Tag: Bengaluru Lockdown

  • ಲಾಕ್‍ಡೌನ್: ಮತ್ತೆ ಬೆಂಗಳೂರು ಬಿಟ್ಟು ಹೊರಟ ಜನ!

    ಲಾಕ್‍ಡೌನ್: ಮತ್ತೆ ಬೆಂಗಳೂರು ಬಿಟ್ಟು ಹೊರಟ ಜನ!

    ಬೆಂಗಳೂರು: ಒಂದು ವಾರ ಬೆಂಗಳೂರು ಲಾಕ್‍ಡೌನ್ ಹಿನ್ನೆಲೆ ನಗರ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಿಂದ ಸಾವಿರಾರು ಜನರು ಊರಿಗೆ ತೆರಳ್ತಿದ್ದಾರೆ. ಲಗೇಜ್ ಹಿಡಿದುಕೊಂಡು ಸಂಸಾರ ಸಮೇತ ಊರಿಗೆ ಹೊರಡುತ್ತಿದ್ದಾರೆ.

    ಕೊರೊನಾ ಭಯದಲ್ಲಿ ಬೆಂಗಳೂರು ನಗರವನ್ನು ಬಿಟ್ಟು ಜನರು ತಮ್ಮ ತವರು ಗ್ರಾಮಗಳತ್ತ ಸಾಗುತ್ತಿದ್ದು, ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳುತ್ತಿರುವ ಜನ ಸಂಖ್ಯೆ ಹೆಚ್ಚಾಗಿ ಬೆಳಗ್ಗೆಯೇ ಕಂಡು ಬಂದಿತ್ತು. ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಯಾದಗಿರಿ, ದಾವರಣಗೆರೆಗೆ ಬೆಳ್ಳಂಬೆಳಗ್ಗೆ ಏಳು ಬಸ್ ಹೊರಟರೆ, ಹೊಸಪೇಟೆ ಕಡೆ ಮೂರು ಬಸ್ ಸೇರಿದಂತೆ ಸುಮಾರು 83ಕ್ಕೂ ಬಸ್ ಹೆಚ್ಚು ಬಸ್‍ಗಳಲ್ಲಿ ವಿವಿಧ ಜಿಲ್ಲೆಗಳಿಗೆ ಬೆಳಗ್ಗೆ 8 ಗಂಟೆ ವೇಳೆಗೆ ತೆರಳಿದ್ದರು.

    ನಗರದಲ್ಲಿ ಗಾರೆ ಕೆಲಸ, ಬಿಲ್ಡಿಂಗ್ ನಿರ್ಮಾಣ ಮತ್ತು ಗಾರ್ಮೆಂಟ್ಸ್ ನೌಕರರು ಹೀಗೆ ಎಲ್ಲಾ ವಿಧದ ಕಾರ್ಮಿಕರು ಬಸ್ ನಿಲ್ದಾಣದಲ್ಲಿ ಕಂಡು ಬಂದರು. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕೆಲ ಕಾರ್ಮಿಕರು, ಒಂದಿನ ಕೆಲಸ ಸಿಕ್ಕರೆ, ಇನ್ನೊಂದು ದಿನ ಕೆಲಸ ಇರೋದಿಲ್ಲ. ಮನೆ ಬಾಡಿಗೆ ಕಟ್ಟಬೇಕು, ಮಕ್ಕಳು, ಸಂಸಾರವನ್ನು ನೋಡಿಕೊಳ್ಳಬೇಕು. ಆದ್ದರಿಂದ ಜೀವನ ಕಷ್ಟ ಆಗಿ ಊರಿಗೆ ಹೋಗುತ್ತಿದ್ದೇವೆ. ಈಗಲೂ ಊಟವಿಲ್ಲದೆ ಉಪವಾಸದಿಂದಲೇ ಊರಿಗೆ ಹೊರಟ್ಟಿದ್ದೇವೆ ಎಂದರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗುತ್ತದೆ ಎಂದು ಊಹಿಸಿದ್ದ ಕೆಎಸ್‍ಆರ್ ಟಿಸಿ ಹೆಚ್ಚುವರಿ 300 ಬಸ್‍ಗಳ ನಿಯೋಜನೆ ಮಾಡಿದೆ. ಪ್ರತಿನಿತ್ಯ 600 ಬಸ್‍ಗಳು ರಾಜ್ಯದ ವಿವಿಧ ಭಾಗಗಳಿಗೆ ಮೆಜೆಸ್ಟಿಕ್ ನಿಂದ ಪ್ರಯಾಣ ಬೆಳೆಸುತ್ತಿದ್ದವು. ಇಂದು ಒಟ್ಟು 900 ಬಸ್‍ಗಳನ್ನು ಕೆಎಸ್‍ಆರ್ ಟಿಸಿ ನಿಯೋಜನೆ ಮಾಡಿದೆ. ಪ್ರಯಾಣಿಕರ ಅಗತ್ಯದ ಮೇರೆಗೆ ಹೆಚ್ಚುವರಿ ಬಸ್ ನಿಯೋಜಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

  • ಏಳು ದಿನಗಳ ವಿಭಿನ್ನ, ಕಠಿಣ ಲಾಕ್‍ಡೌನ್ ಹೇಗಿರುತ್ತೆ?

    ಏಳು ದಿನಗಳ ವಿಭಿನ್ನ, ಕಠಿಣ ಲಾಕ್‍ಡೌನ್ ಹೇಗಿರುತ್ತೆ?

    ಬೆಂಗಳೂರು: ಲಾಕ್‍ಡೌನ್‍ನಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾಳೆ ಮತ್ತು ನಾಡಿದ್ದು ಸಂಜೆಯವರೆಗೂ ಬೆಂಗಳೂರು ಮಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು, ಊರಿಗೆ ಹೋಗೋರಿದ್ರೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

    ಬೆಂಗಳೂರಿಗೆ ಬರೋರಿಗೆ, ಬೆಂಗಳೂರಿಂದ ಹೋಗೋರಿಗೆ ಯಾವುದೇ ಅಡ್ಡಿ ಮಾಡಲ್ಲ. ಆದರೆ ಲಾಕ್‍ಡೌನ್ ಶುರುವಾದ ನಂತರ ಓಡಾಟ ಇರಬಾರದು. ಜನ ಮನೆಯಲ್ಲೇ ಇರಬೇಕು ಎಂದು ಸಚಿವ ಅಶೋಕ್ ಸರ್ಕಾರದ ಪರವಾಗಿ ಮನವಿ ಮಾಡಿಕೊಂಡಿದ್ದಾರೆ. ನಾಳೆ ಸಂಜೆ ಹೊತ್ತಿಗೆ ಲಾಕ್‍ಡೌನ್ ಮಾರ್ಗಸೂಚಿಯನ್ನು ಪ್ರಕಟಿಸಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಏಳು ದಿನಗಳ ಕಾಲ ಲಾಕ್ ಡೌನ್ ಸಂಪೂರ್ಣ ವಿಭಿನ್ನ ಹಾಗೂ ಕಠಿಣವಾಗಿರುತ್ತೆ ಎಂದು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಸ್ಪಷ್ಟಪಡಿಸಿದ್ದಾರೆ.

    ಲಾಕ್‍ಡೌನ್ ಮಾರ್ಗಸೂಚಿಯಲ್ಲಿ ಹೊಸ ಅಂಶ ಏನಿರಬಹುದು?

    ಸಾಧ್ಯತೆ 1: ತುರ್ತು, ಅಗತ್ಯ ಸಂದರ್ಭಗಳಲ್ಲಿ ಓಡಾಡಲು ಪಾಸ್ ಬೇಕಿಲ್ಲ. ಅಗತ್ಯ ವಸ್ತುಗಳ ಸಾಗಾಟಕ್ಕೂ ಸರ್ಕಾರದ ಪಾಸ್ ಇಲ್ಲ. ಐಡಿ ಕಾರ್ಡ್ ತೋರಿಸಿ ಬೆಂಗಳೂರಿಗೆ ಎಂಟ್ರಿ ಆಗಬಹುದು
    ಸಾಧ್ಯತೆ 2: ಲಾಕ್‍ಡೌನ್ ಅವಧಿಯಲ್ಲಿ ವೈದ್ಯಕೀಯ ಉತ್ಪನ್ನ, ಔಷಧಿ ಕಾರ್ಖಾನೆ ತೆರೆಯಲು ಅವಕಾಶ. ದೈನಂದಿನ, ಅಗತ್ಯ ಆಹಾರ ವಸ್ತುಗಳ ಉತ್ಪಾದನಾ ಘಟಕಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

    ಸಾಧ್ಯತೆ 3: ಅಗತ್ಯ ವಸ್ತು ಖರೀದಿಸಲು ಪ್ರತ್ಯೇಕ ಸಮಯ ನಿಗದಿ ಮಾಡಬಹುದು. ಮನೆಯಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಖರೀದಿಗೆ ಅವಕಾಶ ನೀಡಬಹುದು.
    ಸಾಧ್ಯತೆ 4: ಅನಗತ್ಯವಾಗಿ ಓಡಾಡಿದ್ರೆ ಎನ್‍ಡಿಎಂಎ ಕಾಯ್ದೆಯಡಿ ಕೇಸ್ ಹಾಕಲು ಪ್ಲಾನ್. ಲಾಕ್‍ಡೌನ್ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ರೆ ವಾಹನ ಸೀಜ್ ಮಾಡೋದು ಬಹುತೇಕ ಪಕ್ಕಾ.

  • ಬೆಂಗ್ಳೂರು ಲಾಕ್‍ಡೌನ್‍ಗೆ ಅಸಲಿ ಕಾರಣಗಳು

    ಬೆಂಗ್ಳೂರು ಲಾಕ್‍ಡೌನ್‍ಗೆ ಅಸಲಿ ಕಾರಣಗಳು

    ಬೆಂಗಳೂರು: ಲಾಕ್‍ಡೌನ್ ಮಾಡಲ್ಲ ಎಂದು ಹೇಳಿಕೊಂಡು ಬಂದಿದ್ದ ಯಡಿಯೂರಪ್ಪನವರ ಸರ್ಕಾರ ಇಂದು ರಾತ್ರಿ 8 ಗಂಟೆಗೆ ದಿಢೀರ್ ಘೋಷಣೆಯನ್ನು ಪ್ರಕಟಿಸಿತು. ಒಂದು ವಾರಗಳ ಕಾಲ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

    ಲಾಕ್‍ಡೌನ್‍ಗೆ ಈ ಮೊದ್ಲು ಮೀನಾಮೇಷ ಎಣಿಸಿದ್ದ ಸರ್ಕಾರ ದಿಢೀರ್ ತನ್ನ ನಿರ್ಧಾರ ಬದಲಾಯಿಸಿದೆ. ಸರ್ಕಾರದ ಲಾಕ್‍ಡೌನ್ ನಿರ್ಧಾರದ ಹಿಂದೆ ಕೊರೊನಾ ತಜ್ಞರು ನೀಡಿದ ಪಂಚ ಕಾರಣಗಳಿವೆ.
    1. ಬೆಂಗಳೂರಿನಲ್ಲಿ ಹೀಗೆ ಬಿಟ್ಟರೆ ನಿತ್ಯ 2,000 ಕೇಸ್ ಸ್ಫೋಟಗೊಳ್ಳುವ ಭಯ. ಆರ್ಥಿಕತೆ ಲೆಕ್ಕ ಹಾಕಿದ್ರೇ ಬೆಂಗಳೂರು ಸುಧಾರಿಸಲು ಸಾಕಷ್ಟು ಟೈಂ ಬೇಕು.
    2. ಬೆಂಗಳೂರಿನಿಂದ ಹಳ್ಳಿಗಳಿಗೆ ಜನ ವಲಸೆ ಹೋಗೋದು ಹೆಚ್ಚಾಗುತ್ತಿದೆ. ಇನ್ನೊಂದು ವಾರ ಇದೇ ರೀತಿ ಬೆಂಗಳೂರಿಂದ ಹಳ್ಳಿಗಳಿಗೆ ಜನ ಹೋದ್ರೆ ಮಹಾ ಸ್ಫೋಟದ ಆತಂಕ ಹೆಚ್ಚಾಗಿತ್ತು. ವಲಸೆಯನ್ನು ತಡೆಯೋಕೆ ಲಾಕ್‍ಡೌನ್ ಅನಿವಾರ್ಯವಾಗಿತ್ತು. ಹೀಗಾಗಿಯೇ ವೀಕೆಂಡ್ ಲಾಕ್‍ಡೌನ್ ಜಾರಿಯಾದ ಹೊತ್ತಲ್ಲಿ ವಾರದ ಲಾಕ್‍ಡೌನ್ ಘೋಷಣೆಯಾಗಿದೆ.

    3. ಆಂಟಿಜೆನ್ ಕಿಟ್‍ನಿಂದ ಟೆಸ್ಟ್ ಹೆಚ್ಚಲಿದೆ. ಬೆಂಗಳೂರಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿರೋ ಬಗ್ಗೆ ಅಸಲಿ ಚಿತ್ರಣ ಸಿಗುತ್ತದೆ. ಈಗ ಲಾಕ್‍ಡೌನ್ ಮಾಡೋದ್ರಿಂದ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಬಹುದು.
    4. ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಹೈರಾಣಾಗಿದ್ದು, ಅವರಿಗೂ ಸೋಂಕು ಹಬ್ಬಿದೆ. ಲ್ಯಾಬ್ ಟೆಕ್ನಿಷಿಯನ್ಸ್ ಸೋಂಕಿತರಾಗಿದ್ದಾರೆ. ಈ ಒತ್ತಡದಲ್ಲಿ ಬೆಂಗಳೂರಿನಲ್ಲಿ 2 ಸಾವಿರ ಕೇಸ್ ಬಂದ್ರೆ ನಿಭಾಯಿಸೋದು ಕಷ್ಟ

    5. ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಟೈಟ್ ರೂಲ್ಸ್ ಗೆ ನಮಲ್ಲಿ ಖಾಕಿಗಳ ಕೊರತೆ ಇದೆ. ಹೀಗಾಗಿ ಕೇವಲ ಕಠಿಣ ರೂಲ್ಸ್ ವರ್ಕೌಟ್ ಆಗಲ್ಲ. ಫುಲ್ ಲಾಕ್‍ಡೌನ್ ಅನಿವಾರ್ಯ ಎಂಬವುದು ಸರ್ಕಾರದ ಗಮನಕ್ಕೆ ಬಂದಿದೆ.

    ಮಂಗಳವಾರದಿಂದ ಅಂದ್ರೆ ಜುಲೈ 14ರಿಂದ ರಾತ್ರಿ 8 ಗಂಟೆಯಿಂದ ಜುಲೈ 22ರ ನಸುಕಿನಜಾವ ಐದು ಗಂಟೆಯವರೆಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಲಾಕ್‍ಡೌನ್ ಆಗಲಿದೆ.

  • ಮಂಗಳವಾರದಿಂದ ಒಂದು ವಾರ ಲಾಕ್‍ಡೌನ್- ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ

    ಮಂಗಳವಾರದಿಂದ ಒಂದು ವಾರ ಲಾಕ್‍ಡೌನ್- ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ

    ಬೆಂಗಳೂರು: ಕೊರೊನಾ ತಡೆಗಾಗಿ ಬೆಂಗಳೂರು ಮತ್ತು ಗ್ರಾಮಾಂತರ ಭಾಗದಲ್ಲಿ ಒಂದು ವಾರ ಲಾಕ್‍ಡೌನ್ ಮಾಡಲು ಸರ್ಕಾರ ನಿರ್ಧರಿಸಿ ಅಧಿಕೃತ ಘೋಷಣೆ ಮಾಡಿದೆ.

    ರಾಜ್ಯದಲ್ಲಿ ದಿನೇ ದಿನೇ ಭಾರಿ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ 14.07.2020ರ ಮಂಗಳವಾರ ರಾತ್ರಿ 8.00 ಗಂಟೆಯಿಂದ 1 ವಾರಗಳ ಕಾಲ ಅಂದರೆ 23.07.2020 ರ ಬೆಳಗ್ಗೆ 5.00 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗಿದೆ.

    ಈ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಮೊದಲಾದ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ. ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ.

    ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಸರ್ಕಾರ ಹೊರಡಿಸುವ ಲಾಕ್‍ಡೌನ್ ಸಂಬಂಧಿತ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ತಾವು ಲಾಕ್‍ಡೌನ್ ಸಂಧರ್ಬದಲ್ಲಿ ಮನೆಯಲ್ಲೇ ಇರುವ ಮೂಲಕ ಕೋವಿಡ್-19ರ ನಿಯಂತ್ರಣಕ್ಕೆ ಕೈ ಜೋಡಿಸಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ.