Tag: bhagavan

  • ನಿರ್ದೇಶಕ ಭಗವಾನ್‌ ಇನ್ನಿಲ್ಲ

    ನಿರ್ದೇಶಕ ಭಗವಾನ್‌ ಇನ್ನಿಲ್ಲ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಾ.ರಾಜ್ ಹಾದಿಯಲ್ಲಿ ನಿರ್ದೇಶಕ ಭಗವಾನ್ : ನಾಲ್ಕು ಜನಕ್ಕೆ ನೇತ್ರದಾನ

    ಡಾ.ರಾಜ್ ಹಾದಿಯಲ್ಲಿ ನಿರ್ದೇಶಕ ಭಗವಾನ್ : ನಾಲ್ಕು ಜನಕ್ಕೆ ನೇತ್ರದಾನ

    ರನಟ ಡಾ.ರಾಜ್ ಕುಮಾರ್ (Dr. Rajkumar) ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯ ಇಟ್ಟುಕೊಂಡಿದ್ದರು ನಿರ್ದೇಶಕ ಎಸ್.ಕೆ.ಭಗವಾನ್ (Bhagavan). ಅಣ್ಣಾವ್ರು ಎಲ್ಲಿರುತ್ತಿದ್ದರೋ ಅಲ್ಲಿ ಭಗವಾನ್ ಇರಲೇಬೇಕಿತ್ತು. ಅಷ್ಟರ ಮಟ್ಟಿಗೆ ಡಾ.ರಾಜ್ ಕುಮಾರ್ ಜೊತೆ ಭಗವಾನ್ ಹೊಂದಿಕೊಂಡಿದ್ದರು. ಇದೀಗ ಭಗವಾನ್ ಅವರು ಅಣ್ಣಾವ್ರ ಹಾದಿಯನ್ನೇ ತುಳಿದಿದ್ದಾರೆ. ಡಾ.ರಾಜ್ ಕುಮಾರ್, ಪುನೀತ್ ರಾಜಕುಮಾರ್ (Puneeth Rajkumar) ರೀತಿಯಲ್ಲೇ ಭಗವಾನ್ ಕೂಡ ನೇತ್ರದಾನ (eye donation) ಮಾಡಿದ್ದಾರೆ.

    ರಾಜಕುಮಾರ್ ಅವರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ ಸಂದರ್ಭದಲ್ಲೇ ಭಗವಾನ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿದ್ದರಂತೆ. ಹಾಗಾಗಿ ಇಂದು ಅವರ ಮರಣಾನಂತರ ಕಣ್ಣಿನ ಕಾರ್ನಿಯಾವನ್ನು ತೆಗೆಯಲಾಗಿದೆ. ನಾರಾಯಣ ನೇತ್ರಾಲಯದ ಐ ಬ್ಯಾಂಕ್ ಮ್ಯಾನೇಜರ್ ವೀರೇಶ್ ಕಣ್ಣು ತೆಗೆದ ನಂತರ ಮಾತನಾಡಿ, ‘ಭಗವಾನ್ ಅವರ ಕಾರ್ನಿಯಾ ಆರೋಗ್ಯವಾಗಿದೆ. ಕಣ್ಣಿಗೆ ಯಾವುದೇ ಸಮಸ್ಯೆ ಇರಲಿಲ್ಲವಾದ್ದರಿಂದ ನಾಲ್ಕೈದು ಜನರಿಗೆ ದೃಷ್ಟಿ ಸಿಗಬಹುದು’ ಎಂದಿದ್ದಾರೆ. ಇದನ್ನೂ ಓದಿ:ನಟ ನಂದಮೂರಿ ತಾರಕ ರತ್ನ ಇನ್ನಿಲ್ಲ

    1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದ ಭಗವಾನ್, ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

    ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ: ನಟ ಚೇತನ್

    -ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು

    ಕೋಲಾರ: ಸಮಾಜದಲ್ಲಿ ಅನ್ಯಾಯವನ್ನ ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ ಎಂದು ಜಿಲ್ಲೆಯಲ್ಲಿ ನಡೆದ ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕ್ರಮದಲ್ಲಿ ನಟ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂಬೇಡ್ಕರ್ ಸೇವಾ ಸಮಿತಿ 2ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಒಳತಿಗಾಗಿ ಯಾರು ಅನ್ಯಾಯವನ್ನು ಪ್ರಶ್ನಿಸುತ್ತಾರೋ ಅವರಿಗೆ ದೇಶ ದ್ರೋಹದ ಪಟ್ಟ ಕಟ್ಟುತ್ತಾರೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದವರನ್ನ ಕೊಲ್ಲುವುದು, ಬಂಧಿಸುವ ಸ್ಥಿತಿ ಇದೆ. ಸಾಹಿತಿ ಎಂ.ಎಂ ಕಲಬುರ್ಗಿ ಎಂತಹ ವ್ಯಕ್ತಿಗಳು ಅನ್ಯಾಯದ ವಿರುದ್ಧ ಹೋದಾಗ ಧಾರ್ಮಿಕ ವಾದಿಗಳು ಹತ್ಯೆಗೈದಿದ್ದಾರೆ. ಆದರೆ ಅನ್ಯಾಯದ ವಿರುದ್ಧ ಹೋರಾಡಲು ಅಂಬೇಡ್ಕರ್ ಸಂವಿಧಾನ ರಚಿಸಿದರು. ಹೀಗಾಗಿ ಬುದ್ಧ ಹಾಗೂ ಅಂಬೇಡ್ಕರ್ ಅವರ ಸಿದ್ಧಾಂತಗಳು ನಮ್ಮ ದೇಶದ ಹೆಮ್ಮೆ ಎಂದು ಹೇಳಿದರು.

    ಸಂವಿಧಾನ ವಿರೋಧಿಗಳು ಧರ್ಮಗಳನ್ನ ಒಡೆಯುತ್ತಿದ್ದಾರೆ. 300 ವರ್ಷಗಳ ಇತಿಹಾಸ ಹೊಂದಿರುವ ಹೆಮ್ಮೆಯ ಕನ್ನಡಿಗ ಟಿಪ್ಪು ಸುಲ್ತಾನ. ಅಂತಹ ಟಿಪ್ಪು ದೇಶ ರಕ್ಷಣೆ ಮಾಡಿ, ಮಠ ಮಾನ್ಯಗಳನ್ನ ರಕ್ಷಣೆ ಮಾಡಿದ್ದಾರೆ. ಆದ್ರೆ ಇಂದು ಅವರನ್ನು ದೇಶದ್ರೋಹಿಯಂತೆ ಬಿಂಬಿಸುತ್ತಿದ್ದಾರೆ. ಟಿಪ್ಪುವಿಗೆ ದೇಶದ್ರೋಹದ ಪಟ್ಟ ಕಟ್ಟುವವರು ನಿಜಕ್ಕೂ ಇತಿಹಾಸವನ್ನೂ ಅರಿತಿಲ್ಲ ಎಂದು ಕಿಡಿಕಾರಿದರು.

    ಹಾಗೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಹಿತಿ ಭಗವಾನ್ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸಮಾನತೆ ಇದೆ, ಆದ್ರೆ ಮನುಸ್ಮೃತಿಯಲ್ಲಿ ಸಮಾನತೆ ಇಲ್ಲ. ಮನುಸ್ಮೃತಿ ಇರುವುದು ಬ್ರಾಹ್ಮಣರು ಶೂದ್ರರ ಮೇಲೆ ದಾಸ್ಯ ಹೇರಲು ಮಾತ್ರ ಇದೆ. ಆದರೆ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಬದಿಗೆ ಸರಿಸಿ ಸಂವಿಧಾನವನ್ನು ತಂದರು ಎಂದು ಸಾಹಿತಿ ಭಗವಾನ್ ತಿಳಿಸಿದರು.

    ಸಂವಿಧಾನವನ್ನ ಯಾರೂ ಓದಿ ಅರ್ಥ ಮಾಡಿಕೊಂಡಿಲ್ಲ, ಸಂವಿಧಾನದಲ್ಲಿ ಸಮಾನತೆ ಇದೆ ದಾಸ್ಯ ಇಲ್ಲ. ಬ್ರಾಹ್ಮಣರು ಬಿಟ್ಟು ಉಳಿದವರೆಲ್ಲಾ ಗುಲಾಮರು ಎಂಬುದು ಮನುಸ್ಮೃತಿ. ಆದ್ದರಿಂದ ಸಂವಿಧಾನವನ್ನ ತೆಗೆಯಲು ಹೊರಟಿದ್ದಾರೆ ಎಂದರು. ಬಳಿಕ ಬ್ರಿಟಿಷರು ಬಂದ ಮೇಲೆ ನಮಗೆಲ್ಲಾ ಶಿಕ್ಷಣ ಸಿಕ್ಕಿತು. ಅಲ್ಲಿಯವರೆಗೂ ಎಲ್ಲರೂ ಹೆಬ್ಬಟ್ಟುಗಳೆ ಆಗಿದ್ದರು. ಕೆಲಸಕ್ಕೆ ಬಾರದ ತುಳಿಯುವ, ಕಡಿಯುವ ಇಲ್ಲಸಲ್ಲದ ದೇವರುಗಳನ್ನ ತಂದು ನಮ್ಮ ಮೇಲೆ ಹೇರಿದ್ದಾರೆ. ಇದರಿಂದ ನಾವು ಹೊರಗೆ ಬರಬೇಕು, ಸಂವಿಧಾನವನ್ನು ಅಧ್ಯಯನ ಮಾಡಿ ಅರಿವು ಪಡೆಯಬೇಕು ಎಂದು ಕಿವಿ ಮಾತನ್ನು ಹೇಳಿದರು.

  • ಬುದ್ಧಿ ಜೀವಿಗಳಿಗೆ ರಕ್ಷಣೆ ನೀಡೋ ಅಗತ್ಯವಿಲ್ಲ, ಅವರು ಸರಿ ಇದ್ರೆ ಭಯ ಯಾಕೆ: ಯತ್ನಾಳ್ ಪ್ರಶ್ನೆ

    ಬುದ್ಧಿ ಜೀವಿಗಳಿಗೆ ರಕ್ಷಣೆ ನೀಡೋ ಅಗತ್ಯವಿಲ್ಲ, ಅವರು ಸರಿ ಇದ್ರೆ ಭಯ ಯಾಕೆ: ಯತ್ನಾಳ್ ಪ್ರಶ್ನೆ

    ವಿಜಯಪುರ: ಭಗವಾನ್ ಒಬ್ಬ ಚಿಲ್ಲರೆ ವ್ಯಕ್ತಿ. ಅವರು ಎಷ್ಟು ಚಿಲ್ಲರೆ ವ್ಯಕ್ತಿ ಎಂಬುವುದನ್ನು ಎಲ್ಲರಿಗೂ ಗೊತ್ತಿದೆ. ಅವರಿಗೆ ಯಾವುದೇ ರಕ್ಷಣೆ ನೀಡುವುದು ಸರಿಯಲ್ಲ. ಆದರೆ ನಾವು ದೇಶದ ಬಗ್ಗೆ ಮಾತನಾಡಿದರೆ ವಿವಾದತ್ಮಾಕ ಹೇಳಿಕೆ ಎಂದು ಹೇಳುತ್ತೀರಿ. ದೇಶದ ವಿರುದ್ಧ ಮಾತನಾಡುವವರಿಗೆ ಹೆಚ್ಚಿನ ಪ್ರಚಾರ ನೀಡಲಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ನಗರದಲ್ಲಿ ಇಂದು ಮಾತನಾಡಿದ ಅವರು, ಬುದ್ಧಿ ಜೀವಿಗಳಿಗೆ ರಕ್ಷಣೆ ನೀಡುವ ಅಗತ್ಯವಿಲ್ಲ. ಅವರು ಸರಿಯಾಗಿದ್ದರೆ ಅವರಿ ಏಕೆ ಭಯ ಕಾಡುತ್ತದೆ? ಅವರು ದೇಶದ ವಿರುದ್ಧ ನೀಡುವ ಹೇಳಿಕೆಗಳಿಂದ ಕೆಲವು ಅಹಿತಕರ ಘಟನೆಗಳು ನಡೆಯುತ್ತವೆ. ಪ್ರಚಾರಕ್ಕಾಗಿ ಮಾತ್ರ ಅವರು ಈ ಹೇಳಿಕೆ ನೀಡುತ್ತಾರೆ ಎಂದು ಹೇಳಿದರು.

    ಇದೇ ವೇಳೆ ನಾನು ಯಾವುದೇ ವಿವಾದತ್ಮಾಕ ಹೇಳಿಕೆ ನೀಡಿಲ್ಲ ಎಂದು ಸಮರ್ಥನೆ ನೀಡಿದ ಅವರು, ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಹಿಂದೂಗಳ ಶೋಷಣೆ ನಡೆಯುತ್ತಿದೆ. ಮಾಜಿ ಸಚಿವ ಎಂಬಿ ಪಾಟೀಲ್ ಅವರು ಹಿಂದೂಗಳ ಬಗ್ಗೆಯೂ ಮಾತನಾಡುವುದನ್ನು ಕಲಿಯಲಿ ಎಂದರು.

    ಸಿದ್ದರಾಮಯ್ಯ ಸ್ವಾಭಿಮಾನಿ: ಇದೇ ವೇಳೆ ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇನ್ನು 3 ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ತನಗೆ ತಾನೇ ಪತನವಾಗುತ್ತದೆ. ಸಿಎಂ ಹಾಗೂ ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯದ ನಾಯಕರಾಗಿದ್ದು, ಸ್ವಾಭಿಮಾನಿಗಳು. ಅದ್ದರಿಂದ ಅವರೇ ಸರ್ಕಾರ ವಿರುದ್ಧ ಬಂಡಾಯ ಎದ್ದು ಸರ್ಕಾರದ ಕೆಡವಲಿದ್ದಾರೆ. ನಾನು ನಿಜವನ್ನೇ ಹೇಳುತ್ತೇನೆ. ಬಿಎಸ್ ಯಡಿಯೂರಪ್ಪ ಮುಂದಿನ ಸಿಎಂ ಆಗಲಿದ್ದು, 5 ವರ್ಷ ಆಡಳಿತ ನಡೆಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಇದನ್ನು ಓದಿ:  ಪಿತೂರಿ ಮಾಡಿ ಸ್ವಾಮಿ ವಿವೇಕಾನಂದ, ಬಸವಣ್ಣರ ಕೊಲೆ : ಕೆ.ಎಸ್ ಭಗವಾನ್ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹೆಂಡತಿ-ತಾಯಿಯ ವ್ಯತ್ಯಾಸ ಗೊತ್ತಿಲ್ಲದವರು ಈ ರೀತಿ ಮಾಡ್ತಾರೆ, ಭಗವಾನ್ ಅದೇ ಸಾಲಿಗೆ ಸೇರಿದವ್ರು- ಸಿಟಿ ರವಿ

    ಹೆಂಡತಿ-ತಾಯಿಯ ವ್ಯತ್ಯಾಸ ಗೊತ್ತಿಲ್ಲದವರು ಈ ರೀತಿ ಮಾಡ್ತಾರೆ, ಭಗವಾನ್ ಅದೇ ಸಾಲಿಗೆ ಸೇರಿದವ್ರು- ಸಿಟಿ ರವಿ

    ರಾಮನಗರ: ಹೆಂಡತಿ- ತಾಯಿಯ ವ್ಯತ್ಯಾಸ ಗೊತ್ತಿಲ್ಲದವರು ಈ ರೀತಿ ಮಾಡ್ತಾರೆ. ಭಗವಾನ್ ಅವರು ಕೂಡಾ ಅದೇ ಸಾಲಿಗೆ ಸೇರಿದವರು ಎಂದು ಗೋಮಾಂಸ ಸೇವನೆ ವಿಚಾರವಾಗಿ ಶಾಸಕ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಮನಗರದ ಮಾಗಡಿಯಲ್ಲಿ ಇಂದು ಮಾತನಾಡಿದ ಸಿ.ಟಿ ರವಿ, ಅವರಿಗೆ ದೇಶದ ಸಂಸ್ಕೃತಿ, ಗಾಂಧಿ ಅಂಬೇಡ್ಕರ್ ಅವರ ಆದರ್ಶಗಳು ತಿಳಿದಿಲ್ಲ. ಸಂವಿಧಾನದ ನಿರ್ದೇಶಕ ತತ್ವ, ಮೂಲ ಆಶಯದಲ್ಲಿ ನಡೆದಿರುವ ಚರ್ಚೆ, ಮೂಲ ಸಂಸ್ಕೃತಿ, ನಾಗರೀಕತೆ ಬೆಳೆದು ಬಂದ ಹಾದಿ ಗಮನಿಸಿದ್ರೆ ಹೀಗೆ ಮಾಡುತ್ತಿರಲಿಲ್ಲ ಅಂದ್ರು.

    ಉಡುಪಿಯ ಕೃಷ್ಣಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜನೆ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವನೊಬ್ಬ ನಾಮ ಹಲವು ಎಂಬುದು ಹಿಂದುಗಳ ನಂಬಿಕೆ. ಯಾರು ಹೇಗೆ, ಯಾವ ರೂಪದಲ್ಲಿ ಬೇಕಾದ್ರೂ ಭಗವಂತನ ಪೂಜೆ ಮಾಡಿದ್ರೆ ಸಮರ್ಪಣೆ ಆಗುತ್ತೆ. ಉಳಿದವರು ಜಗತ್ತಿನಲ್ಲಿ ಈ ಆಧಾರದಲ್ಲಿ ಆಲೋಚಿಸಿದ್ರೆ ಬಹುಶಃ ಬಾಂಬ್ ಸ್ಫೋಟಗಳಾಗುತ್ತಿರಲಿಲ್ಲ. ಮತೀಯ ಗಲಭೆಗಳಿಗೆ ಅವಕಾಶಗಳಿರುತ್ತಿರಲಿಲ್ಲ. ಮಹಾತ್ಮ ಗಾಂಧಿಯವರು ರಘುಪತಿ ರಾಘವ ರಾಜಾ ರಾಮ್ ತತ್ವ ಹೇಳಿದ್ದಾರೆ. ಅದನ್ನ ಹಿಂದು-ಮುಸ್ಲಿಂ ಎಲ್ಲರೂ ಹೇಳಿದ್ರೆ ಸಂಘರ್ಷ ಇರ್ತಿರಲಿಲ್ಲ. ಯಾವ ಮಸೀದಿಯಲ್ಲಿಯೂ ಈಶ್ವರ-ಅಲ್ಲಾ ನಾಮ್ ಎಂದು ಹೇಳಿದ್ದನ್ನ ಕೇಳಿಲ್ಲ. ಇದು ಹಿಂದುಗಳಿಗೆ ಮಾತ್ರ ಸೀಮಿತವಾಗಬಾರದು ಅಂದ್ರು.

    ಕಲ್ಲಡ್ಕ ಪ್ರಭಾಕರ್ ಗೆ ಇಫ್ತಾರ್ ಆಯೋಜನೆ ಮಾಡಲು ಖಾದರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕಲ್ಲಡ್ಕರ ಜೀವನ, ಬೆಳೆದ ಪದ್ಧತಿಯೇ ಬೇರೆ, ಖಾದರ್ ಅವರ ಪದ್ಧತಿಯೇ ಬೇರೆ. ಮಸೀದಿಗಳಲ್ಲಿ ದೀಪಾವಳಿ, ಗಣಪತಿ ಉತ್ಸವ ನಡೆಸಿದ್ರೆ ಸ್ವಾಭಾವಿಕ ಸೌಹಾರ್ದತೆ ಬೆಳೆಯುತ್ತೆ. ಹಿಂದು ದೇವಾಲಯಗಳಲ್ಲಿ ಈದ್ ಆಚರಿಸಿದ್ರೆ ಸೌಹಾರ್ದಯುತ ಸಂಕೇತವಾಗುತ್ತೆ ಅಂದ್ರು.

    ಇಂದು ಮೈಸೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಮನೆಯಂಗಳ ಸಭಾಂಗಣದಲ್ಲಿ ವಿಚಾರವಾದಿ ಕೆ.ಎಸ್. ಭಗವಾನ್, ಮೈಸೂರು ವಿ.ವಿ. ಪ್ರೊ. ಮಹೇಶಚಂದ್ರ ಗುರು, ಕಾಂಗ್ರೆಸ್ ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವು ಗಣ್ಯರು ಗೋಮಾಂಸ ಸೇವಿಸಿ ಬಳಿಕ ವಿಚಾರ ಸಂಕಿರಣ ಉದ್ಘಾಟನೆ ಮಾಡಿದರು. ಅಲ್ಲದೇ ಕಾರ್ಯಕ್ರಮಕ್ಕೆ ಬಂದಿದ್ದ ಸಭಿಕರಿಗೂ ಗೋ ಮಾಂಸ ವಿತರಣೆ ಮಾಡಲಾಯ್ತು.

  • ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದ್ದಕ್ಕೆ ನಾವು ಸಂತೋಷಪಡಬೇಕು: ಭಗವಾನ್

    ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದ್ದಕ್ಕೆ ನಾವು ಸಂತೋಷಪಡಬೇಕು: ಭಗವಾನ್

    ಬೆಂಗಳೂರು: ಇಷ್ಟವಿದ್ದವರು ಸುಹಾನಾ ಹಾಡು ಕೇಳಿ ಸಂತೋಷ ಪಡಲಿ. ಇಲ್ಲವೆಂದಲ್ಲಿ ಅದನ್ನು ವಿರೋಧಿಸದೆ ಮೌನವಾಗಿರುವುದು ಒಳ್ಳೆಯದು ಅಂತಾ ಹಿರಿಯ ಸಾಹಿತಿ ಕೆ ಎಸ್ ಭಗವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಆ ಹೆಣ್ಣು ಮಗಳು ಹಿಂದೂ ದೇವರ ನಾಮವನ್ನು ಪ್ರಸ್ತುತ ಪಡಿಸಿರೋದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತಿರುವ ಟೀಕೆಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕಾಗಿದೆ. ಯಾರು ಯಾವುದೇ ದೇವರ ಬಗ್ಗೆ ಬೇಕಾದ್ರು ಮಾತನಾಡಲಿ. ಅದು ಅವರಲ್ಲಿರೋ ನಂಬಿಕೆ ಮತ್ತು ಪ್ರೀತಿ ಅನುಗುಣವಾಗಿರುತ್ತದೆ. ಹೀಗಾಗಿ ಹೆಣ್ಣು ಮಗಳು ಹಾಡಿರೋ ಹಾಡನ್ನು ಇಷ್ಟವಿದ್ದವರು ಕೇಳಿ ಸಂತೋಷ ಪಡಲಿ. ಇಲ್ಲವೆಂದವರು ವಿರೋಧಿಸದೇ ಇರುವುದು ಒಳಿತು. ನಮಗೆ ಪ್ರಜಾಪ್ರಭುತ್ವ ಹಕ್ಕಿದೆ ಅಂತಾ ಎಲ್ಲವನ್ನೂ ವಿರೋಧಿಸುವುದು ಸರಿಯಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ.

    ಈ ವಿರೋಧಗಳು ಯಾವುದೇ ಒಂದು ಜನಾಂಗದ ಮಧ್ಯೆ ಬರಲು ಅವಕಾಶ ಮಾಡಿಕೊಡದೆ ಸಾಮರಸ್ಯಕ್ಕೆ ಅನುಕೂಲ ಮಾಡಿದರೆ ಒಳ್ಳೆಯದು. ಆ ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದರೆ ಅದಕ್ಕೆ ನಾವು ಸಂತೋಷಪಡಬೇಕು. ನಾವು ಬೇಕಾದಷ್ಟು ಉರ್ದು ಹಾಡುಗಳನ್ನು ರೇಡಿಯೋದಲ್ಲಿ, ಟಿವಿಗಳಲ್ಲಿ ಕೇಳ್ತೀವಿ. ಮಾತ್ರವಲ್ಲದೇ ಬೇರೆ ಬೇರೆ ಕಡೆ ಕಾರ್ಯಕ್ರಮಗಳಲ್ಲಿ ಹಾಕೋ ಉರ್ದು ಪದ್ಯಗಳನ್ನು ಕೂಡ ನಾವು ಕೇಳ್ತೇವೆ. ಹಾಗಾಂತ ಅವುಗಳನ್ನ ನಾವು ವಿರೋಧಿಸಲು ಹೋಗಲ್ಲ. ಹೀಗಾಗಿ ಇದು ವಿರೋಧಕ್ಕಾಗಿಯೇ ವಿರೋಧ ಹೊರತು ತಿಳುವಳಿಕೆಗಾಗಿ ವಿರೋಧವಲ್ಲ ಅಂತಾ ಹೇಳಿದ್ರು.

    ಫೇಸ್ಬುಕ್ ಪೇಜಿನಲ್ಲಿ ಧಮ್ಕಿ ಹಾಕಿರೋ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಧಮ್ಕಿ ಹಾಕೋದು, ತಪ್ಪು ತಿಳುವಳಿಕೆ ಇಲ್ಲದೇ ಮಾಡೋ ಕೆಲಸ. ಹೇಳಿ ಸುಮ್ಮನಾಗೋದೆ ಒಳ್ಳೆಯದು ಇಲ್ಲವೆಂದಲ್ಲಿ ಪ್ರತಿಭಟನೆಯ ಅವಶ್ಯಕತೆ ಬಂದ್ರೆ ಮಾಡ್ತೇವೆ. ಎಲ್ಲದಕ್ಕೂ ಪ್ರತಿಭಟನೆ ಮಾಡಿದ್ರೆ ಅದಕ್ಕೆ ಬೆಲೆ ಇಲ್ಲ. ಸಮಾಜದ ಸಾಮರಸ್ಯವನ್ನು ಕೆದಕುವಂತಹ ಸಂದರ್ಭಗಳು ಬಂದ್ರೆ ಪ್ರತಿಭಟನೆ ಮಾಡ್ತೇವೆ ಅಂತಾ ತಿಳಿಸಿದ್ರು.

    ಈ ವಿಚಾರವಾಗಿ ಸ್ನೇಹಿತರಾದ ಸಂಸದ ಪ್ರತಾಪ್ ಸಿಂಹ ಅವರು ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಅವರಿಗೆ ಧನ್ಯವಾದಗಳು ಅಂತಾ ನಗುತ್ತಲೇ ಹೇಳಿದ್ರು.

    ಸರಿಗಮಪ ರಿಯಾಲಿಟಿ ಶೋನ ಆಡಿಶನ್ನಲ್ಲಿ ಶಿವಮೊಗ್ಗದ ಸಾಗರ ಮೂಲದ ಯುವತಿ ಸುಹಾನಾ ಸೈಯದ್ ಅವರು `ಶ್ರೀಕಾರನೇ’ ಅನ್ನೋ ಹಿಂದೂ ಹಾಡಿರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಮಂಗಳೂರು ಮುಸ್ಲಿಂ ಅನ್ನೋ ಫೇಸ್ಭುಕ್ ಪೇಜಿನಲ್ಲಿ ಯುವತಿಗೆ ಬೆದರಿಕೆಯೂ ಹಾಕಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಅವರು, ಮೋದಿ ಸರ್ಕಾರದ ಸಹಿಷ್ಣುತೆಯ ಬಗ್ಗೆ ಮಾತನಾಡೋ ಲದ್ದಿಜೀವಿ ಮಂದಿ ಎಲ್ಲಿದ್ದಾರೆ ಅಂತಾ ಪ್ರಶ್ನಿಸಿದ್ದರು.

    ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

    ಇದನ್ನೂ ಓದಿ:  ಮುಸ್ಲಿಂ ಯುವತಿ ಸುಹಾನಾಗೆ ಸಚಿವ ಖಾದರ್ ಬೆಂಬಲ