್ದಾರೆ. ಜಿಮ್, ವರ್ಕೌಟ್ ಅಂತಾ ಭೂಮಿ ಬೆವರಿಳಿಸುತ್ತಿದ್ದಾರೆ.

    ಇತ್ತೀಚಿಗೆ ಭೂಮಿ ಶೆಟ್ಟಿ ಎದೆ ಕಾಣುವ ಹಾಗೇ ಬಟ್ಟೆ ಧರಿಸಿದ್ದರು. ನಟಿಯ ಹಾಟ್ ಲುಕ್ ನೋಡಿ ಸರಿಯಾಗಿ ಬಟ್ಟೆ ಹಾಕಮ್ಮ ಅಂತಾ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾಫಿ ಬಣ್ಣದ ಟಾಪ್‌ಗೆ & ಸ್ಕರ್ಟ್ ಧರಿಸಿ ಬಂದ ಭೂಮಿ ಕಪ್ಪು ಬಣ್ಣ ಚಸ್ಮಾ ಧರಿಸಿದ್ದರು. ನಟಿಯ ಈ ಲುಕ್, ಪಡ್ಡೆಹುಡುಗರ ಕಣ್ಣು ಕುಕ್ಕುವಂತಿದೆ. ಹಾಗಾಗಿ ನಿಮಗೆ ಮಾನ ಮರ್ಯಾದೆ ಏನು ಇಲ್ವಾ? ಪಬ್ಲಿಕ್ ಪ್ಲೇಸ್‌ನಲ್ಲಿ ಹೀಗೆ ಬರೋದಾ ಅಂತಾ ನಟಿಗೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ನಟಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

    `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

    ಕಿನ್ನರಿ, (Kinnari) ಬಿಗ್ ಬಾಸ್ (Bigg Boss) ಮೂಲಕ ಗುರುತಿಸಿಕೊಂಡಿರುವ ಭೂಮಿ ಶೆಟ್ಟಿ (Bhoomi Shetty) ಸಿನಿಮಾಗಳಲ್ಲಿ ಮಿಂಚಲು ಫಿಟ್‌ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಮ್ಮ ಫಿಟ್‌ನೆಸ್‌ಗಾಗಿ ನಟಿ ಭರ್ಜರಿ ವರ್ಕೌಟ್ ಮಾಡ್ತಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡಿದೆ.

     

    View this post on Instagram

     

    A post shared by ಭೂMee (@bhoomi_shettyofficial)

    ಕುಂದಾಪುರದ (Kundapura) ಚೆಲುವೆ ಭೂಮಿ ಶೆಟ್ಟಿ (Bhoomi Shetty) ದೊಡ್ಮನೆಯಲ್ಲಿ ಖಡಕ್ ಹುಡುಗಿಯಾಗಿ ಯಾವ ಹುಡುಗರಿಗೂ ಕಮ್ಮಿಯಿಲ್ಲದಂತೆ ಆಟ ಅಡಿದ್ದರು. ಈಗ ನಟಿ ಪೊಗರ್‌ದಸ್ತ್ ಆಗಿ ಬಾಡಿ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಭೂಮಿ ಅವರ ಫಿಟ್ನೆಸ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಭೂಮಿ ಅವರ ಖಡಕ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ

     

    View this post on Instagram

     

    A post shared by ಭೂMee (@bhoomi_shettyofficial)

    ಇನ್ನೂ ಭೂಮಿ ಶೆಟ್ಟಿ `ಕೆಂಡದ ಸೆರಗು’ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಕೂಡ ರಿವೀಲ್ ಆಗಿದೆ. ನಟಿಯ ಲುಕ್ ನೋಡಿ, ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಚಿನ ಸುಳಿಯಲಿ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ

    ಸಂಚಿನ ಸುಳಿಯಲಿ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ

    ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪವನ್ ಕುಮಾರ್ ಜೊತೆಯಾಗಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ‘ಸಂಚಿನ ಸುಳಿಯಲಿ’ ಎಂದು ಹೆಸರಿಡಲಾಗಿದೆ. ಭಾನುವಾರದಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸ್ಟಾರ್ ನಿರ್ದೇಶಕ ನಂದಕಿಶೋರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಧರ್ಮಸ್ಥಳದ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎನ್.ನಾಗೇಗೌಡ್ರು ಮತ್ತು ಮೈಸೂರಿನ ಫ್ಯಾಶನ್ ಡಿಸೈನರ್ ಹಂಸರವಿಶಂಕರ್ ಜಂಟಿಯಾಗಿ ಮಾನ್ಯ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಅನಿಲ್‌ ಮೂಡಲಗಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ’ಅಚಲ’ ’ಯಾರವಳು’ ಹಾಗೂ ಬಿಡುಗಡೆಯಾಗಬೇಕಾದ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿರುವ ಚನ್ನರಾಯಪಟ್ಟಣದ ಪ್ರಮೋದ್.ಎಸ್.ಆರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    2014ರಂದು ಮೈಸೂರಿನಲ್ಲಿ ನಡೆದ ಘಟನೆಯೊಂದು ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅದರ ಏಳೆಯನ್ನು ತೆಗೆದುಕೊಂಡು ನಿರ್ದೇಶಕರು ಕಥೆಯನ್ನು ಏಣೆದಿದ್ದಾರೆ. ಶೀರ್ಷಿಕೆ ಹೇಳುವಂತೆ ಪ್ರೀತಿಯಲ್ಲಿ ಮುಳುಗಿದ ಕಾಲೇಜು ಹುಡುಗರ ತಂಡವೊಂದು ನಿರ್ಜನ ಪ್ರದೇಶಕ್ಕೆ ತೆರೆಳುತ್ತಾರೆ. ಅಲ್ಲಿಗೆ ಹೋದಾಗ ಸಂಚಿನ ಸುಳಿಯಲ್ಲಿ ಸಿಲುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹುಡುಗ ಹುಡುಗಿಯರ ಪರಿಸ್ಥಿತಿ ಏನಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಬರುತ್ತಾರಾ? ಅದನ್ನು ಭೇದಿಸುತ್ತಾರಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

    ’ಪುಟ್ಟಕ್ಕನ ಮಕ್ಕಳು’ ಧಾರವಾಹಿ ಖ್ಯಾತಿಯ ಪವನ್‌ಕುಮಾರ್ ನಾಯಕ. ’ಕಿನ್ನರಿ’ ಬಿಗ್ ಬಾಸ್ ಸ್ಪರ್ಧಿ ಭೂಮಿಶೆಟ್ಟಿ ನಾಯಕಿ. ಗೆಳಯನಾಗಿ ನವೀನ್, ಸ್ವಪ್ನಶೆಟ್ಟಿಗಾರ್ ಮತ್ತೋಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಶೋಭರಾಜ್, ಕಿಲ್ಲರ್‌ವೆಂಕಟೇಶ್ ಹಾಗೂ ಹೆಸರು ಮಾಡಿರುವ ಪೋಷಕ ಕಲಾವಿದರೊಂದಿಗೆ ಮಾತು ಕತೆ ನಡೆಯುತ್ತಿದೆ. ಖಚಿತವಾದ ನಂತರ ಮಾಹಿತಿ ನೀಡಲಾಗುವುದು. ಕಥೆಗ ಅನುಗುಣವಾಗಿ ಶೇಕಡ 90 ಚಿತ್ರೀಕರಣವನ್ನು ಕಾಡಿನ ಸ್ಥಳವಾದ ಉಡುಪಿ, ಉಳಿದುದನ್ನು ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ನಡೆಸಲಾಗುವುದು. ಮೂರು ಹಾಡುಗಳಿಗೆ ಕೆವೀನ್.ಎಂ ಸಂಗೀತ, ವಿನೋದ್.ಆರ್ ಛಾಯಾಗ್ರಹಣ ಚಿತ್ರಕ್ಕಿದೆ.  ಅಂದುಕೊಂಡಂತೆ ಆದರೆ ಸಿನಿಮಾವನ್ನು ಡಿಸೆಂಬರ್‌ದಲ್ಲಿ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.

    Live Tv

  • ಡಿಗ್ರಿ ಇದ್ರೆ ಮಾತ್ರ ಜೀವನ ಅಲ್ಲ, ಬದುಕೋದನ್ನ ನಾವೇ ಕಲಿಯಬೇಕು!

    ಡಿಗ್ರಿ ಇದ್ರೆ ಮಾತ್ರ ಜೀವನ ಅಲ್ಲ, ಬದುಕೋದನ್ನ ನಾವೇ ಕಲಿಯಬೇಕು!

    ಕಿನ್ನರಿ ಧಾರಾವಾಹಿ ಹಾಗೂ ಬಿಗ್‍ಬಾಸ್ ಸೀಸನ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಅವರ ಹೊಸ ಪ್ರಾಜೆಕ್ಟ್ ಹಾಗೂ ಬಿಗ್‍ಬಾಸ್ ನಂತರದ ಜೀವನದ ಬಗ್ಗೆ ಒಂದಿಷ್ಟು ವಿಚಾರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

    • ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್?
    ನಾನು ಸೂಪರ್ ಆಗಿದ್ದೀನಿ. ಲೈಫ್ ಬೊಂಬಾಟ್ ಆಗಿದೆ. ಬಿಗ್‍ಬಾಸ್‍ನಿಂದ ಬಂದ ಮೇಲೆ ಒಂದಿಷ್ಟು ಹೊಸ ಹೊಸ ಅವಕಾಶಗಳು ಸಿಕ್ತಿವೆ. ಸದ್ಯಕ್ಕೆ ಕೊರೊನಾದಿಂದ ಪಾರಾದ್ರೆ ಸಾಕಾಗಿದೆ.

    • ಬಿಗ್‍ಬಾಸ್ ಮುಗಿದ ನಂತರ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ್ರಾ?
    ಅವಕಾಶಗಳು ಬರ್ತಾ ಇದೆ. ಒಂದಿಷ್ಟು ಶೋಗಳು ಬಂದಿವೆ ಫೈನಲ್ ಆದ ಬಳಿಕ ತಿಳಿಸುತ್ತೇನೆ. ಸದ್ಯಕ್ಕೆ ಧಾರಾವಾಹಿ ಬಿಟ್ಟು ಸಿನಿಮಾ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಅನ್‍ಲಾಕ್ ಮೂರನೇ ಹಂತದಲ್ಲಿ ಒಂದು ಸಿನಿಮಾ ಒಪ್ಪಿಕೊಂಡೆ. ಇಕ್ಕಟ್ ಎಂದು ಆ ಸಿನಿಮಾ ಹೆಸರು. ಕಾಮಿಡಿ ಥ್ರಿಲ್ಲರ್ ಇರೋ ಸಿನಿಮಾ. ಇದು ನನ್ನ ಮೊದಲ ಸಿನಿಮಾ. ಶೂಟಿಂಗ್ ಕಂಪ್ಲೀಟ್ ಆಗಿ ಡಬ್ಬಿಂಗ್ ಕೂಡ ಮುಗಿದಿದೆ. ನಾಗ್ ಭೂಷಣ್ ಸರ್ ಹಾಗೂ ನಾನು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ.

    • ಎಜುಕೇಷನ್ ಅರ್ಧಕ್ಕೆ ನಿಲ್ಲಿಸಿದ್ದೀರಾ ಪೂರ್ಣ ಮಾಡೋ ಯೋಚನೆ ಇದಿಯಾ?
    ನಾನು ಎಂಜಿನಿಯರಿಂಗ್ ಅರ್ಧಕ್ಕೆ ನಿಲ್ಲಿಸಿದೆ. ನಟನೆ ಮಾಡೋ ಆಸೆಯಿಂದ ಎಜುಕೇಶನ್‍ಗೆ ಫುಲ್ ಸ್ಟಾಪ್ ಇಟ್ಟೆ. ಅದನ್ನು ಪೂರ್ಣ ಮಾಡೋ ಬಗ್ಗೆ ಈಗ ಯೋಚನೆ ಇಲ್ಲ. ನನಗೆ ನಾನು ಎಲ್ಲಿ ಹೋದ್ರು ಸರ್ವೈವ್ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಇದೆ. ಡಿಗ್ರಿ ಇದ್ರೆ ಮಾತ್ರ ಜೀವನದಲ್ಲಿ ಮುಂದೆ ಬರೋಕೆ ಆಗುತ್ತೆ ಅನ್ನೋದು ನನ್ನ ಪ್ರಕಾರ ತಪ್ಪು. ಓದು ಜೀವನವನ್ನ ಹೇಳಿಕೊಡೋದಿಲ್ಲ. ಜೀವನಕ್ಕೆ ಏನ್ ಬೇಕು ಅದನ್ನ ನಾವು ಕಲಿತುಕೊಂಡಿರಬೇಕು, ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು. ಎಲ್ಲಿ ಹೋದ್ರು ಬದುಕಿ ಬರೋವಷ್ಟು ಧೈರ್ಯ, ಸಾಧಿಸಿ ಬರುವ ಛಲ ನನಗಿದೆ. ಹಾಗಂತ ಓದಬೇಡಿ ಅಂತ ನಾನು ಯಾರಿಗೂ ಹೇಳೋದಿಲ್ಲ. ನಮಗೆ ಏನ್ ಖುಷಿ ಕೊಡುತ್ತೆ ಅದನ್ನ ಮಾಡಬೇಕು ಅದು ನನ್ನ ಪಾಲಿಸಿ.

    • ನಿಮ್ಮ ಕನಸುಗಳೇನು. ಏನಾಗಬೇಕು ಅನ್ನೋದು ನಿಮ್ಮ ಆಸೆ?
    ನನಗೆ ಇಂತಹದ್ದೇ ಕನಸು ಅಂತ ಏನಿಲ್ಲ. ಜೀವನ ಹೇಗೆ ಬರುತ್ತೋ ಆ ರೀತಿ ಸ್ವೀಕರಿಸುತ್ತೇನೆ. ನನ್ನ ಮನಸ್ಸಿಗೆ ಸರಿ ಅನ್ಸಿದ್ದನ್ನ ನಾನು ಮಾಡುತ್ತೇನೆ. ಫೈನಲ್ ಆಗಿ ನಾನು ಮಾಡೋ ಕೆಲಸ ನನ್ನ ಮನಸ್ಸಿಗೆ ಖುಷಿ, ತೃಪ್ತಿ ನೀಡಬೇಕು ಅಷ್ಟೇ. ಇದನ್ನೇ ಮಾಡಬೇಕು, ನಾನು ಹೀಗೆ ಆಗಬೇಕು ಅನ್ನೋದು ಏನಿಲ್ಲ.

    • ನಿಮಗೆ ಬೈಕ್ ರೈಡಿಂಗ್ ಅಂದ್ರೆ ಬಹಳ ಇಷ್ಟ ಅಂತೆ ಹೌದಾ?
    ಹೌದು..ನನಗೆ ತುಂಬಾ ಇಷ್ಟ. ಬೈಕ್ ರೈಡ್ ಮಾಡಿಕೊಂಡು ಟ್ರಾವೆಲ್ ಮಾಡಬೇಕು ಅನ್ನೋ ಆಸೆ ಒಂದಿದೆ. ಇಷ್ಟು ವರ್ಷ ಶೂಟಿಂಗ್ ಶೂಟಿಂಗ್ ಅಂತ ಬ್ಯುಸಿ ಇದ್ದೆ. ಆದ್ರೀಗ ಅದೆಲ್ಲವನ್ನು ಒಂದೊಂದಾಗಿ ಈಡೇರಿಸಿಕೊಳ್ಳಬೇಕು. ಸದ್ಯದಲ್ಲೇ ಹೊಸ ಬೈಕ್ ತೆಗೆದುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ. ಅದರಲ್ಲಿ ಎಲ್ಲ ಕಡೆ ಟ್ರಾವೆಲ್ ಮಾಡಬೇಕು ಅಂದ್ಕೊಡಿದ್ದೀನಿ.

    • ಬಿಗ್‍ಬಾಸ್ ಶೋ ಮಿಸ್ ಮಾಡಿಕೊಳ್ತೀರಾ?
    ಖಂಡಿತಾ, ಬಿಗ್‍ಬಾಸ್ ಶೋ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅದೊಂದು ನೆನಪುಗಳ ಹೂರಣ. ಅದನ್ನು ನಾನು ಯಾವಾಗಲೂ ಮರೆಯೋದಿಲ್ಲ. ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಅಲ್ಲಿ ಮಾಡಿದ ಟಾಸ್ಕ್‍ಗಳು, ತರ್ಲೆ, ತುಂಟಾಟಗಳನ್ನು ಈಗಲೂ ನೆನಪು ಮಾಡಿಕೊಂಡು ನಗುತ್ತೇನೆ. ಲಾಕ್‍ಡೌನ್ ಟೈಂನಲ್ಲಿ ಬಿಗ್‍ಬಾಸ್ ಶೋ ತುಂಬಾ ಮಿಸ್ ಮಾಡಿಕೊಂಡೆ. ಈ ಟೈಂನಲ್ಲಿ ಬಿಗ್‍ಬಾಸ್ ಇರಬಾರದಿತ್ತಾ ಎಂದು ತುಂಬಾ ಅಂದ್ಕೊಳ್ತಾ ಇದ್ದೆ.

    • ಬಿಗ್‍ಬಾಸ್ ಮುಗಿದ ಮೇಲೆ ಎಲ್ಲರೂ ಭೇಟಿಯಾಗಿದ್ರಾ?
    ಹೌದು, ಭೇಟಿಯಾಗ್ತಾನೆ ಇರ್ತೀವಿ. ಒಮ್ಮೊಮ್ಮೆ ಎಲ್ಲರೂ ಸಿಗಲು ಆಗೋದಿಲ್ಲ. ಆದ್ರೆ ಎಲ್ಲರೂ ಸಂಪರ್ಕದಲ್ಲಿದ್ದೇವೆ. ಭೇಟಿಯಾದಾಗ ಬಿಗ್‍ಬಾಸ್‍ನಲ್ಲಿ ಮಾಡಿದ ಟಾಸ್ಕ್, ತಮಾಷೆಗಳ ಬಗ್ಗೆ ಮಾತನಾಡುತ್ತೇವೆ. ಒಬ್ಬರನ್ನೊಬ್ಬರು ರೇಗಿಸಿಕೊಳ್ಳುತ್ತೇವೆ. ಇತ್ತೀಚೆಗಷ್ಟೇ ಶೈನ್ ಶೆಟ್ಟಿ ಗಲ್ಲಿ ಕಿಚನ್ ಓಪನ್ ಮಾಡುವಾಗ ಎಲ್ಲರೂ ಭೇಟಿಯಾಗಿದ್ವಿ.

    • ಕಿನ್ನರಿ ಧಾರಾವಾಹಿ ನಿಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಏನ್ ಹೇಳ್ತೀರಾ ಇದ್ರ ಬಗ್ಗೆ?
    ಸಿನಿಮಾ ಮತ್ತು ಸೀರಿಯಲ್ ಒಂದು ಬೇರೇಯದ್ದೇ ಪ್ರಪಂಚ ಆ ಪ್ರಪಂಚವನ್ನ ನನಗೆ ಕಿನ್ನರಿ ಪರಿಚಯಿಸಿತು. ಕಿನ್ನರಿ ಧಾರಾವಾಹಿ ಮಣಿ ಆಗಿ, ಬಿಗ್‍ಬಾಸ್ ಶೋ ಭೂಮಿ ಶೆಟ್ಟಿಯಾಗಿ ನನ್ನನ್ನು ಪರಿಚಯಿಸಿತು. ಹೊಸ ಪ್ರಪಂಚವನ್ನು ಕಿನ್ನರಿ ಧಾರಾವಾಹಿ ನನ್ನ ಮುಂದೆ ತೆರೆದಿಡ್ತು. ನನ್ನ ಪಾತ್ರದಿಂದ ಜನಪ್ರಿಯತೆಯೂ ಸಿಕ್ತು. ಬಿಗ್‍ಬಾಸ್ ಶೋಗೆ ಹೋಗಲು ಅವಕಾಶ ಕೂಡ ಮಾಡಿಕೊಡ್ತು. ಜನ ಎಲ್ಲೇ ಹೋದ್ರು ಕಿನ್ನರಿ ಮಣಿ ಅಂತಾನೇ ಗುರುತಿಸುತ್ತಾರೆ. ಈಗಲೂ ಅಷ್ಟೇ ಒಂದಿಷ್ಟು ಅವಕಾಶಗಳು ಸಿಗ್ತಿವೆ ಅಂದ್ರೆ ಅದು ಕಿನ್ನರಿ ಧಾರಾವಾಹಿಯಿಂದ ಸಿಕ್ಕ ಖ್ಯಾತಿಯಿಂದ. ಆ ಬಗ್ಗೆ ನನಗೆ ಹೆಮ್ಮೆ ಇದೆ.

    • ನೀವು ಗದ್ದೆ ನಾಟಿ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಮೊದಲಿನಿಂದಲೂ ಕೆಲಸ ಮಾಡಿ ಅಭ್ಯಾಸ ಇತ್ತಾ?
    ಹೌದು, ಆ ವಿಡಿಯೋ ತುಂಬಾ ವೈರಲ್ ಆಗಿತ್ತು. ಅನ್‍ಲಾಕ್ ಆದಾಗ ಊರಿಗೆ ಹೊಗಿದ್ದೆ. ಆ ಸಮಯದಲ್ಲಿ ಗದ್ದೆ ಕೆಲಸ ನಡೆಯುತ್ತಿತ್ತು ನಾನು ಗದ್ದೆಗಿಳಿದು ನಾಟಿ ಮಾಡಿದೆ. ಇದ್ರಿಂದ ನನ್ನ ಪೋಷಕರಿಗೂ ಸಹಾಯ ಆಯ್ತು. ನಮ್ಮನೆ ಕೆಲಸ ನಾವು ಮಾಡೋದ್ರಲ್ಲಿ ತಪ್ಪೇನಿದೆ ಅನ್ನೋದು ನನ್ನ ಭಾವನೆ. ಮೊದಲಿನಿಂದಲೂ ಮಾಡಿ ಅಭ್ಯಾಸ ಇರಲಿಲ್ಲ. ಆದ್ರೆ ಕೆಲಸದ ಬಗ್ಗೆ ಗೊತ್ತಿತ್ತು. ನಾನು ಹುಟ್ಟಿ ಬೆಳೆದಿದ್ದು ಅಲ್ಲೆ ಆದ್ದರಿಂದ ಗದ್ದೆ, ತೋಟಕ್ಕೆ ಓಡಾಡಿ ಚಿಕ್ಕಪುಟ್ಟ ಕೆಲಸ ಮಾಡಿ ಅಭ್ಯಾಸ ಇತ್ತು. ಕೃಷಿ ಕೆಲಸದಲ್ಲಿ ನಮ್ಮ ಜೀವನಕ್ಕೆ ಬೇಕಾದ ತುಂಬಾ ಪಾಠ ಕಲಿಯೋದಿದೆ. ನನಗೆ ಆ ಕೆಲಸ ತುಂಬಾ ಖುಷಿ ಕೊಡುತ್ತೆ.

    • ನಿಮ್ಮ ತಂದೆ ತಾಯಿ ನಿಮ್ಮ ಬೆಳವಣಿಗೆ ನೋಡಿ ಏನ್ ಹೇಳ್ತಾರೆ?
    ಮೊದಲು ನಾನು ನಟನೆಗೆ ಬರಬೇಕಂದಾಗ ಬೇಡ ಎಂದು ವಿರೋಧ ಮಾಡಿದ್ರು. ತಂದೆ-ತಾಯಿಯಾಗಿ ಅವರಿಗಿರುವ ಆತಂಕವನ್ನು ಹೊರಹಾಕಿದ್ರು. ಆದ್ರೆ ಅವರಿಗೆ ಗೊತ್ತಿತ್ತು ನಾನು ಸಾಧಿಸುತ್ತೇನೆ ಎಂದು. ಕಿನ್ನರಿಯಿಂದ ಸಿಕ್ಕ ಜನಪ್ರಿಯತೆಯಿಂದ ತುಂಬಾ ಖುಷಿ ಪಟ್ರು. ಬಿಗ್‍ಬಾಸ್‍ಗೆ ಅವಕಾಶ ಸಿಕ್ಕಾಗಲೂ ನನಗಿಂತ ಅವರೇ ತುಂಬಾ ಖುಷಿಪಟ್ಟಿದ್ರು. ನನ್ನ ಮೇಲೆ ಅವರಿಗೆ ಹೆಮ್ಮೆ ಇದೆ.

    • ಬಿಡುವಿನ ವೇಳೆಯಲ್ಲಿ ಏನ್ ಮಾಡ್ತೀರಾ?
    ಬಿಡುವು ಸಿಕ್ಕಾಗೆಲ್ಲ ನನ್ನ ಪ್ರೀತಿಯ ನಾಯಿಗಳಾದ ಹೀರೋ ಮತ್ತು ಕೂಪರ್ ಜೊತೆ ಕಾಲ ಕಳೆಯುತ್ತೇನೆ. ಪುಸ್ತಕ ಓದುತ್ತೀನಿ, ಈ ನಡುವೆ ಫಿಟ್ನೆಸ್ ಕಡೆ ಸ್ವಲ್ಪ ಗಮನ ಹರಿಸುತ್ತಿದ್ದೇನೆ.

    • ನಿಮ್ಮ ಫೇವರೇಟ್ ಫುಡ್ ಯಾವುದು, ಅಡುಗೆ ಮಾಡೋಕೆ ಬರುತ್ತಾ?
    ಫಿಶ್ ನನ್ನ ಆಲ್ ಟೈಂ ಫೇವರೇಟ್ ಫುಡ್. ಫಿಶ್ ರೆಸಿಪಿ ಮಾಡೋಕೆ ಬರುತ್ತೆ. ಅದನ್ನು ಬಿಟ್ರೆ ಬೇರೆ ಯಾವುದೇ ಅಡಿಗೆ ಮಾಡಲು ನನಗೆ ಬರೋದಿಲ್ಲ.

    • ಮತ್ತೆ ಭೂಮಿ ಶೆಟ್ಟಿಯನ್ನು ಧಾರಾವಾಹಿಗಳಲ್ಲಿ ಕಾಣಬಹುದಾ?
    ಸದ್ಯಕ್ಕೆ ಸಿನಿಮಾ ಕಡೆ ಗಮನ ಹರಿಸುತ್ತಿದ್ದೇನೆ. ಧಾರಾವಾಹಿಯಲ್ಲಿ ನಟಿಸೋ ಆಲೋಚನೆ ಸದ್ಯದ ಮಟ್ಟಿಗೆ ಇಲ್ಲ. ಸಿನಿಮಾ ಅವಕಾಶಗಳು ಬರ್ತಿವೇ ಆದ್ರೆ ನನಗೆ ಇಷ್ಟವಾಗೋ ಕಥೆ, ಪರ್ಫಾಮೆನ್ಸ್ ಇರುವಂತ ಪಾತ್ರಗಳಿಗಾಗಿ ನಾನು ಕಾಯುತ್ತಿದ್ದೇನೆ.

  • ಗ್ರ್ಯಾಂಡ್ ಫಿನಾಲೆಯಲ್ಲಿ ಭೂಮಿ ಔಟ್ – 1 ಲಕ್ಷ ಬಹುಮಾನ

    ಗ್ರ್ಯಾಂಡ್ ಫಿನಾಲೆಯಲ್ಲಿ ಭೂಮಿ ಔಟ್ – 1 ಲಕ್ಷ ಬಹುಮಾನ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಗ್ಯ್ರಾಂಡ್ ಫಿನಾಲೆಯಲ್ಲಿ ಮೊದಲನೆಯದಾಗಿ ಭೂಮಿ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ.

    ಶನಿವಾರ ಗ್ರ್ಯಾಂಡ್ ಫಿನಾಲೆಯಲ್ಲಿದ್ದ ಐವರಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಎಲಿಮಿನೇಟ್ ಆಗಿದ್ದಾರೆ. ಭೂಮಿ ಬಿಗ್‍ಬಾಸ್ ಮನೆಯಲ್ಲಿ ಕಿರಿಯ ಸದಸ್ಯರಾಗಿದ್ದರೂ ಒಳ್ಳೆಯ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಬಿಗ್‍ಬಾಸ್ ಯಾವುದೇ ಫಿಸಿಕಲ್ ಟಾಸ್ಕ್ ನೀಡಿದರೂ ಮನೆಯ ಗಂಡುಮಕ್ಕಳಿಗೂ ಕೂಡ ಕಾಂಪಿಟೇಶನ್ ಕೊಟ್ಟಿದ್ದರು.

    ಭೂಮಿ ಶೆಟ್ಟಿ ಕೊನೆಯ ಹಂತದವರೆಗೂ ಎಲ್ಲರ ಮನಗೆದ್ದು, ವೀಕ್ಷಕರಿಂದ ವೋಟ್ ಪಡೆದು ಫಿನಾಲೆ ತಲುಪಿದ್ದರು. ಗ್ಯ್ರಾಂಡ್ ಫಿನಾಲೆಯಲ್ಲಿ ಮೊದಲನೆಯದಾಗಿ ಎಲಿಮಿನೇಟ್ ಆಗಿದ್ದಾರೆ. ಭೂಮಿ ಶೆಟ್ಟಿ ಕೆಲವು ವಾರಗಳು ತುಂಬಾ ಸೈಲೆಂಟ್ ಆಗಿ ಇದ್ದರು. ಹೀಗಾಗಿ ಅವರು ಗೆಲ್ಲುವ ಅವಕಾಶ ಕಳೆದುಕೊಂಡರು ಎನ್ನಲಾಗಿದೆ.

    ಭೂಮಿ ಶೆಟ್ಟಿ ಎಲಿಮಿನೇಟ್ ಆಗಿ ಬಿಗ್‍ಬಾಸ್ ವೇದಿಕೆಯ ಮೇಲೆ ಬಂದು ಬಿಗ್‍ಬಾಸ್ ಮನೆಯಲ್ಲಿದ್ದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ಭೂಮಿಗೆ ಅಯ್ಯಂಗಾರ್ ಪುಳಿಯೋಗರೆ ಮಾಲೀಕರು ಬಂದು ಒಂದು ಲಕ್ಷ ಬಹುಮಾನ ಕೊಟ್ಟಿದ್ದಾರೆ. ಇನ್ನೂ ವಾಸುಕಿ ವೈಭವ್, ಶೈನ್ ಶೆಟ್ಟಿ ಮತ್ತು ಕುರಿ ಪ್ರತಾಪ್ ಟಾಪ್ ಮೂರು ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ಅವರ ಪೈಕಿ ಭಾನುವಾರದ ಫಿನಾಲೆ ಎಪಿಸೋಡ್‍ನ ಆರಂಭದಲ್ಲಿಯೇ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಆ ಇಬ್ಬರಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  • ಭೂಮಿಗಾಗಿ ಹುಡ್ಗಿ ವೇಷ ಹಾಕಿದ ಶೈನ್, ವಾಸುಕಿ, ಪ್ರತಾಪ್

    ಭೂಮಿಗಾಗಿ ಹುಡ್ಗಿ ವೇಷ ಹಾಕಿದ ಶೈನ್, ವಾಸುಕಿ, ಪ್ರತಾಪ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳು ಬಿಗ್‍ಬಾಸ್‍ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಭೂಮಿ ಶೆಟ್ಟಿಗಾಗಿ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಹುಡುಗಿಯರ ವೇಷ ಹಾಕಿಕೊಂಡು ಬಿಗ್‍ಮನೆಯಲ್ಲಿ ಓಡಾಡಿದ್ದಾರೆ.

    ಸ್ಪರ್ಧಿಗಳು ಈ ವಾರ ಮಾತ್ರ ಬಿಗ್‍ಬಾಸ್ ಮನೆಯಲ್ಲಿರುತ್ತಾರೆ. ಹೀಗಾಗಿ ಬಿಗ್ ಮನೆಯಲ್ಲಿ ನಿಮಗೆ ಈಡೇರಬೇಕಾದ ಯಾವುದಾದರೂ ಆಸೆ ಇದ್ದರೆ ತಿಳಿಸಿ ಎಂದು ಬಿಗ್‍ಬಾಸ್ ಹೇಳಿದ್ದರು. ಆಗ ಭೂಮಿ ಹುಡುಗರು ಹುಡುಗಿಯರ ರೀತಿ ಬಟ್ಟೆ ಧರಿಸಿಕೊಂಡು ಮನೆಯಲ್ಲಿ ಓಡಾಡಬೇಕು, ಹುಡುಗಿಯರು ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಓಡಾಡಬೇಕು ಎಂಬ ಆಸೆಯನ್ನು ಬಿಗ್‍ಬಾಸ್‍ಗೆ ತಿಳಿಸಿದ್ದರು.

    ಅದರಂತಯೇ ಬಿಗ್‍ಬಾಸ್ ಒಂದು ಗಂಟೆಯ ಕಾಲ ಪುರುಷರು ಮಹಿಳೆಯರ ರೀತಿ ಉಡುಪು ಧರಿಸಿಕೊಂಡು ಬಿಗ್‍ಬಾಸ್ ಮನೆಯಲ್ಲಿ ಓಡಾಡಬೇಕು ಎಂದು ತಿಳಿಸಿದ್ದರು. ಭೂಮಿಗಾಗಿ ಕುರಿ ಪ್ರತಾಪ್, ಶೈನ್ ಶೆಟ್ಟಿ ಮತ್ತು ವಾಸುಕಿ ಮೂವರು ಹುಡುಗಿಯ ರೀತಿ ಉಡುಪು ಧರಿಸಿಕೊಂಡು, ಧ್ವನಿ ಬದಲಾಯಿಸಿಕೊಂಡು ಮಾತನಾಡಿದ್ದಾರೆ. ಆಗ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು, ಮೀಸೆ ಬರೆದುಕೊಂಡು ಹುಡುಗಿಯರ ವೇಷದಲ್ಲಿದ್ದ ಮೂವರು ಹುಡುಗರನ್ನು ರೇಗಿಸುತ್ತಿದ್ದರು.

    ಸೋಫಾ ಮೇಲೆ ಕುಳಿತು ಮಾತನಾಡುತ್ತಿದ್ದಾಗ ವಾಸುಕಿ ಯಾರೋ ಒಬ್ಬರ ಚಟಕ್ಕೆ ನಾವು ಎಷ್ಟು ಜನ ಬಲಿಯಾಗಿದ್ದೀವಿ ನೋಡಿ ಎಂದು ಬೇಸರದಿಂದ ಹೇಳಿದ್ದಾರೆ. ಒಂದು ಗಂಟೆಯಾದ ತಕ್ಷಣ ಕುರಿ ಪ್ರತಾಪ್, ಶೈನ್, ವಾಸುಕಿ ಮೂವರು ಭೂಮಿಗೆ ತಮಾಷೆಯಿಂದ ಹೊಡೆದಿದ್ದಾರೆ. ಇದೊಂದು ಆಸೆನಾ, ನಮ್ಮ ಪರಿಸ್ಥಿತಿ ನೋಡು ಹೇಗಿದೆ, ನೀನು ಬೇಕಿದ್ದರೆ ಇಡೀ ದಿನ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು ಓಡಾಡಬೇಕಿತ್ತು ಎಂದು ಬೈದಿದ್ದಾರೆ.

  • ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ಸದಸ್ಯರು

    ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ಸದಸ್ಯರು

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ.

    ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್‍ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ಎಲ್ಲರೂ ಮನೆಯೊಳಗೆ ಹೋಗಿ ಕುಳಿತುಕೊಂಡು ಕೆಲಕಾಲ ಮಾತನಾಡಿದ್ದಾರೆ.

    ರಘು ದೀಕ್ಷಿತ್ ಮನೆಯಿಂದ ಹೋದ ಬಳಿಕ ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಅಡುಗೆ ಮನೆಯಲ್ಲಿದ್ದರು. ಭೂಮಿ ಸೋಫಾ ಮೇಲೆ ಮಲಗಿದ್ದು, ಶೈನ್ ಭೂಮಿ ಪಕ್ಕದಲ್ಲಿ ಕುಳಿತಿದ್ದರು. ಆಗ ಭೂಮಿ, ನನಗೆ ಒಂಥರಾ ಆಗುತ್ತಿದೆ, ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಾಮಿಟ್ ಬರೋತರ ಆಗುತ್ತಿದೆ ಎಂದು ಹೇಳಿದ್ದಾರೆ.

    ಆಗ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಅಯ್ಯೋ ಇನ್ನೂ ಮೂರು ದಿನ ಇರುವುದಕ್ಕೂ ಆಗುವುದಿಲ್ಲವೆನೋ ಎಂದು ರೇಗಿಸುತ್ತಾ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ತಂದು ಕೂರಿಸಿದ್ದಾರೆ. ಅಷ್ಟೇ ಅಲ್ಲದೇ ಶೈನ್ ತಮಾಷೆಗೆ ಆಕೆಯ ಸೂಟ್‍ಕೇಸ್, ಬಟ್ಟೆ ತಂದು ಕೊಟ್ಟಿದ್ದಾರೆ.

    ಜೋಪಾನವಾಗಿ ಹೋಗು, ಹೊರಗಡೆ ಸಿಗೋಣ. ತುಂಬಾ ಚೆನ್ನಾಗಿ ಆಟವಾಡಿದ್ದೀಯಾ, ವಾರ ವಾರ ದಪ್ಪ ಆಗಿದ್ದೀಯಾ, ನಿನಗೆ ಹೊರಗಡೆ ಉಜ್ವಲವಾದ ಭವಿಷ್ಯವಿದೆ. ಹೋಗುವಾಗ ಬಿಗ್‍ಬಾಸ್ ಆಸ್ಪತ್ರೆಗೆ ತೋರಿಸುತ್ತಾರೆ ಎಂದು ಶೈನ್ ರೇಗಿಸಿದ್ದಾರೆ. ಕೊನೆಗೆ ತಿಂಡಿ ಜಾಸ್ತಿ ತಿಂದಿದ್ದಕ್ಕೆ ಈ ರೀತಿ ಆಗಿದೆ ಎಂದು ಭೂಮಿ ಒಪ್ಪಿಕೊಂಡಿದ್ದಾರೆ. ನಂತರ ಭೂಮಿಯನ್ನು ಬಿಗ್‍ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.

  • ಶೈನ್, ಭೂಮಿ ಮಧ್ಯೆ ಜಗಳ- ಯಾರ ಜೊತೆನೂ ಕ್ಲೋಸ್ ಆಗ್ಬಾರ್ದು ಎಂದ ಶೈನ್

    ಶೈನ್, ಭೂಮಿ ಮಧ್ಯೆ ಜಗಳ- ಯಾರ ಜೊತೆನೂ ಕ್ಲೋಸ್ ಆಗ್ಬಾರ್ದು ಎಂದ ಶೈನ್

    ಬೆಂಗಳೂರು: ಬಿಗ್‍ಬಾಸ್ ಫಿನಾಲೆಗೆ ಉಳಿದಿರುವುದು ಇನ್ನೂ ಎರಡು ದಿನ ಮಾತ್ರ. ಈ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ.

    ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಯಾವಾಗಲೂ ತಮಾಷೆಮಾಡಿಕೊಂಡು, ಹೊಡೆದಾಡಿಕೊಳ್ಳುತ್ತಾ, ತರ್ಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ-ಬಾಂಧವ್ಯವಿದೆ. ಈ ವಿಚಾರ ಬಿಗ್‍ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಆದರೆ ಬಿಗ್‍ಬಾಸ್ ಮುಗಿಯುತ್ತಿರುವ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ.

    ಶೈನ್, ದೀಪಿಕಾ, ಭೂಮಿ, ವಾಸುಕಿ, ಮತ್ತು ಕುರಿ ಪ್ರತಾಪ್ ಐವರು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಶೈನ್, ಸ್ನಾನ ಆದ ನಂತರ ಬಾತ್‍ರೂಮ್‍ನಿಂದ ಬಟ್ಟೆ ತೆಗೆದುಕೊಂಡು ಬರುವ ಅಭ್ಯಾಸವೇ ಇಲ್ಲವೇ ಎಂದು ಭೂಮಿಯನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಭೂಮಿ, ಯಾವತ್ತಾದ್ರೂ ಈ ರೀತಿ ಆಗಿದೆಯಾ. ಏನೋ ಗಡಿಬಿಡಿಯಲಿ ಮರೆತೆ. ಅದನ್ನ ಹೈ-ಲೈಟ್ ಮಾಡಬೇಡ ಎಂದು ಕೋಪದಿಂದ ಹೇಳಿದರು.

    ಆಗ ಗರಂ ಆದ ಶೈನ್, ಹೈ-ಲೈಟ್ ಮಾಡೋದಾ. ಇಲ್ಲಿವರೆಗೂ ನಾನು ಎಲ್ಲಿ ಹೇಳಿದ್ದೀನಿ. ನೀನು ಮತ್ತು ಕಿಶನ್ ಒಂದೇ ರೀತಿ ಹೇಳುತ್ತೀರಾ. ನಾನು ದೀಪಿಕಾಗೆ ನಿಮ್ಮ ಬಟ್ಟೆನಾ ಎಂದು ಕೇಳಿದ್ದೆ. ಅದಾನಂತರ ಈಗಲೇ ಮೊದಲ ಬಾರಿಗೆ ನಿನಗೆ ಹೇಳಿದ್ದು. ಇದರಲ್ಲಿ ಹೈ-ಲೈಟ್ ಮಾಡಿ ನನಗೆ ಏನು ಸಿಗಬೇಕಿಲ್ಲ ಎಂದು ರೇಗಾಡಿದರು. ಅದಕ್ಕೆ ಭೂಮಿಯೂ ಗರಂ ಆಗಿ, ನೀನು ಮೊದಲೂ ಹೇಳಿದ್ದೀಯಾ, ನಾನು ತಪ್ಪು ಮಾಡಿದ್ರೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ನೀನು ನನಗೆ ಹೇಳಿದಿಯಾ. ಅದನ್ನು ಒಪ್ಪಿಕೋ ಎಂದಿದ್ದಾರೆ.

    ಆಗ ಶೈನ್ ಯಾವಾಗ ಹೇಳಿದ್ದೆ? ಯಾರಿಗೆ ಹೇಳಿದ್ದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ರೀತಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ಇಬ್ಬರೂ ಮಾತನಾಡದೇ ಸುಮ್ಮನಾಗಿದ್ದಾರೆ. ಇದರಿಂದ ಬೇಸರಗೊಂಡ ಶೈನ್ ಹೊರಗಡೆ ಕುಳಿತಿದ್ದರು. ಆಗ ದೀಪಿಕಾ ಬಂದು ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ.

    ನಾವು ಯಾರ ಜೊತೆನೂ ಕ್ಲೋಸ್ ಆಗಬಾರದು. ಅದರಿಂದ ಸಲುಗೆ ಬೆಳೆಯುತ್ತದೆ. ಆದರೆ ನಾನು ತಮಾಷೆಗೆ ಹೇಳಿದ್ದು, ಹೈ-ಲೈಟ್ ಮಾಡಬೇಡಿ ಎಂದಿದ್ದಕ್ಕೆ ಬೇಸರವಾಯಿತು. ಅವರ ಬಟ್ಟೆ ಅಲ್ಲಿದೆ ಎಂದು ಹೇಳಿದರೆ ನನಗೆ ಏನು ಸಿಗುತ್ತದೆ. ನಿಜಾ ಹೈ-ಲೈಟ್ ಮಾಡಬೇಡಿ ಎಂದಾಗ ತುಂಬಾ ಬೇಸರವಾಯಿತು. ಭೂಮಿ ಬಟ್ಟೆ ಅಲ್ಲಿದೆ-ಇಲ್ಲಿದೆ ಎಂದು ಹೇಳಿದರೆ ನನಗೆ ಏನಾಗುತ್ತೆ. ಭೂಮಿ ಆಗಿದ್ದಕ್ಕೆ ಹೇಳಿದ್ದು, ಬೇರೆ ಯಾರಾಗಿದ್ದರೂ ಹೇಳುತ್ತಿರಲಿಲ್ಲ ಎಂದು ಬೇಸರದಿಂದ ಮಾತನಾಡಿದ್ದಾರೆ.

    ಕೊನೆಗೆ ದೀಪಿಕಾ ಇರುವುದು ಇನ್ನೂ ಮೂರು ದಿನ ಇಬ್ಬರೂ ಕೋಪ ಮಾಡಿಕೊಳ್ಳಬೇಡಿ ಎಂದು ಸಮಾಧಾನ ಮಾಡಿದ್ದಾರೆ.