Tag: benz car

  • ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೆಂಜ್ ಕಾರು – ಚಾಲಕ ಸಾವು

    ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೆಂಜ್ ಕಾರು – ಚಾಲಕ ಸಾವು

    ಮಂಗಳೂರು: ನಿಯಂತ್ರಣ ಕಳೆದುಕೊಂಡ ಬೆಂಜ್ ಕಾರೊಂದು (Benz Car) ಅಪಘಾತಕ್ಕೀಡಾಗಿ ಚಾಲಕ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿಯ ಉಜಿರೆಯಲ್ಲಿ (Ujire)ನಡೆದಿದೆ.

    ಅಪಘಾತದಲ್ಲಿ ಕಾರು ಚಾಲಕ ಉಜಿರೆ ನಿವಾಸಿ ಪ್ರಜ್ವಲ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಉರುಳಿ ಬಿದ್ದಿತ್ತು. ಅಪಘಾತದ ತೀವ್ರತೆಗೆ ಐಷಾರಾಮಿ ಬೆಂಜ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಚೀನಾ ಗಡಿ ಭಾಗದಲ್ಲಿ ನದಿ ದಾಟುವಾಗ ಟ್ಯಾಂಕ್‌ ಅಪಘಾತ – ಐವರು ಭಾರತೀಯ ಯೋಧರು ಹುತಾತ್ಮ

    ತಕ್ಷಣ ಸ್ಥಳೀಯರು ಪ್ರಜ್ವಲ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 13ನೇ ವಯಸ್ಸಿಗೆ ಬಾಲಕಿ ಗರ್ಭಿಣಿ – ಹೊಟ್ಟೆನೋವಿನಿಂದ ಸಾವು

  • 48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು

    48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು

    ಬೆಂಗಳೂರು: ಬರೋಬ್ಬರಿ 48 ವರ್ಷ ಕಳೆದರೂ ಜನಪ್ರಿಯ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಬಳಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಲಕ ಲಕ ಹೊಳೆಯುತ್ತಿದೆ. ಕಾರನ್ನು ಕಂಡ ಹಲವರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.

    ಇಂದು ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆ ಹಿನ್ನೆಲೆ ಅರಸು ಬಳಸುತ್ತಿದ್ದ ಎಂಇಒ 777 ನೋಂದಣಿ ಸಂಖ್ಯೆಯ ಮರ್ಸಿಡಿಸ್ ಬೆಂಜ್ ಕಾರು ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದೆ. 1972ರ ಚುನಾವಣೆಯಲ್ಲಿ ದೇವರಾಜ ಅರಸು ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದರು. ಇದರಿಂದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂತೋಷಗೊಂಡಿದ್ದರು. ಬಳಿಕ ವಿದೇಶದಿಂದ ಮರ್ಸಿಡಿಸ್ ಬೆಂಜ್ ಕಾರ್ ತರಿಸಿ ಸರ್ಕಾರಕ್ಕೆ ಕೊಡುಗೆಯಾಗಿ ನೀಡಿದ್ದರು. ಇದನ್ನೂ ಓದಿ: ಭಾರೀ ಮೊತ್ತಕ್ಕೆ ಕೆಜಿಎಫ್ ಸ್ಯಾಟಲೈಟ್ ಹಕ್ಕು ಖರೀದಿಸಿದ ಜೀ ಸ್ಟುಡಿಯೋಸ್

    ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ನಿತ್ಯ ಈ ಬ್ಲ್ಯಾಕ್ ಬ್ಯೂಟಿಯನ್ನು ಬಳಸುತ್ತಿದ್ದರು. 10 ವರ್ಷಗಳ ಕಾಲ ಬ್ಲ್ಯಾಕ್ ಬ್ಯೂಟಿಯ ಜೊತೆಗೆ ಅರಸು ಓಡಾಟ ನಡೆಸಿದ್ದರು. ಬಳಿಕ ಹರಾಜು ಪ್ರಕ್ರಿಯೆಯಲ್ಲಿ ಅರಸು ಅವರ ಆಪ್ತ ಜಿ.ಎಂ.ಬಾಬು ಕಾರನ್ನು ಖರೀದಿಸಿ ಕಾಪಾಡುತ್ತಿದ್ದಾರೆ. ಈ ಕಾರ್ ಇಂದಿಗೂ ಫುಲ್ ಕಂಡೀಷನ್ ನಲ್ಲಿದೆ. ಅವರ ಜನ್ಮದಿನಾಚರಣೆ ಹಿನ್ನೆಲೆ ವಿಧಾನಸೌಧದ ದೇವರಾಜ ಅರಸು ಪ್ರತಿಮೆ ಮುಂದೆ ಕಾರಿನ್ನು ಪ್ರದರ್ಶಿಸಲಾಗುತ್ತಿದೆ. ಪ್ರತಿ ವರ್ಷ ಅರಸು ಜನ್ಮದಿನದಂದು ಈ ಕಾರು ವಿಧಾನಸೌಧಕ್ಕೆ ಎಂಟ್ರಿ ಕೊಡತ್ತದೆ.

    ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದೇ ಕಾರಿನಲ್ಲಿ ವಿಧಾನಸೌಧವನ್ನು ಸುತ್ತು ಹಾಕಿ, ಸಂತಸ ವ್ಯಕ್ತಪಡಿಸಿದ್ದರು. ಈ ಕಾರ್ ಬಗ್ಗೆ ಹಲವರಿಗೆ ಕ್ರೇಜ್ ಇದೆ. ಅದರಲ್ಲೂ ದೇವರಾಜ್ ಅರಸು ಬಳಸಿದ್ದು ಎನ್ನುವ ಕಾರಣಕ್ಕೆ ಇನ್ನೂ ಹೆಚ್ಚು ಪ್ರಸಿದ್ಧಿ ಪಡೆದಿದೆ.

  • ಕಾರಿನಲ್ಲೇ ವಿಶ್ವ ಪರ್ಯಟನೆ ಕೈಗೊಂಡು ಮಂಗಳೂರು ತಲುಪಿದ ದಂಪತಿ

    ಕಾರಿನಲ್ಲೇ ವಿಶ್ವ ಪರ್ಯಟನೆ ಕೈಗೊಂಡು ಮಂಗಳೂರು ತಲುಪಿದ ದಂಪತಿ

    ಮಂಗಳೂರು: ಒಂದು ಲಾಂಗ್ ಜರ್ನಿ ಕಾರಲ್ಲೋ, ಬೈಕ್‍ನಲ್ಲೋ ಹೋಗುವುದು ಎಂದ್ರೆ ಬೋರ್ ಎನ್ನುವವರು ಇದ್ದಾರೆ. ಇನ್ನು ಕೆಲವರು ಬೈಕ್‍ನಲ್ಲಿ ಲಾಂಗ್ ಡ್ರೈವ್ ಹೋಗುವುದು, ಕಾರ್‍ನಲ್ಲಿ ಪ್ರವಾಸಿ ತಾಣಗಳಿಗೆ ಫ್ಯಾಮಿಲಿ ಟೂರ್ ಮಾಡೋದು ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಜರ್ಮನ್ ಮೂಲದ ದಂಪತಿ ಕಾರಿನಲ್ಲೇ ವಿಶ್ವ ಪರ್ಯಟನೆ ಮಾಡುತ್ತಾ ಕಡಲ ನಗರಿ ಮಂಗಳೂರು ತಲುಪಿದ್ದಾರೆ.

    ಜರ್ಮನಿಯ ಉದ್ಯಮಿ ಪೀಟರ್ ಹಾಗೂ ಮೂಳೆ ಶಾಸ್ತ್ರಜ್ಞೆ ಡಾ.ಅಲೋನಾ ದಂಪತಿ ತಮ್ಮ ಬೆನ್ಜ್ ಕಾರಿನಲ್ಲಿ ವಿಶ್ವ ಪರ್ಯಟನೆಗೆ ಕೈಗೊಂಡಿದ್ದಾರೆ. ವಿವಿಧ ದೇಶಗಳ ಜನರ ಜೀವನ ಶೈಲಿ, ಸಂಸ್ಕೃತಿ, ವೈವಿಧ್ಯಗಳನ್ನು ತಿಳಿಯುವ ಉದ್ದೇಶದಿಂದ ಈ ದಂಪತಿ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ.

    ಪೀಟರ್ ದಂಪತಿ 2019ರ ಮೇ 1ರಂದು ಪರ್ಯಟನೆ ಆರಂಭಿಸಿದ್ದು, ಈಗ ಮಂಗಳೂರು ತಲುಪಿದ್ದಾರೆ. ಈಗಾಗಲೇ ರಷ್ಯಾ, ಪೋಲೆಂಡ್, ಐಸ್‍ಲ್ಯಾಂಡ್, ಮಂಗೋಲಿಯಾ, ಕಜಕಿಸ್ಥಾನ, ಉಜ್ಜೆಕಿಸ್ಥಾನ, ತರ್ಗಿಸ್ಥಾನ, ಇರಾನ್, ಬಲೂಚಿಸ್ಥಾನ್ ಹಾಗೂ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಈ ಜೋಡಿ ಕಳೆದ ನವೆಂಬರ್ ನಲ್ಲಿ ಸಾಂಸ್ಕೃತಿಕ ವೈಭವದ ಭಾರತಕ್ಕೆ ಆಗಮಿಸಿದ್ದು, ದೆಹಲಿ, ಆಗ್ರಾ, ತಾಜ್‍ಮಹಲ್‍ಗೆ ಭೇಟಿ ನೀಡಿ ಮಂಗಳೂರಿಗೆ ಆಗಮಿಸಿದ್ದಾರೆ.

    ಪೀಟರ್ ಅವರು ತಮ್ಮ ಕಾರನ್ನು ಪುಟ್ಟ ಮನೆಯಾಗಿಸಿಕೊಂಡಿದ್ದು, ಅದರಲ್ಲೇ ಕೈ ತೊಳೆಯುವ ಸಿಂಕ್ ಕೂಡ ಇದೆ. ಕಾರಿನ ಮೇಲ್ಬಾಗವನ್ನು ತೆರೆದು ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ತಾವು ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೂ ಅಲ್ಲಿನ ಪ್ರಮುಖರ ಸಹಿಯನ್ನು ಕಾರಿ ಮೇಲೆ ಪಡೆದುಕೊಳ್ಳುತ್ತಾರೆ. ಪೀಟರ್ ಹಾಗೂ ಡಾ.ಅಲೋನಾ ದಂಪತಿ ಮಂಗಳೂರಿನ ಜನ, ಪರಿಸರ, ಸಂಸ್ಕೃತಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಇಳಿ ವಯಸ್ಸಿನ ಈ ದಂಪತಿಯ ಸಾಹಸಕ್ಕೆ ಒಂದು ಹ್ಯಾಟ್ಸ್ ಆಫ್ ಹೇಳಲೇ ಬೇಕು.

  • ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

    ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

    – ಬೆಂಜ್ ಕಾರಲ್ಲಿತ್ತು ಗಾಂಜಾ
    – ಸಾರ್ವಜನಿಕರಿಂದ ಉದ್ಯಮಿ ಮೊಮ್ಮಗನಿಗೆ ಹಿಗ್ಗಾಮಗ್ಗಾ ಥಳಿತ

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟರು ಡ್ರಗ್ಸ್ ಸೇವಿಸಿ ಸಿಕ್ಕಸಿಕ್ಕವರಿಗೆ ಕಾರಿನಿಂದ ಗುದ್ದಿರೋ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್‍ನಲ್ಲಿ ನಡೆದಿದೆ.

    ನಟರು ಉದ್ಯಮಿ ಮೊಮ್ಮಗನ ಜೊತೆ ಗಾಂಜಾ ಸೇವಿಸಿ ಆಕ್ಸಿಡೆಂಟ್ ಮಾಡಿದ್ದು, ಸಾರ್ವಜನಿಕರಿಂದ ಗೂಸಾ ಬೀಳ್ತಿದ್ದಂತೆ ಮುಖ ಮುಚ್ಕೊಂಡು ಎಸ್ಕೇಪ್ ಆಗಿದ್ದಾರೆ.

     

    ಲಾಲ್‍ಬಾಗ್ ರಸ್ತೆ ಮೂಲಕ ಬಂದ ಟಾಪ್ ಹೀರೋಗಳಿದ್ದ ಆ ಬೆಂಜ್ ಕಾರು ಮೊದಲು ರಸ್ತೆ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಿಬಿಎಂಪಿ ಬೋರ್ಡ್ ಅಷ್ಟೇ ಅಲ್ಲ, ಫುಟ್‍ಪಾತ್‍ಗೆ ಹಾಕಿದ್ದ ಕಬ್ಬಿಣದ ಗ್ರಿಲ್‍ಗಳೇ ಮುರಿದುಹೋಗಿವೆ.

     

    ವಿದ್ಯುತ್ ಕಂಬ, ಓಮ್ನಿ ಕಾರ್ ಹಾಗೂ ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿದ್ದು, ಸಿಕ್ಕಸಿಕ್ಕವರಿಗೆಲ್ಲಾ ಗುದ್ದಿ ಪರಾರಿಯಾಗಿದ್ದಾರೆ. ಇವರ ಆಟಾಟೋಪದಿಂದ ತಾಳ್ಮೆಗೆಟ್ಟ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉದ್ಯಮಿಯ ಮೊಮ್ಮಗನಿಗೆ ಒದೆ ಬೀಳುತ್ತಲೇ ಆ `ಸ್ಟಾರ್’ಗಳು ಎಸ್ಕೇಪ್ ಆಗಿದ್ದಾರೆ.

    ಇಷ್ಟೆಲ್ಲಾ ಆದ್ಮೇಲೆ ಬೆಂಜ್ ಸೀಜ್ ಮಾಡಿದ ಪೋಲೀಸರಿಗೆ ಶಾಕ್ ಕಾದಿತ್ತು. ಕಾರ್‍ನಲ್ಲಿ ಕೋಟಿ ಮೌಲ್ಯದ ಮಾದಕ ದ್ರವ್ಯ ಪತ್ತೆಯಾಗಿದೆ. ಇಷ್ಟಾದರೂ ಪೊಲೀಸರು ಮಾತ್ರ ಎಫ್‍ಐಆರ್ ದಾಖಲಿಸಿಲ್ಲ.

    ಒದೆ ತಿಂದ ಉದ್ಯಮಿ ಮೊಮ್ಮಗ ಆಸ್ಪತ್ರೆಯಲ್ಲಿ ಟ್ರೀಟ್‍ಮೆಂಟ್ ಪಡೆದು ಎಸ್ಕೇಪ್ ಆಗಿದ್ದಾನೆ. ಹಿಟ್ ಅಂಡ್ ರನ್‍ನಿಂದ ಗಾಯಗೊಂಡವರಿಗೆ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.