Tag: bengaluru. medical

  • ಪಬ್ಲಿಕ್ ಟಿವಿ ವರದಿಗೆ ಮಿಡಿದ ಹೃದಯ

    ಪಬ್ಲಿಕ್ ಟಿವಿ ವರದಿಗೆ ಮಿಡಿದ ಹೃದಯ

    ಮಡಿಕೇರಿ: ಲಾಕ್‍ಡೌನ್ ಸಮಸ್ಯೆಯಿಂದ ಕೂಲಿಯೂ ಇಲ್ಲದೆ ಕನಿಷ್ಠ ಮಾತ್ರೆಗೂ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಔಷಧಿ ಪೂರೈಸುವ ಮೂಲಕ ಕೊಡಗಿನ ಆರತಿ ಎಂಬವರು ಮಾನವೀಯತೆ ಮೆರೆದಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ಹರೀಶ್ ಮತ್ತು ಲೀಲಮ್ಮ ದಂಪತಿಯ ಪುತ್ರ ಪ್ರವೀಣ್ ಬುದ್ಧಿಮಾಂದ್ಯನಾಗಿದ್ದು, ಈತನಿಗೆ ಬೇಕಾಗಿರುವ ಮಾತ್ರೆ ಕೊಳ್ಳಲು ಹಣವೂ ಇಲ್ಲದೆ ಕುಟುಂಬ ಪರದಾಡುತಿತ್ತು. ಒಂದೆಡೆ ಬಾಲಕನಿಗೆ ಮಾತ್ರೆ ಕೊಳ್ಳಲು ಹಣದ ಕೊರತೆ ಇದ್ದರೆ, ಮತ್ತೊಂದೆಡೆ ಬಾಲಕನ ತಂದೆ ಹರೀಶ್ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರೂ ಸಹ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಹರೀಶ್ ಅವರ ಕುಟುಂಬ ಸಮಸ್ಯೆಯಲ್ಲಿತ್ತು.

    ಈ ಕುರಿತು ಪಬ್ಲಿಕ್ ಟಿವಿಯಲ್ಲಿ ಗುರುವಾರ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಮಡಿಕೇರಿ ತಾಲೂಕಿನ ಪಾಲೂರಿನ ನಿವಾಸಿ ಆರತಿ ಬಾಲಕನಿಗೆ 3 ತಿಂಗಳಿಗೆ ಬೇಕಾಗುವಷ್ಟು ಮಾತ್ರೆಗಳನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

  • 1,100 ಕೋಟಿ ಮೆಡಿಕಲ್ ಸೀಟು ಅವ್ಯವಹಾರ?- ಶಂಕರ್ ಬಿದರಿ ಹೊಸ ಬಾಂಬ್

    1,100 ಕೋಟಿ ಮೆಡಿಕಲ್ ಸೀಟು ಅವ್ಯವಹಾರ?- ಶಂಕರ್ ಬಿದರಿ ಹೊಸ ಬಾಂಬ್

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸೀಟ್ ಬ್ಲಾಕಿಂಗ್ ಹಗರಣ ತಲೆ ಎತ್ತಿದಂತೆ ಕಾಣುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 1100 ಕೋಟಿ ಮೆಡಿಕಲ್ ಸೀಟು ಹಗರಣ ಆಗಿದೆ ಅಂತ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಭಾರೀ ಆರೋಪವೊಂದು ಮಾಡಿದ್ದಾರೆ. ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಅಕ್ರಮ ನಡೆದಿದೆ ಅಂತ ಪೋಸ್ಟ್ ಹಾಕಿಕೊಂಡಿದ್ದು, ಇದೀಗ ದೊಡ್ಡ ಸಂಚಲನ ಉಂಟು ಮಾಡಿದೆ.

    ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೆಡಿಕಲ್ ಸೀಟು ದಂಧೆ ಹೊಸದೇನು ಅಲ್ಲ. ಇದಕ್ಕೆ ಕಡಿವಾಣ ಹಾಕೋಕೆ ಸರ್ಕಾರ ಕ್ರಮ ತಗೋತೀನಿ ಅಂತ ಭಾಷಣ ಮಾಡುತ್ತೆ ಅಷ್ಟೇ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿದ್ರೆ ಮಾಡುತ್ತದೆ. ಈಗ ಇಂತಹ ಮೆಡಿಕಲ್ ಸೀಟು ಹಗರಣದ ಬಗ್ಗೆ ನಿವೃತ್ತ ಡಿಜಿ-ಐಜಿ ಶಂಕರ್ ಬಿದರಿ ಅವರು ಆರೋಪ ಮಾಡಿದ್ದಾರೆ. ವಿಚಿತ್ರ ಅಂದ್ರೆ ಖುದ್ದು ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಗಳಿಗೆ ಅಕ್ರಮದ ಕುರಿತು ತನಿಖೆ ಮಾಡಿ ಅಂತ ಶಂಕರ್ ಬಿದರಿ ಪತ್ರ ಬರೆದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಪತ್ರ ಬರೆದಿದ್ದರೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

    ಹಗರಣ ಮೊತ್ತವನ್ನ ಸ್ವತಃ ಶಂಕರ್ ಬಿದರಿ ಬಿಚ್ಚಿಟ್ಟಿದ್ದಾರೆ. ಬರೋಬ್ಬರಿ 1,100 ಕೋಟಿ ಹಗರಣ ನಡೆದಿದ್ದರೂ, ಅನೇಕ ಖಾಸಗಿ ಕಾಲೇಜುಗಳು ಈ ಹಗರಣದಲ್ಲಿ ಇವೆ ಅಂತ ಆರೋಪ ಮಾಡಿದ್ದಾರೆ. ಅಷ್ಟೆ ಅಲ್ಲ ಪತ್ರ ಬರೆದರೂ ಸಹ ಸರ್ಕಾರ ಮತ್ತು ಐಟಿ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿದ್ರೆ ಮಾಡುತ್ತಿದೆಯಾ ವಾಗ್ದಾಳಿ ನಡೆಸಿದ್ದಾರೆ. ಖಾಸಗಿ ಕಾಲೇಜುಗಳ ಲಾಬಿಗೆ ಸರ್ಕಾರ ಮಣಿದಿದೆಯಾ ಅಂತ ಪ್ರಶ್ನೆ ಮಾಡಿದ್ದಾರೆ.

    ನಿವೃತ್ತ ಪೊಲೀಸ್ ಮಹಾ ನಿರ್ದೇಶಕರೊಬ್ಬರೇ ಇಂತಹ ದೊಡ್ಡ ಆರೋಪ ಮಾಡಿರೋದು ದೊಡ್ಡ ಸಂಚಲನ ಮೂಡಿಸಿದೆ. ಬರೋಬ್ಬರಿ 1100 ಕೋಟಿ ಅಕ್ರಮದ ಬಗ್ಗೆ ಸರ್ಕಾರ ಹಾಗೂ ರಾಜೀವ್ ಗಾಂಧಿ ಇಲಾಖೆ ಕ್ರಮ ತೆಗೆದುಕೊಳ್ಳದೇ ಇರೋದು ಅನುಮಾನಕ್ಕೂ ಕಾರಣವಾಗ್ತಿದೆ. ಹೊಸದಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಗೆ ಬಂದಿರೋ ಸಚಿವ ಡಾ. ಸುಧಾಕರ್ ಆದರೂ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.